Thursday, October 17, 2013

'ಅಮ್ಮ'ನೆಂಬ ಅಯಸ್ಕಾಂತ -ಶಿವ ಪ್ರಸಾದ

ಶಿವ ಪ್ರಸಾದ
ತುತ್ತನುಣಿಸಿ
ತಾರೆನೆಣಿಸಿ
ಹಾಡಿಕರೆದು
ತೋರುತಿದ್ದ
ತೋರುಬೆರಳ
ತುತ್ತತುದಿಗೆ
ಅವಳಿರಬೆಕಿತ್ತು

ಅಮ್ಮನೆಂದು
ಇವಳಕರೆದು
ಅತ್ತುಊಯ್ವ
ಅಳುವಿನೊಳಗೆ
ಬಿಗಿದುಅಪ್ಪಿ
ಪಪ್ಪಿಕೊಡಲು
ಅವಳಿರಬೇಕಿತ್ತು

ಹಸಿವುಎಂಬ
ನೋವಿನೊಳಗೆ
ಜೀವಮಿದ್ದ
ಉಸಿರನೀವ
ತುತ್ತಿನೊಳಗೆ
ಅವಳಿರಬೇಕಿತ್ತು

(Inspired by Sunil Rao ಅವನಿರಬೇಕಿತ್ತು (ಅವಧಿಯಲ್ಲಿ ಪ್ರಕಟವಾದ ಕವಿತೆ))

No comments:

Post a Comment

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು - ಸಂಗ್ರಹ

ಗಳಗನಾಥರು ಗಳಗನಾಥರು ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.  ನಿಮ್ಮ ಮನೆಯಲ್ಲಿ ಲಕ್ಷ್ಮಿ ಇದ್ದರೆ ಸಾಲದು, ನಾನು ಸರ...