"'ಸಾಧ್ಯವಾದಷ್ಟೂ ಒಳ್ಳೆಯದನ್ನು ಮಾಡಿ. ಮಾಡಲಾಗದಿರುವ ಸ್ಥಿತಿಯಲ್ಲಿ ನೀವು ಇರುವುದೇ
ಆದರೆ ಒಳ್ಳೆಯ ಯೋಚನೆಯನ್ನಾದರೂ ಮಾಡಿ.'' - ಬೆಳಗೆರೆ ಕೃಷ್ಣಶಾಸ್ತ್ರಿ
"'ಸಾಧ್ಯವಾದಷ್ಟೂ ಒಳ್ಳೆಯದನ್ನು ಮಾಡಿ. ಮಾಡಲಾಗದಿರುವ ಸ್ಥಿತಿಯಲ್ಲಿ ನೀವು ಇರುವುದೇ
ಆದರೆ ಒಳ್ಳೆಯ ಯೋಚನೆಯನ್ನಾದರೂ ಮಾಡಿ.'' - ಬೆಳಗೆರೆ ಕೃಷ್ಣಶಾಸ್ತ್ರಿ
ಗೆ,
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ.
ಕರ್ನಾಟಕ ಸರ್ಕಾರ
.
ಮತ್ತು
ಹಿರಿಯ
ಅರಣ್ಯ ಅಧಿಕಾರಿಗಳು.
ಕರ್ನಾಟಕ ಸರ್ಕಾರ
.
ಯಿಂದಾ,
ಕಾಡಿನ ಆನೆಗಳು.
ಮಾನ್ಯರೆ,
ಇತ್ತೀಚೆಗೆ ನಮ್ಮ ಗುಂಪಿನ ಆನೆಯೊಂದನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಆ
ಆನೆ ಮರಣಿಸಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಭಾವಿಸುತ್ತೇವೆ. ಅಂತಹುದೇ ಕಾರ್ಯಾಚರಣೆಯಲ್ಲಿ ಮನುಷ್ಯರು ಸೆರೆ ಹಿಡಿದು ಹಿಂಸಿಸಿ ಸಾಕಿಕೊಂಡು "ಅರ್ಜುನ" ಎಂದು
ಹೆಸರಿಟ್ಟುಕೊಂಡಿದ್ದ ಆನೆಯೂ ಮರಣಿಸಿದೆಯಷ್ಟೆ.
ಅದಕ್ಕಾಗಿ ತಾವು
ಸಂತಾಪ ವ್ಯಕ್ತಪಡಿಸಿರುವ ಸಂಗತಿ
ತಿಳಿಯಿತು. ತಮ್ಮ ಸೂಕ್ಷ್ಮತೆಗೆ ಅಭಾರಿಗಳಾಗಿದ್ದೇವೆ.
ದಾರಿಗಳಲ್ಲಿ ಬೇಲಿಗಳು ನಿರ್ಮಾಣವಾಗಿವೆ. ನಮ್ಮ ಕಾಡಿನ ಪ್ರದೇಶವು ನಿರಂತರವಾಗಿ ಕಡಿಮೆಯಾಗುತ್ತಿರುವುದರಿಂದ ನಮ್ಮ ಗುಂಪುಗಳು ಅನಿವಾರ್ಯವಾಗಿ ಆಹಾರ
ಹುಡುಕುತ್ತಾ ಕೃಷಿ ಪ್ರದೇಶಗಳಿಗೆ ಬರುವಂತಾಗುತ್ತಿದೆ. ಇದು ಅಲ್ಲಿ
ವಾಸಮಾಡುತ್ತಿರುವ ಮನುಷ್ಯರು ಮತ್ತು ನಮ್ಮ ನಡುವಿನ
ಸಂಘರ್ಷಕ್ಕೆ ಕಾರಣವಾಗುತ್ತಿದೆ. ಇದು ನಮ್ಮವರ ಮತ್ತು ಮನುಷ್ಯರ ಜೀವನಷ್ಟಕ್ಕೆ ಕಾರಣವಾಗುತ್ತಿದೆ.
ಮನುಷ್ಯರಂತೆಯೇನಾವು ಆನೆಗಳೂ ಮತ್ತು ಎಲ್ಲಾ ಜೀವಿಗಳಿಗೂ ಕೂಡ ಈ ಭೂಮಿಯ
ಮೇಲೆ ಬದುಕುವ ಹಕ್ಕು ಇದೆ
ಎಂಬುದನ್ನು ತಾವುಗಳು ಒಪ್ಪುತ್ತೀರಿ ಎಂದು ಭಾವಿಸುತ್ತೇವೆ.
ಅಂತೆಯೇ ಕಾಡಿನಲ್ಲಿ ಸ್ವಾತಂತ್ರ್ಯವಾಗಿ ಬದುಕಿರುವ ನಮ್ಮನ್ನು ಬಲಾತ್ಕಾರವಾಗಿ ಬಂಧಿಸಿ ಹಿಂಸಿಸಿ ಪಳಗಿಸಿಕೊಂಡು ನಿಮ್ಮ ಕೆಲಸಗಳಿಗಾಗಿ ಆಡಂಬರದ ಮೆರವಣಿಗೆಗಳಿಗಾಗಿ ಬಳಸಿಕೊಳ್ಳುವುದು ನಮ್ಮ ಬದುಕುವ ಹಕ್ಕಿನ ಸ್ಪಷ್ಟ ಉಲ್ಲಂಗನೆಯಾಗಿದೆ.
ಈ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ರೂಪಿಸಬೇಕೆಂದು ಈ
ಮೂಲಕ ವಿನಂತಿಸುತ್ತಿದ್ದೇವೆ.
ನಮ್ಮ ಹಕ್ಕೊತ್ತಾಯಗಳು.
* ಕಾಡಿನಲ್ಲಿ ನಾವು ವಾಸಿಸುತ್ತಿರುವ ಪ್ರದೇಶಗಳನ್ನು ನಮಗಾಗಿ ಮತ್ತು ಇತರ ಕಾಡಿನ ಜೀವಿಗಳಿಗಾಗಿ ಬಿಟ್ಟುಕೊಡಬೇಕು.
*ನಾವು ವಾಸಿಸುವ ಮತ್ತು ಆಹಾರಕ್ಕಾಗಿ ಓಡಾಡುವ ದಾರಿಗಳನ್ನು ಗುರುತಿಸಿ, ಆ ಪ್ರದೇಶದಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರುವ ರೈತ
ರ ಜಮೀನುಗಳನ್ನು ಸೂಕ್ತ ಬೆಲೆ ನೀಡಿ ಕೊಂಡುಕೊಂಡು ಕಾಡಿಗೆ ಸೇರಿಸಬೇಕು.
*ನಾವು ವಾಸಿಸುತ್ತಿರುವ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವುದನ್ನು ನಿಲ್ಲಿಸಬೇಕು.
* ನಮ್ಮನ್ನು ಸೆರೆಹಿಡಿದು ಹಿಂಸಿಸಿ ಪಳಗಿಸುವ ಪರಿಪಾಟವನ್ನು ಸೂಕ್ತ ಕಾನೂನು ರೂಪಿಸುವ ಮೂಲಕ ತಡೆಗಟ್ಟಿ ನಮ್ಮ ಬದುಕುವ ಹಕ್ಕನ್ನು ಖಾತರಿಗೊಳಿಸಬೇಕು.
*ನಮ್ಮನ್ನು ಕೆಲಸಕ್ಕಾಗಿ, ಮೆರವಣಿಗೆಗಳಿಗಾಗಿ ಮತ್ತು ಮನರಂಜನೆಗಾಗಿ ಬಳಸುವುದನ್ನು ನಿಷೇಧಿಸಬೇಕು.
ನಮ್ಮ ಈ
ಎಲ್ಲಾ ಹಕ್ಕೊತ್ತಾಯಗಳನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.
ಇಂತಿ ತಮ್ಮ ಸಹಜೀವಿಗಳಾದ
ಕಾಡಿನ ಆನೆಗಳು.
( ಈ ನಮ್ಮ ಮನವಿಯನ್ನು ಸರ್ಕಾರಕ್ಕೂ ಮತ್ತು ನಮ್ಮ ಪರವಾಗಿ
ಚಿಂತಿಸುವವರ ಗಮನಕ್ಕೂ ತರಬೇಕಾಗಿ ವಿನಂತಿ.
- ರಾಜನ ಮೂರು ಪ್ರಶ್ನೆಗಳು... ⁉
ಪ್ರತಿದಿನವೂ ಶ್ರದ್ಧೆಯಿಂದ ಭಗವಂತನನ್ನು ಪೂಜಿಸುವವರೂ ಕೂಡಾ ಭಗವಂತ ನೆಂದರೆ ಏನು? ಯಾರು? ಎನ್ನುವ ಪ್ರಶ್ನೆಗೆ ಉತ್ತರಿಸಲಾರರು(ಬಹುಶಃ ಈ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು)
ಈ ಕಥೆಯನ್ನು ಕೇಳಿ --
ಒಬ್ಬ ರಾಜನಿಗೆ ಮೂರು ಅರ್ಥವಾಗದ ಪ್ರಶ್ನೆಗಳು ಬಹುವಾಗಿ ಕಾಡುತ್ತಿದ್ದವು --
೧ - ದೇವರು ಯಾವ ಕಡೆ ನೋಡುತ್ತಾನೆ?
೨ - ದೇವರು ಎಲ್ಲಿರುತ್ತಾನೆ?
೩ - ದೇವರು ಏನು ಮಾಡುತ್ತಾನೆ?
ಈ ಮೂರು ಪ್ರಶ್ನೆಗಳಿಗೆ ಎಷ್ಟು ಯೋಚಿಸಿದರು ಸರಿಯಾದ ಉತ್ತರ ದೊರಕಲಿಲ್ಲ ದರ್ಬಾರಿನಲ್ಲಿ ರಾಜನು ಎಲ್ಲರೊಡನೆ ಸಮಾವೇಶಗೊಂಡು ಅಲ್ಲಿ ಹಾಜರಿದ್ದ ಎಲ್ಲ ಪಂಡಿತರು ಮೇಧಾವಿಗಳನ್ನುದ್ದೇಷಿಸಿ ಈ ಎಲ್ಲಾ ಪ್ರಶ್ನೆಗಳಿಗೆ
ಸರಿಯಾದ ಉತ್ತರ ಕೊಟ್ಟವರಿಗೆ ಸೂಕ್ತವಾದ ಬಹುಮತಿಯನ್ನು ಕೊಡುವುದಾಗಿಯೂ ತಪ್ಪಿದರೆ/ ತಪ್ಪಿದ್ದಲ್ಲಿ ಉಗ್ರವಾದ ಶಿಕ್ಷೆಯನ್ನು ನೀಡುವುದಾಗಿಯೂ ತಿಳಿಸುತ್ತಾನೆ.ರಾಜನ ಶಿಕ್ಷೆಯ ಭಯದಿಂದ ಉತ್ತರ ಕೊಡಲು ಯಾರು ಮುಂದೆ ಬರಲಿಲ್ಲ.ಇದೇ ವಿಷಯವಾಗಿ ರಾಜ್ಯದಲ್ಲೆಲ್ಲಾ ಡಂಗುರ ಸಾರಿಸಲಾಯಿತು.ಇದನ್ನು ಕೇಳಿಸಿಕೊಂಡ ದನಗಾಹಿ ಒಬ್ಬನು ಉತ್ತರ ಕೊಡುವುದಾಗಿ ಒಪ್ಪಿ
ಮುಂದೆ ಬಂದನು ಅವನನ್ನು ರಾಜನ ಆಸ್ಥಾನಕ್ಕೆ ಕರೆಸಲಾಯಿತು ಅವನು ಉತ್ತರಿಸುವ ಮೊದಲು ರಾಜನಿಗೆ ಒಂದು ವಿಷಯವನ್ನು ಹೇಳುತ್ತಾನೆ--
"ಹೇಳುವವನು ಗುರು ಅವನು ಮೇಲಿರಬೇಕು ಅದರಂತೆ ಕೇಳುವವನು ಶಿಷ್ಯ ಅವನು ಕೆಳಗಿರಬೇಕು"
-- ಅದಕ್ಕೆ ರಾಜನು ಸಮ್ಮತಿಸಿ ಸಿಂಹಾಸನದಿಂದ ಕೆಳಗಿಳಿದು ಕುಳಿತನು ದನಗಾಹಿ ಸಿಂಹಾಸನದ ಮೇಲೆ ಕೂರುತ್ತಾನೆ.
ನಂತರ ದನಗಾಹಿ ರಾಜನಿಗೆ ಪ್ರಶ್ನೆಗಳನ್ನು ಕೇಳಲು ಸೂಚಿಸುತ್ತಾನೆ*
(1) - ಮೊದಲನೇ ಪ್ರಶ್ನೆ -ದೇವರು ಯಾವ ಕಡೆ ನೋಡುತ್ತಾನೆ?
- ಕೂಡಲೇ ದನಗಾಹಿ ಒಂದು ಉರಿಯುತ್ತಿರುವ ದೀಪವನ್ನು ತರಿಸಲು ಹೇಳುತ್ತಾನೆ ಅದರಂತೆ ಸಭೆಯ ಮಧ್ಯದಲ್ಲಿ ಉರಿಯುತ್ತಿರುವ ದೀಪವನ್ನು ತಂದಿಡಲಾಗುತ್ತದೆ. ರಾಜರೇ ಹೇಳಿ -ಈ ದೀಪ ಯಾವ ಕಡೆಗೆ ನೋಡುತ್ತಿದೆ- ನನ್ನ ಕಡೆಗೋ,
ನಿಮ್ಮ ಕಡೆಗೋ, ಮೇಲೆಯೋ, ಕೆಳಗಡೆಯೋ, ಪೂರ್ವಕ್ಕೋ , ಪಶ್ಚಿಮಕ್ಕೋ ಎನ್ನುತ್ತಾನೆ*
ಆಗ ರಾಜನು - "ಎಲ್ಲ ಕಡೆಗೂ" ಎಂದು ಉತ್ತರಿಸುತ್ತಾನೆ ಆಗ ದನಗಾಹಿ ಇಷ್ಟು ಸಣ್ಣ ಜ್ಯೋತಿ ಎಲ್ಲಾ ಕಡೆಗೂ ನೋಡುತ್ತಿದೆಯಾದರೆ ಪರಂಜ್ಯೋತಿ ಸ್ವರೂಪನಾದ ಭಗವಂತನು ಎಲ್ಲ ಕಡೆಗೂ ನೋಡಲಾರನಾ, ಸಮಸ್ತ ಜೀವಿಗಳ ಕಣ್ಣಲ್ಲಿ ಬೆಳಕಾಗಿರುವ ಪರಂಜ್ಯೋತಿಯೇ ಪರಮಾತ್ಮ...!!🪔🙏
(2) - ಎರಡನೇ ಪ್ರಶ್ನೆ "ದೇವರು ಎಲ್ಲಿರುವನು?"
ಆಗ ದನಗಾಹಿ ಒಂದು ಪಾತ್ರೆಯಲ್ಲಿ ಹಾಲನ್ನು ತರುವಂತೆ ಹೇಳುತ್ತಾನೆ ಹಾಲನ್ನು ತಂದಿರಿಸಿದಾಗ ರಾಜರೇ ಈ ಹಾಲಿನಲ್ಲಿ ತುಪ್ಪ ಎಲ್ಲಿರುವುದು ತೋರಿಸುವಿರಾ ಎನ್ನುವನು ಆಗ ರಾಜನು ಹಾಲನ್ನು ಕುದಿಸಿ, ಹೆಪ್ಪಿಟ್ಟು ಅದು ಮೊಸರಾದ ನಂತರ ಅದನ್ನು ಚೆನ್ನಾಗಿ ಕಡೆದರೆ ಬೆಣ್ಣೆ ಸಿಗುತ್ತೆ ನಂತರ ಅದನ್ನು ಹದವಾಗಿ ಕಾಯಿಸಿದಾಗ ತುಪ್ಪ ಸಿಗುತ್ತದೆ.
ಆಗ ದನಗಾಹಿ - ಸರಿಯಾಗಿ ಹೇಳಿದಿರಿ ರಾಜರೇ- ಅದೇ ರೀತಿ ಹೃದಯವೆಂಬ "ಹಾಲ"ನ್ನು "ಗುರು" ಎನ್ನುವ "ಬೆಂಕಿ"ಯಿಂದ ಚೆನ್ನಾಗಿ ಕಾಯಿಸಿ "ಮನಸ್ಸು" ಎನ್ನುವ ಹೆಪ್ಪನ್ನಿಟ್ಟು ಬರುವ ಮೊಸರನ್ನು "ಸಾಧನೆ" ಎಂಬ ಕಡಗೋಲಿನಿಂದ ಚೆನ್ನಾಗಿ ಕಡೆದರೆ "ಜ್ಞಾನ" ಎನ್ನುವ ಬೆಣ್ಣೆ ಸಿಗುತ್ತದೆ...!
ಆ ಬೆಣ್ಣೆಯನ್ನು "ಅಂತರಾತ್ಮ" ಎನ್ನುವ ಬೆಂಕಿಯಿಂದ ಹದವಾಗಿ ಕಾಯಿಸಿದರೆ "ಪರಮಾತ್ಮ' ಎನ್ನುವ ತುಪ್ಪ ಸಿಗುತ್ತದೆ*
(3) - ಮೂರನೇ ಪ್ರಶ್ನೆ- ದೇವರು ಏನು ಮಾಡುತ್ತಾನೆ?
ಆಗ ದನಗಾಹಿ ನಾನೊಬ್ಬ ದನಗಾಹಿ, ನೀವು ಈ ರಾಜ್ಯದ ಮಹಾರಾಜರು- ಕೆಳಗಿದ್ದ ನನ್ನನ್ನು ಸಿಂಹಾಸನದ ಮೇಲೆ ಕೂಡಿಸಿ, ಸಿಂಹಾಸನದಲ್ಲಿದ್ದ
ನಿಮ್ಮನ್ನು ಕೆಳಗಿಳಿಸಿದ್ದು..!, ಇದೇ ಪರಮಾತ್ಮನ ಲೀಲೆ, ಸತ್ಕರ್ಮಗಳನ್ನು ಮಾಡುವ ಜೀವಿಗಳಿಗೆ ಮುಂದಿನ ಜನ್ಮದಲ್ಲಿ ಉತ್ತಮ ಜನ್ಮವನ್ನು ನೀಡುವ, ದುಷ್ಕರ್ಮ ಮಾಡುವವರಿಗೆ ಮುಂದಿನ ಜನ್ಮದಲ್ಲಿ ದುಸ್ತರ ಜೀವನ ನೀಡುವುದು ಪರಮಾತ್ಮನ ಕೆಲಸ...!🙏
ಈ ಉತ್ತರಗಳನ್ನು ಕೇಳುತ್ತಿದ್ದಂತೆ ಇಡೀ ಸಭೆಯು ಅಲ್ಲಿ ನೆರದಿದ್ದವರ ಕರತಾಡನದಿಂದ ಮಾರ್ಮೊಳಗಿತು
🕉 ಸರ್ವೇ ಜನಾಃ ಸುಖಿನೋ ಭವಂತು🕉
॥ *ಪರ್ವತ* ॥
ಒಂದು ಪರ್ವತ ನನಗೆ ಏನು ಹೇಳುತ್ತದೆ
ಊದಿಕೊಂಡ ಗುಟ್ಟಿನಂತೆ ಒಡೆಯದೆ
ನಕ್ಕರೆ ಫಕ್ಕನೆ ತೆರೆಯದೆ ಗಾಳಿಗೆ ಹಾಳೆಯಂತೆ ಹಾರದೆ
ಒಳ ಸ್ನಾಯುಗಳ ತೋರದೆ ಏನು ಹೇಳುತ್ತದೆ
ನಡು ರಾತ್ರಿಗಳ ಅವಿತಿಟ್ಟು ಇಕೋ
ಬೇಕಾದರೆ ಬಿಟ್ಟೇನು ಎಂಬಂತೆ ಅಪಾರ
ಕಥೆಗಳನ್ನು ಅಜ್ಜಿಗಳೊಂದಿಗೇ ಬೆನ್ನ ಹಿಂದೆ
ಕಾದಿರಿಸಿದಂತೆ ಯಾವ ಯಶದ ನೋವಿಗೆ ಇಳಿದ ಪರದೆ
ಸನಿಹ ನಕ್ಷತ್ರ ಸುಳಿದರೂ ಕಣ್ಣು ಮಿಟುಕಿಸದ ಅದು
ಮತೀಯ ರಸ್ತೆಯಲ್ಲಿ ಬಿದ್ದ ಕತ್ತರಿಸಿದ ರುಂಡ
ಯುದ್ಧಸನ್ನದ್ಧನಾಗಿಯೇ ನಿದ್ದೆ ಹೋದ ಯೋಧ
ಅಡ್ಡ ಬಂದ ಅದರ ಬೆನ್ನಿಂದ ಪ್ರತಿ ಸೂರ್ಯೋದಯಕ್ಕೆ
ಯಾವ ಹೊಸ ಸಂದೇಶ ಬಂದಂತಿಲ್ಲ ಬದಲಿಗೆ
ಪ್ರತಿ ರಾತ್ರಿಗೊಂದು ನವೀನ ಒಡಪು
ಬಾಡುವ ಬೆಳಕಿನಲ್ಲಿ ಸಂಜೆ ಆಡುತ್ತ ವೇಳೆ ಮರೆತ
ಮಕ್ಕಳಿಗೆ ಹಠಾತ್ತನೆ ಭೀತಿ ಗೋವರ್ಧನ ಕುಸಿದಂತೆ
ತಾಯಿ ಮಡಿಲಿಗೆ ಓಡುತ್ತವೆ ಅವು
ಹಜಾರದಲ್ಲಿ ಕೂತ ಅತಿಥಿಗಳ ನಡುವಿಂದ
ರಸ್ತೆ ಬದಿ ಕಣ್ಮುಚ್ಚಿ ನಿಂತ ಟ್ರಕ್ಕುಗಳ ನಡುವೆ
ರಂಗವಲ್ಲಿ ಇಕ್ಕುವಳು ವೃದ್ದ ಮಹಿಳೆ
ಕೊನೆಯ ಲೋಕಲ್ಗಳು ಶೆಡ್ ಸೇರಿದನಂತರ
ಶಸ್ತ್ರಕ್ರಿಯೆ ಮುಗಿಸಿ ಕೈ ತೊಳೆಯುತ್ತಿರುವ ಮಂದಿ
ಕಿಟಕಿಯಿಂದ ನೋಡುತ್ತಾರೆ
ಹೊಸ ರಾಗವನ್ನು ನೀವಿ ಎಚ್ಚರಿಸುತಿಹ ಪರ್ವತ
ಸಾಯುವ ಶಿಶುಗಳ ಎದುರು ತನ್ನ
ಮರಗಳನ್ನು ಅಡವಿಟ್ಟಿದೆ
✍ *ಜಯಂತ ಕಾಯ್ಕಿಣಿ*
{'ಶ್ರಾವಣ ಮಧ್ಯಾಹ್ನ' ಕವನ ಸಂಕಲನ}
ಪ್ರೌಢಶಾಲಾ ಶಿಕ್ಷಕರ ಗೋಳು ಕೇಳುವವರಾರು?
ಇಂದು ಹತ್ತನೇ ತರಗತಿಯ ಫಲಿತಾಂಶ ಎನ್ನುವುದು ಒಂದು ಯುದ್ದ ಎನ್ನುವಂತೆ ಆಗಿದೆ. 8 ತರಗತಿಯಿಂದ ಪ್ರೌಢ ಶಾಲೆಗೆ ಮಗು ಬಂದ ದಿನದಿಂದ ಅವರನ್ನು 10 ನೇ ತರಗತಿ ಫಲಿತಾಂಶಕ್ಕಾಗಿ ತಯಾರು ಮಾಡಲಾಗುತ್ತಿದೆ. ಸಂಪೂರ್ಣ ಪ್ರೌಢ ಶಿಕ್ಷಣ ವ್ಯವಸ್ಥೆ ಹತ್ತನೇ ತರಗತಿಯ ಪರಿಕ್ಷೆ ನಡೆದು ಅದರಲ್ಲಿ ಮಕ್ಕಳು ಏನು ಬರೆಯುತ್ತಾರೆ ಎಂಬುದನ್ನು ಅಂಕದಿಂದ ನೋಡಿ ತಿಳಿದುಕೊಳ್ಳುವ ಉದ್ದೇಶಕ್ಕಾಗಿಯೇ ಬದುಕುತ್ತಾ ಇರುವಂತೆ ಕಾಣುವುದು. ನಮ್ಮ ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಾ ಇರುವ ಈ ಅಂಕದ ಹುಚ್ಚು ಸಾಮಾನ್ಯ ಜನರಿಂದ ಹಿಡಿದು ಜನಪ್ರತಿನಿಧಿಗಳ ವರೆಗೆ, ಶೈಕ್ಷಣಿಕ ವ್ಯವಸ್ಥೆಯ ಎಲ್ಲಾ ಸ್ತರದ ಆಡಳಿತಗಾರರಿಗೆ ಅತಿಯಾಗಿಯೇ ಹಿಡಿದಿರುವುದು.
ಯಾವಾಗ 10 ನೇ ತರಗತಿಯ ಫಲಿತಾಂಶವನ್ನು ಹೆಚ್ಚು ಮಾಡುವ ಉದ್ದೇಶದಿಂದ ನಮ್ಮ ಪರೀಕ್ಷಾ ಮೌಲ್ಯಾಂಕನ ಪದ್ದತಿಯನ್ನೇ ಬದಲಿಸಿದ್ದೆವೋ ಅಂದಿನಿಂದ ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ಸಂಪೂರ್ಣ ವ್ಯವಸ್ಥೆ ಬದಲಾಯಿತು. ಅಂಕ ನೀಡುವಲ್ಲಿಯೂ ಶಿಕ್ಷಕರು ಧಾರಾಳವಾಗಿ ನೀಡ ತೊಡಗಿದರು. ಕಾಲ ಕ್ರಮೇಣ 100 ಕ್ಕೆ 100 ಫಲಿತಾಂಶ ಎಂಬ ಮಾಪನ ಪ್ರಾರಂಭವಾಯಿತು. ಅದು ಇನ್ನೂ ಮುಂದುವರೆದು ಇಂದು ಶಾಲೆಗೆ ಒಂದು ರ್ಯಾಂಕ ಬೇಕು ಎಂಬಲ್ಲಿಗೆ ಬಂದು ತಲುಪಿರುವುದು. ಒಟ್ಟಾರೇ ಇಂತಹ ಶೈಕ್ಷಣಿಕ ವ್ಯವಸ್ಥೆಯಿಂದ ನೇರವಾಗಿ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಾ ಇರುವರು. ಜೊತೆಗೆ ತಮ್ಮ ಸಹಜ ಬಾಲ್ಯವನ್ನು ಯಾಂತ್ರಿಕೃತವಾಗಿ ಕಳೆಯುತ್ತಾ ಇರುವರು. ಇದರ ಜೊತೆಗೆ ವಿಷಯವನ್ನು ಭೋದಿಸುವ ಎಲ್ಲಾ ಪ್ರೌಢ ಶಾಲಾ ಶಿಕ್ಷಕರು ಒಂದು ರೀತಿಯ ಒತ್ತಡಕ್ಕೆ ಗುರಿಯಾಗಿರುವರು. ಶಿಕ್ಷಕರು ಸಹಾ ಯಂತ್ರಗಳಂತೆ ಒಂದೇ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುವಂತೆ ಆಗಿರುವುದು. ಇದಕ್ಕೆ ಕಾರಣವಾದ ಶಿಕ್ಷಕರ ಮೇಲೆ ಒತ್ತಡ ಹೇರುತ್ತಿರುವ ಅಂಶಗಳನ್ನು ಈ ಕೆಳಗಿನಂತೆ ಗಮನಿಸಬಹುದಾಗಿದೆ.
ಮೇಲಾಧಿಕಾರಿಗಳ ಒತ್ತಡ : ತಾಲ್ಲೂಕಾ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾದವರಿಗೆ ತನ್ನ ವ್ಯಾಪ್ತಿಯ ಎಲ್ಲಾ ಶಾಲೆಯ ಫಲಿತಾಂಶವನ್ನು 100 ಕ್ಕೆ 100 ಮಾಡುವ ಉತ್ಸಾಹ ಆ ಮೂಲಕ ಜಿಲ್ಲಾ ಹಂತದ ಅಧಿಕಾರಿಗಳನ್ನು ಸಂತುಷ್ಟ ಪಡಿಸುವ ಧಾವಂತ ಕೆಲವರಿಗೆ, ಇನ್ನೂ ಕೆಲವರಿಗೆ ಮೇಲ ಹಂತದ ಅಧಿಕಾರಿಗಳ ಭಯ, ಅನಗತ್ಯವಾಗಿ ಮೂಗು ತೂರಿಸುವ ಜನಪ್ರತಿನಿಧಗಳ ಹೆದರಿಗೆ ಈ ಎಲ್ಲವೂ ಒಟ್ಟರೇ ತಾಲ್ಲೂಕಾ ಹಂತದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಿಕ್ಷಕರೊಂದಿಗೆ ಹೆಚ್ಚಿನ ಒತ್ತಡ ಹಾಕಲು ಕಾರಣವಾಗಿರುವುದು. ಏನಾದರೂ ಮಾಡಿ ನಾವು ಜಿಲ್ಲೆಯಲ್ಲಿ
ಉತ್ತಮ ಫಲಿತಾಂಶ ದಾಖಲಿಸಬೇಕು ಎಂಬ ಒತ್ತಡವನ್ನು ಶಿಕ್ಷಕರ ಮೇಲೆ ಹಾಕುವರು.
ಅನುದಾನಿತ/ಅನುಧಾರಹಿತ ಶಾಲೆಯಲ್ಲಿ ಆಡಳಿತ ಮಂಡಳೀ ಒತ್ತಡ : ಅನುಧಾನಿತ ಶಾಲೆಯ ಶಿಕ್ಷಕರ ಸ್ಥಿತಿ ಇನ್ನೂ ಕಷ್ಟ. ಒಂದು ಕಡೆ ತಾಲ್ಲೂಕಾ ಅಧಿಕಾರಿಗಳು, ಇನ್ನೊಂದಡೆ ಘಟಾನುಘಟಿ ಆಡಳಿತ ಮಂಡಳಿಯ ಸದಸ್ಯರನ್ನು ಎದುರಿಸುವುದು. ಎಲ್ಲಾ ಸದಸ್ಯರು ಪುಕ್ಕಟೆ ಸಲಹೆ ನೀಡಲು ಬರುವರು. ಆಗಾಗ ಸಭೆಯಲ್ಲಿ ಅವರಿಗೆ ತಮ್ಮ ವಿಷಯದ ಬಗ್ಗೆ ತಿಳಿಸಬೇಕು. ಒಟ್ಟರೇ ಅನುದಾನಿತ ಶಾಲೆಯ ಶಿಕ್ಷಕರಾದವರು ಆಡಳಿತ ಮಂಡಳಿ, ಮುಖ್ಯಶಿಕ್ಷಕರು, ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಜೊತೆಗೆ 100 ಕ್ಕೆ 100 ಫಲಿತಾಂಶ ತಮ್ಮ ವಿಷಯದಲ್ಲಿ ಬರುವಂತೆ ಆಗಬೇಕು. ಇದರಲ್ಲಿಯೂ ಮೀಸಲಾತಿಯಿಂದಾಗಿ ಬೇರೆ ಬೇರೆ ಜಿಲ್ಲೆಯಿಂದ ಬಂದ ಶಿಕ್ಷಕರಂತು ಇನ್ನೂ ಹೆಚ್ಚಿನ ಸವಾಲನ್ನು ಎದುರಿಸಬೇಕಾಗುವುದು. ( ಈ ಒತ್ತಡ ಸ್ಥಳೀಯ ಶಿಕ್ಷಕರಿಗೆ ಕಡಿಮೆ.. ಯಾಕೆಂದರೆ ಅವರ ಡೊನೇಷನ..ಜಾತಿಯ ಪ್ರಭಾವ, ರಾಜಕೀಯ ಪ್ರಭಾವವು ಹೆಚ್ಚಾಗಿರುವುದು) ಅನುಧಾನ ರಹಿತ ಶಾಲೆಗಳಲ್ಲಿ ಶಿಕ್ಷಕರ ನೌಕರಿಯ ಅಸ್ತಿತ್ವದ ಬಗ್ಗೆ ಮಾತನಾಡುತ್ತಾ ಒತ್ತಡ ಹೇರಲಾಗುವುದು.
ಮುಖ್ಯ ಶಿಕ್ಷಕರ ಒತ್ತಡ : ಮುಖ್ಯ ಶಿಕ್ಷಕರಾದವರು ಶಿಕ್ಷಕರು ಮತ್ತು ಮೇಲ ಅಧಿಕಾರಿಗಳ/ಜನಪ್ರತಿಗಳ/ ಆಡಳಿತ ಮಂಡಳಿಯ ನಡುವಿನ ಪೋಸ್ಟಮ್ಯಾನ ರೀತಿ ಕಾಯ9ನಿವ9ಹಿಸಬೇಕಾಗಿದೆ. ಆದರೂ ದಿನನಿತ್ಯ ಸಿಗುವವರು ಶಿಕ್ಷಕರು ಅವರ ಮೇಲೆ ಹೆಚ್ಚಿನ ಒತ್ತಡ ಇದ್ದೆ ಇರುವುದು. ಅದರಲ್ಲಿಯೂ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ ಶಿಕ್ಷಕರಾದವರು ಹೆಚ್ಚು ಕಡಿಮೆ ಮುಖ್ಯ ಶಿಕ್ಷಕರ ವೈರಿಗಳಂತೆ ಕಂಡು ಬರುವರು. ಎಲ್ಲಾ ವಿಚಯಲ್ಲಿ 100 ಕ್ಕೆ 100 ಫಲಿತಾಂಶ ತರುವ ಹೊಣೆ ಮುಖ್ಯ ಶಿಕ್ಷಕರ ಮೇಲೆ ಇರುವುದರಿಂದ ಆ ಒತ್ತಡವನ್ನು ಶಿಕ್ಷಕರ ಮೇಲೆ ಬೇರೆ ಬೇರೆ ರೀತಿಯಲ್ಲಿ ತಿಳಿಸಲು ಪ್ರಯತ್ನಿಸುವರು. ಅದು ಶಿಕ್ಷಕರಿಗೆ ಒತ್ತಡವಾಗಿ ಪರಿಣಮಿಸಿರುವುದು.
ಜಪ್ರತಿನಿಧಗಳ
ಮೀತಿ ಮಿರಿದ ಆಸಕ್ತಿ : ಸ್ಥಾಯಿ ಸಮಿತಿ ಸದಸ್ಯರು, ಎಂಎಲ್ಎ, ತಾಲ್ಲೂಕಾ ಪಂಚಾಯತ್ ಸದಸ್ಯರು ಈ ರೀತಿಯ ಎಲ್ಲಾ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಶಾಲೆಯಲ್ಲಿ ಒಂದು ರ್ಯಾಂಕ ಬಂದರೆ ಅಥವಾ ಶಾಲೆ ಉತ್ತಮ ಫಲಿತಾಂಶ ದಾಖಲಿಸಿದರೆ ಅದಕ್ಕೆ ತಾವೆಲ್ಲರೂ ಕಾರಣಿಕರ್ತರು ಎಂಬು ಪೋಸು ನೀಡಿ ದಿನಪತ್ರಿಕೆಯಲ್ಲಿ ಕಾಣಿಸಿಕೊಳ್ಳುವರು. ಅದೇ ಫಲಿತಾಂಶ ಉತ್ತಮವಾಗಿರದೇ ಇದ್ದರೇ ಅದಕ್ಕೆ ಆಯಾ ವಿಷಯದ ಶಿಕ್ಷಕರನ್ನು ಹೊಣೆಯನ್ನಾಗಿಸಿ ಮನಸ್ಸಿಗೆ ಬಂದಂತೆ ತಮ್ಮ ವ್ಯಾಪ್ತಿ ಮೀರಿ ವತರ್ಿಸುವರು. ಶಿಕ್ಷಕರ ಸಮಸ್ಯೆಯನ್ನು ಆಲಿಸುವ ಬದಲು ತಮ್ಮದೇ ಉಪನ್ಯಾಸ ನೀಡಿ ಒತ್ತಡವನ್ನು ಹೇರುವರು. ಹಾಲಿ ಮಾಜಿಗಳೆಲ್ಲರೂ ಸ್ಪಧರ್ೆಗೆ ಬಿದ್ದವರೆಂತೆ ರ್ಯಾಂಕ ವಿಜೇತರನ್ನು ಸನ್ಮಾನಿಸಿ ಪ್ರಚಾರಕ್ಕಾಗಿ ಹಪಹಪಿಸುತ್ತಿರುವುದನ್ನು ಕಾಣಬಹುದು. ಜನಪ್ರತಿನಿಧಿಗಳ ಈ ವರ್ತನೆ ಶಿಕ್ಷಕರಲ್ಲಿ ಒತ್ತಡ ಹೆಚ್ಚಾಗಲು ಕಾರಣವಾಗಿರುವುದು.
ಪಾಲಕರ ಒತ್ತಡ : ಈ ಎಲ್ಲವುಗಳ ನಡುವೆ ಪಾಲಕರ ಒತ್ತಡ. ಮಕ್ಕಳಿಗೆ ಹೊಡೆದರೆ ಅದು ತಪ್ಪು, ಅತಿ ಹೆಚ್ಚು ಬೈದರೂ ತಪ್ಪು ಮಕ್ಕಳೀಗೆ ಹೆಚ್ಚು ಅಂಕ ಬೇಕು. ಇದು ಪಾಲಕರ ಮನಸ್ಥಿತಿ. ಹತ್ತನೇ ತರಗತಿ ಮಕ್ಕಳ ಪಾಲಕರಿಗೆ ಬೆಳ್ಳಿಗೆ 5 ಗಂಟೆಗೆ ಪೋನ ಮಾಡಿ ಮಕ್ಕಳನ್ನು ಓದಿಸಲು ಎಬ್ಬಿಸುವದು, ರಾತ್ರಿ 10 ಗಂಟೆಗೆ ಪೋನ ಮಾಡಿ ಮಕ್ಕಳು ಏನು ಮಾಡಿದರು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಇದು ಪರಿಕ್ಷೇಗಿಂತ 4-5 ತಿಂಗಳು ಮುಂಚಿನಿಂದ ಪ್ರಾರಂಭವಾಗುವುದು. ಮಹಿಳಾ ಶಿಕ್ಷಕರು ರಾತ್ರಿ ಪೋನ ಮಾಡಿದಾದ ಏನೇನೋ ಅರ್ಥ ಮಾಡಿಕೊಂಡು ಕೆಲವು ಪಾಲಕರು ಮರುದಿನ ಶಾಲೆಗೆ ಬಂದಿರುವ ಉದಾಹರಣೆಯೂ ಇದೆ. ಒಟ್ಟಾರೇ ಪಾಲಕರ ಒತ್ತಡ ಸಹಾ ಶಿಕ್ಷಕರ ಮೇಲೆ ಅತಿಯಾಗುತ್ತಾ ಇರುವುದು.
ಈ ಮೇಲೆ ಕಾಣಿಸಿದ ಎಲ್ಲಾ ರೀತಿಯಿಂದಲ್ಲೂ ಪ್ರೌಢ ಶಾಲಾ ಶಿಕ್ಷಕರ ಮೇಲೆ ಒತ್ತಡ ಇರುವುದು. ಉತ್ತಮ ಫಲಿತಾಂಶ ಮತ್ತು ರ್ಯಾಂಕ ಈ ಒತ್ತಡದ ನಡುವೆ ಶಿಕ್ಷಕರ ಕ್ರೀಯಾ ಶೀಲತೆ ಎಂಬುದು ನಶಿಸಿ ಹೋಗುತ್ತಿರುವುದು. ಪ್ರೌಢ ಶಾಲಾ ಮಕ್ಕಳಲ್ಲಿ ಸ್ವಂತಿಯನ್ನು ಬೆಳೆಸುವುದು, ಒಂದು ವಿಷಯದಲ್ಲಿ ಆಸಕ್ತಿಯನ್ನು
ಬೆಳೆಸುವುದು, ವಿಭಿನ್ನವಾಗಿ ಆಲೋಚನೆ ಮಾಡುವ ಸಾಮಥ್ರ್ಯವನ್ನು ಬೆಳೆಸುವುದು, ತರ್ಕ ಮಾಡುವ ಸಾಮಥ್ರ್ಯ ಬೆಳೆಸುವುದು ಈ ಎಲ್ಲವೂ ಮರೆಯಾಗಿ 100 ಕ್ಕೆ 100 ಅಂಕ ಗಳಿಸುವುದು, 100 ಕ್ಕೆ 100 ಶಾಲಾ ಫಲಿತಾಂಶ ದಾಖಲಿಸುವುದು ಹೇಗೆ ಎಂಬುದರ ಹಿಂದೆ ಬಿದ್ದಿರುವರು. ಎಲ್ಲೋ ಒಂದಿಬ್ಬರು ಸ್ವಲ್ಪ ಆಸಕ್ತಿ ತೋರಿಸಿ ವಿಜ್ಞಾನ ಮೇಳ, ಸಾಹಿತ್ಯ, ಭಾಷಣ ಎಂದು ಮಕ್ಕಳ ಬಗ್ಗೆ ಗಮನ ನೀಡಿದರೆ ಅದಕ್ಕೆ ಮುಖ್ಯ ಶಿಕ್ಷಕರಿಂದ, ಪಾಲಕರಿಂದ, ಆಡಳಿತ ಮಂಡಳಿಯಿಂದ ತಡೆಯಾಗುವುದು,
ಅವೆಲ್ಲಾ ಸರಿ ಮೊದಲು ಫಲಿತಾಂಶದ ಬಗ್ಗೆ ಗಮನ ನೀಡಿ ಎಂಬ ಪುಕ್ಕಟೆ ಸಲಹೆ ಬರುವುದು ಒಟ್ಟಾರೆ ಪ್ರೌಢ ಶಾಲಾ ಶಿಕ್ಷಕರಲ್ಲಿ ಸ್ವಂತಿಕೆ ಎಂಬುದು ನಶಿಸಿ ಯಂತ್ರಗಳಂತೆ ಕಾರ್ಯನಿರ್ವಹಿಸುತ್ತಾ ಇರುವರು.
ಈ ಎಲ್ಲಾ ಒತ್ತಡಗಳ ನಡುವೆಯೂ ಕೆಲವೊಂದು ಶಿಕ್ಷಕರು ವಿಭಿನ್ನವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಾ ಇರುವರು. ಆದರೇ ದಿನ ಕಳೆದಂತೆ ಈ ಸಂಖ್ಯೆ ಕಡಿಮೆಯಾಗುತ್ತಾ ಇರುವುದು. ನಮ್ಮ ಶೈಕ್ಷಣೀಕ ವ್ಯವಸ್ಥೆಯೇ ಅಂಕ ಪದ್ದತಿಯೆಂಬ ಹುಚ್ಚು ಕುದುರೆಯನ್ನು ಏರಿ ಸಾಗುತ್ತಿರುವಾಗ ಆ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಶಿಕ್ಷಕರು ವಿಭಿನ್ನವಾಗಿ ಯೋಚಿಸುದಾದರೂ ಹೇಗೆ? ಶಿಕ್ಷಕರ ಗೋಳು ಕೇಳುವವರಾದರು ಯಾರು?
ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ಶಿಕ್ಷಣ ನೀತಿಯ ಬಗ್ಗೆ ಬರುತ್ತಿರುವ ಸುದ್ದಿಗಳು ಸ್ವರ್ಗವನ್ನೇ ಧರೆಗೆ ಇಳಿಸುವಂತೆ ಇರುವುದು. ಮೌಲ್ಯಾಂಕನ ಪದ್ದತಿಯಲ್ಲಿ ಬದಲಾವಣೆ ಹೊಸ ಶಿಕ್ಷಣ ನೀತಿಯಿಂದ ಆಗಬಹುದು ಎಂಬ ಆಶಾ ಭಾವನೆ ಇದೆ. ಅದೇ ಆಶಾ ಭಾವನೆಯೊಂದಿಗೆ ಪ್ರೌಢ ಶಾಲಾ ಶಿಕ್ಷಕರು ಮುಂದೆ ಸಾಗಬೇಕಾಗಿದೆ.
ವಿವೇಕ ಬೆಟ್ಕುಳಿ 8722954123
ವಿದ್ಯಾಗಮ ಯೋಜನೆಯ ಮೂಲಕ ಕೊರೋನಾ ರಾಯಭಾರಿಗಳಾಗುತ್ತಿರುವ ಶಿಕ್ಷಕರು
ನಮ್ಮ ಶಿಕ್ಷಣ ಇಲಾಖೆಗೆ ಏನಾಗಿದಿಯೋ ತಿಳಿಯದು. ಕಲಿಕೆಯ ಹೆಸರಿನಲ್ಲಿ ಹಳ್ಳಿಗೆ ಶಿಕ್ಷಕರು ಬೀದಿ ಬೀದಿಯಲ್ಲಿ ಪಾಠ ಮಾಡಲು ಪ್ರಾರಂಭಿಸಿರುವರು. ಶಾಲಾ ಪ್ರಾರಂಭ ಮಾಡಮಾಡಬಾರದು ಅದರಿಂದ ಮಕ್ಕಳಲ್ಲಿ ಕೋವಿಡ ಹರಡುವ ಸಾಧ್ಯತೆ ಹೆಚ್ಚು ಎಂದು ಒಂದು ಕಡೆ ಹೇಳುತ್ತಾ ಈಗ ಶಿಕ್ಷಕರೆ ಕೋವಿಡನ್ನು ಮಕ್ಕಳು ಇದ್ದಲಿಗೆ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತಿರುವರು. ರಾಜ್ಯದಲ್ಲಿ ಪ್ರತಿ ಹಳ್ಳಿಗೂ ಸಂಪರ್ಕದಲ್ಲಿರುವ ಇರುವ ಶಿಕ್ಷಕರು ವಿದ್ಯಾಗಮ ಯೋಜನೆಯ ಮೂಲಕ ಸಮುದಾಯದಲ್ಲಿ ಕೋವಿಡ ಪ್ರಸರಿಸಲು ಕಾರಣರಾಗುತ್ತಿರುವರು. ಈಗಾಗಲೇ ಜಿಲ್ಲೆಯಲ್ಲಿ ಒಂದೆರಡು ಸುದ್ದಿಗಳ ಹರಿದಾಡುತ್ತಿರುವುದು. ಶಿಕ್ಷಕರಿಗೆ ಸಂಬಂಳ ಕೊಡುತ್ತೇವೆ ಎಂಬ ಒಂದೇ ಒಂದು ಕಾರಣಕ್ಕಾಗಿ ಅವರಿಗೆ ಕೆಲಸ ನೀಡಬೇಕು ಎಂಬ ಮನಸ್ಥಿತಿಯಲ್ಲಿ ನಮ್ಮ ಶಿಕ್ಷಣ ಇಲಾಖೆ ಜಿದ್ದಿಗೆ ಬಿದ್ದರುವಂತೆ ಕಾಣುತ್ತಿರುವುದು. ಆ ಮುಖಾಂತರ ಮುಂದೆ ಸಮುದಾಯಕ್ಕೆ ಕಾಯಿಲೆ ಹರಡಲು ಕಾರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನೂ ಒಂದು-ಎರಡು ತಿಂಗಳು ಮಕ್ಕಳು ಅವರದೇ ಆದ ರೀತಿಯಲ್ಲಿ ಕಲಿತರೇ ಏನಾದರೂ ತೊಂದರೇ ಇದೆಯೇ? ಕಲಿಕೆ ಎಂಬುದು ನಿರಂತರವಾಗಿ ಆಗುತ್ತಾ ಇರುವುದು. ಅದಕ್ಕೆ ಶಿಕ್ಷಕರ ಅಗತ್ಯವಿದೆ, ಹಾಗೆಂದು ಶಿಕ್ಷಕರು ಇಲ್ಲದೇ ಇದ್ದರೂ ಮಕ್ಕಳು ಕಲಿತೆ ಕಲಿಯುವರು ಅದಕ್ಕೆ ಅಗತ್ಯ ಬೆಂಬಲ ಬೇಕು. ಹೀಗೆ ಇರುವಾಗ ಇಂತಹ ಸಂದಿಗ್ದ ಸ್ಥಿತಿಯಲ್ಲಿ ನಮ್ಮ ಶಿಕ್ಷಣ ಇಲಾಖೆ ಯಾಕೆ ಇಂತಹ ತೀಮರ್ಾನವನ್ನು ಮಾಡಿರುವದೋ ತಿಳಿಯದು.
ಶಿಕ್ಷಕರನ್ನು ಶೈಕ್ಷಣಕ ಚಟುವಟಿಕೆಗಳಲ್ಲಿ ತೊಡಗಿಸಬೇಕೆಂಬ ಉದ್ದೇಶ ಇಲಾಖೆಗೆ ಇರುವುದು ಒಳ್ಳೆಯದು. ಆದರೇ ಆ ಮೂಲಕ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುವುದು ಎಷ್ಟು ಸರಿ?
ಆಥರ್ಿಕ ವರ್ಷದ ಕೊನೆಯಲ್ಲಿ ಬಂದ ಬಜೆಟನ್ನು ಖಚು೯ ಮಾಡಲು ತರಬೇತಿಯನ್ನಯ ಸಿಕ್ಕ ಸಿಕ್ಕಿದವರಿಗೆಲ್ಲಾ ನೀಡಿ ಮುಗಿಸುವುವದು ಪ್ರತಿ ವರ್ಷ ನಡೆಯುತ್ತಾ ಇರುವುದು. ಈಗ ಯಾಕೆ ಅಂತಹ ತರಬೇತಿಗಳನ್ನು ವ್ಯವಸ್ಥಿತಿವಾಗಿ ಮಾಡುತ್ತಿಲ್ಲ. ಅಗತ್ಯವಾದ ಸರಣಿ ತರಬೇತಿಗಳ ಮೂಲಕ ಶಿಕ್ಷಕರನ್ನು ಶೈಕ್ಷಣಿಕ ಚಟುವಟಿಕೆಯಲ್ಲಿ ಇರುವಂತೆ ಮಾಡಬಹುದಲ್ಲವೇ?
ವಿವಿಧ ವಿಷಯ ಸಂಬಂಧಿತ ತರಬೇತಿಗಳು, ಹೊಸ ಶಿಕ್ಷಣ ನೀತಿಯ ಬಗ್ಗೆ, ಕಲಿಕಾ ಉಪಕರಣ ತಯಾರಿ, ಸಮುದಾಯದ ತೊಡಗಿಸುವಿಕೆ, ಮಗುವಿನ ಮನಸ್ಥಿತಿ ಅರಿಯುವುದು, ಮೌಲ್ಯಾಂಕನ ಪದ್ದತಿ, ಇಂತಹ ಹಲವು ವಿಚಾರಗಳ ಜೊತೆಗೆ ಬೇರೆ ಬೇರೆ ರಾಜ್ಯ ದೇಶಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಆಗಿರುವ ಕೆಲಸ ಅದರ ಪರಿಣಾಮ ಇಂತಹ ನೂರಾರು ವಿಚಾರಗಳ ಬಗ್ಗೆ ಶಿಕ್ಷಕರಿಗೆ ತಿಳಿಸುವ ಅಗತ್ಯವಿದೆ. ಆ ಮೂಲಕ ಎಲ್ಲಾ ಶಿಕ್ಷಕರನ್ನು ತೊಡಗಿಸಿಕೊಳ್ಳುವ ಸಾಧ್ಯತೆ ಇರುವುದು. ಅದಕ್ಕೆ ತಕ್ಕಂತೆ ಸಿಆರ್ ಸಿ ಡಯೆಟ್, ಬ್ಲಾಕ ಮತ್ತು ಜಿಲ್ಲಾ ಹಂತದಲ್ಲಿ ಅಧಿಕಾರಿವರ್ಗವೂ ಇರುವುದು. ಸಂಪನ್ಮೂಲ ವ್ಯಕ್ತಿಗಳು ಇರುವರು.
ಇದೆಲ್ಲವನ್ನು ಬಿಟ್ಟು, ಶಿಕ್ಷಕರನ್ನು ಊರಿನಲ್ಲಿ ಬೀದಿಗೆ ಬಿಟ್ಟು ಮಕ್ಕಳಿಗೆ ಪಾಠ ಮಾಡಲು ಹೇಳುವುದು ಎಷ್ಟುರ ಮಟ್ಟಿಗೆ ಸರಿ?
ಈ ಬಗ್ಗೆ ಧ್ವನಿ ಎತ್ತಬೇಕಾದ ಶಿಕ್ಷಕರ ಸಂಘಟನೆಗಳು ಏನಾದವು? ಜನಪ್ರತಿಗಳು ಏನು ಮಾಡುತ್ತಿರುವರು? ಅಥವಾ ಯಾರಿಗೂ ಈ ಬಗ್ಗೆ ಆಸಕ್ತಿ ಇಲ್ಲವೇ? ವಿರೋಧಿಸುವವರ ಧ್ವನಿಯನ್ನು ತಡೆಯತ್ತಿರುವವರಾದರೂ ಯಾರು?
ಬೇರೆ ಬೇರೆ ಊರುಗಳಿಂದ ಮುಖ್ಯವಾಗಿ ಪಟ್ಟಣಗಳಿಂದ ಹಳ್ಳಿಗೆ ಹೋಗಿ ಪಾಠ ಮಾಡುವ ಶಿಕ್ಷಕರು ಈ ಸಂದರ್ಭದಲ್ಲಿ ಸಮುದಾಯಕ್ಕೆ ಕೋವಿಡ ತೆಗೆದುಕೊಂಡು ಹೋಗುವ ರಾಯಭಾರಿಗಳಂತೆ ಕಾಣುತ್ತಿರುವರು. ಸಕರ್ಾರ ಹಾಗೂ ಅಧಿಕಾರಗಳು ಆದೇಶ ಪಾಲನೆ ಮಾತ್ರ ತಮ್ಮ ಕಾರ್ಯ ಎಂಬಂತೆ ಎಲ್ಲಾ ಜವಬ್ದಾರಿ ಸ್ಥಾನದಲ್ಲಿ ಇರುವವರು ತಮ್ಮ ಜವಬ್ದಾರಿಯಿಂದ ನುಣುಚಿಕೊಳ್ಳುತ್ತಿರುವರು.
ಉತ್ತರಕನ್ನಡ ಜಿಲ್ಲೆಯ ಒಂದೆರಡು ಕಡೆ ಮಕ್ಕಳಿಂದ ಶಿಕ್ಷಕರಿಗೆ, ಅಥವಾ ಶಿಕ್ಷಕರಿಂದ ಮಕ್ಕಳಿಗೆ ಹೇಗೋ ಸೋಂಕು ಕಾಣಿಸಿ ಕೊಂಡಿರುವ ಸುದ್ದಿ ಇದೆ. ಇದೇ ರೀತಿಯಾಗಿ ಎಲ್ಲಾ ಹಳ್ಳಿಗಳಲ್ಲಿ ಸೋಂಕು ವ್ಯಾಪಿಸುವ ಸಾಧ್ಯತೆ ಇರುವುದು.
ಆತುರದ ನಿಧಾ೯ರ ಮಾಡುವ ಶಿಕ್ಷಣ ಇಲಾಖೆ, ಆದೇಶ ಪಾಲನೆಗೆ ಅಷ್ಟೇ ಸೀಮಿತವಾಗಿರುವ ಅಧಿಕಾರಿ ವರ್ಗ, ಪ್ರಚಾರದ ಗುಂಗಿನಲ್ಲಿ ಸಿಲುಕಿರುವ ಜನಪ್ರತಿಗಳು ಇವರನ್ನು ನಂಬಿದರೆ ಅನಾಹುತವೆ ಹೆಚ್ಚು. ಯಾರಿಗೆ ಮಕ್ಕಳ ಬಗ್ಗೆ ಕಾಳಜಿ ಇದೆಯೋ ಶಿಕ್ಷಣಕ್ಕಿಂತ ಮಕ್ಕಳ ಆರೋಗ್ಯ ಮುಖ್ಯ ಎಂದು ಅನಿಸುತ್ತಾ ಇದೆಯೋ ಅಂತಹ ಪಾಲಕರು ಸ್ವಂತ ನಿಧಾ೯ರ ತೆಗೆದುಕೊಂಡು ತಮ್ಮ ಮಕ್ಕಳ ಬಗ್ಗೆ ತಾವೇ ಕಾಳಜಿ ವಹಿಸಬೇಕಾಗಿದೆ.
ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಆದರೂ ಶಿಕ್ಷಕರ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಅವರ ಆರೋಗ್ಯ ಮತ್ತು ಗೌರವವನ್ನು ಕಾಪಾಡುವದು, ಜೊತೆಗೆ ಮಕ್ಕಳ ಆರೋಗ್ಯವನ್ನು ಕಾಪಾಡಬೇಕಾಗಿದೆೆ. ಸಂಬಂಧಿಸಿದವರು ಗಮನ ಹರಿಸಿದರೆ ಒಳ್ಳೆಯದು.
ವಿವೇಕ ಬೆಟ್ಕುಳಿ
8722954123