ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, April 19, 2014

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

Krupe :  http://azsmarane.blogspot.in/2012/01/blog-post_21.html 



ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾಗು ಪುಸ್ತಕಗಳು! ಓದಿ ಆನಂದಿಸಿ!


ತ್ರಿವೇಣಿಯವರ ಕಾದಂಬರಿಗಳು

MK ಇಂದಿರಾ ಕಾದಂಬರಿಗಳು

ಬಿದಿಗೆ ಚಂದ್ರಮ ಡೊಂಕು - MK ಇಂದಿರಾ 
 
ಮುಕ್ತ ಅವರ ಕಾದಂಬರಿಗಳು
 

ರೇಖಾ ಖಾಖoಡಕಿ ಅವರ ಕಾದಂಬರಿಗಳು 




ಜ್ಯೋತ್ಸ್ನಾ ಕಾಮತ್ 
"ಹೀಗಿದ್ದೇವೆ ನಾವು"  (ಲಲಿತ ಪ್ರಬಂಧಗಳು )

ಅನುಸೂಯ ಸಂಪತ್ ಅವರ ಕಾದಂಬರಿಗಳು 




ಹಾ ಮಾ ನಾಯಕ ಅವರ ಪುಸ್ತಕಗಳು 



ಹಾವು ಮತ್ತು ಹೆಣ್ಣು ( ಕಥಾ ಸಂಗ್ರಹ)

ಚದುರಂಗ 

ತ ರಾ ಸು ಅವರ ಪುಸ್ತಕಗಳು

ಹಿಂತಿರುಗಿ ನೋಡಿದಾಗ (ತ ರಾ ಸು ಅವರ ಜೀವನ ಚರಿತ್ರೆ )




ನೃಪತುಂಗ 


ಜಿ ಪಿ ರಾಜರತ್ನಂ ಅವರ ಪುಸ್ತಕಗಳು 




SL ಭೈರಪ್ಪ
K P ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳು

ಶಿವರಾಮು 
ಡಾ ಶಿವರಾಂ ಕಾರಂತ ಅವರ ಪುಸ್ತಕಗಳು 



















ಮಾಸ್ತಿ 
"ಚೆನ್ನಬಸವನಾಯಕ " ಕಾದಂಬರಿ (26 MB)



ಯಂಡಮೂರಿ ವೀರೇಂದ್ರನಾಥ್ ನೋವೆಲ್ಸ್ 



ಸುದರ್ಶನ ದೇಸಾಯಿ ಅವರ ಕಾದಂಬರಿಗಳು
  1)Airavata_tif.pdf
  2)Amar Deepa_tif.pdf 
  3)Badavana maneya Manikya_tif.pdf 
  4)Benkiya Madilalli_tif.pdf 
  5)Chinnada Beralu_tif.pdf
  6)Mruthyu Bandhan_tif.pdf
  7)Seelu Nalige_tif.pdf 
  8)Sheetal Koli_tif.pdf 
  9)Vichitra Aparadhi_tif.pdf 
  10)Visha Manthan_tif.pdf 
  11)Yamadootaru_tif.pdf 

Friday, April 11, 2014

ತಪ್ಪದೇ ಮತ ಚಲಾಯಿಸಿ.. ಭಾರತದ ಪ್ರಜಾಸಾರ್ವಭೌಮತ್ವವನ್ನು ಕಾಪಾಡಿ.

ಈ ಹಿಂದೆ ಕರ್ನಾಟಕದಲ್ಲಿ ಜೆಡಿಸ್, ಬಿಜೆಪಿಗೂ ಯಡಿಯೂರಪ್ಪನವರಿಗೆ ಮೋಸ ಮಾಡಿತೆಂದು ಗೋಳಿಟ್ಟು ಮಾಡಿಕೊಂಡ 'ವ್ಯಕ್ತಿ ಗತ' ಪ್ರಚಾರಕ್ಕೆ ಮರುಳಾಗಿ ಮತ ಚಲಾಯಿಸಿದ ಜನತೆ ಮುಂದಿನ ೫ ವರುಷಗಳ ಕಾಲ ಎಲ್ಲ ವಿಧದ ಆಟೋಪಗಳನ್ನೂ, ಗಣಿ- ಭೂಮಿ- ಧರ್ಮ ಹೆಸರಿನಲ್ಲಿ ಹಾಡುಹಗಲೇ ಕೊಳ್ಳೆ ಹೊಡೆಯುವುದನ್ನು ಕಣ್ಣಾರೆ ಕಂಡು ಮತವಿಟ್ಟ ಬೆರಳು ಕಚ್ಚಿಕೊಂಡರು... ಇದೀಗ ಕೇಂದ್ರದಲ್ಲೂ ಅದೇ ''ವ್ಯಕ್ತಿಗತ'' ಧೋರಣೆಯ ಜಾಹೀರಾತುಗಳು!


* ನಮ್ಮ ಮತ ಯಾವಾಗಲೂ ನಮ್ಮ 'ಕ್ಷೇತ್ರಗತ' ವಾಗಿರಬೇಕು.
* ನಮ್ಮ ಕ್ಷೇತ್ರವನ್ನು ಪ್ರತಿನಿಧಿಸಲು ಯಾರು ಸಮರ್ಥರೋ ಅವರನ್ನು ನಾವು ಗೆಲ್ಲಿಸಬೇಕು.
* ನಮ್ಮ ಕ್ಷೇತ್ರದ ಬೇಕಾದ ಸಂಪನ್ಮೂಲಗಳನ್ನು ತರುವ, ಕುಂದು ಕೊರತೆಗಳನ್ನು ಆಲಿಸುವ, ಪರಿಹರಿಸುವ, ಬೇಕಿದ್ದನ್ನು ಮುಂದಾಲೋಚಿಸುವ ಪ್ರತಿನಿಧಿ ಬೇಕಿರುವುದು.
* ಜನತಂತ್ರ ವ್ಯವಸ್ತೆ ಇರುವುದು ಹಲವರಲ್ಲಿ, ಒಬ್ಬನಲ್ಲಿರುವುದು ಸರ್ವಾಧಿಕಾರ. ವರ್ತಮಾನದಲ್ಲಿ ಲಿಬಿಯಾ, ಇರಾಕ್, ಸಿರಿಯಾ, ಉಕ್ರೇನ್ ಇತ್ಯಾದಿ ದೇಶಗಳ ಅರಾಜಕತೆಯನ್ನು ಒಮ್ಮೆ ನೆನೆಯಲೇಬೇಕು ನಾವು ( ಖಂಡಿತ ತುರ್ತ ಪರಿಸ್ತಿತಿಯ ಭಾರತವನ್ನು ಕೂಡ )
* ಕಾಂಗ್ರೆಸ್ಸು, ಬಿಜೆಪಿ, ಜೆಡಿಸ್, ಆಪ್ ಕಡೆಗೆ ಪಕ್ಷೇತರ ಯಾರಾದರು ಸರಿ ನಮ್ಮ ಕ್ಷೇತ್ರಕ್ಕೆ ದುಡಿಯುವವನ್ನು ಆಯ್ಕೆ ಮಾಡಿ... ಖಂಡಿತ ಆಯ್ಕೆಗೊಂಡ ಆ ಅರ್ಹ ಪ್ರತಿನಿಧಿ ಅವರುಗಳ ಯೋಗ್ಯ ನಾಯಕನನ್ನು ಆರಿಸುತ್ತಾನೆ..ಇದುವೇ ನೈಜ ಜನತಂತ್ರ ವ್ಯವಸ್ತೆ.
ತಪ್ಪದೇ ಮತ ಚಲಾಯಿಸಿ.. ಭಾರತದ ಪ್ರಜಾಸಾರ್ವಭೌಮತ್ವವನ್ನು ಕಾಪಾಡಿ.

- ರಾಜೇಂದ್ರ ಪ್ರಸಾದ್


Sunday, April 6, 2014

ಪ್ರಾರ್ಥನೆ ಎಂದರೆ ಆತ್ಮದ ನಿವೇದನೆ - ಶ್ರೀವತ್ಸ ಜೋಶಿ

"ಪ್ರಾರ್ಥನೆ ಎಂದರೆ ಬೇಡಿಕೆ ಅಲ್ಲ. ಪ್ರಾರ್ಥನೆ ಎಂದರೆ ಆತ್ಮದ ನಿವೇದನೆ. ನಮ್ಮಲ್ಲಿನ ದೈನ್ಯಭಾವವನ್ನು ದಿನದಿನವೂ ಒಪ್ಪಿಕೊಳ್ಳುವ ರೀತಿ. ಪ್ರಾರ್ಥನೆಯಲ್ಲಿ ಪದಗಳಿಲ್ಲದಿದ್ದರೂ ಸರಿಯೇ, ಹೃದಯ ಇರಬೇಕು. ಹೃದಯವೇ ಇಲ್ಲದೆ ಬರಿ ಪದಗಳ ಅಬ್ಬರವು ಪ್ರಾರ್ಥನೆ ಎನಿಸದು" ಎಂದಿದ್ದ ಮಹಾತ್ಮ ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಪ್ರಾರ್ಥನೆಗೆ ಅತ್ಯಂತ ಹೆಚ್ಚು ಮಹತ್ವ ಕೊಟ್ಟವರು. ಪ್ರಾರ್ಥನೆಯ ಅತಿದೊಡ್ಡ ಪ್ರಯೋಜನವೆಂದರೆ ಮನಸ್ಸಿನ ಏಕಾಗ್ರತೆಗೆ ಅನುಕೂಲ ಆಗುವುದು. ಶಾಲೆಗಳಲ್ಲಿ ಬೆಳಗಿನ ಹೊತ್ತು ಪ್ರಾರ್ಥನೆಯ ನಂತರವೇ ಪಾಠಪ್ರವಚನ ಆರಂಭ ಎಂಬ ಕ್ರಮ ಆದಿಕಾಲದಿಂದಲೂ ಬಂದಿರುವುದು ಅದೇ ಕಾರಣಕ್ಕೆ. ವಿಪರ್ಯಾಸವೆಂದರೆ ಈಗ ಢೋಂಗಿ ಜಾತ್ಯತೀತರು ಪ್ರಾರ್ಥನೆಯ ನಿಜವಾದ ಮಹತ್ವವನ್ನರಿಯದೆ, ಅದಕ್ಕೆ ಧರ್ಮ-ಜಾತಿ-ಮತಗಳ ಲೇಪ ಹಚ್ಚಿರುವುದರಿಂದ ಎಷ್ಟೋಕಡೆ ಶಾಲೆಗಳಲ್ಲಿ ಪ್ರಾರ್ಥನೆಯೇ ಇಲ್ಲವಾಗಿದೆ

ನಾನು ಕಲಿತ ಪ್ರಾಥಮಿಕ ಶಾಲೆಯಲ್ಲಿ ವಾರದ ಆರು ದಿನಗಳಲ್ಲಿ ಒಂದೊಂದು ದಿನ ಒಂದೊಂದು ಪ್ರಾರ್ಥನೆ ಹಾಡುವ ಕ್ರಮವಿತ್ತು. ಸೋಮವಾರದ ಪ್ರಾರ್ಥನೆ "ಸ್ವಾಮಿದೇವನೆ ಲೋಕಪಾಲನೆ..." ನಾವು ಹಾಡುತ್ತಿದ್ದದ್ದು (ಬಹುಶಃ ಹೆಚ್ಚಿನೆಲ್ಲ ಶಾಲೆಗಳಲ್ಲೂ ಇದ್ದದ್ದು) ಸ್ಕೂಲ್ ಮಾಸ್ಟರ್ ಚಲನಚಿತ್ರದಲ್ಲಿ ಅಳವಡಿಸಿಕೊಳ್ಳಲಾದ ಎರಡು ಚರಣಗಳಷ್ಟೇ ಇರುವ ಹಾಡು. ಆದರೆ ಮೂಲದಲ್ಲಿ ಇದು ಸೋಸಲೆ ಅಯ್ಯ ಶಾಸ್ತ್ರಿಗಳು (1854-1934) ಎಂಬ ವಿದ್ವಾಂಸರು ರಚಿಸಿದ ಎಂಟು ಚರಣಗಳಿರುವ ಒಂದು ಸುಂದರವಾದ, ಅರ್ಥಗರ್ಭಿತ ಗೀತೆ. ನಮ್ಮೆಲ್ಲರ ಬಾಳಿಗೆ ಬೆಳಕು ನೀಡುವ ಸೂರ್ಯನ ಸ್ತುತಿ. "ಸರ್ವರಿಗೊಂದೇ ಸೂರ್ಯನಕಣ್ಣು ವಿಧವಿಧ ಸಸ್ಯಕೆ ಒಂದೇ ಮಣ್ಣು" ಎಂಬ ಕವಿವಾಣಿಯಂತೆ ಈ ಜಗಕ್ಕೆಲ್ಲ ಒಬ್ಬನೇ ಸೂರ್ಯ. ಬೆಳಕು ನೀಡುವ ಆತನಿಗೆ ನಾವೆಲ್ಲರೂ ಏಕಪ್ರಕಾರವಾಗಿ ಕೃತಜ್ಞರಾಗಿರುವುದರಲ್ಲಿ ತಪ್ಪೇನಿದೆ?

ಸೋಸಲೆ ಎಂದರೆ ಮೈಸೂರಿನ ಪಕ್ಕ ತಿರುಮಕೂಡಲು ನರಸೀಪುರದ ಒಂದು ಹಳ್ಳಿ. ಅಲ್ಲಿ ಜನಿಸಿದ ಅಯ್ಯ ಶಾಸ್ತ್ರಿಗಳು ಪ್ರಾರಂಭಿಕ ಶಿಕ್ಷಣವನ್ನು ಮನೆಯಲ್ಲಿಯೇ ಪಡೆದು ನಂತರ ಮೈಸೂರಿನಲ್ಲಿ ವ್ಯಾಕರಣ, ತರ್ಕ, ಅಲಂಕಾರಾದಿ ಶಾಸ್ತ್ರಾಧ್ಯಯನ ನಡೆಸಿದರು. ಸಾಹಿತ್ಯವಷ್ಟೇ ಅಲ್ಲದೆ ಚಿತ್ರಕಲೆ, ಸಂಗೀತದಲ್ಲೂ ಪರಿಣತಿ ಗಳಿಸಿದರು. ಅವರು ಸುಮಾರಷ್ಟು ಸಾಹಿತ್ಯಕೃತಿಗಳನ್ನು ರಚಿಸಿದ್ದಾರಾದರೂ ಕನ್ನಡಜನಮಾನಸದಲ್ಲಿ ಅಜರಾಮರವಾಗಿ ಉಳಿದದ್ದು ಈ ಪ್ರಾರ್ಧನೆಗೀತೆ.

“ಸ್ವಾಮಿ ದೇವನೆ ಲೋಕ ಪಾಲನೆ...” ಛಂದೋಬದ್ಧವಾಗಿ ರಚಿತವಾದ ಪದ್ಯ. ಮಲ್ಲಿಕಾಮಾಲೆ ಎಂಬ ಛಂದಸ್ಸು. ಒಂದೊಂದು ಸಾಲಿನಲ್ಲಿ 3,4,3,4,3,4,3,4 ಮಾತ್ರೆಗಳ ಗಣಗಳು. ಜನಪ್ರಿಯ ಶಾಲಾ ಪದ್ಯಗಳಾದ ’ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ...’, ’ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ...’ ಮುಂತಾದವು ಕೂಡ ಇದೇ ಲಯದಲ್ಲಿರುವವು. ಆದಿಪ್ರಾಸವೂ ಇರುವುದರಿಂದ (ಒಂದು ಚರಣದಲ್ಲಿ ಪ್ರತಿ ಸಾಲಿನ ಎರಡನೇ ಅಕ್ಷರವು ಒಂದೇ ವ್ಯಂಜನದಿಂದ ಆಗಿರುವುದು) ಕಂಠಪಾಠ ಮಾಡುವುದಕ್ಕೆ ಅನುಕೂಲ.

ಈಗ ನೀವು ಮತ್ತೊಮ್ಮೆ ನಿಮ್ಮ ಶಾಲಾದಿನಗಳನ್ನು ನೆನಪಿಸಿಕೊಳ್ಳುತ್ತ, ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಕ್ಷಣಗಳನ್ನು ಕಲ್ಪಿಸಿಕೊಳ್ಳುತ್ತ ‘ಸ್ವಾಮಿದೇವನೆ ಲೋಕಪಾಲನೆ...’ ಪದ್ಯವನ್ನು ರಾಗವಾಗಿ ಹಾಡಬಯಸುತ್ತೀರಾದರೆ, ಕಂಠಪಾಠ ಮಾಡಬಯಸುತ್ತೀರಾದರೆ ಪದ್ಯದ ಪೂರ್ಣಸಾಹಿತ್ಯ ಇಲ್ಲಿದೆ:

ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ
ನೇಮಿಸೆಮ್ಮೊಳು ಧರ್ಮಕಾರ್ಯವ ತೇ ನಮೋಸ್ತು ನಮೋಸ್ತುತೇ
ಕ್ಷೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತು ನಮೋಸ್ತುತೇ || ೧ ||

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ
ಕಾವರಿಲ್ಲವು ನಿನ್ನ ಬಿಟ್ಟರೆ ಸೂರ್ಯನೇ ಜಗದೀಶನೇ
ಜೀವಕೋಟಿಯು ನಿನ್ನ ಈ ಬೆಳಕಿಂದ ಜೀವಿಪುದಲ್ಲವೆ || ೨ ||

ರಾತ್ರೆನಿದ್ದೆಯ ಗೈವ ಕಾಲದಿ ನೀನೆ ನಮ್ಮನು ಕಾದೆಯೈ
ಮಿತ್ರನೆಂಬುವ ನಾಮಧೇಯವು ಸತ್ಯವಾಯಿತು ನಿನ್ನೊಳು
ಸ್ತೋತ್ರ ಮಾಡುವ ಹಾಗೆ ನಿನ್ನನ್ನು ಹಕ್ಕಿಗಳ್ ದನಿಗೈವವೈ
ಚಿತ್ರಭಾನುವೆ ನೋಡಿ ನಿನ್ನನದೆಲ್ಲಿ ಪೋದುದೊ ಕತ್ತಲೆ || ೩ ||

ಉತ್ತಮೋತ್ತಮ ನಿನ್ನ ಪಾದದ ಭಕ್ತಿಯೇ ಸ್ಥಿರವಲ್ಲವೇ
ವಿತ್ತವೆಂಬುದು ಗಾಳಿಯಲ್ಲಿಹ ದೀಪದಂದದಿ ಚಂಚಲ
ಮತ್ತರಾಗುತ ಬಿಟ್ಟು ನಿನ್ನನು ಕೆಟ್ಟ ಯೋಚನೆ ಗೈಯದಾ
ಚಿತ್ತವಂ ನಮಗಿತ್ತು ರಕ್ಷಿಸು ಪದ್ಮನಾಭ ಸುರೇಶನೇ || ೪ ||

ಆಡುವಾಗಲು ನಾವು ಭೋಜನ ಮಾಡುವಾಗಲು ಸರ್ವದಾ
ನೋಡಿ ನೀ ದಯದಿಂದ ನಮ್ಮನು ಪಾಲಿಸೈ ಭಗವಂತನೇ
ಬೇಡಿಕೊಂಬೆವು ನಮ್ಮ ದೇಹಕೆ ಸೌಖ್ಯವಂ ಬಲ ಪುಷ್ಟಿಯಂ
ನೀಡು ನಿನ್ನಯ ಪಾದಭಕ್ತಿಯನೆಂದಿಗೂ ಬಿಡಲಾರೆವು || ೫ ||

ನಿನ್ನ ದರ್ಶನಗೈವ ನೇತ್ರದ ಜನ್ಮ ಸಾರ್ಥಕವಲ್ಲವೇ
ನಿನ್ನ ಪೂಜಿಪ ಹಸ್ತವೇ ಬಲುದೊಡ್ಡದಲ್ಲವೆ ದೇವನೇ
ನಿನ್ನ ನಾಮವ ಪೇಳ್ವ ನಾಲಗೆ ಧನ್ಯವಲ್ಲವೆ ಸರ್ವದಾ
ನಿನ್ನ ಜಾನಿಪ ಚಿತ್ತವೃತ್ತಿಯೆ ಯೋಗ್ಯವಲ್ಲವೆ ಲೋಕದಿ || ೬ ||

ನೀನೆ ತಾಯಿಯು ನೀನೆ ತಂದೆಯು ನೀನೆ ನಮ್ಮೊಡನಾಡಿಯೂ
ನೀನೆ ಬಂಧುವು ನೀನೆ ಭಾಗ್ಯವು ನೀನೆ ವಿದ್ಯೆಯು ಬುದ್ಧಿಯೂ
ನೀನು ಪಾಲಿಸದಿದ್ದರೆಮ್ಮನು ಬೇರೆ ಪಾಲಿಪರಿಲ್ಲಲೈ
ದೀನಪಾಲನೆ ನಿನ್ನಧೀನದೊಳಿರ್ಪನಮ್ಮನು ಪಾಲಿಸೈ || ೭ ||

ಶ್ರೀಮುಕುಂದನೆ ಗಾಳಿಯಲ್ಲಿಯು ನೀರಿನಲ್ಲಿಯು ನೀನಿಹೇ
ಭೂಮಿಯಲ್ಲಿ ಯಮಗ್ನಿಯಲ್ಲಿಯು ಬಾನಿನಲ್ಲಿಯು ನೀನಿಹೆ
ರಾಮನೂ ನರಸಿಂಹನೂ ಪರಮಾತ್ಮ ಕೃಷ್ಣನು ನೀನೆಯೇ
ನೀ ಮಹಾತ್ಮನು ನಮ್ಮ ತಪ್ಪುಗಳೆಲ್ಲ ಮನ್ನಿಸಿ ಪಾಲಿಸೈ || ೮ ||

* * *
’ಸ್ಕೂಲ್ ಮಾಸ್ಟರ್’ ಚಿತ್ರದಲ್ಲಿನ ‘ಸ್ವಾಮಿ ದೇವನೆ ಲೋಕಪಾಲನೆ...’ ಇಲ್ಲಿದೆ. ಕಣಗಾಲ್ ಪಭಾಕರ ಶಾಸ್ತ್ರಿಯವರು ಮೂಲ ಹಾಡಿನಿಂದ ಕೆಲವು ಸಾಲುಗಳನ್ನು ಎರವಲು ಪಡೆದು, ಮತ್ತೆರಡು ಸಾಲುಗಳನ್ನು ಸೇರಿಸಿ ಮಾಡಿದ ರಚನೆಯಿದು. ಟಿ.ಜಿ.ಲಿಂಗಪ್ಪ ಅವರು ಸಂಗೀತ ನಿರ್ದೇಶಿಸಿ ಸಂಗಡಿಗರೊಂದಿಗೆ ಹಾಡಿದ್ದಾರೆ.
https://www.youtube.com/watch?v=zhIu_VjlTNQ

ಶ್ರೀ ಶ್ರೀವತ್ಸ ಜೋಶಿ


Friday, April 4, 2014

ಇವತ್ತು ದೇವರ ದಾಸಿಮಯ್ಯನ ಹುಟ್ಟುದಿನ.- ರಾಜೇಂದ್ರ ಪ್ರಸಾದ್

ಇವತ್ತು ದೇವರ ದಾಸಿಮಯ್ಯನ ಹುಟ್ಟುದಿನ...
ಆದ್ಯ ವಚನಕಾರ ದೇವರ ದಾಸಿಮಯ್ಯ, 12ನೇ ಶತಮಾನದ ವಚನ ಚಳುವಳಿಯ ಮುನ್ನಾ ನೂರು ವರ್ಷಗಳ ಹಿಂದೆಯೇ ವಚನಗಳನ್ನು ಕಟ್ಟಿದವರು.. ಪತ್ನಿ ದುಗ್ಗಳೆಯೊಂದಿಗೆ ಅನ್ಯೋನ್ಯ ದಾಂಪತ್ಯದೊಂದಿಗೆಸೀರೆ ನೇಯುವ ನೇಕಾರಿಕೆಯ ಮಾಡುತ್ತಾ
ಮುಂದೆ ಬಸವಾದಿ ಶರಣರಿಂದ 'ನೆರೆ ನಂಬೋ ನೆರೆ ನಂಬೋ ದಾಸ-ದುಗ್ಗಳೆಯಂತೆ'
ಎಂದು ಹಾಡಿಸಿಕೊಂಡ ಮಹಾನುಭಾವಿ..
ತಾನೇ ನೇಯ್ದು, ಉಟ್ಟ ಉಡುಗೆಯನ್ನು ಶಿವನಿಗೆ ದಾನಕೊಟ್ಟು 'ತವನಿಧಿಯನ್ನು' ಪಡೆದರೆಂಬುದು ದಂತಕಥೆ.
ದೇವರ ದಾಸಿಮಯ್ಯನನ್ನು ಕುರಿತು ಬ್ರಹ್ಮಶಿವ, ಹರಿಹರ,ರಾಘವಾಂಕ, ಭೀಮಕವಿ, ವಿರೂಪಾಕ್ಷ ಪಂಡಿತ, ಸಿದ್ದ ನಂಜೇಶ ಮುಂತಾದ ಕನ್ನಡ ಕವಿಕೃತಿಗಳಲ್ಲಿ ಅಲ್ಲದೇ
ಕ್ರಿ.ಶ.1148 ರ ಗೊಬ್ಬೂರಿನ ಶಾಸನ, ಕ್ರಿ.ಶ.1167ರ ಚಿಕ್ಕಮುದನೂರಿನ ಶಾಸನ, ಕ್ರಿ.ಶ.1200 ರ ಅರಸೀಕೆರೆ ಶಾಸನ, ಕ್ರಿ.ಶ.1259 ರ ಹಿರಿಯೂರಿನ ಶಾಸನಗಳಲ್ಲಿ ಉಲ್ಲೇಖಗಳಿವೆ
ನನ್ನಿಷ್ಟದ ಕೆಲವು ವಚನಗಳು
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜರಿದೊಮ್ಮೆ ನುಡಿಯದಿರ!
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ!
ರಾಮನಾಥ.
***

ಉಂಕೆಯ ನಿಗುಚಿ ಸರಿಗೆಯ ಸಮಗೊಳಿಸಿ
ಸಮಗಾಲನಿಕ್ಕಿ ಅಣಿಯೇಳ ಮುಟ್ಟದೆ
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು.
ಈ ಸೀರೆಯ ನೆಯ್ದವ ನಾನೊ ನೀನೋ?ರಾಮನಾಥ.
***
ಬಯಲ ಬಣ್ಣವ ಮಾಡಿ;
ಸ್ವಯವ ನಿಲವ ಮಾಡಿ
ಸುಳಿವಾತನ ಬೆಡಗ ಬಲ್ಲವರಾರೈ? ರಾಮನಾಥ!
***
ನಾನೊಂದು ಸುರಗಿಯನೇನೆಂದು ಹಿಡಿವೆನು?
ಏನ ಕಿತ್ತೇನನಿರಿವೆನು?
ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ.
****

Thursday, April 3, 2014

ಭಾಷೆ



- ಶಿವಪ್ರಸಾದ ಪಟ್ಟಣಗೆರೆ


ವರ್ಷಕ್ಕೊಮ್ಮೆಯ ಹಬ್ಬದಂತೆ ಕನ್ನಡವನ್ನ ಪೂಜಿಸಿ ಹಣ್ಣು ಕಾಯಿ ಮಾಡಿಸುತ್ತಾರೆ -

ಭಾಷೆಗೂ ಸಂಸ್ಕೃತಿಗೂ ಇರುವ ಸಂಬಂಧವೇನು ? ಭಾಷೆ ನಮಗರಿವಿಲ್ಲದೆ ರೂಪುಗೊಂಡದ್ದು. ಇನ್ನು ಸಂಸ್ಕೃತಿಯು ಉಳಿಕೆ,ದಾಖಲೆಯ ಅವಶೇಷ, ಬೌತಿಕ ಉಳಿಕೆ ಎಂದು ಹೇಳುವುದುಂಟು. ಭಾಷೆಯು ಆ ಜನಾಂಗವನ್ನೋ ಆ ಜನಾಂಗದ ರಚನೆ, ಸ್ವರೂಪವನ್ನೂ ಬಿಂಬಿಸುತ್ತದೆ. ಭಾಷೆ ಹೇಗೆ ಭೌತಿಕವೋ ಅಷ್ಟೇ ಮಾನಸಿಕವೂ ಕೂಡ ಹೌದು.

ಒಂದು ಭಾಷೆ ಆ ಸಂಸೃತಿಯಲ್ಲಿ ಆಗುತ್ತಿರುವ ಚಲನಶೀಲತೆ ಹಾಗೂ ಪರಿಸರದ ಬದಲಾವಣೆಗಳು ಆಧುನಿಕತೆಗಳ ಚಿತ್ರಣವನ್ನು ಸಂಪೂರ್ಣವಾಗಿ ಬಿಚ್ಚಿಡುತ್ತವೆ. ಪ್ರತೀ ಸಮುದಾಯದಲ್ಲೂ ಭಾಷೆ – ಭಾಷೆಗಳ ನಡುವಣ ತಿಕ್ಕಾಟ, ಘರ್ಷಣೆಗಳು ನಡೆಯುತ್ತಾ ಬಂದಿವೆ. ಯಾವುದೋ ಶಕ್ತಿ ರಾಜಕಾರಣಗಳು ಪ್ರಭಲತೆಗಳು ಮತ್ತೊಂದು ಭಾಷೆಯನ್ನ ಅಧೀನಗೊಳಿಸಿಕೊಳ್ಳುತ್ತಾ ಬಂದಿವೆ. ಇವುಗಳ ನಡುವೆ ತಮ್ಮ ಸ್ಥಾನದ ಉಳಿಕೆ, ವಿಸೃತತೆ ಇವುಗಳ ಬಗಗೆಗಿನ ಸಂಘರ್ಷಗಳು ಇಂದಿಗೂ ಆಗುತ್ತಲೇ ಇವೆ.

ಈ ಹಿನ್ನೆಲೆಯಲ್ಲಿ ಒಂದು ಭಾಷೆ ಕೀಳಿರಿಮೆಗೆ ಈಡಾಗಿ ಪ್ರಧಾನ ಭಾಷೆಯನ್ನು ಅನುಸರಿಸುವ ದಿಕ್ಕಿನತ್ತ ಸಾಗುತ್ತಿದೆ. ಸಮಾಜಶಾಸ್ತ್ರದ ಹಿನ್ನೆಲೆಯಲ್ಲಿ ಹೇಳುವುದಾದರೆ ಸಾಂಸೃತಿಕ ಹಿಂಬೀಳುವಿಕೆಯು ನಮಗೆ ಅರಿವಿಲ್ಲದಂತೆ ಜರುಗಿದೆ. ಇವುಗಳನ್ನೇ ಶುದ್ಧ ಅಥವಾ ಶಿಷ್ಟ ಎಂಬ ಭಾಷೆಯ ಮುಖಗಳನ್ನ ರೂಪಿಸಿ ಭಾಷೆಯನ್ನ ಸರಿಗಟ್ಟುವಂತಹ ವ್ಯತಿರಿಕ್ತ ಪರಿಣಾಮಗಳೂ ಸಾಗುತ್ತಿವೆ. ಇವೆಲ್ಲವೂ ಭಾಷೆಯ ಬಗೆಗಿನ ಆರೋಪಗಳು ಮತ್ತು ದೋಷಗಳೂ ಹೌದು.

ಉದಾಹರಣೆಗೆ – ದೇವತೆಗಳೆಲ್ಲಾ ಶಿಷ್ಟ ಭಾಷೆಯನ್ನು ಸಂವಹಿಸುತ್ತಾರೆ. ಸಂಸೃತವನ್ನು ಮಾತನಾಡುತ್ತಾರೆಂಬ ಆರೋಪಗಳಿಗೆ ವಿರುದ್ಧವಾಗಿ ದೆಸೀಯ ಪ್ರಾದೇಶಿಕ ಭಾಷೆಗಳ ಹಿನ್ನೆಲೆಯಲ್ಲಿಯೂ,ನಾಟಕದ ಹಿನ್ನೆಯಲ್ಲಿ ತಮ್ಮ ಆಡು ಬಾಷೆಯ ರೂಪಕ ಮತ್ತು ವಾಹಕಗಳನ್ನು ನೀಡಿ ತಮ್ಮ ಭಾಷಾ ಸಾಂಸೃತಿಕ ಚೈಕಟ್ಟುಗಳನ್ನ ಬಿಂಬಿಸಿದ್ದಾರೆ. ಈ ಕಾರಣದಿಂಧ ಬ್ರಹ್ಮನೂ ಇಲ್ಲಿ ಬೊಮ್ಮನಾಗುತ್ತಾನೆ, ಶಿವ ಸುರಪಾನಗಳನ್ನ ಕುಡಿದು ತಮಟೆಗಳೊಡನೆ ತಾನು ತಕದಿಮಿಸುತ್ತಾನೆ.

ಅಷ್ಟೇ ಅಲ್ಲದೇ ಭಾಷೆಯನ್ನು ಸೂಚಕವಾಗಿರಿಸಿಕೊಂಡ ಸನ್ನಿವೇಷಗಳೂ ಆಗಿವೆ. ತನ್ನ ಭಾಷೆಯ ತುಳಿತವೋ, ಕಡಗಣನೆಯೋ ಆ ಭಾಷೆಯು ತನ್ನ ಶ್ರೇಷ್ಠತೆಯನ್ನ ತೋರ್ಪಡಿಸಿಕೊಳ್ಳುವ ಮುಖಾಂತರ ಆ ಭಾಷೆ ತನ್ನನು ತಾನು ಬಿಂಬಿಸಲೆತ್ನಿಸಿದೆ. ಈ ಹಿನ್ನೆಲೆಯಲ್ಲಿ ಹಲವು ಸಾದ್ಯತೆಗಳು ಸಹ ಸಫಲಗೊಂಡಿವೆ.
ಉದಾ – ದ್ಯಾವನೂರರ ಭಾಷೆ ಭಾಷೆ. ದೇವನೂರರ ಕುಸುಮಬಾಲೆ

ಭಾಷೆಯ ಮೇಲೆ ಸಂಸ್ಕೃತಿಯನ್ನ ಹೇರುವಂತದ್ದು

ನಾನಿನ್ನು ಹತ್ತನೇ ತರಗತಿಯಲ್ಲಿದ್ದೆ.ಆಗತಾನೆ ಹೊಸದಾಗಿ ಬಂದಿದ್ದ ಇಂಗ್ಲೀಷ್ ಶಿಕ್ಷಕ ನಮ್ಮನ್ನೆಲ್ಲಾ ಖೈದಿಗಳಂತೆ ನೋಡುತ್ತಾ ಇಂಗ್ಲೀಷ್ ಭಾಷೆಯ ಹೇರಿಕೆಯನ್ನ ಮಾಡಲೆತ್ನಿಸಿದ್ದರು. ಇನ್ನು ಆಗತಾನೆ ಇಂಗ್ಲೀಷ್ ಕಲಿಯುತ್ತಿದ್ದ ನಮಗೆ ಇಂಗ್ಲೀಷ್ ಮತ್ತಷ್ಟೂ ಭಯವನ್ನು ಉಂಟು ಮಾಡಲು ಸಾಧ್ಯವಾಯಿತು. ಆ ಶಿಕ್ಷಕರೊಂದಿಗೆ ಮಾತನಾಡಬೇಕಾದರೆ ಖಡ್ಡಾಯವಾಗಿ ಇಂಗ್ಲೀಷಿನಲ್ಲೆ ಮಾತನಾಡಬೇಕಿತ್ತು ಇಲ್ಲದಿದ್ದರೆ ದಂಡವನ್ನು ತೆರಬೇಕಾಗಿತ್ತು. ಇನ್ನೂ ದುರಂತವೆಂದರೆ ಮದ್ಯದಲ್ಲಿ ಒಂದು ಕನ್ನಡ ಪದವನ್ನು ಬಳಸಿದರೆ ಒಂದು ಪದಕ್ಕೆ ಇಂತಿಷ್ಟು ದಂಡತೆರಬೇಕೆಂದು ನಿಗದಿ ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಸಂದೇಹ, ಗೊಂದಲಗಳನ್ನ ವ್ಯವಹರಿಸಲು ಆ ಶಿಕ್ಷಕರೊಂದಿಗೆ ಸಾಧ್ಯವಾಗಲೇ ಇಲ್ಲ. ಇದಕ್ಕೆ ಹೆದರಿ ನಾವು ಅವರೊಂದಿಗೆ ಮಾತನಾಡಲೇ ಇಲ್ಲ. ಇದು ಒಂದು ಭಾಷೆಯನ್ನೋ ಒಂದು ಸಂಸೃತಿಯನ್ನೋ ಹೇರುವಂತ ದುಷ್ಟ ದರಿದ್ರ ಪದ್ದತಿ.

ಸ್ಥಿತಿ :: ಲಯ

ಅನ್ಯ ಸಾಂಸ್ಕೃತಿಕ ಸಂಗತಿಗಳು ಕನ್ನಡಭಾಷೆಯಲ್ಲಿ ಅಚಾನಕ್ಕಾಗಿ ಕಾಣಿಸಿಕೊಳ್ಳುತ್ತಲೇ ಇವೆ. ಇದು ಜೀವನ ಶೈಲಿಯ ಬದಲಾವಣೆ ಹಾಗೂ ಈಗಿನ ತುರ್ತು ಕೂಡ ಹೌದು. ಕೆಲವೊಮ್ಮೆ ಭಾಷೆಗಿಂತ ಬದುಕು ಮುಖ್ಯವಾಗಿಬಿಡುತ್ತೆ. ಈ ಹಿನ್ನೆಲೆಯಲ್ಲಿ ಭಾಷೆಯನ್ನು ಉಳಿಸುವ ಪ್ರಯೋಗಿಸುವ ಸಾದ್ಯತೆಗೂ ಗೌಣ. ಇನ್ನು ಭಾವನೆಗಳಿಗೆ ಅಂಡಿಸಿಕೊಂಡ ಕನ್ನಡಿಗರಿಗೆ ಮಾತ್ರ ಭಾಷೆಯ ಬಗ್ಗೆ ಸದಾ ಹೋರಾಡುವ ತವಕ. ವಾರಕ್ಕೊಮ್ಮೆಯ ವರ್ಷಕ್ಕೊಮ್ಮೆಯ ಹಬ್ಬದಂತೆ ಕನ್ನಡವನ್ನ ಪೂಜಿಸಿ ಹಣ್ಣುಕಾಯಿ ಮಾಡಿಸುತ್ತಾರೆ. ಇನ್ನಿತರೆ ದಿನಗಳಲ್ಲಿ ಪರ ಭಾಷೆಯನ್ನ ತಮ್ಮ ದೈನಂದಿನ ಉಪಹಾರದಂತೆ ಯಥೇಚ್ಚವಾಗಿ ಸೇವಿಸುತ್ತಾ ರಕ್ತಗತಗೊಳಿಸಿಕೊಳ್ಳುತ್ತಾರೆ. ಇದು ಚಾಲ್ತಿಯಲ್ಲಿರುವ NON – POLLUTED vehicle . ಇಷ್ಟೇ ಅಲ್ಲದೆ ಈಗತಾನೆ ಚಿಗುರುತ್ತಿರುವ ಚಿಗುರೆಲೆಗಳಿಗೂ ಮುಂದೆಂದೂ ಬಳಸದಂತೆ ಭದ್ರ ಬುನಾದಿಗಳನ್ನ ಹಾಕಿಬಿಟ್ಟಿದ್ದೇವೆ. ಇಲ್ಲಿಗೆ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.