ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, August 23, 2011

ನಂಗೆಲಿಯ ಬಲಿದಾನ

ನಮ್ಮ ದೇಶದ ಅತಿ ದೊಡ್ಡ ಶಾಪವೆಂದರೆ ಅಸ್ಪೃಶ್ಯತೆ. ನಾವು ಎಲ್ಲಿಯವರೆಗೆ ಮನುಷ್ಯರನ್ನು ಮನುಷ್ಯರಂತೆ ನೋಡುವುದನ್ನು ಬೆಳೆಸಿಕೊಳ್ಳುವುದಿಲ್ಲವೋ ನಾವು ಒಂದು ನಾಗರಿಕ ಸಮಾಜವಾಗಿ ಬಾಳುವುದು ಅಸಾಧ್ಯವಾಗುತ್ತದೆ.

ನಮ್ಮ ಧರ್ಮ ಇಂದು ಅವರನ್ನು ಮುಟ್ಟಬೇಡಿ, ಇವರನ್ನು ಮುಟ್ಟಬೇಡಿ ಎನ್ನುತ್ತ ಕೇವಲ ಮುಟ್ಟದಿರುವ ಧರ್ಮವಾಗಿ ಬಿಟ್ಟಿದೆ. ಒಂದು ಕಾಲದಲ್ಲಿ ಜ್ಞಾನದ ನೀಡಿಕೆಯಲ್ಲಿ, ಅಧ್ಯಾತ್ಮದಲ್ಲಿ, ಶ್ರೀಮಂತಿಕೆಯಲ್ಲಿ ಪ್ರಪಂಚಕ್ಕೇ ಮಾದರಿಯಾಗಿದ್ದ ನಮ್ಮ ದೇಶ ಕೆಳಮಟ್ಟಕ್ಕೆ ಇಳಿಯಲು ಈ ಅಸ್ಪೃಶ್ರ್ಯತೆಯ ಮನೋಭಾವವೇ ಕಾರಣ.` ಹೀಗೆಂದು ತಮ್ಮ ಆಕ್ರೋಶವನ್ನು ಒಂದು ಶತಮಾನದ ಹಿಂದೆಯೇ ಬಹಿರಂಗಪಡಿಸಿದವರು ವೀರ ಸನ್ಯಾಸಿ ವಿವೇಕಾನಂದರು. ಈ ವ್ಯಕ್ತಿ-ವ್ಯಕ್ತಿಗಳ ನಡುವಿನ ತಾರತಮ್ಯಗಳು ಈಗ ಕಡಿಮೆಯಾಗಿದ್ದರೂ ಅವು ಇನ್ನೂ ಉಳಿದಿರುವುದು ಖೇದದ ಸಂಗತಿ.

ಈ ಅವ್ಯವಸ್ಥೆಯ ವಿರುದ್ಧ ಹೋರಾಡಿದವರು ಹಲವರು. ಕೆಲವರ ಹೆಸರುಗಳು ನೆನಪಿನಲ್ಲಿವೆ. ಅನೇಕರ ಹೆಸರುಗಳು ಮರೆಯಾಗಿ ಹೋಗಿವೆ. ಹೀಗೆ ತಾರತಮ್ಯದ ವಿರುದ್ಧ ಹೋರಾಟದಲ್ಲಿ ತನ್ನ ಜೀವನವನ್ನೇ ಬಲಿಕೊಟ್ಟು ಇತಿಹಾಸ ನಿರ್ಮಿಸಿದ ಮಹಿಳೆ ನಂಗೆಲಿ. ಕೇರಳದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಇಡೀ ಮಹಿಳಾ ಸಮುದಾಯಕ್ಕೆ ಮರ್ಯಾದೆಯನ್ನು, ಸ್ವಾತಂತ್ರವನ್ನು ತಂದುಕೊಟ್ಟವಳು ನಂಗೆಲಿ. ಅವಳ ಬಲಿದಾನವನ್ನು ಇತಿಹಾಸ ದಾಖಲಿಸದಿರುವುದು ದುರ್ದೈವ. ಅವಳ ಮನೆತನದವರು ಬಾಯಿಂದ ಬಾಯಿಗೆ ಅವಳ ಗಾಥೆಯನ್ನು ಸಾಗಿಸಿ ಕಾಪಾಡಿಕೊಂಡಿದ್ದಾರೆ.

ಪ್ರತಿಯೊಂದು ವಸ್ತುವಿನ ಮೇಲೆ ತೆರಿಗೆ ಹಾಕುವುದನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಕಳೆದ ಶತಮಾನದಲ್ಲಿ ಕೇರಳದ ತಿರುವಾಂಕೂರಿನಲ್ಲಿ ಅತ್ಯಂತ ಹೀನಾಯವಾದ ತೆರಿಗೆ ಜಾರಿಯಲ್ಲಿತ್ತು. ಕೆಳಜಾತಿಯ ಮಹಿಳೆಯರಿಗೆ ತಮ್ಮ ಎದೆ ಮುಚ್ಚಿಕೊಳ್ಳಲು ಅನುಮತಿ ಇರಲಿಲ್ಲ.

ಅವರು ಹಾಗೆಯೇ ತೆರೆದೆದೆಯಲ್ಲಿ ತಿರುಗಾಡಬೇಕಿತ್ತು, ಮೇಲ್ವರ್ಗದ ಜನರ ಹಸಿದ ಕಣ್ಣುಗಳಿಗೆ ಆಹಾರವಾಗಬೇಕಿತ್ತು. ಅವರು ಎದೆಯನ್ನು ಮುಚ್ಟಿಕೊಳ್ಳಬೇಕಾದರೆ ರಾಜ್ಯಕ್ಕೆ ತೆರಿಗೆ ಕಟ್ಟಬೇಕಾಗಿತ್ತು. ಅದನ್ನು  ಮುಲಕ್ಕರಮ್ ಎನ್ನುತ್ತಿದ್ದರು. ಹಾಗೆಂದರೆ  ಎದೆ ತೆರಿಗೆ  ಎಂದರ್ಥ. ಬಹಳಷ್ಟು ಬಡ ಹೆಣ್ಣುಮಕ್ಕಳು ತೆರಿಗೆ ಕಟ್ಟಲು ಹಣ ಎಲ್ಲಿಂದ ತಂದಾರು? ಅನೇಕ ಸುಂದರ ತರುಣಿಯರು ಈ ಕ್ರೂರ ಶಾಸನಕ್ಕೆ ಹೆದರಿ ತಮ್ಮ ಗುಡಿಸಲುಗಳ ಕತ್ತಲೆಯಲ್ಲಿಯೇ ತಮ್ಮ ಜೀವನವನ್ನು ಕೊಳೆಸಿಬಿಡುತ್ತಿದ್ದರು.

ಅಕಸ್ಮಾತ್ ಯಾವುದೇ ಮಹಿಳೆ ಎದೆಯ ಮೇಲೆ ಬಟ್ಟೆ ಹಾಕಿಕೊಂಡು ಹೋದರೆ ತಕ್ಷಣವೇ ಅಧಿಕಾರಿಗಳು ಆಕೆಗೆ ಉಗ್ರ ಶಿಕ್ಷೆ ನೀಡಿ ತೆರಿಗೆ ಹಾಕುತ್ತಿದ್ದರಂತೆ.
ಈ ಸಮಯದಲ್ಲಿ ನಂಗೆಲಿ ಈ ವ್ಯವಸ್ಥೆಯನ್ನು ಧಿಕ್ಕರಿಸಲು ತೀರ್ಮಾನ ಮಾಡಿದಳು. ಆಕೆ ಇದ್ದದ್ದು ಚೆರ್ತಲಾ ಎಂಬ ಊರಿನಲ್ಲಿ. ಆಕೆಗೆ ಆಗ ಸುಮಾರು ಮೂವತ್ತು-ಮೂವತ್ತೈದು ವರ್ಷ ವಯಸ್ಸಿದ್ದೀತು. ನಂಗೆಲಿ ತುಂಬ ಸುಂದರಿ ಎಂಬ ಹೆಸರಿತ್ತು.

ಆಕೆಯ ಗುಂಗುರು ಕೂದಲು ಮೊಳಕಾಲು ಮುಟ್ಟುತ್ತಿತ್ತಂತೆ. ಆಕೆಯ ಬಣ್ಣವೂ ಅಪರೂಪವೇ. ನಂಗೆಲಿ ತುಂಬ ಆರೋಗ್ಯ ಪೂರ್ಣವಾಗಿದ್ದು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದವಳು. ಆಕೆಯ ಸಮಾಜದ ಜನ ಆಕೆಯನ್ನು ಅಪ್ಸರೆ ಎಂದೇ ಕರೆಯುತ್ತಿದ್ದರು. ನಂಗೆಲಿಗೆ ತನ್ನ ಸೌಂದರ್ಯದ ಬಗ್ಗೆ ಅಭಿಮಾನವೂ ಇತ್ತು. ಅದರೊಂದಿಗೆ ಮತ್ತೊಬ್ಬರ ಕಣ್ಣಿಗೆ ಆಹಾರ ಮಾಡುವ ವ್ಯವಸ್ಥೆಯ ಬಗ್ಗೆ ರೋಷವೂ ಇತ್ತು. ಆಕೆ ಈ ವ್ಯವಸ್ಥೆಯನ್ನು ಎದುರಿಸಿ ಸ್ವಾತಂತ್ರ್ಯವನ್ನು ಬಯಸಿದಳು.

ನಂಗೆಲಿ ಹೊರ ನಡೆದಾಗ ಎದೆಯ ಮೇಲೆ ಬಟ್ಟೆಯನ್ನು ಹೊದ್ದೇ ನಡೆದಳು. ಈ ವಿಷಯ ಬೆಂಕಿಯಂತೆ ಹರಡಿತು. ನಗರದ ಅಧಿಕಾರಿ ನಂಗೆಲಿಯ ಮನೆಗೆ ಎದೆ ತೆರಿಗೆಯನ್ನು ಹಾಕಲು ಧಾವಿಸಿದ. ಆಗ ನಂಗೆಲಿಯ ಗಂಡ ಕಂದಪ್ಪನ್ ಮನೆಯಲ್ಲಿ ಇರಲಿಲ್ಲ. ಅಧಿಕಾರಿ ಜೋರು ಮಾಡಿ ತಕ್ಷಣವೇ ತೆರಿಗೆ ಕಟ್ಟುವಂತೆ ಆಗ್ರಹಿಸಿದ. ಆಗಿನ ಪದ್ಧತಿಯಂತೆ ತೆರಿಗೆಯನ್ನು ಬಾಳೆ ಎಲೆ ಹಾಸಿದ ತಟ್ಟೆಯ ಮೇಲೆ ಒಂದು ದೀಪದ ಹಿಂದೆ ಇಟ್ಟುಕೊಡುವುದು ವಾಡಿಕೆ.

ನಂಗೆಲಿ ಅಧಿಕಾರಿಗೆ ಒಂದು ನಿಮಿಷ ಕಾಯುವಂತೆ ತಿಳಿಸಿ, ಮನೆಯ ಒಳಗೆ ನಡೆದಳು. ಹಣ ತರಲು ಹೋಗಿರಬೇಕೆಂದು ಅಧಿಕಾರಿ ಭಾವಿಸಿದ. ಐದು ನಿಮಿಷಗಳ ನಂತರ ಎದೆಯ ಮೇಲೆ ಬಟ್ಟೆ ಹೊದ್ದುಕೊಂಡು ಬಂದ ನಂಗೆಲಿ ತಟ್ಟೆಯನ್ನು ಅಧಿಕಾರಿಯ ಮುಂದೆ ಇಟ್ಟಳು. ಅದನ್ನು ನೋಡಿ ಗಾಬರಿಯಾದ ಅಧಿಕಾರಿ ನಡುಗತೊಡಗಿದ, ಮನೆಯಿಂದ ಹೊರಗೆ ಓಡಿ ಬಿಟ್ಟ. ನಂಗೆಲಿ ಆ ತಟ್ಟೆಯಲ್ಲಿ ತನ್ನ ಎರಡೂ ಸ್ತನಗಳನ್ನು ಕತ್ತರಿಸಿ ಇಟ್ಟುಬಿಟ್ಟಿದ್ದಳು. ಕ್ಷಣದಲ್ಲೇ ನಂಗೆಲಿ ಕೂಡ ಕೆಳಗೆ ಬಿದ್ದು ಎಚ್ಚರ ತಪ್ಪಿದಳು. ಆಕೆಯ ಸುತ್ತಮುತ್ತ ರಕ್ತದ ಕೋಡಿ ಹರಿದಿತ್ತು.

krupe : Prajavani  12 July 2011

Sunday, August 21, 2011

ಕಾದು ಕುಳಿತ ಕರುನಾಡಿಗೆ ಇನ್ಯಾರು ಗತಿ?



ಅರ್ಜೆಂಟಾಗಿ ಬಿಪಿ ಏರಿಸಿಕೊಂಡ ಬೂಸಿಯ ಪರಪ್ಪನ ಅಗ್ರಹಾರದ ದಾರಿಯಲ್ಲೆ ಇರುವ 'ಸಾಗರ್ ಅಪೋಲೊ'ದಲ್ಲಿ ತುರ್ತು ಚಿಕಿತ್ಸೆ ಪಡೆದರಂತೆ! ಅವರಿಗೇನಾದರೂ ಆದುಗೀದರೆ ಮುಂದೆ ಐದು ತಿಂಗಳ ನಂತರದ ಅವರ ಪುನರಾಗಮನಕ್ಕಾಗಿ ಕಾತರದಿಂದ ಕಣ್ಣು ಬಿಟ್ಟುಕೊಂಡೆ ಕಾದು ಕೂತ ಬಡ ಕರ್ನಾಟಕದ-ನಿಸ್ಸಹಾಯಕ ಕನ್ನಡಿಗರ ಗತಿಯೇನು? ಎಂದು ಅವರ 'ಮಾನಸಿಕ'ಪುತ್ರ ಎಂ ಪಿ ರೇಣುಕಾಚಾರ್ಯ ಅಲಿಯಾಸ್ 'ರಸಿಕ ಕುಲತಿಲಕ' ರೇಣು ತನ್ನ ಆಪ್ತಸಖಿ ಜಯಲಕ್ಷ್ಮಿಯನ್ನ ಕರಡಿಯಂತೆ ತಬ್ಬಿಕೊಂಡು ಉಮ್ಮಳಿಸಿ ಬಂದ ದುಃಖ ತಡಿಯೋಕಾಗದೆ ಒಂದೇ ಕಣ್ಣಲ್ಲಿ ಧಾರಾಕಾರವಾಗಿ ಕಣ್ಣೀರಿಟ್ಟರಂತೆ!

ಮೊನ್ನೆ ಮೊನ್ನೆಯಷ್ಟೆ ರೇಣುಕನ 'ಮಾನಸಿಕ' ಅಸ್ವಸ್ಥ್ಯತೆಯ ಸೋಂಕನ್ನ ತಾವೂ ತಗುಲಿಸಿಕೊಂಡಂತೆ ಅಣ್ಣಾ ಹಜಾರೆಗೆ ಬಹಿರಂಗ ಬೆಂಬಲ ಸೂಚಿಸಿ,ಆಮೇಲೆ ತಾವು ಕರೆಕೊಟ್ಟ ಪ್ರತಿಭಟನೆಗೆ ತಾವೆ ಬಾರದೆ ತಲೆತಪ್ಪಿಸಿಕೊಂಡು ;ಮರುದಿನ ಈಗಷ್ಟೆ ಇನ್ಸ್ಟೆಂಟ್ ಜ್ಞಾನೋದಯವಾಗಿ ಭೋದಿ ಮರದಡಿಯಿಂದ ಹಾಗ್ಹಾಗೆ ನೇರ ಎದ್ದೊಡಿ ಬಂದವರ ಮುಖಭಾವದಲ್ಲಿ "ಬೀದಿಗಿಳಿದು ಹೋರಾಡೋದು ಸಂವಿಧಾನ ಬಾಹಿರ...ಕಾಯಿದೆಯೇನಿದ್ದರೂ ಸಂಸತ್ತೆ ರೂಪಿಸಬೇಕು" ಎಂಬ ಹಿತವಚನಗಳನ್ನುದುರಿಸಿದ್ದ ಬೂಸಿಯರಿಗೆ ಸದ್ಯಕ್ಕೆ ಕಾಡುತಿರೋದು ಕೇವಲ ಈ ಮಾನಸಿಕ ಅಸ್ವಸ್ಥ್ಯತೆ ಮಾತ್ರವ? ಇಲ್ಲ ಕಟ್ಟಾ ತನ್ನೆಲ್ಲ ಹಲ್ಲು ಬಿಟ್ಟುಕೊಂಡು ತಮ್ಮನ್ನೂ ತಾನಿರುವ ಸ್ವರ್ಗಕ್ಕೆ ತೆರೆದ ತೋಳುಗಳಿಂದ ಆಹ್ವಾನಿಸುತ್ತಿರುವಂತೆ ನಿತ್ಯ ಕೆಟ್ಟ ಕನಸೇನಾದರೂ ಪದೆಪದೆ ಬೀಳುತ್ತಿರೋದೂ ಕೂಡ ಕಾರಣವಿದ್ದೀತ?

'ಲೋಕಾಯುಕ್ತ ತನಿಖೆ'ಗೆ ಸಿಕ್ಕ ಸಮ್ಮತಿ ಹಾಗು 'ಭದ್ರಾ ಮೇಲ್ದಂಡೆ ಅವ್ಯವಹಾರದ' ಸುದ್ದಿ ನಿಧಾನವಾಗಿ ತನ್ನ ರೆಕ್ಕೆ ಚಾಚುತ್ತಿರೋದನ್ನ ನೋಡಿದರೆ ಅವರ ಕರುಣಾಜನಕ ಸ್ಥಿತಿಗೆ ಮರುಕ ಎಲ್ಲೆಲಿಂದಲೊ ಉಕ್ಕಿ ಬರುತ್ತದೆ.ಕ'ಮಲ' ಪಕ್ಷದ 'ಶಿಸ್ತಿನ ಸಿಪಾಯಿಗೆ' ಹೀಗಬಾರದಿತ್ತು,ಅಯ್ಯೋ ಪಾಪ?!

ಕಾದು ಕುಳಿತ ಕರುನಾಡಿಗೆ ಇನ್ಯಾರು ಗತಿ?



ಅರ್ಜೆಂಟಾಗಿ ಬಿಪಿ ಏರಿಸಿಕೊಂಡ ಬೂಸಿಯ ಪರಪ್ಪನ ಅಗ್ರಹಾರದ ದಾರಿಯಲ್ಲೆ ಇರುವ 'ಸಾಗರ್ ಅಪೋಲೊ'ದಲ್ಲಿ ತುರ್ತು ಚಿಕಿತ್ಸೆ ಪಡೆದರಂತೆ! ಅವರಿಗೇನಾದರೂ ಆದುಗೀದರೆ ಮುಂದೆ ಐದು ತಿಂಗಳ ನಂತರದ ಅವರ ಪುನರಾಗಮನಕ್ಕಾಗಿ ಕಾತರದಿಂದ ಕಣ್ಣು ಬಿಟ್ಟುಕೊಂಡೆ ಕಾದು ಕೂತ ಬಡ ಕರ್ನಾಟಕದ-ನಿಸ್ಸಹಾಯಕ ಕನ್ನಡಿಗರ ಗತಿಯೇನು? ಎಂದು ಅವರ 'ಮಾನಸಿಕ'ಪುತ್ರ ಎಂ ಪಿ ರೇಣುಕಾಚಾರ್ಯ ಅಲಿಯಾಸ್ 'ರಸಿಕ ಕುಲತಿಲಕ' ರೇಣು ತನ್ನ ಆಪ್ತಸಖಿ ಜಯಲಕ್ಷ್ಮಿಯನ್ನ ಕರಡಿಯಂತೆ ತಬ್ಬಿಕೊಂಡು ಉಮ್ಮಳಿಸಿ ಬಂದ ದುಃಖ ತಡಿಯೋಕಾಗದೆ ಒಂದೇ ಕಣ್ಣಲ್ಲಿ ಧಾರಾಕಾರವಾಗಿ ಕಣ್ಣೀರಿಟ್ಟರಂತೆ!

ಮೊನ್ನೆ ಮೊನ್ನೆಯಷ್ಟೆ ರೇಣುಕನ 'ಮಾನಸಿಕ' ಅಸ್ವಸ್ಥ್ಯತೆಯ ಸೋಂಕನ್ನ ತಾವೂ ತಗುಲಿಸಿಕೊಂಡಂತೆ ಅಣ್ಣಾ ಹಜಾರೆಗೆ ಬಹಿರಂಗ ಬೆಂಬಲ ಸೂಚಿಸಿ,ಆಮೇಲೆ ತಾವು ಕರೆಕೊಟ್ಟ ಪ್ರತಿಭಟನೆಗೆ ತಾವೆ ಬಾರದೆ ತಲೆತಪ್ಪಿಸಿಕೊಂಡು ;ಮರುದಿನ ಈಗಷ್ಟೆ ಇನ್ಸ್ಟೆಂಟ್ ಜ್ಞಾನೋದಯವಾಗಿ ಭೋದಿ ಮರದಡಿಯಿಂದ ಹಾಗ್ಹಾಗೆ ನೇರ ಎದ್ದೊಡಿ ಬಂದವರ ಮುಖಭಾವದಲ್ಲಿ "ಬೀದಿಗಿಳಿದು ಹೋರಾಡೋದು ಸಂವಿಧಾನ ಬಾಹಿರ...ಕಾಯಿದೆಯೇನಿದ್ದರೂ ಸಂಸತ್ತೆ ರೂಪಿಸಬೇಕು" ಎಂಬ ಹಿತವಚನಗಳನ್ನುದುರಿಸಿದ್ದ ಬೂಸಿಯರಿಗೆ ಸದ್ಯಕ್ಕೆ ಕಾಡುತಿರೋದು ಕೇವಲ ಈ ಮಾನಸಿಕ ಅಸ್ವಸ್ಥ್ಯತೆ ಮಾತ್ರವ? ಇಲ್ಲ ಕಟ್ಟಾ ತನ್ನೆಲ್ಲ ಹಲ್ಲು ಬಿಟ್ಟುಕೊಂಡು ತಮ್ಮನ್ನೂ ತಾನಿರುವ ಸ್ವರ್ಗಕ್ಕೆ ತೆರೆದ ತೋಳುಗಳಿಂದ ಆಹ್ವಾನಿಸುತ್ತಿರುವಂತೆ ನಿತ್ಯ ಕೆಟ್ಟ ಕನಸೇನಾದರೂ ಪದೆಪದೆ ಬೀಳುತ್ತಿರೋದೂ ಕೂಡ ಕಾರಣವಿದ್ದೀತ?

'ಲೋಕಾಯುಕ್ತ ತನಿಖೆ'ಗೆ ಸಿಕ್ಕ ಸಮ್ಮತಿ ಹಾಗು 'ಭದ್ರಾ ಮೇಲ್ದಂಡೆ ಅವ್ಯವಹಾರದ' ಸುದ್ದಿ ನಿಧಾನವಾಗಿ ತನ್ನ ರೆಕ್ಕೆ ಚಾಚುತ್ತಿರೋದನ್ನ ನೋಡಿದರೆ ಅವರ ಕರುಣಾಜನಕ ಸ್ಥಿತಿಗೆ ಮರುಕ ಎಲ್ಲೆಲಿಂದಲೊ ಉಕ್ಕಿ ಬರುತ್ತದೆ.ಕ'ಮಲ' ಪಕ್ಷದ 'ಶಿಸ್ತಿನ ಸಿಪಾಯಿಗೆ' ಹೀಗಬಾರದಿತ್ತು,ಅಯ್ಯೋ ಪಾಪ?!

Friday, August 19, 2011

'ಕನ್ನಡ'ದ ಉಜ್ವಲ 'ಪ್ರಭ'...ಬಾಣಭಟ್ಟ ಕಂಡ ಕಂಡಲ್ಲಿ ತನ್ನ 'ಬಾಣ' ನೆಟ್ಟ?

ಕಣ್ಣೂ ಬಾಯಿ ಬಿಟ್ಟ ಹಾಗೆ ಬಿಟ್ಟು "ನೋಡ್ತಾ ಇದೀವಿ ಏನೇನ್ ಮಾಡ್ತಿದಾರೆ ಅಂತ!" ಲೋಕವೆ ಜನಲೋಕಪಾಲಕ್ಕೆ ಧ್ವನಿ ಎತ್ತುತ್ತಿರುವಾಗ ಪಿಟೀಲು ಕುಯ್ಯೂ ನೀರೋನ ಹಾಗೆ ಅದೆಲ್ಲೆಲ್ಲಿಗೊ ನೂರೆಂಟು ಬಾಣ ಬಿಟ್ಟುಕೊಂತ ಕೂತಿದ್ದಾರೆ.ಸ'ಗಣಿ'ಯನ್ನ ತಾವೂ ತಿಂದು ಬೂಸಿಯ ಮೂತಿಗೆ ಮಾತ್ರ ಎದ್ದುಕಾಣುವಂತೆ ಮುಖಪುಟದಲ್ಲೇ ನಿತ್ಯ ಘಂಟಾಘೋಷವಾಗಿ ಮೆತ್ತುತ್ತಿದ್ದಾರೆ.ಹೋದಲೆಲ್ಲ ಕತ್ತಲಲ್ಲಿ "ಬೆತ್ತಲೆ ಪ್ರಪಂಚ" ತೋರಿಸ್ತಿದಾರೆ.ಕಂಡಕಂಡಲ್ಲಿ ನೀರ್ ಬಿಡ್ತಿದಾರೆ.ಬಳ್ಳಾರಿ ಕೆಮ್ಮಣ್ಣು ತಿನ್ನೋ ಮಂದಿಯನ್ನೆಲ್ಲ ಎಲ್ಲೆಲ್ಲೊ "ಪ್ರೆಸ್" ಮಾಡಿ ಕೋಟಿಗೆ ಕೇವಲ ಇಪ್ಪತೈದೆ ಲಕ್ಷ ಕಡಿಮೆ ಕಾಸು ಗಿಂಜಿದ್ದಾರೆ.ಆ ಋಣಕ್ಕೆ ಪಾಪ ಅವರಿಗೆ ಸ್ವಲ್ಪ 'ಸಹಾಯ' ಮಾಡಿ ಅಂತ ಪ್ರಾಮಾಣಿಕ ಅಧಿಕಾರಿಗಳ ಮುಂದೆ ಹಲ್ಲುಗಿಂಜಿದ್ದಾರೆ.

ಇಷ್ಟಾಗಿಯೂ ಬೂಸಿಯಗೆ ಬ್ಲಾಕ್ ಮೇಲ್ ಮಾಡಿ ಜಿ ಕೆಟಗರಿಗೆ ಬಕೇಟು ಹಿಡಿದಿದ್ದಾರೆ,ತಮ್ಮ ಚಂಡಾಳ ಶಿಷ್ಯರಿಂದಲೂ ಹಿಡಿಸಿದ್ದಾರೆ.ಏಟ್ರಿಯದಂತಹ ಐಶಾರಮಿ ಲಾಡ್ಜುಗಳಲ್ಲಿ (ಶೋಕಿ ಹೆಚ್ಚಾಗಿದ್ದರು ಅದು 'ಆ' ವಿಷಯಗಳಲ್ಲಿ ಮಾತ್ರ ಅಪ್ಪಟ ಲಾಡ್ಜೆ?!) ಅಕಾಲದಲ್ಲಿ ಅಡ್ಡೆ ಹಾಕಿದ್ದಾರೆ.ಅದರ ಬಿಲ್ವಿದೆಯನ್ನ ಧೂಳು ತಿಂದವರ ಹಾಡಾಲೆದ್ದ ಜೇಬಿಂದಲೇ ಕೊಡಿಸಿ ಗುಡ್ಡೆ ಹಾಕಿದಾರೆ.ಇವರ "ರಾಶಿಚಕ್ರ" ಇವತ್ತಿನ ದಿನಪತ್ರಿಕೆಯೊಂದರಲ್ಲಿ ವಿವರವಾಗಿ ಬಂದಿದ್ದರೂ ತಾವು ಮಾಡಿದ್ದೆ "ಸರೀ ರೀ ಸರಿ" ಅಂಬ ಭಂಡತನವನ್ನೂ ನಾಚಿಕೆ ಬಿಟ್ಟು ಮೆರೆಯುತ್ತಿದ್ದಾರೆ.ನಾಳೆ ಮತ್ತೆ ಗಂಟಲು ಹರಕೊಂಡು 'ಬೆತ್ತಲಾಗುವ' ಇವರ "ನೂರೆಂಟು ತೂತುಗಳು" ಹಾಗ್ಹಾಗೆ ಹೊರ ಬಂದರೂ ಮೂರೂಬಿಟ್ಟು ಆರಾಮಾಗಿ "ನನಗಿದೆ ಇಷ್ಟನೋ" ಅಂತ ಹಲ್ಕಿರೀತಿದಾರೆ! ಇದರ "ಒಳ ಸುರುಳಿ"ಯಾದರೂ ಏನು?

ಕುಯ್ ಕುಯ್ ರಾಗವ ಹಾಡುವರು....



ಕಾಂಗ್ರೆಸ್ 'ಗಾಂಧಿ'ಗಳು ಸಾಕಿದ ಕೆಲವು ಹುಚ್ಚು ನಾಯಿಗಳಿಗೆ ಇವತ್ತು ಅವರ ಅಧಿನಾಯಕಿಯ ಉತ್ತರ "ಕುಮಾರ" ರೇಬೀಸ್ ಚುಚ್ಚುಮದ್ದನ್ನ ತಾನೆ ಸ್ವತಃ ಚುಚ್ಚಿರಬೇಕು.ಯಾಕೊ ಇವತ್ತಿನಿಂದ ಸುಖಾಸುಮ್ಮನೆ ಅವು ಬೊಗಳುತ್ತಿಲ್ಲ.ಆದರೂ ಎಲ್ಲೋ ಮೂಲೆಯೊಂದರಿಂದ "ಅಣ್ಣಾ ಚಳುವಳಿಗೆ ವಿದೇಶಿ ಕುಮ್ಮಕ್ಕು" "ಅಣ್ಣಾ ಅಮೇರಿಕಾದ ಸೀಕ್ರೆಟ್ ಏಜೆಂಟ್" ಎಂಬ ಗುರುಗುಟ್ಟುವಿಕೆ ಕೇಳಿಬರೋದು ಪೂರ್ತಿ ನಿಂತಿಲ್ಲ.ಯಾರಾದರೂ ಪುಣ್ಯವಂತರು-ಪ್ರಾಣಿದಯಾಪರರು ಅವೆಲ್ಲವನ್ನೂ ಹಿಡಿದು ಮತ್ತೊಮ್ಮೆ ಹದಿನಾಲ್ಕು ದಬ್ಬಣ ಚುಚ್ಚಿ,ಹಿಡಿದ ಕೈಯಲ್ಲೇ (ಏನನ್ನ ಹಿಡಿದದ್ದು ಅಂತ ಕೇಳಬೇಡಿ...ಸೆನ್ಸಾರ್ ಸಮಸ್ಯೆಯಿದೆ!) ಜೊತೆಗೆ ಆಪರೇಶನ್ನೂ ಮಾಡಬಾರದ?...ಕಡೇಪಕ್ಷ ದೇಶದ ಹಿತದೃಷ್ಟಿಯಿಂದ!

ಪಲಾವ್ ತಿಂದು ಪುಕ್ಕಟೆ ಪ್ರತಿಭಟನೆ...ಅಮರಣಾಂತ!



ಬೂ ಸಿ ಯ ಕರೆ ಕೊಟ್ಟ "ಭ್ರಷ್ಟಾಚಾರ ವಿರೋಧಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ"ಕ್ಕೆ ಸ್ವತಹ ಬೂಸಿಯ ಪಿಳ್ಳೆ ನೆವ ತೆಗೆದು ಚಕ್ಕರ್ ಕೊಟ್ಟು ಪರಾರಿಯಾಗಿದ್ದರೂ ಅವರ ಶಿಷ್ಯಗಣ ಗುರುವಾಕ್ಯ ಪರಿಪಾಲನೆಗಾಗಿ ಬೆಳಗ್ಯೆಯೇ ಮನೆಯಲ್ಲಿ ಹೊಟ್ಟೆ ಬಿರಿಯ ಟಿಫನ್ ಮುಗಿಸಿ ಗಾಂಧಿ ಪ್ರತಿಮೆಯ ಮುಂದೆ ತಮ್ಮ ಚೇಲಾ ಪಡೆಗಳೊಂದಿಗೆ ತೇಗುತ್ತಲೇ ಬಂದು ಝಾಂಡಾ ಊರಿಯೆ ಬಿಟ್ಟಿತು...ರಸಿಕ ಚಕ್ರವರ್ತಿ ರೇಣು,ಪೋಲಿ ಪುಟ್ಟ,ಗೋಲ್ ಮಾಲ್ ಗೋಪಾಲಕೃಷ್ಣ,ಓ ಸಿ ವಿಶ್ವನಾಥ,ಉಂಡ್ಫೆನಾಮ ನಿರಾಣಿ,ಸ್ತ್ರೀ ರಾಮಚಂದ್ರೆ ಗೌಡ,ಸರ್ವರ್ ಸೋಮ ಹೀಗೆ ರಾಜ್ಯಕ್ಕೆ ಒಕ್ಕರಿಸಿಕೊಂಡ ಎಲ್ಲಾ ಶನಿಗಳೂ ಅಲ್ಲಿಗೆ ಬಂದು ಎರಡು ಘಂಟೆ ಬೀಡಿ ಸೇದಿ,ಪಾನ್ ಹಾಕಿ ನಡುನಡುವೆ ಚೂರ್ ಕೂಗಿ ಕಡೆಗೆ ಬಂದ ಬಿಟ್ಟಿ ಪಲಾವ್ ತಿನ್ನೋಕೂ ಕಚ್ಚಾಡಿ ಎರಡೆ ಎರಡು ಘಂಟೆಯೊಳಗೆ ತಮ್ಮ ಅಮರಣಾಂತ ಉಪವಾಸವನ್ನ ಖೈದು ಮಾಡಿ ಎಂ ಜಿ ರೋಡಿನ ಬಾರುಗಳತ್ತ ನಗುನಗುತ್ತಲೇ ಹೆಜ್ಜೆ ಹಾಕಿದರು.ಗುಂಪಿನಲ್ಲಿ ಬೀಜದ ಹೋರಿಯಂತೆ ಕಂಗೊಳಿಸುತ್ತಿದ್ದ 'ರಸಿಕ'ರೇಣುವನ್ನ ಹತ್ತಿರಕರೆದು ಅವನ ಅರ್ಜೆಂಟ್ ಅಪ್ಪಾಜಿ ಯಾಕೆ ಬರಲಿಲ್ಲ ಎಂದು ಗುಟ್ಟಾಗಿ ಪ್ರಶ್ನಿಸಲಾಗಿ ;ಅವನು ತನ್ನ ಎಂದಿನ ಗಟ್ಟಿ ಗಂಟಲಲ್ಲೇ "ನೋಡಿ,ಮಾನ್ಯ ಅಪ್ಪಾಜಿ ಯಡಿಯೂರಪ್ಪನವರು ದೊಡ್ಡ ಜನನಾಯಕ.ಒಂದ್ ವೇಳೆ ಅವರೇನಾದ್ರೂ ಇಲ್ಲಿಗೆ ಬಂದಿದ್ರೆ ಇಡೀ ಎಂ ಜಿ ರೋಡು ಟ್ರಾಫಿಕ್ ಜಾಮ್ ಆಗಿ ಜನ ದಿನದ ಬ್ರೆಡ್ಗೆ ಕಣ್ ಕಣ್ ಬಿಡಬೇಕಿತ್ತು?!" ಎಂಬ ಭೀಕರ ಉತ್ತರ ಬಂದದ್ದೆ ಪ್ರಶ್ನಿಸಿದ ನನಗೆ ಮೂರ್ಛೆ ಹೋಗುವಂತಾಯ್ತು....

Thursday, August 18, 2011

ಕಳ್ಳರ ಕೈಗೆ ಖಜಾನೆ ಕೀಲಿ ಕೈ...



ಮನೀಶ್ ತಿವಾರಿ-ಕಪಿಲ್ ಸಿಬಲ್ ದ್ವಯ ಕಾಂಗ್ರೆಸ್ ಕಮಂಗಿಗಳಿಂದ ಮತ್ತೊಂದು ಹೊಸ ಸಂಶೋಧನೆಯಾಗಿದೆ.ಈ ಇಬ್ಬರು ಜೇಮ್ಸ್ ಬಾಂಡ್ ಗಳ ಪ್ರಕಾರ "ಅಣ್ಣಾ'ಬ್ರಾಂಡ್ ಚಳುವಳಿಗೆ 'ವಿದೇಶಿ'(!) ಕೈವಾಡದ ಹುನ್ನಾರ ಪೂರಿತ ನೆರವು ಇದೆ! ಇದೆಲ್ಲ ಅಮೇರಿಕದ ಪಿತೂರಿ (ಸದ್ಯ ಪಾಕಿಸ್ತಾನದ ಪಿತೂರಿ ಅನ್ನಲಿಲ್ಲ!),ಅಣ್ಣಾ ಹಜಾರೆ ಅಮೇರಿಕಾದ ಸೀಕ್ರೆಟ್ ಏಜೆಂಟ್?! ಅವರ ಪೂರ್ತಿ ವಿದೇಶಿ ಅಧಿನಾಯಕಿ-ನಾಮ ನಿಮಿತ್ತ 'ಗಾಂಧಿ' ಅನಾರೋಗ್ಯಕ್ಕೆ ಚಿಕಿತ್ಸೆಯ ನೆಪದಲ್ಲಿ ಅಮೇರಿಕದಲ್ಲೆ ತಿಂಗಳಿಂದೀಚೆಗೆ ಠಿಕಾಣಿ ಹೂಡಿರೋದರಿಂದ ಆಕೆಯೂ ಈ ಹುನ್ನಾರದಲ್ಲಿ ಪಾಲ್ಗೊಂಡಿರಬಹುದೇ? ಎಂಬ ಜರೂರು ಪ್ರಶ್ನೆಗೆ ಇನ್ನೂ ಈ ಪತ್ತೆದಾರ ಪುರುಷೋತ್ತಮನ ತುಂಡುಗಳು ಉತ್ತರಿಸಿಲ್ಲ ಅಥವಾ ಹೊಸಕಥೆ ಹೇಳುವಾಗ ಅದು ಮರೆತೇ ಹೋಗಿದೆ.ಅಲ್ಲದೆ ಆಕೆ ಕಳೆದ ಐದುವರ್ಷದಲ್ಲಿ ದೇಶವನ್ನೆ ದೋಚಿದ ಕಪ್ಪುಹಣವನ್ನ ದೇಶದಿಂದ ಹೊರಗೆ ಸ್ಮಗ್ಲಿಂಗ್ ಮಾಡೋಕೆ ಅನಾರೋಗ್ಯದ ನೆಪದಲ್ಲಿ ಗಪ್ ಚುಪ್ಪಾಗಿ ಕಳ್ಳರಂತೆ ಸುದ್ದಿಯನ್ನೆ ಮಾಡದೆ ಅಮೆರಿಕಕ್ಕೆ ಓಡಿ ಹೋಗಿರುವ ಗುಮಾನಿಯೂ ದಟ್ಟವಾಗಿದೆ.ಈ ಬಗ್ಗೆಯೂ ಈ ಸಿಐಡಿ ೯೯೯ರದ್ದು ದಿವ್ಯ ಮೌನ!

ಇನ್ನು ನರಸತ್ತ ಮಾನವನ ಪಳಯುಳಕೆಯಂತಿರುವ ಪ್ರಧಾನಿ ಎಂಬ ಆರೋಪ ಹೊತ್ತ ಮನಮೋಹನ ಸಿಂಗ ಬೆಳ್ಳಿ ಮೂಡುವ ಮೊದಲೆ ಅಣ್ಣಾ ಅರೆಷ್ಟ್ ಮಾಡಿಸಿ ಒದ್ದು ಒಳಗೆ ಹಾಕುವ ಸನ್ನಾಹದಲ್ಲಿದ್ದಾಗ ಪಕ್ಷದ ಹೆಸರಿಗೆ ಕೆಸರು ಬೀಳ್ತಿರೋದನ್ನ ಕಂಡು ಕಕ್ಕಾಬಿಕ್ಕಿಯಾದ ಅರೆ'ವಿದೇಶಿ' ರಾಜಕುಮಾರ 'ಗಾಂಧಿ'ಯ ಅಪ್ಪಣೆ ದೂರವಾಣಿ ಮೂಲಕ ಬಂದ ನಂತರ ಮಲ್ಲಗೆ ಕಳ್ಳನ ಹಾಗೆ ಅಣ್ಣಾ ರನ್ನ ಒಳ ಕೂಡಿದಷ್ಟೇ ಸುಲಭವಾಗಿ ಹೊರ ತಳ್ಳಲೂ ನೋಡಿ ಅದೂ ಆಗದೆ ಹತಾಶರಾಗಿ ;ಮೈ ಪರಚಿ ಕೊಳ್ಳುವಂತಾದಾಗ ಅರ್ಜೆಂಟ್ ಮತಿಭ್ರಮಣೆಗೆ ಒಳಗಾದಂತೆ ಸಂಸತ್ತಿನಲ್ಲಿ ಬಡಬಡಿಸಿದರು.ಇನ್ನು ವಿರೋಧಪಕ್ಷದ ಅವಕಾಶವಾದಿ ಅಧಿನಾಯಕಿ ಹೇಳಿದ್ದು ಕೇಳಿ ಎಲ್ಲಿಂದ ನಗಬೇಕು ಅನ್ನೋದು ಶ್ರೀಸಾಮಾನ್ಯನಿಗೆ ಗೊತ್ತೇ ಆಗಲಿಲ್ಲ."ಕಾನೂನು ರೂಪಿಸೋಧು ಸಂಸತ್ತಿನ ಪರಮಾಧಿಕಾರ,ನಮಗ್ಯಾರೂ ಬುದ್ಧಿ ಹೇಳಬೇಕಿಲ್ಲ ;ನಾಗರೀಕರನ್ನ ಕೇಳಿ ಕಾನೂನು ರೂಪಿಸ ಬೇಕಂತಿಲ್ಲ (ಕೋಳಿ ಕೇಳಿ ಮಸಾಲೆ ಅರೀಬೇಕಂತಿಲ್ಲ ಅನ್ನೋ ಧಾಟಿ)" ಅನ್ನೋ ಆಕೆಯ ಅಹಂಕಾರದ ನುಡಿಗೆ ಮೇವುಗಳ್ಳ ಲಾಲೂ,ದೇಶನಿಷ್ಠೆಯೇ ಅನುಮಾನಾಸ್ಪದವಾಗಿರುವ ಕಮ್ಯುನಿಷ್ಟರ ನಾಯಕ ಗುರುದಾಸ್ ದಾಸಗುಪ್ತ ಮುಂತಾದ ಗಂಟು ಕಳ್ಳರ ಪಕ್ಕವಾದ್ಯ ಬೇರೆ.ಅಲ್ಲ ಸ್ವಾಮಿ ನಮ್ಮ ಪರವಾಗಿ ಕಾನೂನು ರೂಪಿಸಿ ಅಂತ ನಿಮ್ಮನ್ನ ಅಲ್ಲಿಗೆ ಕಳಿಸಿದ್ದೆ ಹೊರಟು ನಿಮ್ಮ ಖಜಾನೆ ತುಂಬುವ ಹಿತಾಸಕ್ತಿಗಳೇ ಭಾರಪೂರವಾಗಿರುವ ಫಾರ್ಮಾನು-ಫತ್ವಾಗಳನ್ನ ಹುಲು ನಾಗರೀಕರ ಮೇಲೆ ಹೆರೋದಕ್ಕಲ್ಲ ಎಂತ ಅವರ ಜುಟ್ಟು ಹಿಡಿದು ಬೇಕಿದ್ದರೆ ನಾಲ್ಕು ಒದ್ದು ಹೇಳುವ ನಾಯಕರು ಇಂದು ದೇಶಕ್ಕೆ ಬೇಕಾಗಿದ್ದರೆ.ಅಣ್ಣಾ ಅಂತವರಲ್ಲೊಬ್ಬರು ಅನ್ನೋದು ನಮ್ಮ ಸುದೈವ.ಇಂತಹ ಪ್ರಜಾಪ್ರಭುತ್ವವೆಂಬ ನಕಲಿ ಸಂತೆಯ ಅಸಲು ಗಂಟುಕಳ್ಳರ ಕೈಗೆ ದೇಶದ ಚುಕ್ಕಾಣಿ ಕೊಟ್ಟು ಈಗ ಬಾಯಿಬಾಯಿ ಬಡಿದುಕೊಳ್ಳುತ್ತಿರುವ ನಾವೆ ಅಸಲು ಕಮಂಗಿಗಳು ಅನ್ನೋದರಲ್ಲಿ ಸಂಶಯವೆ ಉಳಿದಿಲ್ಲ!

ಕೆ(ಕ)ಟ್ಟಾ ಮೇಲೆ ಬುದ್ಧಿ ಬಂತು..!

ಕಡೆಗೂ ಬೂ ಸಿ ಯ ಕಾಟದಿಂದ ಬಾಪೂಜಿ ಪಾರಾಗಿದ್ದಾರೆ! ಗಾಂಧೀ ಮೂರ್ತಿಯೆದುರು ಭ್ರಷ್ಟಾಚಾರ ವಿರೋಧಿಸಿ ಧರಣಿ ಕೂರುವ ತಮ್ಮ ಅದ್ಭುತ ( ಅವರ "ಮಾನಸಿಕ ಪುತ್ರ" 'ರಸಿಕ' ರೇಣು ಕೊಟ್ಟ ಅದ್ಭುತ ಐಡಿಯಾನೆ ಇದಾಗಿರಬಹುದ ಅನ್ನೋ ಗುಮಾನಿ ನನಗೆ! ) ಆಲೋಚನೆಯಿಂದ ಹಿಂದೆಸರಿದು ಇದೂ ತಮ್ಮ ಇನ್ನೊಂದು ಬೂಸಿ ಅನ್ನೋದನ್ನ ಸ್ವಯಂ ಸಾಬೀತು ಪಡಿಸಿದ್ದಾರೆ.ಹಿಂದೆ ಸರಿಯಲು ಇರೋ ಕಾರಣ ಮಾತ್ರ ಇನ್ನೂ ನಿಗೂಢ! ಬಹುಷಃ ತಮ್ಮ 'ಜಿಗರ್ ಕಾ ತುಕುಡ' ಕಟ್ಟಾ ಪರಪ್ಪನ ಅಗ್ರಹಾರದ ಗೆಸ್ಟ್ ಹೌಸಿಗೆ ಮೊದಲೆ ಹೋದವ ತಮಗೂ ಪಕ್ಕದ ಸೆಲ್ ಬುಕ್ ಮಾಡಿಸಿ ಅದನ್ನ ಕಸ ಹೊಡೆದು ಕ್ಲೀನ್ ಮಾಡಿ ಇಟ್ಟು ತಮಗಾಗಿಯೇ ಕಾದು ಕೂತಂತೆ ನೆನ್ನಿನಿರುಳು ಕೆಟ್ಟ ಕನಸೇನಾದರೂ ಬಿದ್ದಿರಬಹುದ?! ಪಾಪ ಧರ್ಮಸ್ಥಳದ ಮಂಜ ಗಾಂಧೀಜಿಯಷ್ಟು ಪುಣ್ಯವಂತನಾಗಿರ್ಲಿಲ್ಲ,ಸರ್ಕಾರಿ ಆಣೆಗೆ ಅನಿವಾರ್ಯ ಸಾಕ್ಷಿಯಾಗಿ ಸಿಕ್ಕಿ ಬಿದ್ದು ಹಡಾಲೆದ್ದು ಹೋಗಿದ್ದ ನತದೃಷ್ಟನಾಗಿದ್ದನವ!

ಅಪೇಕ್ಷೆಗಳ ಹಿಡಿತ

ಹಿಮಾಲಯ ತಪ್ಪಲಿನಲ್ಲಿತ್ತು ಆ ಆಶ್ರಮ. ಅಲ್ಲಿ ಅನೇಕ ಸನ್ಯಾಸಿಗಳು ತಮ್ಮ ಜೀವನದ ದಾರಿಯನ್ನು ಕಂಡುಕೊಳ್ಳುತ್ತಿದ್ದರು. ಬೇಸಿಗೆಯಲ್ಲೇನೋ ಸ್ವಲ್ಪ ಜೀವನ ಚೆನ್ನಾಗಿರುತ್ತಿತ್ತು. ಗುರುಗಳು-ಶಿಷ್ಯರು ಬಿಸಿಲಿನಲ್ಲಿ ಕುಳಿತು ಮೈಕಾಯಿಸಿಕೊಳ್ಳಲು ಅನುಕೂಲವಿತ್ತು. ಆದರೆ ಉಳಿದ ತಿಂಗಳುಗಳಲ್ಲಿ ಮಾತ್ರ ಬದುಕು ದುಃಸಾಧ್ಯವಾಗುತ್ತಿತ್ತು.

ಮಳೆಗಾಲದಲ್ಲಿ ನಿರಂತರವಾಗಿ ಬೀಳುವ ಮಳೆ, ಅದರಿಂದ ಉಕ್ಕಿ ಹರಿಯುವ ನದಿಗಳು ಯಾರಿಗಾದರೂ ಗಾಬರಿ ಮಾಡುತ್ತಿದ್ದವು. ನಂತರ ಬರುವ ಚಳಿಗಾಲದಲ್ಲಂತೂ ಕೊರೆಯುವ ಚಳಿಗೆ ನಡುನಡುಗಿ ಮೈಯಲ್ಲಿಯ ಮೂಳೆಗಳು ಮುರಿಯದಿದ್ದುದೇ ಪವಾಡ.

ಈ ಗುಂಪಿನಲ್ಲೊಬ್ಬ ತರುಣ ಸನ್ಯಾಸಿ. ಆತನಿಗೆ ಈಜುವುದೆಂದರೆ ಬಲು ಸಂತೋಷ. ಇನ್ನೇನು ಕೆಲವೇ ದಿನಗಳಲ್ಲಿ ಚಳಿಗಾಲ ಪ್ರಾರಂಭವಾಗುತ್ತದೆನ್ನುವಾಗ ಒಂದು ದಿನ ಆತ ನದೀ ತೀರದಲ್ಲಿ ನಿಂತಿದ್ದ. ಆಗ ಅವನ ಕಣ್ಣಿಗೆ ಒಂದು ದೃಶ್ಯ ಬಿತ್ತು. ಅವನು ದೂರದಲ್ಲಿ ನದಿಯ ನೀರಿನಲ್ಲಿ ಯಾವುದೋ ವಸ್ತು ತೇಲಿ ಬರುತ್ತಿದ್ದುದನ್ನು ಕಂಡ. ದಿಟ್ಟಿಸಿ ನೋಡಿದರೆ ಒಂದು ದೊಡ್ಡ ಕಪ್ಪು ಕಂಬಳಿ ನೀರಿನಲ್ಲಿ ಹರಿದುಕೊಂಡು ಬರುತ್ತಿದೆ.

ಅದನ್ನು ನೋಡಿದ ತಕ್ಷಣ ತರುಣ ಸನ್ಯಾಸಿಗೆ ಮುಂದೆ ಬರಲಿರುವ ಚಳಿಯ ದಿನಗಳ ನೆನಪಾಯಿತು. ತಾನು ಕಳೆದ ಬಾರಿ ತನ್ನನ್ನು ಬೆಚ್ಚಗಿರಿಸಿಕೊಳ್ಳಲು ಒದ್ದಾಡಿದ್ದರ ನೆನಪಾಯಿತು. ಆಹಾ! ಈ ಕಂಬಳಿ ನನಗಾಗಿಯೇ ಬಂದಂತಿದೆ. ಇದನ್ನು ದಂಡೆಗೆಳೆದು ಒಣಗಿಸಿ ಇಟ್ಟುಕೊಂಡರೆ ಚಳಿಗಾಲವನ್ನು ಸುಸೂತ್ರವಾಗಿ ಪಾರಾಗಬಹುದು. ಹೀಗೆಲ್ಲ ಯೋಚಿಸಿ ಆತ ತಣ್ಣಗೆ ಕೊರೆಯುವ ನೀರಿಗೆ ಹಾರಿಕೊಂಡ.

ಜೋರಾಗಿ ಕೈಬೀಸುತ್ತ ಆ ಕಂಬಳಿ ಬರುತ್ತಿರುವೆಡೆ ಈಜುತ್ತ ನುಗ್ಗಿದ. ದಂಡೆಯ ಮೇಲೆ ನಿಂತಿದ್ದ ಆಶ್ರಮದ ಜನಕ್ಕೆ ಇದೊಂದು ಆಶ್ಚರ್ಯ. ಈತ ಎಲ್ಲಿಗೆ ಸಾಗುತ್ತಿದ್ದಾನೆ ಎಂದು ನೋಡುತ್ತಿದ್ದರು. ಅವನು ಈಜುತ್ತ ಕಂಬಳಿಯ ಹತ್ತಿರ ತಲುಪಿದ. ಕಂಬಳಿಗೆ ಕೈ ಹಾಕಿ ಎಳೆದ. ಹಾಗೆ ಎಳೆದವನೇ ಹೋ, ಹೋ ಎಂದು ಕಿರುಚಲಾರಂಭಿಸಿದ.

ದಂಡೆಯ ಮೇಲಿದ್ದವರಿಗೆ ಏನೂ ಅರ್ಥವಾಗಲಿಲ್ಲ. ಅವರೂ ಅವನು ಕಂಬಳಿಯನ್ನೇ ಎಳೆಯುತ್ತಿದ್ದಾನೆ ಎಂದುಕೊಂಡಿದ್ದರು. ತರುಣ ಸನ್ಯಾಸಿ ಮತ್ತೆ ಕೂಗಿದ,  `ನನ್ನನ್ನು ಪಾರು ಮಾಡಿ, ಪಾರುಮಾಡಿ.` ದಂಡೆಯಲ್ಲಿದ್ದವರಿಗೆ ಆ ಕಂಬಳಿ ಬಹಳ ಭಾರವಾಗಿದ್ದರಿಂದ ಅದನ್ನು ಎಳೆಯುವುದು ಅವನಿಗೆ ಅಸಾಧ್ಯವಾಗಿರಬೇಕು ಎನ್ನಿಸಿ,  `ಭಾರವಾಗಿದ್ದರೆ ನೀನೇ ಕೈ ಬಿಟ್ಟು ಬಿಡು, ದೂರ ತಳ್ಳಿ ಬಂದುಬಿಡು`  ಎಂದು ಕೂಗಿದರು.

ಆಗ ಆತ,  `ನಾನು ಅದನ್ನು ಯಾವಾಗಲೋ ಬಿಟ್ಟೆ. ಆದರೆ ಅದು ನನ್ನನ್ನು ಬಿಡುತ್ತಿಲ್ಲ`  ಎಂದು ಅರಚಿದ. ಅವನು ಕಂಬಳಿ ಎಂದು ಹಿಡಿದದ್ದು ಒಂದು ನೀರು ಕರಡಿ. ಈಗ ಅದು ಅವನನ್ನೇ ಹಿಡಿದುಬಿಟ್ಟಿದೆ! ಅದರಿಂದ ಪಾರಾಗುವುದು ಅವನಿಗೆ ಕಷ್ಟವಾಗಿದೆ. ನಂತರ ಹತ್ತಾರು ಜನ ನೀರಿಗೆ ಹಾರಿ ಕೋಲಿನಿಂದ ಹೊಡೆದು ಅದನ್ನು ಓಡಿಸಿ ಈ ಸನ್ಯಾಸಿಯನ್ನು ಪಾರುಮಾಡಿಕೊಂಡು ಬಂದರು.

ನಮಗೂ ಹಾಗೆಯೇ ಆಗುತ್ತದೆ ಅಲ್ಲವೇ? ನಾವೂ ಜೀವನದ ನದಿಯಲ್ಲಿ ತೇಲಿಬರುವ ಅನೇಕ ವಸ್ತುಗಳನ್ನು ನಾವೂ ಬೆನ್ನತ್ತಿ ಹೋಗುತ್ತೇವೆ.  ನಮ್ಮ ಕಷ್ಟಕಾಲಕ್ಕೆ ಒದಗುತ್ತವೆ ಎಂದು. ಆ ವಸ್ತುಗಳು, ಬಂಗಲೆ, ಕಾರು, ಅಧಿಕಾರ, ಮನ್ನಣೆ, ದೇಹ ಸಂತೋಷ ಯಾವುದೂ ಆಗಬಹುದು. ಅವು ನಮಗೆ ಬೇಕೆಂದು ಹಿಡಿದುಕೊಳ್ಳುತ್ತೇವೆ.

ಹಿಡಿದುಕೊಳ್ಳುವುದಷ್ಟೇ ನಮ್ಮ ಕೈಯಲ್ಲಿದ್ದದ್ದು. ನಂತರ ಆ ವಸ್ತುವೇ ನಮ್ಮನ್ನು ಹಿಡಿದುಕೊಳ್ಳುತ್ತದೆ. ಒಂದು ಸ್ಕೂಟರ್ ಬೇಕು ಎಂದುಕೊಂಡು ಕೊಂಡರೆ ಅದರ ಹಿಂದೆಯೇ ಸರಮಾಲೆ ಬಂದೇ ಬರುತ್ತದೆ. ಸ್ಕೂಟರಿನ ಇನ್ಸೂರೆನ್ಸ್, ಪೆಟ್ರೋಲ್ ಖರ್ಚು, ಹೆಲ್ಮೆಟ್, ಕೂದಲು ಉದುರುವಿಕೆ ಇತ್ಯಾದಿ. ಒಂದು ಅಧಿಕಾರದಲ್ಲಿ ಕುಳಿತಿರೋ ಬಂತು ನೋಡಿ ಅದರ ಹಿಂದೆಯೇ ಅಧಿಕಾರದ ಜರ್ಬು, ಅಹಂಕಾರ, ಮತ್ತೊಬ್ಬರ ಅಸೂಯೆ ಮತ್ತು ಅಧಿಕಾರ ಕಳೆದುಹೋಗುವ ಭಯ.

ಈ ವಸ್ತುಗಳನ್ನು, ಅಪೇಕ್ಷೆಗಳನ್ನು ಹಿಡಿದುಕೊಳ್ಳುವ ಮೊದಲೇ ಅವು ತರುವ ಹಿಡಿತಗಳನ್ನು, ಬಿಗಿತಗಳನ್ನು ನೆನಪಿಗೆ ತಂದುಕೊಂಡರೆ ವಾಸಿ.

Krupe: Prajavani - 13 July 2011

Wednesday, August 17, 2011

ನಗಲಾರದೆ ಅಳಲಾರದೆ...






"ನಾಳೆ ಮಹಾತ್ಮಗಾಂಧಿ ಪ್ರತಿಮೆ ಬಳಿ ಹತ್ತಾರು ಸಾವಿರ ಜನರ ಸೇರಿಸಿ,ಅಣ್ಣಾ ಹಜಾರೆಯವರ ಜನಲೋಕಪಾಲಕ್ಕೆ ತುಂಬು ಹೃದಯದ ಬೆಂಬಲ ಸೂಚಿಸಿ ಪಕ್ಷಾತೀತವಾದ ಹೋರಾಟ ಮಾಡಲಾಗುವುದು!" ಅಂದಿದ್ದಾರೆ ಮಾಜಿ ಮುಖ್ಯ'ಕಂತ್ರಿ' ಬೂ ಸಿ ಯ! (ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ.ಇದೂ ಒಂದು ಅವರ ಹೊಸ ಬೂಸಿಯೇ.ಅಲ್ಲಾ ಅಬಲೆ ಒಂಟಿ ಮಹಿಳೆಯರ ಸುರಕ್ಷತೆಗಾಗಿ ಉಮೇಶ್ ರೆಡ್ಡಿ ಧರಣಿ ಕೂತರೆ...ಸರಣಿ ಮಹಿಳ ಅತ್ಯಾಚಾರ ವಿರೋಧಿಸಿ ಚಾರ್ಲ್ಸ್ ಶೋಭರಾಜ್ ಉಪವಾಸ ಕೂತರೆ...ಭೂಮಿ ಡೀನೋಟಿಫಿಕೇಶನ್ ವಿರೋಧಿಸಿ ಸ್ವಂತ(?) ಮಗನೊಂದಿಗೆ ಕಟ್ಟಾ ನಾಯ್ಡು ಸರಕಾರದ ವಿರುದ್ಧ ಸಮರ ಸಾರಿದರೆ ಆಗಬಹುದಾದ ಕೆಕರುಮೆಕರು ಕನ್ನಡಿಗರಿಗಾಗುತ್ತಿದೆ.ಇದೇನು ಅಕಾಲದಲ್ಲಿ 'ಹಾಸ್ಯೋತ್ಸವ"?! ಆಣೆ ಹಾಕೊ ದಿವಸ ಧರ್ಮಸ್ಥಳದಿಂದ ಮಂಜುನಾಥ ತಲೆ ತಪ್ಪಿಸಿಕೊಂಡು ಓಡಿ ಹೋದ ಹಾಗೆ ನಾಳೆಗೆ ಬೆಚ್ಚಿಬಿದ್ದು ಗಾಂಧಿಯೂ ಕೋಲೂರಿಕೊಂಡು ಇವತ್ತು ರಾತ್ರಿಯೇ ಓಡಿ ಹೋಗಿ ಬೂಸಿಯ ಕೈಯಿಂದ ಬಚಾವಾಗುವ ಎಲ್ಲಾ ಸಾಧ್ಯತೆಗಳೂ ಗೋಚರಿಸುತ್ತಿವೆ...

Tuesday, August 16, 2011

ಮನಸು ಉತ್ತ ನೆನಪಿನ ಜಾಡಿನಲ್ಲೆಲ್ಲ ....

ಕನಸಿನ ಕರಿ ಮೋಡಗಳು
ನುಂಗಿ ಮರೆಮಾಚಿದ ಕಾಮನಬಿಲ್ಲಿನಲ್ಲಿ....
ನನ್ನ ಒಲವ ಬಣ್ಣಗಳೂ ಇದ್ದವು,
ನಿನ್ನ ಮನಸಿನ ಆಕರ್ಷಣೆ ಅವನ್ನು ಅರಿವಿಲ್ಲದಂತೆ ಕದ್ದಿದ್ದವು/
ಕಣ್ಣಲ್ಲಿ ಪ್ರತಿಫಲಿಸಿದ ಕನಸಿನ ಮಳೆಬಿಲ್ಲಿನ ಸಪ್ತ ವರ್ಣಗಳು
ಮತ್ತೆ ಒಂದಾಗಿ ಕನಸಿನ ಮೋಡದಲ್ಲಿ ಲೀನವಾದವು,
ಮನಸಿನ ತಲೆಬಾಗಿಲಲಿ
ಬಿದ್ದ ನಿನ್ನ ಹೆಸರಿನ ಹೂರಂಗೋಲಿ...
ಬಾಡದಂತೆ ನಿತ್ಯ ಕನಸು ಹೊಸ ಹೂಗಳ ತಂದಲ್ಲಿ ಸುರಿಯುತಿದೆ
ಮೌನವಾಗಿ ಅನುಕ್ಷಣ ನಿನ್ನನೆ ಅದು ಕರೆಯುತಿದೆ//



ನೋವಿನ ಸಾಗರದಾಚೆಗೆ
ಒಂದು ಸಂತಸದ ತೀರವಿದೆ...
ನೋವಿನ ತೊರೆಗೂ ಮೇಲೆ ನಲಿವಿನ ಪಾರವಿದೆ,
ನೀ ಬಂದರೆ ಬಾಳು ಸಂಭ್ರಮಿಸೋದು ಅಪಾರವಿದೆ/
ಸಂಶಯವಿಲ್ಲದೆ ಮನ ಮಾರ್ನುಡಿದ
ನಿನ್ನ ಹೆಸರಿನ ಹಿಂದೆ ನನ್ನವೆ ಆದ ಖಾಸಗಿ ಖುಷಿಗಳ ನಲಿವಿದೆ...
ಮೌನ ಎದೆ ಮಿಡಿತದ ಅವ್ಯಕ್ತ ಒಲವಿದೆ//


ಮನದ ಮನೆಯ ಹೊಸಿಲು ದಾಟಿದ ಭಾವಗಳು
ಬಂಧನದ ಹಂಗಿಲ್ಲದೆ ಸ್ವಚ್ಚಂದವಾಗಿ ವಿಹರಿಸುವಾಗ...
ಅದರ ಮೇಲೆ ಬಿದ್ದ ಒಲವ ಮಳೆ ನಿನ್ನೆದೆಯಲ್ಲಿ ಕಟ್ಟಿದ್ದ ಮೋಡಗಳದ್ದು,
ಕಣ್ಣೀರ ಹನಿಯೆಲ್ಲ ನಿನ್ನ ನೆನಪಿಗೆ ಹೊಳೆದಾಗ....
ಹರಿದಾಗ ನಾನೇಕೆ ಅಳಲಿ?
ಎದೆಯ ಪ್ರಾರ್ಥನೆ ಇದಿಷ್ಟೆ
ಮನಸೆಲ್ಲ ನಿನ್ನುಸಿರ ನೆನಪೆ ತುಂಬಿರಲಿ/
ಮುಗಿಲೆಲ್ಲ ಬರಿದಾಗಿ ಕನಸ ತಾರೆ ಮೂಡದೆ
ಎದೆಯೆಲ್ಲ ಬರಡಾಗಿ ನಿನ್ನ ಒಲವ ಕಾಣದೆ...
ಎದೆ ಪಿಸು ನುಡಿದ ಆಕಾಂಕ್ಷೆಗಳ ಹರಕೆಗಳೆಲ್ಲ,
ಒಂದೊಂದಾಗಿ ಕನಸಿನರಮನೆಯ ಹೊಸ್ತಿಲು ದಾಟಿದವು
ನಿನ್ನೆದೆ ವಿಳಾಸದ ಕರೆಗಂಟೆ ತಂತಿ ಮೀಟಿದವು//



ಹೇಗೆ ಹೇಳಿದರೂ ಭಾವಗಳ ಬಯಕೆ ಬದಲಾಗೊಲ್ಲ
ಮನಸಿನ ರಾಗಗಳ ಲಯ ಬೇರೆ ಮೂಡೋಲ್ಲ....
ಬದುಕು ಒಂದೆ,
ಹಾಗೇನೆ ಬದುಕಲ್ಲಿ ಬಂದ ನೀನೂನು!/
ಮನಸಿನ ಬಳ್ಳಿ ನಿನ್ನ ನಗುವಿನ ಗೊಬ್ಬರದಾಸರೆ ಸಿಗದೆ
ಬರಗಾಲಕ್ಕೆ ಸಿಕ್ಕ ತೆಂಗಿನಂತೆ ಸೊರಗಿ ಹೋಗಿದೆ....
ಮನಸು ಉತ್ತ ನೆನಪಿನ ಜಾಡಿನಲ್ಲೆಲ್ಲ
ಕನಸಿನ ಬೀಜಗಳನ್ನೆ ಬಿತ್ತಿ...ನೆಮ್ಮದಿಯ ಚಿಗುರನ್ನ ಕಾಣುವ ನನ್ನ ಹಂಬಲ,
ನಿನ್ನ ಸಮ್ಮತಿಯಿಲ್ಲದೆ ಕರಗಿ ಹೋಗಿದೆ//

ನಿನ್ನೊಂದು ನಗುವ ಕದ್ದು....





ಸಾಲು ಕನಸುಗಳ ನಡುವಿನಿಂದ
ಬೇರೆ ಸರಿದ ನಿನ್ನೊಂದು ಕನಸು...
ನನ್ನ ಇರುಳ ತುಂಬಾ ಸಂತಸದ ಮುತ್ತುಗಳ ಸುರಿದು
ಮತ್ತೆ ಅದೆ ಸಾಲಿನಲ್ಲಿ ಸೇರಿ ಲೀನವಾಯ್ತು/
ಮೆಲ್ಲಗೆ ಮನಸಿನಂಗಳ ದಾಟಿದ
ಮೋಹಕ ಕನಸು....
ಭಾವಗಳ ಹೂ ತೋಟದಲ್ಲಿ
ನಿನ್ನ ಮೊಗವರಳಿಸಿಕೊಂಡ ಸುಮಕ್ಕಾಗಿ,
ಸುಮ್ಮನಾದರೂ ಹುಡುಕುತ್ತಲೆ ಇದೆ//


ಕವಿತೆಗಳೆಲ್ಲ ಕೇವಲ ನಿರ್ಜೀವ ಪ್ರತೀಕ
ಮನದ ಮಾತಿಗೆ ಇಷ್ಟೆ ಎಂದು ಬೇಲಿ ಹಾಕಲಸಾಧ್ಯ!....
ಇದು ಹರಿವ ತೊರೆ,
ಬೀಸುವ ತಂಗಾಳಿ...ಕೇವಲ ಕೆಲ ಪದಗಳ .ಹಿಡಿತಕ್ಕೆ ಸಿಗದಷ್ಟು ಅಭೇದ್ಯ!/
ಕನಸು ಬಿತ್ತಿದ ಸಾಲುಗಳೆಲ್ಲ ಕವನಗಳಾಗಿ
ಮನಸು ಕೆತ್ತಿದ ಬರಿ ಮಾತುಗಳೆಲ್ಲ ಎದೆಬೇನೆಯ ಶಮನಗಳಾಗಿ...
ಬಾಳು ಖುಷಿ-ಕಣ್ಣೀರಿನ ನಾವೆಯಲ್ಲಿ
ಮೌನವಾಗಿ ತೇಲುತಿದೆ//



ವಿಶ್ವಾಸ ಕುದುರದ ಮೇಲೆ ಪರಸ್ಪರ
ಅಪನಂಬಿಕೆಯೆ ಆಗಿರುವಾಗ ಬೆಟ್ಟ...
ಸ್ವಾತಂತ್ರ್ಯಕ್ಕಿಂತ ಪರತಂತ್ರವೆ ಹಿತವಾಗಿದ್ದಂತೂ ದಿಟ...!
ಎಲ್ಲಿದ್ದರೇನು,
ನೀ ಹೇಗಿದ್ದರೇನು...
ಅಲಿಯುತ್ತಿರು ಹೀಗೆ ಯಾವುದೊ ದಿಕ್ಕೇ ಗೊತ್ತಿಲ್ಲದ ಪರದೇಶ
ಬದಲಾದೀತೆನು ನಿನ್ನ ಭಾರತೀಯ ನಡೆ-ನುಡಿ-ವೇಷ?/
ನಾ ಕನಸುಗಳನ್ನ ಗಾಳಿಯಲ್ಲಿ ತೇಲಿ ಬಿಟ್ಟಾಗ
ನಿನ್ನೆದೆ ಕಿಂಡಿಯನ್ನು ಮರೆಯದೆ ತೆರೆದಿಡು......
ಅವಕ್ಕೂ ನಿನ್ನ ಮನಸಲ್ಲೇ ತಾವುಬೇಕು//



ನೀನೊಮ್ಮೆ ಮರಳಿ ಬಂದರೆ ತುಂಗೆಯಲ್ಲಿ ತೇಲುತ್ತ ಹರಿಯೋಣ
ಒಲವಿನ ಸವಿ ಮಾತನ್ನೆಲ್ಲ ಮುಗಿಲಂಚಲ್ಲಿ ಬರೆಯೋಣ...
ನಿನ್ನೊಂದು ನಗುವ ಕದ್ದು
ನಾ ಪೋಣಿಸಿದ ಈ ರಾಗ ಇನ್ಯಾವುದೆ ಮಾಧುರ್ಯಕ್ಕಿಂತಲೂ....ಬಲು ಇಂಪು,
ನಿನ್ನ ನೆನಪಿನ ಎಳೆಗಳಿಂದಲೆ ನೇಯ್ದ ನನ್ನ ಕನಸಿನ ಕುಲಾವಿಯ ತುಂಬೆಲ್ಲ....
ನಿನ್ನುಸಿರನದೆ ನರುಗಂಪು/
ಥಟ್ಟನೆ ಹೊರಟ
ನಿಂತ ನೀರಾಗಿದ್ದ ನನ್ನ ಬಾಳ ಬಂಡಿಗೆ....
ನಿನ್ನ ಒಲವ ಇಂಧನವೇ ಮೂಲಾಧಾರ,
ಆತ್ಮ ನಿವೇದನೆ ಅನ್ನು
ನೋವಿನ ಅನಾವರಣ ಅನ್ನು...
ನಿನ್ನ ಮಾತೆತ್ತದೆ ನನ್ನ ನಾಲ್ಕು ಸಾಲುಗಳಿಗೆ ವಿರಮಿಸಿ ಗೊತ್ತಿಲ್ಲ
ಎದೆಯಲ್ಲಿ ನಿನ್ನುಸಿರಷ್ಟು ಬೆಚ್ಚನೆ ಭಾವಗಳನ್ನು ಇನ್ಯಾರು ಬಿತ್ತಿಲ್ಲ//

ವಿಧಿ ವಿಪರೀತ...!




ನೆನ್ನೆ ದೇಶದಾದ್ಯಂತ ನಡೆದ ಸ್ವಾತಂತ್ರ ದಿನದ ಆಚರಣೆಯನ್ನ ಗಮನಿಸಿದಾಗ ಇದೊಂತರ ಅಂಗವಿಕಲ ಮಗುವಿಗೆ ಸಿಂಗಾರ ಮಾಡಿ ಮುದ್ದಿಸಿದಂತೆ ಕಾಣಿಸಿತು.ಮಗುವಿಗದರಿಂದ ಸುಖವಿಲ್ಲ ;ಮುದ್ದಿಸೋ ಮಂದಿ ಬಿಡೋಲ್ಲ.ಒಟ್ಟಿನಲ್ಲಿ ಮಗುವಿಗೆ ಭರ್ತಿ ಹಿಂಸೆ ಹೀಗಿತ್ತು...ಏನೋ ಒಂಥರಾ 'ಡ್ರೈ' ಸರಕಾರಿ ಆಚರಣೆ.

ಯಾವೊಬ್ಬ ನಾಗರೀಕನೂ ಮನಸಪೂರ್ತಿ ಸಂಭ್ರಮಿಸಿ ಸ್ವಯಂ ಸೂರ್ತಿಯಿಂದ ಪಾಲ್ಗೊಳ್ಳದ ಈ ಸರಕಾರಿ ಸಂಭ್ರಮದಲ್ಲಿ ಮುಖ್ಯ-ಪ್ರಧಾನ "ಕಂತ್ರಿಗಳು" ಧ್ವಜಾರೋಹಣ ಮಾಡುತ್ತಿದ್ದರೆ ಅವರ ಒತ್ತಾಯದ ಭಾಷಣ ಭೀಕರತೆಗೆ ಬಲಿಯಾದದ್ದು ಅನಿವಾರ್ಯ ಪ್ರೇಕ್ಷಕರಾದ ಶಾಲಾ ಮಕ್ಕಳು! ಡೆಲ್ಲಿಯಲ್ಲಂತೂ ಪರಿಸ್ಥಿತಿ ಇನ್ನೂ ಕರುಣಾಜನಕವಾಗಿತ್ತು,ಬಾಲವಿಲ್ಲದ (ಸ್ವಂತ ಬಲದ ಮೇಲೆ ನಾಲ್ಕು ಮಾತಾಡುವ ಬಲವೂ ಇಲ್ಲ!) ಸಿಂಗ ಅದ್ಯಾರೋ ಬರೆದು ಕೊಟ್ಟ ಭಾಷಣ ಕುಟ್ಟುತ್ತಿದ್ದರೆ ಅಪರೂಪಕ್ಕೆ ಎಡೆಬಿಡದೆ ಸುರಿದ ದೆಹಲಿ ಮಳೆಯಲ್ಲಿ ಒತ್ತಾಯದಿಂದ ಕೂಡಿ ಹಾಕಲ್ಪಟ್ಟ ಮಕ್ಕಳೆಲ್ಲ ಕಂಗಾಲಾಗಿದ್ದವು.ಒಂದೆಡೆ ಮುಗಿಲ ಮಳೆ-ಇನ್ನೊಂದೆಡೆ ಅದಕ್ಕಿಂತಲೂ ಭೀಕರವಾದ ಭಾಷಣದ ಮಳೆ! ಮಕ್ಕಳು ನಿಜಕ್ಕೂ ತೋಯ್ದು ತೊಪ್ಪೆಯಾಗಿದ್ದವು.

ಸುತ್ತಲೂ ಭ್ರಷ್ಟಾಚಾರ-ಜಾತೀಯತೆ-ಹೊಲಸು ರಾಜಕೀಯ-ಸ್ವಜನ ಪಕ್ಷಪಾತ ಸಾಮಾನ್ಯ ಜನರನ್ನ ಹತಾಶರನ್ನಾಗಿಸುತ್ತಿರುವಾಗ ಈ ಹುಸಿ ಆಚರನೆಗಳನ್ನ ಸಾರ್ವಜನಿಕ ಖಜಾನೆಯ ಖರ್ಚಿನಲ್ಲಿ ನಿಜಕ್ಕೂ ನಡೆಸಲೇ ಬೇಕ? ಪ್ರಜಾಪ್ರಭುತ್ವ ಶ್ರೇಷ್ಠ ಅಂದ ಮಾತ್ರಕ್ಕೆ ಅದರಲ್ಲಿ ಅಹಿತಕಾರಿ ಅಂಶಗಳೇ ಇಲ್ಲ ಅಂತೇನಿಲ್ಲ.ಬ್ರಿಟನ್ ನಲ್ಲಿ ಇತ್ತೀಚಿಗೆ ಭುಗಿಲೆದ್ದ ನಾಗರೀಕ ದಂಗೆಯೆ ಅದಕ್ಕೆ ಸಾಕ್ಷಿ,ಇಂದು ಬ್ರಿಟನ್-ನಾಳೆ ಖಂಡಿತ ಭಾರತ.

ಇದಕ್ಕೆಲ್ಲ ತುಪ್ಪ ಸುರಿಯುವಂತೆ ಸರಕಾರ ಇಂದು ಸ್ವಯಂ ಸ್ಪೂರ್ತಿಯಿಂದ ದೇಶದ ಬಹುಪಾಲು ಮಂದಿ 'ಜನ ಲೋಕಪಾಲಕ್ಕೆ' ಆಗ್ರಹಿಸಿ ಅಣ್ಣಾಹಜಾರೆಯ ನೇತೃತ್ವದಲ್ಲಿ ಎಬ್ಬಿಸಿರುವ ಶಾಂತ ಸಮರ ಕಹಳೆಗೆ ದಬ್ಬಾಳಿಕೆಯ ಉತ್ತರ ಕೊಟ್ಟಿದೆ.ಜನ ಮೆಚ್ಚಿದ್ದು ಸರಕಾರಕ್ಕೆ ಬೇಡ-ಸರಕಾರಕ್ಕೆ ಹುಚ್ಚಿರೋದರಲ್ಲಿ ಜನಕ್ಕೆ ಯಾವ ಆಸಕ್ತಿಯೂ ಇಲ್ಲ! ಇನ್ನು ಆಳುವ ಪಕ್ಷದ ಸಾಕಿದ ನಾಯಿಗಳಂತಹ ಮನೀಶ್ ತಿವಾರಿ,ದಿಗ್ವಿಜಯ್ ಸಿಂಗ್,ಅಭಿಷೇಕ್ ಮನು ಸಿಂಘ್ವಿಯಂತಹ ಮಂಗ್ಯಾಗಳು ಅಣ್ಣಾ ಸಾಚಾತನ-ಅವರ ಹೋರಾಟಕ್ಕೆ 'ವಿದೇಶಿ' (?) ಕುಮ್ಮಕ್ಕು,ಧನಸಹಾಯದ ಸ್ವಕಲ್ಪಿತ ಸುದ್ದಿಯನ್ನೆ ಪದೆಪದೆ ಊಳಿಟ್ಟು ತಮ್ಮ ಅರ್ಧ 'ವಿದೇಶಿ' ನಾಳಿನ ನಾಯಕನ ಕಾಲನ್ನ ಇವತ್ತೆ ನೆಕ್ಕುತ್ತ ತಮ್ಮದೆ ಧಾಟಿಯಲ್ಲಿ ಓಲೈಸುವ ಕಸರತ್ತು ನಡೆಸುತ್ತಿದ್ದಾರೆ.

ಕ್ಯೂ ನಾ ಹೋ ಮೇರ ಭಾರತ್ ಮಹಾನ್...

Monday, August 15, 2011

ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿವಿ ಗುಂಡಪ್ಪ, ಕುವೆಂಪು, ಎಂ ವಿ ಸೀತಾರಾಮಯ್ಯ, ಶಿವರಾಮ ಕಾರಂತ, ಅನಕೃ , ಮತ್ತು ಜೆಪಿ ರಾಜರತ್ನಂ

ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿವಿ ಗುಂಡಪ್ಪ, ಕುವೆಂಪು, ಎಂ ವಿ ಸೀತಾರಾಮಯ್ಯ, ಶಿವರಾಮ ಕಾರಂತ, ಅನಕೃ , ಮತ್ತು ಜೆಪಿ ರಾಜರತ್ನಂ

Sunday, August 14, 2011

ಯಾರಿಗೆ ಬಂತು? ಎಲ್ಲಿಗೆ ಬಂತು?





ಸ್ವಾತಂತ್ರ ಯಾರಿಗೆ ಬಂದಿದೆ? ಎಂದು ಮುಂಜಾನೆ ಕಣ್ತೆರೆವಾಗ ನಾನೂ ಕಣ್ ಕಣ್ ಬಿಡುತ್ತ ತಲೆ ತುರಿಸಿಕೊಂಡೆ.ಹಾ ಯುರೇಕ....ಕ'ಮಲ'ಳ ಲಂಗ ಜಳಜಳ ಎಂದು ವಿಧಾನಸೌಧದಿಂದ ಹಿಡಿದು ಪರಪ್ಪನ ಅಗ್ರಹಾರದವರೆಗೆ (ಎರಡೂ ಕಲ್ಲು ಕಟ್ಟಡಗಳೇ!) ಸಾಮ್ರಾಜ್ಯ ವಿಸ್ತರಿಸಿಕೊಂಡಿರುವ 'ರಸಿಕ'ರೇಣು-ವರ್ತೂರು ಪ್ರಕಾಶ-ಸರ್ವರ್ ಸೋಮರಂತಹ 'ಕಟ್ಟಾ'ಳುಗಳಿಗೆ ಸ್ವಾತಂತ್ರ ಬಂದಿದೆ! ಆದರೆ ಅತ್ತ ಸವಣೂರಿನಂತಹ ಊರುಗಳಲ್ಲಿ ಇನ್ನೂ ಅಂತ್ಯಜ 'ಮಲ'ವನ್ನ ತಲೆಮೇಲೆ ಹೊರುತ್ತ,ಬೇಸತ್ತಾಗ ಸುರಿದುಕೊಳ್ಳುತ್ತಾ ಹಾಗೆ ಇದ್ದಾನೆ. ಮೂರ್ ಮೂರ್ ದಿನಕ್ಕೆಲ್ಲ ಬಂಡಾಯ ಸಾರಿ ಮಾಡೊ ಕೆಲಸ ಬಿಟ್ಟು ರೆಸಾರ್ಟ್ ಸೇರಿ ಅಲ್ಲಿಂದ ಹೊರ ಬಂದ ತಕ್ಷಣ ಮಂತ್ರಿಗಿರಿ ಅನಾಯಾಸವಾಗಿ ಪಡೆದು ಅರ್ಜೆಂಟ್ 'ರೆಡ್ ಲೈಟ್'ಸಚಿವರಾಗಿ ಕೆಡೋಗಾಲಕ್ಕೆ ಸಿರಿ ಅಂದವರ ಹಾಗೆ ನಡುರಾತ್ರೆಯಲ್ಲೂ ಹಿಂದೆ ಮೂರು,ಮುಂದೆ ಮೂರು ಗೂಟದ ಕಾರುಗಳನ್ನ ಸೈರನ್ ಗಲಭೆ ಸಹಿತ ಓಡಿಸಿ ಜನರ ನೆಮ್ಮದಿಗೆ ಬೆಂಕಿ ಇಟ್ಟವರಿಗೆ ಸ್ವಾತಂತ್ರ ಬಂದಿದೆ!

ತಮ್ಮೆಲ್ಲರ ಖಾಸಗಿ ಖಜಾನೆಯ ಕಾಮನ್'ವೆಲ್ತ್'ನ್ನ ಮುಲಾಜಿಲ್ಲದೆ ಕ್ರೀಡಾ ಮನೋಭಾವದಿಂದಲೆ ಸಮಾನವಾಗಿ (ಕಡೆಪಕ್ಷ ಅಲ್ಲಾದರೂ ಸಮಾನತೆಯಿದೆ,ಸಂತೋಷ!) ಹಂಚಿಕೊಂಡ ಕಲ್ಮಾಡಿಯಿಂದ ಹಿಡಿದು ಹುಟ್ಟಿನ ಕಾರಣದಿಂದಷ್ಟೇ 'ಗಾಂಧಿ'ಗಿರಿ ಮಾಡೋವವರವರೆಗೆ ಎಲ್ಲರಿಗೂ ಭೇದ-ಭಾವವಿಲ್ಲದೆ ಸೌತ್ ಬ್ಲಾಕಿನಿಂದ-ತಿಹಾರಿನ ಬ್ಯಾರಕ್ಕಿನ ಕೊನೆ ಮೂಲೆಯಲ್ಲಿ ಕುಳಿತ 'ರಾಜಾ'ಧಿರಾಜರಿಗೆಲ್ಲ ಸ್ವತಂತ್ರ ಬಂದಿದೆ!


ತನ್ನ ಅಂಗೈ ಅಗಲದ ಹೊಟ್ಟೆಪಾಡಿನ ಮೂಲಾಧಾರ ಭೂಮಿಯನ್ನ ಉಳಿಸಿಕೊಳ್ಳಲು ಬಡ ಬೋರೆಗೌಡ ಮಾತ್ರ ಆಳುವವರ ಗುಂಡಿಗೆ ಗುಂಡಿಗೆಯೋಡ್ದುತ್ತಲೆ ಇದ್ದಾನೆ (ಅನಿವಾರ್ಯವಾಗಿ!).ದೇಶ ಇಬ್ಭಾಗವಾಗಿ ನಮ್ಮ ಸಂಸ್ಕೃತಿಯ ತುಣುಕು ಇನ್ಯಾರೊ ಅರಿವುಗೇಡಿಗಳ ಪಾಲಾದ ೬೪ರ ಈ ಸಂಭ್ರಮಕ್ಕೆ ಹೌದು, ಬೆಚ್ಚಗೆ ಕಂಬಳಿ ಹೊದ್ದುಕೊಂಡ 'ಗೂಟದ' ಕಾರಿನ ಕೆಲವು ಕರಿ ಸಾಹೇಬರಿಗಂತೂ ನಿಜಕ್ಕೂ ಸ್ವಾತಂತ್ರ ಬಂದಿದೆ ಅನ್ನುವ ಜ್ಞಾನೋದಯ ಕಡೆಗೂ ಕಾಮೋಡಿನ ಮೇಲೆ ಆಯ್ತು?!.

ಲಾಭವೆ ನನ್ನುಸಿರು...?!




ಕಾಸಿದ್ದರೆ ಕೈಲಾಸ
ಕಾಲಿದ್ದವರಂತೆ ಇಲ್ಲದರದ್ದೂ ಇದೇ ವಿಲಾಸ...
ಜಗತ್ತು ಸದಾ ಎತ್ತರದಲ್ಲಿರುವವರ ಪದತಲದ ಗುಲಾಮ,
ಓಲೈಕೆ ಹಲ್ಕಿರಿಕೆ....ಮೇಲೇರಿದವ ಎದುರಾದಾಗಲೆಲ್ಲ
ಹಚ್ಚುತ್ತ ಕೃತಕ ಪ್ರೀತಿಯ ಮುಲಾಮ/
ಹಿಂದೆಯೂ ಉಳ್ಳವರ ಬಾಲವಾಗಿ
ಇಲ್ಲದವರ ತಲೆಭಾರವಾಗಿ....
ಮುಖನೋಡಿ ಮಣೆ ಹಾಕುತ್ತಲೇ ಇತ್ತು
ಈ ಜಗತ್ತು,
ಲಾಭದ ದೂರಾಲೋಚನೆಯ ಡೊಗ್ಗು ಸಲಾಮ...
ಇದು ಹಾಕುತ್ತಲೇ ಇದೆ
ಹಾಕುತ್ತಲೇ ಇರುತ್ತದೆ ನೋಡಿ
ಇದೆ ಜಗದ ಹಣೆಬರಹ...!
ಇದೊಂಥರ ಸಭ್ಯ ಹರಾಮ?!//

೬೪ ಯಾಕಾಯ್ತು? ೬೩ ಆಗಿತ್ತು ಅದಕ್ಕೆ?!


ನಮ್ಮ 'ಭಾರ'ತಕ್ಕೆ ೬೪ರ ಮರು ಹುಟ್ಟಿನ ಹುಸಿ ಸಂಭ್ರಮ! ನಾನೂ ಇದೇ ತಿಂಗಳಲ್ಲಿ ಕಣ್ಣು ಬಿಟ್ಟವನಾದ್ದರಿಂದ ನನಗೂ ಇದರ ಸಂಭ್ರಮದಲ್ಲಿ ಶರೀಕನಾಗುವ ಹಂಬಲ.ಆದರೆ ಸುಮ್ಮನೆ ಕೂತರೂ ಕೂದಲು-ಉಗುರು ಕಳೆಯಂತೆ ಬೆಳೆಯೋ ಹಾಗೆ ವಯಸ್ಸಂತೂ ಆಗೇ ಆಗುತ್ತದೆ ಎನ್ನುವಂತೆ ;ಕೇವಲ ಕಾಲಚಕ್ರದ ಅರೆ ಮತ್ತೊಮ್ಮೆ ತಿರುಗಿದ್ದಕ್ಕೆ ವರ್ಷ ಇನ್ನೊಂದಾಯ್ತು ಅಂತ ಸಂತೋಷಪಡಲೇ? ಇಲ್ಲ ನಮ್ಮೆಲ್ಲರ ತಾಯಿ ಭಾರತಿಯ ಎದೆಯನ್ನ ಮನಸೋ ಇಚ್ಛೆ ಬಗೆದು ಮಗುಮ್ಮಾಗಿ ತಮ್ಮ ತಿಜೋರಿ ತುಂಬಿ ಕೊಂಡ ಸ'ಗಣಿ' ತಿಂದವರನ್ನ ನೋಡಿ ಬೀಗಲೇ? ಇಲ್ಲ ,೨ಜಿ-೩ಜಿ ಎಂದು ಎಲ್ಲರನ್ನೂ ಜೀ ಎಂದೇ ಕರೆಯುತ್ತಾ ಅವಳೊಡಲಿಗೆ ಕಾನೂನು ಬದ್ಧವಾಗಿಯೇ ಕನ್ನ ಹಾಕುತ್ತಿರುವ ಖದೀಮರನ್ನ ಕಂಡು ಎದೆಯುಬ್ಬಿಸಲೆ? ಏನೊಂದೂ ಸ್ಪಷ್ಟವಾಗದೆ ಕೆಕರುಮೆಕರಾಗಿದ್ದೇನೆ! ಗೊಂದಲ ಜಾರಿಯಲ್ಲಿದೆ...

Saturday, August 13, 2011

ಕೊಳ್ಳುಬಾಕತನದ ಸಂಸ್ಕೃತಿ

ಇತ್ತೀಚೆಗೆ ನನಗೊಂದು ಫೋನ್ ಬಂದಿತ್ತು. ದೂರದ ಅಮೆರಿಕೆಯಿಂದ. ಫೋನ್ ಮಾಡಿದ್ದು ರಾಧಿಕಾ. ನನ್ನ ಬಹಳ ಹಳೆಯ ವಿದ್ಯಾರ್ಥಿನಿ. ಆಕೆ ಮದುವೆಯಾಗಿ ಅಮೆರಿಕೆಗೆ ಹೋಗಿ ಅಲ್ಲೇ ಉಳಿದಿದ್ದ ವಿಷಯ ತಿಳಿದಿತ್ತು. ಆಕೆ ನನಗೆ ಎಂದೂ ಮೊದಲು ಫೋನ್ ಮಾಡಿಯೇ ಇರಲಿಲ್ಲ. ಅವಳ ವಿಷಯವೇ ಮರೆತು ಹೋಗಿತ್ತು. ಈ ಫೋನ್ ಕರೆ ಮತ್ತೆ ಸೇತುವೆಯನ್ನು ಕಟ್ಟಿತು. ರಾಧಿಕಾ ಸುಮಾರು ನಲವತ್ತೈದು ನಿಮಿಷ ಮಾತನಾಡಿರಬೇಕು. ಆಕೆ ಹೇಳಿದ್ದು ಸಿನಿಮಾ ನೋಡಿದ ಹಾಗೆ ಕಣ್ಣಿಗೆ ಕಟ್ಟಿದೆ.

ರಾಧಿಕಾಳ ಗಂಡ ಎಂಜಿನಿಯರ್. ಒಳ್ಳೆಯ ಮನುಷ್ಯ, ಒಳ್ಳೆಯ ಕೆಲಸ. ವ್ಯಾಪಾರ ನಗರಿಯಾದ ನ್ಯೂಯಾರ್ಕ್‌ನಲ್ಲಿ ಕೆಲಸ. ಮನೆ ಕೂಡ ದೂರವಿರಲಿಲ್ಲ. ಕೈತುಂಬ ಸಂಬಳ, ಒಬ್ಬಳೇ ಮಗಳು, ಬ್ಯಾಂಕಿನಲ್ಲಿ ಸಾಕಷ್ಟು ಹಣ. ಜೀವನ ಚೆನ್ನಾಗಿ ನಡೆಯುತ್ತಿತ್ತು. ರಾಧಿಕಾ ಕೆಲಸ ಮಾಡದೇ ಗೃಹಿಣಿಯಾಗಿ ಸಂತೋಷದಿಂದ ಇದ್ದವಳು.

ಎಲ್ಲವೂ ಒಂದೇ ರೀತಿ ಇದ್ದರೆ ಸಂಸಾರ ಎಂದು ಏಕನ್ನಬೇಕು? ಮೂರು ವರ್ಷಗಳ ಹಿಂದೆ ಅಮೆರಿಕೆಯ ಹಣಕಾಸಿನ ಲೆಕ್ಕಾಚಾರವೆಲ್ಲ ತಲೆಕೆಳಗಾಗಿ ಸಮಾಜ ವ್ಯವಸ್ಥೆಯೇ ಅಸ್ತವ್ಯಸ್ತವಾಯಿತು. ಕಂಡರಿಯದ ಹಣಕಾಸಿನ ಮುಗ್ಗಟ್ಟು ತಲೆದೋರಿತು. ಕೆಲಸಗಳು ಕಳೆದು ಹೋದವು. ಮನೆಗಳು ಮಾರಾಟಕ್ಕೆ ನಿಂತವು, ಕೊಂಡುಕೊಳ್ಳುವವರಿಲ್ಲದೇ ಖಾಲಿ ಬಿದ್ದವು. ಈ ವಿಷಮ ಪರಿಸ್ಥಿತಿಯಲ್ಲಿ ರಾಧಿಕಾಳ ಗಂಡನ ಕೆಲಸ ಹೋಯಿತು.

ಮನೆಯಲ್ಲಿ ಆತನೊಬ್ಬನೇ ಗಳಿಸುವವನು. ಆರೆಂಟು ತಿಂಗಳು ಉಳಿತಾಯದ ಮೇಲೆಯೇ ಜೀವನ ನಡೆಯಿತು. ಕೂಡಿಟ್ಟ ಹಣ ಜಾಲರಿಯಲ್ಲಿಯ ನೀರಿನಂತೆ ಸೋರಿಹೋಗುತ್ತಿತ್ತು. ಎಲ್ಲಿ ಹೋದರೂ ಕೆಲಸ ದೊರಕಲಿಲ್ಲ. ಆತ ಎಂಥ ಕೆಲಸಕ್ಕೂ ಸಿದ್ಧನಾದ. ಯಾವುದೂ ಸಿಗಲಿಲ್ಲ. ಗಂಡ ಹೆಂಡತಿ ಹೌಹಾರಿದರು. ಭಾರತಕ್ಕೆ ಬಂದರೆ ಯಾವ ಮುಖ ತೋರಿಸುವುದು? ಇಲ್ಲಿಯಾದರೂ ಅವಕಾಶ ಬೇಕಲ್ಲವೇ?

ಇಬ್ಬರೂ ಕುಳಿತು ಚಿಂತೆ ಮಾಡಿದರು. ಎಲ್ಲವನ್ನೂ ಖಾಲಿ ಮಾಡಿ ಭಾರತಕ್ಕೆ ಮರಳಿಬಿಡುವುದೇ? ಇಲ್ಲ, ಪರಿಸ್ಥಿತಿಯನ್ನು ಎದುರಿಸಿ ನಿಂತು ಹೋರಾಡುವುದೇ? ಎರಡನೆಯದೇ ಸರಿ ಎಂದು ತೀರ್ಮಾನಿಸಿದರು. ಮನೆಯ ಪರಿಸ್ಥಿತಿ ದಿನದಿನಕ್ಕೆ ಹದಗೆಡುತ್ತಿತ್ತು. ಮನೆಯ ವಿದ್ಯುಚ್ಛಕ್ತಿ ಬಿಲ್ ಕಟ್ಟದಿದ್ದುದರಿಂದ ಸರಬರಾಜು ಬಂದಾಗಿತ್ತು. ಆಗಲೇ ಡಿಸೆಂಬರ್ ತಿಂಗಳು ಕಾಲಿಡುತ್ತಿತ್ತು. ಹೊರಗಡೆ ತುಂಬ ಚಳಿ, ಶೂನ್ಯ ತಾಪಮಾನದ ಹತ್ತಿರ ಉಷ್ಣತೆ.

ವಿದ್ಯುತ್ ಇಲ್ಲದ ಕಾರಣ ಮನೆಯನ್ನು ಕಾಯಿಸುವ ಉಪಕರಣ ಉಪಯೋಗಿಸುವಂತಿಲ್ಲ. ಪಶ್ಚಿಮದ ಮೂಲೆಯ ಕೊಠಡಿ ಇದ್ದುದರಲ್ಲೇ ಬೆಚ್ಚಗಾಗಿದ್ದುದು. ಪುಟ್ಟ ಮಗುವನ್ನು ಕರೆದುಕೊಂಡು ಮೂವರೂ ಅದೇ ಕೋಣೆಯಲ್ಲಿ ಇರತೊಡಗಿದರು. ರಾಧಿಕಾ ತಾನು ಕೊಂಡಿದ್ದ ಆಭರಣಗಳನ್ನು ಮಾರಿದಳು, ಮನೆಯ ಅಲಂಕಾರಕ್ಕೆ ಪ್ರೀತಿಯಿಂದ ಕೊಂಡಿದ್ದ ಸೋಫಾ ಸೆಟ್ಟು, ರತ್ನಗಂಬಳಿಯನ್ನು ಕೊಟ್ಟಾಯಿತು. ಗಂಡ-ಹೆಂಡತಿ ಇಬ್ಬರೂ ಕುಳಿತು ಪಟ್ಟಿ ಮಾಡಿದರು. ನಮಗೆ ತೀರಾ ಅವಶ್ಯಕವಾದ ವಸ್ತುಗಳಾವವು? ಯಾವ ವಸ್ತುಗಳು ಇಲ್ಲದಿದ್ದರೂ ನಡೆಯುತ್ತದೆ?

ಯಾವ ಅನಾವಶ್ಯಕ ಖರ್ಚುಗಳನ್ನು ನಿಲ್ಲಿಸಬೇಕು? ಪಟ್ಟಿ ತಯಾರಾದ ಮೇಲೆ ಅವರಿಗೇ ಆಶ್ಚರ್ಯವಾಯಿತು. ತಾವು ಮೊದಲೇ ಹೀಗೆ ಯೋಚಿಸಿದ್ದರೆ ಎಷ್ಟೊಂದು ಉಳಿಸಬಹುದಿತ್ತಲ್ಲ ಎಂದು. ತಮ್ಮ ಪಟ್ಟಿಯಂತೆಯೇ ಅಗತ್ಯಗಳನ್ನು ಕಡಿಮೆ ಮಾಡಿ ಬದುಕತೊಡಗಿದರು. ನಿಧಾನವಾಗಿ ಅದೇ ಜೀವನ ಪದ್ಧತಿಯಾಯಿತು. ಪರಿಚಯದ ಗುಜರಾತಿ ವ್ಯಾಪಾರಸ್ಥರು ರಾಧಿಕಾಳಿಗೆ ತಮ್ಮ ಅಂಗಡಿಯಲ್ಲಿ ಕ್ಯಾಶಿಯರ್ ಕೆಲಸ ಕೊಟ್ಟರು. ಸ್ವಲ್ಪ ಜೀವನ ಹಗುರಾಯಿತು. ಕೆಲ ತಿಂಗಳುಗಳ ನಂತರ ಆಕೆಯ ಗಂಡನಿಗೂ ಕೆಲಸ ದೊರಕಿತು. ಮತ್ತೆ ಜೀವನದ ರೈಲು ಹಳಿಯ ಮೇಲೆ ಬಂತು.

ಈಗ ಅವರಿಗೆ ಕಳೆದ ಎರಡು ವರ್ಷಗಳಿಂದ ತಮ್ಮ ಅವಶ್ಯಕತೆಗಳನ್ನು ನಿಯಂತ್ರಿಸುವುದು ಅಭ್ಯಾಸವಾಗಿದೆ. ರಾಧಿಕಾ ಹೇಳಿದಳು,  `ನೀವು ಆವಾಗ ಹೇಳುತ್ತಿದ್ದರಲ್ಲ ಸರ್, ಜೀವನಕ್ಕೆ ಎರಡೇ ಹಾದಿ. ಒಂದು ನಮ್ಮ ಅಗತ್ಯಗಳನ್ನು ಹಿಗ್ಗಿಸಿಕೊಳ್ಳುತ್ತಾ ಅವನ್ನು ತೂಗಿಸಲು ಹೆಣಗುತ್ತ ಕೊರಗುವುದು. ಇನ್ನೊಂದು, ನಮ್ಮ ಅವಶ್ಯಕತೆಗಳನ್ನು ಮಿತಿಯಲ್ಲಿರಿಸಿಕೊಂಡು ಸಂತೋಷ ಪಡುವುದು. ನಾವೀಗ ಎರಡನೆಯದನ್ನೇ ಮಾಡುತ್ತ ಸಂತೋಷದಲ್ಲಿದ್ದೇವೆ. ಇದು ತಾವೇ ನಮ್ಮ ಮನಸ್ಸಿನಲ್ಲಿ ಹಾಕಿದ ಬೀಜ ಸರ್.` ನನಗೆ ತುಂಬ ಸಂತೋಷವಾಯಿತು. ಒಳ್ಳೆಯ ಬೀಜ ಸದಾ ಒಳ್ಳೆಯ ಫಲದ ಮರಗಳನ್ನೇ ಕೊಡುತ್ತದೆ.

ನಮ್ಮ ಜೀವನದ ಬಹುಪಾಲು ಚಿಂತೆ, ಸಂಕಟಗಳು ನಮ್ಮ ಅವಶ್ಯಕತೆಗಳನ್ನು ಹೆಚ್ಚಿಸಿಕೊಳ್ಳುತ್ತ ಅವುಗಳನ್ನು ಪಡೆಯಲು ಮಾಡುವ ಒದ್ದಾಟಗಳು. ಅದಕ್ಕೇ ಗಾಂಧೀಜಿ ಹೇಳಿದರು  ನಮ್ಮಲ್ಲಿ ಎಲ್ಲರ ಅವಶ್ಯಕತೆಗಳನ್ನು ಪೂರೈಸುವಷ್ಟು ಸಾಮಗ್ರಿ ಇದೆ ಆದರೆ ಎಲ್ಲರ ಆಸೆಬುರುಕತನವನ್ನು ಪೂರೈಸುವಷ್ಟಿಲ್ಲ . ಈ ಕೊಳ್ಳುಬಾಕತನದ ಸಂಸ್ಕೃತಿಯ ಕಬಂಧಬಾಹುಗಳಿಂದ ಪಾರಾಗುವುದು ಬಹುಮುಖ್ಯ

krupe: Prajavani - 20th July 2011

Tuesday, August 9, 2011

ಕುಂಬಾರಕಿ ಈಕಿ ಕುಂಬಾರಕಿ

ಕುಂಬಾರಕಿ ಈಕಿ ಕುಂಬಾರಕಿ ಈ
ಬ್ರಂಹಾಂಡವೆಲ್ಲ ತುಂಬಿಕೊಂಡಿರುವ

ಚಿನ್ನ ಎಂಬುವ ಮಣ್ಣನು ತರಿಸಿ
ತನು ಎಂಬುವ ನೀರನು ಹಣಿಸಿ
ಮನ ಎಂಬುವ ಹುದಲನು ಕಲಸಿ
ಗುಣ ಎಂಬುವ ಸೂಸನು ಹಾಕಿ

ಭಕ್ತಿ ಎಂಬುವ ತಿಗರಿಯ ಮಾಡಿ
ಧ್ಯಾನ ಎಂಬುವ ಬಡಗಿಯ ಊರಿ
ಮುನ್ನೂರರವತ್ತ ಸುತ್ತನು ತಿರಗಿ
ಗಡಗಿ ತಯಾರು ಮಾಡೂವಾಕಿ

ಆಚಾರ ಎಂಬುವ ಆವಿಗೆ ಮುಚ್ಚಿ
ಅರಿವು ಎಂಬುವ ಬೆಂಕಿಯ ಹಚ್ಚಿ
ಸಾವಿರ ಕೊಡಗಳ ಸುಟ್ಟು ಇಂದು
ಸಂತಿಗಿ ಓಯ್ದು ಮಾರುವಾಕಿ

ಮೂರು ಕಾಸಿಗೊಂದು ಕುಡಕಿಯ ಮಾರಿ
ಆರು ಕಾಸಿಗೊಂದು ಗಡಗಿಯ ಮಾರಿ
ವಸುಧೆಯೊಳು ಶಿಶುನಾಳಧೀಶನ ಮುಂದೆ
ಧ್ಯಾನದ ಮುಗಿಯೊಂದು ಇಡುವಾಕಿ

-ಶಿಶುನಾಳ ಶರೀಫ್

(ಕಾರಂಜಿ ಸಿನಿಮಾದಲ್ಲಿ ಈ ಹಾಡು ತುಂಬ ಸೊಗಸಾಗಿ ಮೂಡಿಬಂದಿದೆ.)

Monday, August 8, 2011

ಪ್ರವಾಸಿ ಮಂದಿರ

ಇಬ್ರಾಹಿಂ ಎಂಬುವನು ಬಾಲ್ಕ ದೇಶದ ರಾಜನಾಗಿದ್ದ. ಅವನು ಮಹಾಶೂರ. ಅವನ ವಿರುದ್ಧ ಹೋರಾಡಲು ಎಲ್ಲರೂ ಹೆದರುತ್ತಿದ್ದರು.ಹೋರಾಟ ಮಾಡುವುದು ದೂರವಿರಲಿ, ಅವನೇ ತಮ್ಮ ರಾಜ್ಯದ ಮೇಲೆ ದಾಳಿ ಮಾಡದಿದ್ದರೆ ಸಾಕು ಎಂದು ಹೆದರಿ ಸುಮ್ಮನಿದ್ದರು.

ಅವನ ಐಶ್ವರ್ಯಕ್ಕೆ ಮಿತಿಯೇ ಇರಲಿಲ್ಲ. ಅವನಿಗೆ ಜೀವನದ ಸಕಲ ಸೊಗಸುಗಳೂ ಬೇಕು. ಅಷ್ಟೊಂದು ಹಣವಿದ್ದ ಮೇಲೆ ಸೊಗಸುಗಳು ಬಂದು ಬೀಳುವುದಕ್ಕೆ ಯಾವ ತಡೆ? ಅಧಿಕಾರ. ಅಂತಸ್ತು, ಶೌರ್ಯ, ಸಂಪತ್ತು ಎಲ್ಲ ಸೇರಿಕೊಂಡು ಅವನ ತಲೆ ತಿರುಗಿಸಿಬಿಟ್ಟಿದ್ದವು. ಅಹಂಕಾರ ಕ್ಷಣಕ್ಷಣಕ್ಕೂ ಏರುತ್ತಿತ್ತು. ಆದರೂ ಅವನ ಹೃದಯದಲ್ಲಿ ಏಲ್ಲೋ ತಾನು ಏಕಾಕಿ ಎಂಬ ಭಾವನೆ ಸಣ್ಣದಾಗಿ ಮೊಳೆಯುತ್ತಿತ್ತು.

ಒಂದು ದಿನ ರಾಜನು ದರ್ಬಾರು ಮುಗಿಸಿ ಅರಮನೆಗೆ ಬಂದು ವಿಶ್ರಾಂತಿಗೆಂದು ತನ್ನ ಕೊಠಡಿ ಕಡೆ ಹೊರಟಾಗ ಅಲ್ಲಿ ಒಬ್ಬ ಫಕೀರನನ್ನು ಅರಮನೆಯ ಸೇವಕರು ಕರೆದುಕೊಂಡು ಬಂದರು. ಆತನ ಹರಕು ಬಟ್ಟೆ, ಉದ್ದಗಡ್ಡ, ಕಂಕುಳಲ್ಲಿದ್ದ ಹರಕು ಚಾಪೆ ಇವುಗಳನ್ನು ನೋಡಿ `ಇವನನ್ನೇಕೆ ಇಲ್ಲಿ ಕರೆದುಕೊಂಡು ಬಂದಿರಿ?` ಎಂದ ಕೇಳಿದ ಇಬ್ರಾಹಿಂ.

`ಅವನ್ನೇನು ಕೇಳುತ್ತೀರಿ? ನಾನೇ ಹೇಳುತ್ತೇನೆ. ನನಗೂ ತಿರುಗಿ, ತಿರುಗಿ ಸಾಕಾಗಿ ಹೋಗಿದೆ. ಈ ಪ್ರವಾಸಿಗೃಹದಲ್ಲಿ ಸ್ವಲ್ಪ ಹೊತ್ತು ನಿದ್ರೆ ಮಾಡಬೇಕೆಂದು ಬಂದೆ` ಎಂದವನೇ ಫಕೀರ ಗೋಡೆಯ ಪಕ್ಕ ತನ್ನ ಹರಕು ಚಾಪೆಯನ್ನು ಹಾಸಿಬಿಟ್ಟು ಮಲಗಿಯೇ ಬಿಟ್ಟ. ಇವನ ನಡತೆಯನ್ನು ನೋಡಿ ಹೌಹಾರಿದ ರಾಜ. `ಏ, ಇದು ಪ್ರವಾಸಿ ಗೃಹವೇನೋ? ಇದು ನನ್ನ ಅರಮನೆ. ಏಳು ಮೇಲೆ, ಯಾರಲ್ಲಿ, ಇವನನ್ನು ಆಚೆ ತಳ್ಳಿ` ಎಂದು ಕೋಪದಿಂದ ಕೂಗಿದ.

ಆಗ ಆ ಫಕೀರ ಹೇಳಿದ,  `ಮಹಾರಾಜ ಕೋಪ ಬೇಡ. ನನ್ನ ಪ್ರಶ್ನೆಗಳಿಗೆ ದಯವಿಟ್ಟು ಉತ್ತರಿಸು. ನೀನು ಬರುವುದಕ್ಕಿಂತ ಮೊದಲು ಈ ಅರಮನೆಯಲ್ಲಿ ಯಾರಿದ್ದರು?`
`ನನ್ನ ತಂದೆ, ಹಿಂದಿನ ಮಹಾರಾಜ` ಎಂದ ರಾಜ
 `ಈಗ ನಿಮ್ಮ ತಂದೆ ಎಲ್ಲಿದ್ದಾರೆ?`
 `ಅವರು ಕಾಲವಾಗಿ ಇಪ್ಪತ್ತು ವರ್ಷವಾಯಿತು.`
 `ನಿಮ್ಮ ತಂದೆಗೂ ಹಿಂದೆ ಈ ಅರಮನೆಯಲ್ಲಿ ಯಾರಿದ್ದರು?`
 `ನನ್ನ ಅಜ್ಜ, ಮತ್ತಾರು ಇದ್ದಾರು ಇಲ್ಲಿ?` ರಾಜನಿಗೆ ಕೋಪ ಏರುತ್ತಿತ್ತು.
 `ಈಗ ಅವರು ಎಲ್ಲಿದ್ದಾರೆ?`

 `ಅವರು ತೀರಿ ಹೋಗಿ ಅದೆಷ್ಟೋ ಕಾಲವಾಯಿತು, ಆ ವಿಚಾರ ಈಗೇಕೆ?`
 `ಇರಿ, ಇರಿ, ಕೋಪ ಬೇಡ. ನಿಮ್ಮಜ್ಜನಿಗಿಂತ ಮೊದಲು ಯಾರಿದ್ದರು ಅರಮನೆಯಲ್ಲಿ?`  `ಅಯ್ಯೋ ಫಕೀರ, ಈ ಅರಮನೆ ತಲೆತಲಾಂತರದಿಂದ ನಮಗೆ ಬಂದದ್ದು. ನಮ್ಮಜ್ಜನಿಗಿಂತ ಮೊದಲು ನಮ್ಮ ಮುತ್ತಜ್ಜ ವಾಸವಾಗಿದ್ದರು.`
`ಈಗ ಅವರು ಎಲ್ಲಿದ್ದಾರೆ?`  ಕೇಳಿದ ಫಕೀರ.
Krupe: Prajavani - 14th July 2011

Saturday, August 6, 2011

ಕಾಸರಗೋಡಿನ ಕನ್ನಡಿಗರ ತ್ಯಾಗ ಮತ್ತು ಬಲಿದಾನಗಳನ್ನು ಕರ್ನಾಟಕ ಮರೆತಿದೆಯೇ..!?

”ಕಾಸರಗೋಡು, ಕರ್ನಾಟಕದ ಕನ್ಯಾಕುಮಾರಿ. ಉತ್ತರದಲ್ಲಿ ಬೆಳಗಾವಿ, ಬಳ್ಳಾರಿಗಳಂತೆ ದಕ್ಷಿಣ ಕನ್ನಡದಲ್ಲಿ ನಮ್ಮದು ಕರ್ನಾಟಕದ ಕನ್ಯಾಕುಮಾರಿ. ಕನ್ನಡನಾಡಿನ ಈ ತೆಂಕಣ ಬಾಗಿಲನ್ನು ತೆರೆದಿಟ್ಟು ಕನ್ನಡಿಗರು ಎಚ್ಚರತಪ್ಪಿ ನಿದ್ರೆ ಹೋದುದ್ದೇ ಆದರೆ ನಮ್ಮ ಜನರಿಗೂ, ನಮ್ಮ ನಾಡಿಗೂ ಅಮೂಲ್ಯವಾದ ಕನ್ನಡ ಸಂಸ್ಕೃತಿಗೂ ಪ್ರಮಾದ ಒದಗುವುದರಲ್ಲಿ ಸಂಶಯವಿಲ್ಲ. ವಿಶಾಲ ಕೇರಳ ಚಳವಳಿಯು ಆರಂಭವಾಗಿ ಹತ್ತು ವರ್ಷಗಳು ಸಂದುಹೋದವು. ದಕ್ಷಿಣ ಕನ್ನಡ, ಕೊಡಗು, ನೀಲಗಿರಿ ಜಿಲ್ಲೆಗಳು ಮಲಬಾರಿನೊಂದಿಗೆ ಜತೆಗೊಂಡು ಕೇರಳ ಸಂಸ್ಥಾನ ಅಥವಾ ಪಶ್ಚಿಮ ಪ್ರಾಂತ ಸಂಸ್ಥಾನವೊಂದು ನಿರ್ಮಾಣವಾಗಬೇಕೆಂದು ಈ ಚಳವಳಿಯು ಪ್ರಬಲವಾಗುತ್ತಾ ನಡೆದಿದೆ. ಈ ಚಳವಳಿಯ ಮರ್ಮವನ್ನು ತಿಳಿದುಕೊಂಡು ಕನ್ನಡಿಗರು ಅದನ್ನು ಸಕಾಲದಲ್ಲಿಯೇ ಪ್ರತಿಭಟಿಸದೇ ಹೋದರೆ ಸ್ವಲ್ಪಕಾಲದೊಳಗಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡಾದರೂ ಮಲಬಾರಿನವರ ಮಡಿಲಿಗೆ ಬೀಳಬೇಕಾಗಬಹುದು”
ಭಾಷಾವಾರು ಪ್ರಾಂತ್ಯ ರಚನೆಯಾಗುವುದಕ್ಕೂ ಒಂಭತ್ತು ವರ್ಷಗಳಿಗೂ ಮೊದಲೇ ಶ್ರೀಧರ ಕಕ್ಕಿಲಾಯರು ಹೇಳಿದ್ದ ಖಚಿತ ಅಭಿಪ್ರಾಯವಿದು. ಇವರು ಕಾಸರಗೋಡಿನ ಸುಪ್ರಸಿದ್ಧ ವಕೀಲರಾಗಿದ್ದರು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸಲು ಸತತ ೨೫ ವರ್ಷ ಹೋರಾಟ ಮಾಡಿದರು. ಅವರ ಜೀವಿತಾವಧಿಯವರೆಗೂ ಈ ಹೋರಾಟದಲ್ಲಿ ಸಕ್ರಿಯರಾಗಿದ್ದರು. ೧೯೪೭ರ ಡಿಸೆಂಬರ್ನಲ್ಲಿ ಕಾಸರಗೋಡಿನ ಬೋರ್ಡ್ ಹೈಸ್ಲೂಲ್ ಆವರಣದಲ್ಲಿ ೩೧ನೇ  ಕನ್ನಡ ಸಾಹಿತ್ಯ ಸಮ್ಮೇಳನ ನಡೆತು. ಈ ಸಂದರ್ಭದಲ್ಲಿ ಹೊರಬಂದ ಸ್ಮರಣ ಸಂಚಿಕೆ ‘ತೆಂಕುನಾಡು’ ಸ್ಮರಣ ಸಂಚಿಕೆಯಲ್ಲಿ ಶ್ರೀಧರ ಕಕ್ಕಿಲಾಯರ ಈ ಲೇಖನ ಪ್ರಕಟವಾಯಿತು. ಅದರ ಶೀರ್ಷಿಕೆ ‘ಕನ್ನಡ-ಮಲೆಯಾಳ ಸಮಸ್ಯೆ’
ಇದನ್ನೆಲ್ಲ ಪ್ರಸ್ತಾಪಿಸಲು ಕಾರಣವಿದೆ. ಕಾಸರಗೋಡಿಗೆ ಹೋದಾಗಲೆಲ್ಲ ನಾನು ಭೇಟಿ ಕೊಡುವ ಖಾಯಂ ಸ್ಥಳಗಳ ಸಾಲಿನಲಿಬೇಕಲ್ ಕೋಟೆ ಸೇರಿದೆ. ಇಲ್ಲಿ ಪ್ರಾಣದೇವರ ಗುಡಿಯಿದೆ. ಹೊರಭಾಗದಲ್ಲಿ ಗುಡಿ ಹೆಸರನ್ನು ಕನ್ನಡದಲ್ಲಿ ಬರೆಯಲಾಗಿದೆ. ಬೇಕಲ್ ಕೋಟೆ ನಿರ್ಮಾಣ ಮಾಡಿದ್ದು  ಕನ್ನಡಿಗ ರಾಮನಾಯಕ.  (ಟಿಪ್ಪು ಸುಲ್ತಾನ್ ಸೈನ್ಯದ  ದಂಡನಾಯಕ ( ಮೂಲತಃ ಬೇಕಲ್ ಕೋಟೆ ಕನ್ನಡ ಪ್ರದೇಶ. ಇದಕ್ಕೆ ಅನೇಕ ಕುರುಹುಗಳಿವೆ. ಕೋಟೆ ಇರುವ ಊರಿನ ಹೆಸರು ‘ಅಗಸರ ಹೊಳೆ. ಈ ಎರಡೂ ಪದಗಳು ಅಚ್ಚಗನ್ನಡ.
ಫೇಸ್ ಬುಕ್ನಲ್ಲಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಟಿಪ್ಪಣಿ ಹಾಕಿದ್ದೆ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಪತ್ರಕರ್ತ ರಮೇಶ್ ಎಸ್ ಪೆರ್ಲ (ಕೇರಳಕ್ಕೆ ಸೇರಿದ ಕಾಸರಗೋಡು ಜಿಲ್ಲೆಗೆ ಪೆರ್ಲ ಸೇರಿದೆ) ಅವರು “ನಿಮಗೆ ಕನ್ನಡಿಗರಿಗೆ ಬೇರೆ ಕೆಲಸವಿಲ್ಲ. ಮಂಗಳೂರು ಸಹ ಕೇರಳಕ್ಕೆ ಸೇರಬೇಕು” ಎಂದು ಕಾಮೆಂಟ್ ಮಾಡಿದರು  ಈ ಪ್ರತಿಕ್ರಿಯೆ ನನ್ನ ಮನಸಿಗೆ ನೋವುಂಟು ಮಾಡಿತು. ಕರ್ನಾಟಕಕ್ಕೆ ಕಾಸರಗೋಡನ್ನು ಸೇರಿಸಲು ಅಲ್ಲಿನ ಕನ್ನಡಿಗರು ಮಾಡಿದ ಹೋರಾಟ-ತ್ಯಾಗ-ಬಲಿದಾನಗಳ ಬಗ್ಗೆ ಕಿಂಚಿತ್ತು ಗೊತ್ತಿದ್ದರೂ ಇಂಥ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಈ ಪ್ರತಿಕ್ರಿಯೆಂದ ನನಗೆ ದಿಗ್ಬ್ರಮೆಯೂ ಆಗಿದೆ. ಏಕೆಂದರೆ ಕೇರಳಿಗರು ಮಂಗಳೂರು ತಮ್ಮದು ಎಂದು ಧ್ವನಿ ಎತ್ತಲು ಕಾಯುತ್ತಲೇ ಇದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕನ್ನಡನಾಡಿನ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಪತ್ರಕರ್ತರೊಬ್ಬರು ಇಂಥ ಧ್ವನಿ ಎತ್ತಿದರೆ ಆತಂಕವಾಗದೇ ಇರುತ್ತದೆಯೇ?
ಕಾಸರಗೋಡು ಕರ್ನಾಟಕದ್ದು. ಕರ್ನಾಟಕಕ್ಕೆ ಸೇರಬೇಕು ಎಂದು ಹೋರಾಟ ಮಾಡಿದವರು ಮನೆಮಾತು ತುಳು ಆಗಿದ್ದ ಕನ್ನಡಿಗರು. ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಸಂಭಸವಿಸಬಹುದಾದ ಅಪಾಯವನ್ನು ಇವರು ಶೀಘ್ರವಾಗಿ ಗ್ರಹಿಸಿದರು. ಇದರ ಪರಿಣಾಮವಾಗಿ ಕರ್ನಾಟಕ ಪ್ರಾಂತೀಕರಣ ಸಮಿತಿ ರಚನೆಯಾತು. ಶ್ರೀಉಮೇಶರಾಯರು, ಶ್ರೀಕಳ್ಳಿಗೆ ಮಹಾಬಲ ಭಂಡಾರಿ ಮೊದಲಾದವರು ಅದರ ಮುಂದಾಳತ್ವ ವಹಿಸಿದ್ದರು. ಇಷ್ಟರಲ್ಲಿ ಶ್ರೀಧರ ಕಕ್ಕಿಲಾಯರು ಮಂಗಳೂರಿನಲ್ಲಿಯೂ ವಕೀಲಿಕೆ ಮಾಡತೊಡಗಿದ್ದರು. ಇವರು ಸಮಿತಿಯ ಆಗುಹೋಗುಗಳಲ್ಲಿ ಮುಖ್ಯಪಾತ್ರ ವಹಿಸತೊಡಗಿದರು.
ಭಾಷಾವಾರು ಪ್ರಾಂತ ರಚನೆ ಸಲುವಾಗಿ ಕೇಂದ್ರ ಸರ್ಕಾರ ಫಜಲಾಲಿ ಎಂಬುವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತು. ಇದರಲ್ಲಿ ಕೇರಳದ ಕೆ.ಎಂ. ಫಣಿಕರ್ ಸದಸ್ಯರು. ಆಯೋಗದವರು ಮಂಗಳೂರಿಗೂ ಬಂದರು. ಈ ಸಂದರ್ಭದಲ್ಲಿ ಆಯೋಗದ ಮುಖ್ಯಸ್ಥ ಫಜಲಾಲಿ ಅವರಿಗೆ ಅನಾರೋಗ್ಯ. ಇವರು ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದರು. ಇದರ ಪರಿಣಾಮ ಇವರ ಗೈರುಹಾಜರಿಯಲ್ಲಿ ಕೆ.ಎಂ ಫಣಿಕರ್ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಂತಾತು.
ಬೆನೆಗಲ್ ಶಿವರಾಯರು, ಜನಾಬ್ ಎಂ.ಎಸ್. ಮೊಗ್ರಾಲ್, ಶ್ರೀವೈಕುಂಠ ಬಾಳಿಗಾ, ಕೆ.ಎಸ್.ಹೆಗ್ಡೆ, ಎಂ. ಉಮೇಶ್ ರಾವ್ ಆಯೋಗದ ಮುಂದೆ ಸಾಕ್ಷಿ ಹೇಳಿದರು. ಕಕ್ಕಿಲಾಯರು ವಾದ ಮಂಡಿಸಿದರು. ಇದನೆಲ್ಲ ಆಲಿಸುವಂತೆ ನಟಿಸುತ್ತಿದ್ದ ಕೆ.ಎಂ ಫಣಿಕರ್ ಅವರು ಕೂಡ ಸಾಕ್ಷಿ ನುಡಿದವರ ಮಾತು ಅನುಮೋದಿಸಿದರು. ‘ಚಂದ್ರಗಿರಿ ನದಿ ಉತ್ತರ ಭಾಗದ ಮೇಲೆ ಕೇರಳಿಗರಿಗೆ ಯಾವುದೇ ಹಕ್ಕು ಇಲ್ಲ’ ಎಂದರು. ಇದಕ್ಕೆ ಉದಾಹರಣೆಯಾಗಿ “ಹಿಂದೆ ‘ಚಂದ್ರಗಿರಿ ನದಿ ದಾಟಿದ ಕೇರಳದ ನಾಯರ್ ಸ್ತ್ರೀಯರು ಸಮುದಾಯದಿಂದ ಬಹಿಷ್ಕೃತರಾಗುತ್ತಿದ್ದ ಸಂಗತಿಯನ್ನೂ ಸ್ವತಃ ಉಲ್ಲೇಖಿಸಿದರು’ ಇದರಿಂದ  ಹೋರಾಟಗಾರರಿಗೆ ಕರ್ನಾಟಕಕ್ಕೆ ಸೇರಲಿದೆ ಎಂಬ ನಂಬಿಕೆ.
ನವೆಂಬರ್ ೧, ೧೯೫೬ರಲ್ಲಿ ಇವರ ನಂಬಿಕೆ ಹುಸಿಯಾತು. ಕಾಸರಗೋಡು ಪ್ರದೇಶ ಕೇರಳಕ್ಕೆ ಸೇರಿದ ಆದೇಶ ಹೊರಬಿತ್ತು. ಕಾಸರಗೋಡು ಕನ್ನಡಿಗರ ನಂಬಿಕೆಗೆ ಫಣಿಕರ್ ದ್ರೋಹ ಬಗೆದರು. ಹೋರಾಟಗಾರರು ಸುಮ್ಮನಾಗಲಿಲ್ಲ. ಕರ್ನಾಟಕ ಪ್ರಾಂತೀಕರಣ ಸಮೀತಿ ನೇತೃತ್ವದಲ್ಲಿ ಹೋರಾಟ ಮುಂದುವರೆಸಿದರು. ಶ್ರೀಧರ ಕಕ್ಕಿಲಾಯ, ದೇಶಭಕ್ತ ಎಂ ಉಮೇಶರಾಯರು, ಕಯ್ಯಾರ ಕಿಯ್ಯಣ ರೈ, ಕೆ.ಆರ್ ಕಾರಂತ, , ಶ್ರೀಕಳ್ಳಿಗೆ ಮಹಾಬಲ ಭಂಡಾರಿ ಮತ್ತು ಕಾಸರಗೋಡು ಮತ್ತು ೧೯೫೨ರಲ್ಲಿ ಕಾಸರಗೋಡು ಪ್ರದೇಶದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಬೆನಗಲ್ ಶಿವರಾಯರು ಕೂಡ ಹೋರಾಟದ ಮುಂಚೂಣಿಯಲ್ಲಿದ್ದರು. ಬೆನಗಲ್ ಶಿವರಾಯರು ಸಂಸತ್ನಲ್ಲಿಯೂ ವಿಷಯ ಪ್ರಸ್ತಾಪಿಸಿದರು. ರಾಷ್ಟ್ರನಾಯಕರೆನ್ನಿಸಿಕೊಂಡಿದ್ದ ಪ್ರಧಾನಿ ನೆಹ್ರು ಅವರೊಂದಿಗೂ ವಿಷಯ ಪ್ರಸ್ತಾಪಿಸಿ ಸಾಕಷ್ಟು ಮನವಿಪತ್ರಗಳನ್ನು ನೀಡಿದ್ದರು.
ಕಾಸರಗೋಡಿನಲ್ಲಿ ಬೃಹತ್ ಜಾಥಾ-ಸತ್ಯಾಗ್ರಹಗಳು ಆರಂಭವಾದವು. ಕಾಸರಗೋಡು ಪ್ರದೇಶದ ೨೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ತೊರೆದು ಹೋರಾಟದಲ್ಲಿ ತೊಡಗಿಸಿಕೊಂಡರು. ಎಂ. ಉಮೇಶರಾಯರ ನೇತೃತ್ವದ ಬೃಹತ್ ಸಭೆ, ಭಾಷಾವಾರು ಪಾಂತ ವಿಂಗಡಣಾ ಆಯೋಗದ ಪಕ್ಷಪಾತಿ ವರದಿ ಖಂಡಿಸಿ ನಿರ್ಣಯ ತೆಗೆದುಕೊಂಡಿತು. ಮದ್ರಾಸಿನ ನ್ಯಾಯ ವಿಧಾಯಕ ಸಭೆ ಕೂಡ ವರದಿ ಮೇಲೆ ಸತತ ಚರ್ಚೆ ನಡೆಸಿತು. ಕಾಸರಗೋಡು, ಕರ್ನಾಟಕಕ್ಕೆ ಸೇರಬೇಕೆಂದು ನಿರ್ಣಯ ಮಾಡಿತು. ಧೀಮಂತ ನಾಯಕರಾದ ಕಾಮರಾಜ್, ಸಿ. ಸುಬ್ರಮಣ್ಯಂ ಮತ್ತು ಭಕ್ತವತ್ಸಲ ಅವರು ಕಾಸರಗೋಡು ಕನ್ನಡಿಗರ ಬೇಡಿಕೆ ನ್ಯಾಯಯುತವೆಂದು ಅಭಿಪ್ರಾಯಪಟ್ಟರು. ಈ ನಂತರ ಭಾಷಾವಾರು ಪ್ರಾಂತ ವಿಂಗಡಣಾ ಆಯೋಗದ ವರದಿ ಕುರಿತ ಅಸಮಾಧಾನಗಳ ಪರಿಹಾರಕ್ಕಾಗಿ ಜವಾಹರ್ ಲಾಲ್ ನೆಹ್ರು, ಪಂತ್, ಧೇಬರ್ ಮತ್ತು ಆಲಿ ಅವರಿದ್ದ ಸಮೀತಿ ರಚಿತಗೊಂಡಿತು. ಇದರಿಂದಲೂ ತಮಗೆ ನ್ಯಾಯ ದೊರೆಯಬಹುದೆಂದು ಹೋರಾಟಗಾರರು ನಿರೀಕ್ಷಿಸಿದ್ದರು. ಆದರೆ ಬಾರಿಯೂ ಅವರ ನಂಬಿಕೆ ನಿಜವಾಗಲಿಲ್ಲ.
ಅತ್ತ ಬೆಳಗಾವಿ ತನ್ನದೆಂದು ಮಹಾರಾಷ್ಟ್ರ ಕ್ಯಾತೆ ತೆಗೆಯತೊಡಗಿತು. ಈ ವಿವಾದ ಇತ್ಯರ್ಥಕ್ಕಾಗಿ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ಮೆಹರ್ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಆಯೋಗ ರಚಿಸಿತು.ವಿವಾದ ಇತ್ಯರ್ಥಕ್ಕಾಗಿ ಆಯೋಗ ಪ್ರಾಮಾಣಿಕ ಪ್ರಯತ್ನ ಮಾಡಿತು. ಕಾಸರಗೋಡಿನ ಕುರಿತು ಸಾಕ್ಷ್ಯಾಧಾರ ಸಂಗ್ರಹಿಸುವ ಸಲುವಾಗಿ ಎಂ. ಮಹಾಜನ್ ಕಾಸರಗೋಡಿಗೆ ಬಂದರು. ಕರ್ನಾಟಕ ಪ್ರಾಂತೀಕರಣ ಸಮೀತಿಂದ ಅವರಿಗೆ ಕಾಸರಗೋಡು ಕರ್ನಾಟಕ್ಕೆ ಸೇರಬೇಕು ಎಂಬುದನ್ನು ಪ್ರತಿಪಾದಿಸುವ ಅನೇಕ ಆಧಾರಗಳಿದ್ದ ಪತ್ರವನ್ನು ನೀಡಲಾತು. ಈ ವಿಸ್ತಾರ ವರದಿಯನ್ನು ಶ್ರೀಧರ ಕಕ್ಕಿಲಾಯರು ಸಿದ್ಧಪಡಿಸಿದ್ದರು. ಸಮೀತಿ ಪರವಾಗಿ ಅತ್ಯಂತ ಪ್ರಬಲವಾಗಿ ಕೆ.ಆರ್. ಕಾರಂತರು ವಾದಿಸಿದರು.
ನ್ಯಾಯಮೂರ್ತಿ ಮೆಹರ್ಚಂದ್ ಅವರು ಮಂಗಳೂರಿಗೂ ಭೇಟಿ ನೀಡಿ ಸಾಕ್ಷಿಗಳನ್ನು ಸಂಗ್ರಹಿಸಿದರು. ಅಲ್ಲಿ ತುಳು, ಕನ್ನಡ, ಕೊಂಕಣಿ ಮಾತನಾಡುವವರು ಕಾಸರಗೋಡು ಅಚ್ಚ ಕನ್ನಡ ಪ್ರದೇಶ ಎಂದು ಸಾಕ್ಷಿ ಹೇಳಿದರು. ಗಮನಾರ್ಹ ಅಂಶವೆಂದರೆ ಮಲೆಯಾಳಂ ಮಾತೃಭಾಷೆಯಾಗಿರುವ ಸಮುದಾಯಗಳು ಕೂಡ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ಇದೇ ನ್ಯಾಯ ಎಂದು ಹೇಳಿದ್ದು.
ಬಾರಿ ಕಾಸರಗೋಡು ಹೋರಾಟಗಾರರ ನಂಬಿಕೆ ಸುಳ್ಳಾಗಲಿಲ್ಲ. ಕಾಸರಗೋಡು ಪ್ರದೇಶ ಕರ್ನಾಟಕಕ್ಕೆ ಸೇರಬೇಕೆಂದು ಮತ್ತು ಬೆಳಗಾವಿ ಕರ್ನಾಟಕಕ್ಕೆ ಸೇರಿರುವುದು ಸಮಂಜಸ-ನ್ಯಾಯಯುತವೆಂದು ಮಹಾಜನ್ ಆಯೋಗ ವರದಿ ನೀಡಿತು. ಚಂದ್ರಗಿರಿ ನದಿಯ ಉತ್ತರ ಭಾಗದ ೭೧ ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆಂದು ಹೇಳಲಾಗಿತ್ತು. ಈ ವರದಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಲಿಲ್ಲ. ಇದನ್ನು ಜಾರಿಗೊಳಿಸುವಂತೆ ಮಾಡುವ ಸಲುವಾಗಿ ಮತ್ತೆ ಹೋರಾಟ ಪ್ರಾರಂಭವಾತು. ೧೯೫೭, ೧೯೬೦, ೧೯೬೫ ಮತ್ತು ೧೯೬೭ ಚುನಾವಣೆಗಳ ಫಲಿತಾಂಶ ಹೋರಾಟದ ಧ್ವನಿಯನ್ನು ಎತ್ತಿ ಹಿಡಿಯಿತು. ಆದರೂ ಕೇಂದ್ರ ಸರ್ಕಾರ ಕಣ್ಣು ತೆರೆಯಲಿಲ್ಲ.
ಆದರೆ ಕಾಸರಗೋಡಿನ ಹೋರಾಟಗಾರರು ಸುಮ್ಮನಾಗಲಿಲ್ಲ. ಸತತ ಪ್ರತಿಭಟನೆ, ಸತ್ಯಾಗ್ರಹ ಮತ್ತು ಸಭೆಗಳನ್ನು ನಡೆಸತೊಡಗಿದರು. ಮಾರ್ಚ್ ೧೨, ೧೯೭೧ರಂದು ಕಾಸರಗೋಡಿನಲ್ಲಿ ಬೃಹತ್ ಸಮ್ಮೇಳನ ನಡೆಸಿ ಕಾಸರಗೋಡು ಕರ್ನಾಟಕಕ್ಕೆ ಸೇರಲೇಬೇಕೆಂದು ನಿರ್ಣಯ ಕೈಗೊಂಡು ಇದರ ಪ್ರತಿಗಳನ್ನು ಕೇರಳ, ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳಿಗೆ ತಲುಪಿಸಿದರು. ಆದರೆ ಕರ್ನಾಟಕದ ಅಧಿಕಾರಸ್ಥ ರಾಜಕಾರಣಿಗಳ ಮಂದಗಾಮಿ ಧೋರಣೆಂದ ಇದುವರೆಗೂ ಕಾಸರಗೋಡು ಹೋರಾಟಕ್ಕೆ ನ್ಯಾಯ ದೊರೆತಿಲ್ಲ.
ಮಹಾಜನ್ ಆಯೋಗದ ವರದಿ ಜಾರಿಯಾಗದೇ ಇರುವ ಸಂದರ್ಭದಲ್ಲಿಯೂ ಕೇರಳದ ಮುಖ್ಯಮಂತ್ರಿಯಾಗಿದ್ದ ಕರುಣಾಕರನ್ ಸರ್ಕಾರ,ಮಲೆಯಾಳಂ ಭಾಷಿಕರು ಅಧಿಕವಾಗಿರುವ ಪ್ರದೇಶಗಳನ್ನು ಕಾಸರಗೋಡಿಗೆ ಸೇರಿಸಿ ಜಿಲ್ಲೆ ಮಾಡಿತು. ಇದಕ್ಕೆ ಕರ್ನಾಟಕ ಸರ್ಕಾರ ತಡೆಯೊಡ್ಡಬೇಕಾಗಿತ್ತು. ಆದರೆ ನೆಲ-ಜಲದ ಬಗ್ಗೆ ಕಾಳಜಿಲ್ಲದ ಜನ ಅಧಿಕಾರ ಮಾಡಿದ ಪರಿಣಾಮ ತಡೆ ಸಾಧ್ಯವಾಗಲಿಲ್ಲ
ಕಾಸರಗೋಡು ಕೇರಳದಲ್ಲಿಯೇ ಉಳಿಯಬೇಕು, ಮಂಗಳೂರು ಕೂಡ ಕೇರಳಕ್ಕೆ ಸೇರಬೇಕು ಎಂದು ಹೇಳುವವರು ಈ ಅಂಶ ನೆನಪಿನಲ್ಲಿಡಲೇಬೇಕು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಸಲುವಾಗಿ ಅಲ್ಲಿನ  ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ನೂರಾರು ಮಹಿಳೆಯರು ಜೈಲು ಕಂಡಿದ್ದಾರೆ. ಶಾಲಾ-ಕಾಲೇಜು ತೊರೆದು ಹೋರಾಟ ನಡೆಸಿದ ವಿದ್ಯಾರ್ಥಿಗಳು ಲಾಠಿಯೇಟು ತಿಂದು ಸೆರೆವಾಸ ಅನುಭವಿಸಿದ್ದಾರೆ. ೧೯೬೭ರಲ್ಲಿ ನಡೆದ ಹೋರಾಟದಲ್ಲಿ ಶಾಂತರಾಮ ಮತ್ತು ಸುಧಾಕರ ಎಂಬ ವಿದ್ಯಾರ್ಥಿಗಳು ಕೇರಳ ಪೋಲಿಸರ ಗೋಲಿಬಾರಿಗೆ ಬಲಿಯಾಗಿದ್ದಾರೆ. ಈಗ ಹೇಳಿ ಕಾಸರಗೋಡು, ಕೇರಳದಲ್ಲಿಯೇ ಇರಬೇಕೇ…!?

ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಿದ ಕರ್ನಾಟಕ ಸರ್ಕಾರ ಕಾಸರಗೋಡು ಪ್ರದೇಶ ಕರ್ನಾಟಕಕ್ಕೆ ಸೇರಲೇಬೇಕೆಂಬ ನಿರ್ಣಯ ತೆಗೆದುಕೊಳ್ಳಬೇಕಿತ್ತು. ದುರಾದೃಷ್ಟವಶಾತ್ ನಿರ್ಣಯ ಆಗಿಲ್ಲ. ಹಾಗಿದ್ದರೆ ಕಾಸರಗೋಡು ಕನ್ನಡಿಗರ ಹೋರಾಟ-ತ್ಯಾಗ ಮತ್ತು ಬಲಿದಾನಗಳನ್ನು ಕರ್ನಾಟಕ ಸರ್ಕಾರ ಮರೆತಿದೆಯೇ..!?

Krupe:
http://nilume.wordpress.com/2011/08/06/%E0%B2%95%E0%B2%BE%E0%B2%B8%E0%B2%B0%E0%B2%97%E0%B3%8B%E0%B2%A1%E0%B3%81-%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0-%E0%B2%A4%E0%B3%8D%E0%B2%AF%E0%B2%BE%E0%B2%97/

Wednesday, August 3, 2011

ರೋಷದ ಮಾತು

ರಾಮಾಯಣದ ಯುದ್ಧ ಕಾಂಡದಲ್ಲಿ ಬರುವ ಸನ್ನಿವೇಶ ಇದು. ರಾವಣನ ಮಗನಾದ ಇಂದ್ರಜಿತ್ತು ಯುದ್ಧಕ್ಕೆ ಬಂದು ಮಾಯಾಯುದ್ಧವನ್ನು ಪ್ರಾರಂಭಿಸುತ್ತಾನೆ. ಆಕಾಶದ ಮೋಡಗಳ ಹಿಂದೆ ಅವಿತುಕೊಂಡು ಬಾಣಗಳ ಮಳೆಗರೆಯುತ್ತಾನೆ. ಕ್ಷಣಕ್ಷಣಕ್ಕೆ ದಿಕ್ಕುಗಳನ್ನು ಬದಲಿಸುತ್ತ ಕಪಿಸೇನೆಯನ್ನು ಕಂಗೆಡಿಸುತ್ತಾನೆ. ನಂತರ ಮಾಯಾಸೀತೆಯನ್ನು ಯುದ್ಧಭೂಮಿಗೆ ಕರೆತರುತ್ತಾನೆ. ಈ ವಿವರಗಳನ್ನು ವಾಲ್ಮೀಕಿ ಮುನಿಗಳು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ.

ಆತ ಆ ಮಾಯಾಸೀತೆಯನ್ನು ಎಲ್ಲರ ಮುಂದೆಯೇ ಹೊಡೆಯುತ್ತಾನೆ. ಪೆಟ್ಟು ತಾಳಲಾರದೇ ಆ ಸೀತೆ  ಅಯ್ಯೋ ರಾಮ, ರಾಮ  ಎಂದು ಕೂಗಿಕೊಂಡು ಅಳುತ್ತಾಳೆ. ಇಂದ್ರಜಿತ್ತು ಆಕೆಯ ತಲೆಗೂದಲನ್ನು ಹಿಡಿದು ಎಳೆದು ಖಡ್ಗದಿಂದ ಹೊಡೆಯುತ್ತಾನೆ. ಈ ದೃಶ್ಯವನ್ನು ನೋಡಲಾಗದೇ ಆಂಜನೇಯ ಅವನಿಗೆ ಶಾಪಕೊಡುತ್ತಾನೆ, ಕಪಿಗಳನ್ನು ಸೇರಿಸಿಕೊಂಡು ಇಂದ್ರಜಿತ್ತುವಿನ ಕಡೆಗೆ ನುಗ್ಗುತ್ತಾನೆ.
ಆಗ ಇಂದ್ರಜಿತ್ತು ಮಾಯಾಸೀತೆಯನ್ನು ಕೊಂದು ಕೆಳಗೆ ಎಸೆದುಬಿಡುತ್ತಾನೆ. ಯಾವ ಹೆಂಗಸು ನೆಲಕ್ಕೆ ಹೀಗೆ ಬಿದ್ದರೆ ಅದು ದುಃಖಕಾರಕವೇ. ಅದರಲ್ಲೂ ಸೀತೆಯಂಥ ಸಾಧ್ವಿಗೆ ಈ ಸ್ಥಿತಿ ಬಂದಾಗ ಯಾರು ಸಹಿಸುತ್ತಾರೆ?

ಹನುಮಂತ ಕಪಿಸೇನೆಯನ್ನು ಕರೆದುಕೊಂಡು ಶ್ರೀರಾಮನ ಸನ್ನಿಧಿಗೆ ಬಂದು ಇಂದ್ರಜಿತ್ತು ಸೀತೆಗೆ ಹೊಡೆದದ್ದನ್ನು ನಂತರ ಆಕೆಯನ್ನು ಕೊಂದುಹಾಕಿದ್ದನ್ನು ಹೇಳುತ್ತಾನೆ. ಈ ಮಾತನ್ನು ಕೇಳಿ ಶ್ರೀರಾಮನು ದುಃಖದಿಂದ ಬಸವಳಿದು, ಬುಡವನ್ನು ಕತ್ತರಿಸಿದ ಮರದಂತೆ ಎಚ್ಚರ ತಪ್ಪಿ ಬೀಳುತ್ತಾನೆ. ಅಣ್ಣ ಹೀಗೆ ಮೂರ್ಛೆ ಹೋಗಿ ಬಿದ್ದದ್ದನ್ನು ಕಂಡು ಲಕ್ಷ್ಮಣ ತನ್ನಣ್ಣನನ್ನು ಎರಡೂ ಕೈಗಳಿಂದ ಅಪ್ಪಿಕೊಂಡು ದುಃಖಪಡುತ್ತಾನೆ. ಅವನ ಮನಸ್ಸಿನ ರೋಷ ಭುಗಿಲ್ಲೆಂದು ಎದ್ದಿದೆ. ಅವನ ಮಾತುಗಳು ಆ ಕೋಪವನ್ನು ಪ್ರಕಟಿಸುತ್ತವೆ.

 ಶುಭೇ ವರ್ತ್ಮನಿ ತಿಷ್ಠಂತಂ ತ್ವಾಮಾರ್ಯ ವಿಜಿತೇಂದ್ರಿಯಮ್
ಅನರ್ಥೇಭ್ಯೋ ನ ಶಕ್ನೋತಿ ತ್ರಾತುಂ ಧರ್ಮೋ ನಿರರ್ಥಕಃ 
-ಸರ್ಗ 83, ಶ್ಲೋಕ 14.

ಅಣ್ಣಾ, ಜಿತೇಂದ್ರಿಯನಾಗಿ ಸದಾಚಾರದಲ್ಲೇ ನಿರತನಾದವನು ನೀನು. ಧರ್ಮವು ನಿನ್ನನ್ನು ಅನರ್ಥಗಳಿಂದ ಪಾರುಮಾಡಲು ಶಕ್ತವಾಗಲಿಲ್ಲ. ಧರ್ಮವೆಂಬುದು  ನಿರರ್ಥಕ.

ದುಃಖತಪ್ತನಾದ ಲಕ್ಷ್ಮಣನ ಬಾಯಿಯಿಂದ ಎಂಥ ಮಾತು ಬರುತ್ತದೆ ನೋಡಿ. ಇದು ಇಂದಿಗೂ ಅನೇಕ ಸಜ್ಜನ, ಸಾತ್ವಿಕ ಜನರ ಮಾತೂ ಹೌದು. ಪ್ರಾಮಾಣಿಕವಾಗಿ ಬದುಕಿದ ವ್ಯಕ್ತಿಗೆ ಅನ್ಯಾಯವಾದಾಗ ಅವರು ಹೇಳುವ ಮಾತೂ ಇದೇ ಅಲ್ಲವೇ? 

ಧರ್ಮವೆಂಬುದು ನಿರರ್ಥಕವಾದದ್ದು. ನಮಗೆಲ್ಲ ಹೀಗೆ ಪದೇ ಪದೇ ಎನ್ನಿಸುತ್ತಿಲ್ಲವೇ? ಈ ಮಾತುಗಳಲ್ಲಿ ಎಷ್ಟೊಂದು ಹತಾಶೆ, ಉದ್ವೇಗ ತುಂಬಿದೆ!

ಲಕ್ಷ್ಮಣ ಇನ್ನೂ ಮುಂದುವರಿದು ಹಣವಿಲ್ಲದವನ ಪಾಡು ಯಾರಿಗೂ ಬೇಡ, ಎಲ್ಲವೂ ಹಣವಿದ್ದವರಿಗೆ ಮಾತ್ರ ದಕ್ಕುತ್ತದೆ ಎಂದು ಸಂಕಟಪಡುತ್ತಾನೆ.

 ಯಸ್ಯಾರ್ಥಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ತಸ್ಯ ಬಾಂಧವಾಃ
ಯಸ್ಯಾರ್ಥಾಃ ಸ ಪುಮಾನ್ ಲೋಕೇ ಯಸ್ಯಾರ್ಥಾಃ ಸ ಚ ಪಂಡಿತಃ
ಯಸ್ಯಾರ್ಥಾಃ ಸ ಚ ವಿಕ್ರಾಂತೋ ಯಸ್ಯಾರ್ಥಾಃ ಸ ಚ ಬುದ್ಧಿಮಾನ್
ಯಸ್ಯಾರ್ಥಾಃ ಸ ಮಹಾಭಾಗೋ ಯಸ್ಯಾರ್ಥಾಃ ಸ ಗುಣಾಧಿಕಃ 

 ಹಣವಿದ್ದವನಿಗೆ ಎಲ್ಲರೂ ಮಿತ್ರರೇ, ಎಲ್ಲರೂ ಬಂಧುಗಳೇ! ಈ ಲೋಕದಲ್ಲಿ
ಹಣವಂತನೇ ಪುರುಷ, ಹಣವಂತನೇ ಪಂಡಿತ; ಹಣವುಳ್ಳವನೇ ಪರಾಕ್ರಮಿ,
ಅವನೇ ಬುದ್ಧಿವಂತ! ಹಣವುಳ್ಳವನೇ ದೊಡ್ಡ ಮನುಷ್ಯ, ಅವನೇ ಗುಣಶಾಲಿ. ಇದು ರಾಮಾಯಣದ ಕಾಲದ ಮಾತೇ ಎಂದು ಆಶ್ಚರ್ಯವಾಗುತ್ತದಲ್ಲವೇ? ಮನಸ್ಸು ವಿಹ್ವಲವಾದಾಗ, ನೋವಿನಲ್ಲಿ ಬೆಂದುಹೋದಾಗ ಇಂಥ ಮಾತು ಯಾವ ಕಾಲದಲ್ಲೂ ಬರುತ್ತವೆ. ಶಕ್ತಿಯಿಲ್ಲದಿದ್ದರೂ ಕೇವಲ ಹಣದ ಬೆಂಬಲದಿಂದ, ಅಹಂಕಾರದಿಂದ ಮೆರೆಯುವವರನ್ನು ಕಂಡಾಗ, ಅಧರ್ಮದಿಂದಲೇ ಅಧಿಕಾರವನ್ನು, ಅದರ ಮೂಲಕ ಜನಮನ್ನಣೆಯನ್ನು ಪಡೆದವರನ್ನು ನೋಡಿದಾಗ ಧರ್ಮ ನಿಷ್ಪ್ರಯೋಜಕ ಎನ್ನಿಸೀತು. ಆದರೆ ಅದು ಸರಿಯಲ್ಲ. ಮುಂದೆ ರಾಮಾಯಣದಲ್ಲಿ ಇದೇ ಲಕ್ಷ್ಮಣ ಅಣ್ಣ ಶ್ರೀರಾಮನ ಧರ್ಮರಕ್ಷಣೆಗೆ ಒತ್ತಾಸೆಯಾಗಿ ನಿಂತು ಹೋರಾಡಿ ಅಧರ್ಮಿ ರಾವಣನ ಪರಿವಾರವನ್ನು ಕೊಂದದ್ದನ್ನು ನೋಡಿದ್ದೇವೆ. ಇಂದಿಗೂ ಕೆಲಕಾಲ ಮದಾಂಧರಾಗಿ, ಅಧರ್ಮದಿಂದ ಹಣಗಳಿಸಿ ಮೆರೆದು ಈಗ ಜೈಲಿನ ಕಂಬಿಗಳ ಹಿಂದೆ ತೋರಿಕೆಯ ಪಶ್ಚಾತ್ತಾಪದ ಕಣ್ಣೀರು ಸುರಿಸುವವರನ್ನೂ ಕಂಡಿದ್ದೇವೆ.

ಅಧರ್ಮ ದೀಪಾವಳಿಯಲ್ಲಿ ಮಕ್ಕಳು ಹಚ್ಚುವ ಬೆಂಕಿಯ ಕುಂಡದಂತೆ. ಅದು ಬಣ್ಣಬಣ್ಣದ ಕಿರಣಗಳನ್ನು, ಕಿಡಿಗಳನ್ನು ಹಾರಿಸುತ್ತ ಕಣ್ಣು ಕೋರೈಸುವಾಗ ತುಂಬ ಆಕರ್ಷಕವಾಗಿ ಕಾಣುತ್ತದೆ. ಆದರೆ ಅದು ಉರಿಯುವುದು ಕ್ಷಣಕಾಲ ಮಾತ್ರ. ಮತ್ತೆ ಅಂಧಕಾರ. ಧರ್ಮ, ದೇವರ ಮುಂದೆ ಹಚ್ಚಿದ ನಂದಾದೀಪ. ಅದು ಕಣ್ಣು ಕೋರೈಸಲಾರದು, ಆದರೆ ಹೆಚ್ಚು ಕಾಲ ಬದುಕುವಂಥದ್ದು, ನೆಮ್ಮದಿ ನೀಡುವಂಥದ್ದು. ಅದು ನಮಗೆ ಬೇಕಾದದ್ದು.

Krupe: Prajavani : 18 July 2011
http://www.prajavani.net/web/include/story.php?news=1665&section=136&menuid=14