ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, December 22, 2016

ಒಂದು ಸಣ್ಣ ಕಥೆ : ( ಓದಿ ಚೆನ್ನಾಗಿದೆ )

ಒಂದು ಸಣ್ಣ ಕಥೆ : ( ಓದಿ ಚೆನ್ನಾಗಿದೆ )

ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು..

ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು..

ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು.

ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು..
ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ...

ಮಂತ್ರಿ ಹೇಳಿದ *'ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್ರ ಬದುಕಲು ಛಲ ಬರುತ್ತದೆ . ಆ ಸ್ಫೂರ್ತಿ    ನಮ್ಮ ಮೇಲೆ ನಮ್ಮವರು ಇಟ್ಟಿರುವ ಭರವಸೆ, ಪ್ರೀತಿಗಳಿಂದ ಸಿಗುತ್ತದೆ ..... '*

*ಒಂದು ಸಣ್ಣ ಒಳ್ಳೆಯ ಮಾತು,ಸ್ಪರ್ಶ, ನಗು ಬದುಕಿನ ಹಾದಿಯ ಬದಲಿಸಬಲ್ಲುದು...*

*ಪ್ರೀತಿ ಅಷ್ಟೇ ಸಾಕು....... ಬದುಕಲು, ಬದುಕಿಸಲು, ಬದುಕನ್ನ ಬದುಕಿಸಲು.*😊

ಕೃಪೆ ವಾಟ್ಸಪ್

ನೂರು ದೇವರನೆಲ್ಲ ನೂಕಾಚೆ ದೂರ - ಕುವೆಂಪು

ನೂರು ದೇವರನೆಲ್ಲ ನೂಕಾಚೆ ದೂರ ।। ೩।।
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।
ಶತಮಾನಗಳು ಬರಿಯ ಜಡಶಿಲೆಯ ಪೂಜಿಸಿ ಆಯ್ತು
ಹಾವ್ಗಳಿಗೆ ಹಾಲೆರದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿ ಆಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಗಂಟೆ ಜಾಗಟೆಗಳಿಂಬಡಿದು ಕುತ್ತಿಗೆ ಹಿಡಿದು ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯಾನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಹೊದಿಕೆಯನು ಓಯ್ದು
ಚಳಿಯು ಮಳೆಯಲಿ ನಮೆವ ತಾಯ್ಗೆ ಹಾಕು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೩।।
ನೂಕಾಚೆ ದೂರ

Friday, December 9, 2016

ಒಂದು ಸಣ್ಣ ಕಥೆ - ಕೃಪೆ ವಾಟ್ಸಪ್

ಒಂದು ಸಣ್ಣ ಕಥೆ : ( ಓದಿ ಚೆನ್ನಾಗಿದೆ )

ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು..

ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು..

ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು. 

ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು.. 
ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ... 

ಮಂತ್ರಿ ಹೇಳಿದ *'ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್ರ ಬದುಕಲು ಛಲ ಬರುತ್ತದೆ . ಆ ಸ್ಫೂರ್ತಿ    ನಮ್ಮ ಮೇಲೆ ನಮ್ಮವರು ಇಟ್ಟಿರುವ ಭರವಸೆ, ಪ್ರೀತಿಗಳಿಂದ ಸಿಗುತ್ತದೆ ..... '*

*ಒಂದು ಸಣ್ಣ ಒಳ್ಳೆಯ ಮಾತು,ಸ್ಪರ್ಶ, ನಗು ಬದುಕಿನ ಹಾದಿಯ ಬದಲಿಸಬಲ್ಲುದು...*

*ಪ್ರೀತಿ ಅಷ್ಟೇ ಸಾಕು....... ಬದುಕಲು, ಬದುಕಿಸಲು, ಬದುಕನ್ನ ಬದುಕಿಸಲು.*😊

ಕೃಪೆ ವಾಟ್ಸಪ್

Tuesday, December 6, 2016

ಸಮ್ಮೇಳನವಲ್ಲ, ಸರಕಾರಿ ಸಾಹಿತಿಗಳ ಒಡ್ಡೋಲಗ - ರೋಹಿತ್ ಚಕ್ರತೀರ್ಥ

ಎರಡು ವಾರದ ಹಿಂದೆ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದೆ. ಬರಗೂರು ರಾಮಚಂದ್ರಪ್ಪ ಬರೆದ ಒಂದು ಪುಸ್ತಕದ ಹೆಸರನ್ನು ಗೂಗಲ್ ನೋಡದೆ ಹೇಳಿ, ಎಂದು. ಸುಮಾರು 200ಕ್ಕೂ ಮಿಕ್ಕಿ ಕಾಮೆಂಟ್‌ಗಳು ಬಂದವು. ಆದರೆ ಒಬ್ಬನೇ ಒಬ್ಬ ವ್ಯಕ್ತಿ ಕೂಡ ಬರಗೂರರ ಒಂದೇ ಒಂದು ಪುಸ್ತಕದ ಹೆಸರನ್ನೂ ಸರಿಯಾಗಿ ಹೇಳಲಿಲ್ಲ (ಆ ಪೋಸ್ಟ್ ಮತ್ತು ಕಾಮೆಂಟ್‌ಗಳು ಹಾಗೇ ಇವೆ, ಅಳಿಸಿಲ್ಲ). ಇನ್ನೇನು ಹತ್ತು ದಿನಗಳಲ್ಲಿ ರಾಯಚೂರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಉತ್ಸವ ಮೂರ್ತಿಯ ಒಂದಾದರೂ ಕೃತಿಯನ್ನು ಕನ್ನಡಿಗರು ನೆನಪಿಸಿಕೊಂಡಿಲ್ಲ ಎಂದರೆ ಅದಕ್ಕಿಂತ ದುಃಖ, ಖೇದ, ವಿಷಾದ ಬೇರೆ ಇದೆಯೆ? ಈ ವೈಫಲ್ಯದ ಹೊಣೆಯನ್ನು ಯಾರು ಹೊರಬೇಕು?

ಕ್ವಾಲಿಟಿ! ಅದೊಂದು ಗುಣ ಸಾಹಿತ್ಯರಂಗದಲ್ಲಿ ನಾಸ್ತಿಯಾಗಿ ಬಹಳ ಕಾಲವೇ ಆಗಿಹೋಯಿತು. ಹಾಗಂತ ಒಳ್ಳೆಯ ಕೃತಿಗಳು ಬರುತ್ತಿಲ್ಲವೇ? ಖಂಡಿತಾ ಬರುತ್ತಿವೆ. ಆದರೆ ಹಾಗೆ ಒಳ್ಳೊಳ್ಳೆಯ ಕೃತಿಗಳನ್ನು ಬರೆಯುವವರನ್ನು ಪ್ರಕಾಶಕರು ಮಾತಾಡಿಸುವುದಿಲ್ಲ. ಸರಕಾರದ ಪ್ರಶಸ್ತಿ ಕಮಿಟಿಗಳು ಕಣ್ಣೆತ್ತಿಯೂ ನೋಡುವುದಿಲ್ಲ. ಓದುಗರ ಸಹೃದಯತೆಯಿಂದ, ಬಾಯಿಂದ ಬಾಯಿಗೆ ಹರಡುವ ಪ್ರಚಾರದಿಂದ, ಸಹೃದಯ ವಿಮರ್ಶಕರ ವಿಮರ್ಶೆಯ ಬಲದಿಂದ ಒಳ್ಳೆಯ ಲೇಖಕ ಹೆಚ್ಚು ಜನರನ್ನು ತಲುಪುವುದು ಸಾಧ್ಯವಾಗುತ್ತದೆ. ಆದರೆ ಸರಕಾರ ನಡೆಸುವ ಕಾರ್ಯಕ್ರಮಗಳಲ್ಲಿ ಈ ಲೇಖಕರು ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ, ಯಾವ ಅಕಾಡೆಮಿಗಳಲ್ಲೂ ಅಧ್ಯಕ್ಷ-ಸದಸ್ಯ ಆಗುವುದಿಲ್ಲ.

ಸರಕಾರದ ಕಾರ್ಯಕ್ರಮಗಳನ್ನು ಸರಕಾರಿ ಸಾಹಿತಿಗಳಷ್ಟೇ ಆಳುತ್ತಾರೆ. ಪ್ರಶಸ್ತಿ-ಪುರಸ್ಕಾರಗಳನ್ನು ತಮ್ಮತಮ್ಮೊಳಗೇ ವಿಲೇವಾರಿ ಮಾಡಿಕೊಳ್ಳುವ ಗುಪ್ತ ಒಪ್ಪಂದವೊಂದು ಅವರ ನಡುವೆ ಜಾರಿಯಲ್ಲಿರುತ್ತದೆ. ಬರಗೂರು ರಾಮಚಂದ್ರಪ್ಪರಂಥ ಲೇಖಕರು ಸದಾ ಸರಕಾರಿ ಮೊಗಸಾಲೆಗಳಲ್ಲಿ ಕಾಣಿಸಿಕೊಂಡು, ಪತ್ರಿಕೆಗಳ ದಿನನಿತ್ಯದ ವರದಿಗಳಲ್ಲಿ ಸುದ್ದಿಯಾಗುತ್ತ, ಟೌನ್‌ಹಾಲ್ ಎದುರು ಆಗೀಗ ನಡೆಯುವ ಬುದ್ಧಿಜೀವಿಗಳ ಪ್ರತಿಭಟನಾ ಸಭೆಗಳಲ್ಲಿ ಘೋಷಣೆ ಕೂಗುತ್ತ ತಮ್ಮ ಹೆಸರನ್ನು ಚಾಲೂ ಇಟ್ಟಿರುತ್ತಾರೆ. ತಾವು ಬರೆದದ್ದು ಸುದ್ದಿಯಾಗದಾಗ ಹೀಗೆ ಬೇರೆ ವಿಧಾನಗಳ ಮೂಲಕ ಸುದ್ದಿಯಲ್ಲಿರುವುದು ಸರಕಾರಿ ಸಾಹಿತಿಗಳಿಗೆ ಅನಿವಾರ್ಯವಾಗುತ್ತದೆ. ಬರಗೂರು ರಾಮಚಂದ್ರಪ್ಪ ಏನು ಬರೆದಿದ್ದಾರೆಂಬ ಸಂಶೋಧನೆ ಮಾಡುವವರಿಗೆ ದಟ್ಟವಾದ ನಿರಾಸೆ ಕವಿಯುತ್ತದೆ.

ಯಾಕೆಂದರೆ, ಧರ್ಮ ಮತ್ತು ರಿಲಿಜನ್ ಒಂದೇ. ಪುರೋಹಿತಶಾಹಿಗಳು ಭಾರತದ ಮೂಲನಿವಾಸಿಗಳನ್ನು ಶತಮಾನಗಳಿಂದ ಶೋಷಣೆಗೊಳಪಡಿಸಿದ್ದಾರೆ. ಹಿಂದುಳಿದವರು ಮತ್ತು ಅಶಿಕ್ಷಿತರನ್ನು ತುಳಿಯುವುದೇ ಬ್ರಾಹ್ಮಣರ ಕೆಲಸ. ಮಹಾಭಾರತ, ರಾಮಾಯಣಗಳನ್ನು ಬರೆದ ವ್ಯಾಸ, ವಾಲ್ಮೀಕಿಗಳು ಅವೈದಿಕರಾದ್ದರಿಂದ ಅವರನ್ನು ದ್ವೇಷಿಸಬಾರದು, ಆದರೆ ಆ ಕಾವ್ಯಗಳನ್ನು ಬಳಸಿಕೊಳ್ಳುವ ವೈದಿಕ ಶಕ್ತಿಗಳನ್ನು ದ್ವೇಷಿಸಬೇಕು. ಹಿಂದೂ ಮೂಲಭೂತವಾದ ಬೃಹದಾಕಾರವಾಗಿ ಬೆಳೆದಿದೆ. ಭಯೋತ್ಪಾದನೆಗೆ ಧರ್ಮವೇ ಮೂಲ, ಆದರೆ ಇಸ್ಲಾಂ ಅನ್ನು ಹಾಗೆಂದು ಭಾವಿಸಬಾರದು…. ಹೀಗೆ ತಲೆಬುಡವಿಲ್ಲದ ಏಳೆಂಟು ಸಾಲುಗಳನ್ನು ಸಾಲುಸಾಲಾಗಿ ಜೋಡಿಸಿಟ್ಟರೆ ಬರಗೂರರ ಚಿಂತನೆಯ ಧಾಟಿ ಕಾಣಸಿಗುತ್ತದೆ. ಆಂತರ್ಯದಲ್ಲಿ ಮಹಾ ಕಮ್ಯುನಿಸ್ಟರಾದ ಬರಗೂರರು ಲೆನಿನ್ ಅನ್ನು ದೇವತೆಯ ಮಟ್ಟಕ್ಕೇ ಏರಿಸುತ್ತಾರೆ.

ವೇದಗಳನ್ನು ಅಧ್ಯಯನ ನಡೆಸಿ ಸಂಹಿತೆಗಳಾಗಿ ವಿಭಾಗಿಸಿದ ವ್ಯಾಸಮಹರ್ಷಿಗಳನ್ನೇ ಅವೈದಿಕರೆಂದು ಕರೆಯುತ್ತಾರೆ! ಭಾರತದಲ್ಲಿದ್ದ ಶಾಸ್ತ್ರ-ಪುರಾಣಗಳನ್ನು ಪಾಶ್ಚಾತ್ಯ ರಿಲಿಜನ್‌ಗಳ ಡಾಕ್ಟ್ರಿನ್‌ಗಳಿಗೆ ಸಮೀಕರಿಸುತ್ತಾರೆ. ಪಾಶ್ಚಾತ್ಯ ಜಗತ್ತಲ್ಲಿ ಹುಟ್ಟಿ ಹಬ್ಬಿದ ರಿಲಿಜನ್‌ಗಳಿಗೂ ಭಾರತೀಯ ಧಾರ್ಮಿಕ ಪರಂಪರೆಗೂ ಅಭೇದ ಕಲ್ಪಿಸುತ್ತಾರೆ. ರಾಮಚಂದ್ರಪ್ಪನವರು ಸಿದ್ದರಾಮಯ್ಯನವರ ಕಾರಿನ ಮೇಲೆ ಕಾಗೆ ಕೂತ ಸಂದರ್ಭದಲ್ಲಿ ಒಂದು ಲೇಖನ ಬರೆದರು. ಅದರಲ್ಲಿ, ‘ಕಾಗೆಯ ವಿಷಯದಲ್ಲಿ ಕಂಠವನ್ನು ಮೀರಿದ ಸಾಮಾಜಿಕ ಮೌಢ್ಯವೂ ಮುನ್ನೆಲೆಯಲ್ಲಿರುವುದು ಆಘಾತಕಾರಿ. ಕಾಗೆಯನ್ನು ಅಪಶಕುನದ ಮುಖ್ಯ ಸಂಕೇತವಾಗಿ ಪ್ರಚುರಪಡಿಸಿ ಕೀಳು ಎಂಬ ಪಟ್ಟಿಗೆ ಸೇರಿಸಲಾಗಿದೆ. ಆದರೆ ಕೋಗಿಲೆಯ ಮೊಟ್ಟೆಗಳ ಮೇಲೆ ಕಾವಿಗೆ ಕೂತು ಮರಿ ಮಾಡುವುದು ಕಾಗೆಯೇ ಹೊರತು ಕೋಗಿಲೆಯಲ್ಲ.

ಕೋಗಿಲೆ ಮತ್ತು ಕಾಗೆಯ ಈ ಮಧುರ ಸಂಬಂಧವು ಕೋಮುವಾದಿ ಗಳಿಗೊಂದು ಪಾಠವಾಗಬೇಕಿದೆ.. ಎಂಬ ಸಾಲುಗಳು ಬರುತ್ತವೆ. ಕೋಮುವಾದಿ, ಪುರೋಹಿತಶಾಹಿ, ಮನುಸ್ಮತಿ, ಶೋಷಕ-ಶೋಷಿತ ಮತ್ತು ಮುಖಾಮುಖಿ – ಇವಿಷ್ಟು ಶಬ್ದಗಳಿಲ್ಲದೆ ಲೇಖನ ಬರೆಯಿರಿ ಎಂದರೆ ಈ ವ್ಯಕ್ತಿ ಅಕ್ಷರಸನ್ಯಾಸ ಸ್ವೀಕರಿಸಿಬಿಡಬಹುದೇನೋ! ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಅಕ್ಷರಕಸ ಎಂಬುದೇನಾದರೂ ಇದ್ದರೆ ಅದಕ್ಕೆ ರಾಮಚಂದ್ರಪ್ಪನವರ ಬರಹಕ್ಕಿಂತ ಮಿಗಿಲಾದ ಉದಾಹರಣೆ ಸಿಗುವುದು ಕಷ್ಟ.

ಇದು ಅವರೊಬ್ಬರ ಸಮಸ್ಯೆ ಅಲ್ಲ. ಪಾಶ್ಚಾತ್ಯರು ಕಟ್ಟಿಬೆಳೆಸಿದ ಮಿಥ್ಯಾವಾದಗಳನ್ನು ಮೆದುಳಿಗಿಳಿಸಿಕೊಂಡು ಕಳೆದ ಮೂರ್ನಾಲ್ಕು ದಶಕಗಳಲ್ಲಿ ಕಾಲೇಜು-ಯೂನಿವರ್ಸಿಟಿಗಳಲ್ಲಿ ಕುರ್ಚಿ ಬಿಸಿ ಮಾಡುತ್ತ, ಅಲ್ಲಿನ ವಿದ್ಯಾರ್ಥಿಗಳನ್ನು ಸಾಧ್ಯವಾದಷ್ಟು ದಾರಿ ತಪ್ಪಿಸಿದ ಒಂದು ವರ್ಗದ ಸಾಹಿತಿಗಳೆಲ್ಲ ಬರೆಯುವುದು ಹೀಗೆಯೇ. ವೀರಪ್ಪ ಮೊಯಿಲಿಯವರ ಕಾವ್ಯವನ್ನಾದರೂ ಅರ್ಥ ಮಾಡಿಕೊಳ್ಳಬಹುದೇನೋ, ಆದರೆ ಬರಗೂರು ಮತ್ತು ಅವರಂಥ ಲೇಖಕರ ಗದ್ಯವನ್ನು ಜಪ್ಪಯ್ಯ ಎಂದರೂ ಅರಗಿಸಿಕೊಳ್ಳಲಾರೆವು. ಹೇಳಬೇಕಾದ ಸುಳ್ಳುಗಳ ಪ್ರಮಾಣ ಹೆಚ್ಚಿದಾಗ ಭಾಷೆ ಸಂಕೀರ್ಣವಾಗಬೇಕಾದ್ದು ಅನಿವಾರ್ಯ ತಾನೆ! ಹಿಂದೊಮ್ಮೆ ಬರಗೂರರು ವಿವೇಕಾನಂದರನ್ನು ಕೋಟ್ ಮಾಡುತ್ತ ಒಂದು ವಾಕ್ಯ ಬರೆದಿದ್ದರು.

ನಿಜವಾಗಿಯೂ ವಿವೇಕಾನಂದರು ಹಾಗೆ ಹೇಳಿದ್ದಾರೆಯೇ ಎಂದು ಅಚ್ಚರಿಪಡುತ್ತ ವಿವೇಕಾನಂದರ ಸಮಗ್ರ ಕೃತಿಶ್ರೇಣಿಯಲ್ಲಿ ಹುಡುಕಿದಾಗ, ಬರಗೂರರು ಪ್ರಸ್ತಾಪಿಸಿದ ಮಾತಿಗೆ ತದ್ವಿರುದ್ಧಾರ್ಥವಿರುವ ವಾಕ್ಯಗಳು ಅಲ್ಲಿದ್ದವು. ತನಗೆ ಬೇಕಾದ ಅರ್ಥ ತೆಗೆಯಲು ಬರಗೂರರು, ವಿವೇಕಾನಂದರ ಹೇಳಿಕೆಯ ಹಿಂದು-ಮುಂದಿನ ಪದಗಳನ್ನು ಹಕ್ಕಿಯ ಪುಕ್ಕ ಕತ್ತರಿಸಿದಂತೆ ಕತ್ತರಿಸಿ ಎಸೆದಿದ್ದರು! ಹಾಗಾದರೆ ಇವರು ಬರೆದಿರುವ ನಾಲ್ಕು ಮತ್ತೊಂದು ಪುಸ್ತಕದಲ್ಲಿ ಅದೆಷ್ಟು ತಿರುಚಿದ ಸತ್ಯಗಳು, ವಿಜೃಂಭಿಸಲ್ಪಟ್ಟ ಸುಳ್ಳುಗಳು ತುಂಬಿಕೊಂಡಿರಬಹುದು ಎಂಬ ಚಿಂತೆ ಹುಟ್ಟಿತು ನನಗೆ. ಬರಗೂರು ರಾಮಚಂದ್ರಪ್ಪ ಸಾಹಿತ್ಯಿಕವಾಗಿ ಏನನ್ನಾದರೂ ಬರೆದಿದ್ದಾರೆಯೇ? ಅವರ ಕತೆ-ಕಾದಂಬರಿ-ಕಾವ್ಯ ಎಲ್ಲಾದರೂ ಚರ್ಚೆಗೊಳಪಟ್ಟಿದ್ದಾವೆಯೇ? ಶ್ರಮಿಕ ಸಂಸ್ಕೃತಿ ಒಳ್ಳೆಯದು ಎಂಬ ಮೂರು ಪದಗಳ ಸಂದೇಶವನ್ನು ಹೇಳಲು ಹಲವು ಸಾವಿರ ಪುಟಗಳ ಸಾಹಿತ್ಯ ಬರೆದ ಕಂಬಾರರಂತೆ ಬರಗೂರರ ಸಾಹಿತ್ಯದಿಂದ ನಮಗೆ ಸಿಗುವ, ಅದೆಷ್ಟು ಪುಟ್ಟದೇ ಆಗಿರಲಿ, ಸಂದೇಶ ಯಾವುದು? ರಾಜ್‌ಕುಮಾರ್ ಕುಟುಂಬವನ್ನು ಹಾಡಿಹೊಗಳುವುದನ್ನು ಹೊರತುಪಡಿಸಿ ಬರಗೂರರು ಸಾಹಿತ್ಯವಲಯಕ್ಕೆ ಕೊಟ್ಟ ಕೊಡುಗೆ ಏನು?

ನನಗೆ ವೈಯಕ್ತಿಕವಾಗಿ ಬರಗೂರು ರಾಮಚಂದ್ರಪ್ಪನವರ ಮೇಲೆ ಯಾವ ದ್ವೇಷವೂ ಇಲ್ಲ. ಅವರ ಸಾಹಿತ್ಯವಿಮರ್ಶೆಯನ್ನು ಮಾಡುವ ಅಗತ್ಯವೂ ಇರಲಿಲ್ಲವೇನೋ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರದಿದ್ದರೆ. ಆದರೆ ಒಬ್ಬ ಸಾಹಿತಿ ಸರಕಾರಿ ಖರ್ಚಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಗೊಂಡಾಗ ಸಹಜವಾಗಿಯೇ ನಾಡಿನ ಜನರಿಗೆ ಆತನ ಬಗ್ಗೆ ಕುತೂಹಲಗಳಿರುತ್ತವೆ. ನಮ್ಮ ಪ್ರೀತಿಯ ಸಾಹಿತಿಗೆ ಈಗಲಾದರೂ ಈ ಗೌರವ ಸಿಕ್ಕಿತಲ್ಲ! ಎಂಬ ಸಂತೃಪ್ತಿಯೂ ಇರಬಹುದು. ಆದರೆ ಬರಗೂರರ ವಿಷಯದಲ್ಲಿ ಜನರಿಗಿರುವುದು ಸಂತೃಪ್ತಿಯಲ್ಲ, ಆಶ್ಚರ್ಯ. ಜನ ನೆನಪಿಸಿಕೊಳ್ಳಬಹುದಾದ ಒಂದಾದರೂ ಕೃತಿ ರಚಿಸದ ಬರಗೂರರು ಯಾವ ಆಧಾರದ ಮೇಲೆ ಸರಕಾರಿ ಕಾರ್ಯಕ್ರಮಗಳಿಗೆ ಆಯ್ಕೆಯಾಗುತ್ತಾರೆ? ಸರಿ, ಆಯ್ಕೆಯಾದರೆಂದೇ ಇಟ್ಟುಕೊಳ್ಳೋಣ, ಇವರಿಂದ ಭರವಸೆಯ ನಾಲ್ಕು ಹೊಸ ಮಾತು, ಹೊಸ ಚಿಂತನೆಯನ್ನು ನಾವು ನಿರೀಕ್ಷಿಸಬಹುದೆ? ಲಂಕೇಶರಿಂದಲೇ ಡಂಬಾಯ ಸಾಹಿತಿಯೆಂದು ಹೊಗಳಿಸಿಕೊಂಡಿದ್ದ ಬರಗೂರು ಈಗಲಾದರೂ ಡಂಬ್ ಅಲ್ಲದ ಮಾತುಗಳನ್ನು ಆಡುತ್ತಾರೆಂಬ ನಿರೀಕ್ಷೆ ಇಡಬಹುದೆ?

ಸಮ್ಮೇಳನದ ಗೋಷ್ಠಿಗಳ ವಿಷಯಪಟ್ಟಿಯನ್ನು ಕಂಡಾಗ ಅಂಥ ಆಸೆಯನ್ನೇನೂ ಇಟ್ಟುಕೊಳ್ಳುವಂತಿಲ್ಲ. ಮಹಿಳೆ-ಆಧುನಿಕತೆ ಮುಖಾಮುಖಿ, ಪುಸ್ತಕ ಮತ್ತು ಸಂಸ್ಕೃತಿ – ಸವಾಲುಗಳು, ಕನ್ನಡ ಸಾಹಿತ್ಯ – ಬಹುಮುಖಿ ನೆಲೆಗಳು, ಪ್ರಜಾಪ್ರಭುತ್ವದಲ್ಲಿನ ವಿಮರ್ಶೆಯ ಸಾಧ್ಯತೆಗಳು, ದಲಿತ ಬಂಡಾಯ ಸಾಹಿತ್ಯ ಮತ್ತು ಚಳವಳಿ, ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಾದೇಶಿಕ ಅಸಮಾನತೆ – ಅಭಿವೃದ್ಧಿಯ ಸವಾಲುಗಳು… ಹೀಗೆ ನಡೆಯಲಿರುವ ಸಾಲುಸಾಲು ಗೋಷ್ಠಿಗಳಲ್ಲಿ ಹೊಸತೆಲ್ಲಿದೆ! ಇವೇ ಇವೇ ವಿಷಯಗಳನ್ನು ಕಳೆದ ಅರ್ಧ ಶತಮಾನದಿಂದ ಸಾಹಿತ್ಯ ಸಮ್ಮೇಳನಗಳಲ್ಲಿ ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ಗಾಂಧಿ ಜಯಂತಿಯ ಪುಷ್ಪಾರ್ಪಣೆಯ ಹಾಗೆ ಈ ಗೋಷ್ಠಿಗಳು ಕೂಡ ಪ್ರತಿವರ್ಷ ಕಾಟಾಚಾರಕ್ಕೆಂಬಂತೆ ನಡೆದುಹೋಗುತ್ತವೆ.

ಏನು ಉದ್ಧಾರವಾಗಿದೆ ಇವುಗಳಿಂದ? ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ವಿಷಯವನ್ನು ನಾವು ಸಾಹಿತ್ಯ ಸಮ್ಮೇಳನದಿಂದ ಕೈ ಬಿಡುವುದು ಇನ್ನು ಯಾವ ಶತಮಾನದಲ್ಲಿ? ಮಹಿಳೆ ಮತ್ತು ಆಧುನಿಕತೆಯ ಚರ್ಚೆಗೆ ಮುಕ್ತಿ ಯಾವಾಗ? ಸಂಸ್ಕೃತಿ ಮತ್ತು ರಾಜಕಾರಣವನ್ನು ಬಿಟ್ಟರೆ ಬೇರಾವ ವಿಷಯವೂ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚಿಸಲು ನಮಗೆ ಸಿಗುವುದಿಲ್ಲವೆ? ಇನ್ನು, ಈ ಗೋಷ್ಠಿಗಳಲ್ಲಿ ಭಾಗವಹಿಸಿ ವಿಚಾರ ಮಂಡಿಸುವವರಾದರೂ ಯಾರು? ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಸಮ್ಮೇಳನದಿಂದ ಸಮ್ಮೇಳನಕ್ಕೆ ಹಾರುತ್ತ, ಅಂದಕಾಲತ್ತಿಲೆ ಹೇಳಲು ಶುರುಮಾಡಿದ ವಿಚಾರಗಳನ್ನೇ ಟೇಪ್ ರೆಕಾರ್ಡರಿನಂತೆ ಉರುಹೊಡೆಯುತ್ತಾ ಬಂದಿರುವ ಸರಕಾರಿ ಸಾಹಿತಿಗಳು. ಬಹುಶಃ ಅದಕ್ಕೇ ಏನೋ, ಸಾಹಿತ್ಯ ಸಮ್ಮೇಳನದ ವರದಿಗೆ ಮೀಸಲಿಡುವ ದಿನಪತ್ರಿಕೆಯ ಒಂದಿಡೀ ಪುಟದಲ್ಲಿ ಊಟದ ವಿವರಗಳೇ ತುಂಬಿಕೊಂಡಿರುತ್ತವೆ. ಹೆಚ್ಚಿನ ಗೋಷ್ಠಿಗಳಲ್ಲಿ ಜನ ಊಟತಿಂಡಿಗಳಾದ ಮೇಲೆ ಕುರ್ಚಿ ಸಿಕ್ಕಿತೆಂದು ಕೂತು ಸುಧಾರಿಸಿಕೊಂಡು ಹೋಗುತ್ತಾರೆಯೇ ವಿನಾ ವೇದಿಕೆಯ ಮೇಲಿಂದ ಏನೇನು ಮಾತುಗಳು ತೇಲಿ ಬರುತ್ತಿವೆಯೆಂದು ತಲೆ ಕೆಡಿಸಿಕೊಳ್ಳುವುದಿಲ್ಲ.

ಸಾಹಿತ್ಯ ಸಮ್ಮೇಳನಗಳು ಬದಲಾಗಬೇಕು. ಮುಖ್ಯವಾಗಿ ಇವು ಬೇಕೇ ಬೇಡವೇ ಎಂಬುದನ್ನಾದರೂ ಸರಕಾರ ಗಂಭೀರವಾಗಿ ಯೋಚಿಸಬೇಕು. ವರ್ಷಕ್ಕೊಂದಾವರ್ತಿ ರಾಜ್ಯದ ಒಂದೊಂದು ಜಾಗದಲ್ಲಿ ಗುಂಡಿ ತೋಡಿ ದುಡ್ಡು ಸುರಿಯುವುದಕ್ಕಿಂತ ಪ್ರತಿವರ್ಷ ಒಂದು ತಾಲೂಕು ಗುರುತಿಸಿ ಶಾಶ್ವತವಾದ ಪುಸ್ತಕದಂಗಡಿಗಳನ್ನೋ, ಲೈಬ್ರರಿಗಳನ್ನೋ ಯಾಕೆ ತೆರೆಯಬಾರದು? ಅಥವಾ ಸಮ್ಮೇಳನ ನಡೆಸಿದ ಜಿಲ್ಲೆಯಲ್ಲಿ ಯಾಕೆ ಯಾವುದಾದರೂ ಸಾಹಿತಿಯ ಮನೆಯನ್ನು ಸ್ಮತಿಭವನವನ್ನಾಗಿ ಪರಿವರ್ತಿಸುವ ಕೆಲಸ ಮಾಡಬಾರದು? ಸಮ್ಮೇಳನ ನಡೆಸುವುದೇ ಆದರೆ ಯಾಕೆ ಜೀವಂತಿಕೆಯಿರುವ ಗೋಷ್ಠಿಗಳನ್ನು ಆಯೋಜಿಸಬಾರದು? ಸಾಹಿತ್ಯ ಸಮ್ಮೇಳನಗಳಿಗೆ ಕತೆ-ಕಾದಂಬರಿ ಬರೆದವರನ್ನು ಹೊರತುಪಡಿಸಿ ಬೇರೆ ಯಾವ ಸಾಹಿತಿಗಳನ್ನೂ ಅಧ್ಯಕ್ಷರಾಗಿ ಆರಿಸಬಾರದೆಂಬ ನಿಯಮವೇನಾದರೂ ಇದೆಯೇ? ವಿಜ್ಞಾನ ಸಾಹಿತಿಗಳು, ಮಾಹಿತಿ ಸಾಹಿತ್ಯ ಕೊಟ್ಟವರು, ವಿಮರ್ಶಕರು, ಬೀದಿ ನಾಟಕಗಳನ್ನು ಬರೆದು ಆಡಿಸಿದವರು, ಮಕ್ಕಳ ಕತೆಗಳನ್ನು ವ್ರತದಂತೆ ವರ್ಷಾನುಗಟ್ಟಲೆ ಬರೆದುಕೊಂಡು ಬಂದವರು, ಕೃಷಿ ಸಂಬಂಧಿತ ಲೇಖನಗಳನ್ನೂ ಪುಸ್ತಕಗಳನ್ನೂ ಬರೆದವರು, ವಿತ್ತಸಾಹಿತ್ಯ ರಚಿಸಿದವರು, ನಗೆಸಾಹಿತಿಗಳು, ಚುಟುಕ ಬರೆದವರು ಇವರ್ಯಾಾರೂ ಸಾಹಿತಿಗಳಲ್ಲವೇ? ಯಾರೂ ಓದದ ಸಾಹಿತಿಗಳನ್ನು ಮುಖ್ಯವೇದಿಕೆಯಲ್ಲಿ ಉತ್ಸವಮೂರ್ತಿಗಳನ್ನಾಾಗಿ ಮಾಡಿ, ಯಾರೂ ಕೇಳದ ಗೋಷ್ಠಿಗಳನ್ನು ಆಯೋಜಿಸಿ, ಕನ್ನಡ ಬೆಳೆಯಬೇಕೆಂದು ಬಯಸುವುದು ಹಾಸ್ಯಾಸ್ಪದವಾಗುವುದಿಲ್ಲವೆ?

ಕಳೆದ ಸಲ ಶ್ರವಣಬೆಳಗೊಳದಲ್ಲಿ ನಡೆದ ಸಮ್ಮೇಳನದ ಮೊದಲ ದಿನದ ಸಂಜೆ ಒಂದಷ್ಟು ಸಾಹಿತಿಗಳು ಕಲೆತು ಈ ಸಲ ಭೈರಪ್ಪನವರನ್ನು ಬಯ್ಯುವ ಕಾರ್ಯಕ್ರಮ ಇಟ್ಟುಕೊಳ್ಳೋಣ ಎಂದು ಯೋಜಿಸಿದರಂತೆ. ಅದರಂತೆ ಮರುದಿನದ ಕಾರ್ಯಕ್ರಮಗಳ ರೂಪುರೇಷೆಗಳು ತಟ್ಟನೆ ಬದಲಾಗಿಬಿಟ್ಟವು. ಗೋಷ್ಠಿಯ ವಿಷಯ ಯಾವುದೇ ಇರಲಿ, ಅದೆಲ್ಲವನ್ನೂ ಪಕ್ಕಕ್ಕಿಟ್ಟು ಭೈರಪ್ಪರನ್ನು ಬಯ್ಯುವ ಒಂದಂಶದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಮ್ಮೇಳನಕ್ಕೆ ಮತ್ತು ಸ್ವಂತಕ್ಕೆ ಅತಿಮುಖ್ಯವಾಗಿ ಬೇಕಿದ್ದ ಟಿಆರ್‌ಪಿಯನ್ನು ಅಂತೂ ಆ ಮೂಲಕ ಹೊಂದಿಸಿದ್ದಾಯಿತು! ಈ ಬಾರಿಯ ಸಮ್ಮೇಳನ ಅದಕ್ಕಿಂತ ಭಿನ್ನವಾಗಿರುತ್ತದೆ ಎಂದೇನೂ ಭಾವಿಸುವಂತಿಲ್ಲ.

ಸಮ್ಮೇಳನ ಎಂದರೆ ರಾಜಕಾರಣಿಗಳ ಒಡ್ಡೋಲಗ, ಒಂದಷ್ಟು ಬಲಪಂಥೀಯ ಸಾಹಿತಿಗಳ ಹೀಯಾಳಿಕೆ ಮತ್ತು ಪ್ರಸ್ತುತ ಕಾಲಘಟ್ಟಕ್ಕೆ ಸಂಬಂಧವೇ ಇಲ್ಲದ ಯಾವ್ಯಾವುದೋ ಸಮಸ್ಯೆಗಳ ಅಡಗೂಲಜ್ಜಿ ಕತೆಗಳ ವಿಸ್ತಾರವಾದ ರೋದನೆ – ಇದಿಷ್ಟೇ ಎಂಬಂತಾಗಿದೆ. ಸಮ್ಮೇಳನದ ಮುಕ್ತಾಯದ ಹೊತ್ತಿಗೆ, ಇದುವರೆಗೆ ಒಮ್ಮೆಯೂ ಈಡೇರದ ನಿರ್ಣಯಗಳನ್ನು ಮತ್ತೊಮ್ಮೆ ಬರೆದು ಓದಿ, ಈ ವರ್ಷದ ಸಮ್ಮೇಳನ ಮುಗಿಯಿತು ಎಂದು ಪಿಂಡಪ್ರದಾನ ಮಾಡುತ್ತಾರೆ. ಸಾಹಿತ್ಯ ಸಮ್ಮೇಳನಗಳಿಂದ ಕ್ಯಾಟರಿಂಗ್ ಮತ್ತು ಚಪ್ಪರ ಹಾಕುವ ಮಂದಿಗಲ್ಲದೆ ಬೇರೆ ಯಾರಿಗೆ ಯಾವ ಬಗೆಯ ಅನುಕೂಲವಾಗುತ್ತಿದೆ, ಕನ್ನಡವೆಷ್ಟು ಉದ್ಧಾರವಾಗುತ್ತಿದೆ ಎಂಬುದೆಲ್ಲ ಬರಗೂರರ ಸಾಹಿತ್ಯದಂತೆ – ಯಾರಿಗೂ ಅರ್ಥವಾಗದ ವಿಚಾರ!

ರೋಹಿತ್ ಚಕ್ರತೀರ್ಥ

Wednesday, September 21, 2016

ನೈಸರ್ಗಿಕ ಸಂಪತ್ತಿನ ಪಾಲು ನಮಗೂ ಕೊಡಿ - ರಾಜೇಂದ್ರ ಪ್ರಸಾದ್



ಒಂದು ಪ್ರದೇಶದ ನೈಸರ್ಗಿಕ ಉತ್ಪತ್ತಿಗಳಾದ ಗಾಳಿ ನೀರು ಬೆಳಕು ಭೂಮಿ ಬಿಸಿಲು ಇವೆಲ್ಲವೂ ಆಯಾ ಪ್ರದೇಶದ ಸ್ವತ್ತು. ಅವುಗಳ ಬಳಕೆಯ ಪೂರ್ಣ ಹಕ್ಕು ಆಯಾ ಪ್ರದೇಶದ ಪಶು-ಪ್ರಾಣಿಗಳದ್ದು ಮನುಷ್ಯನನ್ನೂ ಸೇರಿಸಿ. ಇನ್ನೂ ಸಂವಿಧಾನದ ಆಧಾರದಲ್ಲಿ ಹೇಳುವುದಾದರೆ ಇವುಗಳನ್ನು ಅನುಭೋಗಿಸಿ ಬದುಕುವುದು ಮನುಷ್ಯನ ಮೂಲಭೂತ ಹಕ್ಕು.

ಈವಾಗ ನಿರ್ಧಿಷ್ಟ ಪ್ರದೇಶದ ಜನ ತಮ್ಮ ನೆಲದ್ಲಲಿ ಬಿದ್ದ, ಹರಿದು ಬಂದ ನೀರನ್ನು ಕೃಷಿ ಮತ್ತು ಕುಡಿಯುವ ನೀರಿಗಾಗಿ ಸಂಗ್ರಹಿಸಿಕೊಳ್ಳುವುದು ತಪ್ಪೇ? ಹಾಗೆ ಸಂಗ್ರಹಿಸಿದ ನೀರನ್ನು ಮತ್ತೊಂದು ಪ್ರದೇಶದ ಕೃಷಿಗಾಗಿ ನಾವೇ ಜಾರಿಗೊಳಿಸಿಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯ ಉನ್ನತ ಸ್ಥಾನಗಳು ಕಸಿದುಕೊಳ್ಳುವುದು, ಅದನ್ನು ಆದೇಶವೆಂದು ಜಾರಿಗೊಳಿಸುವುದು ನಮಗಿರುವ ಮೂಲಭೂತಹಕ್ಕನ್ನು ಉಲ್ಲಂಘಿಸಿದಂತೆ ಆಗುವುದಿಲ್ಲವೇ ?!

ಕಾವೇರಿಯ ನೀರನ್ನು ನಾವು ತಮಿಳುನಾಡಿಗೆ ಬಿಟ್ಟರೆ

* ತಮಿಳುನಾಡು ನಮಗೆ ಉಚಿತ ವಿದ್ಯುತ್ ಕೊಡುತ್ತದೆಯೇ ? ವಿದ್ಯುತ್ ಉತ್ಪತ್ತಿಯಾಗುವುದು ನೈಸರ್ಗಿಕ ಮೂಲಗಳಿಂದಲೇ ತಾನೇ!

* ಉಚಿತವಾಗಿ ತೂತುಕುಡಿಯಿಂದ ಕರ್ನಾಟಕಕ್ಕೆ ಬೇಕಾದ ಉಪ್ಪನ್ನು ಉಚಿತವಾಗಿ ಸರಬರಾಜು ಮಾಡುತ್ತದೆಯೇ! ಉಪ್ಪಿನ ಮೂಲ ಸಮುದ್ರ.

*ಕಾವೇರಿ ನೀರಿನ ಬಳಕೆ ಮಾಡುವ ತಮಿಳುನಾಡಿನ ಪ್ರದೇಶಗಳಲ್ಲಿ ಸಂಗ್ರಹವಾಗುವ ಭೂಕಂದಾಯದಲ್ಲಿ ನಮಗೆ ಭಾಗ ಕೊಡುತ್ತದೆಯೇ?!

* ಕಾವೇರಿ ನದೀ ಮುಖಜ ಭೂಮಿಯಲ್ಲಿ ಇದೆ ಎನ್ನಲಾಗುತ್ತಿರುವ ತೈಲ ಮತ್ತು ನೈಸರ್ಗಿಕ ನಿಕ್ಷೇಪಗಳ ಆದಾಯದಲ್ಲಿ ಕರ್ನಾಟಕಕ್ಕೆ ಎಷ್ಟು ಪಾಲು ಕೊಡಲು ಸಿದ್ದವಿದೆ ?!

* ಮಾನವೀಯತೆ ಆಧಾರದಲ್ಲಿ ಕೃಷ್ಣಾನದಿಯಿಂದ ಪ್ರತಿವರ್ಷ 5 ಟಿ‌ಎಮ್‌ಸಿ ನೀರನ್ನು ಕುಡಿಯಲು ಚೆನ್ನೈ ನಗರಕ್ಕೆ ಕೊಡುತ್ತೇವಲ್ಲ. ಅದಕ್ಕೆ ಪ್ರತಿಯಾಗಿ ಕಾವೇರಿಯಿಂದ 5 ಟಿ‌ಎಮ್‌ಸಿ ನೀರನ್ನು ಬೆಂಗಳೂರು ನಗರಕ್ಕೆ ಕೊಡಿಸಲು ಸಾಧ್ಯವೇ?!

ಹೇಳಿ ತಮಿಳುನಾಡು /ಪುದುಚೇರಿ / ಕೇಂದ್ರ ಸರಕಾರಗಳೇ ಅಥವಾ ಆದೇಶ ಕೊಡುವ ವ್ಯವಸ್ಥೆಗಳೇ ಕರ್ನಾಟಕಕ್ಕೆ ತಮಿಳಿನಾಡು / ಪುದುಚೇರಿಯ ಯಾವ ನೈಸರ್ಗಿಕ ಸಂಪತ್ತಿನಲ್ಲಿ ನಮಗೆ ಪಾಲು ಕೊಡಲು ಮತ್ತು ಕೊಡಿಸಲು ತಯಾರಿದ್ದೀರಿ?
ಅದನ್ನು ಕೊಡಲು, ಕೊಡಿಸಲು ಸಾಧ್ಯವಾಗದೇ ಇದ್ದಲ್ಲಿ ಕರ್ನಾಟಕದ ಜನರ ನೈಸರ್ಗಿಕ ಜಲಸಂಪತ್ತನ್ನು ಕೇಳುವ ಯಾವ ನೈತಿಕತೆ ಅಥವಾ ಹಕ್ಕು ನಿಮಗೆ ಇದೆ! ಕಾನೂನಿನ ಮೂಲಕ ನಡೆಯುತ್ತಿರುವ ಇದು ದೌರ್ಜನ್ಯವಲ್ಲವೇ, ಇದು ಶೋಷಣೆಯಲ್ಲವೇ?!

ಸಂಪತ್ತು ಪಾಲುಕೊಡಲಾಗದ ಸರಕಾರಗಳು ಹಣ ಕೊಟ್ಟು ನೀರನ್ನು ಕೊಂಡುಕೊಳ್ಳಿ. ಅಥವಾ ಬೇರೆಡೆ ನೀರು ಹುಡುಕಿಕೊಳ್ಳಿ.

___

ಕೋರ್ಟ್ ಗಳಲ್ಲಿ ನಮ್ಮ ನೈಸರ್ಗಿಕ ಸಂಪತ್ತನ್ನು ಬಳಸಿಕೊಳ್ಳುವ ಕುರಿತು ನೆಟ್ಟಗೆ ವಾದಿಸಲು, ಪುರಾವೆ ಒದಗಿಸಲು ಸಾಧ್ಯವಿಲ್ಲದ ಸರಕಾರಗಳು, ಸಂಸದರು, ಶಾಸಕರು ಇದ್ದರೆಷ್ಟು ಹೋದರೆಷ್ಟು?!
ಕುಡಿಯುವ ನೀರು ಕೊಡಿಸಲು ಸಾಧ್ಯವಾಗದ ನಿಮ್ಮಂತಹ ಪ್ರತಿನಿಧಿಗಳನ್ನು ಇಟ್ಟುಕೊಂಡು ಏನು ಮಾಡೋಣ?
ಒಕ್ಕೂಟವ್ಯವಸ್ಥೆಯಲ್ಲಿ ಪ್ರಧಾನಿಯೊಬ್ಬರು ಮಧ್ಯಸ್ಥಿಕೆವಹಿಸಲು ಹಿಂಜರಿಯುತ್ತಾರೆ, ಬರೆದ ಪತ್ರಗಳಿಗೆ ಉತ್ತರಕೊಡದೇ ಅದೇ ವ್ಯವಸ್ತೆಗೆ ದ್ರೋಹವೆಸಗುತ್ತಾರೆ. ಒಂದು ಕಠಿಣ ನಿರ್ಧಾರ ಕೈಗೊಳ್ಳಲು ಅಶಕ್ತವಾದ ಮುಖ್ಯಮಂತ್ರಿ, ತಮ್ಮ ಭಾಗದ ಜನರ ನೀರಿಗೆ ಓಡಾಡಲು ಸಾಧ್ಯವಾಗದ ಅಪ್ರಯೋಜಕ ಸಂಸದರು ಮತ್ತು ಶಾಸಕರು, ಕಡೆಗೆ ಏನು ಮಾಡಬೇಕು ಅಂತಲೂ ತಿಳಿಯದ ಹೀಗೆ ಬಡಬಡಿಸಿಕೊಂಡು ಕುಳಿತೇ ಇರುವ ನಾವು ನಾಗರೀಕರು!

ಕನ್ನಡನಾಡಿನ ಜನ ರಾಜಕೀಯವಾಗಿ ಒಂದು ಬದಲಾವಣೆಯನ್ನಂತೂ ಮಾಡಿಕೊಳ್ಳಲೇಬೇಕಿದೆ. ಈಗ ತುರ್ತಾಗಿ. ಅದು ಕನ್ನಡ ಕೇಂದ್ರಿತ ಸದೃಢ ರಾಜಕಾರಣ. ಸದೃಢ ರಾಜಕಾರಣವೊಂದೇ ನಮಗೆ ನ್ಯಾಯ ಒದಗಿಸಬಲ್ಲುದು. ಈ ರಾಷ್ಟ್ರಿಯವಾದಿಗಳು , ರಾಷ್ಟ್ರೀಯ ಪಕ್ಷಗಳು ನಮ್ಮ ಪಾಲಿನ ಯಮಧೂತರು. ಕನ್ನಡ ಸ್ವಾಭಿಮಾನವನ್ನು ನಾವು ರಾಜಕೀಯವಾಗಿ ಬೆಳೆಸಿಕೊಳ್ಳಬೇಕಿದೆ. ಅದು ನಮಗಿರುವ ಒಂದೇ ಮಾರ್ಗ.

Friday, June 24, 2016

ಕರುಣಾಳು ಬಾ ಬೆಳಕೆ .. - ಬಿ.ಎಂ. ಶ್ರೀಕಂಠಯ್ಯ


ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು
ಕೇಳನೊಡನೆಯೆ ಸಾಕು ನನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು

ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೆಯೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ

                                                      - ಬಿ.ಎಂ. ಶ್ರೀಕಂಠಯ್ಯ

"ಕೋರಿಕೆ" - ಈಶ್ವರ ಸಣಕಲ್ಲ


ಜಗವೆಲ್ಲ ನಗುತಿರಲಿ!
ಜಗದಳುವು ನನಗಿರಲಿ!
ನಾನಳಲು, ಜಗವೆನ್ನನೆತ್ತಿಕೊಳದೇ?
ನಾ ನಕ್ಕು, ಜಗವಳಲು ನೋಡಬಹುದೇ?
ತೆರವಾಗಿ ನನ್ನೆದೆಯು,
ಧರೆಯೆದೆಯು ಉಕ್ಕಿರಲಿ!
ಧರೆಯೊಳಗೆ ತೇಲಿಸುವೆನೆನ್ನೆದೆಯನು!
ಧರೆ ಬತ್ತಿ, ಎನ್ನೆದೆಯು ಉಕ್ಕಲೇನು?
ಪೊಡವಿಯೈಸಿರಿವಡೆದು,
ಬಡತನವು ನನಗಿರಲಿ
ಕೈಯೊಡ್ಡೆ ಪೊಡವಿಯೆನಗಿಕ್ಕದೇನು?
ಪೊಡವಿಯೇ ಮೈಯಳಿಯೆ, ಮಾಡಲೇನು?
ವಿಶ್ವವನು ತುಂಬಿರುವ
ಈಶ್ವರನೆ ಅಳತೊಡಗೆ,
ಸೈತಿಡಲು, ಸೈಪಿಡಲು ಬರುವನಾವಂ?
’ಹೇ ತಂದೆ’,ಎನಲೆನ್ನನವನೆ ಕಾವಂ!

ವಸಂತ ಬಂದ, ಋತುಗಳ ರಾಜ ತಾ ಬಂದ - ಬಿ ಎಂ ಶ್ರೀ

ವಸಂತ ಬಂದ, ಋತುಗಳ ರಾಜ ತಾ ಬಂದ
ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ,
ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ,
ಕೂವೂ , ಜಗ್‌ ಜಗ್‌, ಪುವ್ವೀ, ಟೂವಿಟ್ಟವೂ !

ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ,
ಇನಿಯರ ಬೇಟ; ಬನದಲಿ ಬೆಳದಿಂಗಳೂಟ,
ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಟ,
ಕೂವೂ , ಜಗ್‌ ಜಗ್‌, ಪುವ್ವೀ, ಟೂವಿಟ್ಟವೂ !

ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು,
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು,
ಕೂವೂ , ಜಗ್‌ ಜಗ್‌, ಪುವ್ವೀ, ಟೂವಿಟ್ಟವೂ !

ಬಂದ ವಸಂತ - ನಮ್ಮಾ ರಾಜ ವಸಂತ !


ಇಂಗ್ಲಿಷ್ ಗೀತಗಳು’ ಸಂಕಲನದ್ದು. ಆಂಗ್ಲ ಕವಿ Thomas Nashe (1567–1601) ಬರೆದ ’Spring' ಕವಿತೆಯ ಅನುವಾದ.

ವನಸುಮದೊಲೆನ್ನ ಜೀವನವು ವಿಕಸಿಸುವಂತೆ - ಡಿ ವಿ ಜಿ

ವನಸುಮದೊಲೆನ್ನ ಜೀವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೆ, ಹೇ ದೇವಾ

ಜನಕೆ ಸಂತಸವೀವಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ

ಕಾನನದಿ ಮಲ್ಲಿಗೆಯುಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ

ಉಪಕಾರಿ ನಾನು ಎನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು ವಿಪುಲಾಶ್ರಯವೀವ
ಸುಫಲ ಸುಮಭರಿತ ಪಾ-
ದಪದಂತೆ ನೈಜಮಾದೊಳ್ವಿನಿಂ ಬಾಳ್ವವೊಲು

- ಡಿ ವಿ ಜಿ


ಓದಿ ಬ್ರಾಹ್ಮಣನಾಗು - ಸಿದ್ಧಯ್ಯ ಪುರಾಣಿಕ

ಓದಿ ಬ್ರಾಹ್ಮಣನಾಗು
ಕಾದಿ ಕ್ಷತ್ರಿಯನಾಗು
ಶೂದ್ರ ವೈಶ್ಯನೆ ಆಗು
ದುಡಿದು ಗಳಿಸಿ
ಏನಾದರೂ ಆಗು
ನಿನ್ನೊಲವಿನಂತಾಗು
ಏನಾದರೂ ಸರಿಯೆ –
ಮೊದಲು ಮಾನವನಾಗು

ಹಿಂದು ಮುಸ್ಲಿಮನಾಗು
ಬೌದ್ಧ ಕ್ರೈಸ್ತನೆ ಆಗು
ಚಾರ್ವಾಕನೇ ಆಗು
ಭೋಗ ಬಯಸಿ
ಏನಾದರೂ ಆಗು
ಹಾರೈಸಿದಂತಾಗು
ಏನಾದರೂ ಸರಿಯೆ –
ಮೊದಲು ಮಾನವನಾಗು

ರಾಜಕಾರಣಿಯಾಗು
ರಾಷ್ಟ್ರಭಕ್ತನೆ ಆಗು
ಕಲೆಗಾರ ವಿಜ್ಞಾನಿ
ವ್ಯಾಪಾರಿಯಾಗು
ಏನಾದರೂ ಆಗು
ನೀ ಬಯಸಿದಂತಾಗು
ಏನಾದರೂ ಸರಿಯೇ –
ಮೊದಲು ಮಾನವನಾಗು


ಸಿದ್ಧಯ್ಯ ಪುರಾಣಿಕ ( 1918-1994)

Monday, June 13, 2016

ಬಿಎಂಆರ್ಸಿಎಲ್(BMRCL)ನಲ್ಲಿ ಉದ್ಯೋಗ


ಬಿಎಂಆರ್ಸಿಎಲ್(BMRCL)ನಲ್ಲಿ ಉದ್ಯೋಗ


http://kannadakannadigga.blogspot.in/p/blog-page_13.html

BMRCL Vacancy Details:
Total No of Posts: 308
Name of the Posts:
1. Maintainer: 72 Posts
2. Train Operator: 255 Posts
3. Section Engineer: 11 Posts

Monday, May 30, 2016

ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು - ಜಾನಪದ ಗೀತೆ

ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು
ಸ್ವಾಮೀ ನನ್ನಯ್ಯ ರಥವೇರಿ
ಬರುವಾಗ ನಾವೆದ್ದು ಕೈಯ್ಯ ಮುಗುದೇವು

ಮಕ್ಕಳಾಟವು ಚಂದ ಮತ್ತೆ ಯೌವನ ಚಂದ
ಮುಪ್ಪಿನಲಿ ಚಂದ ನರೆಗಡ್ಡ
ಜಗದೊಳಗೆ ಎತ್ತ ನೋಡಿದರೂ ನಗು ಚಂದ

ಹಾಲ್ಬೇಡಿ ಅತ್ತಾನ ಕೊಲ್ಬೇಡಿ ಕುಣುದಾನ
ಮೊಸರ್ಬೇಡಿ ಕೆಸರಾ ತುಳುದಾನ
ಕಂದನ ಕುಸುರಾದ ಗೆಜ್ಜೆ ಕೆಸರಾಯ್ತು

ಕಪ್ಪೆಂದು ಜನರನ್ನು ಎತ್ಯಾಡದಿರು ಕಂಡ್ಯ
ಕಪ್ಪಾದ ಹಸುವು ಕರೆದಾರೆ
ಆ ಹಾಲು ಒಪ್ಪೀತು ಶಿವನ ಪೂಜೆಗೆ
ಎಲ್ಲಾದರು ಇರಲವ್ವ ಹುಲ್ಲಾಗಿ ಬೆಳೆಯಾಲಿ
ನೆಲ್ಲಿ ಬುಡ್ಯಾಗಿ ಚಿಗಿಯಾಲಿ
ನನ ಕಂದ ಜಯವನ್ತನಾಗಿ ಮೆರೆಯಾಲಿ
               

                                      * * * *


Thursday, May 26, 2016

ನಾನೊಂದು ಸಮಾಜವಾಗಿದ್ದರೆ.


 ನಾನೊಂದು ಸಮಾಜವಾಗಿದ್ದರೆ  ದಹಿಸುತ್ತಿದ್ದೆ ಜಾತಿಯ ಬೇರುಗಳನ್ನು
ಕಿತ್ತೆಸೆಯುತ್ತಿದ್ದೆ ಕೆಟ್ಟ ಸಂಪ್ರದಾಯ, ಮೂಢನಂಬಿಕೆಗಳನು
ತುಳಿಯುತ್ತಿದ್ದೆ ಅಧರ್ಮ, ಅನೀತಿ, ಹಿಂಸೆಗಳನ್ನು  ವಾಮನನಂತೆ!
ಸೃಷ್ಠಿಸುತ್ತಿದ್ದೆ ಸುಧರ್ಮ, ಸುಜ್ಞಾನ,ಸುನೀತಿಗಳನ್ನು  ನಿಸರ್ಗದಂತೆ
ಪ್ರತಿಷ್ಟಾಪಿಸುತ್ತಿದ್ದೆ ಚಿಂತಕರನು, ದಾರ್ಶನಿಕರನು, ದೇವರ ಜಾಗದಲ್ಲಿ!
ನಿರ್ಮಿಸುತ್ತಿದ್ದೆ ಹುತ್ಮಾರ ಮಂದಿರಗಳ ಕಂಡ ಕಂಡಲ್ಲಿ
ಮಟ್ಟಹಾಕುತ್ತಿದ್ದೆ ಭಯೋತ್ಪಾಧನೆ, ಭ್ರಷ್ಟಾಚಾರ, ದುರಾಡಳಿತವನ್ನು
ತೂಡಿಸುತ್ತಿದ್ದೆ ನಗ್ನ ರಾಜಕೀಯ ಸ್ಥಿತಿಗೆ ಶುಭ್ರ ಬಟ್ಟೆಯನ್ನು
ನಿಲ್ಲಿಸುತ್ತಿದ್ದೆ ಕದನ, ಜಗಳ, ಕೋಪ ಎಲ್ಲರ ಮನದಲ್ಲಿ
ನಿಡುತ್ತಿದ್ದೆ ಸಮಸ್ಯಗಳನ್ನು ಎದುರಿಸುವ ಶಕ್ತಿ ಜನರಲ್ಲಿ
ತಿಳಿಸುತ್ತಿದ್ದೆ ಜೀವನದ ಸಾರ್ಥಕ ಭಾವ ಏನೆಂದು
ಬೇಡಿಕೊಳ್ಳುತ್ತಿದ್ದೆ ಬುದ್ಧ, ಬಸವ, ಗಾಂಧಿ ಮತ್ತೇ ಹುಟ್ಟಿ ಬರಲೆಂದು.

                         ಮಹಾಂತೇಶ ರಾಜಗುರು
              ಶಿಕ್ಷಕರು, ಕೆನರಾ ಕೇಂಬ್ರಿಡ್ಜ್ ಶಾಲೆ. ಯಡವನಹಳ್ಳಿ.

ಜೀವನ

ಜೀವನ
ತಾಯ ಹೃದಯ ಕಮಲದಲ್ಲಿ ಅರಳುವುದೇ ಜೀವನ
ತೊದಲ ನುಡಿಯ ತಪ್ಪುಗಳೇ ಜೀವನ
ಮೊದಲ ಗುರುವಿನಿಂದ ಕಲಿತ ಪಾಠವೇ ಜೀವನ
ಸುಂದರ ದಿನಗಳ ಅರ್ಥೈಸಿಕೊಳ್ಳುವುದೇ ಜೀವನ
ಸರ್ವರ ನುಡಿ ಕಲಿತು ಸರ್ವಜ್ಞನಾಗುವುದೇ ಜೀವನ
ಗುರಿಯರಿತು ಸಾಧಿಸುವುದೇ ಜೀವನ
ಸಮಸ್ಯೆಗಳ ಬೆನ್ನಟ್ಟುವ ದೈರ್ಯವೇ ಜೀವನ
ತನು ಮನವ ಶುದ್ಧಿಕರಣವೇ ಜೀವನ
ಆದರ್ಶ ಮೌಲ್ಯವುಳ್ಳ ಸಮಾಜ ನಿರ್ಮಾಣವೇ ಜೀವನ
ಉದ್ದಕ್ಕೂ ಪ್ರತಿಯೊಬ್ಬರನ್ನು ಅರ್ಥಮಾಡಿಕೊಳ್ಳುವುದೇ ಜೀವನ
ಸಮಾಜಕ್ಕೆ ತನ್ನದೆಯಾದ ಕೊಡುಗೆ ನೀಡುವುದೇ ಜೀವನ
ಸಂಸಾರದ ಹಣತೆಯಲ್ಲಿ ಬೆಳಕಾಗುವುದೇ ಜೀವನ
ನಿಸರ್ಗ ನಿಯಮಗಳ ಅರಿಯುವುದೇ ಜೀವನ
ನೆಲೆ ನಿಲ್ಲಲು ಅವಕಾಶವೇ ಇಲ್ಲದ ಜೀವನ
ಕೊನೆಗೊಂದು ದಿನ ಜೀವನದ ಅಂತ್ಯವೇ ಜೀವನ.

ಮಹಾಂತೇಶ ರಾಜಗುರು, ಶಿಕ್ಷಕರು.
ಕೆನರಾ ಕೇಂಬ್ರಿಡ್ಜ್ ಶಾಲೆ, ಯಡವನಹಳ್ಳಿ.

ನನ್ನಾಸೆ.

ನನ್ನಾಸೆ.

ಜಗತ್ತನೇ ಬೆಳಗುವ ಸೂರ್ಯನ ಹಾಗೆ ಪ್ರಜ್ವಲಿಸುವಾಸೆ,
ಗ್ರಹ ತಾರೆಯರ ಜೊತೆ ಆಟವಾಡುವಾಸೆ,
ತಿಂಗಳನ ಬೆಳಕಲ್ಲಿ ಮಿಯುವಾಸೆ,
ಹಚ್ಚ ಹಸುರಿನ ಮರದಲ್ಲಿ ಚಿಗುರುವಾಸೆ,
ಹಕ್ಕಿಗಳ ಕೊರಳ ಸ್ವರವಾಗುವಾಸೆ,
ಜೇನಗೂಡಲ್ಲಿ ಬೆರೆತು ಒಗ್ಗಟ್ಟು ಪ್ರದರ್ಶಿಸುವಾಸೆ,
ದುಂಬಿಗೆ ಆಹಾರ ನೀಡುವ ಹೂವಾಗುವಾಸೆ,

ಅನ್ನದಾತನ ಬಾಳ ಬೆಳಗುವ ವರ್ಷವಾಗುವಾಸೆ,
ಹಣತೆಯ ತೈಲದಲ್ಲಿ ಬೆರೆತು ಬೆಳಕಾಗುವಾಸೆ,
ಕೆಟ್ಟವರ ಹೃದಯದಲ್ಲಿ ಕುಳಿತು ಬದಲಾಯಿಸುವಾಸೆ,
ಬಸವನುದಿಸಲಿ ಎಂದು ತಪಗೈಯುವಾಸೆ,
ಬುದ್ಧ, ಗಾಂಧೀಯರ ಶಾಂತಿ ಮಂತ್ರವ ಪಠಿಸುವಾಸೆ,

ಭಾರತಾಂಬೆಯನ್ನು ನಭದೆತ್ತರಕ್ಕೆ ಬೆಳಗಿಸುವಾಸೆ........
ಈ ಆಸೆಯ ಈಡೆರಿಸುವಾಸೆಗೆ ಬಲ ನೀಡುವರಾರು? ಯಾರು?
ಯಾರು?!........?

ಮಹಾಂತೇಶ ರಾಜಗುರು, ಶಿಕ್ಷಕರು.
ಕೆನರಾ ಕೇಂಬ್ರಿಡ್ಜ್ ಶಾಲೆ, ಯಡವನಹಳ್ಳಿ.

Friday, May 20, 2016

ಬಿರು ಮಧ್ಯಾಹ್ನ ಮೈಗಂಟಿದ ಶರಟಿನಿಂದೇಳೊ.... - ಶರತ್ ಚಕ್ರವರ್ತಿ

ಬಿರು ಮಧ್ಯಾಹ್ನ
ಮೈಗಂಟಿದ ಶರಟಿನಿಂದೇಳೊ ಹಬೆ ಹತ್ತಿಡಲು
ಗಂಟಲಿಗೆ ಅರೆಪಾವು ಮಜ್ಜಿಗೆ
ಸುರಿದುಕೊಳ್ಳುವಾಗೊಂದು ದಿಗಿಲು ಹುಟ್ಟಿಕೊಳ್ಳುತ್ತದೆ
ಓಟಬಿದ್ದು ಹೊರಬಂದರೇ
ಸೂರ್ಯನಿರುವಲ್ಲಿ ಸೂರ್ಯನೆ ಇದ್ದು,
-ಶರತ್ ಚಕ್ರವರ್ತಿ
ಮೋಡಗಳಿರುವಲ್ಲಿ ಅವುಗಳಿರದೇ
ಎದುಸುರು ಮತ್ತೂ ಏರುತ್ತದೆ
ಭೂಮಿಗೇನು ಬೆಂಕಿ ಬಿದ್ದಲ್ಲವಲ್ಲ
ಎಂದು ಸಾವರಿಸಿಕೊಳ್ಳುತ್ತೇನೆ
ಅಲ್ಲೆಲ್ಲೋ ಡ್ಯಾಮು ಬಿರಿಯಿತಂತೆ
ಎಂದು ಕೇಳುವಾಗ ತಣ್ಣಗೇ ಇದ್ದವನು
ಡ್ಯಾಮಿನ ಅಂಚಿಗೆ ಕಟ್ಟಿದ್ದ ಕಪ್ಪೆಗೂಡ ನೆನೆದು
ಮತ್ತೆ ಧಿಗಿಲಾಗುತ್ತೇನೆ
ಡ್ಯಾಮಿನಲ್ಲೆ ನೀರೆ ಇರಲಿಲ್ಲ,
ಖಾಲಿಯದ್ದು ಬಿರಿದಿದೆ ಬಿಡು
ಎಂದವರು ಸುಮ್ಮನಿರಿಸಿದ್ದರೂ
ತಮಟೆಯ ಹೊಡೆತ ನಿಲ್ಲುವುದೇ ಇಲ್ಲ
ಬಾಲ್ಯಗೆಳೆಯನೊಬ್ಬ ಕನಸಿಗೆ ಬಂದಾಗ
ಸಂತಸ ನಳನಳಿಸಿ
ಹತ್ತಿರ ಹೋಗಿ ಆಲಂಗಿಸಿಕೊಳ್ಳುತ್ತೇನೆ
ಅಪ್ಪಿಕೊಂಡಮೇಲೆ ನೆನಪಾಗುತ್ತದೆ ಅವನಿಂದ ಕದ್ದು
ಜೋಬಲ್ಲಿಟ್ಟುಕೊಂಡಿರೊ ಸವೆದ ಬಳಪ
ಅಪ್ಪಿದಾಗ ಅವನೆದೆಗೆ ಚುಚ್ಚಬಹುದೆಂದು
ಹುಷಾರಿಯಾಗುತ್ತಾ
ಮೆಲ್ಲಗೆ ಅಪ್ಪುಗೆ ಬಿಡಿಸಿಕೊಂಡು
ಮುಖಮರೆಮಾಚುತ್ತಾ ಹೊರಟೆಬಿಡುತ್ತೇನೆ
ಅದೆಷ್ಟೊ ಹೊತ್ತು ಹೋತ್ತೊಯ್ತದ ಮೇಲೆ
ಅವನಿಗೆ ಮೀಸೆಯಿದ್ದದ್ದು ನೆನಪಾಗುತ್ತದೆ
ನನ್ನ ಗಡ್ಡವನ್ನ ಸವರಿಕೊಂಡು
ನಗುವಾಗ ಬಿಕನಾಸಿ ಕಣ್ಣೀರು ಬಂದೇಬಿಡುತ್ತದೆ
ಕಾಲಾತಿಕಾಲದಲ್ಲಿ ಜಂಗಮನ ಮೇಲೆ
ಬೀಸಿದ ಕಲ್ಲು ನೆನಪಾಗಿ
ಪಾಪ ಎಂದುಕೊಳ್ಳುವಷ್ಟರಲ್ಲೆ ಅವನು
ಕಲ್ಲಿಡಿದು ಬೆನ್ನಿಂದೆಯೆ ಇರುವುದು ಕಾಣುತ್ತದೆ
ಓಡಿ ಓಡಿ ಬಯಲದಾರಿಗೆ ಬಂದರೆ
ನಡುರೋಡಲ್ಲೆ ನುಲಿದುಕೊಂಡ ಹಾವುಗಳು
ಸರಸ ಬಿಟ್ಟು ನನ್ನೆಡೆಗೆ ನೋಡುತ್ತವೆ
ಹೊಂಚು ಹಾಕುತ್ತಿದ್ದ ಮುಂಗುಸಿಯೂ
ನನ್ನ ನೋಡಿ ಕೆಕ್ಕರಿಸುತ್ತದೆ
ಸಂಬಂಧವಿಲ್ಲದ ವ್ಯವಹಾರಕ್ಕೆ ತಲೆ ಹಾಕಿದೆನೆ
ಎಂದುಕೊಂಡಾಗ
ಕಾಲಿನಲ್ಲಿ ತಾಕತ್ತಿಲ್ಲದಿದ್ದರೂ ತಲೆ ಓಡು ಎನ್ನುತ್ತದೆ
ಓಡಿಸಿಯೇ ಓಡಿಸುತ್ತದೆ, ಮತ್ತೆಲ್ಲೋ ಕೂರು ಎಂದೇಳುತ್ತದೆ
ಕೂರುವ ಮುನ್ನ ಚುಂಚಿ ನುಗ್ಗಿದಂತಾಗಿ
ನಿದ್ದೆಗೆಡುತ್ತದೆ.
ಆದರೂ ತಮಟೆ ಬಡಿಯುತ್ತಲೇ ಇರುತ್ತದೆ,
ಅದು ಕಾಲನ ಕಯ್ಯ ಢಮರುಗವಿರುಬಹುದ
ಎಂಬ ಎರಡಲುಗಿನ ಗರಗಸವೊಂದು ಮೆದುಳ
ಕತ್ತರಿಸುತ್ತಲೇಯಿದೆ.



Saturday, April 2, 2016

ನಾಕು ತಂತಿ - - ದ. ರಾ. ಬೇಂದ್ರೆ

..

ಆವು ಈವಿನ ನಾವು ನೀವಿಗೆ ಆನು ತಾನಾದ ತನ ನನಾ
ನಾನು ನೀನಿನ ಈನಿ ನಾನಿಗೆ ಬೇನೆ ಏನೋ? ಜಾಣೆ ನಾ
ಚಾರು ತಂತ್ರಿಯ ಚರಣ ಚರಣದ ಘನಘನಿತ ಚತುರಸ್ವನಾ
ಹತವೊ ಹಿತವೋ ಆ ಅನಾಹತಾ ಮಿತಿಮಿತಿಗೆ ಇತಿ ನನ ನನಾ
ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿತಸ್ತನಾ

ಗೋವಿನ ಕೊಡುಗೆಯ ಹದಗದ ಹುಡಿಗಿ ಬೆಡಗಿಲೆ ಬಂದಳು ನಡುನಡುಗಿ
ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಯಾಯ ಸಿರಿಯುಡುಗಿ
ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ
ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ
ಬೆಚ್ಚಿದ ವೆಚ್ಚವು ಬಸರಿನ ಮೊಳಕೆ ಬಚ್ಚಿದ್ಯಾವುದೋ ನಾ ತಿಳಿಯೆ
ಭೂತದ ಭಾವ ಉದ್ಬವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ

ಚಿತ್ತಿಮಳಿ ತತ್ತಿ ಹಾಕತಿತ್ತು ಸ್ವಾತಿ ಮುತ್ತಿನೊಳಗ
ಸತ್ತ್ಯೋ ಮಗನ ಅಂತ ಕೂಗಿದರು ಸಾವೀ ಮಗಳು ಭಾವಿ ಮಗಳು ಕೂಡಿ
ಈ ಜಗ ಅಪ್ಯಾ ಅಮ್ಮನ ಮಗ ಅಮ್ಮನೊಳಗ ಅಪ್ಯನ ಮೊಗ
ಅಪ್ಯನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ ಶ್ರೀ ಗುರುದತ್ತ ಅಂದ

"ನಾನು" "ನೀನು" "ಆನು" "ತಾನು" ನಾಕು ನಾಕೆ ತಂತಿ
ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ
ಗಣನಾಯಕ ಮೈ ಮಾಯಕ ಸಾಯಿ ಸಾಯಕ ಮಾಡಿ
ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ


Thursday, March 10, 2016

ಚುಟುಕ - ರಘು ವಿ,

ವರುಷವಿಡೀ ನಡೆವಂಗೆ
ಎಡವುದೇಂ ಹೊಸದೆ?
ರಘು ವಿ
ಉರಿವ ದೀಪಕ್ಕೆ ಕಿಟ್ಟ
ಕಟ್ಟುವುದೇಂ ಹೊಸದೆ?
ಜನುಮವಿಡೀ ಉರಿವ
ನಿರಂತರದ ದಿನಕರಗೆ 
ಗ್ರಹಣವಿದು ಹೊಸದೆ?
ನೆರಳಾಟಕ್ಕೆ ಅಂಜುವೊಡೆ
ಬಾಳನಂಜುಗಳ ಹೇಗೆ
ಅರಗಿಪೆಯೊ ಮನುಜ?
ಮನದ ಗ್ರಹಣವ ಕಳೆದು
ನಡೆ ಬೆಳಕಿನೆಡೆಗೆ!
[ ಕಿಟ್ಟ ಕಟ್ಟುವುದು = ಬತ್ತಿ ಉರಿದು ಕಪ್ಪಾಗುವುದು. Carbonization]




Monday, March 7, 2016

ಆರೈಕೆಯ ಅವಧಾನ - ಮಾಲತಿ ಹೆಗ್ಗಡೆ ( ವಿಜಯವಾಣಿ - ೨೨ ಫೆಬ್ರವರಿ ೨೦೧೬)

ಅಮ್ಮಾ, ನೀನು ನಿನ್ನ ಎಲ್ಲಾ ಒಡವೆನೂ ಮನೆಗೆ ಅ೦ತ ಕೊಟ್ಟುಬಿಟ್ಟೆಯೇನಮ್ಮಾ? ಒ೦ದಾದರೂ ಇಟ್ಟುಕೊಳ್ಳಬೇಕಿತ್ತು. ನೀನು ಅವನ್ನೆಲ್ಲ ಧರಿಸಿದರೆ ಎಷ್ಟು ಸು೦ದರವಾಗಿ ಕಾಣುತ್ತಿದ್ದೆ' ಎ೦ದು ಅಳುತ್ತ ಕೇಳಿದ ಬಾಲಕನ ವಯಸ್ಸು ಏಳು ವಷ೯ವಷ್ಟೇ. "ಹೂ೦ ಕಣಪ್ಪಾ. ನಿಮ್ಮಪ್ಪ ಮನೆ ಕಟ್ಟಿಸಬೇಕು ಅ೦ತ ಅ೦ದುಕೊ೦ಡಿದ್ದಾರೆ. ಒಡವೆ ಆದ್ರೆ ನಾನು ಒಬ್ಬಳೇ ಧರಿಸಬೇಕು. ಒಡವೆನೆಲ್ಲಾ ಮಾರಿ ಮನೆ ಕಟ್ಟಿಸಿದರೆ ಎಲ್ಲಾರಿಗೂ ಅನುಕೂಲ' ಎ೦ದು ಮಗನನ್ನು ತಬ್ಬಿ ಸ೦ತೈಸಿದಳು ಆಕೆ. ಅವಧಾನ ಕಲೆಯೊ೦ದಿಗೆ ಅವಿನಾಭಾವವಾಗಿ ಬೆರೆತ ಆ ಮಗನ ಹೆಸರು ಗಣೀಶ. ಅಮ್ಮನ ಹೆಸರು ಅಲಮೇಲು.
ಶ್ರೀಮ೦ತ ಕುಟು೦ಬದಲ್ಲಿ ಜನಿಸಿದ ಅವಳು ಕಲೆ, ಸಾಹಿತ್ಯ, ಸ೦ಗೀತ ಎಲ್ಲವುಗಳಲ್ಲಿ ಅಭೀರುಚಿ ಇದ್ದವಳು. ದೇಶಕ್ಕೆ ಸ್ವಾತ೦ತ್ರ್ಯ ಬ೦ದ ಹೊಸದರಲ್ಲೇ ಬಿ.ಎ. ಪದವಿ ಓದಿದ, ತು೦ಬ ಪ್ರಾಮಾಣಿಕನಾದ ಸಕಾ೯ರಿ ಉದ್ಯೋಗಿಯೊ೦ದಿಗೆ ಅವಳ ವಿವಾಹವಾಯಿತು. ಆ ಕಾಲದಲ್ಲಿ ಸಕಾ೯ರಿ ಉದ್ಯೋಗಿಗಳಿಗೆ, ಪ್ರಾಮಾಣಿಕವಾಗಿ ಬದುಕುವವರಿಗೆ ಜೀವನ ನಿವ೯ಹಣೆ ಬಲು ಕಷ್ಟವೆನ್ನುವ ಸ್ಥಿತಿ ಇರುತ್ತಿತ್ತು. ತವರೂರಿನ ಅನುಕೂಲವನ್ನು ನೆನೆದು ಸೇರಿದ ಕುಟು೦ಬವನ್ನು ಹಳಿದವಳಲ್ಲ ಆಕೆ. ಅಭ್ಯಾಸವಿಲ್ಲದ ಕೆಲಸಗಳನ್ನೆಲ್ಲ ಒ೦ದೊ೦ದಾಗಿ ಕಲಿತಳು. ಸುತ್ತಮುತ್ತಲಿನವರೆಲ್ಲರೊ೦ದಿಗೆ ಬೆರೆತಳು. ಶಿಸ್ತಿನ ಸರದಾರ ಎನಿಸುವ ಪತಿಗೆ ಶೀಘ್ರವಾಗಿ ಸಿಟ್ಟು ಬರುತ್ತಿತ್ತು. ತಾಳ್ಮೆಯ ಪ್ರತಿರೂಪದ೦ತಿರುವ ಅಲಮೇಲು ನಗುನಗುತ್ತಲೇ ಬದುಕಿನ ಹೊಣೆ ಹೊರುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು. "ಶಾಲೆಯಲ್ಲಿ ಏನು ಕಲಿಯುತ್ತೀರೋ ಅದನ್ನು ಚೆನ್ನಾಗಿ ಕಲಿಯಿರಿ, ಅದಕ್ಕೆ ಬೇಕಾದ ಎಲ್ಲಾ ಸವಲತ್ತನ್ನು ನಾನು ಒದಗಿಸುತ್ತೇನೆ' ಎ೦ಬ ಪತಿಗೆ ಲಲಿತಕಲೆಗಳೆ೦ದರೆ ಸೋಮಾರಿಗಳು ಕಾಲಕ್ಷೇಪ ಮಾಡುವ ಸ೦ಗತಿ ಎನಿಸುತ್ತಿತ್ತು.
ಅಲಮೇಲು ಅವರಿಗೆ ಲಲಿತಕಲೆಗಳಲ್ಲಿ ಅಪಾರ ಆಸಕ್ತಿ ಇತ್ತು. ಮಗ ಇ೦ಜಿನಿಯರಿ೦ಗ್ ಓದುತ್ತಿದ್ದಾಗಲೂ, "ಸ೦ಸ್ಕೃತವನ್ನು ಓದು. ಸ೦ಗೀತವನ್ನು ಕಲಿ' ಎ೦ದು ಭಾರತೀಯ ಕಲೆಗಳ ಬಗ್ಗೆ ರುಚಿ ಹಚ್ಚಿದರು. ಮಕ್ಕಳು ಅಮ್ಮನ ಪ್ರೀತಿಯ ಮಕ್ಕಳಾಗಿ ಬೆಳೆದರು. "ಕಾಲೇಜು ಓದುವ ದಿನಗಳಲ್ಲೂ ನಾನು ಅಮ್ಮನೊ೦ದಿಗೆ ಸಿನಿಮಾಗಳನ್ನು ನೋಡುತ್ತಿದ್ದೆ. ಇಬ್ಬರೂ ಒಟ್ಟಿಗೇ ಕುಳಿತು ಸ೦ಗೀತವನ್ನು ಕೇಳುತ್ತಿದ್ದೆವು. ಹಾಡುತ್ತಿದ್ದೆವು. ಬುದ್ಧಿಯನ್ನು ಭಾವವನ್ನು ಬೆಸೆದು ಬದುಕು ಕಟ್ಟುವ ಕಲೆಯನ್ನು ನನಗೆ ಕಲಿಸಿದವಳು ನಮ್ಮಮ್ಮ' ಎ೦ದು ನೆನಪಿಸಿಕೊಳ್ಳುತ್ತಾರೆ ಶತಾವಧಾನಿ ಡಾ. ಆರ್. ಗಣೀಶ್.
ಅಲಮೇಲು ಹಬ್ಬ ಹರಿದಿನಗಳಲ್ಲಿ ಮನೆಗೆಲಸಕ್ಕೆ ಬರುವವರಿಗೆ ಮೊದಲು ಅರಿಶಿಣ ಕು೦ಕುಮ ನೀಡಿ, "ನೀನೇ ಮೊದಲಿನ ಮುತ್ತೈದೆ ನಮ್ಮ ಮನೆಗೆ ಬ೦ದವಳು' ಎನ್ನುತ್ತಿದ್ದರು. ವಿಧವೆಯರು ಯಾರಾದರೂ ಮನೆಗೆ ಬ೦ದರೆ ಅರಿಶಿಣ ಕು೦ಕುಮ ಕೊಡುತ್ತಿದ್ದರು. "ಹುಟ್ಟಿದಾಗಿನಿ೦ದ ಬ೦ದ ಅಲ೦ಕಾರಗಳನ್ನೆಲ್ಲ ಗ೦ಡ ಸತ್ತಾಗ ತೆಗೆಯುವುದೇಕೆ? ನಿಮಗಷ್ಟು ಬೇಸರವಿದ್ದರೆ ಕರಿಮಣಿಯನ್ನಷ್ಟೇ ತೆಗೆದಿಡಿ ಸಾಕು' ಎನ್ನುತ್ತಿದ್ದರು. ಆ ಕಾಲದಲ್ಲಿ ಜಾತಿ ಸ೦ಪ್ರದಾಯ ಮೂಢನ೦ಬಿಕೆಗಳ ವಿರುದ್ಧವಾದ ಇ೦ತಹ ನಡವಳಿಕೆಯುಳ್ಳ ಅಪರೂಪದ ವ್ಯಕ್ತಿತ್ವದವರಾಗಿದ್ದರು ಅವರು.
ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳಲಾರದ ಕಷ್ಟ ಅಲಮೇಲು ಅವರದ್ದಾದರೂ ಆ ಆತ೦ಕ ಮಕ್ಕಳಿಗೆ ಕಾಡದ೦ತೆ ಎಚ್ಚರ ವಹಿಸಿದರು. ಪತಿ ಕ್ಯಾನ್ಸರ್‍ಗೆ ತುತ್ತಾದಾಗ ಮನ ಮುಟ್ಟಿ ಸೇವೆ ಸಲ್ಲಿಸಿದರು. ನಾಲ್ಕು ವಷ೯ಗಳ ಸೇವೆಗೆ ಪ್ರತಿಫಲ ದೊರೆಯದೆ ಪತಿ ವಿಧಿವಶರಾದರು.
ಎಪ್ಪತ್ತರ ಇಳಿವಯಸ್ಸಿನಲ್ಲಿ ಅಲಮೇಲು ಅವರಿಗೆ ಆಲೆl„ಮರ್ ಕಾಯಿಲೆ ಕಾಣಿಸಿಕೊಳ್ಳಲಾರ೦ಭಿಸಿತ್ತು. ಮರೆವು ಶುರುವಾಗಿತ್ತು. ಒ೦ದು ದಿನ ತಳಕ್ಕೆ ನೀರು ಹಾಕದೆ ಕುಕ್ಕರನ್ನು ಒಲೆಗೇರಿಸಿ ಅನ್ನ ಹೊತ್ತಿಸಿದರೆ ಇನ್ನೊ೦ದು ದಿನ ಬಾಗಿಲಿಗೆ ಚಿಲಕ ಹಾಕುವುದನ್ನೇ ಮರೆಯುತ್ತಿದ್ದರು. ಅಮ್ಮನ ಮರೆವು ಮಗನಿಗೆ ಆತ೦ಕ ಹುಟ್ಟಿಸಿತ್ತು. ವೈದ್ಯರಲ್ಲಿಗೆ ಕರೆದುಕೊ೦ಡು ಹೋದಾಗ ಅವರಿಗಿರುವುದು ಆಲ್ಫೈಮರ್ ಕಾಯಿಲೆ ಎ೦ದರು (ಈ ಕಾಯಿಲೆಗೆ ತುತ್ತಾದವರಿಗೆ ನಿಧಾನವಾಗಿ ಎಲ್ಲವೂ ಮರೆತುಹೋಗುತ್ತದೆ. ಒ೦ದಥ೯ದಲ್ಲಿ ಅವರು ಮಗುವೇ ಆಗುತ್ತಾರೆ.)
ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎ೦ದು ಸಾಕಷ್ಟು ವೈದ್ಯರನ್ನು ಸ೦ಪಕಿ೯ಸಿದ್ದಾಯಿತು. ಅದೇ ಸಮಯದಲ್ಲಿ ಆಸ್ಪತ್ರೆಯವರ ನಿಲ೯ಕ್ಷದಿ೦ದ ಅಲಮೇಲು ಅವರಿಗೆ ಬೆನ್ನಮೇಲೆ ಹುಣ್ಣಾಗಿ ಯಮಯಾತನೆ ಶುರುವಾಗಿತ್ತು. "ಆಸ್ಪತ್ರೆಯಿ೦ದ ಡಿಸ್ಚಾಜ್‍೯ ಮಾಡಿಕೊಡಿ. ಮನೆಯಲ್ಲಿ ನಾನೇ ಪ್ರತಿದಿನ ಡ್ರೆಸ್ಸಿ೦ಗ್ ಮಾಡಿಸುತ್ತೇನೆ' ಎ೦ದು ಮಗ ಹೇಳಿದ. ಅವಿವಾಹಿತನಾಗಿಯೇ ಉಳಿದ ಮಗ ಅಮ್ಮನನ್ನು ನೋಡಿಕೊಳ್ಳುತ್ತಾನಾದರೂ ಹೇಗೆ? "ಯಾವುದಾದರೂ ಆಸ್ಪತ್ರೆಯಲ್ಲಿಯೇ ಇಡಿ' ಎ೦ದು ಎಲ್ಲರೂ ಇತ್ತ ಸಲಹೆಯನ್ನು ತಿರಸ್ಕರಿಸಿ ಮನೆಗೇ ಕರೆದುತ೦ದ.
ಅಮ್ಮ ಎನ್ನುವುದನ್ನು ಬಿಟ್ಟ ಮಗ, ನ೦ದಾಪಾಪೂ ಎನ್ನಲಾರ೦ಭಿಸಿದ. ಮಗುವನ್ನು ಆರೈಕೆ ಮಾಡಿದ೦ತೆ ದಿನವೂ ಅವರ ಸೇವೆ ಮಾಡಿದ. ಸತತವಾಗಿ ಒ೦ದೂವರೆ ವಷ೯ ಡ್ರೆಸ್ಸಿ೦ಗ್ ಮಾಡಿದ ಮೇಲೆ ಅ೦ಗೈ ಅಗಲವಾದ ಬೆಡ್‍ಸೋರ್ ವಾಸಿಯಾಗಿ ವೈದ್ಯರಿಗೇ ಅಚ್ಚರಿ ಮೂಡಿಸಿತ್ತು. "ಯಾರಪ್ಪಾ ನೀನು? ನನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದೀಯಾ?' ಎ೦ದು ಪ್ರಶ್ನಿಸುವ ಅಮ್ಮನಿಗೆ ಮಗನ ಗುರುತೇ ತಿಳಿಯುತ್ತಿರಲಿಲ್ಲ. ಈ ಅಮ್ಮ ಮಗನ ಪ್ರೀತಿಗೆ ಸ್ನೇಹಿತರ, ಹಿತೈಷಿಗಳ, ವೈದ್ಯರುಗಳ ಅಪಾರ ಬೆ೦ಬಲವಿತ್ತು. ಅಮೆರಿಕ ವಿಶ್ವವಿದ್ಯಾಲಯದಿ೦ದ ಒ೦ದು ಟೀಮ್ ಅವರ ಮನೆಗೇ ಬ೦ದು ಆಲ್ಫೈಮರ್ ಕಾಯಿಲೆ ಇರುವವರನ್ನು ದೀಘ೯ಕಾಲ ನೋಡಿಕೊ೦ಡ ಮನೆಯವರಿಗೇ ಖಿನ್ನತೆ ಬರುತ್ತದೆ. ಅಪಾರವಾದ ಏಕಾಗ್ರತೆ ಬೇಡುವ ಶತಾವಧಾನವನ್ನೆಲ್ಲ ಇವರು ಸಲೀಸಾಗಿ ಮಾಡುವುದು ಹೇಗೆ ಎ೦ದು ಅಭ್ಯಸಿಸಿಕೊ೦ಡು ಹೋದರು!
"ಅಮ್ಮನಿಗೆ ಅಥ೯ವಾಗಲಿ ಬಿಡಲಿ, ಕಾಯ೯ಕ್ರಮದ ನಿಮಿತ್ತ ಬೇರೆ ಊರಿಗೆ ಹೋಗಲಿ, ಫೋನಿನಲ್ಲಾದರೂ ಪ್ರತಿದಿನವೂ ಮಾತನಾಡುತ್ತಿದ್ದೆ. ಆಗ ಬೊ೦ಬೆಯ೦ತಿದ್ದ ಅಮ್ಮನ ಮುಖದ ಮೇಲೊ೦ದು ಆನ೦ದದ ಕಳೆ ಇರುತ್ತಿತ್ತು. ದಿನವೂ ಅಮ್ಮನ ಮಡಿಲಿನಲ್ಲಿ ಒ೦ದು ನಿಮಿಷವಾದರೂ ತಲೆ ಇಡುತ್ತಿದ್ದೆ' ಎನ್ನುವ ಮಗನ ಪ್ರೀತಿ, ಕಾಳಜಿಯಲ್ಲಿ ಎ೦ಟು ವಷ೯ಗಳ ಸುದೀಘ೯ ಅವಧಿ ನ೦ದಾಪಾಪೂ ಬದುಕಿದ್ದರು. "ಅಮ್ಮ ಹೋಗಿ ನಾಲ್ಕು ವಷ೯ಗಳಾದವು. ಇನ್ನೂ ಅವರಿರಬೇಕಿತ್ತು ಎ೦ದೇ ಎನಿಸುತ್ತದೆ' ಎ೦ದು ಕಣ್ಣಾಲಿ ತು೦ಬಿಕೊಳ್ಳುವ ಪ್ರತಿಭಾವ೦ತ ಮಗನಲ್ಲಿಯೇ ಅಮ್ಮ ಜೀವ೦ತವಾಗಿದ್ದಾರೆ. ಮಾನವೀಯ ಮೌಲ್ಯಗಳನ್ನು ಪ್ರತಿನಿಧಿಸುವ ಡಾ. ಆರ್. ಗಣೀಶರ೦ಥವರು ನಿಸ್ಸ೦ಶಯವಾಗಿಯೂ ನಮಗೆ ದಾರಿದೀಪವಾಗಬಲ್ಲರು.



 ಮಾಲತಿ ಹೆಗ್ಗಡೆ
ಕೃಪೆ - ವಿಜಯವಾಣಿ

Thursday, March 3, 2016

ಕಸಾಪಗೆ ನೂತನ ಸಾರಥಿ ಶ್ರೀ ಮನು ಬಳಿಗಾರ್‌ ಅಭಿನಂದನೆಗಳು ಸಾರ್.


 ಶ್ರೀ ಮನು ಬಳಿಗಾರ್‌  

ಕಸಾಪ ನೂತನ ಸಾರಥಿ 
ಶ್ರೀ ಮನು ಬಳಿಗಾರ್‌ 
 ಅಭಿನಂದನೆಗಳು

ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ - ಚಿತ್ರ: ದೂರದ ಬೆಟ್ಟ

ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ
ನನ್ನ ನಿನ್ನ ಪಾಲಿಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ
ನನ್ನ ನಿಮ್ಮ ಪಾಲಿಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ನೀ ಪಕ್ಕ ಇದ್ರೇ ಹಿಂಗೆ, ಬೆಟ್ಟಾನ್ ಎತ್ತಿ ಬೆಳ್ನಾಗೆ
ನೀ ಪಕ್ಕ ಇದ್ರೇ ಹಿಂಗೆ, ಬೆಟ್ಟಾನ್ ಎತ್ತಿ ಬೆಳ್ನಾಗೆ
ಏಸೇ ಕಷ್ಟ ಬಂದ್ರು ನಮ್ಗೆ, ಗೌರ
ಏಸೇ ಕಷ್ಟ ಬಂದ್ರು ನಮ್ಗೆ, ಮೀಸೆ ಬುಡ್ತೀನ್ ಸುಮ್ಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಈ ಜೀವ ನಿಮ್ಮದೇನೆ, ನಿಮ್ಮ ಪೂಜೆಗ್ ಹೂವು ನಾನೆ
ಈ ಜೀವ ನಿಮ್ಮದೇನೆ, ನಿಮ್ಮ ಪೂಜೆಗ್ ಹೂವು ನಾನೆ
ಈ ನಿಮ್ಮ ಪಾದದಾಣೆ
ಈ ನಿಮ್ಮ ಪಾದದಾಣೆ, ನಿಮಗಿಂತ ದ್ಯಾವ್ರೆ ಕಾಣೆ
ಪ್ರೀತಿನೇ ಆ ದ್ಯಾವ್ರು ತಂದ, ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ
ನನ್ನ ನಿಮ್ಮ ಪಾಲಿಗೆ, ನನ್ನ ನಿನ್ನ ಪಾಲಿಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಚಿತ್ರ: ದೂರದ ಬೆಟ್ಟ (೧೯೭೩/1973)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಜಿ.ಕೆ.ವೆಂಕಟೇಶ್
ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ


Wednesday, March 2, 2016

ನೀ ಹೀಂಗ ನೋಡಬ್ಯಾಡ ನನ್ನ - ದ ರಾ ಬೇಂದ್ರೆ

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ,
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ?

ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರು ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ?

ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ? ಯಾವ ಗಾಳಿಗೆ ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿsಯಾ ರೀತಿ
ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.

ದಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು
ಬಿಡಲೊಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ?

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ!

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ?
ಎವೆ ಬಡಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.

                                                            - ದ ರಾ ಬೇಂದ್ರೆ
                                       ('ನಾದಲೀಲೆ' ಕವನ ಸಂಕಲನದಿಂದ)

ಪರ್ವ-ಭಾರತ" ಒಂದು ತೌಲನಿಕ ಅಧ್ಯಯನ - ಅಮಂತ್ರಣ ಪತ್ರಿಕೆ,

"ಪರ್ವ-ಭಾರತ" ಒಂದು ತೌಲನಿಕ ಅಧ್ಯಯನ.
ಮಾರ್ಚ್ 6, 2016 .. ರವಿವಾರ. ಸಮಯ - ಮುಂಜಾನೆ -10 ಗಂಟೆಗೆ
ಸ್ಥಳ- ವಿಜಯಾ ಕಾಲೇಜು ಒಳಾಂಗಣ ಸಭಾಂಗಣ,
ಬಸವನಗುಡಿ, ಆರ್.ವಿ ರಸ್ತೆ, ಬೆಂಗಳೂರು


ಸುಭಾಷಿತ - ಆರ್ ಗಣೇಶ್


Saturday, February 27, 2016

ಡಿವಿಜಿ ರವರ "ಸಂಸ್ಕೃತಿ" ಕೃತಿ ಕುರಿತು ಉಪನ್ಯಾಸ


ಡಿವಿಜಿ ರವರ "ಸಂಸ್ಕೃತಿ" ಕೃತಿ ಕುರಿತು ಉಪನ್ಯಾಸ - ಉಪನ್ಯಾಸಕರು ಸೂರ್ಯಪ್ರಕಾಶ್ ಪಂಡಿತ್
ದಿನಾಂಕ : 28-02-15 ಸಂಜೆ , ಸಮಯ :  5.30

Thursday, February 25, 2016

ನೆಹರುಗೊಂದು ಪತ್ರ - ಪಲ್ಲವಿ ರಾವ್

ಪ್ರೀತಿಯ ನೆಹರೂಜಿ,ನೆಮ್ಮದಿಯಾಗಿರಬೇಕಲ್ಲ? ಕಂಗ್ರಾಜುಲೇಷನ್ಸ್.
ಅಂತೂ ಭಾರತದ ಯುವ ಜನತೆಗೆ ದೇಶವೆಂದರೆ ಭೌಗೋಳಿಕ ಇರುವಿಕೆಯೇ ಅರ್ಥಹೀನ, ಇಲ್ಲಿನ ನಂಬಿಕೆಗಳೆಲ್ಲವೂ ಅವೈಜ್ನಾನಿಕ, ಆಚರಣೆಗಳೆಲ್ಲ ತುಚ್ಚ , ಹೆಮ್ಮೆ ಪಡುವಂತದ್ದೂ ಇಲ್ಲೇನೂ ಇಲ್ಲ , ದೇಶವೆಂದರೆ ತಾಯಿ ಅನ್ನುವ ಕಲ್ಪನೆಯೇ ಬುಲ್ಶಿಟ್ ಅನ್ನುವ ಮನೋಭಾವವನ್ನು ನಿಮ್ಮ ಕನಸಿನ ವೈಜ್ನಾನಿಕ ಆಧುನಿಕ ಪಾಶ್ಚಾತ್ಯ ಶಿಕ್ಷಣ ಬಹಳ ಯಶಸ್ವಿಯಾಗಿ ಬಿತ್ತಿದೆ. ನೀವು ಬಹಳವಾಗಿ ಆರಾಧಿಸಿದ ಇತಿಹಾಸ ತಜ್ನರಿಂದ ಬರೆಸಿದ ಇತಿಹಾಸ ಈ ದೇಶದ ತರುಣರಲ್ಲಿ ಸಿನಿಕತೆಯನ್ನು,ದೇಶ ಕಾಯುವ ಸೈನಿಕರ ಬಗ್ಗೆ ತಿರಸ್ಕಾರವನ್ನೂ ಪ್ರಜಾಪ್ರಭುತ್ವದ ಬುನಾದಿಯ ಮೇಲೆ ದಾಳಿ ನಡೆಸಿದವರನ್ನೂ ಆರಾಧಿಸುವ ಮಟ್ಟಕ್ಕೆ ಬೆಳೆಸಿದೆ. ನೀವು ಇದನ್ನೇ ಬಯಸಿದ್ದೀರಿ ಅಲ್ವ? ಪ್ರತಿಯೊಂದನ್ನೂ ಪ್ರಶ್ನಿಸುವ, ತಿರಸ್ಕರಿಸುವ ಎಡಬಿಡಂಗಿ ಮನೋಭಾವವನ್ನೇ ವೈಜ್ನಾನಿಕ ಎಂದು ಅರ್ಥೈಸಿದ್ದವರಿಗೆ ಇಂದಿನ ವಿಶ್ವವಿದ್ಯಾನಿಲಯಗಳ ದಿಕ್ಕುದೆಶೆ ಇಲ್ಲದ ಭವಿಷ್ಯದ ಬಗ್ಗೆ ಕನಸು, ದೇಶದ ಬಗ್ಗೆ ಕಾಳಜಿ ಎರಡೂ ಇಲ್ಲದ ಸಿನಿಕ ಯುವಭಾರತ ಹೆಮ್ಮೆ ತಂದಿರಬೇಕು , ಕಂಗ್ರಾಜ್ಯುಲೇಷನ್ಸ್!
ನೀವು ಮತ್ತು ನಿಮ್ಮ ಕುಟುಂಬದ ಸ್ವತ್ತಾಗಿ ಹೋದ ಪಕ್ಷಕ್ಕೆ ಭಾರತದ ಬಗ್ಗೆ ಪ್ರೀತಿ, ಹೆಮ್ಮೆ ಹುಟ್ಟುವುದಾದರೂ ಹೇಗೆ? ಸದಾ ಪಾಶ್ಚಾತ್ಯ ಚಿಂತನೆ, ಅಲ್ಲಿನ ವಿದ್ಯಾಲಯಗಳ ಓದು, ಅಲ್ಲಿನದೇ ಬದುಕನ್ನು ಕಂಡ ನಿಮ್ಮವರಿಗೆ ಈ ದೇಶ ಬರಿಯ ಮೂಢನಂಬಿಕೆಗಳ , ಜಾತಿಗಳ, ತಾರತಮ್ಯದ ಆಡೊಂಬೊಲವಾಗಿಯೇ ಕಂಡಿತ್ತು. ನೀವೇನೋ ಡಿಸ್ಕವರಿ ಆಫ್ ಇಂಡಿಯ ಬರೆದುಬಿಟ್ಟಿರಿ. ಆದರೆ ನಿಮ್ಮ ಮರಿ ಮಕ್ಕಳಿಗೆ ಅದರ ಕಲ್ಪನೆಯಾದರೂ ಇದೆ ಅಂದು ಕೊಂಡಿದ್ದೀರ? ನೀವು ಅಷ್ಟೆಲ್ಲ ಕಾಳಜಿಯಿಂದ ಜತನವಾಗಿ ಅತ್ಯಂತ ಚಾಣಾಕ್ಶತನದಿಂದ ಅಡೆತಡೆಗಳನ್ನು ನಿವಾರಿಸಿ , ಕಾದಿಟ್ಟ ದೇಶಾಡಳಿತದ ಕಿರೀಟ ಕೈ ತಪ್ಪಿದ ಸಂಕಟದಲ್ಲಿ ನಿಮ್ಮದೇ ವಂಶದ ಕುಡಿ ದೇಶದ್ರೋಹಿಗಳಿಗೂ ಜೈಕಾರ ಹಾಕುತ್ತಾನೆ. ನಮಗವನ ಬಗ್ಗೆ ನಿರೀಕ್ಶೆಗಳೇನೂ ಇಲ್ಲ ಬಿಡಿ. ಎಷ್ಟಾದರೂ ಏನೂ ಬೆಳೆಯದ ಹಿಮದ ಮರುಭೂಮಿಯನ್ನೂ ಬೇರೆ ದೇಶಕ್ಕೆ ಕೊಟ್ಟರೇನೂ ತೊಂದರೆ ಇಲ್ಲ ಅಂದವರಲ್ಲವೆ ನೀವೂ? ನಿಮ್ಮ ವಾರಸುದಾರರು ನಿಮ್ಮ ಜೀನ್ಗಳಿಗೆ ನ್ಯಾಯ ಸಲ್ಲಿಸುತ್ತಿದ್ದಾರೆ ಬಿಡಿ. ಭಾರತದ ಸಾರ್ವಭೌಮತೆ ವಿಚ್ಛಿದ್ರವಾದರೂ ಚಿಂತೆ ಇಲ್ಲ, ಅವರ ಆಡಳಿತ ನಡೆಸಲು ತುಂಡು ಉಳಿದರೆ ಸಾಕು ಅನ್ನುತ್ತ ಭಾರತವನ್ನು ತುಂಡಾಗಿಸಲು ಹೋರಾಡುವವರ ಜತೆ ಧರಣಿ ಕೂರುತ್ತಿದ್ದಾರೆ. ನೀವು ಮಗಳನ್ನು ಪಟ್ಟಕ್ಕೇರಿಸಿದಾಗ ಇದನ್ನೇ ನಿರೀಕ್ಶಿಸಿದ್ದಿರೇನೋ ಅಲ್ವ?
ಸ್ವಂತತ್ರ ಹೋರಾಟಕ್ಕೆ ಪ್ರಾಣ ತೆತ್ತ ಕೋಟ್ಯಾಂತರ ಭಾರತೀಯರ ತ್ಯಾಗವೆಲ್ಲವನ್ನೂ ನಿರ್ಲಕ್ಶಿಸಿ , ಕೇವಲ ನಿಮ್ಮ ಹೆಸರನ್ನೂ, ನಿಮ್ಮ ಮುಂಬರುವ ಪೀಳಿಗೆಯ ಹೆಸರನ್ನೂ ಜನಮಾನಸದಲ್ಲಿ ಬಿತ್ತಲು , ದೇಶದ ತೆರಿಗೆ ಹಣದಲ್ಲಿ ಕಟ್ಟಲ್ಪಟ್ಟ ಪ್ರತಿ ರಾಷ್ಟೀಯ ಆಸ್ತಿಗೂ ಅದು ನಿಮ್ಮ ಸ್ವಂತ ಆಸ್ತಿಯೇನೋ ಅನ್ನುವಂತೆ ನಾಮಕರಣ ಮಾಡಿದಿರಿ. ದೇಶದ ಬಗ್ಗೆ ,ದೇಶದ ಅಖಂಡತೆಯ ಬಗ್ಗೆ ಅರಿವೇ ಇಲ್ಲದ ನಿಮ್ಮ ಮೊಮ್ಮಗನ ಹೆಂಡತಿಗಂತೂ ಇಲ್ಲಿನ ಪಾಸ್ಪೋರ್ಟ್ ಬೇಡವಾದರೂ ವಿಮಾನ ನಿಲ್ದಾಣಕ್ಕೆ ನಿಮ್ಮ ಕುಟುಂಬದ ಹೆಸರು ಬೇಕೇ ಬೇಕು. ಅಂತ ಕುಟುಂಬ ಶ್ರದ್ದೆ! ನಿಮ್ಮದೇ ಹೆಸರಿನ ವಿಶ್ವವಿದ್ಯಾನಿಲಯದಲ್ಲಿ , ನಿಮ್ಮ ಮರಿಮಗ ನೀವು( ಹೇಗಿದ್ದರೂ ಕೋಟ್ಯಾಂತರ ಇತರರನ್ನು ಯಶಸ್ವಿಯಾಗಿ ಜನರ ಮಧ್ಯದಿಂದ ಮರೆಸಿಬಿಟ್ಟಿದ್ದೀರಲ್ಲ!) ಮಧ್ಯರಾತ್ರಿ ಭಾರತಕ್ಕೆ ತಂದಿದ್ದು ಸ್ವಾತಂತ್ರ್ಯವೇ ಅಲ್ಲ, ಬಿಡುಗಡೆ ಬೇಕು ಅಂತ ವಾದಿಸುತ್ತಿದ್ದಾನೆ, ಇಡಿಯ ದೇಶದ ಪವರ್ ಆಫ್ ಅಟಾರ್ನಿಯನ್ನು ಶಾಶ್ವತವಾಗಿ ಕುಟುಂಬಕ್ಕೆ ಸೇರಿಸುವ ಪ್ಲಾನ್ ಮಾಡಿದ ನಿಮಗೆ , ಮರಿಮಗ ಸ್ವತಂತ್ರ ಭಾರತದ ಕಲ್ಪನೆಯನ್ನೇ ನಿರಾಕರಿಸುವ ಬಗ್ಗೆ ಹೊಳೆದಿರಲಿಕ್ಕಿಲ್ಲ ಅಲ್ವ? ಅಥವ ನಿಮ್ಮ ಪ್ರಕಾರ ರಾಷ್ಟ್ರವನ್ನು , ಸಾರ್ವಬೌಮತೆಯ ಕಲ್ಪನೆಯನ್ನೂ ನಿರಾಕರಿಸುವುದು ಇದೆಲ್ಲ ಮುಂದುವರೆದ , ವೈಜ್ನಾನಿಕ ಮನೋಭಾವದ ಸಂಕೇತವೇ?
ನೆಹರೂಜಿ, ಸಮಾಜವಾದದ ಮುಸುಕಿನಲ್ಲಿ , ಜಾತ್ಯತೀತತೆಯ ಹೆಸರಿನಲ್ಲಿ ಭಾರತವನ್ನೂ ಸದಾ ಜಾತಿಗಳ ಹೆಸರಿನಲ್ಲಿ, ವರ್ಗಗಳ ಹೆಸರಿನಲ್ಲಿ ಒಡೆಯುವ, ತನ್ಮೂಲಕ ಸದಾ ನಿಮ್ಮ ಕುಟುಂಬ ಅರ್ಥಾತ್ ಪಕ್ಶ ಸದಾ ಅಧಿಕಾರದಲ್ಲಿರುವ ನಿಮ್ಮ ಮಾಸ್ಟರ್ ಪ್ಲಾನ್ ಅನ್ನು ಕುಟುಂಬ ಯಶಸ್ವಿಯಾಗಿಯೇ ಆಚರಿಸುತ್ತಿದೆ. ಜಾತಿಗಳ ಲೆಕ್ಕಾಚಾರವೆಲ್ಲ ಮುಗಿದ ಮೇಲೆ ಅವರು ನಿಮ್ಮ ಮೇಲ್ಪಂಕ್ತಿಯನ್ನೇ ಅನುಸರಿಸಿ ಕೋಮುಗಳಲ್ಲಿ ತಾರತಮ್ಯದ, ಪ್ರತ್ಯೇಕತೆಯ ವಿಷಬೀಜಗಳನ್ನು ಯಶಸ್ವಿಯಾಗಿ ಬಿತ್ತಿ ಹುಲುಸಾಗಿ ಪಸಲನ್ನೂ ಪಡೆಯುತ್ತಿದ್ದರು. ಆದರೀಗ ಅದು ಅವರ ನಿಯಂತ್ರಣವನ್ನೂ ಮೀರಿ ದಾವನಲದಂತೆ ಆವರಿಸಿ ದೇಶದ ಕತ್ತು ಹಿಸುಕುತ್ತಿದೆ. ನಿಮ್ಮ ಪ್ರತ್ಯೇಕತೆಯ, ನೆಹರುವಿಯನ್ ಡಿವೈಡ್ ಅಂಡ್ ರೂಲ್ ಆಡಳಿತ ಅದೆಷ್ಟು ಯಶಸ್ವಿಯಾಗಿ ದೇಶದ ಯುವಜನತೆಯನ್ನು ನೇಣಿಗಟ್ಟುತ್ತಿದೆ ನೋಡಿದಿರ? ನಿಮ್ಮ ಯೋಚನೆಯ ಯಶಸ್ಸಿಗೆ ಎಂಥ ಅದ್ಭುತ ಫಲಿತಾಂಶ ಅಲ್ಲವೆ!
ಇದೆಲ್ಲ ಬರೆಯುತ್ತಿರಲಿಲ್ಲ ನೆಹರೂಜಿ, ಆದರೆ ನಿನ್ನೆ ನಿಮ್ಮದೇ ಪಕ್ಷದ ಅಪ್ಪಣೆಯ ಮೇರೆಗೆ ’ತೀಸ್ತಾ ಸೆಟ್ಲವಾದ್ ಅನ್ನುವ ಮಹಿಳೆ ೪ ನೆಯ ತರಗತಿಗೆ ಪಠ್ಯಪುಸ್ತಕ ಬರೆದಿದ್ದಾಳೆ. ಅದರಲ್ಲಿರುವುದು ಸಿಯಾಚಿನ್ನಲ್ಲಿ ಮಡಿದ ಯೋಧರ ಬಗ್ಗೆ ಹೆಮ್ಮೆಯಲ್ಲ ಬದಲಿಗೆ ಎಳೆಯ ಮನಸ್ಸುಗಳಲ್ಲಿ ಭಾರತ ಅನ್ನುವ ದೇಶದ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಆಕ್ರೋಶವನ್ನೂ , ಅಸಮಧಾನವನ್ನೂ ಅಸಹ್ಯವನ್ನೂ ಮೂಡಿಸುವ ಬರಹಗಳು. ನೀವಿದನ್ನು ಬಯಸಿದ್ದೀರ? ತನ್ನದೇ ಮಾತೃಭೂಮಿಯ ಬಗ್ಗೆ ಹೀಯಾಳಿಕೆಯನ್ನೂ, ಇತಿಹಾಸದ ಬಗ್ಗೆ ಕೀಳರಿಮೆಯನ್ನೂ, ತನ್ನೆಲ್ಲ ಪರಂಪರೆಯ ಬಗ್ಗೆ ಅಸಹ್ಯವನ್ನೂ ಎಳೆಯ ಮನಸ್ಸುಗಳಲ್ಲಿ ಮೂಡಿಸುವ , ತನ್ಮೂಲಕ ಚಿಗುರಿನಲ್ಲೇ ದೇಶದ ಬಗ್ಗೆ ಪ್ರೀತಿ ಹೆಮ್ಮೆ ಕಾಳಜಿಯನ್ನೂ ಚಿವುಟಿ ಹಾಕುವ ಇಂತಹ ನತದೃಷ್ಟ ಉದಾಹರಣೆ ವಿಶ್ವದಲ್ಲೇಲ್ಲೂದೊರಕುವುದಿಲ್ಲ. ನಿಮಗೆ ನಿಮ್ಮ ಕುಟುಂಬಕ್ಕೆ ಈ ದೇಶ ಜನ್ಮ ನೀಡಿದ ಒಂದೇ ತಪ್ಪಿಗೆ ಇಂತಹ ಮಾತೃಘಾತುಕತನವನ್ನು ಅದೆಷ್ಟು ಯಶಸ್ವಿಯಾಗಿ ಇಷ್ಟೊಂದು ವರ್ಷ ನಡೆಸಿ ಬಿಟ್ಟಿರಲ್ಲ? ಇದಕ್ಕೇ ನೀವು ವಿದೇಶಗಳಲ್ಲಿ ವ್ಯಾಸಂಗ ನಡೆಸಿದ್ದೆ? ಜೈಲು ವಾಸ ಅನುಭವಿಸಿದ್ದೆ? ನೆಹರೂಜಿ, ನೆನಪಿಟ್ಟುಕೊಳ್ಳಿ ನಿಮ್ಮ ಸ್ವಜನ ಪ್ರೀತಿಯನ್ನೂ, ಸಂಪತ್ತನ್ನು ಕೊಳ್ಳೆ ಹೊಡೆದು ವೈಯುಕ್ತಿಕ ತಿಜೋರಿ ತುಂಬಿಸಿಕೊಳ್ಳುವ ಹವ್ಯಾಸಗಳನ್ನೂ, ಸದಾ ಉತ್ತಮ ಚಿಂತನೆಗಳಿಗೆ ಪಶ್ಚಿಮದತ್ತ ಮುಖ ಮಾಡುವ ಆತ್ಮನ್ಯೂನ್ಯತೆಯ ಹಳವಂಡಗಳನ್ನೂ ನನ್ನ ದೇಶ ಕ್ಷಮಿಸಿ ಬಿಡುತ್ತಿತ್ತು. ಆದರೆ, ಕೋಟ್ಯಾಂತರ ಎಳೆಯ ಮನಸ್ಸುಗಳಿಗೆ ದೇಶದ ವಿರುದ್ದ ಪ್ರಚೋದನೆ ನೀಡುವ, ರಾಷ್ಟ್ರದ ಕಲ್ಪನೆಯೇ ಅಸಹ್ಯ, ಕೀಳರಿಮೆ ಹಾಸ್ಯಾಸ್ಪದ ಅನ್ನಿಸುವಂತೆ ಮಾಡುವ ಈ ನಿಮ್ಮ ದೇಶವಿರೋಧಿ ಶಿಕ್ಷಣವನ್ನು , ಕೇವಲ ಒಂದು ಕುಟುಂಬದ ಅಧಿಕಾರ ದಾಹಕ್ಕೆ ಇಡಿಯ ದೇಶದ ಮಕ್ಕಳಿಗೆ ರಾಷ್ಟ್ರದ್ರೋಹೀ ಚಿಂತನೆಯ ವಿಷವುಣಿಸುವ ನಿಮ್ಮ ಪಕ್ಶದ ಮನಸ್ಥಿತಿಯನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ನೀವೇ ತಿರುಚಿದ ಇತಿಹಾಸ ವರ್ತಮಾನದಲ್ಲಿ ನಿಮಗೆ ಪಾಠ ಕಲಿಸುವ ದಿನಗಳು ದೂರವಿಲ್ಲ. ನೀವದಲ್ಲೇ ಇರಿ, ದಯವಿಟ್ಟು ಮತ್ತೆಂದೂ ಈ ದೇಶದಲ್ಲಿ ಹುಟ್ಟಬೇಡಿ. ಇತಿ, ರೋಮಿಲಾ ಥಾಪರ್ ಓದಿದ ನಂತರವೂ ದೇಶವನ್ನು ಪ್ರೀತಿಸುವ ದೇಶವಾಸಿ .


ಪಲ್ಲವಿ ರಾವ್

ಪಂಪ.


ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ

Wednesday, February 24, 2016

ಕಟ್ಟುವೆವು ನಾವು - ಗೋಪಾಲಕೃಷ್ಣ ಅಡಿಗ ಗಾಯನ : ಚಂದ್ರಶೇಖರ ಕೆದಿಲಾಯ, ಮೋಹನ ರಾಗ , ಜಂಪೆ ತಾಳ

ಕಟ್ಟುವೆವು ನಾವು ಹೊಸ ನಾಡೊಂದನು,
                - ರಸದ ಬೀಡೊಂದನು.
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

      ನಮ್ಮೆದೆಯ ಕನಸುಗಳ ಕಾಮಧೇನು
      ಆದಾವು, ಕರೆದಾವು ವಾಂಛಿತವನು;
      ಕರೆವ ಕೈಗಿಹುದಿದೋ ಕಣಸುಗಳ ಹರಕೆ;
      ಗುರಿ ತಪ್ಪದೊಮ್ಮುಖದ ಬಯಕೆ ಬೆಮ್ಬಳಕೆ!

ಜಾತಿಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆ ಕೊತ್ತಲಗಳು;
ರೂಢಿ ರಾಕ್ಷಸನರಸುಗೈಯುವನು, ತೊಳ್ತಟ್ಟಿ 
ತೊಡೆತಟ್ಟಿ ಕರೆಯುವನು ಸಂಗ್ರಾಮಕೆ!

     ನಾವು ಹಿಂದೆಗೆವೆವೇ? ವೀರ ತರುಣರು ನಾವು!
     ಒಂದೆ ನೆಗೆತಕೆ ನೆಗೆವೆವೋ ಕಂದಕವನು,
     ಕುಟ್ಟಿ ಪುಡಿಮಾಡುವೆವು ಕೋಟೆಗಳನು,
     ಎದೆಯ ಮೆಟ್ಟಿ ಮುರಿಯುವೆವಸುರರಟ್ಟೆಗಳನು!

ಕೋಟೆಗೋಡೆಗೆ ನಮ್ಮ ಹೆನಗಲೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅನ್ಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ! 

      ಎಡರುಗಳ ಕಡಲುಗಳನೀಸಿ ಬರುವೆವು, ಘೋರ
      ನೈರಾಶ್ಯದಗ್ನಿ ಮುಖದಲ್ಲುಕೂಡ 
      ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
      ಬಿಡಿಸಿ, ಇದಿಗೊಳಿಸಿ ಕಟ್ಟುವೆವು ನಾಡ!

ಇಂದು ಬಾಳಿದು ಕೂಲ ಕಾಲೆಗವು; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!

      ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
      ಸಮಬಗೆಯ ಸಮಸುಖದ ಸಮದುಃಖದ
      ಸಾಮರಸ್ಯದ ಸಮಗಾನಲಹರಿಯ ಮೇಲೆ 
      ತೀರಿಬರಲಿದೆ ನೋಡು ನಮ್ಮ ನಾಡು!

ಇಲ್ಲೆ ಈ ಎಡೆಯಲ್ಲೆ , ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ 
ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರಗಂಪು ಹೊರ
ಹೊಮ್ಮುವುದು ಕಾದು ನೋಡು! 

      ಉತ್ಸಾಹ ಉದ್ವೇಗ ಉದ್ರೇಕಗಳ ವೀರ
      ಯುವಜನದ ನಾಡ ಗುಡಿಯು;
      ಅದರ ಹಾರಾಟಕ್ಕೆ ಬಾನೆ ಗಡಿಯೂ,
      ಬರಲು ಬಿಡೆವೆಂದಿಗೂ ಅದಕೆ ತಡೆಯು!
      ತಡೆವವರು ಬನ್ನಿರೋ, ಹೊದೆವವರು ಬನ್ನಿರೋ,
      ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
      ಕೊಟ್ಟೆವಿದೋ ವೀಳೆಯವನು; 
      ನಿಮ್ಮಲ್ಲರನು ತೊಡೆದು ನಿಮ್ಮ ಮಸಣದ ಮೇಲೆ
      ಕಟ್ಟುವೆವು ನಾವು ಹೊಸ ನಾಡೊಂದನು,
             - ಸುಖದ ಬೀಡೊಂದನು!
                           
            ('ಕಟ್ಟುವೆವು ನಾವು' ಕವನ ಸಂಕಲನದಿಂದ)



Sunday, February 14, 2016

ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪ್ರೇಮ ಪತ್ರ - ವಿವೇಕ ಬೆಟ್ಕುಳಿ

ಪ್ರೀತಿಯ ಗೆಳತಿ,,,,,,,,,

    ನನಗೆ ಗೊತ್ತು ಕಣೆ ನಿನಗೆ ಈ ದಿನ ನಾನು ಕೆಂಪು ಗುಲಾಬಿ ಕೊಟ್ಟರೆ ತುಂಬಾ ಸಂತೋಷವಾಗುವುದು ಎಂದು. ಆದರೇ ಏನು ಮಾಡಲಿ, ನನ್ನ ಕುಟುಂಬದ ಬಗ್ಗೆ ಗೊತ್ತಲ್ಲ ನಿಜವಾಗಿ ನನ್ನ ಅಪ್ಪ ತುಂಬಾ ಲಿಬರಲ್ ಜಾತ್ಯಾತೀತ, ಆದರೇ ಅನಿವಾರ್ಯವಾಗಿ ಕಟ್ಟಾ  ಹಿಂದುತ್ವವನ್ನು ಪ್ರದಶಿ౯ಸುತ್ತಿರುವರು. ಅದರಿಂದಾಗಿಯೇ   ಇಂದು ನಮ್ಮ ಅಪ್ಪ ರಾಜಕೀಯದಲ್ಲಿ ಜಿಲ್ಲೆಯಲ್ಲಿ ಹೆಸರು ಪಡೆದಿರುವರು. ನನಗೂ ಹಿಂದುತ್ವದ ಹೆಸರಿನಲ್ಲಿ ಭಾವನೆಗಳನ್ನು ಅದುಮಿಕೊಳ್ಳಲು ಇಷ್ಟವಿಲ್ಲ ಗೆಳತಿ, ಆದರೂ ಅಪ್ಪನ ಪ್ರೆಸ್ಟಿಜ್, ರಾಜಕೀಯ ಭವಿಷ್ಯ ಎಲ್ಲವೂ ಇದರ ಜೊತೆ ಸೇರಿಕೊಂಡಿದೆ. ಅಕಸ್ಮಾತ ಆಗಿ ನಾನು ಪ್ರೇಮಿಗಳ ದಿನಾಚರಣೆಯಲ್ಲಿ ಭಾಗವಹಿಸಿ ನಿನೊಂದಿಗೆ ಕಾಲಕಳೆದರೆ ಖಂಡಿತಾ ನಮ್ಮ ಅಪ್ಪನಿಗೆ ಮುಂದಿನ ಬಾರಿ ಚುನಾವಣೆಗೆ ಟಿಕೇಟ್ ಸಿಗದು, ಉಳಿದ ಪಕ್ಷದವರಿಗೆ ನಾನೇ ಒಂದು ವಿಷಯವಾಗಿ ಬಿಡುವೆನು. ದಯವಿಟ್ಟು ಕ್ಷಮಿಸು ಗೆಳತಿ. ಜನವರಿ 1 ಹೊಸ ವರ್ಷಕ್ಕೂ ನಾನು ಬರಲಿಲ್ಲ. ಹೊಸವರ್ಷ ಆಚರಣೆಯಂದು ನಾನು ಮನೆಯಲ್ಲಿಯೇ ಇದ್ದೇ ಬರುವ ಮನಸ್ಸಿದರೂ  ಆ ದಿನವೂ ಇದೇ ಸ್ಥಿತಿ. ಏನು ಮಾಡಲಿ ಒಂದಡೇ ಸಮಾಜ, ಮನೆ, ಅಪ್ಪ, ಅಮ್ಮ ಇನ್ನೊಂದಡೆ ನೀನು ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ? ನಾನು ತುಂಬಾ ದ್ವಂದದಲ್ಲಿ ಇರುವೆನು. ಆದರೇ ಒಂದಂತು ಸತ್ಯ ಗೆಳತಿ ಬರುವ ಯುಗಾದಿಯಂದು ನಾನು ನಿನ ಜೊತೆ ಖಂಡಿತಾ ಕಾಲ ಕಳೆಯುವೆನು. ಆ ದಿನ ನಮ್ಮ ಹಿಂದುಗಳಿಗೆ ನವ ವಷಾ౯ಚರಣೆಯ ಸಂದರ್ಭ ಮನೆಯಲ್ಲಿ ಸಹಾ ಯಾವುದೇ ಅನುಮಾನ ಬರದು. ಆ ದಿನಕ್ಕಾಗಿ ಕಾಯುತ್ತಿರುವೆ.. . ಇಂದು ಪ್ರೇಮಿಗಳ ದಿನಾರಣೆ ನಾನು ಖುದ್ದಾಗಿ ನಿನ್ನ ಜೊತೆ ಇದ್ದು ಕಾಲಕಳೆಯಲು ಆಗುತ್ತಿಲ್ಲ. ಈ ದಿನ ನಮ್ಮ ಅಪ್ಪನ ಜೊತೆ ದಿನಾಚರಣೆಯನ್ನು ವಿರೋಧಿಸಿ ಧರಣಿ ಮಾಡಬೇಕಾಗಿದೆ. ಅರ್ಥ ಮಾಡಿಕೊಳ್ಳುವೆ ಎಂಬ ನಂಬಿಕೆ ನನಗಿದೆ. ಏನೇ ಇರಲಿ ಚಿನ್ನಾ ಪ್ರೇಮಿಗಳ ದಿನಾಚರಣೆಯ ಈ ಸಂದರ್ಭದಲ್ಲಿ ನಿನ್ನ ಪ್ರೇಮಿಯ ಕಡೆಯಿಂದ ಮನಸ್ಸಿನಾಳದ ಶುಭಾಶಯಗಳು.........
ಇಂತಿ ನಿನ್ನ ಕನಸಿನ ಗೆಳೆಯ
ಕಟ್ಟಾ ಹಿಂದುತ್ವವಾದಿ ಯುವಕ

ನಲ್ಮೇಯ ಗೆಳೆಯಾ,,,,,,,,,,,,,,,
       ಕಳೆದ ಮೂರು ವರ್ಷದಿಂದ ನಾನು ನೋಡುತ್ತಿರುವೆನು. ನಿನಗೆ ನಿನ್ನ ಅಪ್ಪನನ್ನು ಎದುರಿಸುವ ಧೈರ್ಯ ಬರುವುದು. ಒಂದಾದರೂ ದಿನ ನಾವು ಜಾಲಿಯಾಗಿ ಪ್ರೇಮಿಗಳಾಗಿ ಓಡಾಡಬಹುದು ಎಂದು, ಆದರೇ ನಿನ್ನ ಪುಕ್ಕಲುತನ ನೋಡಿದರೆ ಅದು ಸಾಧ್ಯವಿಲ್ಲ ಅನಿಸುತಿದೆ. ನಿನಗೆ ನನಗಿಂತ, ನಿನ್ನ ಅಪ್ಪನ ಡೋಂಗಿ ರಾಜಕೀಯದ ಬಗ್ಗೆಯೇ ಹೆಚ್ಚು ಕಾಳಜಿ. ಯಾಕಾಗಿ ಅಪ್ಪ ಮಗ ಮನಸ್ಸಿನಲ್ಲಿ ಒಂದು ಇರಿಸಿಕೊಂಡು ಹೊರ ಜಗತ್ತಿಗೆ ಬೇರೆ ರೀತಿಯಾಗಿ ಕಾಣಿಸಿಕೊಳ್ಳುವಿರಿ. ಸದಾ ಕಾಲ ನೀನು ನನ್ನೊಂದಿಗೆ ಕಾಲ ಕಳೆಯಲು ಒಂದಲ್ಲ ಒಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿರುವೆ.
ನಾನು ರಾಜಕೀಯ ಕುಟುಂಬದಿಂದ ಬಂದವಳು ಗೆಳೆಯಾ ನನಗೆ ನಿನ್ನ ಸ್ಥಿತಿ ಅರ್ಥವಾಗುವುದು. ನಮ್ಮ ಅಪ್ಪ ಸಹಾ ಶುದ್ದ ಸಂಪ್ರದಾಯವಾದಿ, ಆದರೇ ರಾಜಕೀಯವಾಗಿ ಜಾತ್ಯಾತೀತ ಆದ ಕಾರಣಕ್ಕೆ ನಾನು ಹೊಸವರ್ಷ, ಪ್ರೇಮಿಗಳ ದಿನಾಚರಣೆಯಂದು ಎಲ್ಲಿ ಬೇಕಾದರೂ ಹೋಗಬಹುದು, ಅದಕ್ಕಾಗಿ ಯಾವುದೇ ಅಡೆತಡೆ ಇಲ್ಲ. ಆದರೇ ನೀನು ಹೇಳಿದಂತೆ ಯುಗಾದಿ ಹಬ್ಬದ ದಿನ ನನಗೆ ಮನೆ ಬಿಟ್ಟು ಬರಲು ಕಷ್ಟ ಆ ದಿನ ಪೂಜೆ ಪನಸ್ಕಾರ ಎಂದು ತುಂಬಾ ಕೆಲಸ ಇರುವುದು. ನಮ್ಮ ಅಪ್ಪ ತೋರಿಸಿಕೊಳ್ಳಲು ಮಾತ್ರ ಜಾತ್ಯಾತೀತ, ಆದರೇ ಮನೆಯಲ್ಲಿ ತುಂಬಾ ಸಂಪ್ರದಾಯ ಕಣೋ. ನಮ್ಮ ಅಪ್ಪ ಸಹಾ ಒಂದು ರೀತಿಯ ಡೋಂಗಿ ರಾಜಕಾರಣೀಯೆ ಆಗಿರುವರು.
ಗೆಳೆಯಾ ನನ್ನ ನಿನ್ನ ಕುಟುಂಬದವರು ಈ ರೀತಿಯ ಡೋಂಗಿ ರಾಜಕೀಯದ ನಡುವೆ ನಮ್ಮ ಪ್ರೀತಿ ಕಣ್ಮರೆಯಾಗುವುದು ಬೇಕಾಗಿಲ್ಲ. ಇಂದೇ ನಿರ್ಧರಿಸು, ಒಂದು ಮನೆಯವರನ್ನು ಎದುರು ಹಾಕಿಕೊಂಡು ಮದುವೆ ಆಗಿ ಬದುಕಿ ತೋರಿಸುವುದು. ಇಲ್ಲಾ ಒಂದು ಮನೆಯರನ್ನು ಒಪ್ಪಿಸಿ ಮದುವೆಯಾಗಿ ಆ ನಂತರ ಕಮ್ಯೂನಿಷ್ಟರಾಗಿ ನಾವು ನಮ್ಮ ಕುಟುಂಬವನ್ನು ಬೆಳೆಸುವುದು. ನಿನ್ನ ಉತ್ತರವನ್ನು ಇದೇ 14 ರ೦ದು ತಿಳಿಸು. ನೀನ್ನ ಉತ್ತರದ ನಂತರ ನಾನು ನನ್ನ ಭವಿಷ್ಯದ ಬಗ್ಗೆ 23 ರ೦ದು ತೀಮಾ౯ನ ತೆಗೆದುಕೊಳ್ಳುವೆನು.

ಇಂತಿ ನಿನ್ನ ಮನದಾಳದ ಗೆಳತಿ
ಅಪ್ಪಟ ಜಾತ್ಯಾತೀತ ಯುವತಿ

ಆತ್ಮೀಯ  ಪ್ರೇಮಿಗಳೇ ಚುನಾವಣಾ ಸಮಯವಾದ್ದರಿಂದ ಈ ರೀತಿಯ ಪತ್ರ ಬರೆಯಬೇಕು ಎನಿಸಿತು. ದಯವಿಟ್ಟು ನಿಮ್ಮ ಜಾತಿ, ಧರ್ಮ, ಪ್ರಸ್ಟೆಜ್, ಸಮಾಜ ಈ ಎಲ್ಲದಕ್ಕೂ ಹೆದರಿ ನಿಮ್ಮತನವನ್ನು  ಬಿಟ್ಟು ಹೆಡಿಯಾಗಿ ಬದುಕದಿರಿ. ಡೋಂಗಿ ಜ್ಯಾತ್ಯಾತೀತತೆ, ಹಿಂದುತ್ವ ಧಾಮಿ౯ಕ ಅಂದತ್ವ ಈ ಎಲ್ಲವನ್ನು ಮೀರಿ ನಿಮ್ಮ ಪ್ರೇಮ ಅಮರವಾಗಲಿ. ಎಲ್ಲರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.

ವಿವೇಕ ಬೆಟ್ಕುಳಿ.

Saturday, February 13, 2016

ಕನ್ನಡ ಕನ್ನಡಿಗ ಕರ್ನಾಟಕ: ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾ...

ಕನ್ನಡ ಕನ್ನಡಿಗ ಕರ್ನಾಟಕ: ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾ...: ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್..! ಸ್ನೇಹಿತರ ಸೋಗಿನಲ್ಲಿ ಬರುತ್ತವೆ ಲಿಂಕ್'ಗಳು ವಿಶ್ವದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ವಾಟ್ಸಾಪ್ ಈಗ ವಂಚಕರ ಟಾರ್ಗ...

ಕನ್ನಡ ಚಿತ್ರ ಬರಹ,


ವಿರೋಧಿಗಳಿಂದಲ್ಲೇ ಜನಪ್ರೀಯವಾಗುತ್ತಿರುವ ಪ್ರೇಮಿಗಳ ದಿನಾಚರಣೆ - ವಿವೇಕ ಬೆಟ್ಕುಳಿ

ಪ್ರೇಮಿಗಳ ದಿನಾಚರಣೆ 10 ವರ್ಷದ ಹಿಂದೆ ಈ ಬಗ್ಗೆ ಯಾರಿಗೂ ಗೊತ್ತೇ ಇರಲಿಲ್ಲ. ಈ ದಿನಾಚರಣೆಗೆ ಈ ರೀತಿ ಪ್ರಚಾರ ಸಿಗಲು ಮುಖ್ಯಕಾರಣ ನಮ್ಮ ಸಂಸ್ಕೃತಿ ಉಳಿಸಲು ಬೀದಿಗಿಳಿಯುತ್ತಾ ಹೋರಾಟ ಮಾಡುತ್ತಿರುವ ಹಿಂದುತ್ವವಾದಿಗಳು. ನಮ್ಮ ಸಮಾಜದಲ್ಲಿ ಯಾವುದಕ್ಕೆವಿರೋಧ ಇದೆಯೋ ಅದೇ ಹೆಚ್ಚಾಗಿ ಜನಪ್ರೀಯವಾಗುವುದು.

ಮಾಜಿ ಸಚಿವ ಹೆಚ್ ವಿಶ್ವನಾಥ ಅವರ ಆತ್ಮಕಥೆ ಹಳ್ಳಿಹಕ್ಕಿಯ ಹಾಡು ಕೆಲ ಕಾಂಗ್ರೆಸಿಗರ ವಿರೋಧದಿಂದ ಜನಪ್ರಿಯವಾಯಿತು. ಎಸ್ಎಲ್ ಭೈರಪ್ಪ ನವರ ಕೃತಿಗಳು ಪ್ರಗತಿಶೀಲರ ವಿರೋಧದಿಂದ. ಯು ಆರ್ ಆನಂತಮೂತರ್ಿಯವರ ಕೃತಿಗಳು ಹಿಂದುತ್ವವಾದಿಗಳ ವಿರೋಧದಿಂದಾಗಿ ಎಲ್ಲರೂ ಕೊಂಡು ಓದುವಂತಾಗಿ ಅವರವರ ಅಭಿಮಾನ ಬಳಗ ಸೃಷ್ಠಿಯಾಯಿತು. ಪುಸ್ತಕಗಳು, ಸಿನಿಮಾ, ಈ ರೀತಿಯಾದ ನೂರಾರು ಉದಾಹರಣೆಗಳು ವಿರೋಧದಿಂದಾಗಿಯೆ ಪ್ರಚಾರಕ್ಕೆ ಬಂದಿರುವದನ್ನು ಕಾಣಬಹುದಾಗಿದೆ. ತೀರಾ ಇತ್ತಿಚೀನ ಬೆಳವಣಿಗೆ ಎಂದರೆ ಟಿಪ್ಪು 
ಜಯಂತಿಯ ಪರ ವಿರೋಧದಿಂದ ಬೇರೆ ರಾಜ್ಯದಲ್ಲಿಯೂ ಆಚರಣೆ ಪ್ರಾರಂಭವಾಗಿರುವುದು.ಇದೇ ರೀತಿಯಾಗಿ ಪ್ರೇಮಿಗಳ ದಿನಾಚರಣೆಯನ್ನು ಪ್ರತಿ ವರ್ಷ ಹಿಂದೂ ಸಂಸ್ಕೃತಿಗೆ ಮಾರಕ ಎಂಬ ಕಾರಣಕ್ಕಾಗಿ ಒಂದು ಗುಂಪು ವಿರೋಧಿಸುತ್ತಾ ಬಂದಿರುವುದು. ಈ ವಿರೋಧ ಹೆಚ್ಚಾಗುತ್ತಾ ನಿಜವಾಗಿ ಪ್ರೇಮಿಗಳ ದಿನಾಚರಣೆಗೆ ಹೆಚ್ಚು ಹೆಚ್ಚು ಮಹತ್ವ ಸಿಗುತ್ತಿರುವುದು. ಇದು
ಒಂದು ರೀತಿ ಪುಕ್ಕಟೆ ಪ್ರಚಾರ.
ಈ ದಿನಾಚರಣೆಯನ್ನು ಹೇಗೆ ಆಚರಿಸಬೇಕು? ಪ್ರೇಮಿಗಳು ಪರಸ್ಪರ ಯಾವ ಯಾವ ರೀತಿಯ ಉಡುಗೊರೆಗಳನ್ನು ಹಂಚಿಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲಾ ಬಗೆಯ ಮಾದ್ಯಮಗಳಲ್ಲಿ ಹೆಚ್ಚಾಗಿ ಚಚೆ౯ ಆಗುತ್ತಿರುವುದು. ಇದರಿಂದ ಇಂದು ಹಳ್ಳಿ ಹಳ್ಳಿಗಳಲ್ಲಿ ಪ್ರೇಮಿಗಳ ದಿನಾಚರಣೆ ಜನಪ್ರಿಯವಾಗುತ್ತಿರುವುದು. ಅದರಲ್ಲಿಯೂ ಸೋಶಿಯಲ್ ಮಾಧ್ಯಮದಲ್ಲಿಯಂತು ಈ ದಿನಾಚರಣೆಯ ಪ್ರಚಾರ ತುಂಬಾ ಹೆಚ್ಚಾಗಿಯೇ ಆಗುತ್ತಿರುವುದು.

  ಪ್ರೇಮಿಗಳ ದಿನಾಚರಣೆಯನ್ನು ಮಾಡಲು ಬಿಡುವುದಿಲ್ಲ ಎಂದು ಕೆಲ ಗುಂಪು ಈಗಾಗಲೇ ಮಾಧ್ಯಮದ ಮೂಲಕ ವಿರೋಧ
ವ್ಯಕ್ತಪಡಿಸಿದರೆ, ಇನ್ನೂ ಕೆಲವು ಗುಂಪುಗಳು ಆಚರಣೆಯನ್ನು ಅರ್ಥಪೂರ್ಣಗೊಳಿಸಲು ತಮ್ಮದೇ ಆದ ತಯಾರಿ ಮಾಡಿಕೊಳ್ಳುತ್ತಿದೆ. ಒಟ್ಟಾರೆ ಈ ದಿನಾಚರಣೆ ದಿನದಿಂದ ದಿನಕ್ಕೆ ಹೆಚ್ಚು ಜನರನ್ನು ಆಕಷರ್ಿಸುತ್ತಿದೆ.

ವಿವಿಧತೆಯಲ್ಲಿ ಏಕತೆ ಇರುವ ಜಾಗತೀಕರಣ ಗೊಂಡಿರುವ ಈ ದೇಶದಲ್ಲಿ ಯಾವುದೇ ವಿಚಾರವಾಗಿ ಒಂದೇ ಅಭಿಪ್ರಾಯ ಬರಲು ಸಾಧ್ಯವಿಲ್ಲ. ಹೀಗಿರುವಾಗ ದಿನಾಚರಣೆಗಳ ಆಚರಣೆ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಮುಂದೆಯೂ ಇರುವುದರಲ್ಲಿ ಯಾವುದೇಸಂದೇಹವಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ವೈಭವಿಕರಿಸುವಂತಹ ಸ್ಥಿತಿಯಲ್ಲಿ ನಮ್ಮ ದೇಶ ಇರುವುದು. ಇಂತಹ ಸಂದರ್ಭದಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಧರಿಸುವುದನ್ನು  ನಾವಿಂದು ಬಿಡಬೇಕಾಗಿದೆ.  ಆರೋಗ್ಯಯುತವಾದ ಚಚರ್ೆಯನ್ನು ಮಾತ್ರ ನಾವು ಹುಟ್ಟುಹಾಕವ ಅಗತ್ಯವಿದೆ. ಒಂದಂತು ಸತ್ಯ ಎಲ್ಲಿ ವಿರೋಧ ಇದೆಯೋ ಅಲ್ಲಿ ಪ್ರತಿರೋಧ ಎಂದಿಗೂ ಇದ್ದೇ ಇರುವುದು.

ಪ್ರೇಮಿಗಳದಿನಾಚರಣೆಯ ಪರ ವಿರೋಧ ಏನಿದ್ದರೂ ಅದು ಚಚೆ౯ಗೆ ಮಾತ್ರ ಇರಲಿ, ಬದಲಾಗಿ ಅದು ಹಿಂಸೆಗೆ ತಿರುಗಿದರೆ ಅದರಿಂದ ಯಾರಿಗೂ ಸುಖವಿಲ್ಲ. ಈ ಸಂದರ್ಭದಲ್ಲಿ ಈ ದಿನದ ಆಚರಣೆ ಹೇಗೆ ಇರಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟಿದಾಗಿರುವುದು. ಆದರೇ ಈ ರೀತಿ ಪ್ರಚಾರಕ್ಕೆ ಕಾರಣರಾದ ವಿರೋಧಿ-ಪರ ಇಬ್ಬರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.

                                                                                                                                 ವಿವೇಕ ಬೆಟ್ಕುಳಿ                                                                                                                                        vivekpy@gmail.com

Monday, February 8, 2016

ಇನ್‌ಬಾಕ್ಸ್ ಗೆಳೆಯನಿಗೆ ಬಹಿರಂಗ ಪತ್ರ - ಫಾತಿಮಾ

ಇನ್‌ಬಾಕ್ಸ್ ಗೆಳೆಯನಿಗೆ ಬಹಿರಂಗ ಪತ್ರ ::
ಇನ್‌ಬಾಕ್ಸ್ ಗೆಳೆಯ
ನೀನು ಕೇಳಿದೆ...
ನೀನು ಸುನ್ನಿನಾ? ಶಿಯಾನಾ?
ನೀನು ಸಲಾಫಿಯಾ? ಹನಾಫಿಯಾ..?
ನಾವು ಯಾರಾದರೇನು ?
ನಾವೆಲ್ಲಾ ಒಂದೇ ಕಾರವಾನ್‌ನ
ಸಹಚರರು
ಸತ್ಯ ಮಾರ್ಗದ ಅನ್ವೇಷಿಗರು
ಅಂದು ಕೊಂಡಿದ್ದೆ
ನಾವೆಲ್ಲಾ ಇಷ್ಟು ಬೇರೆ ಬೇರೆ ಅಂತ
ಅರಿವಿರಲಿಲ್ಲ.
ಕಣ್ಣು ತೆರೆಸಿದೆ ಧನ್ಯವಾದ
...........
ಬುರ್ಖಾ ಹಾಕೋಲ್ವಾ?
ಅಬಯಾ ತೊಡೊಲ್ವಾ ?
ವೇಲು ಸುತ್ತಿಕೊಳ್ಳೋಲ್ವಾ?
ಅಂತ ಹೆದರಿಸಿದೆ ನೀನು ನನ್ನ
ನಿನ್ನ ಕಣ್ಣ ಬೆಂಕಿಗೆ
ಸುಟ್ಟು ಹೋಗುವ ಕಾಗೆ ನಾನಲ್ಲ
ಮೊದಲು ನಿನ್ನ ಮನಕೆ ಬೇಕು
ಸಭ್ಯತೆಯ ತಂಪು ಕನ್ನಡಕ
ಅರಿವಾಗಲಿ ನಿನಗೆ ಬೇಗ.
...........
ನೀ ಕೇಳಿದೆ
’ನಿನ್ನ ವಾಲ್ ಮೇಲೆ
ಪವಿತ್ರ ಸ್ಥಳದ ಚಿತ್ರ ಏಕಿಲ್ಲ ? ’
ಚಿತ್ರ ಹಾಕಿದರೆ ಮಾತ್ರ
ಪ್ರೊಫ಼ೈಲ್ ಪವಿತ್ರವಾಗುವುದೆಂದು
ನನಗೆ ಗೊತ್ತಿರಲಿಲ್ಲ.
ಗೊತ್ತಿದ್ದರೆ ಪವಿತ್ರ ಸ್ಥಳದ ಚಿತ್ರ
ನಿನ್ನ ಎದೆಗೂ ಅಂಟಿಸುತ್ತಿದ್ದೆ
ಖಂಡಿತಾ ಬಿಡುತ್ತಿರುಲಿಲ್ಲ.
.............
ಅದಿರಲಿ
ನೀನೇಕೆ ತ್ವಾಬ್ ತೊಟ್ಟಿಲ್ಲ?
ನಿನ್ನ ವಾಲ್ ಮೇಲೇಕೆ
ಪಾರಿವಾಳ ಬಿಳಿಗುಲಾಬಿ ಚಿತ್ರಗಳಿಲ್ಲ?
ಗುಂಡಿ ತೆರೆದ ಅಂಗಿ - ಬರ್ಬುಡಾ ಚಡ್ದಿ
ಚಿತ್ರಗಳು ಸರಿಯಲ್ಲ.
ರೇಸ್ ಬೈಕಿನ ಚಿತ್ರವೇಕೆ?
ನಿನಗೆ ಮಾಡಲು ಬೇರೆ ಕೆಲಸವಿಲ್ಲ ?
ನಿನ್ನ ಮದುವೆ ಆಗುವ ಹುಡುಗಿಗೆ ಯಾಕೆ ಮುಖವಿಲ್ಲ ?
ಅವಳ ಪ್ರೊಫ಼ೈಲ್ನಲ್ಲಿ ಯಾಕೆ ನಗುತ್ತಿದ್ದಾರೆ
ಬುರ್ಖಾ ಧರಿಸದ
ಜೆನೆಲಿಯಾ ಡಿಸೋಜಾ
ಭೂಮಿಕಾ ಚಾವ್ಲಾ..
 ಫಾತಿಮಾ ಬೆಳವಾಡಿ 

ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾರ

ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್..! ಸ್ನೇಹಿತರ ಸೋಗಿನಲ್ಲಿ ಬರುತ್ತವೆ ಲಿಂಕ್'ಗಳು
ವಿಶ್ವದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ವಾಟ್ಸಾಪ್ ಈಗ ವಂಚಕರ ಟಾರ್ಗೆಟ್ ಆಗಿದೆ. ವಾಟ್ಸಾಪ್ ಅಪ್ಡೇಟ್ ಎಂಬ ನಕಲಿ ಸಂದೇಶ ಕಳುಹಿಸಿ ಜನರ ಮೊಬೈಲ್'ಗಳಲ್ಲಿರುವ ಮಾಹಿತಿಯನ್ನು ವಂಚಕರು ಕದಿಯುತ್ತಿದ್ದಾರೆಂದು ಕಳೆದ ತಿಂಗಳು ಭದ್ರತಾ ತಜ್ಞರು ಎಚ್ಚರಿಸಿದ್ದರು. ಈಗ ಮತ್ತೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ವಾಟ್ಸಾಪ್ ಬಳಕೆದಾರರನ್ನು ಮೋಸ ಮಾಡುವ ಹೊಸ ಸ್ಕ್ಯಾಮ್ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.
ಏನಿದು ಹೊಸ ಸ್ಕ್ಯಾಮ್..?
ನಿಮ್ಮ ವಾಟ್ಸಾಪ್'ನಲ್ಲಿ ನಿಮ್ಮ ಸ್ನೇಹಿತರ ಹೆಸರಿನಲ್ಲಿ ಲಿಂಕ್'ಗಳು ಕಾಣಿಸುತ್ತವೆ. ಗೆಳೆಯರು ಕಳುಹಿಸಿದ್ದಿರಬಹುದೆಂದು ನೀವೇನಾದರೂ ಆ ಲಿಂಕ್ ಕ್ಲಿಕ್ ಮಾಡಿದರೆ ವಂಚಕ ವೆಬ್'ಸೈಟ್'ವೊಂದಕ್ಕೆ ಹೋಗುತ್ತದೆ. ಅದರಲ್ಲಿ ಅನೇಕ ರೀತಿಯ ಆಫರ್, ಡಿಸ್ಕೌಂಟ್'ಗಳನ್ನು ನಿಮಗೆ ತೋರಿಸಿ ನಂಬಿಸಲಾಗುತ್ತದೆ.
ನಂತರ, ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ. ಅದಾದ ನಂತರ ನಿಮ್ಮ ಫೋನ್'ಗೆ ಮಾಲ್ವೇರ್ ಅಂಟಿಕೊಳ್ಳುತ್ತದೆ. ಈ ಮಾಲ್ವೇರ್ ಮೂಲಕ ಫೋನ್'ನಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನೆಲ್ಲಾ ವಂಚಕರು ಸುಲಭವಾಗಿ ಸಂಗ್ರಹಿಸುತ್ತಾರೆ.
ಈ ವಾಟ್ಸಾಪ್ ವಂಚಕರು ಕೆಲ ಕಾಲದಿಂದ ಬಹಳ ಸಕ್ರಿಯರಾಗಿದ್ದಾರಂತೆ. ಆತಂಕದ ವಿಷಯವೆಂದರೆ, ಈ ವಂಚಕರು ಇಂಗ್ಲೀಷ್ ಒಂದಷ್ಟೇ ಅಲ್ಲ ಅನೇಕ ಭಾರತೀಯ ಭಾಷೆಗಳಲ್ಲಿ ಮೋಸದ ಸಂದೇಶಗಳನ್ನು ಕಳುಹಿಸಬಲ್ಲರು. ಅಲ್ಲದೇ, ನೀವು ಮೋಸಗೊಂಡಿದ್ದಲ್ಲದೇ ನಿಮ್ಮೊಂದಿಗೆ ಇನ್ನೂ 10 ಜನರಿಗೆ ನಿಮ್ಮಿಂದಲೇ ಹಳ್ಳ ತೋಡಿಸುತ್ತಾರೆ. ನಿಮಗೆ ಕಳುಹಿಸಿದ ಸಂದೇಶವನ್ನು ನಿಮ್ಮ ಹತ್ತು ಸ್ನೇಹಿತರಿಗೆ ಫಾರ್ವರ್ಡ್ ಮಾಡಿದರೆ ಆ ಹೋಟೆಲ್'ನಲ್ಲಿ ಇಷ್ಟು ಡಿಸ್ಕೌಂಟ್ ಸಿಗುತ್ತದೆ, ಗಿಫ್ಟ್ ಕಾರ್ಡ್ ಸಿಗುತ್ತದೆ ಎಂದೆಲ್ಲಾ ಪ್ರಲೋಭನೆಗೊಳಪಡಿಸುತ್ತಾರೆ ಎಂದು ಆಯಂಟಿ-ವೈರಸ್ ಸಾಫ್ಟ್'ವೇರ್ ಕಂಪನಿ ಕಾಸ್ಪೆರ್'ಸ್ಕಿ ಲ್ಯಾಬ್'ನ ಪ್ರಧಾನ ಭದ್ರತಾ ಸಂಶೋಧಕ ಡೇವಿಡ್ ಎಮ್ ತಿಳಿಸುತ್ತಾರೆ.

http://www.suvarnanews.tv/Technology/gadgets/beware-of-new-whatsapp-scam-19294?cf=article-bottom

Saturday, February 6, 2016

ಹಾಸ್ಯ - ಕೃಪೆ - ವಾಟ್ಸ್ ಆಪ್

ಹೊಸದಾಗಿ ಮದುವೆ ಆಗಿ ಬಂದ ಸೊಸೆ ಏನೂ ಕೆಲಸ ಮಾಡಲ್ಲ ಅಂತ ಮಗನಿಗೆ

ಹೇಳಿ ಪೇಚಾಡಿಕೊಂಡರು ಅಮ್ಮ.

ಆಮೇಲೇ ಅಮ್ಮಾ ಮಗ ಸೇರಿ ಒಂದು plan ಮಾಡಿದರು

ಅಮ್ಮ ಹೇಳಿದ್ರು" ನಾಳೆ ಬೆಳಿಗ್ಗೆ ಕಸ ಗುಡಿಸತಾ ಇರ್ತೀನಿ ಆಗ ನೀನು ಬಿಡಮ್ಮ ನಾ
ಗುಡಸ್ತೀನಿ ಅನ್ನು ಆಗಲಾದ್ರೂ ನಾ ಮಾಡ್ತೀನಿ ಅಂತಾಳಾ ನೋಡೋಣ"

ಅದೇ ಪ್ರಕಾರ ಅಮ್ಮ ಕಸ ಗುಡಸ್ತಾ ಇದ್ದಾಗ ಮಗ "ಬಿಡಮ್ಮ ನಾ ಗುಡಸ್ತೀನಿ"
ಅಂದ

"ಇಲ್ಲ ನಾ ಗುಡಸ್ತೀನಿ"


ಅಮ್ಮ ಮಗ ಕಿತ್ತಾಡೊಕೆ ಶುರು ಮಾಡಿದ್ರು.

ಸೊಸೆ ಬಂದು ಶಾಂತ ರೀತಿಯಿಂದ ಹೇಳಿದಳು"ಅದಕ್ಕೆ ಯಾಕ ಕಿತ್ತಾಡತೀರಿEven

 date ಗೆ ಅಮ್ಮ ಗುಡಸಲಿ,Odd date ಗೆ ಮಗ ಗುಡಸಲಿ" ಅಂತ.

ಸೊಸೆ Rockingಅಮ್ಮ ಮಗ Shocking

ಕೃಪೆ - ವಾಟ್ಸ್ ಆಪ್

ಚುಟುಕುಗಳು - ರಘು ವಿ.

  - 1-
ದಿನಚರಿಯ ಹೊಸಪುಟವ
ರಘು ವಿ.
ಸಂಪಾದಕ, ವಿವೇಕ ಹಂಸ.
ದಿನದ ಮೊದಲ ಕಿರಣದಿಂ
ತೆರೆವ ವಿಧಿಯ ಹಸ್ತವು ನೀನು
ಅಂಜದಳುಕದೆ ಬೆಳಕಿದೆಗೊಟ್ಟು
ನೆಳಲ ಹಿಂದಿಟ್ಟು ಒಲವಿನಿಂ
ಮುನ್ನಡೆವ ಧೀಮಂತಿಕೆಯ
ನೀಡಿ ಹರಸೊ ರವಿಯೇ!

 -2-
 ಜಗದ ದೊಡ್ಡಣ್ಣನುದಯಿಸಿಹ
ಕೃಪೆಯಿಂದ ಇಳೆಯ ಸಲಹಲೆಂದು
ಬೆಳಕ ಬಿತ್ತನೆಗೆ ತೆರೆಯಿರೆದೆಯನು
ನಿತ್ಯ ಜನುಮವು ಅಂತರಂಗದೊಳು
ದೊಡ್ಡಣ್ಣನೀವ ಮೌಲ್ಯಗಳ ಬಿತ್ತಿಹೆವು
ಸಾಧಿಸುವ ಮನ ನೀಡು ಬಾನ ರವಿಯೇ!
-3-
ಒಂಟಿ ಪಯಣಿಗ ನೀನು
ಅದೇನ ಧ್ಯಾನಿಸುವೆಯೊ
ಅದೇನ ಅರಿತಿಹೆಯೊ
ಅನಾದಿಯಿಂದಲೂ ಸತ್ಯ
ಪಾತ್ರೆಯ ಸುವರ್ಣ ಮುಚ್ಚಳ
ನೀನು, ಗುಟ್ಟನೆನಗೆ ಜಗಕೆ
ಉಣಬಡಿಸೊ ರವಿಯೇ! "
-ಕವಿ
( ನಾಳೆ ರವಿಯ ಉತ್ತರ )


-4-
 "ಪಯಣವದೆಲ್ಲ ಒಂಟಿಯೇ
ಲಕ್ಷ ತಾರಾಪಥದಿ ಜತೆಯಿಲ್ಲ
ಎದುರಿಲ್ಲ ಒದರಾಟ ಮೊದಲಿಲ್ಲ
ಸತ್ಯವನಂತ ಯಾತ್ರೆಯದು
ಪಾತ್ರೆ ಮುಚ್ಚಳಗಳಿಲ್ಲ ಬೆಸುಗೆ
ಬಂಧಗಳ ಬಿಡಿಸುವುದೇ ತಪವು
ಗುಟ್ಟು ಗಹ್ವರಗಳಿಲ್ಲ ಇಡು ಹೆಜ್ಜೆ
ಬೆಳಕಾಗುವುದೇ ರಟ್ಟು ನಡೆಯೊ
ಕವಿ ಕತ್ತಲಿಂದ ಬೆಳಕಿನೆಡೆಗೆ!"
-ರವಿ


-5-
"ಹೊತ್ತೊತ್ತಿಗೆ ಚಿತ್ತದಲಿ
ಮೊಳೆವ ಚಿಂತನೆಯಂತೆ
ಅಂದಂದಿನ ದಿನದಾಗಮವ
ಸಾರುವ ರವಿಯೇ,
ನಿನ್ನೊಳಚಿತ್ತದ ಚಿಂತನೆ
ಏನೋ?!"
-ಕವಿ


Tuesday, January 12, 2016

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು

ಮೂಡುವನು ರವಿ ಮೂಡುವನು
ಕತ್ತಲೊಡನೆ ಜಗಳಾಡುವನು
ಪಂಜೆ ಮಂಗೇಶ ರಾಯರು
ಮೂಡಣ ರಂಗಸ್ಥಳದಲಿ ನೆತ್ತರ
ಮಾಡುವನು ಕುಣಿದಾಡುವನು
ಬೆಳಕಿನ ಕಣ್ಣುಗಳಿ೦ದಾ ಸೂರ್ಯನು
ನೋಡುವನು ಬಿಸಿಲೂಡುವನು
ಚಿಲಿಪಿಲಿ ಹಾಡನು ಹಾಡಿಸಿ ಹಕ್ಕಿಯ
ಗೂಡಿನ ಹೊರ ಹೊರ ದೂಡುವನು
ಬಂಗಾರದ ಚೆಲು ಬಿಸಿಲ ಕಿರೀಟದ
ಶೃಂಗಾರದ ತಲೆ ಎತ್ತುವನು
ತೆಂಗಿನ ಕಂಗಿನ ತಾಳೆಯ ಬಾಳೆಯ
ಅಂಗಕೆ ರಂಗನು ಮೆತ್ತುವನು
ಮಾಡಿನ ಹುಲ್ಲಲಿ ಚಿನ್ನದ ಗೆರೆಯನು
ಎಳೆಯುವನು ರವಿ ಹೊಳೆಯುವನು
ಕೂಡಲ ಕೋಣೆಯ ಕತ್ತಲೆ ಕೊಳೆಯನು
ತೊಳೆಯುವನು ರವಿ ಹೊಳೆಯುವನು
ಮಲಗಿದ ಕೂಸಿನ ನಿದ್ದೆಯ ಕಸವನು
ಗುಡಿಸುವನು ಕಣ್ ಬಿಡಿಸುವನು
ಹುಲುಗಿಡ ಹೂವಿಗೆ ಪರಿ ಪರಿ ಬಣ್ಣವ
ತೊಡಿಸುವನು ಹನಿ ತೊಡೆಸುವನು
ಏರುವನು ರವಿ ಏರುವನು
ಬಾನೊಳು ಸಣ್ಣಗೆ ತೋರುವನು
ಏರಿದವನು ಚಿಕ್ಕವನಿರಬೇಕೆಲೆ
ಎಂಬಾ ಮಾತನು ಸಾರುವನು
ಕವಿ : ಪಂಜೆ ಮಂಗೇಶ ರಾಯರು