ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Wednesday, September 24, 2014

ಶಿಲ್ಪಕಲೆ ‍೬ - ರಾಜೇಶ್ ಶ್ರೀವತ್ಸ


ಸ್ನೇಹಿತರೊಬ್ಬರು ಬದಾಮಿ ಬನಶಂಕರಿಯ ವಿಗ್ರಹದ ಸ್ವರೂಪ ಹೇಗಿದೆ ಎಂದು ಕೇಳಿದ್ದಾರೆ. ಯಾವಾಗಲೂ ಅಲಂಕಾರದಲ್ಲಿ ಮುಚ್ಚಿ ಹೋಗಿರುವ ದೇವಿಯ ವಿಗ್ರಹದ ವಿವರಗಳು ಕಾಣುವುದಿಲ್ಲವಾದ್ದರಿಂದ ಅವರಿಗೆ ಅದರ ಬಗ್ಗೆ ತಿಳಿದುಕೊಳ್ಳಬೇಕು ಎನಿಸಿರಬಹುದು. ಬದಾಮಿ ಬನಶಂಕರಿ ಚಾಲುಕ್ಯರ ಆರಾಧ್ಯ ದೇವತೆ. ಹಿಂದೊಮ್ಮೆ ದುರ್ಗಮನೆಂಬ ಅಸುರ ಬ್ರಹ್ಮನನ್ನು ಒಲಿಸಿಕೊಂಡು ವೇದಗಳನ್ನು ತನ್ನ ವಶದಲ್ಲಿಟ್ಟುಕೊಂಡನಂತೆ. ವೇದಗಳ ಮರೆವಿನಿಂದ ಜನರು ಧರ್ಮಭ್ರಷ್ಟರಾಗಿ ಭೂಮಿಯ ಮೇಲೆ ಮಳೆ ಇಲ್ಲದೆ ಬರಗಾಲ ಉಂಟಾಯಿತಂತೆ. ಜನರ ಕಷ್ಟ ನೋಡಲಾಗದೆ ಆದಿಶಕ್ತಿಯು ಅವತಾರವೆತ್ತಿದಳು. ಜನರ ದೀನ ಸ್ಥಿತಿಯನ್ನು ನೋಡಿ ಆಕೆ ದುಃಖದಿಂದ ಮೈಯೆಲ್ಲಾ ನೂರಾರು ಕಣ್ಣುಗಳನ್ನು ಹೊಂದಿ ಕಂಬನಿಯ ಮಳೆಬರಿಸಿದಳು(=ಶತಾಕ್ಷಿ) . ತನ್ನ ಮೈಯಿಂದಲೇ ಫಲ,ಪುಷ್ಪ,ಗೆಡ್ದೆ,ಗೆಣಸುಗಳನ್ನು (=ಶಾಕಂಭರಿ) ಸೃಷ್ಟಿಸಿ ಜನರ ಹಸಿವನ್ನು ನೀಗಿಸಿದಳು . ನಂತರ ಭಯಂಕರ ಕೋಪದಿಂದ ದುರ್ಗಮಾಸುರನೊಡನೆ ಹೋರಾಡಿ ಅವನನ್ನು ಸಂಹರಿಸಿ ವೇದಗಳನ್ನು ಮರಳಿ ಪಡೆದಳು. ದುರ್ಗಮಾಸುರನನ್ನು ಸಂಹರಿಸಿ ದುರ್ಗೆ ಎನಿಸಿಕೊಂಡಳು. ನಂತರ ತಿಲಕಾರಣ್ಯದಲ್ಲಿ (ಈಗಿನ ಬದಾಮಿ) ನೆಲೆಸಿದಳು. ವನದಲ್ಲಿ ನೆಲೆಸಿದ್ದರಿಂದ ವನಶಂಕರಿ ಎನಿಸಿಕೊಂಡಳು.
ದೇವೀ ಭಾಗವತ ಹಾಗು ಸಪ್ತಶತಿಗಳಲ್ಲಿ ದೇವಿಯು ಶಾಕಂಭರಿ ಅವತಾರದಲ್ಲಿ ತನ್ನ ನಾಲ್ಕು ಕೈಗಳಲ್ಲಿ ಬಲ ಕೈಯಗಳಲ್ಲಿ ಬಾಣ ಹಾಗು ಶಾಕಸಮೂಹ (ಫಲ,ಪುಷ್ಪ,ಗೆಡ್ದೆ,ಗೆಣಸು)ವನ್ನು , ಎಡಕೈಗಳಲ್ಲಿ ಧನಸ್ಸು ಹಾಗು ತಾವರೆಯನ್ನು ಹಿಡಿದಿರುವಂತೆ ವರ್ಣಿಸಲಾಗಿದೆ. ಆದರೆ ಬದಾಮಿಯ ಧ್ಯಾನ ಶ್ಲೋಕದಲ್ಲಿ ಬೇರೆಯ ರೂಪವನ್ನು ವರ್ಣಿಸಲಾಗಿದೆ.ವಿಗ್ರಹವು ಕರಿಕಲ್ಲಿನ ಅರೆ ಉಬ್ಬು ಶಿಲ್ಪ. ಇಲ್ಲಿ ಆಕೆ ಅಷ್ಟಭುಜೆ. ಪ್ರಭಾವಳಿಗೆ ಹೊಂದಿಕೊಂಡಂತೆ ಆಕೆಯ ದೇಹ ಹಾಗು ಕೈಗಳನ್ನು ಕೆತ್ತಲಾಗಿದೆ. ಬಲ ಭಾಗದ ನಾಲ್ಕು ಕೈಗಳಲ್ಲಿ ಮೇಲಿನಿಂದ ಕೆಳಗೆ ಖಡ್ಗ, ಘಂಟೆ, ತ್ರಿಶೂಲ ಹಾಗು ಬಲತೊಡೆಯ ಮೇಲಿಟ್ಟಿರುವ ಕೈಯಲ್ಲಿ ಪುಸ್ತಕ (ವೇದ) ಇವುಗಳನ್ನು ಧರಿಸಿದ್ದಾಳೆ. ಎಡ ಕೈಗಳಲ್ಲಿ ಮೇಲಿನಿಂದ ಕೆಳಗೆ ಡಮರುಗ , ಡಮರು, ದುರ್ಗಮಾಸುರನ ತಲೆ ಹಾಗು ಎಡತೊಡೆಯ ಮೇಲೆ ಇಟ್ಟಿರುವ ಕೈಯಲ್ಲಿ ಮಧುಪಾತ್ರೆಗಳನ್ನು ಧರಿಸಿದ್ದಾಳೆ. ದೇವಿಯು ಸಿಂಹದ ಮೆಲೆ ಕುಳಿತಿದ್ದು ಎರಡೂ ಕಾಲುಗಳನ್ನು ಅಕ್ಕ ಪಕ್ಕ ಇಳಿಬಿಟ್ಟಿದ್ದಾಳೆ. ಎಡ ಬಲಗಳಲ್ಲಿ ಜಯೆ-ವಿಜಯೆಯರು ಚಾಮರಹಿಡಿದಿದ್ದಾರೆ. ಬಲದಲ್ಲಿ 
ಜಯೆಯ ಎದುರು ವಾಮಾಕ್ಷೀ, ವಿಜಯೆಯ ಎದುರು ವಾರುಣಿ ವಾದ್ಯಗಳನ್ನು ನುಡಿಸುತ್ತಾ ಕುಳಿತಿದ್ದಾರೆ. ದೇವಿಯ ಎರಡೂ ಪಾದಗಳಿಗೆ ಆಧಾರವಾಗಿ ಬಲಭಾಗದಲ್ಲಿ ಶಾಕಿಣಿ ಎಡಭಾಗದಲ್ಲಿ ಡಾಕಿಣಿಯರು ಇದ್ದಾರೆ. ಸಿಂಹವು ಶಾಂತವಾಗಿದ್ದು ಎರಡೂ ಕಾಲುಗಳನ್ನು ಕೆಳಗಿರುವ ಎರಡು ಆನೆಗಳ ಮೇಲೆ ಊರಿನಿಂತಿದೆ. ಆನೆಗಳು ಆಮೆಯ ಮೇಲೆ ನಿಂತಿವೆ.

ದೇವಿಯು ತ್ರಿಲೋಚನೆ ಅಗಲವಾದ ಹಣೆಯಲ್ಲಿ ಮೂರನೆಯ ಕಣ್ಣನ್ನು ಧರಿಸಿದ್ದಾಳೆ. ಯಾವುದೇ ಕುಸುರಿಯ ಕೆತ್ತನೆ ಇಲ್ಲದ ಮೆಟ್ಟಿಲು ಮೆಟ್ಟಿಲಾದ ದೊಡ್ದ ಕಿರೀಟ. ದುಂಡನೆಯ ಬಿಲ್ಲೆಯಂತಾ ದೊಡ್ದದಾದ ಚಿತ್ತಾರ ರಹಿತ ಕಿವಿಯೋಲೆಗಳು. ದೇವಿಯ ಎಲ್ಲಾ ಆಭರಣಗಳು ಸರಳವಾಗಿವೆ ಅಥವ ಕಾಲಾಂತರದಲ್ಲಿ ಪೂಜೆ, ಅಭಿಷೇಕಾದಿಗಳಿಂದ ವಿವರಗಳು ಸವೆದು ಹೋಗಿವೆ ಎನ್ನಬಹುದು. ಪ್ರಭಾವಳಿಯಲ್ಲಿ ಸಿಂಹ ಲಲಾಟವಿದ್ದು ಅದರ ಮೇಲಿರುವ ಬಳ್ಳಿಯ ಚಿತ್ತಾರಗಳು ಎಡ ಬಲಗಳಲ್ಲಿ ಬೇರೆ ಬೇರೆಯಾಗಿವೆ. ಕೈಲಿರುವ ಮಧು ಪಾತ್ರೆಯಿಂದ ಆಗಷ್ಟೇ ಪಾನಮಾಡಿದಂತಿರುವ ಅರೆತೆರೆದ ತುಟಿಗಳು, ದುಂಡನೆಯ ಕಣ್ಣುಗುಡ್ದೆಗಳು ದೇವಿಯ ಮುಖಕ್ಕೆ ಸ್ವಲ್ಪ ಉಗ್ರಕಳೆಯನ್ನು ನೀಡಿದೆ ಅನ್ನಬಹುದು.

ರಾಜೇಶ್ ಶ್ರೀವತ್ಸ

ಶಿಲ್ಪಕಲೆ : ೫ - ರಾಜೇಶ್ ಶ್ರೀವತ್ಸ


ಬಹುತೇಕ ಎಲ್ಲಾ ಪುರಾಣಾಗಳಲ್ಲೂ ಜಗತ್ ಸೃಷ್ಟಿಯ ಕಥೆ ಬರುತ್ತದೆ. ಪುರಾಣದ ಕಥೆಗಳ ಪ್ರಕಾರ ಕಶ್ಯಪ ಹಾಗು ದಿತಿಯರ ಎರಡನೆಯ ಮಗ ಹಿರಣ್ಯಾಕ್ಷ ಭೂಮಿಯನ್ನು ಚಾಪೆಯಂತೆ ಸುರುಳಿ ಸುತ್ತಿ
ಸಮುದ್ರದಡಿಯಲ್ಲಿ ಬಚ್ಚಿಟ್ಟ. ಆಗ ವಿಷ್ಣು ವರಾಹ (ಕಾಡು ಹಂದಿ) ರೂಪವನ್ನು ತಾಳಿ ನೀರಿಗಿಳಿದು ಹಿರಣ್ಯಾಕ್ಷನನ್ನು ಎಡಗಾಲಿಂದ ಒದ್ದು ಸಂಹರಿಸಿ ಕೋರೆದಾಡೆಗಳ ಮೂಲಕ ಭೂಮಿಯನ್ನು ಮೇಲೆತ್ತಿ
ಮೊದಲಿದ್ದಂತೆ ನೀರಿನ ಮೇಲೆ ಪ್ರತಿಷ್ಠಾಪಿಸಿದ. ಬ್ರಹ್ಮ ವರಾಹನನ್ನೆ ಸೃಷ್ಟಿಯಜ್ಞದ ಪಶುವನ್ನಾಗಿಸಿ ತನ್ನ ಕಾರ್ಯವನ್ನು ಪ್ರಾರಂಭ ಮಾಡಿದನು. ಆ ಯಜ್ಞ ಸ್ವರೂಪಿ ವರಾಹನನ್ನು ಈ ರೀತಿ ಬಣ್ಣಿಸಲಾಗುತ್ತದೆ. ನಾಲ್ಕು ವೇದಗಳೇ ಅವನ ಕಾಲುಗಳು, ಯೂಪ ಸ್ತಂಭವೇ ಅವನ ಕೋರೆಹಲ್ಲುಗಳು, ಯಾಗಗಳೆಲ್ಲಾ ಅವನ ದಂತಗಳು, ಚಯನವೇ ( ಅಗ್ನಿವೇದಿಕೆ ) ಮುಖ, ಅಗ್ನಿಯೇ ನಾಲಗೆ, ದರ್ಭೆಗಳೆ ರೋಮಗಳು, ಬೆವರಹನಿಗಳೇ ತಿಲ(ಎಳ್ಳು), ರಾತ್ರಿ-ಹಗಲುಗಳೇ ಇವನ ಕಣ್ಣುಗಳು, ಆಕಾಶವೇ ಒಡಲು, ಗುಡುಗಿನ ಶಬ್ಧಗಳೇ ವಾದ್ಯಗಳು, ಸಾಮಗಾನವೇ ಅವನ ಸ್ವರ, ಅವನ ಮೂತಿಯೇ ಸೃಕ್ -ಸ್ರುವಗಳು (ತುಪ್ಪಹೊಯ್ಯುವ ಚಮಚಗಳು ), ರಕ್ತವೇ ಆಜ್ಯ(ತುಪ್ಪ), ಅಸ್ಥಿಗಳೇ ಸಮಿತ್ತ್ತು(ಕಟ್ಟಿಗೆ), ಗುಪ್ತರ ಕಾಲದಲ್ಲಿ ನಾಲ್ಕುಕಾಲಿನ ಪಶುರೂಪಿ ವರಾಹನ ಮೂರ್ತಿಗಳೇ ಪ್ರಚಲಿತವಾಗಿದ್ದವು, ಪಲ್ಲವ, ಚಾಳುಕ್ಯ ಕಾಲದಿಂದ ನೃವರಾಹ (ಮನುಷ್ಯ ದೇಹ ಕಾಡುಹಂದಿಯ ತಲೆ) ರೂಪದಿಂದ ಅವನ ವಿಗ್ರಹಗಳ ಕೆತ್ತನೆ ಪ್ರಾರಂಭವಾಯ್ತು.


ಮೊದಲನೇ ಚಿತ್ರದಲ್ಲಿರುವುದು ಮಹಾಬಲಿಪುರಂ ನ ಆದಿವರಾಹ. ಚತುರ್ಭುಜ ವರಾಹನು ಆಗಷ್ಟೇ ಭೂಮಿಯನ್ನು ಹಿರಣ್ಯಾಕ್ಷನ ಸೆರೆಯಿಂದ ಪಾರು ಮಾಡಿ ಮೇಲೆತ್ತಿ ತಂದಿದ್ದಾನೆ. ಸುತ್ತಲಿರುವ ಎಲ್ಲರಿಗಿಂತ ಆತನೇ ಬಲಶಾಲಿ ಭೂಮಿಯನ್ನು ಮೇಲೆತ್ತಲು ಇವನೇ ಸರಿ ಎನ್ನುವಂತ ಮಾಹಾಕಾಯ ರೂಪದಲ್ಲಿ ಶಿಲ್ಪಿ ಅವನನ್ನು ತೋರಿಸಿದ್ದಾನೆ. ಬಲಗಾಲನ್ನು ಆದಿ ಶೇಷನ ಮೇಲೆ ಎತ್ತರಿಸಿ ಇಟ್ಟಿದ್ದರೆ ಎಡಗಾಲನ್ನು ನೆಲದ ಮೇಲೆ ಊರಿದ್ದಾನೆ. ಅವನ ಈ ಸಾಹಸವನ್ನು ನೋಡಿ ದೇವತೆಗಳು ಧನ್ಯವಾದಗಳನ್ನರ್ಪಿಸಲು ನಮಸ್ಕರಿಸುತ್ತಿದ್ದಾರೆ. ಆದರೆ ಅವರ ನಮಸ್ಕಾರ ಸ್ವೀಕರಿಸಲು ಅವನಿಗೆ ಸಮಯವಿಲ್ಲ. ಅವನಿಗೆ ತನ್ನ ಪ್ರಿಯಪತ್ನಿಯ ಯೋಗಕ್ಷೇಮದ ಚಿಂತೆ. ಎರಡೂ ಕೈಗಳಿಂದ ಭೂದೇವಿಯನ್ನು ಹಿಡಿದು ತನ್ನ ಬಲತೊಡೆಯ ಮೇಲೆ ಕೂರಿಸಿಕೊಂಡಿದ್ದಾನೆ. ಅವನ ಎಡಗೈ ಭೂ ದೇವಿಯ ಕಾಲನ್ನು ಭದ್ರವಾಗಿ ಹಿಡಿದಿದ್ದು ಬಲಗೈ ಆಕೆಯ ಹಿಂಭಾಗವನ್ನು ಬಳಸಿದೆ. ತನ್ನ ಮೂತಿಯಿಂದ ದೇವಿಯ ಸ್ತನಗಳನ್ನು ಪ್ರೇಮದಿಂದ ಸ್ಪರ್ಷಿಸುತ್ತಾ ಇದ್ದಾನೆ ( ಏನೂ ತೊಂದರೆ ಅಗಿರಲಿಲ್ಲ ತಾನೆ ಅನ್ನುವಂತೆ) ಇವರ ಏಕಾಂತಕ್ಕೆ ಅಡ್ದಿಯಾಗದಂತೆ ಅವನ ಎಡಬದಿಯಲ್ಲಿರುವ ಬ್ರಹ್ಮ (ಎಡ ಬಲದ ಮುಖಗಳನ್ನು ಸ್ಪಷ್ಟವಾಗಿ ಕೆತ್ತಿಲ್ಲ,) ಕೆಲವರ ಪ್ರಕಾರ ಅದು ಪ್ರಜಾಪತಿ .( ಆತನೂ ಸೃಷ್ಟಿಕಾರ್ಯ ನಡೆಸುವವನು ) ಹುಸಿನಗೆ ಬೀರುತ್ತಾ ಇತ್ತ ತಿರುಗಿದ್ದಾನೆ , ಬಲಬದಿಯಲ್ಲಿರುವ ಇಂದ್ರ ತಲೆ ತಗ್ಗಿಸಿದ್ದಾನೆ. ಮೇಲ್ಭಾಗದಲ್ಲಿರುವ ಸೂರ್ಯನಿಗೆ ತಮ್ಮ ಪ್ರೇಮ ಸಲ್ಲಾಪ ಕಾಣದಂತೆ ವರಾಹನೇ ತನ್ನ ಕೈಲಿರುವ ಸುದರ್ಶನ ಚಕ್ರವನ್ನು ಅಡ್ದ ಹಿಡಿದಿರುವಂತೆ ಶಿಲ್ಪಿ ಕೆತ್ತಿದ್ದಾನೆ. ಭೂಮಿಯಾದರೋ ತನ್ನ ಸ್ತ್ರೀ ಸಹಜ ನಾಚಿಕೆ ಸಂಕೋಚಗಳಿಂದ ತಲೆಯನ್ನು ಅರೆ ತಗ್ಗಿಸಿ ಪ್ರೇಮ ಕೃತಜ್ಞತೆಗಳಿಂದ ತನ್ನ
ಪತಿಯನ್ನು ನೋಡುತ್ತಿದ್ದಾಳೆ. ಪತಿರಾಯನ ಕೈಲಿ ತನ್ನ ಕಾಲು ಹಿಡಿಸಿಕೊಂಡ ಮೊದಲ ಹೆಣ್ಣಿರಬೇಕು ಆಕೆ  ಅವಳ ದೇಹ ಭಂಗಿ, ನೋಟಗಳು ಸಂಕೋಚ , ಪ್ರೇಮ , ಕೃತಜ್ಙತೆಗಳ ಮಿಶ್ರಣ.
ಎರಡನೆಯ ಚಿತ್ರ ಬದಾಮಿಯ ಗುಹಾ ಕೆತ್ತನೆ. ಇಲ್ಲಿ ಭೂದೇವಿ ಕಷ್ಟದಿಂದ ಪಾರಾದೆ ಸಾಕಪ್ಪಾ ಸಾಕು ಎನ್ನುವಂತೆ ವರಾಹನ ಸೊಂಡಿನ ಮೇಲೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಳೆ. ಆಕೆಯ ಮುಖದಲ್ಲಿ ಈಗ ನಿರ್ಭಯ. ವರಾಹ ಅವಳಿಗೆ ಎಲ್ಲಿ ನೋವಾಗುವುದೋ ಎಂಬಂತೆ ತಾವರೆ ಹೂವಿನ ಸಹಿತ ಆಕೆಯನ್ನು ಮೇಲೆತ್ತಿದ್ದಾನೆ. ಅವನ ಮುಖದಲ್ಲಿ ಪ್ರೇಮಾರಾಧನಾ ಭಾವ. ಆದರೆ ಶಿಲ್ಪಿ ವರಾಹನ ಅಂಗ ಪ್ರಮಾಣತೆಯಲ್ಲಿ ಅಷ್ಟು ಲಕ್ಷ್ಯವಹಿಸಿದಂತಿಲ್ಲ.
ರಾಜೇಶ್ ಶ್ರೀವತ್ಸ

ಶಿಲ್ಪಕಲೆ; ೪ - ರಾಜೇಶ್ ಶ್ರೀವತ್ಸ


ಖಟ್ವಾಂಗಧಾರಿಣಿ ಚಾಮುಂಡಾ:
ದುರ್ಗಾ ಸಪ್ತಶತಿಯ ಏಳನೆಯ ಅಧ್ಯಾಯದಲ್ಲಿ ಚಾಮುಂಡಿಯ ಕಥೆ ಬರುತ್ತದೆ. ಶುಂಭ-ನಿಶುಂಭರ ಸೇವಕರಾದ ಚಂಡ ಮುಂಡರು ದೇವಿಯನ್ನು ಬಂಧಿಸಿ ಕರೆದೊಯ್ಯಲು ಬರುತ್ತಾರೆ. ಆಗ ಕೋಪದಿಂದ ಹುಬ್ಬುಗಂಟ್ಟಿಕ್ಕಿದ ದುರ್ಗೆಯ ಮುಖದಿಂದ ಕಡುಗಪ್ಪಿನ ಶಕ್ತಿದೇವಿಯೊಬ್ಬಳು ಆವಿರ್ಭವಿಸುತ್ತಾಳೆ.ಆಕೆ ಕೈಗಳಲ್ಲಿ ಕತ್ತಿ , ಹಗ್ಗ, ಖಟ್ವಾಂಗ ಮೊದಲಾದ ಅಯುಧಗಳನ್ನು ಕೈಗಳಲ್ಲಿ ಹಿಡಿದಿರುತ್ತಾಳೆ. ಹುಲಿಚರ್ಮವನ್ನು ಧರಿಸಿರುತ್ತಾಳೆ. ಮೈಯಲ್ಲಿ ಮಾಂಸವಿಲ್ಲದ ಅಸ್ಥಿ ಪಂಜರದಂತೆ ಕಾಣಿಸುವ

ಜೋಲು ಸ್ತನಗಳ ಶುಷ್ಕದೇಹಿ ಆಕೆ, ಜಟೆಗಟ್ಟಿದ ಕೆಂಪು ಕೂದಲು, ಕತ್ತಿನ ಸುತ್ತ ತಲೆಬುರುಡೆಗಳ ಮಾಲೆ, ಗುಳಿಬಿದ್ದ ಬೆಕ್ಕಿನ ಕಣ್ಣುಗಳು, ಕೋರೆದಾಡೆಗಳು ಹೊರ ಚಾಚಿರುವ ಅಗಲವಾದ ಬಾಯಿ, ಮುಖದಲ್ಲಿ ವಿಕಟ ನಗೆ. ಅವಳು ಏರಿರುವ ವಾಹನ ಬೇತಾಳ ಹೊಕ್ಕಿರುವ ಶವ. ಅದು ಆಕೆಯನ್ನೆತ್ತಿ ಎಲ್ಲಿಂದರಲ್ಲಿಗೆ ಹಾರಾಡುತ್ತದೆ. ಅವಳನ್ನು ನೋಡಿಯೇ ಎಷ್ಟೋ ಶತ್ರು ರಾಕ್ಷಸರು ಎದೆಯೊಡೆದು ಸಾಯುತ್ತಾರೆ. (ಇದನ್ನು ಓದಿಯೇ ನಮ್ಮ ಎದೆ ಒಡೆಯುತ್ತದೆ ಬಿಡಿ  ) ರಾಕ್ಷಸ ಸೇನೆಯನ್ನು ಕ್ಷಣ ಮಾತ್ರದಲ್ಲಿ ನಿರ್ನಾಮ ಮಾಡಿದ ಆಕೆ ಚಂಡ- ಮುಂಡರ ತಲೆ ಕತ್ತರಿಸಿ ದೇವಿಯ ಬಳಿ ತರುತ್ತಾಳೆ. ಅವಳ ಶೌರ್ಯಕ್ಕೆ ಮೆಚ್ಚಿದ ದುರ್ಗೆ ಅವಳನ್ನು ಚಾಮುಂಡಾ ಎಂದು ಕರೆಯುತ್ತಾಳೆ. ಮುಂದಿನ ಅಧ್ಯಾಯಗಳಲ್ಲಿ ಆಕೆ ರಕ್ತಬೀಜನನ್ನು ನಿರ್ಮೂಲ ಮಾಡಿದ ಕತೆ ಬರುತ್ತದೆ. ವರಾಹ ಹಾಗು ಪದ್ಮ ಪುರಾಣಗಳಲ್ಲಿ ಅಂಧಕಾಸುರ ವಧೆಯ ಕಥೆಗಳಲ್ಲೂ ಈಕೆಯ ಪ್ರತಾಪ ವರ್ಣನೆ ಇದೆ.
ಸಪ್ತಮಾತೃಕೆಯರ ಶಿಲ್ಪಗಳ ಸಾಲಿನಲ್ಲಿ ಯಾವಾಗಲೂ ಕೊನೆಯಲ್ಲಿ ಇರುವ ದೇವತೆ ಈ ಚಾಮುಂಡಿ.( ಸಪ್ತ ಮಾತೃಕೆಯರ ಸಾಲು ಯಾವಾಗಲೂ ಬ್ರಾಹ್ಮಿ , ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ,

ಚಾಮುಂಡಾ ಇದೇ ಕ್ರಮದಲ್ಲಿರುತ್ತದೆ) ಶಿಲ್ಪಶಾಸ್ತ್ರಗಳು ಅವಳ ಭೀಕರ ರೂಪ ಸಾಲದು ಎಂಬಂತೆ ಇನ್ನಷ್ಟು ಭೀಕರತೆಯನ್ನು ಸೇರಿಸಲು ಕಿವಿಯಲ್ಲಿ ಚೇಳಿನ ಆಭರಣ, ಸರ್ಪಗಳ ಸ್ತನಬಂಧ, ಮೂಳೆಗಳ ಗೆಜ್ಜೆ ಹಾಗು ನಡುಕಟ್ಟು, ಮೈತುಂಬಾ ಹಾವುಗಳ ಆಭರಣ, ತಲೆಯಲ್ಲಿ ಹೂವಿನಂತೆ ಜೋತು ಬಿದ್ದಿರುವ ಬಾವಲಿ. ಜೇಡ.... ಇತ್ಯಾದಿಗಳ ಅಲಂಕಾರವನ್ನು ವಿಧಿಸುತ್ತದೆ. ಸಪ್ತಮಾತೃಕೆಯರಲ್ಲಿ ಇತರರಿಗಿಲ್ಲದ ಮನ್ನಣೆ, ಅದೃಷ್ಟ ಆಕೆಯದ್ದು. ಹೇಗೆಂದರೆ ಆಕೆ ಸಪ್ತಮಾತೃಕೆಯರ ಸಾಲಿನಲ್ಲೂ ಅಲ್ಲದೆ ದೇಗುಲಗಳ ಗೋಡೆ ಕಂಬಗಳ ಮೇಲೆ ಪ್ರತ್ಯೇಕವಾಗಿ ಕೂಡ ಕಾಣಿಸಿಕೊಳ್ಳುತ್ತಾಳೆ. ಅಲ್ಲದೆ ಆಂಧ್ರದ ಅಲ್ಲಂಪುರದಲ್ಲಿರುವ ಜೋಗುಳಾಂಬ, ಶಿವಗಂಗೆಯ ಬೆಟ್ಟದ ಮೇಲಿರುವ ಸ್ವರ್ಣಾಂಬ (ಹೊನ್ನಾದೇವಿ) ದೇವಾಲಯಗಳು ಆಕೆಗೆಂದೇ ಅರ್ಪಿತವಾದವುಗಳು. ( ಹೆಸರು ಚಾಮುಂಡೇಶ್ವರಿ ಎಂದಿದ್ದರೂ ಮೈಸೂರು ಚಾಮುಂಡೇಶ್ವರಿಯ ದೇವಸ್ಥಾನ ಮಹಿಷಾಸುರಮರ್ದಿನಿ ಸ್ವರೂಪದ ದುರ್ಗೆಯದ್ದು) . ತನ್ನ ಶವವಾಹನದ ಮೇಲೆ ನಿಂತಿರುವ, ಕುಳಿತಿರುವ , ನರ್ತಿಸುತ್ತಿರುವ ವಿಗ್ರಹಗಳು ಕಾಣಸಿಗುತ್ತವೆ. ಚತುರ್ಭುಜ, ಅಷ್ಟಭುಜ , ದಶಭುಜಗಳ ವಿಗ್ರಹಗಳು ಕಾಣಸಿಗುತ್ತವೆ. ಕೈಯಲ್ಲಿ ಖಡ್ಗ, ಚೂರಿ, ತ್ರಿಶೂಲ, ಡಮರುಗ, ಪಾನಪಾತ್ರೆ, ಖಟ್ವಾಂಗ, ಕತ್ತರಿಸಿದ ತಲೆಗಳನ್ನು ಹಿಡಿದಿರುತ್ತಾಳೆ. ಕೆಲವು ವಿಗ್ರಹಗಳ ಕೈಗಳಲ್ಲಿ ನರ್ತನ ಮುದ್ರೆಗಳನ್ನು ಪ್ರದರ್ಶಿಸಿರುವುದೂ ಉಂಟು. ಹಳೇಬೀಡಿನ ವಿಗ್ರಹದಲ್ಲಿ ವಿಸ್ಮಯ ಮುದ್ರೆಯ ಪ್ರದರ್ಶನವಿದೆ. ಭಯಂಕರ ಬೇತಾಳಗಣಗಳು ವಾದ್ಯಗಳನ್ನು ನುಡಿಸುತ್ತಾ , ನರ್ತಿಸುತ್ತಾ ಆಕೆಯನ್ನು ಸುತ್ತುವರೆದಿರುತ್ತವೆ.


-------------------
ಖಟ್ವಾಂಗ ಒಂದು ಅನುಭವ ; ಉದ್ದವಾದ ಕೋಲಿನ ತುದಿಗೆ ತಲೆಬುರುಡೆಯನ್ನು ಸಿಕ್ಕಿಸಿರುವ ಯಕ್ಷಿಣಿ ದಂಡ( magic wand).ಪುರಾಣಗಳ ಪ್ರಕಾರ ಇದನ್ನು ಒಮ್ಮೆ ಬೀಸಿದರೆ ಶತ್ರುಗಳು ಮಂಕು ಕವಿದು ಬೀಳುವುದು, ರಕ್ತ, ಹಾವು- ಚೇಳುಗಳ ಮಳೆ ಸುರಿವ ಭ್ರಮೆ ಮೂಡುವುದು. ಶತ್ರುಗಳ ಚರ್ಮ ಸುಲಿಯುವುದು, ಅವರು ರಕ್ತಹೀನರಾಗುವುದು ಇತ್ಯಾದಿ ಪರಿಣಾಮಗಳಾಗುತ್ತವೆ.
ಕೊಲ್ಕೊತ್ತಾದಲ್ಲಿ ಇದನ್ನು ಹಿಡಿದುಕೊಂಡು ಓಡಾಡುವ ಬಾಬಗಳನ್ನು ನೋಡಿದ್ದೆ. ಕರುಣೋಮೋಯಿ ( ಕರುಣಾಮಯಿ ಕಾಳಿ) ದೇಗುಲದ ಬಳಿ ಒಮ್ಮೆ ಕುತೂಹಲದಿಂದ ನನ್ನ ಸ್ನೇಹಿತನೊಬ್ಬನೊಂದಿಗೆ ಹತ್ತಿರದಿಂದ ನೋಡಲು ನಡೆದೆ. ಅದು ಖಟ್ವಾಂಗವೆಂದು ಗೊತ್ತಿದ್ದರೂ ಅದೇನೆಂದು ಕೇಳಿದೆ. ಬಾಬ ಏನನ್ನೂ ಹೇಳದೆ ಮಣ ಮಣ ಮಂತ್ರ ಹೇಳುತ್ತಾ ಅದನೆತ್ತಿ ನಮ್ಮೆದುರು ಗಾಳಿಯಲ್ಲಿ ಆಡಿಸಿದ. ತಕ್ಷಣ ನನ್ನ ಸ್ನೇಹಿತ ಮೂರ್ಚೆ ಹೋಗಿ ಅಲ್ಲೇ ಉರುಳಿದ. ನನಗೇನೂ ಆಗಲಿಲ್ಲ, ಒಳಗೆ ಹೆದರಿಕೆಯಾಗುತ್ತಿದ್ದರೂ ಮಾತನಾಡದೆ ಅಲ್ಲೇ ನಿಂತಿದ್ದೆ. ಐದು ನಿಮಿಷಗಳ ಬಳಿಕ ನನ್ನ ಸ್ನೇಹಿತ ಮೇಲೆದ್ದ ಮೇಲೆ ಬಾಬ ತನ್ನ ಚೀಲದಿಂದ ಹುಣಸೆಕಾಯಿಗಳನ್ನು ತೆಗೆದು ಕೊಟ್ಟ. ನಮಸ್ಕರಿಸಲು ಹೋದ ನನ್ನ ಸ್ನೇಹಿತನನ್ನು ನಿನ್ನ ನಮಸ್ಕಾರ ಯಾರಿಗೆ ಬೇಕು? ಒಳಗೆ ಹೋಗಿ ತಾಯಿಗೆ ನಮಸ್ಕರಿಸು ಎಂದು ಗದರಿಸಿದ. ನಾವು ಮಕ್ಕಳ ಹಾಗೆ ರುಚಿಯಾದ ಹುಣಸೆಕಾಯಿ ತಿನ್ನುತ್ತಾ ಹಿಂತಿರುಗಿದೆವು.

Thursday, September 18, 2014

ಜಿಜ್ಙಾಸೆ


ಭರತ ಎಂದರೆ ಯಾರು ?
ನಮ್ಮ ಇತಿಹಾಸ/ಪುರಾಣದಲ್ಲಿ ಎಷ್ಟು 'ಭರತ'ರಿದ್ದಾರೆ?
ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬಂದಿದ್ದು ಇವರಲ್ಲಿ ಯಾರಿಂದ?



೧ . ಅಗ್ನಿಯ ಮಗ ೨.,ಋಷಭ ದೇವನ ಮಗ ೩ ಶಕುಂತಲೆ-ದುಷ್ಯಂತರ ಮಗ ೪.ಧಶರಥನ ಮಗ ೫. ನಾಟ್ಯ ಶಾಸ್ತ್ರವನ್ನು ಬರೆದವನು. ಇವರಲ್ಲಿ ಚಕ್ರವರ್ತಿಗಳಾಗಿ ಮೆರೆದವರು ೧ . ಋಷಭದೇವನ ಮಗ ೨ ದುಷ್ಯಂತನ ಮಗ. ಇವರಲ್ಲಿ ಪುರಾತನನಾದವನು ಋಷಭದೇವ ಹಾಗು ಜಯಂತಿಯರ ಮಗನಾದ ಭರತ. ಭಾಗವತ , ವಿಷ್ಣು ಪುರಾಣಗಳ ಪ್ರಕಾರ ಇವನು ಆಳಿದ ಭೂ ಭಾಗವೇ ಭರತವರ್ಷ ಅಥವ ಭಾರತ. (ಜೈನ ಧರ್ಮದಲ್ಲಿ ಬರುವ ಬಾಹುಬಲಿಯ ಸೋದರ ಭರತನೂ ಇವನೆ). ’ಅಜನಾಭಂ ನಾಮೈತದ್ವರ್ಷಂ ಭಾರತಮಿತಿ ಯತ ಆರಭ್ಯ ವ್ಯಪದಿಶಂತಿ" ( ಭಾಗವತ ಪಂಚಮ ಸ್ಕಂದ ಏಳನೇ ಅಧ್ಯಾಯ ಮೂರನೇ ಶ್ಲೋಕ ; ಅಜನಾಭವರ್ಷವೆಂದು ಹೆಸರಾಗಿದ್ದ ಈ ವರ್ಷ(ಭೂ ಭಾಗಕ್ಕೆ)ಕ್ಕೆ ಭರತ ಚಕ್ರವರ್ತಿಯ ಕಾಲದಿಂದ ಭರತವರ್ಷವೆಂದು ಹೆಸರಾಯ್ತು.). ಇವನ ನಂತರ ಬಂದ ದುಷ್ಯಂತನ ಮಗ ಚಕ್ರವರ್ತಿಯಾಗಿ ಇಡೀ ಭೂಮಂಡಲವನ್ನಾಳಿದ . ಅವನಿಂದ ಆ ವಂಶಕ್ಕೆ ಭರತವಂಶವೆಂದು ಹೆಸರಾಯಿತೆಂದು ಹೇಳಿದ್ದರೂ ಅವನಿಂದ ಈ ಭೂ ಭಾಗಕ್ಕೆ ಭಾರತವೆಂದು ಹೆಸರಾಯ್ತೆಂದು ಭಾಗವತದಲ್ಲಿ ಹೇಳಿಲ್ಲ.

ಋಷಭನ ಮಗ ಭರತ ವಾನಪ್ರಸ್ಥಕ್ಕೆ ಹೋದ ಮೇಲೆ ಭರತ ಮುನಿಯೆನಿಸಿಕೊಂಡ. ಜಿಂಕೆಮರಿಯೊಂದರೆ ಮೋಹಕ್ಕೆ ಬಿದ್ದು ಮರಣ ಹೊಂದಿದ. ನಂತರ ಜಿಂಕೆಯಾಗಿ ಜನ್ಮ ತಾಳಿದ. ಮುಂದಿನ ಜನ್ಮದಲ್ಲಿ ಅಂಗಿರಸ ಮುನಿಗೆ ಭರತನೆಂಬ ಮಗನಾಗಿ ಮತ್ತೆ ಜನ್ಮತಾಳಿದ. ಅವನೇ ಜಡ ಭರತ


ರಾಜೇಶ್ ಶ್ರೀವತ್ಸ, 



ಸೋಮೇಶ್ವರ ಶತಕ

ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ |
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ||
ಕೆಲವಂ ಸಜ್ಜನಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ |
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೧||


ಹಲವಾರು ನದಿಗೊ ಸೇರಿ ಸಮುದ್ರ ಹೇಂಗೆ ಉಂಟಾವುತ್ತೋ ಹಾಂಗೇ, ನಮ್ಮ ಜ್ಞಾನ ಕೂಡಾ.
ಕೆಲವು ವಿಶಯಂಗಳ ನಾವು ಗೊಂತಿಪ್ಪವರಿಂದ ಕಲಿತ್ತು, ಇನ್ನು ಕೆಲವು ಶಾಸ್ತ್ರಂಗಳ ಕೇಳಿ ತಿಳ್ಕೊಳುತ್ತು, ಇನ್ನು ಕೆಲವು ಮಾಡುವ ಕೆಲಸಂಗಳ ನೋಡಿ ಅನುಭವ ತೆಕ್ಕೊಳ್ತು, ಇನ್ನು ಕೆಲವರ ನಮ್ಮ ಸ್ವ ಬುದ್ಧಿಂದ ಕಲಿತ್ತು. ಇನ್ನು ಕೆಲವು ಒಳ್ಳೆ ಜೆನರ ಸಹವಾಸಂದಲೂ ಕಲಿತ್ತು. ಹೀಂಗೆ ಬೇರೆ ಬೇರೆ ಮೂಲಂಗಳಿಂದ ತಿಳ್ಕೊಂಡೇ ಸರ್ವಜ್ಞ ಆವುತ್ತು.



ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ|
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೨||

ಕೈಲಿ ಕನ್ನಾಟಿ ಇಪ್ಪಗ ಅದರ ಬಿಟ್ಟು ನೀರಿಲ್ಲಿ ಮೋರೆ ನೋಡ್ತವಾ?  ಹಾಲಿಂಗಾಗಿ ಕಾಮಧೇನು ಇಪ್ಪಗ ಬೇರೆ ಹಸುಗಳ ಸಾಂಕುತ್ತವೋ? ಗುಣವಂತರು ಹಾಲು ಉಂಡ ಮತ್ತೆ ಬೇರೆ ಎಂತಾರೂ ಉಣ್ಣುತ್ತವೋ? ಗಿಳಿಯ ಮಾತಿಲ್ಲಿ ಇಪ್ಪ ಇಂಪಿಂದ ಹೆಚ್ಚಿನದ್ದು ಕಾಕೆಯ ಕೂಗಿಲ್ಲಿ ಇದ್ದಾ? ರಂಭೆಯ ನೃತ್ಯ ನೋಡಿದ ಮತ್ತೆ ಡೊಂಬರಾಟ  ನೋಡ್ತವಾ? ಸ್ನೇಹಿತರಿಂದ ಹೆಚ್ಚಿನ ದೊಡ್ಡ ವಸ್ತು ಎಂತಾರೂ ಇದ್ದಾ?
(ಮುಕುರಂ= ಕನ್ನಾಟಿ)



ಕವಿಯೇ ಸರ್ವರೊಳುತ್ತಮಂ ಕನಕವೇ ಲೋಹಂಗಳೊಳ್ ಶ್ರೇಷ್ಠ ಜಾ |
ಹ್ನವಿಯೇ ತೀರ್ಥದೊಳುನ್ನತಂ ಗರತಿಯೇ ಸ್ತ್ರೀ ಜಾತಿಯೊಳ್ ವೆಗ್ಗಳಂ ||
ರವಿ ಮುಖ್ಯಂ ಗ್ರಹ ವರ್ಗದೊಳ್ ರಸಗಳೊಳ್ ಶೃಂಗಾರವೇ ಬಲ್ಮೆ ಕೇಳ್ |
ಶಿವನೇ ದೇವರೊಳುತ್ತಮಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೩||


ಇದರಲ್ಲಿ ಕವಿ, ಆರು ಶ್ರೇಷ್ಠ ಹೇಳಿ ವ್ಯಾಖ್ಯಾನ ಮಾಡ್ತ°.
ಮನುಷ್ಯರಲ್ಲಿ ಕವಿ, ಲೋಹಂಗಳಲ್ಲಿ ಚಿನ್ನ, ತೀರ್ಥಂಗಳಲ್ಲಿ (ನೀರಿಲ್ಲಿ) ಗಂಗಾಜಲ, ಹೆಂಗಸರಲ್ಲಿ ಪತಿವ್ರತೆ, ಗ್ರಹಂಗಳಲ್ಲಿ ಸೂರ್ಯ, ರಸಂಗಳಲ್ಲಿ ಶೃಂಗಾರ ರಸ, ದೇವತೆಗಳಲ್ಲಿ ಶಿವನೇ ಶ್ರೇಷ್ಠ


ರವಿಯಾಕಾಶಕೆ ಭೂಷಣಂ ರಜನಿಗಾ ಚಂದ್ರಂ ಮಹಾ ಭೂಷಣಂ |
ಕುವರಂ ವಂಶಕೆ ಭೂಷಣಂ ಸರಸಿಗಂಭೋಜಾತಗಳ್ ಭೂಷಣಂ ||
ಹವಿ ಯಜ್ಞಾಳಿಗೆ ಭೂಷಣಂ ಸತಿಗೆ ಪಾತಿವ್ರತ್ಯವೇ ಭೂಷಣಂ |
ಕವಿಯಾಸ್ಥಾನಕೆ ಭೂಷಣಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೪||

ಇದರಲ್ಲಿ ಕವಿ, ಎಲ್ಲೆಲ್ಲಿ ಆರು ಭೂಷಣಪ್ರಾಯರಾಗಿ ಇರ್ತವು ಹೇಳ್ತ°:
ಆಕಾಶಕ್ಕೆ ಸೂರ್ಯನೂ, ಇರುಳಿಂಗೆ ಚಂದ್ರನೂ, ವಂಶಕ್ಕೆ ಮಗನೂ, ಸರೋವರಕ್ಕೆ ತಾವರೆಯೂ, ಯಜ್ಞಕ್ಕೆ ಹವಿಸ್ಸೂ, ಹೆಂಗಸರಿಂಗೆ ಪಾತಿವ್ರತ್ಯವೂ, ರಾಜರ ಸಭೆಗೆ ಕವಿಯೂ ಅಲಂಕಾರ.


ಹರನಿಂದುರ್ವಿಗೆ ದೈವವೇ ಕಿರಣಕಿಂದುಂಬಿಟ್ಟು ಸೊಂಪುಂಟೆ ಪೆ|
ತ್ತರಿಗಿಂತುಂಟೆ ಹಿತರ್ಕಳುಂ ಮಡದಿಯಿಂ ಬೇರಾಪ್ತರಿನ್ನಿರ್ಪರೇ ||
ಸರಿಯೇ ವಿದ್ಯಕೆ ಬಂಧು ಮಾರನಿದಿರೊಳ್ ಬಿಲ್ವಾಳೆ ಮೂಲೋಕದೊಳ್
ಗುರ್ವಿಂದುನ್ನತ ಸೇವ್ಯನೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೫||

ಶಿವನಿಂದ ಮೇಲ್ಪಟ್ಟು ದೊಡ್ಡ ದೇವರು ಆರೂ ಇಲ್ಲೆ, ಚಂದ್ರನ ಕಿರಣಂದ ಹೆಚ್ಚಿನ ತಂಪಿನ ಕಿರಣ ಬೇರೆ ಯಾವುದೂ ಇಲ್ಲೆ.
ನಮ್ಮ ಹೆತ್ತವರಿಂದ ಹೆಚ್ಚಿನ ಹಿತ ಬಯಸುವವು ಆರೂ ಇಲ್ಲೆ. ಗ್ರಹಸ್ಥರಿಂಗೆ ಹೆಂಡತಿಗಿಂತ ಹೆಚ್ಚಿನ ಆಪ್ತರು ಬೇರೆ ಆರೂ ಇಲ್ಲೆ.
ವಿದ್ಯೆಗಿಂತ ಹೆಚ್ಚಿನ ನೆಂಟರು ಆರೂ ಇಲ್ಲೆ. ಮನ್ಮಥನ ಮೀರುಸುವ ಬಿಲ್ಲಾಳುಗೊ ಆರೂ ಇಲ್ಲೆ. ಸೇವೆ ಮಾಡುಸಲೆ ಗುರುವಿಗಿಂತ ಉತ್ತಮರು ಆರೂ ಇಲ್ಲೆ.


Krupe : http://oppanna.com/

ಶಿಲ್ಪಕಲೆ :೩ - ರಾಜೇಶ್ ಶ್ರೀವತ್ಸ

ಐಹೊಳೆಯ ಗಜ ಪೃಷ್ಟಾಕಾರದ (ಅರ್ಧ ವೃತ್ತಾಕಾರದ ಹಿಂಬದಿಯ) ದುರ್ಗಾ ದೇವಾಲಯ ಚಾಳುಕ್ಯರ ವಿಶಿಷ್ಟ ವಾಸ್ತು ಪ್ರಯೋಗ. ಅದು ನಿಜವಾಗಿ ವಿಷ್ಣುವಿನ ದೇಗುಲ . ದುರ್ಗದ (ಕೋಟೆಯ) ದೇವಾಲಯ ದುರ್ಗಾ ದೇವಾಲಯವಾಗಿ ಆಡು ಮಾತಿನಲ್ಲಿ ಬಂದು ಬಿಟ್ಟಿದೆ. ಎತ್ತರ ಜಗುಲಿಯ ಮೇಲೆ ದೇವಾಲಯವನ್ನು ಸುತ್ತುವರೆದಿರುವ ಪ್ರದಕ್ಷಿಣಾ ಪಥದ ಹೊರಾಂಗಣವಿದೆ. ದೇವಾಲಯದ ಗೋಡೆಯ ಸುತ್ತಲೂ ರಚಿಸಿರುವ ಗೂಡುಗಳಲ್ಲಿ ಹರಿಹರ, ಲಕ್ಷ್ಮೀನಾರಾಯಣ, ನರಸಿಂಹ, ವರಾಹ, ವೃಷಭವಾಹನ, ಗರುಡಾರೂಢ, ತ್ರಿವಿಕ್ರಮ, ಅರ್ಧನಾರೀಶ್ವರ ಹಾಗು ಮಹಿಷಾಸುರ ಮರ್ದಿನಿ ವಿಗ್ರಹಗಳಿವೆ.
ಇಲ್ಲಿರುವ ಮಹಿಷಾಸುರ ಮರ್ದಿನಿಯ ಶಿಲ್ಪವು ಬಹಳ ಪ್ರಸಿದ್ಧವಾದದ್ದು. ಗೂಗ‌‌‌ಲ್ನಲ್ಲಿ ಮಹಿಷಾಸುರ ಮರ್ದಿನಿ ಶಿಲ್ಪವೆಂದು ಹುಡುಕಿದರೆ ಕೇವಲ ಇದರ ಚಿತ್ರಗಳೇ ಕಾಣಿಸುವಷ್ಟು.
ಶಿಲ್ಪದಲ್ಲಿ ಮಹಿಷಾಸುರನನ್ನು ಕೋಣನ ರೂಪದಲ್ಲಿ ಬಿಂಬಿಸಲಾಗಿದೆ. ಅವನನ್ನು ತ್ರಿಶೂಲದ ಬುಡದದಿಂದ ತಿವಿಯುತ್ತಿರುವಂತೆ ದೇವಿಯನ್ನು ತೋರಿಸಲಾಗಿದೆ. ದೇವಿ ಎಂಟು ಕೈಗಳನ್ನು ಹೊಂದಿದ್ದು ಎಡಗಾಲು ಹಾಗು ಎಡ ಭಾಗದ ೪ ಕೈಗಳು ಈಗ ಭಿನ್ನವಾಗಿವೆ. ಬಲಕೈಗಳಲ್ಲಿ ತ್ರಿಶೂಲ, ಚಕ್ರ, ಬಾಣ, ಖಡ್ಗ ಗಳನ್ನೂ ಎಡಗೈಯಲ್ಲಿ ಘಂಟೆ, ಶಂಖಗಳನ್ನು ಹಿಡಿದಿದ್ದು ಉಳಿದೆರಡು ಕೈಗಳು ಭಿನ್ನವಾಗಿವೆ. ಬಲಗಾಲನ್ನು ನೆಲದ ಮೇಲೆ ಊರಿನಿಂತಿದ್ದು ಎಡಗಾಲನ್ನು ಕೋಣನ ಬೆನ್ನಿನ ಮೇಲೆ ಊರಿದ್ದಾಳೆ.
ಕೋಣವು ತಲೆಯನ್ನು ನೆರವಾಗಿ ಮೇಲಕ್ಕೆತ್ತಿದ್ದು ತನ್ನನ್ನು ಅದುಮಿ ಕೆಳಗೆ ಒತ್ತಿರುವ ದೇವಿಯ ಕಾಲಿನಿಂದ ಬಿಡುಗಡೆ ಹೊಂದಲು ತುದಿಕಾಲುಗಳ ಮೇಲೆ ನಿಂತು ಮೇಲೇಳಲು ಪ್ರಯತ್ನಿಸುತ್ತಿದೆ. ಬಾಲವು ಅರ್ಧವೃತ್ತಾಕಾರದಲ್ಲಿ ಸೆಟೆದುಕೊಂಡಿದ್ದು ಕುತ್ತಿಗೆಯನ್ನು ಇರಿಯುತ್ತಿರುವ ಶೂಲದ ನೋವು ರಾಕ್ಷಸನ ಬಾಲದ ಮೂಲಕ ವ್ಯಕ್ತವಾಗುತ್ತಿದೆ. ಕೋಣದ ಕೋಡುಗಳು ನೈಜವಾಗಿದ್ದು ಅದರ ಮೇಲೆ ಗೆರೆಗಳನ್ನೂ ಕೆತ್ತಿದ್ದಾನೆ ಶಿಲ್ಪಿ. ಕುತ್ತಿಗೆಯ ಸುಕ್ಕಿನ ಸುರುಳಿ ಗೆರೆಗಳು, ಪುಷ್ಟವಾದ ಮಾಂಸ ಖಂಡಗಳು ಕಲಾವಿದನು ಪ್ರಾಣಿ ಅಂಗರಚನಾ ಶಾಸ್ತ್ರವನ್ನು ಅಭ್ಯಾಸಮಾಡಿರುವುದಕ್ಕೆ ಸಾಕ್ಷಿಯಾಗಿದ್ದರೆ ಕೋಣನ ಚಡಪಡಿಕೆಯನ್ನು ಸಮರ್ಥವಾಗಿ ಕೆತ್ತನೆಯಲ್ಲಿ ವ್ಯಕ್ತಪಡಿಸಿರುವುದು ಪ್ರಾಣಿಯ ನಡುವಳಿಕೆಯನ್ನು ಅಭ್ಯಾಸ ಮಾಡಿರುವುದಕ್ಕೆ ಸಾಕ್ಷಿ.
ದುರ್ಗೆಯು ಸೊಂಟದಿಂದ ಮೊಣಕಾಲಿನವರೆಗೆ ತೆಳುವಾದ ಮೈಗಂಟಿದಂಟಿರುವ ವಸ್ತ್ರವನ್ನು ಧರಿಸಿದ್ದು ಸಕಲಾಭರಣ ಭೂಷಿತೆಯಾಗಿದ್ದು ಅಡಿಯಿಂದ ಮುಡಿಯವರೆಗೆ ಆಭರಣಗಳಿಂದ ಅಲಂಕರಿಸಲ್ಪಟ್ತಿದ್ದಾಳೆ. ತಲೆಕೂದಲನ್ನು ಮುಕುಟದಂತೆ ಎತ್ತಿಕಟ್ಟಿದ್ದು ಬಾಸಿಂಗ, ಕಿರೀಟಗಳಿಂದ ಅಲಂಕರಿಸಲಾಗಿದೆ. ಬಲಕಿವಿಯಲ್ಲಿ ಸಣ್ಣ ಕುಂಡಲ, ಎಡ ಕಿವಿಯಲ್ಲಿ ದೊಡ್ದ ಕರ್ಣಪೂರವನ್ನು. ಧರಿಸಿದ್ದಾಳೆ. ಕತ್ತಿನಲ್ಲಿ ವೈಜಯಂತಿಮಾಲೆ ಹಾಗು ಮುತ್ತಿನ ಮಾಲೆಗಳು ಹಾಗು ಕೈಯಲ್ಲಿ ಧರಿಸಿರುವ ಕಡಗಗಳ ಮೇಲೆ ಸೂಕ್ಶ್ಮ ಹೂವಿನ ಕೆತ್ತನೆಗಳಿವೆ.
ಶಿಲ್ಪದ ಹೆಚ್ಚುಗಾರಿಕೆ ಇರುವುದು ದೇವಿಯು ಅಂಗ ಸೌಷ್ಠವದಲ್ಲಿ ಹಾಗು ನಿಂತಿರುವ ಭಂಗಿಯಲ್ಲಿ ತುಂಬಿರುವ ಕ್ರಿಯಾಶೀಲತೆಯಲ್ಲಿ. ನೀಳವಾದ ಕೈ- ಕಾಲುಗಳು, ಸ್ಥಿರವಾದ ಸ್ತನಗಳು, ತೆಳುವಾದ ಉದರ ಆರೋಗ್ಯಪೂರ್ಣ ಯೋಧೆಯ ದೇಹ. ತ್ರಿಶೂಲ ಹಾಗು ಘಂಟೆಯನ್ನು ಹಿಡಿದಿರುವ ಕೈಗಳನ್ನು ಉತ್ಸಾಹದಿಂದ ಮೇಲಕ್ಕೆ ಎತ್ತಿ ಹಿಡಿದು ವಿಜಯವನ್ನು ಸಾರುತ್ತಿದ್ದಾಳೆ. ಕಾಲಕೆಳಗೆ ಬಿದ್ದಿರುವ ಮಹಿಷನ ಕಡೆ ಆಕೆಗೆ ಲಕ್ಷ್ಯವೇ ಇಲ್ಲ . ವಿಜಯವಿನ್ನು ನನ್ನದೇ ಎಂಬ ಆತ್ಮವಿಶ್ವಾಸ ಆಕೆಯ ಅಗಲವಾದ ಕಣ್ಣಿನಲ್ಲಿ ಎದ್ದು ಕಾಣುತ್ತಿದೆ. ತಲೆಯ ಹಿಂದೆ ಕೆತ್ತಿರುವ ಪ್ರಭಾವಳಿ ದೇವಿಗೆ ಅಲೌಕಿಕ ದೈವೀಕಳೆಯನ್ನು ತುಂಬಿದೆ.
ದೇವಿಯ ಬಲ ಭಾಗದಲ್ಲಿರುವ ಸಿಂಹವು ಮಹಿಷನೆಡೆಗೆ ಘರ್ಜಿಸುತ್ತಾ ಭಯಂಕರ ಕಣ್ಣುಗಳಿಂದ ನೋಡುತ್ತ ಇದೆ. ಅದರ ಕೆದರಿದ ಕೇಸರಗಳ ಕೆತ್ತನೆ ಸಿಂಹಕ್ಕೆ ಜೀವಂತಿಕೆಯನ್ನು ತುಂಬಿದೆ. ಭಿನ್ನವಾಗಿದ್ದರೂ ಶಿಲ್ಪದ ಎದುರು , ಎಡ, ಬಲ ಯಾವ ಕಡೆ ನಿಂತು ನೋಡಿದರೂ ಶಿಲ್ಪದ ಸೌಂದರ್ಯ, ಕ್ರಿಯಾಶೀಲತೆ , ಜೀವಂತಿಕೆ, ದೈವಿಕತೆಗಳ ಅರಿವಾಗುತ್ತದೆ


ರಾಜೇಶ್ ಶ್ರೀವತ್ಸ
.

ಶಿಲ್ಪಕಲೆ ೨ - ರಾಜೇಶ್ ಶ್ರೀವತ್ಸ

ಭಾರತೀಯ ಕಲಾ ಪ್ರಪಂಚಕ್ಕೆ ಚಾಳುಕ್ಯರ ಕೊಡುಗೆ ಅನನ್ಯವಾದುದ್ದು. ಐಹೊಳೆ, ಪಟ್ತದಕಲ್ಲು, ಬಾದಾಮಿಗಳು ಶಿಲ್ಪ ಕಲೆಯ ಹಾಗು ಭಾರತೀಯ ವಾಸ್ತುಕಲೆಯ ಪ್ರಯೋಗ ಶಾಲೆಯೆಂದೇ ಹೆಸರಾಗಿದೆ. ಚಾಳುಕ್ಯರು ತಮ್ಮ ಸಮಕಾಲೀನ ಪಲ್ಲವರೊಡನೆ ಪೈಪೋಟಿಗೆ ಬಿದ್ದಂತೆ ರಚಿಸಿದ ಶಿಲಾದೇಗುಲಗಳ ವಾಸ್ತು ಹಾಗು ವಿಗ್ರಹಗಳು ಇಂದಿಗೂ ನವನವೀನ. ಪಟ್ತದಕಲ್ಲಿನ ವಿರೂಪಾಕ್ಷ ದೇವಾಲಯದ (ಹಿಂದೆ ಲೋಕಪಾಲೇಶ್ವರ ಹೆಸರಿತ್ತು) ಕಂಬ ಹಾಗು ಗೋಡೆಯ ಕೋಷ್ಠಕಗಳಲ್ಲಿರುವ ಕೆಲವು ಶಿಲ್ಪಗಳಂತೂ ಅದ್ಬುತ. ಉತ್ತರ ದ್ವಾರದ ಮಂಟಪದ ಬಲಕಂಬದಲ್ಲಿರುವ ಗಜೇಂದ್ರ ಮೋಕ್ಷ ಶಿಲ್ಪವು ಅವುಗಳಲ್ಲೊಂದು.
ಗಜೇಂದ್ರ ಮೋಕ್ಷ ಪ್ರಕರಣವು ವಿಷ್ಣು ಪರವಾದ ಬಹುತೇಕ ಎಲ್ಲಾ ಪುರಾಣಗಳಲ್ಲಿ ಕಾಣಿಸುತ್ತದೆ.ಸರೋವರದಲ್ಲಿ ತನ್ನ ಬಳಗದೊಡನೆ ಜಲಕ್ರೀಡೆಯಾಡುತ್ತಿದ್ದ ಗಜೇಂದ್ರನನ್ನು ಮೊಸಳೆಯೊಂದು ಕಚ್ಚಿ ನೀರಿನೊಳಗೆ ಸೆಳೆಯಲು ಪ್ರಾರಂಬಿಸುತ್ತದೆ. ಮೊಸಳೆಯ ದವಡೆಯಿಂದ
ತಪ್ಪಿಸಿಕೊಳ್ಳಲಾಗದೆ ಬವಳಿದ ಗಜೇಂದ್ರನನ್ನು ಇತರ ಆನೆಗಳು ಸಂಕಷ್ಟದಿಂದ ಪಾರುಮಾಡಲು ಯತ್ನಿಸಿ ಸೋತು ಕೈಚೆಲ್ಲುತ್ತವೆ. ಸೋಲೊಪ್ಪದ ಗಜರಾಜ ಮೊಸಳೆಯ ದವಡೆಯಿಂದ ಪಾರಾಗಲು ಏಕಾಂಗಿಯಾಗಿ ಹೋರಾಡುತ್ತಾನೆ. ಮೊಸಳೆಗಳಿಗೆ ನೀರಿನಲ್ಲೇ ಬಲ.
ಹಾಗಾಗಿ ಗಜರಾಜ ಕೊನೆಗೂ ಸೋಲನೊಪ್ಪಿ ಅಹಂಕಾರವನ್ನು ತ್ಯಜಿಸಿ ತನ್ನನ್ನು ಪಾರುಮಾಡಲು ಎಕಮೇವಾದ್ವಿತೀಯ ಭಗವಂತ ವಿಷ್ಣುವಿನ ಮೊರೆ ಹೋಗಿ ಆರ್ತನಾಗಿ ಸ್ತುತಿಸುತ್ತಾನೆ. ಸಾವಿನ ಬಾಯೋಳಗೆ ಹೊಕ್ಕಿರುವ ತನ್ನ ಭಕ್ತನನ್ನು ಕಾಪಾಡಲು ದೇವನು ಅರೆಕ್ಷಣವನ್ನೂ ವ್ಯರ್ಥ ಮಾಡದೆ ಗರುಡನ ಮೇಲೇರಿ ಧಾವಿಸುತ್ತಾನೆ.
ನಾಲ್ಕು ಪಾತ್ರಗಳಿರುವ ಈ ಪ್ರಸಂಗವನ್ನು ಶಿಲ್ಪದಲ್ಲಿ ಸಂಯೋಜಿಸುವುದು ಬಹಳ ಸವಾಲಿನ ಕೆಲಸ. ಹಾಗಾಗಿ ಭಗವಂತನ ಅತ್ಯಂತ ಪ್ರಮುಖ ಲೀಲೆಗಳಲ್ಲೊಂದಾದ ಗಜೇಂದ್ರ ಮೋಕ್ಷವು ಶಿಲ್ಪ ಕಲೆಯಲ್ಲಿ ಕಾಣಿಸಿಕೊಳ್ಳುವುದು ತುಂಬಾ ವಿರಳ. ಪಟ್ತದಕಲ್ಲಿನ ಈ ಶಿಲ್ಪದ ದೃಶ್ಯ ಸಂಯೋಜನೆ ಅದ್ಭುತವಾದುದ್ದು. ಶಿಲ್ಪಿಯು ಸಂಯೋಜನೆಯ ಸವಾಲನ್ನು ಸುಲಭವಾಗಿ ಬಗೆಹರಿಸಿದ್ದಾನೆ. (ಮೇಲುಭಾಗದಲ್ಲಿ ಗರುಡನ ಹೆಗಲಿನ ಮೇಲೆ ವಿಷ್ಣು, ಕೆಳಭಾಗದ ಸರೋವರದಲ್ಲಿ ಗಜ-ಮಕರಗಳು) ವಿಷ್ಣುವಿನ ಎಡ ಭಾಗದ ಎರಡೂ ಕೈಗಳು ಭಿನ್ನವಾಗಿದ್ದರೂ ಅದರಿಂದ ಅವನ ಹಿರಿಮೆಗೆ ಒಂದಿನಿತೂ ಮುಕ್ಕಾಗಿಲ್ಲ. ಭಕ್ತವತ್ಸಲನ ಮುಖದಲ್ಲಿ ತನ್ನ ಭಕ್ತನ ಸಂಕಷ್ಟವನ್ನು ನೋಡಿ ದುಃಖವನ್ನು ಅನುಭವಿಸುತ್ತಾ ಅದಕ್ಕೆ ಕಾರಣನಾದ ಮೊಸಳೆಯ ಮೇಲೆ ಕ್ರೋಧವನ್ನು ವ್ಯಕ್ತಪಡಿಸುತ್ತಾ ಇರುವ ದುಃಖ-ಕ್ರೋಧ- ಆತಂಕಗಳ ಮಿಶ್ರಭಾವವನ್ನು ಶಿಲ್ಪಿಯು ಸೆರೆಹಿಡಿದಿರುವ ಪರಿ ಅಪ್ರತಿಮವಾದುದ್ದು. ತಡವಾದರೆ ತನ್ನ ಭಕ್ತನಿಗೇನಾಗುವುದೋ ಎಂಬ ಆತಂಕದಿಂದ ನಾನೇ ಕೆಳಗೆ ನೆಗೆದು ಬಿಡುವೆ ಎನ್ನುವಂತೆ ಎಡ ಕಾಲನ್ನು ನೆಲದ ಮೇಲಿಡಲು ಹವಣಿಸುತ್ತಿದ್ದಾನೆ. ಬಲಗೈಲಿರುವ ಚಕ್ರವನ್ನೆಸೆಯಲುದ್ಯುಕ್ತನಾಗಿ ಕೈಯನ್ನು ಮೇಲೆತ್ತಿದ್ದಾನೆ. ಅಷ್ಟಾದರೂ ಅವನಿಗೆ ಗಾಂಭೀರ್ಯವನ್ನು ತುಂಬಲು ಶಿಲ್ಪಿಯು ಮರೆತಿಲ್ಲ . ಎಷ್ತಾದರೂ ಜಗದೋಡೆಯನಲ್ಲವೇ? ವಿಷ್ಣುವಿನ ಕೆಳಬಲಗೈಯನ್ನು ರಾಜಠೀವಿಯಿಂದ ತೊಡೆಯ ಮೇಲಿಟ್ಟಿರುವಂತೆ ಕೆತ್ತಿದ್ದಾನೆ. ಅದೇ ರೀತಿ ಬಲಗಾಲು ಇನ್ನೂ ಆಸನ ಭಂಗಿಯಲ್ಲಿ ಗರುಡನ ಹಸ್ತವನ್ನಾದರಿಸಿದೆ. ವಿಷ್ಣುವಿನ ಮೈಕಟ್ತು ಮನೋಹರವಾಗಿದ್ದು. ಹಿತಮಿತವಾದ ವಸ್ತ್ರಾಭರಣಗಳಿಂದ ಅಲಂಕೃತವಾಗಿದೆ.
ಗರುಡನು ತನ್ನ ಸ್ವಾಮಿಯನ್ನು ತಕ್ಕ ಸಮಯದಲ್ಲಿ ಗಮ್ಯಸ್ಥಳಕ್ಕೆ ತಲುಪಿಸುವ ಹೊಣೆಯಿಂದ ವೇಗವಾಗಿ ಧಾವಿಸಿ ಬರುತ್ತಿರುವನು. ಆ ವೇಗವನ್ನು ತೋರಿಸುವ ಕಲ್ಪನೆಯುಂಟಾಗಲು ಅವನ ಮುಖದಲ್ಲಿ ಆಯಾಸವನ್ನು ಶಿಲ್ಪಿ ತುಂಬಿದ್ದಾನೆ. ಮುಂಚಾಚಿರುವ ಗರುಡನ ಎದೆ ಎಡಕ್ಕೆ ವಾಲಿದ ಕತ್ತುಗಳು ಗರುಡ ನಿಜಕ್ಕೂ ಆಯಾಸವನ್ನು ಅನುಭವಿಸುತ್ತ ಇರುವಂತೆ ತೋರುತ್ತದೆ. ಗರುಡನ ರೆಕ್ಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡದೆ ಶಿಲ್ಪದ ಹಿಂಬದಿಯ ಕಂಭದ ಮೇಲೆ ಬಹುಪಾಲು ರೇಖಾ ಕೆತ್ತನೆಗಳಿಂದಷ್ಟೇ ಚಿತ್ರಿಸಿ ತೋರಿಸಿದ್ದಾನೆ.. ವೇಗವಾಗಿ ಹಾರುವ ಹಕ್ಕಿಯ ರೆಕ್ಕೆಗಳು ಮುಸುಕು ಮುಸುಕಾಗಿ ಕಾಣುವುದಿಲ್ಲವೇ ಹಾಗೆ. ತನ್ನೊಡೆಯ ನಾರಾಯಣನ ಧಾವಂತವನ್ನು ಅರ್ಥ ಮಾಡಿಕೊಂಡಿರುವ ಗರುಡ ಅವನು ಅವಸರದಲ್ಲಿ ಕೆಳಗೆ ಜಾರದಂದೆ ಕಾಲುಗಳನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಿದ್ದಾನೆ. ನಾರಾಯಣನ ಕಾಲುಗಳು ಕೋಮಲವಾಗಿದ್ದರೆ ಗರುಡನ ಕಾಲುಗಳು ಕಷ್ಟಜೀವಿಯ ಕಾಲುಗಳಂತೆ ಒರಟಾಗಿ ದಪ್ಪ ದಪ್ಪ ವಾಗಿವೆ.
ಕೆಳಗೆ ಸರೋವರದಲ್ಲಿ ತಾವರೆಯ ಗಿಡಗಳ ನಡುವೆ ಗಜರಾಜ ಹಾಗು ಮೊಸಳೆಯನ್ನು ಕೆತ್ತಲಾಗಿದೆ . ಆನೆಯ ಆರ್ತತೆಯು ಚೆನ್ನಾಗಿ ಚಿತ್ರಿತವಾಗಿದ್ದು ಅಂಗ ಭಂಗಿಗಳು ಸಹಜತೆಯಿಂದ ಕೂಡಿವೆ.
ಶಿಲ್ಪಿಯು ಎಡವಿರುವುದು ಮೊಸಳೆಯ ಕೆತ್ತನೆಯಲ್ಲಿ. ಮೊಸಳೆಯನ್ನು ಆಮೆಯಂತೆ ಚಿತ್ರಿಸಿ ದೊಡ್ದ ಪ್ರಮಾದವನ್ನೇ ಮಾಡಿಬಿಟ್ತಿದ್ದಾನೆ. ಇದರಿಂದ ಶಿಲ್ಪಿಗೆ ಮೊಸಳೆಯ ಪರಿಚಯವಿರಲಿಲ್ಲವೆಂಬುದು ಸುಸ್ಪಷ್ಟವಾಗಿ ತಿಳಿಯುತ್ತದೆ. ಸರೋವರದ ತಾವರೆಯ ಗಿಡಗಳಲ್ಲಿ ಶಿಲ್ಪಿಯು ಸಹಜವಾದ ಬಾಗು ಬಳುಕುಗಳನ್ನು ತುಂಬಿದ್ದಾನೆ.

ರಾಜೇಶ್ ಶ್ರೀವತ್ಸ

ಶಿಲ್ಪಕಲೆ ೧ ರಾಜೇಶ್ ಶ್ರೀವತ್ಸ

ಶಿಲ್ಪಕಲೆಯ ಅಭ್ಯಾಸ ನಮ್ಮ ಪಠ್ಯದ ಒಂದು ಭಾಗವಾಗಿತ್ತು. ನಮ್ಮ ಪ್ರಾಚಾರ್ಯರಾದ ’ಕಾಳೇಶ್ವರಾಚಾರ್ಯ ಹಂಸಬಾವಿ ’ಯವರೊಡನೆ ಮಹಾಬಲಿಪುರಮ್ ದೇವಸ್ಥಾನದ ವೀಕ್ಷಣೆಗೆ ಹೋಗಿದ್ದೆವು. ಗೈಡ್ಗಳ ಸಹಾಯವಿಲ್ಲದೆ ಶಿಲ್ಪಗಳನ್ನು ನೋಡಿ ಬಂದು ಟಿಪ್ಪಣಿ ಬರೆದು ತೋರಿಸಬೇಕೆಂದು ನಮ್ಮ ಗುರುಗಳ ಆದೇಶ. ಸರಿ ನಮ್ಮ ದೇಗುಲ ವೀಕ್ಷಣೆ ಮುಗಿಸಿ ಟಿಪ್ಪಣಿ ಬರೆದುಕೊಂಡು ಗುರುಗಳಿರುವಲ್ಲಿ ಹಿಂತಿರುಗಿದೆವು ಎಂದಿನಂತೆ ಮುಂದೆ ನಿಂತಿದ್ದ ನಾನೇ ಟಿಪ್ಪಣಿಯನ್ನು ಗುರುಗಳ ಕೈಗಿಟ್ತೆ. ನಾನು ಬರೆದ ಟಿಪ್ಪನಿಯ ಒಂದು sample...೧ನೇ ಗುಹೆಯಲ್ಲಿ ಸುಂದರವಾದ ಗಜಲಕ್ಶ್ಮೀ ದೇವಿಯ ಕೆತ್ತನೆ ಇದೆ. ಎಡ-ಬಲಗಳಲ್ಲಿ ಚಾಮರಧಾರಿಣಿಯರಿದ್ದಾರೆ. ೨ನೇ ಗುಹೆಯಲ್ಲಿ ಮಹಿಷಾಸುರಮರ್ದಿನಿ.. ಒಂದೆರಡು ಸಾಲುಗಳ ಮೇಲೆ ಕಣ್ಣಾಡಿಸುತ್ತಿದ್ದಂತೆ ಗುರುಗಳ ಮುಖ ಕೋಪದಿಂದ ಕಪ್ಪಿಟ್ತಿತು. ಪರ್ರನೆ ಕಾಗದವನ್ನು ಹರಿದು ಚೂರು ಚೂರು ಮಾಡಿದರು’ ಏನಪ್ಪಾ PWD report ಬರ್ದಿದ್ದೀಯಲ್ಲಾ... ನಿನ್ನಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಕಲೆ ನೋಡಲಿಕ್ಕೆ ಬಂದಿದ್ಯೋ ? ಕಲ್ಲು ನೋಡಲಿಕ್ಕೆ ಬಂದಿದ್ಯೋ? ನಡಿ ಮತ್ತೆ ಒಂದೇ ಒಂದು ಶಿಲ್ಪದ್ದಾದರೂ ಸರಿ ಬರ್ಕೊಂಡು ಬಾ..’. ಎಂದು ಗುಡುಗಿದರು. ಸರಿ ಸಾರ್ ಎಂದು ಮತ್ತೊಮ್ಮೆ ಶಿಲ್ಪ ವೀಕ್ಷ್ಣೆಣೆಗೆ ಹೋಗಲು ಹಿಂದೆ ತಿರುಗಿದೆ ಸಹಪಾಠಿಗಳೆಲ್ಲಾ ಮಂಗಮಾಯವಾಗಿದ್ದರು. ಒಬ್ಬರಿಗೂ ಅವರು ಬರೆದದ್ದನ್ನು ಗುರುಗಳಿಗೆ ತೋರಿಸುವ ಧೈರ್ಯ ಉಳಿದಿರಲಿಲ್ಲ. ತಲೆ ಕೆಡಿಸಿಕೊಂಡು ಎರಡನೆ ಸಲ ಬರೆದ ಟಿಪ್ಪಣಿ ಹೀಗಿತ್ತು.
"ಮಹಾಬಲಿಪುರಂನ ಮಹಿಷಾಸುರಮರ್ದಿನಿಯ ಶಿಲ್ಪವು ಕಲಾ ಪ್ರಪಂಚಕ್ಕೆ ಪಲ್ಲವರ ಅದ್ಭುತ ಕೊಡುಗೆಗಳಲ್ಲೊಂದು. ಇಲ್ಲಿ ದುರ್ಗೆಯನ್ನು ಭಯಂಕರವಾದ ಯುದ್ಧ ರಂಗದಲ್ಲಿ ಮಹಿಷಾಸುರನೊಡನೆ ನೇರವಾಗಿ ಮುಖಾಮುಖಿಯಾಗಿ ಹೋರಾಡುತ್ತಿರುವುದನ್ನು ಶಿಲ್ಪಿಯು ಚಿತ್ರಿಸಿದ್ದಾನೆ. ಮಹಿಷನಿಗೆ ಹೋಲಿಸಿದರೆ ದೇವಿಯು ಗಾತ್ರದಲ್ಲಿ ಸಣ್ಣವಳು. ಮಹಿಷನು ಕೋಣನ ತಲೆ ಮನುಷ್ಯನ ದೇಹವನ್ನು ಹೊಂದಿದ್ದು ಗಾತ್ರದಲ್ಲಿ ಬಹಳ ದೊಡ್ದವನು. ಆದರೂ ದೇವಿ ಹಾಗು ಮಹಿಷ ಇಬ್ಬರೂ ಇಲ್ಲಿ ಸಮಬಲರಾಗಿ ಚಿತ್ರಿತರಾಗುವಂತೆ ದೃಶ್ಯವನ್ನು ಸಂಯೋಜಿಸಲಾಗಿದೆ. ರಾಕ್ಷಸನ ಗಾತ್ರದಿಂದ ಸ್ವಲ್ಪವೂ ದೃತಿಗೆಡದೆ ದೇವಿಯು ಸಿಂಹ ವಾಹನೆಯಾಗಿ ವೀರಾವೇಶದಿಂದ ಧನುರ್ಬಾಣಗಳನ್ನು ಹಿಡಿದು ರಣರಂಗದಲ್ಲಿ ಮುನ್ನುಗ್ಗುತ್ತಿದ್ದಾಳೆ. ಇತ್ತ ಮಹಿಷನು ತನ್ನ ಭಯಂಕರ ಸೈನ್ಯದೊಡನೆ ಜಯವು ಇನ್ನು ತನ್ನದೇ ಎಂಬಂತೆ ಭಾರೀ ಗದೆಯೊಂದನ್ನು ಲೀಲಾಜಾಲವಾಗಿ ಎರಡೂ ಕೈಗಳಲ್ಲಿ ಆಟಿಕೆಯಂತೆ ಹಿಡಿದುಕೊಂಡು ಬೀಸಲು ಸಿದ್ದವಾಗುತ್ತಿರುವಂತೆ ಕೆತ್ತಿದ್ದಾನೆ. ಅವನ ರಾಜ ವೈಭವವನ್ನು ಎತ್ತಿ ಹಿಡಿಯಲು ಅವನಿಗೆ ಛತ್ರಿಹಿಡಿದಿರುವುದನ್ನು ತೋರಲಾಗಿದೆ. ದೇವಿಯ ಅನುಯಾಯಿಗಳು ಕುಬ್ಜರಾಗಿದ್ದರೂ ದೇವಿಯ ಹಿಂದು ಮುಂದೆ ಆತ್ಮ ವಿಶ್ವಾಸದಿಂದ ಹೋರಾಡುತ್ತಿದ್ದಾರೆ. ಯುದ್ದವೆಂಬುದು ಆ ಕುಬ್ಜರಿಗೆ ಆಟವೇನೋ ಎಂಬಂತೆ ಉತ್ಸಾಹದಲ್ಲಿ ನಲಿಯುತ್ತಿದ್ದಾರೆ. ಆದರೆ ಮಹಿಷನ ಸೈನಿಕರು ದೈಹಿಕವಾಗಿ ಬಲಶಾಲಿಗಳಾಗಿದ್ದರೂ ಬಾಣದ ಮಳೆಗೆ ಹಿಂಜರಿಯುತ್ತಿರುವಂತೆ ತೋರಿಸಲಾಗಿದೆ. ದೇವಿ ಹಾಗು ಮಹಿಷ ಇಬ್ಬರೂ ಯೋಧರಿಗೆ ಹಿತಮಿತವಾಗುವಷ್ಟು ಮಾತ್ರ ಆಭರಣಗಳನ್ನು ಧರಿಸಿದ್ದಾರೆ. ದೇವಿಯು ಅಷ್ಟ ಭುಜೆಯಾಗಿದ್ದು ಬಲಗೈಯೊಂದರಲ್ಲಿ ಘಂಟೆಯನ್ನು ಹಿಡಿದಿದ್ದು ಅದನ್ನು ಸೈನಿಕರನ್ನು ಹುರಿದುಂಬಿಸಲು ವಾದನಮಾಡತ್ತಿರುವಂತೆ ಹಸ್ತವನ್ನು ತೋರಿದ್ದನೆ. ಎಡಗೈಲಿ ಹಿಡಿದಿರುವ ಶಂಖವು ಬಾಯಿಗಿಡಲು ಸಿದ್ದವಾಗಿರುವಂತೆ ತುದಿಯನ್ನು ದೇವಿಯ ಮುಖದ ಕಡೆ ತಿರುಗಿಸಲಾಗಿದೆ. ದೇವಿಯ ವಾಹನ ಸಿಂಹದ ಮುಂಭಾಗದ ವಿವರಗಳನ್ನು ಮಾತ್ರ ಕೆತ್ತಲಾಗಿದ್ದು ಹಿಂಬದಿಯನ್ನು ಸೈನಿಕರಿಂದ ಮರೆಮಾಚಿ ರಣರಂಗವು ಸೈನಿಕರಿಂದ ದಟ್ತವಾಗಿ ತುಂಬಿರುವ ಭ್ರಮೆ ಮೂಡಿಸಲಾಗಿದೆ. ಸಿಂಹದ ಮುಖ್ಹದಲ್ಲಿ ಕ್ರೋಧ ಮಡುಗಟ್ಟಿದ್ದು ಅದರ ಬಲಗಾಲಿನ ಪಂಜವನ್ನೆತ್ತಿ ಧಾಳಿ ಮಾಡಲು ಮುನ್ನುಗ್ಗುತ್ತಿದೆ. ಸಿಂಹದ ಕತ್ತಿನ ಸುತ್ತ ಇರುವ ಸುರುಳಿ ಸುರುಳಿಯಾಗಿರುವ ಕೇಸರ ವನರಾಜನ ಗಾಂಭಿರ್ಯವನ್ನು ಎತ್ತಿ ತೋರಿಸುತಿದೆ."
ಎರಡನೇಯ ಟಿಪ್ಪಣಿ ಓದಿದ ನಮ್ಮ ಗುರುಗಳು "ಈಗ ಅರಿವಾಯ್ತಾ ಶಿಲ್ಪಕಲಾ ವೀಕ್ಷಣೆ ಅಂದರೆ ಏನೂ ಅಂತ ? " ಎನ್ನುತ್ತಾ ನನ್ನ ಬೆನ್ನು ತಟ್ಟಿದರೆಂದು ಹೇಳಬೇಕಿಲ್ಲ ತಾನೆ? ಅವರ ಆಶೀರ್ವಾದ ಸದಾ ನನ್ನ ಮೇಲಿರಲಿ

ರಾಜೇಶ್ ಶ್ರೀವತ್ಸ


Friday, September 12, 2014

ದೃಢ ಮನಸ್ಸಿನವರ ೧೨ ವರ್ತನೆಗಳು


1 ಮುಂದೆ ಸಾಗಿ ಬಿಡ್ತಾರೆ. ಸಾರಿ ಗೀರಿ ಅಂತೆಲ್ಲ ಹೇಳಿಕೊಂಡು ಸಮಯ ವ್ಯರ್ಥ
ಮಾಡುವ ಮಾತೇ ಇಲ್ಲ.
2 ಖುಷಿಯಾಗಿರುತ್ತಾರೆ. ಯಾರನ್ನೂ ದೂರುವುದಿಲ್ಲ. ಕೈಲಾಗದ ಕೆಲಸಕ್ಕೆ ಮುಂದಾಗುವುದಿಲ್ಲ.
3 ಸುಮ್ಮನೆ ಸುಮ್ಮನೆ ಹೊಗಳುವುದಿಲ್ಲ. ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಾರೆ. ಯಾರು ಯಾರಿಗೋ ಸಲಾಮು ಹೊಡೆಯುವುದಿಲ್ಲ.
4 ವರ್ತಮಾನಕ್ಕೆ ಶಕ್ತಿ ವ್ಯಯಿಸುತ್ತಾರೆ. ವರ್ತಮಾನದಲ್ಲಿ ಬದುಕುತ್ತಿರುತ್ತಾರೆ.
5 ಹಳೆಯ ತಪ್ಪನ್ನು ಒಪ್ಪಿಕೊಂಡಿರುತ್ತಾರೆ.ತಪ್ಪು ಮಾಡಿದ್ದಿದ್ರೆ ತಪ್ಪು ಅಂತ ಒಪ್ಪಿಕೊಂಡಿರುತ್ತಾರೆ. ಬೇರೆಯವರ ಮೇಲೆ ಅದನ್ನು ಹೊರಿಸುವುದಿಲ್ಲ. ಮುಂದೆ ಅಂಥ ತಪ್ಪು ಮಾಡುವುದಿಲ್ಲ.
6 ಬೇರೆಯವರ ಗೆಲುವಿಗೆ ಸಂಭ್ರಮಿಸುತ್ತಾರೆ. ಹೊಟ್ಟೆಕಿಚ್ಚು ಇಲ್ಲವೇ ಇಲ್ಲ. ಬೇರೆಯವರು ಗೆದ್ದರೆ ತಾವೇ ಗೆದ್ದಷ್ಟು ಖುಷಿಯಾಗುತ್ತಾರೆ.
7 ಏಕಾಂತವನ್ನೂ ಇಷ್ಟಪಡುತ್ತಾರೆ. ಏಕಾಂಗಿ ಅಂತ ನರಳುವುದಿಲ್ಲ, ಖುಷಿಯಲ್ಲಿರುತ್ತಾರೆ.
8 ಕೆಟ್ಟ ಯೋಚನೆಗಳಲ್ಲಿ ಮುಳುಗುವುದಿಲ್ಲ.ಬೇಡದ ವಿಷಯಗಳ ಬಗ್ಗೆ ಯೋಚಿಸುವುದೂ
ಇಲ್ಲ, ಮಾತನಾಡುವುದೂ ಇಲ್ಲ.
9 ಎಲ್ಲಿ ಹೋದರೂ ಸಲ್ಲುತ್ತಾರೆ.ಅದೇ ಬೇಕು, ಇದೇ ಬೇಕು ಅಂತ ಇಲ್ಲ. ಎಲ್ಲಿ ಹೋದರೂ ಹೇಗೆ ಇದ್ದರೂ ಹೊಂದಿಕೊಳ್ಳುತ್ತಾರೆ.
10 ಜಾಣ್ಮೆಯಿಂದ ಸವಾಲು ಎದುರಿಸುತ್ತಾರೆ. ಯೋಚನೆ ಮಾಡದೆ ಮುನ್ನುಗ್ಗಿ ಸೋಲುವುದಿಲ್ಲ. ಸಾಕಷ್ಟು ಲೆಕ್ಕಹಾಕಿ, ಯೋಚನೆ ಮಾಡಿ ಗೆಲ್ಲುತ್ತಾರೆ.
11 ಭಯಂಕರ ತಾಳ್ಮೆ ಇರುತ್ತದೆ. ಕೆಲಸ ಮಾಡುತ್ತಾರೆ, ತಾಳ್ಮೆಯಿಂದ ಕಾಯುತ್ತಾರೆ.
12 ಸೋಲುವುದಕ್ಕೂ ರೆಡಿ.ಯಾವತ್ತೂ ಸೋಲಬಾರದು ಅನ್ನುವ ಯೋಚನೆ ಇವರಿಗಿಲ್ಲ. ಸೋತರೆ ಅದನ್ನು ಸ್ವೀಕರಿಸುತ್ತಾರೆ.

ಕೃಪೆ: ಉದಯವಾಣಿ

Friday, September 5, 2014

ಕನಸು.

 ಕನಸು.*

ಬಾನಂಚಿನ ಅಂಗಳದಿ ನಾ ಕಂಡ ಆ ಕನಸು
ತಾರೆಗಳ ಆಗಸದಿ ಚಿತ್ತಾರವ ಬಿಡಿಸಿದಂತೆ
ಚಂದಿರನ ಬೆಳದಿಂಗಳಲಿ ನಾ ನಗುವ ಕಂಡೆ
ನಗುವಿನಾಳದ ನೋವ ಮರೆತು
ಮೋಡಗಳು ಬಂಧಿಸಿದ ಆ ಚಂದ್ರನ ಪರದಾಟ
ಜೀವನದಿ ಕಮರಿದ ಕನಸುಗಳ ಹುಡುಕಾಟ
ಕಪ್ಪಗಿನ ಮೋಡದ ಅಂಚಿನಲಿ ನಿಂತ ಮಳೆಯಹನಿ
ಕಣ್ಣಂಚಿನಲಿ ತುಂಬಿದ ಕಣ್ಣೀರ  ಹನಿಯ ಸಾಲು
ಮೋಡಗಳ ಪೈಪೋಟಿ ಭಾವನೆಗಳ ಮಿಡುಕಾಟ
ದೂರದಾಗಸದ ಕಡೆಗೆ ನೆಮ್ಮದಿಯ ನೋಟ.

ಸ್ಮೃತಿ..   

Wednesday, August 27, 2014

ದ್ವಾದಶ ರಾಶಿಗಳ ವಾರ ಭವಿಷ್ಯ


ಮೇಷ : ಶ್ರಾವಣ ಮುಗಿಯುತ್ತಿದ್ದಂತೆ ನಿಮ್ಮ ಸಂತಸದ ದಿನಗಳೂ ಮುಗಿದವು. ವಧಾ ಸ್ಥಾನದಲ್ಲಿ ಇರುವ ಕುಜನ ಕೆಂಗಣ್ಣು ನಿಮ್ಮ ಮೇಲಿದೆ. ಬಿರಿಯಾನಿ ಆಗುವುದನ್ನು ತಪ್ಪಿಸಿಕೊಳ್ಳಲು ನಿತ್ಯವೂ ಕಟುಕ ಹೃದಯ ಪರಿವರ್ತನಾ ಸ್ತೋತ್ರ ಪಠಿಸಿದಲ್ಲಿ ಸಹಾಯವಾಗಬಹುದು. ಉಳಿದಂತೆ ದೇವರೇ ದಿಕ್ಕು.

ವೃಷಭ: ಕೆಟ್ಟಕಾಲ ಬರುತ್ತಾ ಇದೆ. ಮುಂದೆ ಹೋದರೆ ಹಾಯಬೇಡಿ , ಹಿಂದೆ ಬಂದರೆ ಒದೆಯ ಬೇಡಿ. ಚಂಚಲ ಚಂದ್ರ ಘಾತಕ ಸ್ಥಾನದಲ್ಲಿರುವುದರಿಂದ ಮನಸಿನ ಮೇಲೆ ಹಿಡಿತ ಕಳೆದುಕೊಂಡು ಕಂಡವರ ಬೇಲಿ ಹಾರಿ ಮೇಯಲು ಹೋಗದಿರಿ. ನಿಮ್ಮ ಹೆಡೆಮುರಿ ಕಟ್ತಿ ದೊಡ್ಡಿಗೆ ದೂಡುವ ಸಂಭವವಿದೆ. ಒಳಿತ್ತಿಗಾಗಿ ರಾಮಚಂದ್ರಾಪುರದ ಮಠಕ್ಕೆ ಮುಡಿಪಿಟ್ಟು ಪ್ರಾರ್ಥಿಸಿ.

ಮಿಥುನ: ಶುಕ್ರ ಉಚ್ಚನಾಗಿ ೫ನೇ ಮನೆಯಲ್ಲಿರುವುದು ನಿಮ್ಮ ಅದೃಷ್ಟ. ಶ್ರಾವಣ ಮಾಸ ಮುಗಿದರೂ ನಿಮ್ಮ ಒಳ್ಳೆಯದಿನಗಳು ಮುಗಿದಿಲ್ಲ. ಮಲೆನಾಡಿನ ಕಡೆ ಮಳೆ ಇನ್ನೂ ನಿಂತಿಲ್ಲ. ಬೆಚ್ಚಗಿನ ಪ್ರವಾಸಕ್ಕೆ ಸಕಾಲ. ಆದರೂ ಶನಿ ೭ನೆ ಮನೆಯಲ್ಲಿ ಹೊಂಚು ಹಾಕಿ ಕುಳಿತಿರುವುದರಿಂದ ಪಬ್/ಬಾರ್/ಪಾರ್ಕ್ ಗಳಿಗೆ ಹೋಗುವಾಗ ಎಚ್ಚರ. moral ಪೊಲೀಸರ ಕೈಗೆ ಸಿಕ್ಕುಬಿದ್ದಲ್ಲಿ ನಿಮ್ಮ ಮಾನ ಮೂರು ಕಾಸಾಗುವ ಸಾಧ್ಯತೆಗಳಿವೆ.ನಿಮ್ಮಿಬ್ಬರಲ್ಲಿ ಹೆಣ್ಣು ಕತ್ತಿನಲ್ಲಿ ಸದಾ ತಾಳಿ ಧರಿಸುವುದು,ಬುರ್ಕಾ ಧರಿಸುವುದು ಮಾಡಿದಲ್ಲಿ ಶನಿಯ ಕೆಟ್ಟ ದೃಷ್ಟಿ ಕರಗುವ ಭರವಸೆ ಇದೆ. ಗಂಡಿಗೆ ಒದೆ ತಿನ್ನುವುದೇ ಭಾಗ್ಯ.

ಕಟಕ: ಎಲ್ಲೆಂದರಲ್ಲಿ ಚೀನಾ,ಹಾಂಕಾಂಗ್, ಸಿಂಗಾಪುರ್ಗಳಿಗೆ ಏಡಿ ನಿರ್ಯಾತ ಮಾಡುವ ಕಂಪನಿಗಳು ಹುಟ್ಟುತ್ತಿರುವುದು ನಿಮ್ಮ ಸಂತಾನಕ್ಕೆ ಕಂಟಕವಾಗುತ್ತಿದೆ. ಈಗಿರುವ ಕುಜ-ರಾಹು ಸಂಧಿ ಕಳೆದ ನಂತರ ಆ ಕಂಪನಿಗಳೆಲ್ಲಾ ಬಾಗಿಲು ಹಾಕಿ ನಿಮಗೆ ನಿರಾಳವಾಗುತ್ತದೆ. ಅಲ್ಲಿಯವರೆಗೆ ನಿಮ್ಮ ಕುಲದೇವತೆ ಗಂಗೆಯ ಪ್ರಾರ್ಥನೆಯೊಂದೇ ನಿಮಗಿರುವ ಭರವಸೆ.

ಸಿಂಹ: ನಿಮ್ಮ ಸಂಖ್ಯೆ ಕಮ್ಮಿ ಆಗಿರುವುದೇ ನಿಮಗೆ ಶ್ರೀರಕ್ಷೆ. ಕಣ್ಣಲ್ಲಿ ಕಣ್ಣಿಟ್ಟು ನಿಮ್ಮನ್ನು ಕಾಯುತ್ತಾ ಇರುವ ಸರ್ಕಾರ ಇರುವ ತನಕ .. ಶನಿ, ಕುಜ , ರಾಹು , ಕೇತುಗಳು ನಿಮ್ಮ ತಂಟೆಗೆ ಬರವು. ಆದರೂ ಜನ್ಮ ಸ್ಥಾನದ ಗುರು ಮನಸ್ಸಿಗೆ ಆತಂಕ ಉಂಟುಮಾಡುವನು. ಆಗಾಗ ಬೇಟೆಗಾರರ ಕಾಟವಿರುವುದು. ಅತ್ತಿಮರದ ಕೆಳಗೆ ಸತ್ತಂತೆ ಬಿದ್ದು ಗುರುನಾಮ ಜಪಿಸಿ ಬೇಟೆಗಾರರಿಗೆ ನಿರಾಶೆ ಉಂಟು ಮಾಡಿ.

ಕನ್ಯಾ: ಗುರು-ಶುಕ್ರರ ಶುಭ ದೃಷ್ಟಿ ಇದ್ದರೂ ನಿಮ್ಮ ಮೇಲಿನ ದೌರ್ಜನ್ಯ ತಪ್ಪಿಲ್ಲ. ಅಂಕಾಳಮ್ಮನಿಗೆ ಅರ್ಚನೆ ಮಾಡಿದ ಮೆಣಸಿಕಾಯಿಗಳನ್ನು ಪುಡಿಮಾಡಿ ನಿಮ್ಮ ಕೈಚೀಲದಲ್ಲಿ ಅಡಗಿಸಿಟ್ಟುಕೊಳ್ಳಿ.ಉಪಯೋಗಕ್ಕೆ ಬರಬಹುದು. ಗುರುಬಲ ಚೆನ್ನಾಗಿರುವುದರಿಂದ ಕರಾಟೆ ಜೂಡೋ ಕಲಿಯಲು ಸಕಾಲ.

ತುಲಾ: ತುಕ್ಕು ಹಿಡಿಯುವ ಮೊದಲು ಎಣ್ಣೆ ಹಚ್ಚಿಸಿಕೊಳ್ಳಿ. ಎಲೆಕ್ಟ್ರಾನಿಕ್ ತಕ್ಕಡಿಗಳು ಸಂತೆಯಲ್ಲಿ ಉಪಯೋಗವಾಗುವ ಕಾಲ ಇನ್ನೂ ಬಂದಿಲ್ಲ ನಿಶ್ಚಿಂತೆಯಿಂದಿರಿ. ಮಿತ್ರ ಸ್ಥಾನದಲ್ಲಿರುವ ಬುಧ ದೂರಸರಿಯುತ್ತಾ ಇರುವುದರಿಂದ ತೂಕದ ಬಟ್ಟುಗಳ ಜೊತೆ ವಾಗ್ಯುದ್ಧಕ್ಕಿಳಿದಲ್ಲಿ ನಿಮಗೇ ನಷ್ಟ.

ವೃಷ್ಚಿಕ: ಗ್ರಾನೈಟ್ ಉದ್ಯಮ ಬೆಳೆದಂತೆ ಬಂಡೆಗಳ ಸಂದು ಗೊಂದುಗಳು ಇಲ್ಲವಾಗಿ ನಿಮ್ಮ ಆವಾಸಕ್ಕೆ ಸಂಚಾಕಾರ. ಬಂಡೆಯೊಡೆಯಲು ಬಂದವರನ್ನು ಕರುಣೆ ಇಲ್ಲದೆ ಕುಟುಕಿ ಓಡಿಸಿ. ನೀವು ಸತ್ತರೂ ಪರವಾಗಿಲ್ಲ . ನಿಮ್ಮ ಬಲ ಏನೆಂದು ಜಗತ್ತಿಗೇ ತಿಳಿಸಿ.

ಧನು: ಮ್ಯೂಸಿಯಂಗಳಿಂದಲೂ ಮಾಯವಾಗುವ ಕಾಲದಲ್ಲಿ ದೇವರು ಕಣ್ ಬಿಟ್ಟ. ಟಿವಿ ಸೀರಿಯಲ್ಗಳ ಮೂಲಕ ಮರುಹುಟ್ಟು ಪಡೆದ ನಿಮ್ಮ ಅದೃಷ್ಟಕ್ಕೆ ಏನು ಹೇಳುವುದು? ರಾಮ-ಲಕ್ಷ್ಮಣ, ಅರ್ಜುನ , ಕರ್ಣ, ದ್ರೋಣ , ಎಕಲವ್ಯರ ಹೆಸರಿನಲ್ಲಿ ಗುರುವಾರ ಪ್ರಾಣದಾನ ಮಾಡಿ.

ಮಕರ: ಎಚ್ಚರ!! ಸೊಂಟಕ್ಕೆ ನಿಮ್ಮ ಚರ್ಮದಲ್ಲಿ ಮಾಡಿದ ಬೆಲ್ಟ್ ಹಾಕಿಕೊಳ್ಳುವ ಟ್ರೆಂಡ್ ಹಿಂತಿರುಗುತ್ತಾ ಇದೆ. ಸದಾ ನೀರಿನಲ್ಲಿ ಮುಳುಗಿದ್ದರೆ ಕ್ಷೇಮ. ನೀರು ಒಣಗಿಸದಂತೆ ಸೂರ್ಯನಲ್ಲಿ ಪ್ರಾರ್ಥನೆ ಶ್ರೇಯಸ್ಕರ.

ಕುಂಭ: ಕೃಷ್ಣಾಷ್ಟಮಿ ಕಳೆಯಿತು. ಬೆಣ್ಣೆ ಮಡಿಕೆ , ಮೊಸರು ಮಡಿಕೆ ಒಡೆಯುವ ಆಟದ ನೆಪದಲ್ಲಿ ನಿಮ್ಮ ಬಂಧುಗಳ ಮಾರಣ ಹೋಮ ನಡೆಯಿತು. ಅಗಿದ್ದು ಆಯ್ತು. ಹೋದ ಸಂಗಾತಿಗಳು ಹೋದರು. ಉಳಿದವರು ಕೊರಗದೆ ಅರಾಮವಾಗಿ ಮಲಗಿ. ಬೇಸಿಗೆಯಲ್ಲಿ ತಣ್ಣಗಿನ ನೀರು ತುಂಬಲು ನೀವೇ ಗತಿ. ಮೂಷಕನ ಕಾಟದಿಂದ ಅಟ್ಟದ ಮೇಲಿಂದ ಬೀಳುವ ಕೆಟ್ಟಕಾಲ ಬರದಂತೆ ಗಣೇಶನನ್ನು ಪ್ರಾರ್ಥಿಸಿ.

ಮೀನ:ನೀವು ರುಚಿಯಾಗಿ, ಪುಷ್ಟಿಕರವಾಗಿರುವುದೇ ನಿಮ್ಮ ಅಪರಾಧ. ನೀರಿನಲ್ಲಿ ತಿಂದು ಕೊಬ್ಬಿದ್ದನ್ನು ದಡಕ್ಕೆ ಬಂದು ಪ್ರಾಣ ಸಹಿತ ಕಕ್ಕಬೇಕು.ನಿಮ್ಮ ಕರ್ಮ ಅನುಭವಿಸಿ. ಆದರೂ ಜಾಗೃತ ಸ್ಥಾನದಲ್ಲಿರುವ ಕುಜ , ರಾಹು ,ಕೇತುಗಳು ನಿಮ್ಮ ಪ್ರಾಣ ಉಳಿಸಿಯಾರು. ಸಿಕ್ಕ ಸಿಕ್ಕ ಪ್ಲಾಸ್ಟಿಕ್ ಕಸ ಕಡ್ಡಿ ನುಂಗಿ ಹೊಟ್ಟೆಯಲ್ಲಿ ತುಂಬಿಸಿಟ್ಟುಕೊಳ್ಳಿ. ನಿಮ್ಮನ್ನು ಹಿಡಿದು ಕೊಯ್ದವರು ಅದನ್ನು ನೋಡಿ ವಾಕರಿಸಿ ಮತ್ತೆ ನಿಮ್ಮ ಬೇಟೆಗೆ ಸುಳಿಯರು. ನಿಮ್ಮ ಮಕ್ಕಳು ಮರಿಗಳಾದರೂ ಅರಾಮವಾಗಿ ಬದುಕಿಯಾರು.

Thursday, August 14, 2014

ದಾಸ್ಯದಿಂದ ಮುಕ್ತಿ ಹೊಂದದ ನಮ್ಮ ಶೈಕ್ಷಣಿಕ ವ್ಯವಸ್ಥೆ - ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಇನ್ನೂ ಸಿಕ್ಕಿಲ್ಲ ಸ್ವಾತಂತ್ಯ


                         ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದು ನಾವು ಸ್ವಾತಂತ್ರ್ಯರಾದೆವು  ಈ ಸಂಭ್ರಮಕ್ಕಾಗಿ ಪ್ರತಿವರ್ಷ  ಅಗಷ್ಟ-15 ನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿರುವೆವು. ಸ್ವಾತಂತ್ರ್ಯ ಪಡೆದು ಇಂದಿಗೆ ನಾವು 67 ವಸಂತಗಳನ್ನು ಕಳೆದಿರುವೆವು. ಈ ಸಂದರ್ಭದಲ್ಲಿ ನಾವು ದೇಶವಾಗಿ ಜಗತ್ತಿನಲ್ಲಿಯೇ ವಿಶಿಷ್ಟವಾದ ಸ್ಥಾನವನ್ನು ಪಡೆದಿರುವೆವು. ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆದಿರುವೆವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರವೆವು.  ಸ್ವತಂತ್ರ್ಯ ಭಾರತದಲ್ಲಿ ನಿಜವಾಗಿ ಎಲ್ಲರಿಗೂ ಸ್ವಂತಂತ್ಯ ಸಿಕ್ಕಿರುವುದೇ? ಈ ಬಗ್ಗೆ ನಮಗೆ ನಾವೇ ಪ್ರಶ್ನೆ ಮಾಡಿಕೊಂಡು ಅವಲೋಕಿಸುವುದು ಈ ಸಮಯದಲ್ಲಿ ಉಚಿತವಾಗಿದೆ. ದಾಸ್ಯದಿಂದ ಮುಕ್ತಿ ಹೊಂದಿದ ನಾವು ಪ್ರಜಾಪ್ರಭುತ್ವ  ಸಕಾರ ಇದ್ದರು ಇನ್ನೂ ಯಾಕೆ ಸಮಾನತೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ? ಇನ್ನೂ ನಮ್ಮ ದೇಶದಲ್ಲಿ ದಲಿತರ ಸಮಸ್ಯೆ ಇದೆ? ಅಧಿಕಾರ ಎಂಬುದು ಇನ್ನೂ ಯಾಕಾಗಿ ಕೆಲವೆ ಜನರಲ್ಲಿ ಕೇಂದ್ರಿಕೃತವಾಗಿದೆ.? ನಮ್ಮ ದೇಶದಲ್ಲಿ ಮಹಿಳೆಗೆ ಸ್ವಾತಂತ್ಯ ಸಿಕ್ಕಿದೆಯಾ? ಮಕ್ಕಳಿಗೆ ಸ್ವಾತಂತ್ಯ ಇದೆಯಾ?  ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಬಹುಶ: ಸಿಗುವುದು ಇಲ್ಲ. ನಮ್ಮ ಸಮಾಧಾನಕ್ಕಾಗಿ ಒಂದೆರಡು ಉದಾಹರಣೆಗಳನ್ನು ಹೇಳಿಕೊಂಡು ನಾವು ಸಂತೋಷಪಡಬಹುದು ಆದರೇ ಯಾವ ಪ್ರಮಾಣದಲ್ಲಿ ನಾವು ಮುಂದೆ ಹೋಗಬೇಕಾಗಿತ್ತು ಇನ್ನೂ ಅಲ್ಲಿ ತಲುಪಿಲ್ಲ.  ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವುದು ನಮ್ಮ ಶೈಕ್ಷಣಿಕ ವ್ಯವಸ್ಥೆಯೆ ಆಗಿರುವುದು. ಇನ್ನೂ ನಾವು ಬ್ರಿಟಿಷರ ಹಾಕಿ ಕೊಟ್ಟ ಶೈಕ್ಷಣಿಕ ಪದ್ದತಿಯಲ್ಲಿಯೇ ಇರುವೆವು. ಸ್ವಾತಂತ್ಯಾ ನಂತರ ಶಿಕ್ಷಣ ಸುಧಾರಣೆ ಹೆಸರಲ್ಲಿ  ಸಾಕಷ್ಟು ಬದಲಾವಣೆಗಳನ್ನು ಮಾಡಿದರು ಸಹಾ ನಾವಿನ್ನು ಬ್ರಿಟಿಷರು ಹಾಕಿ ಕೊಟ್ಟ ಶೈಕ್ಷಣಿಕ ಅಡಿಪಾಯದಿಂದ ಹೊರಬಂದಿಲ್ಲ.  67 ವರ್ಷದ ನಂತರವು ನಮ್ಮ ಶೈಕ್ಷಣಿಕ ವ್ಯವಸ್ಥೆ ದಾಸ್ಯದಲ್ಲಿಯೇ ಇರುವುದು. ಅದರ ಪರಿಣಾಮವೇ ಇಂದಿನ ಸಮಾಜವಾಗಿದೆ.
ನಮ್ಮನ್ನು ಆಳಿದ ಬ್ರಿಟಿಷರಿಗೆ ನಮ್ಮಿಂದಲ್ಲೇ ಲಾಭ ಪಡೆದುಕೊಳ್ಳಲು ಯಾವ ರೀತಿ ಶೈಕ್ಷಣಿಕ ಪದ್ದತಿ ಬೇಕೋ ಅದನ್ನು ಜಾರಿಗೊಳಿಸಿದರು ಅದರಲ್ಲಿ ಅವರು ಯಶಸ್ವಿ ಆದರು. ಅದರಲ್ಲಿಯೂ ಸಾಕಷ್ಟು ಒಳ್ಳೆಯ ಅಂಶಗಳು ಇರುವವು. ಆದರೇ ಮುಖ್ಯವಾಗಿ ಇಲ್ಲಿನ ನೈಸಗರ್ಿಕ ಸಂಪನ್ಮೂಲವನ್ನು ಲೂಟಿ ಮಾಡಿ ಕೊಂಡೊಯ್ಯಲು ಬೇಕಾದ ಎಲ್ಲಾ ರೀತಿಯ ಶಿಕ್ಷಣವನ್ನು ಅವರು ನೀಡಿದರು. ಅದು ಆ ದೇಶದ ಲಾಭಕ್ಕಾಗಿ ಅಗತ್ಯವಾಗಿತ್ತು.ಆದರೇ ಸ್ವಾತಂತ್ಯ ದೊರೆತ ಅರ್ಧ ಶತಕಗಳು ಕಳೆದರು ನಾವು ನಮ್ಮ ಶೈಕ್ಷಣಿಕ ವ್ಯವಸ್ಥೆಯ ಅಡಿಪಾಯವನ್ನು ಸರಿಪಡಿಸಲು ಪ್ರಯತ್ನಿಸುತ್ತಿಲ್ಲ. ಬದಲಾಗಿ ಬೇರೆ ಬೇರೆ ಯೋಜನೆ ಕಾನೂನುಗಳ ಹೆಸರಿನಿಂದ ಅದೇ ಅಡಿಪಾಯದ ಮೇಲೆ ಬೇರೆ ಬೇರೆ ಆಕಾರದ ಕಟ್ಟಡವನ್ನು ಕಟ್ಟುತ್ತಿರುವೆವು.  ಈ ಕಾರಣದಿಂದಾಗಿಯೇ ನಮ್ಮ  ಶೈಕ್ಷಣಿಕ ವ್ಯವಸ್ಥೆಯಲ್ಲಿ ಈ ಕೆಳಕಂಡ ಅಂಶಗಳು ಕಂಡುಬರುವವು.
o ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕೃಷಿ ಪ್ರಮುಖ ಭಾಗವಾಗಿಲ್ಲ.
o ಶೈಕ್ಷಣಿಕ ವ್ಯವಸ್ಥೆ ಕೇಂದ್ರಿಕೃತವಾಗಿರುವುದು ಕೇಂದ್ರ/ರಾಜ್ಯ ಹಂತದಲ್ಲಿಯೇ ಆಗಿರುವುದು.
o ಬೃಹದ್ದಾಕಾರದ ಶೈಕ್ಷಣಿಕ ವ್ಯವಸ್ಥೆ ಇದ್ದರು ಪಾರದರ್ಶಕತೆಯ ಕೊರತೆ.
o ಸಮುದಾಯದ ತೊಡಗಿಸುವಿಕೆ ಇಲ್ಲದಿರುವುದು.
o ಶಿಕ್ಷಣವನ್ನು ಆಥರ್ಿಕತೆಯ ಹಿನ್ನಲೆಯಲ್ಲಿ ನೋಡುತ್ತಿರುವುದು.
o ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕಂಪನಿಗಳು, ಆಣೆಕಟ್ಟುಗಳು, ಅಪರಾಧಗಳು
o ನೈಸಗಿ೯ಕ ಸಂಪತ್ತಿನ ಲೂಟಿ, ಅಗತ್ಯಕ್ಕಿಂತ ಹೆಚ್ಚಿನ ಆಸೆ
  ಈ ಎಲ್ಲಾ ಅಂಶಗಳು ನಮ್ಮ ಶೈಕ್ಷಣಿಕ ವ್ಯವಸ್ಥೆ ದಾರಿ ತಪ್ಪಿರುವುದಕ್ಕೆ ಸ್ಪಷ್ಟ ಸೂಚಕಗಳಾಗಿದೆ. ದೇಶದ ಭವಿಷ್ಯ ಎಂಬುದು ಮಕ್ಕಳ ಕೈಯಲ್ಲಿ  ಇದೆ ಎಂಬುದನ್ನು ನಾವೆಲ್ಲರೂ  ಒಪ್ಪ್ಪಿಕೊಳ್ಳುವೆವು.  ಆದರೇ ನಾವು ನಮ್ಮ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣದಿಂದ ಮಗುವನ್ನು ಸ್ವಾಥರ್ಿಯನ್ನಾಗಿ ಮಾಡುತ್ತಿರುವೆವು. ಚೆನ್ನಾಗಿ ಓದು ಅವನಿಗಿಂತ/ಅವಳಿಗಿಂತ ಹೆಚ್ಚಿನ ಅಂಕ ತೆಗೆ, ಹೆಚ್ಚಿನ ಸಂಬಂಳದ ಕೆಲಸಕ್ಕೆ ಸೇರು. ಇದೇ ನಾವು ಮಕ್ಕಳಿಗೆ ಕಲಿಸುತ್ತಿರುವೆವು. ಅಗಷ್ಟ-15 ರ ಆಚರಣೆಯಲ್ಲಿಯೂ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಬಹುಮಾನ ನೀಡುತ್ತಿರುವೆವು. ಒಬ್ಬರಿಗೆ ಬಹುಮಾನ ನೀಡಿ ಉಳಿದವರ ಮನಸ್ಸಿನಲ್ಲಿ ದ್ವೇಷವನ್ನು ಹೆಚ್ಚಿಸುತ್ತಿರುವೆವು. ಸಕಾ೯ರದ ಯೋಜನೆ  ಸಹಾ ಹೆಚ್ಚಿನ ಅಂಕ ಪಡೆದವರಿಗಾಗಿ ಇರುವುದು.  ಒಟ್ಟಾರೆ ನಮ್ಮ ಶೈಕ್ಷಣಿಕ ರೀತಿ ನೀತಿಗಳು ದ್ವಂದದಲ್ಲಿರುವುದು. ಹೇಳುವುದು ಒಂದು ಮಾಡುವುದು ಒಂದು ಎಂಬತಾಗಿದೆ.
ನಮ್ಮ ಶೈಕ್ಷಣಿಕ ವ್ಯವಸ್ಥೆಯ ಅಡಿಪಾಯವನ್ನೇ ನಾವು ಬದಲಾಯಿಸದಿದ್ದರೇ ಮುಂದಿನ ಕೆಲವು ವರ್ಷಗಳಲ್ಲಿ ಪರಿಸ್ಥಿತಿ ಗಂಭೀರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಆದರೇ ನಾವಿಂದು ದುರಾಸೆಯ ಕಾರಣದಿಂದ ಬೇರೆಯವರ ಬದುಕಿನ ಹಕ್ಕನ್ನು ಕಸಿಯುತ್ತಿರುವೆವು. ಇದೇ ಸ್ಥಿತಿ ಮುಂದುವರೆದರೆ  ಪುನ: ನಾವು ದಾಸ್ಯದಲ್ಲಿಯೇ  ಬದುಕಬೇಕಾಗುವುದು. ಅದಕ್ಕೂ ಮುಂಚೆ ಸಾಮರಸ್ಯದಿಂದ ಬದುಕುವ ಸಮಾಜ ಸೃಷ್ಠಿ ಮಾಡುವ ಅಗತ್ಯವಿದೆ. ಅದಕ್ಕಾಗಿ ನಾವು ನಮ್ಮ ಶೈಕ್ಷಣಿಕ ಅಡಿಪಾಯವನ್ನು ಹೊಸದಾಗಿ ನಿಮಿ೯ಸುವ ಅಗತ್ಯವಿದೆ.  ಇದರ ಬಗ್ಗೆ ಚಚೆ೯ಯನ್ನು ಸ್ವಾತಂತ್ಯೋತ್ಸವ ಸಂದರ್ಭದಲ್ಲಿ ಹುಟ್ಟುಹಾಕುವ ಅಗತ್ಯವಿದೆ...
                                                                                                                       



ವಿವೇಕ ಬೆಟ್ಕುಳಿ





Wednesday, August 13, 2014

ಆಲ್ಬರ್ಟ್ ಐನ್ಸ್ಟನ್ - ಸುಭಾಷಿತ

ಧರ್ಮದ ಸ್ಪರ್ಶವಿಲ್ಲದ ವಿಜ್ಞಾನ ಕುಂಟು; ವಿಜ್ಞಾನದ ಸ್ಪರ್ಶವಿಲ್ಲದ ಧರ್ಮ ಕುರುಡು -  
                     

                                                                                                - ಆಲ್ಬರ್ಟ್ ಐನ್ಸ್ಟನ್

Monday, August 11, 2014

ಅ.ನ.ಕೃ - ಸುಭಾಷಿತ,

ಜೀವನವನ್ನು ಹಿಂದೆ ನೋಡಿ ತಿಳಿದುಕೊಳ್ಳಬೇಕು ಮುಂದೆ ನೋಡಿ ಬದುಕ ಬೇಕು -


                                                                                          ಅ. ನ. ಕೃ. 

Friday, August 8, 2014

ಹರಕು - ಮುರುಕು - ಶರತ್ ಚಕ್ರವರ್ತಿ


ಇತ್ತಿಚೆಗೆ ವಾಟ್ಸ್ ಆಪ್ ಅಲ್ಲಿ ಒಂದ್ ವಿಡಿಯೋ ಬಂತು. ಅದ್ರಲ್ಲಿ ಬ್ರಿಗೆಡ್ ಕಾಲೇಜ್ ವಿದ್ಯಾರ್ಥಿಗಳು 'ಬಕ್ರಾ' ಮಾಡುವಂತಹ ಹಾಸ್ಯ ದೃಶ್ಯ ಇತ್ತು. ರಸ್ತೆ ಬದಿ ಬಸ್ ಕಾಯ್ತಾ ನಿಂತಿದ್ದ ನಡು ವಯಸ್ಸಿನ ವ್ಯಕ್ತಿ ಹತ್ರ ಹೋಗಿ ಇಂಗ್ಲೀಷಿನಲ್ಲಿ ಬ್ರಿಗೇಡ್ ಕಾಲೇಜು ಮತ್ತು ಅಲ್ಲಿನ ವಿದ್ಯಾರ್ಥಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಅಂತ ಮೈಕ್ ಚಾಚ್ತಾನೆ. ಆ ವ್ಯಕ್ತಿ ತನಗೆ ಗೊತ್ತಿರೋ ಅರೆ ಬರೆ ಇಂಗ್ಲೀಷ್ನಲ್ಲಿ 'ಯಾ ಯಾ ಕಾಲೇಜ್ ಈಸ್ ಗುಡ್, ಸ್ಟೂಡೆಂಡ್ ಈಸ್ ಗುಡ್, ಬ್ರಿಲಿಯಂಟ್....' ಹೀಗೆ ಏನೋ ಒಂದು ಹೇಳಿ ಸುಮ್ಮನಾಗ್ತಾನೆ. ಅಷ್ಟಕ್ಕೆ ಬಿಡದ ಆ ವಿದ್ಯಾರ್ಥಿಗಳು ಅವನನ್ನ ಇನ್ನಷ್ಟು ಹುಚ್ಚು ಪ್ರಶ್ನೆಗಳನ್ನ ಅವರ ಸ್ಟಾಂಡರ್ಡ್ ಇಂಗ್ಲೀಷ್ನಲ್ಲಿ ಕೇಳಿ ತಬ್ಬಿಬ್ಬು ಮಾಡುತ್ತಾನೆ. ಅತ್ತ ಕೇಳಿದ ಪ್ರಶ್ನೆನು ಅರ್ಥವಾಗ್ದೆ, ಇತ್ತ ಇಂಗ್ಲೀಷ್ ಬರಲ್ಲ ಹೇಳೋಕು ಆಗ್ದೆ ಆ ವ್ಯಕ್ತಿ ಪೇಚಾಡ್ತ ಹೇಗಾದ್ರ ಮಾಡಿ ತಪ್ಪಿಸ್ಕೊಂಡ್ರೆ ಸಾಕು ಅನ್ನೋ ಹಾಗೆ ದಿಸ್ ದಟ್ ಗೋಯಿಂಗ್ ನೈಸ್ ಅಂದ್ಕೊಂಡು ಅಲ್ಲಿ ಕಾಲ್ಕೀಳೋಕೆ ನೋಡ್ತಾನೆ. ಅವನ ಇಂಗ್ಲೀಷನ್ನ ಎಂಜಾಯ್ ಮಾಡೋಕೆ ಶುರು ಮಾಡ್ಕೊಂಡ ಆ ವಿದ್ಯಾರ್ಥಿಗಳು ಅವನ ಬೆನ್ನತ್ತಿ ಸಾಕಾಷ್ಟು ರೋಸಿಕೊಳ್ಳುತ್ತಾರೆ. ನೋಡಲು ತುಂಬಾ ಫನ್ನಿ ಆಗಿರೋ ಈ ವಿಡಿಯೋ ನಗಿಸುತ್ತದೆ ನಿಜ.
ಆದರೆ...
ಇಂಗ್ಲೀಷ್ ಬಾರದೇ ಇರೋದು ನಮ್ಮನ್ನು ಈ ಮಟ್ಟಿಗಿನ ಅಪಹಾಸ್ಯಕ್ಕೆ ಗುರಿ ಮಾಡುತ್ತದೆಯೇ ಎಂಬುದು ಯೋಚಿಸಬೇಕಾದ ವಿಚಾರ. ಇಂಗ್ಲೀಷ್ ಬರದವನನ್ನು ಪೆಂಗ-ಮಂಗನ ರೀತಿಯಲ್ಲಿ ನೋಡಿದ ಆ ವಿದ್ಯಾರ್ಥಿಗಳ ತಪ್ಪೋ.. ಅಥವಾ ನನಗೆ ಇಂಗ್ಲೀಷ್ ಗೊತ್ತಿಲ್ಲ. ಕೇಳೋದೇನಿದ್ರು ಕನ್ನಡದಲ್ಲಿ ಕೇಳಿ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳದೆ ಕೊನೆವರಗೂ ಬಟ್ಲರ್ ಇಂಗ್ಲೀಷ್ನಲ್ಲೆ ಮಾನ ಮುಚ್ಚಿಕೊಳ್ಳಲು ಯತ್ನಿಸಿದ ಆ ವ್ಯಕ್ತಿಯ ತಪ್ಪ..? (ಇಂತಹ ವ್ಯಕ್ತಿ ನಾವು ಕೂಡ ಆಗಿರಬಹುದು, ಅವನು ನಮ್ಮ ಪ್ರತಿನಿಧಿ ಅಷ್ಟೆ)
ಇಂತಹ ಪರಿಸ್ಥಿತಿ ಇಂದ ನಮ್ಮ ನಾಡಿನಲ್ಲೇ ನಾವು ಎರಡನೇ ದರ್ಜೆಯ ಪ್ರಜೆಗಳಾಗುತ್ತಿದ್ದೇವೆ. ಒಪ್ಪಿಕೊಳ್ತಿನಿ ಇಂಗ್ಲೀಷ್ ಅವಶ್ಯಕ. ಆದ್ರೆ ಅನಿವಾರ್ಯ ಅಲ್ಲ.

--------------

ಮತ್ತೊಂದು ಮುಖ್ಯವಾದ್ದು...

ಹಳ್ಳಿ ಇಂದ ಬಂದ ನಾನು ಮಾತನಾಡುವಾಗ 'ಹಾ'ಕಾರ ಮತ್ತು 'ಆ'ಕಾರಗಳ ಕಡೆ ಅಷ್ಟೊಂದು ಗಮನ ಹರಿಸುವುದಿಲ್ಲ. ಹಾಸನ ಎಂಬುದರ ಬದಲು ಆಸನ ಎಂದೇ ಹೇಳಿರುತ್ತೇನೆ. ಇದನ್ನು ಒಂದು ಮಹಾಪರಾಧ ಅಥವಾ ದೊಡ್ಡ ಕಾಮಿಡಿ ಎಂಬಂತೆ ಹಲವರು ಎಂಜಾಯ್ ಮಾಡುವುದ್ದನ್ನು ನೋಡಿ 'ಅಲೆಲೆ ಮೂರ್ಖ ಬಡ್ಡಿಮಕ್ಳ' ಅಂದ್ಕೊಂಡಿದಿನಿ. ಇನ್ನು ಕರವೇ ನಾರಾಯಣಗೌಡರ ವಿಚಾರದಲ್ಲೂ ಹಲವರು ಇದೇ ವಿಚಾರಕ್ಕೆ ಆಡಿಕೊಳ್ಳುವುದ ನೊಡಿದ್ದೇನೆ.
ನನ್ನೂರಲ್ಲಿ ಮಾತಾಡೋ, ಅಲ್ಲಿನ ಮಣ್ಣಿನ ಭಾಷೆಯನ್ನ ಯಥಾವತ್ತಾಗಿ ಮೈಗೂಡಿಸಿಕೊಂಡಿರೋ ನಾನು ಅಲ್ಲಿ ಚಾಲ್ತಿಯಲ್ಲಿರೋ ಲಯ, ಸ್ವರಗಳನ್ನೇ ತುಂಬಿಕೊಂಡು ಭಾಷೆ ಕಲಿತ್ತಿದ್ದೇನೆ. ಒಂದು ಉದಾಹರಣೆ ಅಂದ್ರೆ ನಮ್ಮೂರಲ್ಲಿ (ಹಾಸನದ ಹಳ್ಳಿಗಳಲ್ಲಿ) ಹೋಗು ಅಥವಾ ಹೋಗಲೋ ಅನ್ನೋಕೆ 'ವೋಗ್ಲಾ' ಅಂತಾನೇ ಅನ್ನೋದು. ಅಲ್ಲಿನ ಬಹುಪಾಲು ಜನ ಹೀಗೆನೇ ಮಾತಾಡ್ತರೆ. ಅಲ್ಲಿ ಹುಟ್ಟಿ ಮಗುವಾದ ನಾನು ಅದನ್ನೆ ಬಳಸುತ್ತಿದ್ದೇನೆ. ಭಾಷೆ ವಾತಾವರಣದ ಸೊಗಡಿ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ ಅನ್ನೋದು ನಿಜ ಆಗಿದ್ರೆ, ಪ್ರತಿ 30 ಕಿಮಿಗೂ ಭಾಷೆ ಲಯ ಮತ್ತು ಸ್ವರೂಪ ಬದಲಾಗುತ್ತೆ ಅನ್ನೋದು ನಿಜ ಆದ್ರೆ ನನ್ನ ಮಾತಲ್ಲಿ ಬರೋ 'ಹಾ'ಕಾರ 'ಆ'ಕಾರ ತಪ್ಪಲ್ಲವೇ ಅಲ್ಲ. ಅದು ಭಾಷಾ ಸೊಗಡು.
*ಇನ್ನು ಲಿಪಿ ಎಲ್ಲ ಕಡೆ ಒಂದೇ ಆಗಿರುವುದರಿಂದ ಬರವಣಿಗೆಯಲ್ಲಿ ಅಂತಹ ವ್ಯತ್ಯಾಸಗಳೇನು ಆಗುವುದಿಲ್ಲ.
ಒಂದಷ್ಟು ಉದಾಹರಣೆಗಳು
ಮಂಗಳೂರು ಅಥವಾ ಕರಾವಳಿ ಕಡೆ ಹೋದರೆ 'ಯಂತ ಮರಾಯ, ಯಂತ ಮಾಡುದೀಗಾ' ಅಂದ್ರೆ ಯಂತ ಅಲ್ಲ ಕಣೋ ಏನು ಮಾಡೋದು ಅಂತ ಕೇಳು ಭಾಷೆ ಬರದವ್ನೆ ಅಂತ ಬೈಯ್ಯೋಕಾಗುತ್ತಾ..?
ಕುಂದಪ್ರಾ ಭಾಷೆ ಬೆಂಗಳೂರಿನ ಭಾಷೆಗೆ ಸಂಪೂರ್ಣ ಭಿನ್ನವಾದ ಸೊಗಡಿಂದ ಕೂಡಿದೆ. 'ಸಂತಿಗ್ ಹ್ವಾಯ್ಕ್' ಅನ್ನೋದ್ನ ಸಂತೆಗೆ ಹೋಗ್ತಿನಿ ಅಂತ ತಿದ್ದಿ ಹೇಳಿದ್ರೆ ಅಂದ್ರೆ ಭಾಷಾ ವಿದ್ವಾಂಸ್ರಾಗ್ತಿವ.
ಕೋಲಾರದವ್ರು 'ಮಾಡಿದಿವಿ' ಅನ್ನೋದ್ರು ಬದ್ಲು 'ಮಾಡಿದಿರಿ' ಅಂತಾನೇ ಹೇಳ್ತಾರೆ. ಊಟ ಮಾಡಿದ್ರಾ ಅನ್ನೋಕೆ ಊಟ್ಗಳು ಅಂತಾರೆ. ವ್ಯಾಕರಣ ಓದ್ಕೊಂಡ್ ಬಂದು ಇದುನ್ನ ತಪ್ಪು ಅಂತಿರಾ.

ಇಂತಹ ಅದೆಷ್ಟೋ ಉದಾಹರಣೆಗಳು ಸಿಕ್ತವೆ. ಭಾಷೆಯ ಮೂಲ ಶಬ್ದ ಆಗಿರುತ್ತೋ ಹೊರತು ವ್ಯಾಕರಣ ಅಥವಾ ಸ್ವರ ವ್ಯಂಜನಗಳಾಗಿರೋದಿಲ್ಲ. ಅಲ್ಲವಾ..?

 ಶರತ್ ಚಕ್ರವರ್ತಿ





Thursday, August 7, 2014

"..... ನಾನು ಸಾಮಾನ್ಯನಲ್ಲಿ, ಸಾಮಾನ್ಯವ್ಯಕ್ತಿಯಾಗಿ ಬದುಕಬೇಕು...." - ನಾಗೇಶ ಸೂರ್ಯ

ನೀವು “ಲೂಸಿಯ” ಸಿನಿಮಾ ನೋಡಿದ್ದೀರಾ??? ಚಿತ್ರದ ಕೊನೆಯಲ್ಲಿ ಒಂದು ದೃಶ್ಯವಿದೆ. ನಾಯಕ ಒಬ್ಬ ಸ್ಟಾರ್ ನಟ, ಚಾನಲ್ ಒಂದಕ್ಕೆ ಸಂದರ್ಶನ ನೀಡುತ್ತಿದ್ದಾನೆ. ಸಂದರ್ಶಕ ಕೇಳುತ್ತಾನೆ ನಿಮ್ಮ ಕನಸುಗಳೇನು ಅಂತ??? ಆ ನಟ.... ನಾನು ಸಾಮಾನ್ಯನಲ್ಲಿ, ಸಾಮಾನ್ಯವ್ಯಕ್ತಿಯಾಗಿ ಬದುಕಬೇಕು. ನನಗೆ ಜನರುಗಳ ಮಧ್ಯೆ ಕಳೆದುಹೋಗಬೇಕೆನ್ನೋ ಆಸೆ, ರೋಡ್ನಲ್ಲಿ ಪಾನಿಪುರಿ ತಿನ್ನೋ ಆಸೆ, ಬಸ್ ಸ್ಟಾಂಡ್ ನಲ್ಲಿ ಬಸ್ ಗಾಗಿ ಕಾಯೋ ಆಸೆ ಅನ್ನುತ್ತಾನೆ. ಒಳ ಮನಸ್ಸಿನಿಂದ ಆಲಿಸಿದಾಗ ನಿಜಕ್ಕೂ ಅವನ ಮಾತುಗಳು ನಮಗೆ ಆಶ್ಚರ್ಯವೆನಿಸುತ್ತದೆ. ಸಾಮಾನ್ಯ ವ್ಯಕ್ತಿಯಾಗಿದಾಗ ದೊಡ್ಡ, ದೊಡ್ಡ ಕನಸ್ಸುಗಳನ್ನ, ಆಸೆಗಳನ್ನ ಕಾಣುವ ಇವರು ದೊಡ್ಡ ವ್ಯಕ್ತಿಗಳಾದ ಮೇಲೆ ಯಾಕೋ ಚಿಕ್ಕ, ಚಿಕ್ಕ ಕನಸು ಕಾಣುತ್ತಾರೆ!!! ಮತ್ತು ಅದರಲ್ಲೇ ಸುಖವನ್ನ ಹುಡುಕಲು ಬಯಸುತ್ತಾರೆ. ಅದಕ್ಕೆ ಏನೋ ಅಡಿಗರು ಹೇಳಿರೋದು “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” ಅಂತ. ಇದು ಇವರೊಬ್ಬರ ಕಥೆಯಲ್ಲ. ನಮ್ಮ ಸಿನಿಮಾದಲ್ಲಿದ್ದು ದೊಡ್ಡ ವ್ಯಕ್ತಿಗಳಾಗಿರೋ ಇನ್ನೂ ಅನೇಕರು ಈ ರೀತಿಯ ಚಿಕ್ಕ, ಚಿಕ್ಕ ಆಸೆಗಳನ್ನ ಕಂಡು ಆ ಆಸೆಗಳನ್ನ ನೆರವೇರಿಸಿಕೊಳ್ಳಲು ಕಷ್ಟ ಪಟ್ಟಿದ್ದಾರೆ ಮತ್ತು ಪಡುತ್ತಲೇ ಇದ್ದಾರೆ.
ಜೀವನದಲ್ಲಿ ಕಷ್ಟಪಟ್ಟು ಒಂದೊಂದೇ ಮೆಟ್ಟಿಲು ಮೇಲೇರಿ ಯಶಸ್ಸು, ಹಣ, ಕೀರ್ತಿ ಎಲ್ಲವನ್ನೂ ಪಡೆದ ನನ್ನ ಗುರು ನಾಗತಿಹಳ್ಳಿ ಚಂದ್ರಶೇಖರ ರವರು ನಾನು ಒಮ್ಮೆ ಅವರ ಊರಿಗೆ ಹೋಗಿ ವಾಪಸ್ಸು ಬರುವಾಗ ರೋಡ್ ಒಂದರಲ್ಲಿ ಗಂಡ ಹೆಂಡತಿ ಶೆಟಲ್ ಕಾಕ್ ಆಡುತ್ತಿರುವುದನ್ನ ನೋಡಿ, ನಾನು ಆ ರೀತಿ ಹೆಂಡತಿ ಜೊತೆ ಆರಮಾಗಿ ಶೆಟ್ಟಲ್ ಕಾಕ್ ಆಡುವ ಆಸೆ ಕಣಯ್ಯ. ಆದರೆ ಏನು ಮಾಡೋದು ಸಾಧ್ಯವಾಗುವುದಿಲ್ಲವೇ??? ಅಂತ ಹೇಳಿ ನೊಂದುಕೊಂಡರು. ದೇಶ ಸುತ್ತಿ ಕೋಶ ಓದಿರೋ ನನ್ನ ಗುರುಗಳಿಗೆ ಇಷ್ಟು ಚಿಕ್ಕ ಆಸೆ ನೆರವೇರಿಸಿಕೊಳ್ಳಲು ಕಷ್ಟನಾ??? ಮನಸ್ಸಿನಲ್ಲೇ ಪ್ರಶ್ನೆ ಕಾಡಲಾರಂಭಿಸಿತು. ವಿಚಿತ್ರ ಅಂದ್ರೆ ಅವರ ಆಸೆ ಈವರೆಗೆ ನೆರವೇರಲು ಸಾಧ್ಯವಾಗಿಲ್ಲ.
ತನ್ನ ಜೀವನದಲ್ಲಿ ಅಂದುಕೊಂಡಿದ್ದಕ್ಕಿಂತ ಸಾವಿರ ಪಟ್ಟು ಹೆಚ್ಚು ಪಡೆದ ಸೂಪರ್ ಸ್ಟಾರ್ ರಜನಿಕಾಂತ್ ರವರಿಗೆ ಮಟ ಮಟ ಮಧ್ಯಾಹ್ನ ಆರಮಾಗಿ ಪಾರ್ಕ್ ನಲ್ಲಿ ಮಲಗಬೇಕೆನ್ನೋ ವಿಚಿತ್ರ ಆಸೆಯಿತ್ತು. ಅದನ್ನ ಅವರೊಮ್ಮೆ ಎಫ್.ಎಮ್ ನಲ್ಲಿ ಹೇಳಿಕೊಂಡಿದ್ದರು. ಒಂದೆರಡು ಸಿನಿಮಾಗಳು ಹಿಟ್ಟಾದ ನಟನೇ ರೋಡ್ ನಲ್ಲಿ ನೆಡೆದಾಡಿದರೆ ಮುತ್ತಿಕೊಳ್ಳುವ ಈ ಕಾಲದಲ್ಲಿ ಅಷ್ಟು ದೊಡ್ಡ ನಟ ಬಂದರೆ ಸುಮ್ಮನಿರುತ್ತಾರಾ??? ಏನು ಮಾಡಬೇಕೆಂದು ತಿಳಿಯದೆ ಎಷ್ಟೋ ವರ್ಷಗಳ ಕಾಲ ಅವರ ಆಸೆ ಹಾಗೆ ಉಳಿದಿತ್ತು. ಕೊನೆಗೆ ಮಾರು ವೇಷದಲ್ಲಿ ಬಂದು ಪಾರ್ಕ್ ನಲ್ಲಿ ಮಲಗಿ ಅವರ ಆಸೆ ನೆರವೇರಿಸಿಕೊಂಡರು.
ಇನ್ನೂ ತನ್ನ ಜೀವಿತಾವಧಿಯಲ್ಲಿ ಎಂದು ತೆರೆಯ ಮೇಲೆ ಸಿಗರೇಟು ಸೇದಿ ಅಭಿನಯಿಸದ ಮೇರು ನಟರೊಬ್ಬರಿಗೆ ನಿಜ ಜೀವನದಲ್ಲಿ ಸಿಗರೇಟು ಸೆದೋ ಅಭ್ಯಾಸವಿತ್ತು (ಯಾವಾಗಲು ಅಲ್ಲ ಆಗೊಮ್ಮೆ, ಈಗೊಮ್ಮೆ). ತನ್ನ ಮನೆಗೆ ಸ್ಕ್ರಿಪ್ಟ್ ಕೆಲಸಕ್ಕೆ ಬರುವ ಬರಹಗಾರರು ಬಿಡುವಿನ ವೇಳೆಯಲ್ಲಿ ಸಿಗರೇಟು ಸೇದುತ್ತಿದ್ದರೆ ನನಗೂ ಒಂದ್ ಕೊಡಿ ಜಮಾಯಿಸ್ಬಿಡ್ತೀನಿ ಅಂತ ಪ್ರೀತಿಯಿಂದ ಕೇಳಿ ಪಡೆದು ಎಲ್ಲೋ ಮೂಲೆಯಲ್ಲಿ ನಿಂತು ಯಾರಿಗೂ ಕಾಣದಾಗೆ ಸೇದುತ್ತಿದ್ದರು. ಆಮೇಲೆ ಬಂದು ನೋಡ್ರಿ ದೇವರು ನನಗೆ ಯಶಸ್ಸು, ಕೀರ್ತಿ, ಹಣ ಎಲ್ಲ ಕೊಟ್ಟಿದ್ರು ಈ ಒಂದ್ ಚಿಕ್ಕ ಆಸೆಯನ್ನ ನೆರವೇರಿಸಿಕೊಳ್ಳೋಕ್ಕೆ ಎಷ್ಟು ಕಷ್ಟ ಪಡ್ತೀನಿ ಅಂತ ಮಗುವಿನಂತೆ ಕೇಳುತ್ತಿದ್ದರು. ಅವರಿಗಿದ್ದ ಜನಮನ್ನಣೆ, ಸ್ಟಾರ್ ವ್ಯಾಲ್ಯು ಕದ್ದು ಸೇದುವಂತೆ ಮಾಡುತ್ತಿತ್ತು.
80ರ ದಶಕದಲ್ಲಿ ನಾಯಕನ ಸರಿಸಮನಾಗಿ ಸ್ಟಾರ್ ವ್ಯಾಲ್ಯು ಹೊಂದಿದ್ದ ಕೆ. ಬಾಲ ಚಂದರ್ ರವರಿಗೆ ರೋಡ್ನಲ್ಲಿ ಕೊನ್ ಐಸ್ಕ್ರೀಮ್ ತಿನ್ನಬೇಕೆನ್ನೋ ಆಸೆ ತುಂಬ ಇತ್ತು. ದಕ್ಷಿಣ ಭಾರತದಲ್ಲೇ ಹೆಸರುಮಾಡಿದ್ದ ಅವರಿಗೆ ಎಲ್ಲಿ ಹೋದರೂ ಅಭಿಮಾನಿಗಳು, ಅದರಲ್ಲೂ ಬೆಂಬಿಡದೆ ಅವಕಾಶ ಕೇಳೋ ಕಲಾವಿದರ ಕಾಟದಿಂದ ಎಲ್ಲಿಯೂ ಈ ಆಸೆ ನೆರವೇರಿಸಿಕೊಳ್ಳಲಾಗಿರಲಿಲ್ಲ. ಕೊನೆಗೆ ಕಮಲಾಸನ್ ಮತ್ತು ರಜನಿಕಾಂತ್ ಅಭಿನಯದ “ನಿನೈತಾಲೇ ಇನಿಕ್ಯುಂ” ಚಿತ್ರದ ಶೂಟಿಂಗ್ಗೆಂದು ಸಿಂಗಾಪುರ್ ಗೆ ಬಂದಾಗ ಖುಷಿಯಿಂದ ಕೊನ್ ಐಸ್ಕ್ರೀಮ್ ತಂದು ರೋಡ್ ನಲ್ಲಿ ಇನ್ನೇನು ತಿನ್ನಬೇಕೆನ್ನುವಷ್ಟರಲ್ಲಿ ಹಿಂದೆಯಿಂದ ಬಂದ ವ್ಯಕ್ತಿಯೊಬ್ಬ ಸಾರ್ ನಾನು ನಿಮ್ಮ ಅಭಿಮಾನಿ ಒಂದೇ ಒಂದು ನಿಮ್ ಸಿನಿಮಾದಲ್ಲಿ ಛಾನ್ಸ್ ಕೊಡಿ ಸಾರ್ ಅಂತ ಕೇಳಿ ಕಾಟ ಕೊಟ್ಟಿದ್ನಂತೆ. ಕೋಪ ಬಂದು ಐಸ್ಕ್ರೀಮ್ ಅಲ್ಲೇ ಬಿಸಾಕಿ ಹೊರಟುಹೋದರಂತೆ ಬಾಲ ಚಂದರ್ ರವರು.
ನೋಡಿ ಭಾರತದಂತಹ ವೈವಿಧ್ಯಮಯ ರಾಷ್ಟ್ರದಲ್ಲಿರೋ ನಾವು ಸೆಲೆಬ್ರಿಟೀಗಳಿಗೆ ಕೊಡುವಷ್ಟು Importance ಇನ್ನಾರಿಗೂ ಕೊಡುವುದಿಲ್ಲ. ಅದು ಸಿನಿಮವೇ ಆಗಿರಬಹುದು, ಕ್ರೀಡೆಯೇ ಆಗಿರಬಹುದು ಅಥವಾ ರಾಜಕಾರಣವೇ ಆಗಿರಬಹುದು. ಈ ಯಾವುದೇ ಕ್ಷೇತ್ರದಲ್ಲಿ ಒಮ್ಮೆ ಹೆಸರು ಮಾಡಿದರೆ ಸಾಕು ಅವರನ್ನ ನಾವು ನೋಡುವ ದೃಷ್ಟಿಕೋನವೇ ಬದಲಾಗಿರುತ್ತದೆ. ಅವರು ನಮ್ಮಂತಯೇ ಸಾಮಾನ್ಯ ವ್ಯಕ್ತಿಗಳು ಅಂದುಕೊಳ್ಳುವುದೇ ಇಲ್ಲ ನಾವು. ಇನ್ನೂ ಇದಕ್ಕೆ ಮೀರಿ ಕೆಲವು ಸೆಲೆಬ್ರಿಟೀಗಳು ನಮ್ಮಂತೆಯೇ ಸಾಮಾನ್ಯವಾಗಿ ಓಡಾಡಿಕೊಂಡಿದ್ದರೆ ಅವರನ್ನ ಮುತ್ತಿಕೊಂಡು, ಚಿತ್ರವಿಚಿತ್ರ ಪ್ರಶ್ನೆಕೇಳಿ, ಅವರ ಸ್ವತಂತ್ರ ಹರಣ ಮಾಡಿ ಮತ್ತೆ ಇನ್ನೆಂದೂ ಓಡಾಡದಂತೆ ಮಾಡಿಬಿಡುತ್ತೇವೆ.

ಈಗ ಹೇಳಿ ಹೆಂಡತಿ ಜೊತೆ ಶೆಟಲ್ ಕಾಕ್ ಆಡೋದು, ಪರ್ಕ್ನಲ್ಲಿ ನೆಮ್ಮದಿಯಾಗಿ ಮಲಗೋದು, ಸಿಗರೇಟು ಸೆದೋದು, ರೋಡ್ ನಲ್ಲಿ ಕೊನ್ ಐಸ್ಕ್ರೀಮ್ ತಿನ್ನೋದು ನಿಮಗೆ ದೊಡ್ಡ ಆಸೆಗಳು ಅನಿಸುತ್ತಾ!!! ದೊಡ್ಡ, ದೊಡ್ಡ ಕನಸುಗಳ ಬೆನ್ನತ್ತುವ ಬರಾಟೆಯಲ್ಲಿ ನಾವು ಚಿಕ್ಕ, ಚಿಕ್ಕ ಸಂತೋಷಗಳನ್ನ ಕಳೆದುಕೊಳ್ಳಬೇಕಾಗುತ್ತೆ. ಇದೇ ಜಗದ ನಿಯಮ. ಇವರನೆಲ್ಲಾ ನೋಡಿದರೆ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನನ್ನ ಗೆಳೆಯ ಹೇಳಿದ ಮಾತು ನೆನಪಾಗುತ್ತಿದೆ  “Never hurry to get famous because once you are famous you will definitely regret it” ಅಂತ. ಎಂಥ ವಿಚಿತ್ರ ಅಲ್ವಾ!!!


Tuesday, July 22, 2014

ಸಂದರ್ಶನ - ತಾರಾ ಶೈಲೇಂದ್ರ

ತಾರಾ ಶೈಲೇಂದ್ರ ಅವರು ನಡೆಸಿದ ಜಯಂತ ಕಾಯ್ಕಿಣಿ ಅವರ ಸಂದರ್ಶನದ ಒಂದು ಆಯ್ದ ಭಾಗ. ಪೂರ್ತಿ ಓದಿಗೆ ಈ ಲಿಂಕ್ ಕ್ಲಿಕ್ಕಿಸಿ...
http://taraantaranga.blogspot.in/2014/06/blog-post.html

ಪ್ರಶ್ನೆ : ತಾವು ಮೂಲತಃ Biochemist ಆಗಿದ್ದು , ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದು ಹೇಗೆ ?
ಉತ್ತರ : ವಿಜ್ಞಾನ ಹಾಗೂ ಸಾಹಿತ್ಯ ಬೇರೆ ಎಂಬ ಕಲ್ಪನೆ ತಪ್ಪು .
ಕುವೆಂಪು ಅವರು QUANTUM PHYSICS ಓದಿದವರು .
ಬೇಂದ್ರೆಯವರ ಗ್ರಂಥಾಲಯದ ೧೩,೦೦೦ ಪುಸ್ತಕಗಳಲ್ಲಿ ೧೦,೦೦೦ ವಿಜ್ಞಾನಕ್ಕೆ ಸಂಬಂಧಿಸಿದವು .
ಯಶವಂತ್ ಚಿತ್ತಾಲರು ಒಬ್ಬ Polymer Chemist.
ಪೂರ್ಣಚಂದ್ರ ತೇಜಸ್ವಿಯವರು ಒಬ್ಬ ಸಸ್ಯಶಾಸ್ತ್ರಜ್ಞರು
ಕಾರಂತರು ನಡೆದಾಡುವ ವಿಜ್ಞಾನ ವಿಶ್ವಕೋಶ ಎನಿಸಿಕೊಂಡವರು
ನಿಸಾರ್ ಅಹ್ಮದ್ ಅವರು Geologist ಆಗಿದ್ದವರು .
ನಾವು ಮಕ್ಕಳಲ್ಲಿ ವಿಜ್ಞಾನ ಓದಿದವ ಬುದ್ಧಿವಂತ , ಕಲೆ ಓದಿದವ ದಡ್ಡ ಎಂಬ ತಪ್ಪು ಅಭಿಪ್ರಾಯ ಬೆಳೆಸಿ, ದಾರಿ ತಪ್ಪಿಸಿದ್ದೇವೆ. ವಿಜ್ಞಾನ ಮತ್ತು ಕಲೆ ಎರಡೂ ಒಂದಕ್ಕೊಂದು ಪೂರಕವಾಗಿರಬೇಕು.

Wednesday, July 16, 2014

ಅಮ್ಮ- ಸ್ಮತಿ ಶ್ರೀ


ಸುದ್ದಿಗುದ್ದುbyPHD‬ - P Harish Dixit Marathe,

ಮಹಿಳೆಯರ ಹಿತ ಕಾಯಲು ಸರ್ಕಾರ ವಿಫಲ - ಶಾಸಕ ಆರ್.ಅಶೋಕ್.
.
ಸರ್ಕಾರ ವಿಫಲವಾದರೇನು, ದೇವರಿಲ್ಲವೇ?
ರಾಜ್ಯದ ಕರೆಂಟನ್ನು ತೆಗೆದ ದೇವರಿಗೆ ಅತ್ಯಾಚಾರ ಮಾಡುವ ಗಂಡಸರ ಫ್ಯೂಸ್ ತೆಗೆಯುವುದು ಗೊತ್ತಿಲ್ಲವೇ? 

ಸುದ್ದಿಗುದ್ದುbyPHD‬ - P Harish Dixit Marathe,

ಕೂಡಗಿ ಸ್ಥಾವರವನ್ನು ಇನ್ನಷ್ಟು ಪರಿಸರ ಸ್ನೇಹಿ ಆಗಿಸಲು ''ಅಲ್ಟ್ರಾ ಮಾಡರ್ನ್ ಸೂಪರ್ ಕ್ರಿಟಿಕಲ್ ತಂತ್ರಜ್ಞಾನ'' ಅಳವಡಿಸಿಕೊಳ್ಳಲು ಸಾಧ್ಯವೇ ಎಂಬುದರ ಕುರಿತು ಪರಿಶೀಲಿಸಲಾಗುವುದು. ''ಜನ ಭಯಪಡುವ ಅಗತ್ಯವಿಲ್ಲ.'' - ಎಂ.ಬಿ. ಪಾಟೀಲ. - ಪತ್ರಿಕಾ ವರದಿ
.
ಅಲ್ಟ್ರಾ ಮಾಡರ್ನ್ ಸೂಪರ್ ಕ್ರಿಮಿನಲ್ ಏಥೂ  ಕ್ರಿಟಿಕಲ್ ...... ಈ ಪದಪುಂಜವೇ ಭಯ ಹುಟ್ಟಿಸುವಂತಿದೆಯಲ್ಲ ಸಿವಾ 

ಸುದ್ದಿಗುದ್ದುbyPHD‬ - P Harish Dixit Marathe

ಸರ್ಕಾರದ 'ಭಾಗ್ಯಲಕ್ಷ್ಮಿ' ಯೋಜನೆಯ ಫಲಾನುಭವಿಗಳಲ್ಲಿ 7814 ಮಕ್ಕಳು ಎಲ್ಲಿದ್ದಾರೆ ಎಂಬುದು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೇ ಗೊತ್ತಿಲ್ಲ ! -  ಪತ್ರಿಕಾ ವರದಿ
.
ರಸ್ತೆ ಬದಿಯಲ್ಲಿ ಒಬ್ಬ ಊದ್ದಕ್ಕೆ ಗುಂಡಿ ತೋಡ್ತಾ ಹೋಗ್ತಿದ್ನಂತೆ. ಮತ್ತೊಬ್ಬ ಮುಚ್ತಾ (ಮುಂಡಾ ಮೋಚ್ತಾ  ) ಬರ್ತಿದ್ನಂತೆ.
ಏನ್ರೋ ಇದು ಅಂತ ಕೇಳಿದ್ರೆ, ನಮ್ಮಿಬ್ರ ಮಧ್ಯ ಇನ್ನೊಬ್ಬ ಗಿಡ ನೆಡೋನು ಇರ್ಬೇಕಾಗಿತ್ತು ಸಾ, ಆದ್ರೆ ಅವ್ನಿವತ್ತು ಬಂದಿಲ್ಲ, ರಜಾ, ನಮ್ ಕೆಲ್ಸ ನಾವ್ ಮಾಡ್ತಾ ಇದೀವಿ ಸಾ ಅಂದ್ರಂತೆ ಇಬ್ರೂ.
ಹಾಗೇ, ಭಾಗ್ಯ ಕೊಟ್ಟೋರು ಭಾಗ್ಯ ತಗಂಡೋರು ಇಬ್ರೂ ಇದ್ದು ಲಕ್ಷ್ಮಿನೇ ಹುಟ್ಟಿಲ್ದಿದ್ರೆ ಈಗೇನ್ ಮಾಡೋಕಾಗತ್ತೆ! 

Thursday, July 10, 2014


ಭಾರತದ ಪ್ರಥಮ “72 ಜೀನಾಲಯ”

72 ಜೀನಾಲಯದ ಹೊರ ಆವರಣದ ಒಂದು ನೋಟ


ರಾಜಸ್ಥಾನ ರಾಜ್ಯದ  ಜಾಲೋರ ಜಿಲ್ಲೆ ಬೀನಮಾಲ್ ಬ್ಲಾಕನಲ್ಲಿ  (ತಾಲ್ಲೂಕು) ಲಕ್ಷ್ಮೀ ವಲ್ಲಭ 72 ಜೀನಾಲಯ ಇರುವುದು. ಇದು ಭಾರತ ದೇಶದ ಪ್ರಥಮ 72 ಜೀನಾಲಯವಾಗಿರುವುದು. ಬ್ಲಾಕನ ಕೇಂದ್ರ ಸ್ಥಳದಲ್ಲಿಯೇ ಈ ಮಂದಿರ ಇರುವದು. ಲುಕಡ ಪರಿವಾರದವರು ಕಟ್ಟಿಸಿರುವ ಈ ಜೀನಾಲಯದಲ್ಲಿ ಜೈನ ಧರ್ಮದ 72 ತೀರ್ಥಂಕರರ ವಿಗ್ರಹಗಳು ಇರುವುದು
72  ಜೀನಾಲಯದ ಇದರ
 ಸಂಪೂರ್ಣ ನೋಟ
ವಿಶೇಷವಾಗಿದೆ. ಜೈನ ಧರ್ಮದ ಅನುಯಾಯಿಗಳಿಗೆ ತಮ್ಮ ಎಲ್ಲಾ ತೀರ್ಥಂಕರರನ್ನು ಒಂದೇ ಮಂದಿರದಲ್ಲಿ ನೋಡುವ ಸೌಭಾಗ್ಯವನ್ನು ಈ ಜೀನಾಲಯ ಒದಗಿಸಿರುವುದು. ತನ್ನದೇ ಆದ ವಿಶಿಷ್ಠ ಅತ್ಯಂತ ಸುಂದರವಾದ ಶಿಲ್ಪ ಕಲೆಗಳಿಂದ ನಿಮೀ೯ತವಾದ ಈ ಜೈನ ದೇವಾಲಯ ಆಧುನಿಕ ಶಿಲ್ಪಕಲೆಯ ಪ್ರತಿಬಿಂಬವಾಗಿರುವುದು. ಬಿಳಿಯಾದ ಮಾರ್ಬಲಗಳಿಂದ ರಚಿತವಾದ ಈ ಮಂದಿರ ರಾಜಸ್ಥಾನದ ಒಂದು ಹೆಮ್ಮೆಯಾಗಿರುವುದು.  ಜಾಲೋರ-ಬೀನಮಾಲ ಮುಖ್ಯ ರಸ್ತೆಯ ಬದಿಯಲ್ಲಿಯೇ ಇರುವ ಇದು ದಾರಿಯಲ್ಲಿ ಸಾಗುವ ಎಲ್ಲರನ್ನು ಕೈ ಬೀಸಿ ಕರೆಯುತ್ತಿರುವುದು.
ವಿಶಾಲವಾದ ದೇವಾಲಯದ ಹೊರಗಿನ ಆವರಣ, ಜೀನಾಲಯದಲ್ಲಿ ಇರುವ ಪಾರಿವಾಳಗಳು, ಹಸಿರು ಹುಲ್ಲುಗಳು, ಸುಂದರ ಹೂವುಗಳು ಬೇವಿನ ಮರದ ಕೆಳಗಿನ ತಂಪಾದ ಗಾಳಿ ರಾಜಸ್ಥಾನದ ಊರಿ ಬಿಸಿಲಿನಲ್ಲಿಯೂ ನಾವು ಬೇರೆ ಯಾವುದೋ ಲೋಕದಲ್ಲಿರುವ ಅನುಭವವನ್ನು ನೀಡುವುದು.
ಸುಮಾರು 140 ಕೊಠಡಿಗಳ ಧರ್ಮಶಾಲೆ, ಭೋಜನಶಾಲೆ ಈ ಎಲ್ಲವೂ ಮಂದಿರದ ಆವರಣದಲ್ಲಿಯೇ ಇದ್ದು ಬರುವ ಪ್ರವಾಸಿಗರಿಗೆ ಸೇವೆಯನ್ನು ಒದಗಿಸುತ್ತಿರುವುದು.
ರಾಜಸ್ಥಾನದ ಪ್ರವಾಸಕ್ಕೆಂದು ನೀವು ಬಂದರೆ  ತಪ್ಪದೇ ಈ ದೇವಾಲಯದ ಸೌಂದರ್ಯವನ್ನು ಸವಿದೇ ಹೋಗಿರಿ. 72 ತೀರ್ಥಂಕರರನ್ನು ತಾವು ಸಹಾ ದರ್ಶನ ಮಾಡಿರಿ.


72 ಜೀನಾಲಯದ ಮುಖ್ಯ ದ್ವಾರದ 
ಒಂದು ನೋಟ

72 ಜೀನಾಲಯದ ಎರಡು 
ಬದಿಯ ನೋಟ
72 ಜೀನಾಲಯದ ಹೊರ 
ಆವರಣದ ಒಂದು ನೋಟ


- ಮುಖ್ಯ ದ್ವಾರದ ಸೌಂದರ್ಯ ಹೆಚ್ಚಿಸಿರುವ ಪಾರಿವಾಳಗಳು


                 72  ಜೀನಾಲಯದ ಇದರ ಸಂಪೂರ್ಣ ನೋಟ



ವರದಿ , ವಿವೇಕ ಬೆಟ್ಕುಳಿ,

Wednesday, July 9, 2014

ಇಳಿದು ಬಾ ತಾಯಿ ಇಳಿದು ಬಾ - ದ ರಾ ಬೇಂದ್ರೆ,

ಇಳಿದು ಬಾ ತಾಯಿ ಇಳಿದು ಬಾ || ಪ ||

ಹರನ ಜಡೆಯಿಂದ ಹರಿಯ ಅಡಿಯಿಂದ
ಋಷಿಯ ತೊಡೆಯಿಂದ ನುಸುಳಿ ಬಾ;
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ.

ನಿನಗೆ ಪೊಡಮಡುವೆ ನಿನ್ನನುಡುತೊಡುವೆ
ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ, ತಾಯಿ ಇಳಿದು ಬಾ
ಇಳಿದು ಬಾ, ತಾಯೇ ಇಳಿದು ಬಾ.

ನನ್ನ ತಲೆಯೊಳಗೆ
ನನ್ನ ಬೆಂಬಳಿಗೆ
ನನ್ನ ಒಳಕೆಳಗೆ ನುಗ್ಗಿ ಬಾ,
ಕಣ್ಣ ಕಣ ತೊಳಿಸಿ
ಉಸಿರ ಎಳೆ ಎಳಿಸಿ
ನುಡಿಯ ಸಸಿ ಮೊಳಸಿ ಹಿಗ್ಗಿ ಬಾ;
ಎದೆಯ ನೆಲೆಯಲ್ಲಿ ನೆಲೆಸಿ ಬಾ
ಜೀವ ಜಲದಲ್ಲಿ ಚಲಿಸಿ ಬಾ
ಮೂಲ ಹೊಲದಲ್ಲಿ ನೆಲೆಸಿ ಬಾ
ಇಳಿದು ಬಾ ತಾಯೇ ಇಳಿದು ಬಾ.

ಕಂಚು ಮಿಂಚಾಗಿ ತೆರಳಿ ಬಾ
ನೀರು ನೀರಾಗಿ ಉರುಳಿ ಬಾ
ಮತ್ತೆ ಹೊಡೆಮರಳಿ ಹೊರಳಿ ಬಾ,
ದಯೆಯಿರದ ದೀನ
ಹರೆಯಳಿದ ಹೀನ
ನೀರಿರದ ಮೀನ ಕರೆಕರೆವ ಬಾ
ಇಳಿದು ಬಾ ತಾಯೇ ಇಳಿದು ಬಾ.

ಕರು ಕಂಡ ಕರುಳೆ
ಮನ ಉಂಡ ಮರುಳೆ
ಉದ್ದಂಡ ಅರುಳೆ
ಸುಳಿಸುಳಿದು ಬಾ;
ಶಿವಶುಭ್ರ ಕರುಣೆ
ಅತಿಕಿಂಚದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಇಳಿದು ಬಾ ತಾಯೇ ಇಳಿದು ಬಾ.

ಕೊಳೆಯ ತೊಳೆವವರು ಇಲ್ಲ ಬಾ
ಬೇರೆ ಶಕ್ತಿಗಳ ಹೊಲ್ಲ ಬಾ
ಹೀಗೆ ಮಾಡಿದರು ಅಲ್ಲ ಬಾ
ನಾಡ ನಾಡಿಯನು ತುತ್ತ ಬಾ
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನರನು ಎತ್ತ ಬಾ.

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ!
ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ!
ಸಿರಿವಾರಿಜಾತ ವರಪಾರಿಜಾತ ತಾರಾ-ಕುಸುಮದಿಂದೆ
ವೃಂದಾರವಂದ್ಯೆ ಮಂದಾರಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ!
ಬಂದಾರೆ ಬಾರೆ ಒಂದಾರೆ ಸಾರೆ ಕಣ್ಧಾರೆ ತಡೆವರೇನೆ?
ಅವತಾರವೆಂದೆ ಎಂದಾರೆ ತಾಯಿ, ಈ ಅಧಃಪಾತವನ್ನೆ?

ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್ ದುಮ್ ಎಂದಂತೆ ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯೆ ದುಡುಕಿ ಬಾ ಇಳಿದು ಬಾ ತಾಯಿ ಇಳಿದು ಬಾ

ಹರಣ ಹೊಸದಾಗಿ ಹೊಳೆದು ಬಾ
ಬಾಳುಬೆಳಕಾಗೆ ಬೆಳೆದು ಬಾ
ಕೈ ತೊಳೆದು ಬಾ
ಮೈ ತಳೆದು ಬಾ
ಇಳೆಗಿಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯೇ ಇಳಿದು ಬಾ.

ಶಂಭು ಶಿವಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ

Monday, July 7, 2014

ವಿಶ್ವದ ಮೊದಲ ಹಡಗು ಮಂದಿರ - ವರದಿ * ವಿವೇಕ ಬೆಟ್ಕುಳಿ

ರಾಜಸ್ಥಾನ ರಾಜ್ಯದ ಜಾಲೋರ ಜಿಲ್ಲೆಯಲ್ಲಿ ಬರುವ ಜಿಲ್ಲೆಯ ಸಾಯಲಾ ಬ್ಲಾಕನ ಮಂಡವಾಲಾ ಗ್ರಾಮದಲ್ಲಿ ವಿಶ್ವದ ಪ್ರಥಮ ಹಡಗು ಮಂದಿರವಿರುವುದು. ಜಾಲೋರದಿಂದ 20-22 ಕಿ. ಮೀ ದೂರವಿರುವ ಜೈನ ಮಂದಿರವನ್ನು  ಜಹಾಜ್ ಮಂದಿರವೆಂದೆ ಕರೆಯುವರು. ಜಹಾಜ್ ಎಂದರೆ ಹಡಗು ಎಂದರ್ಥ.

             ಹಡಗು ಮಂದಿರದ ಒಂದು ನೋಟ

ಶ್ರೀ ಕಾಂತಿಸಾಗರಸೂರಿ ಸ್ಮಾರಕ ಟ್ರಸ್ಟನವರು ನಿಮಿ೯ಸಿರುವ ಮಂದಿರ ತನ್ನದೇ ಆದ ವಿಶೇಷತೆಯನ್ನು ಹಂದಿರುವುದುಕ್ರಿ. 1992 ರಲ್ಲಿ ಕಟ್ಟಲ್ಪಟ್ಟ   ಜೈನ ಮಂದಿರ ಮಾರ್ಬಲನಿಂದ ನಿಮಿ೯ತವಾಗಿರುವುದು. ಮಂದಿರದ ಒಳಗೆ ಬಳಕೆ ಮಾಡಿರುವ ಎಲ್ಲಾ ಸಾಮಗ್ರಿಗಳು ತಳ ತಳ ಹೊಳುಯುವಂತಹ ಸಾಮಗ್ರಿಯಾಗಿದೆ. ಸಂಪೂರ್ಣ ಮಂದಿರ ಶ್ರೀಮಂತಿಕೆಯಿಂದ ತುಂಬಿ ತಳ ತಳಸಿರುವುದು.  ಪುರಾಣ ಕಾಲದ ಮಂದಿರಗಳನ್ನು ನೋಡುತ್ತಾ ಅವುಗಳನ್ನು ವಣಿ೯ಸುತ್ತಾ ಇತಿಹಾಸ ಕೆದಕುತ್ತಾ ಇರುವ ನಾವು ಆಧುನಿಕ ಯುಗದಲ್ಲಿ ಹೆಚ್ಚು ವೈಭವೋಪ್ರೇರಿತ ಮಂದಿರಗಳನ್ನು ನಿಮಿ೯ಸಿರುವುದು ಕಡಿಮೆ ಇರುವುದುಇಂತಹ ಸಂದರ್ಭದಲ್ಲಿ ಜೈನ ಸಮುದಾಯವರು ನಿಮಿ೯ಸಿರುವ ಹಡಗು ಮಂದಿರ ಎಲ್ಲರ ಆಕರ್ಷಣೆಯ ಬಿಂದುವಾಗಿರುವುದುಮುಂದೆ ಇದು ಜೈನ ಧರ್ಮದ ಇತಿಹಾಸ ಆಗುವುದರಲ್ಲಿ ಯಾವ ಸಂದೇಹವು ಇಲ್ಲ.
ದೇವಾಲಯದ ಹೆಸರೆ ಹೇಳುವಂತೆ ಇದು ಹಡಗು ಮಂದಿರ. ದೂರದಿಂದ ನೋಡಿದಾಗ ದೊಡ್ಡದಾದ ಹಡಗು ಬಂದರಿನಲ್ಲಿ ಬಂದು ನಿಂತಂತೆ ಕಾಣುವುದು. ರಾತ್ರಿಯಲ್ಲಿ ನೋಡಿದಾಗ ಇದು ದೇವಾಲಯ ಎಂದು ಹೇಳಲು ಬಾಯಿ ಬರದು ಬದಲಾಗಿ ಸಮುದ್ರದಲ್ಲಿ ನಿಂತಿರುವ ಹಡಗಾಗಿರುವುದು.
ಹಡಗು ಮಂದಿರದ ಒಳಗೆ ತಳ ತಳಿಸುವ ಮಾಬ್ರಲ್, ವಿವಿಧ ಕಲ್ಲುಗಳು, ಅಗತ್ಯಕ್ಕೆ ತಕ್ಕ ಲೈಟ್ ವ್ಯವಸ್ಥೆ ಎಲ್ಲವು ಮಂದಿರದ ಸೌಂಧರ್ಯವನ್ನು ಇಮ್ಮಡಿಗೊಳಿಸಿರುವುದು.
ರಾಜಸ್ಥಾನದ ಪ್ರಮಾಸಕ್ಕಾಗಿ ತಾವುಗಳು ಬಂದರೆ ಮಂದಿರವು ಸಹಾ ನಿಮ್ಮ ಯೋಜನೆಯಲ್ಲಿರಲಿ. ಇಲ್ಲಿ ತಮಗೆ ಬೇಕಾದ ವಸತಿ ಮತ್ತು ಊಟದ ವ್ಯವಸ್ಥೆಯೂ ಇರುವುದು.

ಹಡಗು ಮಂದಿರದ ರಾತ್ರಿಯ ಒಂದು ನೋಟ

                   ಮಂದಿರದಲ್ಲಿ ಇರುವ  ಪ್ರತಿಮೆ


ಮಂದಿರದ ಒಳಗಿನ ತಳ ತಳಿಸುವ ಕಂಬಗಳ ಸಾಲು

ಇಲ್ಲಿ ಕಾಣಿಕೆ ಹಾಕುವುದು ಹಡಗಿನಲ್ಲಿಯೇ ಆಗಿರುವುದು

                       ಮಂದಿರದ ಮೇಲ್ಭಾಗದ ಒಂದು ನೋಟ





                                                                                                                              ವಿವೇಕ ಬೆಟ್ಕುಳಿ