ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, November 13, 2017

ಪ್ರದ್ಯುಮ್ನನ ಕೊಲೆಯಂಥ ಘಟನೆಗಳಿಗೆ ಕೊನೆ ಎಂದು?

“ಶೈಕ್ಷಣಿಕ ವ್ಯವಸ್ಥೆಯ ಲೋಪಕ್ಕೆ ಇನ್ನೊಂದು ಬಲಿ- ಪ್ರದ್ಯುಮ್ನನ ಕೊಲೆ”

 ದೇಶದ ಆಡಳಿತದ ಕೇಂದ್ರ ಸ್ಥಾನ ದೆಹೆಲಿಯ ಸಮೀಪದಲ್ಲೇ  ಗುಗಾ೯೦ (ಗುರುಗ್ರಾಮ) ಇರುವುದು. ಇಲ್ಲಿನ  ರೆಯಾನ ಇಂಟರ ನ್ಯಾಷ್ಯನಲ್ ಸ್ಕೂಲ್ ನಲ್ಲಿ 7 ವರ್ಷದ ಬಾಲಕ ಪ್ರದ್ಯುಮನ ಕೊಲೆ  ನಡೆದು 2 ತಿಂಗಳು ಗತಿಸಿರುವುದು. ಶಾಲೆಯಲ್ಲಿ ನಡೆದ ಬಾಲಕನ ಕೊಲೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪಾಲಕರಲ್ಲಿ ಆತಂಕವನ್ನು ಸ್ವೃಷ್ಠಿ ಮಾಡಿರುವುದು.
7 ವರ್ಷದ ಬಾಲಕನನ್ನು ಕೊಲೆ ಮಾಡಿದವರಾರು? ಪ್ರಾರಂಭದಲ್ಲಿ ಶಾಲೆಯ ಬಸ್ ಕಂಡಕ್ಟರ್  ಅಶೋಕನ ಮೇಲೆ ಆಪಾದನೆ, ಬಂಧನ ಆಯ್ತು, ಸಿಬಿಐ ತನಿಖೆಯ ನಂತರ ಅದೇ ಶಾಲೆಯ 11 ನೇತರಗತಿಯ ವಿದ್ಯಾಥಿ೯ಯೇ ಕೊಲೆಗಾರ ಎಂದು ತಿಳಿದು ಬಂದಿರುವುದು. ಕೊಲೆಗೆ ಕಾರಣ ಪರೀಕ್ಷೆಯನ್ನು ಮುಂದುಡುವುದೇ ಆಗಿರುವುದುಚಿಕ್ಕ ಕಾರಣಕ್ಕಾಗಿ ಕೊಲೆಯ ಅಗತ್ಯ ಏನಿತ್ತು? ಅದೂ 7 ವರ್ಷದ ಮುಗ್ದ ಬಾಲಕನನ್ನು ಕೊಲೆ ಮಾಡುವ ಅಗತ್ಯವಿತ್ತೇ? ಕೊಲೆ ಮಾಡಿದ ವಿದ್ಯಾಥಿ೯ ಮಾನಸಿಕವಾಗಿ ಖಿನ್ನನ್ನಾಗಿದ್ದನೆಕೊಲೆಗಾರನನ್ನು ಬಾಲ ಅಪರಾಧಿ ಎಂದು ಪರಿಗಣಿಸದೇ ಜೀವಾವಧಿ ಶಿಕ್ಷೆ ನೀಡಬೇಕೆಂಬ ಆಗ್ರಹ, ಶಾಲೆಯ ಆಡಳಿತವನ್ನು ಕೆಲವು ದಿನ ತಾವೇ ತೆಗೆದುಕೊಳ್ಳುವೆವು ಎಂಬ ಕಾ೯ರದ ನಿಧಾ೯, ರೀತಿಯಾಗಿ ಹತ್ತು ಹಲವಾರು ರೀತಿಯಲ್ಲಿ ಚೆ೯ಗಳು ಸದ್ಯದಲ್ಲಿ ಚಾಲ್ತಿಯಲ್ಲಿರುವುದು.
ಆದರೇ ಯಾವ ಕಾರಣಕ್ಕಾಗಿ ಮಗುವಿನ ಕೊಲೆಯಾಯಿತು? ಪರೀಕ್ಷೆ ಎಂಬ ಭಯ ಮಕ್ಕಳನ್ನು ಕೊಲೆ ಮಾಡುವಂತಹ ಕೃತ್ಯಕ್ಕೂ ಉತ್ತೇಜನ ನೀಡುವುದು ಎಂದಾದರೇ ಅಂತಹ ಮೌಲ್ಯಮಾಪನದ ಅಗತ್ಯ ಇದೇಯಾ? ತನ್ನದೇ ಶಾಲೆಯಲ್ಲಿ ಓದುತ್ತಿರುವ ಮಗುವನ್ನು ಕೊಂದಾದರೂ ಕೆಲವು ದಿನ ಪರೀಕ್ಷೆಯ ಭಯದಿಂದ ದೂರ ವಿರಬಹುದು ಎಂದು ಒಬ್ಬ ಬಾಲಕ ಆಲೋಚಿಸುವನು ಎಂದಾದರೇ, ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವ ಅಗತ್ಯವಿದೆ.
ಶಿಕ್ಷಣ ನೈತಿಕತೆಯನ್ನು ಕಲಿಸುವುದು, ಉತ್ತಮ ನಾಗರಿಕನನ್ನಾಗಿ ರೂಪಿಸುವುದು, ಶಿಕ್ಷಣ ಇಲ್ಲದ ಮನುಷ್ಯ ಪಶುವಿಗೆ ಸಮಾನ ಎಲ್ಲಾ ಶಿಕ್ಷಣಕ್ಕೆ ಸಂಭದಿಸಿದ ವಾಕ್ಯಗಳನ್ನು ಹೇಳುತ್ತಾ ನಾವು ಶಾಲೆಯಲ್ಲಿ ಏನು ಕಲಿಸುತ್ತಿರುವೆವು?                               ನಿಜವಾಗಿ ಶಾಲೆ ಉತ್ತಮ ಪ್ರಜೆಯನ್ನು ತಯಾರಿಸುತ್ತಾಇದೆಯಾ?               
 ಮಕ್ಕಳು ಶಾಲೆಗೆ ಹೋಗುವಾಗ, ಪರೀಕ್ಷೆ ಬರೆಯುವಾಗ ಭಯ ಪಡುವುದು ಯಾಕೆ?                                                       ಶಿಕ್ಷಕರ ಮೇಲೆ ಉತ್ತಮ ಫಲಿತಾಂಶದ ಒತ್ತಡ ಎಲ್ಲಿಂದ ಬರುತ್ತಿದೆ?                                                                           ಸಾಮಾಜಿಕ ಸೇವೆಯಲ್ಲಿ ಒಂದಾದ ಶಿಕ್ಷಣ ಕ್ಷೇತ್ರ ಇಂದು ವ್ಯಾಪ್ಯಾರಿ ಕ್ಷೇತ್ರವಾಗಿ ಪರಿವರ್ತನೆ ಆಗಲು ಕಾರಣವೇನು?
ಎಲ್ಲಾ  ಪ್ರಶ್ನೆಗಳಿಗೆ ನಾವು ಉತ್ತರವನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಇಂತಹ ಪ್ರಯತ್ನಗಳನ್ನು ಆಂದೋಲನದ ರೀತಿಯಲ್ಲಿ ಮಾಡಿ ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನೇ ವಿಮಶೆ೯ಗೆ ಒಳಪಡಿಸಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು, ಪಾಲಕರು, ಶಿಕ್ಷಕರು ಆಡಳಿತ ಮಂಡಳಿಯವರು ಎಲ್ಲರ ಒಂದೇ ಗುರಿ 100% ಉತ್ತಮ ಫಲಿತಾಂಶ ಬರಬೇಕು ಕಾರಣಕ್ಕಾಗಿಯೇ ಒಬ್ಬರು ಇನ್ನೊಬ್ಬರ ಮೇಲೆ ಒತ್ತಡ ಹಾಕುತ್ತಾ ಇರುವರು. ಎಲ್ಲದಕ್ಕೂ ಮೂಲ sಕಾರಣ ನಮ್ಮ ಮೌಲ್ಯಮಾಪನ ಪದ್ದತಿಯೇ ಆಗಿರುವುದುದುರಾದೃಷ್ಠವಶಾತ್ ನಮ್ಮ ಸಮಾಜದಲ್ಲಿ ಮೌಲ್ಯಮಾಪನ ಪದ್ದತಿಯ ಮೇಲೆ ಹೆಚ್ಚಿನ ವ್ಯವಸ್ಥೆ ರೂಪುಗೊಂಡಿರುವುದು.
ಮೌಲ್ಯಮಾಪನ ಪದ್ದತಿಯನ್ನು ಬದಲಾಯಿಸದೇ, ಸಿಲೆಬಸ್ ಬದಲಾವಣೆ, ಶಿಕ್ಷಕರಿಗೆ ತರಬೇತಿ ನೀಡುವುದುಮಕ್ಕಳಿಗೆ ಒಂದು ವಿಷಯವಾಗಿ ನೈತಿಕ ಶಿಕ್ಷಣ ಹೇಳುವುದು, ಮಹಾನ ವ್ಯಕ್ತಿಗಳ ಚರಿತ್ರೆ ತಿಳಿಸುವುದು ಎಲ್ಲಾ  ಕ್ರಮಗಳು ಶಿಕ್ಷಣ ವ್ಯವಸ್ಥೆಯಲ್ಲಿ ಕಾಣುತ್ತಿರುವ  ಮೇಲನೋಟದ ಲಕ್ಷಣಗಳಿಗೆ ಪರಿಹಾರವಾಗಿರುವದು ವಿನಃ ಶಾಶ್ವತ ಪರಿಹಾರ ಆಗಲಾರದು. ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆಗಾಗಿ ನಾವು ಶಿಕ್ಷಣವನ್ನು ನೋಡುವ ದೃಷ್ಠಿಯೇ ಬದಲಾಗಬೇಕಾಗಿದೆ.
ಹಿನ್ನೆಲೆಯಲ್ಲಿ ದೇಶದ ಪ್ರಥಮ ಪ್ರಧಾನಿ ನೆಹರು ಅವರ ಜನ್ಮ ದಿನವಾದ (ನವಂಬರ್ 14) ಇಂದು ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿರವೆವುಇಂದು ನಮ್ಮೊಂದಿಗೆ ಕುಣಿದು ಕುಪ್ಪಳಿಸಬೇಕಾದ ಪ್ರದ್ಯುಮ್ನ ಜೊತೆಗಿಲ್ಲ, 11 ತರಗತಿಯ ಸೊಹ್ನಾ ಅಪರಾಥಿಯಾಗಿ ಪೋಲಿಸ ವಶದಲ್ಲಿ ಇರುವವನು. ಇಬ್ಬರ ಮಕ್ಕಳ ಪಾಲಕರ ಮನಸ್ಥಿತಿಯನ್ನು ವ್ಯಕ್ತಪಡಿಸಲು ಸಾಧ್ಯವೇ ಇಲ್ಲ. ಅವರ ದುಖ:ವನ್ನು ಸಹಿಸುವ ಶಕ್ತಿ ಬರಲಿ.
ಪ್ರದ್ಯುಮ್ನನೇ ಕೊನೆ ಮತ್ತೇ ಇಂತಹ ಘಟನೆ ಮರುಕಳಿಸಬಾರದು ದಿಶೆಯಲ್ಲಿ ಗಟ್ಟಿ ನಿಧಾ೯ರಗಳನ್ನು ತೆಗೆದುಕೊಳ್ಳಬಹುದಾದ ಇಂದಿನ ನಮ್ಮ ಪ್ರಧಾನಿಯವರು, ತುಂಬಾ ತಳ ಹಂತದಿಂದ ಮೇಲೆ ಬಂದಿರುವ ನಮ್ಮ  ಮುಖ್ಯಮಂತ್ರಿಗಳ  ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆಗಾಗಿ ಮುನ್ನುಡಿ ಬರೆಯುವ ಚೆ೯  ಮುಂದುವರೆಸಲಿ ಎಂದು ಆಶಿಸೋಣ.

ವಿವೇಕ ಬೆಟ್ಕುಳಿ


8722954123

Monday, July 24, 2017

ಕೃಪೆ ವಾಟ್ಸಪ್

ನವಯುಗದ ಸೊಸೆಯ ಹೊಸಾ ಒಪ್ಪಂದ !
ತಾನು ಶಾಪಿಂಗ್ ಗೆ ಅಥವಾ ವಿಹಾರಕ್ಕೆ ಹೋದಾಗ ನನ್ನ ಮಗುವನ್ನು ಅತ್ತೆ ನೋಡಿಕೊಳ್ಳಲಿ. ಅವರ ಮಗುವನ್ನು ನಾನು ನೋಡಿಕೊಳ್ತೇನೇ....

*****

ಗಂಡ ಹೆಂಡತಿ ಸೀರೆ ಶಾಪಿಂಗ್ ಹೋದರು. ಹೆಂಡತಿ ಹೆಚ್ಚೂಕಮ್ಮಿ ನೂರು ಸೀರೆ ತೆಗೆದು, ಅದರಲ್ಲಿ 25 ಶಾರ್ಟ್ಲಿಸ್ಟ್ ಮಾಡಿ, ಗಂಡನಿಗೆ ಅದರಿಂದ ಐದು ಸೀರೆ ಆರಿಸಲು ಹೇಳಿ. ಕಡೆಯಲ್ಲಿ ಒಂದು ಸೀರೆ ಆರಿಸ್ತಾಳೆ.

ಉಫ್ ಅಂತ ಉಸಿರುಬಿಟ್ಟ ಗಂಡ ಹೇಳಿದ:

"ಹಿಂದಿನ ಕಾಲದಲ್ಲಿ ಸೀರೆ ಇರಲಿಲ್ಲ ನೋಡು. ಬರೀ ಎಲೆಗಳಿಂದ ಮೈ ಮುಚ್ಕೊಳ್ತಾ ಇದ್ರಂತೆ. ಅವನೇ ಪುಣ್ಯವಂತ"

ಹೆಂಡತಿ ತಣ್ಣಗೆ ಉತ್ತರಿಸಿದಳು.

"ಯಾರಿಗೊತ್ತು? ಈ ಎಲೆ ಬೇಡ, ಆ ಎಲೆ ಬೇಕು,  ಈ ಮರದ್ದು ಬೇಡ, ಆ ಮರದ್ದು ತಗೊಂಬಾ, ಈ ಕಲರ್ ಚೆನ್ನಾಗಿಲ್ಲ ಅಂತ ಅವನ್ನ ಎಷ್ಟು ಮರ ಹತ್ತಿ ಇಳಿಸಿದ್ಲೋ ನೀವೇನು ನೋಡಿದ್ರಾ?"

ನೀತಿ: ಶಾಪಿಂಗ್ ಮಾಡುವಾಗ ಹೆಣ್ಣುಮಕ್ಕಳ ಜೊತೆ ವಾದಿಸಬಾರದು.

*****

ಗಂಡ : ಏನೇ ಇದು! ನನಗೆ ಬೆಂಡೇಕಾಯಿ ಆಗದು ಅಂತ ಗೊತ್ತಿದ್ದೂ ಬೆಂಡೆಕಾಯಿಯದ್ದೇ ಎಂಟ್ಹತ್ತು ಐಟಂ ಮಾಡಿದೀ? ನಾನು ಊಟ ಮಾಡೋದು ಬೇಡವಾ??

ಹೆಂಡತಿ : ಆಹಾಹಾ...ಬೆಂಡೆಕಾಯಿ ಆಗದಾ? ಮತ್ತ್ಯಾಕೋ ಅವಳು ಯಾರೋ ಮಿಟುಕಲಾಡಿ ಎಫ್ಬಿಯಲ್ಲಿ ಬೆಂಡೆಕಾಯಿ ಪಲ್ಯದ ಫೋಟೋ ಹಾಕಿದ್ರೆ "ವಾವ್...ಬಾಯಿಯಲ್ಲಿ ನೀರು ಬರ್ತಾ ಇದೆ. ನಿಮ್ಮಡುಗೆ ಅಂದ್ರೆ ಕೇಳ್ಬೇಕಾ? ಊಟಕ್ಕೆ ಬರಲಾ.." ಎಂದು ಕಾಮೆಂಟ್ ಮಾಡಿದ್ದು!! ಇಲ್ಲಿ ತಿನ್ರಿ ಈಗ...ನಾನೂ ನೋಡ್ತೀನಿ...!!

*****

ಗಂಡ : ಏನೇ ಇದು! ನನಗೆ ಬೆಂಡೇಕಾಯಿ ಆಗದು ಅಂತ ಗೊತ್ತಿದ್ದೂ ಬೆಂಡೆಕಾಯಿಯದ್ದೇ ಎಂಟ್ಹತ್ತು ಐಟಂ ಮಾಡಿದೀ? ನಾನು ಊಟ ಮಾಡೋದು ಬೇಡವಾ??

ಹೆಂಡತಿ : ಆಹಾಹಾ...ಬೆಂಡೆಕಾಯಿ ಆಗದಾ? ಮತ್ತ್ಯಾಕೋ ಅವಳು ಯಾರೋ ಮಿಟುಕಲಾಡಿ ಎಫ್ಬಿಯಲ್ಲಿ ಬೆಂಡೆಕಾಯಿ ಪಲ್ಯದ ಫೋಟೋ ಹಾಕಿದ್ರೆ "ವಾವ್...ಬಾಯಿಯಲ್ಲಿ ನೀರು ಬರ್ತಾ ಇದೆ. ನಿಮ್ಮಡುಗೆ ಅಂದ್ರೆ ಕೇಳ್ಬೇಕಾ? ಊಟಕ್ಕೆ ಬರಲಾ.." ಎಂದು ಕಾಮೆಂಟ್ ಮಾಡಿದ್ದು!! ಇಲ್ಲಿ ತಿನ್ರಿ ಈಗ...ನಾನೂ ನೋಡ್ತೀನಿ...!!


*****

ಹೆಂಡತಿ:-ಎಲ್ಲಿಗೆ ಹೋಗಿ ಬರ್ತ ಇದೀರಿ
ಗಂಡ:-ಕಾಲು ನೋವು ಕಣೆ ಅದಕ್ಕೆ ಹಾಸ್ಪಿಟಲ್ಗೆ ಹೋಗಿ ಬರ್ತ ಇದೀನಿ
ಹೆಂಡತಿ:-ಅಯ್ಯೊ ಒಬ್ರೆ ಹೋಗಿದಿರಾ ನನ್ನ ಕರ್ದ್ರಿದ್ರೆ ಬರ್ತ ಇರ್ಲಿಲ್ವಾ
ಗಂಡ:-ಅಲ್ರೆಡಿ ಕಾಲ್ ನೋವು ಇದೆ ಅದರ ಜೊತೆಗೆ ತಲೆನೋವು ಯಾಕೆ ಅಂತ ಕರಿಲಿಲ್ಲ ಕಣೆ ಅಷ್ಟೇ😔😫😏

ಹೆಂಡತಿ:-ರೀ

*****

ಬೇರೆಯವರು ನಮ್ಮನ್ನು ಪ್ರೀತಿಸುವಂತೆ ಮಾಡಲು ಸಾಧ್ಯವಿಲ್ಲದಿರಬಹುದು ಆದರೆ ಎಲ್ಲರೂ ಇಷ್ಟಪಡಬಹುದಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲೆ ಇದೆ...
ಪ್ರೀತಿಸುವುದು, ದ್ವೇಷಿಸುವುದು ಪರರಿಗೆ ಬಿಟ್ಟಿದ್ದು......

*****


ಬದುಕಿದ್ದಾಗ ನಮಸ್ಕಾರ ಮಾಡದ ಜನ
ಸತ್ತಾಗ
ಪಾದ ಮುಟ್ಟಿ ಕೈ ಮುಗಿದರು.
•••
ಉಸಿರಿರುವಾಗ
ನೀ ಸತ್ತಿದ್ದರೇ ಚೆನ್ನಾಗಿರುತಿತ್ತು ಎಂದವರು
ಸತ್ತಾಗ
ಬದುಕಿರಬೇಕಿತ್ತೆಂದರು.
•••
ಬದುಕಿದ್ದಾಗ ಪಾಪಿಯೆಂದರು
ಸತ್ತಾಗ ಪಾಪ ಎಂದರು.
•••
ಹೊಟ್ಟೆಗಾಗಿ ಬೇಡುವಾಗ
ಕುತ್ತಿಗೆಹಿಡಿದು ತಳ್ಳಿದರು
ಸತ್ತಾಗ ಅತ್ತು ಹೆಗಲಾದರು.

ಇದೆ ನಮ್ಮ ಜೀವನ
ಜೀವನ ಅರಿತು  ನೀ ಬಾಳು





Monday, July 17, 2017

ಅಧಿಕ ತೂಕ, ಹೊಟ್ಟೆ ಸುತ್ತದ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ..?

ಅಧಿಕ ತೂಕ, ಹೊಟ್ಟೆ ಸುತ್ತದ ಕೊಬ್ಬನ್ನು ಅರಿಶಿಣ, ನಿಂಬೆರಸದಿಂದ ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ..?

ಅರಿಶಿಣ ನಾವು ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಪದಾರ್ಥ. ಇದರಿಂದ ಅಡುಗೆಗೆ ಒಳ್ಳೆಯ ರುಚಿ ಬರುತ್ತದೆ. ಅಷ್ಟೇ ಅಲ್ಲದೆ, ಅರಿಶಿಣವನ್ನು ನಮ್ಮ ಹಿರಿಯರು ಆಂಟಿ ಸೆಪ್ಟಿಕ್ ಆಗಿ, ಗಾಯಗಳು ವಾಸಿಯಾಗಲು ಸಹ ಬಳಸುತ್ತಿದ್ದರು. ಇನ್ನು ನಿಂಬೆರಸ. ಇದನ್ನೂ ಅಷ್ಟೇ ನಾವು ಅಡುಗೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತೇವೆ. ಮುಖ್ಯವಾಗಿ ನಿಂಬೆರಸ, ಸಕ್ಕರೆಯನ್ನು ನೀರಿನಲ್ಲಿ ಬೆರೆಸಿಕೊಂಡು ಶರಬತ್ ತರಹ ಕುಡಿದರೆ ದೇಹ ತಂಪಾಗುತ್ತದೆ. ಆದರೆ ಅರಿಶಿಣ, ನಿಂಬೆರಸಗಳನ್ನು ಉಪಯೋಗಿಸಿ ತೂಕ ಕಡಿಮೆ ಮಾಡಿಕೊಳ್ಳುವ ಸಂಗತಿ ಗೊತ್ತೇ..? ತೂಕವಷ್ಟೇ ಅಲ್ಲ, ಹೊಟ್ಟೆ ಬಳಿ ಸಂಗ್ರಹವಾಗಿರುವ ಕೊಬ್ಬು ಸಹ ಕರಗುತ್ತದೆ. ಅದೇಗೆ ಎಂದು ಈಗ ನೋಡೋಣ.

1. ಒಂದು ಗ್ಲಾಸು ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆರಸವನ್ನು, 1/4 ಟೀಸ್ಫೂನ್ ಅರಿಶಿಣವನ್ನು ಮಿಕ್ಸ್ ಮಾಡಬೇಕು. ಎರಡೂ ಮಿಕ್ಸ್ ಮಾಡಿದ ಬಳಿಕ ಬೇಕೆಂದರೆ ಅದರಲ್ಲಿ ಸ್ವಲ್ಪ ಜೇನು ಬೆರೆಸಬಹುದು. ಆ ರೀತಿ ಮೂರನ್ನೂ ಬೆರೆಸಿ ಆ ನೀರನ್ನು ಉಗುರುಬೆಚ್ಚಗೆ ಇದ್ದಾಗಲೇ ಬೆಳಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ನಿತ್ಯ ಎರಡು ಬಾರಿ ಈ ಮಿಶ್ರಣವನ್ನು ಕುಡಿದರೆ ವಾರದಲ್ಲಿ ಫಲಿತಾಂಶ ಸಿಗುತ್ತದೆ. ತೂಕ ಕಡಿಮೆಯಾಗುವವರೆಗೂ ಅಥವಾ ಹೊಟ್ಟೆ ಸುತ್ತ ಸಂಗ್ರಹವಾಗಿರುವ ಕೊಬ್ಬು ಕರಗುವವರೆಗೂ ಇದನ್ನು ಕುಡಿಯಬಹುದು.

2. ಒಂದು ನಿಂಬೆಹಣ್ಣನ್ನು ಸಂಪೂರ್ಣವಾಗಿ ಹಿಂಡಿ ಅದರಲ್ಲಿನ ರಸವನ್ನು ತೆಗೆಯಬೇಕು. ಅದಕ್ಕೆ ಅರ್ಧ ಟೀಸ್ಫೂನ್ ಅರಿಶಿಣ, 1/4 ಟೀಸ್ಪೂನ್ ಕಪ್ಪು ಮೆಣಸಿನ ಪುಡಿ. 1/4 ಟೀಸ್ಫೂನ್ ಆಲೀವ್ ಆಯಿಲ್ ಬೆರೆಸಬೇಕು. ಚೆನ್ನಾಗಿ ಮಿಶ್ರಣ ಮಾಡಿದ ಮೇಲೆ 1 ಅಥವಾ 2 ಟೀಸ್ಫೂನ್ ಪ್ರಮಾಣದಲ್ಲಿ 3 ಹೊತ್ತು ಊಟದ ಬಳಿಕ ತೆಗೆದುಕೊಳ್ಳಬೇಕು. ಇದರಿಂದ ಕೊಬ್ಬು ಬೇಗ ಕರಗುತ್ತದೆ. ಹೊಟ್ಟೆ ಸಮಸ್ಯೆಯೂ ಬರಲ್ಲ.

3. ಸಣ್ಣ ಉರಿಯ ಮೇಲೆ ಒಂದು ಕಪ್ ಹಾಲನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು. ಬಳಿಕ ಅದರಲ್ಲಿ ಅರ್ಧ ಟೀ ಸ್ಫೂನ್ ನಿಂಬೆರಸ, ಅರ್ಧ ಟೀಸ್ಫೂನ್ ಜೇನು ಮಿಕ್ಸ್ ಮಾಡಿಕೊಳ್ಳಬೇಕು. ಇದರ ಜತೆಗೆ ವೆನೀಲಾ ಎಕ್ಸ್‌ಟ್ರಾಕ್ಟನ್ನು ಸಹ ಬೆರೆಸಬೇಕು. ಆ ಬಳಿಕ ಆ ಮಿಶ್ರಣಕ್ಕೆ ಅರ್ಧ ಟೀಸ್ಫೂನ್‌ ಅರಿಶಿಣ ಹಾಕಿ, ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಬಳಿಕ ಕೆಳಗಿಳಿಸಿ ಶೋಧಿಸಿ ಉಗುರು ಬೆಚ್ಚಗೆ ಬಿಸಿ ಮಾಡಿಕೊಂಡು ಕುಡಿಯಬೇಕು. ಈ ಪಾನೀಯವನ್ನು ಒಂದು ವಾರ ಕಾಲ ಕುಡಿದರೆ ಫಲಿತಾಂಶ ನಿಮಗೇ ಗೊತ್ತಾಗುತ್ತದೆ. ಇದನ್ನು ಊಟಕ್ಕೂ ಮುನ್ನ ಅಥವಾ ಬಳಿಕ ತೆಗೆದುಕೊಳ್ಳಬಹುದು.
Courtesy whatsapp group: ಶಾಶ್ವತ ಆನಂದ ಯೋಗ _ Balaji Naidu  Santhosh Seenu

ವಯಸ್ಸಾದ ತಂದೆಯನ್ನು ಮಗ ಊರಿನ ಪ್ರಸಿದ್ಧ ಹೋಟೆಲಿಗೆ... -ಕೃಪೆ ವಾಟ್ಸಪ್,

ವಯಸ್ಸಾದ ತಂದೆಯನ್ನು ಮಗ ಊರಿನ ಪ್ರಸಿದ್ಧ ಹೋಟೆಲಿಗೆ ಊಟಕ್ಕೆಂದು ಕರೆದೊಯ್ದಿದ್ದ. ಹೋಟೆಲ್ ಜನಸಂದಣಿಯಿಂದ ತುಂಬಿತ್ತು. ಮಗ ಹೇಗೂ ಜಾಗ ಗಿಟ್ಟಿಸಿದ. ಇವರ ಟೇಬಲ್ಲಿನ ಮತ್ತೊಂದು ಭಾಗದಲ್ಲಿ ನವದಂಪತಿಗಳು ಕುಳಿತಿದ್ದರು. ಊಟ ಪ್ರಾರಂಭವಾಯಿತು. ಈ ವ್ಯಕ್ತಿಯ ತಂದೆ ತುತ್ತನ್ನು ಬಾಯಿಗೆ ಇಡುವಾಗ ಕೈ ನಡುಗಿ ಬಿಳಿ ಅಂಗಿಯ ಮೇಲೆ ಚೆಲ್ಲಿ ಹೋಯಿತು. ಎದುರಿಗೆ ಕುಳಿತಿದ್ದ ಯುವಕ,
"'ಛೆ! ಇಷ್ಟು ವಯಸ್ಸಾದವರನ್ನು ಯಾಕಾದರೂ ಇಂತಹ ಹೋಟೆಲಿಗೆ ಕರೆದುಕೊಂಡು ಬರಬೇಕು..? ಅಂಗಿಯೆಲ್ಲಾ ಕೊಳೆ ಮಾಡಿಕೊಂಡರು ನೋಡಿ. ಹೊರಗೆ ಹೇಗೆ ಕರೆದುಕೊಂಡು ಹೋಗ್ತೀರಿ'"
ಎಂದು ಕೇಳಿದ. ಆದರೆ ಈ ಮಾತುಗಳು 'ಕೇಳಿಯೋ ಇಲ್ಲವೇನೋ 'ಎಂಬಂತೆ ಆ ವ್ಯಕ್ತಿ ತಾನೇ ತುತ್ತು ಮಾಡಿ ಉಣ್ಣಿಸಿದ. ನಂತರ ವಾಷ್ ರೂಮಿನಲ್ಲಿ ತಂದೆಯ ಅಂಗಿಯ ಕಲೆಯನ್ನು ತಿಕ್ಕಿ ತೊಳೆದು ತನ್ನ ಅಂಗಿಯನ್ನು ತಂದೆಗೆ ಹಾಕಿ, ಆತನ ಅಂಗಿಯನ್ನು ತಾನು ಹಾಕಿಕೊಂಡು ಮೇಲೆ ಕೋಟು ಕೋಟುಹಾಕಿಕೊಂಡ. ತಂದೆಯ ಕೆದರಿದ ಕೂದಲನ್ನು ಸರಿಪಡಿಸಿ ಬೆವರಿದ ಮುಖ ಒರೆಸಿ ಬಿಲ್ ಪಾವತಿಸಿ ಹೊರಡುವಷ್ಟರಲ್ಲಿ ರೆಸ್ಟೊರೆಂಟ್ ಗದ್ದಲ ಸ್ವಲ್ಪ ಕಡಿಮೆಯಾಗಿತ್ತು. ಇನ್ನೇನು ಹೊರ ನಡೆಯಬೇಕೆನ್ನುವಾಗ ಆ ಘಟನೆಯನ್ನು ವೀಕ್ಷಿಸಿದ್ದ ಪಕ್ಕದ ಟೇಬಲಿನಲ್ಲಿದ್ದ ಓರ್ವ ವ್ಯಕ್ತಿ
"'ಹಲೋ ಜಂಟಲ್ ಮ್ಯಾನ್ ನೀವೇನೋ ಬಿಟ್ಟು ಹೊರಟಿದ್ದೀರಿ'"
ಎಂದು ಜೋರಾಗಿ ಕೂಗಿದ. ಆ ಮಾತು ಕೇಳಿ ಹೋಟೆಲಲ್ಲಿದ್ದವರ ಚಿತ್ತ ಇವರತ್ತ ನೆಟ್ಟಿತು. 'ಇಲ್ಲ ನಾನೇನು ಬಿಟ್ಟು ಹೋಗಿಲ್ಲವಲ್ಲ' ಎಂದ ಮಗ. ಅದಕ್ಕೆ ಆ ವ್ಯಕ್ತಿ
'ಮಗನಾದವನು ತನ್ನ ವಯಸ್ಸಾದ ತಂದೆಯನ್ನು ಹೇಗೆ ನೋಡಿಕೊಳ್ಳಬೇಕೆಂಬ ಅಮೂಲ್ಯ ಪಾಠವನ್ನು ನಮಗೆ ಬಿಟ್ಟು ಹೊರಟಿದ್ದೀರಿ'
ಎಂದ, ಮುಂಚೆ ಕೊಂಕು ನುಡದಿದ್ದ
ಆ ಯುವ ದಂಪತಿಗೆ ನಾಚಿಕೆಯಾಗಿ ಕ್ಷಮೆ ಕೇಳಿದರು.
"ನಾನು ಸಣ್ಣವನಿರುವಾಗ ಅಪ್ಪನನ್ನು ಅದೆಷ್ಟು ಗೋಳು ಹೊಯ್ದುಕೊಂಡಿರಲಿಲ್ಲ. ಆಗೆಲ್ಲಾ ಆತ ಕೋಪಿಸಿಕೊಳ್ಳದೆ ನನ್ನನ್ನು ಮುದ್ದು ಮಾಡಿರಲಿಲ್ವ..? ಈಗ ಅವನು ಮಗು ನಾನು ತಂದೆ"
ಎಂದು ಹೇಳಿದ. ಅಲ್ಲಿದ್ದವರ ಕಣ್ಣಾಲಿ ತುಂಬಿತು. ಮಗ ತಂದೆಯ ಕೈ ಹಿಡಿದುಕೊಂಡು ಮೆಲ್ಲನೆ ಕಾರಿನತ್ತ ಕರೆದೊಯ್ದ.

ಹೌದು,
ವಯಸ್ಸಾದ ಮೇಲೆ ಮನುಷ್ಯ ಮಗುವಿನಂತಾಗುತ್ತಾನೆ. ಮೊದಲು ತನ್ನ ಮಕ್ಕಳನ್ನು ಕೈ ಹಿಡಿದು ಬೆಳೆಸಿದ ಆತನಿಗೆ/ಳಿಗೆ
ನಾವೆಲ್ಲ ಅವರನ್ನು ಮಕ್ಕಳಂತೆ ನೋಡಿಕೊಂಡಾಗ ಬದುಕಿಗೆ ಒಂದು ಅರ್ಥ...

Sunday, April 2, 2017

ಕತ್ತೆ ಎಂಬ ಹರಿಕಾರನ ಕ್ರಾಂತಿ - ಕೃಪಾಕರ ಸೇನಾನಿ

ಹೆದ್ದಾರಿಯ ಪಕ್ಕದಲ್ಲೇ ಇದ್ದ ಆ ಊರಿನಲ್ಲಿ ಬಡತನ, ಮೂಢನಂಬಿಕೆ ಮತ್ತು ಅಜ್ಞಾನಗಳು ಯಥೇಚ್ಛವಾಗಿ ಮನೆಮಾಡಿದ್ದವು. ರಾಜಕೀಯವಾಗಿ ಪ್ರಭಾವಿಗಳಾಗಿದ್ದ ಒಂದೆರಡು ಮನೆಗಳ ಹೊರತಾಗಿ, ಅಲ್ಲಿದ್ದ ಮಣ್ಣಿನ ಮನೆಗಳಾವುವೂ ಸುಸ್ಥಿತಿಯಲ್ಲಿರಲಿಲ್ಲ. ಎಲ್ಲಾ ಜಾತಿಯ ಜನರ ಆರ್ಥಿಕ ಪರಿಸ್ಥಿತಿ ಮತ್ತು ಅವರ ಮನೆಗಳ ಪರಿಸ್ಥಿತಿ ಹೆಚ್ಚು ಕಡಿಮೆ ಒಂದೇ ತೆರನಾಗಿತ್ತು.

ಆದರೆ ಎಲ್ಲೆಂದರಲ್ಲಿ ಜಾತಿ ಸೂಚಕ ಸಾಂಕೇತಿಕ ಫಲಕಗಳು, ಬೀದಿಗೊಂದರಂತೆ ಹೆಂಡದಂಗಡಿ ಮತ್ತು ದೇವಸ್ಥಾನಗಳು ಇದ್ದವು. ಅಲ್ಲಿ ಜನಸಂಖ್ಯೆಗೇನು ಕೊರತೆ ಇರಲಿಲ್ಲವಾದರೂ, ಜನರಿಗಿಂತ ಜಾನುವಾರುಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಅವೆಲ್ಲವು ಕಾಡಿನಲ್ಲಿ ಪುಕ್ಕಟ್ಟೆ ಮೇಯ್ದು ಬರುತ್ತಿದ್ದುದರಿಂದ, ಅವು ಹಿಂಡುತ್ತಿದ್ದ ಅರ್ಧ ಲೀಟರ್ ಹಾಲು ಕೂಡ ಅವುಗಳ ಮಾಲೀಕರಿಗೆ ಲಾಭದಾಯಕ ಎಂಬಂತೆ ಕಾಣುತ್ತಿತ್ತು.

ಊರ ಸುತ್ತಲೂ ಸಾಕಷ್ಟು ಒಣಭೂಮಿ ಇತ್ತಾದರೂ, ಕಡಿಮೆ ಮಳೆ ಬೀಳುವ ಪ್ರದೇಶವಾದ್ದರಿಂದ ವ್ಯವಸಾಯಕ್ಕೆ ಅಷ್ಟೇನು ಅನುಕೂಲಕರವಾಗಿರಲಿಲ್ಲ. ಹಾಗಾಗಿ ಸೆಗಣಿ ಸಂಗ್ರಹಿಸಿ ಗೊಬ್ಬರ ಮಾಡಿ ಮಾರುವುದು, ಕಾಡಿನಿಂದ ಸೌದೆ ಮತ್ತು ಕಳ್ಳ ನಾಟಗಳನ್ನು ತಂದು ಹತ್ತಿರದ ಪಟ್ಟಣಕ್ಕೆ ಮಾರುವುದು ಅವರ ಮುಖ್ಯ ಕಸುಬಾಗಿತ್ತು.

ಆ ಊರಿನಲ್ಲಿ ಮೂವರು ನಕಲಿ ಡಾಕ್ಟರ್‌ಗಳು ವೈದ್ಯಕೀಯ ವೃತ್ತಿ ನಡೆಸಿದ್ದರು. ಎಲ್ಲಾ ಬಗೆಯ ಸಣ್ಣ ಪುಟ್ಟ ಕಾಯಿಲೆಗಳಿಗೂ ಅವರು ಚುಚ್ಚುಮದ್ದನ್ನು ಪ್ರಯೋಗಿಸುತ್ತಿದ್ದುದರಿಂದ ರೋಗಿಗಳಿಗೆ ಅವರ ಬಗ್ಗೆ ಅಪಾರ ಗೌರವವಿತ್ತು. ಅವರು ಹೆಚ್ಚಾಗಿ ಡಿಸ್ಟಿಲ್ಡ್ ನೀರನ್ನೇ ಚುಚ್ಚುಮದ್ದಾಗಿ ನೀಡುತ್ತಿದ್ದರು.

ಅದು ಉಂಟುಮಾಡುತಿದ್ದ ವಿಪರೀತ ನೋವಿನಿಂದ ಪುಳಕಿತರಾಗುತ್ತಿದ್ದ ರೋಗಿಗಳು, ಅವರು ಶಕ್ತಿಯುತ ಔಷಧಿಗಳನ್ನೇ ನೀಡುತ್ತಾರೆಂದು ಗಟ್ಟಿಯಾಗಿ ನಂಬಿದ್ದರು. ಈ ನಂಬಿಕೆಯಿಂದಲೇ ನಕಲೀ ವೈದ್ಯರ ವಹಿವಾಟು ಲಾಭಕರವಾಗಿ ನಡೆದಿತ್ತು.

ಇದಲ್ಲದೆ ಆ ಊರಿನಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೂ ಇತ್ತು. ಅಲ್ಲಿ ಒಬ್ಬರು ವೈದ್ಯರು, ಅವರ ಸಹಾಯಕರಾಗಿ ಕಾಂಪೌಂಡರ್ ಮತ್ತು ನರ್ಸ್ ಸಹ ಇದ್ದರು. ನಗರದಲ್ಲಿ ನೆಲೆಸಿದ್ದ ಆ ವೈದ್ಯರು ಯಾವಾಗಲೋ ಒಮ್ಮೆ ಕೆಲಸಕ್ಕೆ ಬರುತ್ತಿದ್ದರು. ಬೇರೆ ಖಾಸಗಿ ಆಸ್ಪತ್ರೆಗಳಲ್ಲೂ ಅವರು ಸೇವೆ ಸಲ್ಲಿಸುತ್ತಿದ್ದರಿಂದ ಹೆಚ್ಚು ಬಿಡುವಾಗುತ್ತಿರಲಿಲ್ಲ. ಆದರೆ ವೈದ್ಯರ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಕಾಂಪೌಂಡರ್ ನಿರ್ವಹಿಸುತ್ತಿದ್ದರು.

ಪಕ್ಕದ ಊರಿನವರಾಗಿದ್ದ ಆ ಕಾಂಪೌಂಡರ್ ತಮ್ಮದೇ ಆದ ಕ್ಲಿನಿಕ್ ಸಹ ಹೊಂದಿದ್ದರು. ಸರ್ಕಾರಿ ಆಸ್ಪತ್ರೆಯ ಔಷಧಗಳನ್ನೆ ಅಲ್ಲಿ ಬಳಸುತ್ತಿದ್ದರಿಂದ ಅವರ ವೃತ್ತಿ ಹೆಚ್ಚು ಲಾಭದಾಯಕವಾಗಿತ್ತು.


ಆ ಊರಿನ ಮಗ್ಗುಲಲ್ಲೆ ವಿಶಾಲವಾದ ಕೆರೆಯೊಂದಿತ್ತು. ಅದು ಎಂದೂ ಬತ್ತಿದ್ದನ್ನು ನಾವು ನೋಡಿರಲಿಲ್ಲ. ಮಳೆಗಾಲದಲ್ಲಿ ಕಾಡಿನಿಂದ ಹರಿದುಬರುತ್ತಿದ್ದ ನೀರು ಈ ಕೆರೆಯನ್ನು ಜೀವಂತವಾಗಿಟ್ಟಿತ್ತು. ಇಡೀ ಊರೇ ನೀರಿಗಾಗಿ ಈ ಕೆರೆಯನ್ನು ಅವಲಂಬಿಸಿತ್ತು. ಕೆರೆಯ ಪಕ್ಕದಲ್ಲಿ ಮೂರು ನೆಲಮಟ್ಟದ ಬಾವಿಗಳಿದ್ದವು.

ಈ ಮೂರು ಬಾವಿಗಳಿಗೆ ಕೆರೆಯಲ್ಲಿ ಇಂಗಿದ ನೀರು ಬಂದು ಸೇರುತ್ತಿತ್ತು. ಅಂದರೆ ಈ ಎಲ್ಲ ಬಾವಿಗಳ ನೀರಿನ ಮೂಲ ಒಂದೇ ಆಗಿತ್ತು. ಚಪ್ಪಡಿಗಳನ್ನು ಹರಡಿ ಮೇಲ್ಭಾಗವನ್ನು ಮುಚ್ಚಿದ್ದ ಆ ಬಾವಿಗಳಿಗೆ ನೀರು ಎತ್ತಲು ಎರಡು ಅಡಿ ಅಗಲದ ಕಿಂಡಿಗಳಿದ್ದವು.

ಈ ಬಾವಿಗಳ ಬಳಿ ಸದಾ ಚಟುವಟಿಕೆಯಿರುತ್ತಿತ್ತು. ಮುಂಜಾನೆಯಿಂದ ಸಂಜೆಯವರೆಗೆ, ಯಾವಾಗ ನೋಡಿದರೂ ಗಂಡಸರು, ಹೆಂಗಸರು, ಸಣ್ಣ ಸಣ್ಣ ಮಕ್ಕಳು ಕೂಡ ಅಲ್ಲಿ ನೆರೆದು, ಕುಡಿಯುವ ನೀರನ್ನು ಬಿಂದಿಗೆಗಳಲ್ಲಿ ಸೇದಿ ಕೊಂಡೊಯ್ಯುತ್ತಲೇ ಇರುತ್ತಿದ್ದರು.

ಆ ಊರಿನ ಅಗಸರ ಕತ್ತೆಗಳಿಗಂತೂ ಬಿಡುವಿನ ಸಮಯವೆಂಬುದೇ ಇರಲಿಲ್ಲ. ಅವುಗಳಿಗೆ ಬಟ್ಟೆ ಹೊರುವ ಕೆಲಸ ಮುಗಿಯುತ್ತಿದ್ದಂತೆ ನೀರು ಹೊರುವ ಕೆಲಸ ಶುರುವಾಗುತ್ತಿತ್ತು. ಹಾಗಾಗಿ ಇವುಗಳಿಗೆ ಮೇಯಲು ಅವಕಾಶ ಸಿಗುತ್ತಿದ್ದುದು ರಾತ್ರಿ ಮಾತ್ರ. ಜಾತ್ರೆ ಸಂತೆಗಳಿಲ್ಲದ ಈ ಊರು ಎಂದೂ ನಮ್ಮ ಕುತೂಹಲವನ್ನು ಕೆರಳಿಸಿರಲಿಲ್ಲ.

ಹೀಗಿರುವಾಗ, ನಮಗೆ ಪರಿಚಯವಿದ್ದ ವೈದ್ಯರೊಬ್ಬರು, ಹೇಗೋ ಈ ಊರಿನ ಸಂಪರ್ಕಕ್ಕೆ ಬಂದು, ಅಲ್ಲಿನ ಜನರ ಪರಿಸ್ಥಿತಿಯನ್ನು ಹತ್ತಿರದಿಂದ ನೋಡಿ ಮರುಕಗೊಂಡಿದ್ದರು. ಸಾಮಾಜಿಕ ಕಳಕಳಿಯಿದ್ದ ಈತ ಇಡೀ ಊರನ್ನು ಸುತ್ತಾಡಿ, ಸಮೀಕ್ಷೆ ನಡೆಸಿ ಅಲ್ಲಿನ ಬಹಳಷ್ಟು ಜನ ರೋಗಪೀಡಿತರಾಗಿರುವುದನ್ನು ಹಾಗೂ ಅದರ ಹಿಂದಿನ ಕಾರಣಗಳನ್ನು ಗುರುತಿಸಿ ಪಟ್ಟಿ ಮಾಡಿಕೊಂಡರು.

ಈ ಯುವ ಎಂ.ಬಿ.ಬಿ.ಎಸ್ ಪದವೀಧರ ತನಗೆ ಬರುತ್ತಿದ್ದ ಉತ್ತಮ ಉದ್ಯೋಗ ಅವಕಾಶಗಳನ್ನು ಪಕ್ಕಕ್ಕಿಟ್ಟು ಸಮಾಜ ಸೇವೆ ಮಾಡುವ ತನ್ನ ಮನದಾಳದ ತುಡಿತಕ್ಕೆ ಈ ಹಳ್ಳಿಯನ್ನು ಆರಿಸಿಕೊಂಡರು.

ಗ್ರಾಮ ಸ್ವರಾಜ್ಯದಲ್ಲಿ ನಂಬಿಕೆಯಿಟ್ಟಿದ್ದ ಇವರು ಅತ್ಯಂತ ಸರಳ ಜೀವನಕ್ಕೆ ಕಟ್ಟುಬಿದ್ದಿದ್ದರು. ಹಾಗಾಗಿ, ಬದುಕಿಗೆ ಅವಶ್ಯವಿರುವಷ್ಟು ಸಂಭಾವನೆಯನ್ನು ಮಾತ್ರ ತೆಗೆದುಕೊಳ್ಳುವುದೆಂದು ನಿರ್ಧರಿಸಿ ಆ ಊರಿನಲ್ಲಿ ಒಂದು ಕ್ಲಿನಿಕ್ ಆರಂಭಿಸಿದರು. ಬಹಳ ವರ್ಷಗಳಿಂದ ನಕಲಿ ವೈದ್ಯರನ್ನಷ್ಟೇ ನೋಡಿದ್ದ ಜನ, ಅಸಲಿ ವೈದ್ಯನನ್ನು ಒಪ್ಪಿಕೊಳ್ಳಲು ಹಿಂಜರಿದರು. ಜನರ ನಂಬಿಕೆ ಗಳಿಸುವುದು ಸುಲಭವಾಗಿರಲಿಲ್ಲ.

‘ಇಷ್ಟು ಕಡಿಮೆ ಶುಲ್ಕ ಕೇಳುವವರು ಒಳ್ಳೆಯ ವೈದ್ಯರಾಗಿರಲು ಹೇಗೆ ಸಾಧ್ಯ?’ ಎಂಬುದು ಹಳ್ಳಿಗರ ತರ್ಕಕ್ಕೆ ನಿಲುಕದ ವಿಚಾರವಾಗಿತ್ತು. ಆದರೆ, ಸಮಯ ಕಳೆದಂತೆ ನಿಧಾನವಾಗಿ ಜನ ಬದಲಾಗತೊಡಗಿದರು. ವೈದ್ಯರ ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವವನ್ನು ಜನರು ಅರ್ಥಮಾಡಿಕೊಂಡಂತೆ ಕಂಡುಬಂತು. ಕ್ಲಿನಿಕ್‌ನಲ್ಲಿ ಜನ ನೆರೆಯತೊಡಗಿದರು. ಕ್ರಮೇಣ ಅವರ ಜನಪ್ರಿಯತೆ ಹರಡಿ ಅಕ್ಕಪಕ್ಕದ ಊರಿನ ಬಡಜನರು ಕೂಡ ಅಲ್ಲಿಗೆ ಬರಲಾರಂಭಿಸಿದರು.

ಅನಂತರದ ಮೂರು ತಿಂಗಳು ನಾವು ಬೇರೆಡೆ ಕೆಲಸ ಮಾಡುತ್ತಿದ್ದೆವು. ವಾಪಸ್ಸಾದಾಗ, ಕ್ಲಿನಿಕ್ ಇದ್ದ ಅಂಗಡಿಯ ಬಾಗಿಲು ಮುಚ್ಚಿತ್ತು. ಅಂಗಡಿಯ ಫಲಕವೂ ಕೂಡ ಕಾಣಲಿಲ್ಲ. ಅಲ್ಲೇನಾಯ್ತೆಂದು ಅಕ್ಕಪಕ್ಕದವರಾರೂ ಸರಿಯಾದ ಕಾರಣಗಳನ್ನಾಗಲೀ ವಿವರಗಳನ್ನಾಗಲೀ ನೀಡಲಿಲ್ಲ. ವೈದ್ಯಮಿತ್ರರ ನಾಪತ್ತೆ ನಮಗೆ ರಹಸ್ಯವಾಗಿಯೇ ಉಳಿಯಿತು.

ಆ ವರ್ಷ ನಾಡಿನೆಲ್ಲೆಡೆ ಬರ ಆವರಿಸಿತ್ತು. ಕೆರೆಗಳೆಲ್ಲ ಬತ್ತುತ್ತಿದ್ದವು. ರೈತರೆಲ್ಲ ಕಂಗಾಲಾಗಿದ್ದರು. ಆದರೆ ಈ ಊರಿನಲ್ಲಿ ಜನಜೀವನ ಮಾತ್ರ ಎಂದಿನಂತೆ ಸಾಗಿತ್ತು. ಏಕೆಂದರೆ ಇಲ್ಲಿನ ಜನ ರೈತಾಪಿ ಕೆಲಸ ಬಿಟ್ಟು ಎಷ್ಟೋ ವರ್ಷಗಳು ಕಳೆದಿತ್ತು, ಅಲ್ಲದೆ ಕಾಡಂಚಿನಲ್ಲಿದ್ದುದರಿಂದ ಊರ ಕೆರೆ ಸಂಪೂರ್ಣವಾಗಿ ಬತ್ತಿರಲಿಲ್ಲ. ಕುಡಿಯುವ ನೀರಿಗೆ ಹೇಗಿದ್ದರೂ ನೆಲಬಾವಿಗಳಿದ್ದವು.

ಆದರೆ ಹಲವಾರು ಕಾರಣಗಳಿಂದ, ಕಾಡಿನಿಂದ ಕೆರೆಗೆ ನಿರಂತರವಾಗಿ ಹರಿದುಬರುತ್ತಿದ್ದ ನೀರು ನಿಂತು ಹೋಗಿ ಎರಡು ವರ್ಷಗಳಾಗಿತ್ತು. ಆ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಖಾಸಗಿಯವರು ಜೆ.ಸಿ.ಬಿ., ಟ್ರಾಕ್ಟರ್‌ಗಳಲ್ಲಿ, ಬತ್ತಿದ್ದ ಆ ಕೆರೆಯ ಮಣ್ಣೆತ್ತಿ ಅಕ್ಕಪಕ್ಕದ ಊರಿನ ರೈತರಿಗೆ ಮಾರುತ್ತಿದ್ದರು.

ಇದೇ ಸಮಯದಲ್ಲಿ ರೀಕೊ ಎಂಬ ಅಮೆರಿಕಾದ ಪ್ರಜೆಯೊಬ್ಬರು ನಮ್ಮಲ್ಲಿಗೆ ಬಂದಿದ್ದರು. ಪೆರ್ಮಕಲ್ಚರ್ ಮತ್ತು ಭೂವಿಜ್ಞಾನದಲ್ಲಿ ತಜ್ಞರಾಗಿದ್ದ ಅವರಿಗೆ ಮಣ್ಣಿನ ರಚನೆ ಮತ್ತು ಸ್ವರೂಪಗಳ ಬಗೆಗೆ ವಿಶೇಷ ಪರಿಜ್ಞಾನವಿತ್ತು. ಈ ಕೆರೆಯಲ್ಲಿ ಮಣ್ಣೆತ್ತುವುದನ್ನು ನೋಡಿದ ಆತ ಹೇಳಿದ್ದು ನಮಗಿನ್ನೂ ನೆನಪಿದೆ.

‘ಈ ರೀತಿ ಕೆರೆಯ ಮಣ್ಣೆತ್ತುವ ಮೊದಲು ಮಣ್ಣಿನ ಪದರಗಳನ್ನು ಸೂಕ್ಷ್ಮವಾಗಿ ಅಧ್ಯಯಿಸಬೇಕು. ಹೀಗೆ ಅಡ್ಡಾದಿಡ್ಡಿ ಮಣ್ಣೆತ್ತುವುದು ಬಹಳ ಅಪಾಯಕಾರಿ. ಒಂದು ಪಕ್ಷ ಕೆಲವು ನಿರ್ದಿಷ್ಟ ಪದರಗಳಿಗೆ ಹಾನಿಯಾದರೆ ಮತ್ತೆ ಇಲ್ಲಿ ನೀರು ನಿಲ್ಲಲು ಹತ್ತಾರು ವರ್ಷಗಳೇ ಬೇಕು. ಇವರು ಮಾಡುತ್ತಿರುವ ಕೆಲಸ ತೀರಾ ಅವೈಜ್ಞಾನಿಕ ಮತ್ತು ಅಪಾಯಕಾರಿ’ ಎಂದು ತಿಳಿಸಿದ್ದರು.

ಅವರು ಪ್ರಯೋಗಾತ್ಮಕವಾಗಿ ಕೊಪ್ಪಳದ ಖಾಸಗಿ ಪ್ರದೇಶದಲ್ಲಿ ರೂಪಿಸಿದ್ದ ಮಾದರಿ ಕೆರೆಯನ್ನು ನಾವು ನೋಡಿದ್ದೆವು. ನಾಲ್ಕು ತಿಂಗಳ ಅವಧಿಯಲ್ಲಿ, ಯಂತ್ರಗಳ ಸಹಾಯವಿಲ್ಲದೆ ನಿರ್ಮಿಸಿದ್ದ ಆ ಕೆರೆ ನಮ್ಮ ಕುತೂಹಲ ಕೆರಳಿಸಿತ್ತು. ಸುತ್ತಮುತ್ತಲಿನ ಕೆರೆಗಳ ಆತ್ಮವನ್ನು ಕೂಲಂಕಷವಾಗಿ ಅಧ್ಯಯಿಸಿ, ಅಲ್ಲಿ ನೆಲೆಸಿರುವ ಜಲಚರ ಜೀವಿಗಳನ್ನೆಲ್ಲ ಪಟ್ಟಿಮಾಡಿ, ಅವುಗಳ ಬದುಕಿಗೆ ಪೂರಕವಾದ ನೆಲೆಯನ್ನು ಕೂಡ ಅಲ್ಲಿ ಸೃಷ್ಟಿಸಿದ್ದರು.

ಎರಡೇ ವರ್ಷಗಳಲ್ಲಿ ಅದು ಕೆರೆಯಾಗಿತ್ತು! ಬೇಸಿಗೆಯಲ್ಲಿ, ಬರದ ನೆರಳಿನಲ್ಲಿ ಕೂಡ ಆ ಕೆರೆಯಲ್ಲಿ ನೀರು ಇಂಗಿರಲಿಲ್ಲ. ಇದನ್ನು ಅರಿತಿದ್ದ ನಾವು ಈ ಮಾಹಿತಿಯನ್ನು ಪಂಚಾಯ್ತಿ ಕಚೇರಿಗೆ ನೀಡುವುದು ಒಳ್ಳೆಯದೆಂದು ಅಲ್ಲಿಗೆ ಹೋದೆವು.

ಅಲ್ಲಿ ಅವರೆಲ್ಲರೂ, ಖಾಸಗಿಯವರು ಎತ್ತುತ್ತಿದ್ದ ಕೆರೆಯ ಹೂಳಿಗೆ ಸರ್ಕಾರದ ಕಾರ್ಯಕ್ರಮದಡಿಯಲ್ಲಿ ಬಿಲ್ ಸಿದ್ಧಗೊಳಿಸುವ ಗಡಿಬಿಡಿಯಲ್ಲಿದ್ದರು. ಅಪಾರ ಏಕಾಗ್ರತೆಯಿಂದ ಕೆಲಸದಲ್ಲಿ ಮಗ್ನರಾಗಿದ್ದ ಅವರಿಗೆ ನಮ್ಮ ಮಾತುಗಳು ಕೇಳಿಸಲೇ ಇಲ್ಲ.

ಇದಾದ ಕೆಲವು ತಿಂಗಳುಗಳ ನಂತರ ಸ್ನೇಹಿತರೊಬ್ಬರು ಸಿಕ್ಕಾಗ ವೈದ್ಯರ ಬಗ್ಗೆ ವಿಚಾರಿಸಿದೆವು. ಅವರು ತಿಳಿಸಿದ ವಿಷಯ ನಮಗೆ ಅತೀವವಾದ ಆಘಾತವನ್ನೂ ನಾಚಿಕೆಯನ್ನೂ ಉಂಟುಮಾಡಿತ್ತು.

ಆ ಊರಿನ ನಕಲೀ ವೈದ್ಯರುಗಳೋ ಅಥವ ಜನರೋ ಆ ಯುವ ಡಾಕ್ಟರ್‌ರ ಜಾತಿ, ಕುಲ–ಗೋತ್ರಗಳನ್ನೆಲ್ಲ ಹುಡುಕಿ ಹೊರತೆಗೆದಿದ್ದರು. ಗುಸು ಗುಸು ಸುದ್ದಿ ಹರಡಿತ್ತು. ಅಸ್ಪೃಶ್ಯತೆಯ ಗುಮ್ಮ ಹೊರಬಂದಿತ್ತು. ನಂತರದ ಕೆಲವೇ ದಿನಗಳಲ್ಲಿ ತಪಾಸಣೆಗೆ ಬರುತ್ತಿದ್ದ ರೋಗಿಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಯಿತು. ಮಳಿಗೆಯ ಮಾಲೀಕ ಕಾರಣ ಕೂಡ ಹೇಳದೆ, ಪುಂಡು ಹುಡುಗರನ್ನು ಬಳಸಿ ಅಂಗಡಿಯನ್ನು ತೆರವುಮಾಡುವಂತೆ ಒತ್ತಡ ಹೇರಿದ್ದ.

ಸೂಕ್ಷ್ಮ ಮನಸ್ಸಿನ ಆ ವೈದ್ಯರನ್ನು, ಈ ಘಟನೆ ಮಾನಸಿಕ ಖಿನ್ನತೆಗೆ ದೂಡಿತ್ತು. ಬಳಿಕ ಹೇಗೋ ಚೇತರಿಸಿಕೊಂಡು, ಆ ನೆನಪುಗಳಿಂದ ಕಳಚಿಕೊಳ್ಳುವ ಪ್ರಯತ್ನದಲ್ಲಿ ತಮಿಳುನಾಡಿನ ಯಾವುದೋ ಮೂಲೆಯಲ್ಲಿದ್ದ ಸ್ವಯಂ ಸೇವಾಸಂಸ್ಥೆಯೊಂದನ್ನು ಸೇರಿಕೊಂಡಿದ್ದರು.

ಈ ಊರಿನ ಜನ ಮೊದಲಿನಂತೆ ನಕಲಿ ವೈದ್ಯರ ಬಳಿ ಹೋಗಿ, ಎಲ್ಲ ರೋಗಗಳಿಗೂ ಒಂದೇ ‘ಸೂಜಿ’ ಹಾಕಿಸಿಕೊಳ್ಳುತ್ತಾ ಸುಖ ಕಂಡುಕೊಂಡಿದ್ದರು.
ಮಳೆ ಮತ್ತೆ ಮತ್ತೆ ಕೈಕೊಟ್ಟಿತ್ತು. ಬರ ಮೂರನೇ ವರ್ಷಕ್ಕೆ ಮುಂದುವರೆಯಿತು.

ಮನುಷ್ಯನ ದೃಷ್ಟಿಯಲ್ಲಿ ಅಥವ ಯಾವುದೋ ಒಂದು ಪ್ರಾಣಿಯ ಅಥವ ಒಂದು ಜಾತಿಯ ಜೀವಿಯ ದೃಷ್ಟಿಯಲ್ಲಿ ನೋಡಿದಾಗ ಬರ ಎಲ್ಲವನ್ನೂ ಹಾಳುಗೆಡಹುವ ಒಂದು ವಿನಾಶಕಾರಿ ಪ್ರಕ್ರಿಯೆ.

ಆದರೆ, ನಾವು ಬಹಳ ವರ್ಷಗಳ ಕಾಲ ಹತ್ತಿರದಿಂದ ನೋಡಿದ್ದ ಕಾಡಿನಲ್ಲೊಮ್ಮೆ ಬರ ತಂದ ಬದಲಾವಣೆ ನಮ್ಮ ಆಲೋಚನೆಯ ದಿಕ್ಕನ್ನೇ ಬದಲಿಸಿತ್ತು. ಅಲ್ಲಿ ಮೂರು ವರ್ಷಗಳ ಕಾಲ ಸತತವಾಗಿ ಕಾಡಿದ ಬರಗಾಲದ ನಂತರ ಮಳೆ ಎಂದಿನಂತೆ ಸುರಿದು ಬರ ಮಾಯವಾದಾಗ, ಸತ್ತ ಮರಗಳಿಂದ ತೆರವಾದ ಜಾಗದಲ್ಲಿ ಬೇರೆ ಬೇರೆ ಜಾತಿಯ ಸಸ್ಯಗಳು ತಲೆ ಎತ್ತಿದ್ದವು.

ಭೂಮಿಯಲ್ಲಿ ಎಷ್ಟೋ ವರ್ಷಗಳ ಕಾಲ ‘ಅವಕಾಶವಂಚಿತ’ರಾಗಿ ಅಡಗಿ ಕುಳಿತಿದ್ದ ಬೀಜಗಳಿಗೆ ಚಿಗುರೊಡೆಯುವ ಸದಾವಕಾಶ ಸೃಷ್ಟಿಯಾಗಿತ್ತು. ಬರ ನಿರ್ದಾಕ್ಷಿಣ್ಯವಾಗಿ ಅನಾರೋಗ್ಯಕರ ಜೀವಿಗಳನ್ನು ತೊಡೆದು ಹಾಕಿ, ಆರೋಗ್ಯಕರ ಜೀವಸಂಕುಲದ ಮುಂದುವರಿಕೆಗೆ ದಾರಿ ಮಾಡಿಕೊಟ್ಟಿತ್ತು.

ಇದೇನೆ ಇರಲಿ, ಆ ವರ್ಷ ಮುಂದುವರೆದ ಬರದಿಂದಾಗಿ ಆ ಊರಿನ ಕೆರೆಯಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಿತ್ತು. ಆದರೆ ಕೆರೆಯ ಪಕ್ಕದ ಮೂರು ನೆಲಬಾವಿಗಳ ಪೈಕಿ ಎರಡರಲ್ಲಿ ಇನ್ನೂ ನೀರು ಬತ್ತಿರಲಿಲ್ಲ.

ಆಗೊಮ್ಮೆ, ಅನಿವಾರ್ಯವಾಗಿ, ನಾವು ಆ ಕೆರೆಯನ್ನು ದಾಟಿ ಹೋಗಬೇಕಾದ ಸನ್ನಿವೇಶ ಬಂದಿತ್ತು. ಅಂದು ಅಲ್ಲಿ ಬಹಳ ಜನ ಸೇರಿದ್ದರು. ಏನೋ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದಂತೆ ಕಂಡಿತು. ಕುತೂಹಲಕ್ಕೆ ಏನೆಂದು ವಿಚಾರಿಸಿದೆವು. ‘ಕತ್ತೆಯೊಂದು ತೀರಿಕೊಂಡಿದೆ. ಹಾಗಾಗಿ ಊರಿನವರು ಹೋಮ ನಡೆಸಿದ್ದಾರೆ’ ಎಂದು ತಿಳಿದುಬಂತು.

ಅಲ್ಲಿಯವರೆಗೆ ಕತ್ತೆ ಕೇವಲ ಬೈಗುಳುದ ಪದವಾಗಿ ಮಾತ್ರ ಜನಮನದಲ್ಲಿರುವುದೆಂದು ನಾವು ತಿಳಿದಿದ್ದೆವು. ಅದಲ್ಲದೆ ಆಗೊಮ್ಮೆ ಈಗೊಮ್ಮೆ ಅಸಭ್ಯ ರಾಜಕಾರಣಿಗಳ ನಡವಳಿಕೆಯನ್ನು ಅವಮಾನಿಸಲು ಪ್ರತಿಭಟನೆಯ ಸಂಕೇತವಾಗಿ ಕತ್ತೆಗಳ ಮೆರವಣಿಗೆ ನಡೆಸುವುದು ತಿಳಿದಿತ್ತು. ಆದರೆ ಭಾರತದಲ್ಲಿ ಕತ್ತೆಗಳಿಗೆ ಇಷ್ಟು ಪೂಜ್ಯ ಸ್ಥಾನಮಾನವಿರುವ ತಿಳಿವಳಿಕೆ ಕೂಡ ನಮಗಿರಲಿಲ್ಲವಲ್ಲ ಎಂದು ಆಶ್ಚರ್ಯವಾಯಿತು.

ಐದು ಸಾವಿರ ವರ್ಷಗಳ ಹಿಂದೆ ಉತ್ತರ ಆಫ್ರಿಕಾದ ಕಾಡುಗಳಲ್ಲಿ ಸ್ವಚ್ಛಂದವಾಗಿ ಅಂಡಲೆಯುತ್ತಿದ್ದ ಕಾಡುಜೀವಿ ಕತ್ತೆಗಳು, ಮಾನವನ ಹಿಡಿತಕ್ಕೆ ಸಿಕ್ಕಿ ಪಳಗಿ ಅವನ ಅಡಿಯಾಳಾಗಿ ಮುಂದುವರೆದ ಅಧ್ಯಾಯಗಳೆಲ್ಲ ನೆನಪಿಗೆ ಬಂದವು. ಅವು ಮರುಭೂಮಿ, ಹಿಮಪರ್ವತಗಳ ಕಠಿಣ ಹಾದಿಗಳಲ್ಲಿ, ಯುದ್ಧಗಳಲ್ಲಿ, ಸರಕು ಸಾಗಿಸುವ ಸಾಧನಗಳಾದವು.

ಯುದ್ಧಭೂಮಿಯಲ್ಲಿ ಅವು ಒದಗಿಸಿದ ಸೇವೆಗಳಿಗಾಗಿ ಇಂಗ್ಲೆಂಡ್ ಜನರಿಗೆ ಕತ್ತೆಗಳನ್ನು ಕಂಡರೆ ವಿಶೇಷ ಪ್ರೀತಿ, ಕನಿಕರ. ಆದರೆ, ಇಂಡಿಯಾದಲ್ಲಿ ಕೂಡ ಕತ್ತೆಗಿರುವ ಗೌರವಾಧಾರಗಳನ್ನು ನೋಡಿದಾಗ ನಮಗೆ ಅಚ್ಚರಿಯಾಯಿತು.

ಕುತೂಹಲ ತಡೆಯಲಾರದೆ ಆ ಬಾವಿಗಳ ಬಳಿ ತೆರಳಿದೆವು. ಅಲ್ಲಿ ಬೇರೊಂದು ಕಥೆಯೇ ಅನಾವರಣಗೊಂಡಿತು. ಅಲ್ಲಿದ್ದ ಮೂರು ಬಾವಿಗಳಲ್ಲಿ ಒಂದು ಬಾವಿಯನ್ನು ದಲಿತರು ಉಪಯೋಗಿಸುತ್ತಿದ್ದರು. ಮತ್ತೆರಡು ಬಾವಿಗಳು ಉಳಿದ ಬೇರೆ ಬೇರೆ ಜಾತಿಯವರಿಗೆ ಹಂಚಿಕೆಯಾಗಿತ್ತು. ಅದರಲ್ಲಿ ಒಂದು ಬಾವಿ ಬರಗಾಲದಿಂದಾಗಿ ಬತ್ತಿಹೋಗಿತ್ತು.

ಕೆಲವು ದಿನಗಳ ಹಿಂದೆ ಮತ್ತೊಂದು ಬಾವಿಗೆ ಕತ್ತೆಯೊಂದು ಆಕಸ್ಮಿಕವಾಗಿ ಜಾರಿ ಬಿದ್ದಿತ್ತು. ಅದೇ ನೀರನ್ನು ಕುಡಿಯುತ್ತಿದ್ದ ಮಂದಿಗೆ ಕೆಲವು ದಿನಗಳ ಬಳಿಕ ಕತ್ತೆ ಬಾವಿಗೆ ಬಿದ್ದು ಕೊಳೆತಿರುವುದು ಗಮನಕ್ಕೆ ಬಂತು. ಈಗ ‘ಅಸ್ಪೃಶ್ಯ’ರ ಬಾವಿಯಲ್ಲಿ ಮಾತ್ರ ಕುಡಿಯುವ ನೀರಿತ್ತು.

ಧರ್ಮಸಂಕಟಕ್ಕೆ ಸಿಕ್ಕಿಬಿದ್ದಿದ್ದ ಊರಿನ ಮಂದಿಗೆ ಅನ್ಯಮಾರ್ಗವಿರಲಿಲ್ಲ. ಕುಡಿಯುವ ನೀರಿಗೆ ‘ಆ’ ಬಾವಿಯೊಂದೇ ಗತಿಯಾಗಿತ್ತು. ಹಾಗಾಗಿ ಹೋಮ, ಪೂಜೆಗಳೊಂದಿಗೆ ಆ ಬಾವಿಯನ್ನು ಶುದ್ಧಮಾಡುತ್ತಿದ್ದರು. ಶುದ್ಧವಾಗಿಯೇ ಇದ್ದ ನೀರಿಗೆ ಗಂಜಲ ಪ್ರೋಕ್ಷಿಸಿ ಶುದ್ಧವಾಗಿಸುವ ಪ್ರಯತ್ನ ನಡೆಸಿದ್ದರು.

ಮುಂದಿನ ಹಲವು ತಿಂಗಳುಗಳ ಕಾಲ ಆ ಊರಿನ ಎಲ್ಲ ಜಾತಿಯ ಜನರೂ ಅದೇ ಬಾವಿಯಿಂದ ನೀರು ಸೇದಿ ಕುಡಿಯುವ ಪದ್ಧತಿ ಆರಂಭವಾಯಿತು. ನೂರಾರು ಸಮಾಜ ಸುಧಾರಕರ, ಮಾನವತಾವಾದಿಗಳ, ಹರಿಕಾರರ ಹಲವಾರು ವರ್ಷಗಳ ನಿರಂತರ ಹೋರಾಟ ತರಲಾರದ ಬದಲಾವಣೆಯೊಂದನ್ನು ಕತ್ತೆಯೊಂದು ಸಾಧಿಸಿ, ಜೀವ ತೆತ್ತಿತ್ತು.

ಬರ, ಕಾಡಿನಲ್ಲಿ ಅನಾರೋಗ್ಯಕರ ಜೀವಿಗಳನ್ನು ತೊಡೆದುಹಾಕಿ, ಆರೋಗ್ಯಕರ ಜೀವಸಂಕುಲದ ಮರುಹುಟ್ಟಿಗೆ ದಾರಿ ಮಾಡಿಕೊಟ್ಟಂತೆಯೇ, ಇಲ್ಲಿ ಒಂದು ಆರೋಗ್ಯಕರ ಸಮಾಜಕ್ಕೆ ಬುನಾದಿ ಹಾಕುವ ಪ್ರಯತ್ನ ಮಾಡಿತ್ತು. ಅದು ಕೊಂಚಮಟ್ಟಿಗೆ ಯಶಸ್ವಿಯಾಗಿತ್ತು, ತಾತ್ಕಾಲಿಕವಾಗಿಯಾದರೂ...

ಪ್ರಕೃತಿ ಮೇಲ್ನೋಟಕ್ಕೆ ನಿಷ್ಕರುಣಿ ಮತ್ತು ವಿಛಿದ್ರಕಾರಿ ಶಕ್ತಿಯಾಗಿ ಕಾಣಿಸುತ್ತದೆ. ಆದರೆ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದಾಗ ಅಥವ ಕತ್ತೆತ್ತಿ ಅಸಂಖ್ಯಾತ ಆಕಾಶಕಾಯಗಳತ್ತ ದೃಷ್ಟಿ ಹಾಯಿಸಿ ವಿಶ್ವದ ಅಗಾಧತೆಯನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದಾಗ, ನಮ್ಮ ಜೀವನದೃಷ್ಟಿಯೇ ಬದಲಾಗಬಹುದು.

ವಿಶ್ವದಲ್ಲಿ ನೂರು ಬಿಲಿಯನ್‌ಗೂ (ಒಂದು ಬಿಲಿಯನ್‌ ಎಂದರೆ ನೂರು ಕೋಟಿ) ಹೆಚ್ಚು ತಾರಾಪುಂಜಗಳಿವೆ. ಪ್ರತಿ ತಾರಾಪುಂಜಗಳಲ್ಲೂ ನೂರು ಬಿಲಿಯನ್‌ಗೂ ಮೀರಿದ ನಕ್ಷತ್ರಗಳಿವೆ. ಈ ಪಟ್ಟಿಯಲ್ಲಿ ಗ್ರಹ ಅಥವ ಉಪಗ್ರಹಗಳು ಸೇರಿಲ್ಲ!

ಅಂದರೆ, ನಮ್ಮ ಸೂರ್ಯ, ವಿಶ್ವದ ಸುಮಾರು ಹತ್ತು ಸಾವಿರ ಕೋಟಿ ನಕ್ಷತ್ರಗಳಲ್ಲಿ, ಒಂದು ಪುಟ್ಟ ನಕ್ಷತ್ರ ಮಾತ್ರ. ಹಾಗಾಗಿ ಇಡೀ ವಿಶ್ವದ ಪರಿಕಲ್ಪನೆಯಲ್ಲಿ ಸೌರವ್ಯೂಹ ಎಂಬುದು ಒಂದು ಚುಕ್ಕೆ ಮಾತ್ರ. ಸೂರ್ಯ ಒಂದು ದೂಳಿನ ಕಣವಾದರೆ ಭೂಮಿ ಒಂದು ಅಣುವಿನಂತೆ. ಅಲ್ಲಿಗೆ ಮನುಷ್ಯನ ಗಾತ್ರವನ್ನು ನೀವೇ ಊಹಿಸಿಕೊಳ್ಳಿ.

ಹಾಗಿದ್ದೂ, ಈ ಭೂಮಿ ಒಂದು ಅಪೂರ್ವ ಗ್ರಹ. ನಮಗೆ ಈವರೆಗೆ ತಿಳಿದಿರುವಂತೆ, ಜೀವಿಗಳಿರುವ ಏಕ ಮಾತ್ರ ಆಕಾಶಕಾಯ. ಲೆಕ್ಕವಿಲ್ಲದಷ್ಟು ಕಾಕತಾಳೀಯತೆ ಮತ್ತು ಆಕಸ್ಮಿಕಗಳ ಸಮ್ಮಿಳನಗಳಿಂದ ಉಗಮಗೊಂಡು, ವಿಕಾಸ ಹೊಂದಿದ ಮಾನವ, ಇಂದು ವಿಶ್ವದ ವಿಸ್ಮಯಗಳನ್ನು ಕೆಲಮಟ್ಟಿಗೆ ಅರ್ಥೈಸುವ, ವಿಶ್ಲೇಷಿಸುವ ಮಟ್ಟಕ್ಕೇರಿದ್ದಾನೆ.

ಆದರೆ, ತೇಲುತ್ತಿರುವ ಈ ಅಪೂರ್ವ ಜೀವಚೈತನ್ಯದಲ್ಲಿ ಒಬ್ಬನಾಗಿರುವ ಆತ, ತನ್ನ ಅದೃಷ್ಟವನ್ನು ಮನಗಾಣದೆ, ತನ್ನ ಸುತ್ತಲಿನ ಜೀವಪರಿಸರವನ್ನು ಗೌರವಿಸುವ, ಪ್ರೀತಿಸುವ, ಆಸ್ವಾದಿಸುವ ಬದಲು ಕ್ಷುಲ್ಲಕ ವಿಚಾರಗಳಲ್ಲಿ ಕಳೆದುಹೋಗಿದ್ದಾನೆ.

ಜೀವಸಂಕುಲಗಳ ವಿಕಾಸದ ಹಾದಿಯನ್ನು, ಭೂಮಿ ಹಾಗೂ ಇತರೆ ಆಕಾಶಕಾಯಗಳ ಹುಟ್ಟನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದಾಗ, ಎಲ್ಲದರ ನಡುವೆ ಇರುವ ನಿಕಟ ಸಂಬಂಧಗಳ ಚಿತ್ರಣ ಮೂಡುತ್ತದೆ... ಬಿದ್ದಿರುವ ಕಲ್ಲು, ಮಲಗಿರುವ ಮಣ್ಣು, ಹರಿಯುವ ನೀರು, ಬೀಸುವ ಗಾಳಿ, ಗಿಡ, ಮರ, ಪ್ರಾಣಿ, ಮಾನವ ಎಲ್ಲವೂ ಸೇರಿದಂತೆ.

ಹಾಗಾಗಿ, ತನ್ನ ಗಂಭೀರ ಅಧ್ಯಯನದಲ್ಲಿ ತೊಡಗಿಸಿಕೊಂಡರವನ್ನು, ವಿಶಾಲಹೃದಯಿಗಳನ್ನಾಗಿ ಹಾಗೂ ವಿನಯವಂತರನ್ನಾಗಿ ಪರಿವರ್ತಿಸುವ ಶಕ್ತಿ ಕೂಡ ಈ ಪ್ರಕೃತಿಗಿರುವುದು ನಿಜ.

Sunday, January 29, 2017

ಸಹಪಂಕ್ತಿ ಭೋಜನ

 ಸಹಪಂಕ್ತಿ ಭೋಜನದ ಬಗ್ಗೆ ಚಚೆ೯ ವಾದ ವಿವಿಧಗಳು ಆಗುತ್ತಾ ಇರುವುದು. ಒಟ್ಟಿಗೆ ಹಂಚಿ ತಿನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಬೇಕೆ? ಆಳುವ ಪ್ರಭುಗಳಿಗೆ, ಧರ್ಮದ ಗುತ್ತಿಗೆ ಪಡೆದವರಿಗೆ, ಪ್ರಗತಿಶೀಲರೆಂಬ ಹಣೆಪಟ್ಟಿ ಹೊಂದಿದವರಿಗೆ ಇಂತಹ ಮಕ್ಕಳ ಸಂದೇಶ....ತಲುಪದೇ ಇರುವುದು ನಮ್ಮ ಶೈಕ್ಷಣಿಕ ವ್ಯವಸ್ಥೆಯ ಅತಿ ದೊಡ್ಡ ದುರಂತವಾಗಿದೆ.




Saturday, January 28, 2017

ಮಕ್ಕಳನ್ನು ಯಂತ್ರಗಳನಾನ್ನಗಿಸುವ ವ್ಯವಸ್ಥೆ - ವಿವೇಕ ಬೆಟ್ಕುಳಿ,



ಹುಟ್ಟಿದಾಗ ಅಳುವ, ಆ ನಂತರದಲ್ಲಿ ಹಸಿವಾದಾಗ, ನೋವಾದಾಗ ಅಳುತ್ತಾ, ತನ್ನಷ್ಟಕ್ಕೆ ನಗುತ್ತಾ ಬೆಳೆಯುವ ಮಗು ತೊದಲು ಮಾತನಾಡಿದಾಗ...ಅಮ್ಮ, ಅಪ್ಪ...ಅಣ್ಣ  ಏನೇ ಹೇಳಿದರು ಮನೆ ಮಂದಿಯೆಲ್ಲಾ ಸಂತೋಷದಿಂದ ಆ ಮಗುವಿನ ಸಹಜತೆಯಿಂದ ಆಕಷಿ೯ತರಾಗುವರು. ಯಾವುದೇ ಹುದ್ದೆ, ಅಂತಸ್ತು ಯಾವುದೂ ಸಹಾ ಆ ಮಗುವಿಕೆ ತಿಳಿದರುವುದಿಲ್ಲ, ಮಗುವಿನ ಜನನ ಅದರ ಆಕರ್ಷಣೆಯಿಂದಾಗಿ ಮಗುವಿನ ತಾಯಿ ಸಹಾ ನಿಧಾನವಾಗಿ ಗೌರವಕ್ಕೆ ಅರ್ಹಳಾಗುವಳು. ಇಂತಹ ಮುಗ್ದ ಮನಸ್ಸಿನ ಮಕ್ಕಳು ಚಿಕ್ಕ ಪುಟ್ಟ ಹೆಜ್ಜೆಯನ್ನು ಇಡುತ್ತಾ ಮನೆಯೆಲ್ಲಾ ಓಡಾಡುವುದು. ಅದಕ್ಕೊಂದು ಹೆಸರು, ಜಾತಿ ನೀಡಿ ಯಾವಾಗ ನಾವು ಪ್ರತೇಕ ಗುರುತಿಸುವಿಕೆ ಪ್ರಾರಂಭ ಮಾಡುವೆವು. ಅಂದಿನಿಂದ ಮಕ್ಕಳು ತಮ್ಮತನವನ್ನು ಕಳೆದುಕೊಳ್ಳತೊಡಗುವರು. ಸಹಜವಾಗಿ ಇರುವ ಮಗುವಿಗೆ ಮನೆಯ ಅಂತಸ್ತು, ಅಪ್ಪ ಅಮ್ಮನ ಗೌರವ ಜಾತಿ, ಧರ್ಮದ ರೀತಿ ಈ ಎಲ್ಲವನ್ನು ಆ ಮಗುವಿನ ನಡುವಳಿಕೆ, ಆಹಾರ ವೇಷ ಭೂಷಣದಲ್ಲಿ ಒತ್ತಾಯವಾಗಿ ತುರುಕಲು ಪ್ರಾರಂಭಿಸುವೆವು. ಅದರ ಮುಂದುವರೆದ ಭಾಗವಾಗಿಯೇ ಶಾಲೆಗಳು ಸೃಷ್ಠಿಯಾಗಿರುವುದು. ಯಾವಾಗ ಮಗು ಶಾಲೆಗೆ ಹೋಗಲು ಪ್ರಾರಂಭ ಮಾಡುವುದೋ ಅಂದಿನಿಂದ ಮಗು ಯಾಂತ್ರಿಕ ಮಗುವಾಗಿರುವುದು, ವಿನಹ: ಸಹಜ ಮಗುವಾಗಿರದು. ಸಹಜ ಮಗುವನ್ನು ಯಾಂತ್ರಿಕ ಮಗುವನ್ನಾಗಿಸುವಲ್ಲಿ ಮುಖ್ಯವಾಗಿ ತಾಯಿ, ತಂದೆ ಹಾಗೂ ಶಾಲಾ ಶಿಕ್ಷಕರ ಪಾತ್ರ ಬಹುಮುಖ್ಯವಾಗಿರುವುದು. ಸ್ವಲ್ಪ ಸಹಜತೆ ಬಗ್ಗೆ ಮಾತನಾಡುವ ಅಜ್ಜ, ಅಜ್ಜಿ ಕಡೆ ಸಹಜವಾಗಿ ಮಗು ಆಕಷಿ೯ತವಾಗುವುದು. ಆದರೇ ಇಂದಿನ ಆದುನಿಕ ಯುಗದಲ್ಲಿ ವಯಸ್ಸಾದವರನ್ನು ವೃದ್ದಾಶ್ರಮದಲ್ಲಿ ಇಡುವ ವ್ಯವಸ್ಥೆ ಪ್ರಾರಂಭವಾಗಿರುವುದರಿಂದ ಮಗುವಿನ ಬಗ್ಗೆ, ಅದರ ಸ್ವಾತಂತ್ಯದ ಬಗ್ಗೆ ಮಾತನಾಡುವ ಯಾರು ಸಹಾ ಅದರ ಜೊತೆ ಇಲ್ಲದಂತೆ ಆಗಿರುವುದು. ಇಂತಹ ಸನ್ನಿವೇಶದಲ್ಲಿ ಖಾಸಗಿ ಶಾಲೆಗೆ ಹೋಗುವುದು, ಇಂಗ್ಲೀಷ ಮಾತನಾಡುವುದು, ಉತ್ತಮವಾದ ವೇಷ ಭೂಷಣ ಧರಿಸಿ ಬೇರೆ ಬೇರೆ ಭಾಷೆಯಲ್ಲಿ ಮಾತನಾಡುವುದು. ಒಟ್ಟಾರೆ ಎಲ್ಲರಕ್ಕಿಂತ ಮುಂದೆ ಬಂದು ಶಾಲೆಯಲ್ಲಿ ಉತ್ತಮ ವಿದ್ಯಾಥಿ೯ ಅನಿಸಿಕೊಳ್ಳುವುದೇ ಮಕ್ಕಳ ಮುಖ್ಯ ಕತ್ಯರ್ವವಾಗಿರುವುದು.


ಈ ಎಲ್ಲ ರೀತಿಯ ಪ್ರಯಾಣವನ್ನು ಮುಗಿಸಿ 15 ವರ್ಷಕ್ಕೆ ಕಾಲಿರಿಸದ ಮಕ್ಕಳು. ಯಂತ್ರಗಳಾಗಿರುವರು. ಭಾವನೆಗಳಿಗೆ ಬೆಲೆ ಇಲ್ಲದೆ, ತಪ್ಪು ಸರಿಯ ನಡುವಿನ ದಾರಿ ತಿಳಿಯದೇ, ಏನಾದರೂ ಮಾಡು ಉತ್ತಮವಾಗಿ ಅಂಕ ತೆಗೆದು ಹೆಚ್ಚು ಹಣ ಸಂಪಾದಿಸುವ ಕೆಲಸ ಮಾಡುವುದು. ತಮ್ಮ ಜೀವನದ ಗುರಿಯನ್ನಾಗಿ ಮಾಡಿಕೊಂಡು ಮಕ್ಕಳು ಮುಂದೆ ಸಾಗುವರು. ಇಂತಹ ಮಕ್ಕಳಿಗೆ ಅಜ್ಜ ಅಜ್ಜಿಯ ಪ್ರೀತಿ ಬೇಕಾಗಿಲ್ಲ, ಎತ್ತಿ ಆಡಿಸಿದ ಮನೆಮಂದಿಯ ಬಗ್ಗೆ ಕಲಿಕರವಿಲ್ಲ. ಏನಿದ್ದರು ಒಬ್ಬರನ್ನು ಹಿಂದೆ ಹಾಕಿ ಮುಂದೆ ಹೋಗುವುದು ಮಾತ್ರ ತಿಳಿದಿರುವುದು. ನನ್ನ ಆಸುಪಾಸಿನಲ್ಲಿ ನಮ್ಮ ಮನೆಯ ವಾತಾವರಣದಲ್ಲಿ ಹತ್ತಾರು ಮಕ್ಕಳನ್ನು ನಾನು ಕಳೆದ 15-20 ವರ್ಷದಿಂದ ನೋಡುತ್ತಾ ಇರುವೆನು. ವರ್ಷಗಳು ಕಳೆದಂತೆ ಈ ತರಹದ ವಿಷಕಾರಿ ವಾತಾವರಣ ಮಾತ್ರ ಹೆಚ್ಚಾಗುತ್ತಾ ಇರುವುದು. ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡಿ ಪರಿಹಾರ ಹುಡುಕುವ ಅಗತ್ಯವಿದೆ. ಇಲ್ಲವಾದರೇ ನಮ್ಮ ಮುಂದಿನ ದಿನಗಳಲ್ಲಿ ದ್ವೇಷ, ಅಸೂಯೆ, ಮೋಸ, ಯುದ್ದ, ಹಿಂಸೆ ಈ ಎಲ್ಲವುಗಳು ಜಗತ್ತಿನ ಎಲ್ಲಾ ಕಡೆಯಲ್ಲಿಯೂ ಮನೆ ಮನೆಗಳಲ್ಲಿಯೂ ಆವರಿಸುವುದು ಖಂಡಿತ.
ಪ್ರೀತಿ, ಪ್ರೇಮ ಶಾಂತಿಯ ಜಗತ್ತಿಗಾಗಿ, ನಮ್ಮ ಮನೆಗಾಗಿ, ಮಕ್ಕಳನ್ನು ಸಹಜವಾದ ವಾತಾವರಣದಲ್ಲಿ ಬೆಳಸಬೇಕಾಗಿದೆ. ಅದೇ ರೀತಿ ನಮ್ಮ ಸಂಪೂರ್ಣ ಶೈಕ್ಷಣಿಕ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಅಗತ್ಯವಿದೆ. ಇದೇ ರೀತಿ ಶೈಕ್ಷಣಿಕ ವ್ಯವಸ್ಥೆ ಮುಂದುವರೆದರೆ ಬರುವ ಜಗತ್ತಿನಲ್ಲಿ ಮಕ್ಕಳು/ಜನರು ಗಳೆಂಬ ಯಂತ್ರಗಳು ಸಿಗುವುದು ವಿನಹ: ಭಾವನೆಗಳಿರುವ ಜೀವಿಗಳು ಸಿಗಲು ಸಾಧ್ಯವೇ ಇಲ್ಲ









ಮುಗ್ದ ಮನಸ್ಸುಗಳು..

ಪದೇ ಪದೇ ಕಾಡುವ ಹುಡುಗಿ...
......ಅಂದು ನಿನ್ನ ಪೋಟೋ ತೆಗೆದುಕೊಂಡೆ ಇಂದು ನಿನ್ನನ್ನು ಮರೆಯಲು ಆಗುತ್ತಿಲ್ಲ.ನಿನಗಾಗಿ ನಾನು ಏನು ಮಾಡಲು ಆಗುತ್ತಿಲ್ಲ. ನಮ್ಮ ಸುತ್ತಮುತ್ತಲಿನ ನಿನ್ನಂತ ಸಾವಿರಾರು ಮುಗ್ದ ಮಕ್ಕಳಿಗೆ ಸಿಗಬಹುದಾದ ಸ್ವಾತಂತ್ಯದ ನಿರಿಕ್ಷೇಯಲ್ಲಿ ನಾನು ಇರುವೆನು.......ಕನಸು ಕಾಣುತ್ತಿರುವುವೆನು

Wednesday, January 25, 2017

ಭಗವದ್ಗೀತೆಯ ಕಿರು ಪರಿಚಯ - ಪ್ರಶ್ನೋತ್ತರಮಾಲಿಕೆ.. Badari Prasad Margasahayam


* ಭಗವದ್ಗೀತೆಯನ್ನು ಯಾರು ಯಾರಿಗೆ ಬೋಧಿಸಿದರು..?
ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ.


* ಯಾವಾಗ ಬೋಧಿಸಿದ..?

ಉತ್ತರ : ಇಂದಿನಿಂದ ಸುಮಾರು ೭ ಸಾವಿರ ವರ್ಷಗಳ ಹಿಂದೆ.


* ಯಾವ ದಿನ ಬೋಧಿಸಿದ..?
ಉತ್ತರ : ರವಿವಾರ.
* ಯಾವ ತಿಥಿಯಲ್ಲಿ..?
ಉತ್ತರ : ಏಕಾದಶಿಯಂದು.
* ಎಲ್ಲಿ ಬೋಧಿಸಿದ..?
ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ.
* ಎಷ್ಟು ಸಮಯ ಬೋಧಿಸಿದ..?

ಉತ್ತರ : ೪೫ ನಿಮಿಷ.
* ಅರ್ಜುನನಿಗೇಕೆ ಗೀತೆಯನ್ನು ಬೋಧಿಸಿದ..?

ಉತ್ತರ : ಕ್ಷತ್ರಿಯನಿಗೆ ಕರ್ತವ್ಯವಾದದ್ದು ಯುದ್ಧ..ತನ್ನ ಕರ್ತವ್ಯದಿಂದ ಅರ್ಜುನ
ವಿಮುಖನಾಗಲು ಬಯಸುತ್ತಾನೆ. ಯುದ್ಧಮಾಡದಿರಲು ನಿಶ್ಚಯಿಸುತ್ತಾನೆ. ಆತನಿಗೆ ತನ್ನ ಕರ್ತವ್ಯಗಳನ್ನು ಮನದಟ್ಟು
ಮಾಡಲು ಹಾಗೂ ಭವಿಷ್ಯದ ಮಾನವಸಂತತಿಗೆ ಧರ್ಮಜ್ಞಾನವನ್ನು ನೀಡಲು ಕೃಷ್ಣ ಗೀತೆಯನ್ನು ಬೋಧಿಸಿದ.
* ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ..?
ಉತ್ತರ : ಹದಿನೆಂಟು.

* ಎಷ್ಟು ಶ್ಲೋಕಗಳಿವೆ..?
ಉತ್ತರ : ೭೦೦ ಶ್ಲೋಕಗಳು.

* ಗೀತೆಯಲ್ಲಿರುವ ವಿಷಯಗಳಾವವು..?

ಉತ್ತರ : ಜ್ಞಾನ - ಭಕ್ತಿ - ಕರ್ಮ - ಯೋಗ ಮಾರ್ಗಗಳ ವಿಸ್ತೃತವಾದ ವ್ಯಾಖ್ಯಾನ..ಈ ಮಾರ್ಗಗಳಲ್ಲಿ
ನಡೆಯುವವರು ಖಂಡಿತವಾಗಲೂ ಪರಮಸ್ಥಾನವನ್ನು ಪಡೆಯುತ್ತಾರೆಂದು ಹೇಳಲಾಗಿದೆ..
* ಅರ್ಜುನನನ್ನು ಬಿಟ್ಟರೆ ಗೀತೆಯನ್ನು ಮತ್ತ್ಯಾರು ಕೇಳಿದ್ದಾರೆ..?
ಉತ್ತರ : ಧೃತರಾಷ್ಟ್ರ ಹಾಗೂ ಸಂಜಯ.

* ಅರ್ಜುನನಿಗಿಂತಲೂ ಮೊದಲು ಗೀತೆಯ ಪವಿತ್ರ ಜ್ಞಾನ ಯಾರಿಗೆ ತಿಳಿದಿತ್ತು...?
ಉತ್ತರ : ಭಗವಾನ್ ಸೂರ್ಯದೇವನಿಗೆ.
* ಭಗವದ್ಗೀತೆಯನ್ನು ಯಾವ ಧರ್ಮಗ್ರಂಥದಲ್ಲಿ ಸೇರಿಸಲಾಗಿದೆ..?
ಉತ್ತರ : ಉಪನಿಷತ್ತಿನಲ್ಲಿ.

* ಗೀತೆ ಯಾವ ಗ್ರಂಥದ ಭಾಗವಾಗಿದೆ..?
ಉತ್ತರ : ಮಹಾಭಾರತದ ಭೀಷ್ಮಪರ್ವದ ಒಂದು ಭಾಗವಾಗಿದೆ.

* ಭಗವದ್ಗೀತೆಯ ಇನ್ನೊಂದು ಹೆಸರು..?
ಉತ್ತರ : ಗೀತೋಪನಿಷತ್.
* ಗೀತೆಯ ಸಾರವೇನು..?
ಉತ್ತರ : ಕರ್ಮಫಲಗಳನ್ನು ಬಿಟ್ಟು , ಭಗವಂತನಲ್ಲಿ
ಶರಣಾಗತಿಯನ್ನು ಹೊಂದುವುದು..
* ಭಗವದ್ಗೀತೆಯಲ್ಲಿ
ಯಾರು ಎಷ್ಟು ಶ್ಲೋಕಗಳನ್ನು ಹೇಳಿದ್ದಾರೆ..?
ಉತ್ತರ : ಶ್ರೀಕೃಷ್ಣ - ೫೭೪. ಅರ್ಜುನ - ೮೫ ಧೃತರಾಷ್ಟ್ರ - ೦೧ ಸಂಜಯ - ೪೦
ಶ್ರೀಕೃಷ್ಣಾರ್ಪಣಮಸ್ತು

ಶ್ರೀವಿಷ್ಣು ಸಹಸ್ರನಾಮದ ಮಹತ್ವ:
ಮನುಷ್ಯನ ಆಯಸ್ಸು ನೂರು ವರ್ಷ... ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.

ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ..- ಶ್ರೀ ವಿಷ್ಣು ಸಹಸ್ರ ನಾಮ ..

ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.
ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು(ಸಾಕ್ಷಾತ್ ಶ್ರೀಹರಿ) ನಮಗೆ ಕರುಣಿಸಿದ್ದಾರೆ..

|| ಶ್ರೀಕೃಷ್ಣಾರ್ಪಣಮಸ್ತು ||
|| ನಾಹಂ ಕರ್ತಾ ಹರಿಃ ಕರ್ತಾ |

Monday, January 9, 2017

ಹೊಣೆಯರಿತ ನಾಗರಿಕರಿಂದ - ಮಾನ್ಯ ಮುಖ್ಯಮಂತ್ರಿಗಳೇ ನಮ್ಮ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.

ಹೊಣೆಯರಿತ ನಾಗರಿಕರಿಂದ:
ಮಾನ್ಯ ಮುಖ್ಯಮಂತ್ರಿಗಳೇ ನಮ್ಮ ಈ  ಪ್ರಶ್ನೆಗಳಿಗೆ ಉತ್ತರಿಸಿ ಎಂದು ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.
ಮಾಧ್ಯಮಗಳ ವರದಿಯ ಪ್ರಕಾರ, ಘನವೆತ್ತ ಕರ್ನಾಟಕ ಸರಕಾರ ಪ್ರಾಥಮಿಕ, ಮಾಧ್ಯಮಿಕ ಹಾಗು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹೊಸ  ಪಠ್ಯಪುಸ್ತಕಗಳನ್ನು ೨೦೧೭ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ನಿರ್ಧರಿಸಿದೆ. ಈ ಹೊಸ ಪಠ್ಯಕ್ರಮ ಬಹಳಷ್ಟು ವಿಕೃತ ಮತ್ತು  ತಪ್ಪುಮಾಹಿತಿಗಳನ್ನು ಒಳಗೊಂಡಿದೆ ಎಂಬ ವದಂತಿ ಹರಿದಾಡುತ್ತಿದೆ.
ಘನವೆತ್ತ ರಾಜ್ಯಸರ್ಕಾರ ಹಾಗು  ಪ್ರಾಥಮಿಕ ಶಿಕ್ಷಣ ವಿಭಾಗ ಪುಸ್ತಕಗಳ ಪರಿಷ್ಕರಣೆ ಮತ್ತು ಬದಲಾವಣೆಯ ಬಗ್ಗೆ ಯಾವುದೇ ರೀತಿಯ ಪಾರದರ್ಶಕ ವಿಚಾರ ವಿನಿಮಯ ನಡೆಸಿಲ್ಲ. ಹೊಸ ಪುಸ್ತಕ ರಚನೆಗೆ,ಬೇರೆ ಬೇರೆ ವಿಷಯದಲ್ಲಿ ರಚನೆಯಾದ ಸಮಿತಿಗಳಿಗೆ ತಮ್ಮ ಅಂತಿಮ ಕರಡನ್ನು ಸಲ್ಲಿಸಲು  ೧೫ ಜನವರಿ ೨೦೧೭ ಕೊನೆಯದಿನವಾದರೂ, ಬೇರೆ ಯಾವುದೇ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳದೆ ಸರಕಾರ ಈ ಪಠ್ಯಗಳನ್ನು ನಿಗೂಢರೀತಿಯಲ್ಲಿ ಮುಂದಿನ ಆರು ತಿಂಗಳಲ್ಲಿ ಪ್ರಕಟಿಸಲು ಹೊರಟಿದೆ.
ಈ ಪಠ್ಯಪುಸ್ತಕ ಬದಲಾವಣೆಯ ವಿಚಾರದಲ್ಲಿ ಸರಕಾರದ ಮತ್ತು ಪಠ್ಯಪುಸ್ತಕ ಸಮಿತಿಯ ನಡವಳಿಕೆ ಮತ್ತು ನಿಗೂಢತೆ, ಮುಂದಿನ ಪೀಳಿಗೆಗಳ ಮಧ್ಯೆ ವೈಷಮ್ಯ ಮತ್ತು ಅಸಮಾನತೆಯ ಬೀಜ ಬಿತ್ತುವ ಪ್ರಯತ್ನವಾಗಿದೆ ಎಂಬ ಸಂಶಯ ಮೂಡುತ್ತದೆ.
ನಮ್ಮ ಮಕ್ಕಳ ಹಾಗು ಅವರ ಪೀಳಿಗೆಯ/ಗಳ ಭವಿಷ್ಯದ ಕಾಳಜಿಯಿಂದ, ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು, ಕರ್ನಾಟಕದ ಘನವೆತ್ತ ಮುಖ್ಯಮಂತ್ರಿಗಳಾದ ಶ್ರೀ. ಸಿದ್ಧರಾಮಯ್ಯ ಅವರಿಂದ ಈ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಆಗ್ರಹಪೂರ್ವಕವಾಗಿ ಕೇಳುತ್ತಿದ್ದೇವೆ.
. ೨೦೧೭ರಲ್ಲಿ ಕೇಂದ್ರ ಸರಕಾರ ಹೊಸ ರಾಷ್ಟ್ರೀಯ ಶೈಕ್ಷಣಿಕ ಕಾರ್ಯನೀತಿಯನ್ನು ಜಾರಿಗೆ ಸೂಚನೆ ಇದ್ದರೂ, ಯಾಕೆ ರಾಜ್ಯ ಸರಕಾರ ಈ ಹೊಸ ಪಠ್ಯಪುಸ್ತಕವನ್ನು ಪ್ರಕಟಿಸಲು ಅವಸರಿಸುತ್ತಿದೆ? ಒಮ್ಮೆ ಪಠ್ಯಪುಸ್ತಕವನ್ನು ಬದಲಾಯಿಸಿ ಪ್ರಕಟಿಸಿದರೆ, ಮುಂದಿನ ಕೆಲವು ವರ್ಷಗಳ ಕಾಲ ಹೊಸ ಪಠ್ಯಪುಸ್ತಕ ತರುವುದುದು ಬೇರೆ ಬೇರೆ ಕಾರಣಗಳಿಗಾಗಿ ಕಷ್ಟ ಎಂಬ ಅರಿವು ಸರಕಾರಕ್ಕೆ ಇಲ್ಲವೇ ಅಥವಾ ಅರಿವಿದ್ದು ಪ್ರಕಟಿಸುವ ಧ್ರಾಷ್ಟವೇ?
೨. ೨೦೧೭ರಲ್ಲಿ, ರಾಷ್ಟ್ರೀಯ ಪಾಠಕ್ರಮ ಚೌಕಟ್ಟು ೨೦೦೫ರ (NCF ೨೦೦೫)ರ ಪ್ರಕಾರ ಪಠ್ಯಕ್ರಮವನ್ನು ತಯಾರಿಸಿರುವುದು ಪಠ್ಯಕ್ರಮದ ಗುಣಮಟ್ಟದ ಬಗ್ಗೆ ಸಂಶಯ ಮೂಡುವುದಿಲ್ಲವೇ?
೩. ಪಠ್ಯ ಪುಸ್ತಕಗಳ ವಿಷಯ ತಜ್ಞರು ವಿಷಯ ಸಂಭಂದಿತ ವರದಿಯನ್ನು ಮತ್ತು ಅದರ ವಿಮರ್ಶೆಯ ವರದಿಯನ್ನು ನೀಡದಿದ್ದರೂ, ಹೊಸ ಪಠ್ಯ ಪುಸ್ತಕಗಳನ್ನು ೨೦೧೭ರ ಶೈಕ್ಷಣಿಕ ವರ್ಷಕ್ಕೆ ಪ್ರಕಟಿಸುವ ತುರ್ತು ಯಾಕೆ.
೪. ಪಠ್ಯಕ್ರಮ ಬದಲಾವಣೆಯ ವಿಚಾರದಲ್ಲಿ ಸಂಭಂದಪಟ್ಟ ಎಲ್ಲಾ ವರ್ಗಗಳನ್ನು ಅಂದರೆ ಶೈಕ್ಷಣಿಕ ತಜ್ಞರನ್ನು, DSERT, DIETs, CTE, ಸಂಪನ್ಮೂಲ ವ್ಯಕ್ತಿಗಳನ್ನು, ರಾಜಕೀಯ ಪಕ್ಷಗಳು ಹಾಗೂ ಇನ್ನಿತರ ವರ್ಗಗಳನ್ನು ಯಾಕೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ?  ಈಗ ಪುಸ್ತಕವನ್ನು ಪ್ರಕಟ ಮಾಡಲು ಹೊರಟಿರುವ ತರಾತುರಿಯಲ್ಲಿ ಮೇಲ್ಕಂಡ ವರ್ಗಗಳ ಮರುಮಾಹಿತಿಯನ್ನು ಪಡೆಯಲು ಸಮಯ ಎಲ್ಲಿದೆ?
೫. ಹೊಸ ಪಠ್ಯ ಪುಸ್ತಕ ರಚನೆ ಮಾಡುವ ಬಗ್ಗೆ ರಾಜ್ಯ ಸರಕಾರ ಯಾಕೆ ನಿಗೂಢತೆಯನ್ನು ಕಾಪಾಡಿಕೊಂಡು ಬರುತ್ತಿದೆ? ಪಠ್ಯ ಪುಸ್ತಕದ ಯಾವ ಯಾವ ಭಾಗಗಳನ್ನು ಪುನರ್ವಿಮರ್ಶೆ, ಬದಲಾವಣೆ ಮಾಡಲಾಗಿದೆ ಹಾಗು ಯಾವ ಯಾವ ಭಾಗಗಳನ್ನು ತೆಗೆದು ಹಾಕಲಾಗಿದೆ? ಈ ವಿಚಾರಗಳ ಬಗ್ಗೆ ಯಾಕೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ?
೬. ಪಠ್ಯಪುಸ್ತಕದ ಶೇಕಡಾ ೨೦ರಷ್ಟು ಭಾಗಕ್ಕೆ ಕತ್ತರಿ ಹಾಕಿರುವುದು ನಿಜವೇ? ಈ ೨೦ ಶೇಕಡಾ ಕಡಿತ ಪಠ್ಯಪುಸ್ತಕಗಳ ಗುಣಮಟ್ಟವನ್ನು ಕಡಿಮೆ ಮಾಡಿಲ್ಲವೇ? ಇದು ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯಕ್ಕೆ, ಉನ್ನತ ಶಿಕ್ಷಣದಲ್ಲಿ ಹಾಗೂ ಉದ್ಯೋಗವಾಕಾಶಗಳನ್ನು ಕುಂಠಿತಗೊಳಿಸುವುದಿಲ್ಲವೇ?
೭. ಹೊಸ ಶೈಕ್ಷಣಿಕ ವರ್ಷಕ್ಕೆ ೬ ತಿಂಗಳು ಉಳಿದಿರುವಂತೆ (ಅದರಲ್ಲಿ ಮೂರು ತಿಂಗಳು ಪರೀಕ್ಷಾ ತಯಾರಿ ಮತ್ತು ಫಲಿತಾಂಶ ಘೋಷಣೆಯಲ್ಲಿ ಕಳೆದು ಹೋಗುತ್ತದೆ) ಘನ  ಸರಕಾರ ಶಿಕ್ಷಕರಿಗೆ ಹೇಗೆ ಹೊಸ ಪಠ್ಯಕ್ರಮದ ತರಭೇತಿಯನ್ನು ನೀಡುತ್ತದೆ ಎಂಬುದು ಯಕ್ಷ ಪ್ರಶ್ನೆಯಲ್ಲವೇ?
೮. ಮಾನ್ಯ ಮುಖ್ಯಮಂತ್ರಿಗಳು ಯಾಕೆ ಪ್ರಾಥಮಿಕ ಶಿಕ್ಷಣ ಸಚಿವ ಶ್ರೀ. ತನ್ವಿರ್ ಸೇಠ್ ಹಾಗು ಶಿಕ್ಷಣ  ಇಲಾಖೆಯ ಅಧಿಕಾರಿಗಳ ಸಲಹೆಯನ್ನು ತಿರಸ್ಕರಿಸುತ್ತಿದ್ದಾರೆ ? ಅವರು ಪಠ್ಯಪುಸ್ತಕದಲ್ಲಿ  ಯಾರ ಅಜೆಂಡಾವನ್ನು ಜಾರಿಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ?
೯. ಬರಗೂರು ರಾಮಚಂದ್ರಪ್ಪ  ಅವರಂತಹ, ಎಡಪಂತೀಯ ಲೇಖಕರಿಗೆ ಶಿಕ್ಷಣ ನೀತಿ ಮತ್ತು ಪಠ್ಯ ಪುಸ್ತಕ ಬದಲಾವಣೆಯನ್ನು ಜಾರಿಗೆ ತರುವ ಅಧಿಕಾರ ನೀಡಲಾಗಿದೆ. ಅವರನ್ನು  ಪಠ್ಯ ಪುಸ್ತಕ ಬದಲಾವಣೆಯ ಸಮಿತಿಗೆ ಆಯ್ಕೆ ಮಾಡಲು ಅವ್ರ ಅರ್ಹತೆ ಏನು?  ಇದರ ಹಿಂದಿರುವ ಕುತ್ಸಿತ ಚಿಂತನೆ ಏನು?
೧೦. ಇತಿಹಾಸ, ಗಣಿತ, ವಿಜ್ಞಾನ, ಸಮಾಜ ಶಾಸ್ತ ಹಾಗೂ ಭಾಷಾ ಪಠ್ಯಪುಸ್ತಕಗಳ ಬದಲಾವಣೆ ನಡೆಯುತ್ತಿರುವುದು, ಬರಗೂರು ರಾಮಚಂದ್ರಪ್ಪ ಈ ಬದಲಾವಣೆಗಳ ಹಿಂದಿರುವ ವ್ಯಕ್ತಿ ಎಂದಾದರೆ, ಯೋಜಿಸಲಾದ ಪಾಠಕ್ರಮ ಬದಲಾವಣೆ ಎಡಪಂತೀಯ ಚಿಂತನೆಗಳನ್ನು ಹಬ್ಬಿಸಿ, ನಮ್ಮ ಮಕ್ಕಳಲ್ಲಿ ನಮ್ಮ ಸಂಸ್ಕ್ರತಿ, ಇತಿಹಾಸ ಮತ್ತು ಪರಂಪರೆಯ ಕುರಿತಾದ ಜ್ಞಾನವನ್ನು ಮತ್ತು ಪ್ರೀತಿಯನ್ನು ಕಮ್ಮಿ ಮಾಡುವ ಪ್ರಯತ್ನವೇ?
೧೧. ರಾಷ್ಟ್ರೀಯ ಮಟ್ಟದ ಪರೀಕ್ಷಗೆಳಲ್ಲಿ ಕನ್ನಡದ ಮಕ್ಕಳೇಕೆ ಹಿಂದೆ ಉಳಿಯುತ್ತಾರೆ ಎಂದು ಅಧ್ಯಯನ ನಡೆಸಿದ್ದ ಖ್ಯಾತ ವಿಜ್ಞಾನಿ ಡಾ.ಕಸ್ತೂರಿ ರಂಗನ್ ಅವರ ನೇತೃತ್ವದ "ಕರ್ನಾಟಕ ಜ್ಞಾನ ಆಯೋಗ" ರಾಜ್ಯ ಸರ್ಕಾರಕ್ಕೆ 09,10,11,12 ತರಗತಿಯಲ್ಲಿ CBSEಯ ಪಠ್ಯ ಪುಸ್ತಕಗಳನ್ನೇ ಕನ್ನಡಕ್ಕೆ ಅನುವಾದಿಸಿಕೊಳ್ಳುವಂತೆ ಶಿಫಾರಸ್ಸು ಮಾಡಿತ್ತು ಮತ್ತು ಆ ಶಿಫಾರಸ್ಸಿನಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಈಗ  ಇನ್ನೊಂದು ಪಠ್ಯಕ್ರಮ ತಂದು ರಾಜ್ಯದ  ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮತ್ತೆ ಹಿಂದುಳಿಯುವಂತೆ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಪೊಲಿಟಿಕಲ್ ಐಡಿಯಾಲಜಿಗಾಗಿ ವಿದ್ಯಾರ್ಥಿಗಳ ಭವಿಷ್ಯ ಬಲಿಯಾಗುವುದಿಲ್ಲವೇ ?
೧೨. ಶಾಲೆಗಳು CBSE ಅಥವಾ ICSE  ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲು ಅವಕಾಶ ಇದ್ದರೂ, ೭೫,೦೦೦ ಶಾಲೆಗಳು  ಕರ್ನಾಟಕ ರಾಜ್ಯ ಪಠ್ಯಕ್ರಮವನ್ನು ಅಳವಡಿಕೊಂಡಿವೆ. ಆದರೆ ಹಳೆಯ/ಔಟ್ ಡೇಟೆಡ್ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವ  ಇಂತಹ ಹೀನ ಕ್ರಮದಿಂದ, ರಾಜ್ಯಸರಕಾರ CBSE ಅಥವಾ ICSE ವಿದ್ಯಾರ್ಥಿಗಳ ಮಧ್ಯೆ ಶೈಕ್ಷಣಿಕ ಅಸಮಾನತೆಯನ್ನು ತರಲು ಹೊರಟಿದೆಯೇ? ಈ ಮುಖೇನ ರಾಜ್ಯ ಪಠ್ಯಕ್ರಮದಲ್ಲಿ ಓದುವ ವಿಧ್ಯ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ನಾಶಮಾಡಲು ಹೊರಟಿದೆಯೆ ನಮ್ಮ ರಾಜ್ಯ ಸರಕಾರ?
೧೩. ಇದು ಹೊಸ ಪೀಳಿಗೆಯನ್ನು ಗುರಿಯಾಗಿಸಿ, ಹೊಸ ಸುಳ್ಳು ಹೋರಾಟಗಾರರನ್ನು ಸೃಷ್ಟಿ ಮಾಡುವ ಕುತಂತ್ರವೇ?
೧೪. ಶಿಕ್ಷಣದ ಗುಣಮಟ್ಟವನ್ನು ಕುಂಠಿತಗೊಳಿಸಿ, ಸರಕಾರೀ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳನ್ನು ಅವಕಾಶ ವಂಚಿತರನ್ನಾಗಿ ಮಾಡಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆಯೇ ಈ ಸರಕಾರ?
ಶ್ರೀ. ಸಿದ್ದರಾಮಯ್ಯನವರ ಸರಕಾರದ ಕಳೆದ ನಾಲ್ಕು ವರ್ಷಗಳ "ಕಾರ್ಯಭಾರ"ವನ್ನು ನೋಡುವಾಗ, ಮಾನ್ಯ ಮುಖ್ಯಮಂತ್ರಿಗಳು ತಮ್ಮ ಚುನಾಯಿತ ಕ್ಯಾಬಿನೆಟ್ ಗಿಂತ ತಮ್ಮ ಎಡಪಂತೀಯ ಲೇಖಕರ ಕಿಚನ್ ಕ್ಯಾಬಿನೆಟ್ ಜೊತೆ ಕೆಲಸ ಮಾಡಿದ್ದೆ ಹೆಚ್ಚು. ಈ ಎಡಪಂತೀಯ ಕಿಚನ್ ಕ್ಯಾಬಿನೆಟ್ ಪ್ರಜಾಪ್ರಭುತ್ವವನ್ನು ನಾಶ ಮಾಡುವ, ಸಮಾಜವನ್ನು ವಿಘಟಿಸುವ, ಸುಳ್ಳು ಹೋರಾಟಗಾರರನ್ನು ಸೃಷ್ಟಿಸುವ, ಯುವಕರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿ ಅವರುಗಳನ್ನು ಶೈಕ್ಷಣಿಕ ಮತ್ತು ಬೌದ್ಧಿಕ ವಲಯಗಳಲ್ಲಿ ಬ್ರೈನ್ ವಾಷ್ ಮಾಡಿ ಉಪಯೋಗಿಸುವ ಕೆಲಸವನ್ನು ಮಾಡಿ ದೇಶದ ಭವಿಷ್ಯವನ್ನು ದುರಂತದ ಎಡೆಗೆ ತಳ್ಳುವ ಕೆಲಸ ಮಾಡುತ್ತದೆ.

https://www.change.org/p/the-chief-minister-of-karnataka-stop-karnataka-congress-government-from-ruining-students-future