ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Sunday, December 29, 2013

ತಾಳ ತಪ್ಪಿದ ನನ್ನೆದೆಯ ಘಜಲ್...!

ತಾಳ ತಪ್ಪಿದ
ನನ್ನೆದೆಯ ಘಜಲ್...!

ನನ್ನೆದೆಯ ಘಜಲ್
ಒಂದು ಅರ್ಥವಿರುತಿತ್ತು
ಅವಳ ಅಂದದ ಗೆಜ್ಜೆಗಳು
ಮೈದುಂಬಿ ಚೆಂದದಿ ಕುಣಿದಿದ್ದರೆ ಮಾತ್ರ

ಆದರೆ,
ಬರೆದಿಟ್ಟ ಸಾವಿರ ಸಾಲುಗಳಿಗೆ
ಸಾಹುಕಾರಳಾಗಲೊಲ್ಲದೆ
ಎಸಳಾಗಿ ನೆಲೆ ನಿಂತ
ಹುಸಿ-ಹಸಿರ ಮೇಲಿನ ಮಂಜಿನಂತೆ
ಪದೇ-ಪದೇ ಕರಗಿ ನೀರಾಗುತ್ತಾಳವಳು!

ನೀರಾಗಿ ಹರಿವ ಮಂಜಿನ ಸೋನೆ
ನಯನದೂರ ಕನಸುಗಳಿಗೆ ಸೋಂಕು ತಗುಲಿಸಿ
ಕೋಥ ಹೊಡೆಯುತ್ತದೆ!

ಕ್ಷಿತಿಜದೆಡೆಗೆ ತಲುಪಿ
ಮುಗಿಲಿಗೆ ಮುತ್ತಿಕ್ಕ ಬಯಸುವ
ದಿಗಂತ ಕನಸುಗಳು
ಅವಳಿರದ ನೋವು ಕಂಡು
ಕ್ಷಾಮಕ್ಕೊಳಗಾದ ಎದೆಗೆ
ನೋವಿನ ನಿದ್ದೆಯ ಹಾದಿ ತೋರಿಸುತ್ತವೆ.

ಭಾವಗಳ ಬೆಸುಗೆಯಲಿ ಹಾಡಾಗಬೇಕಿದ್ದ  
ನನ್ನೆದೆಯ ಘಜಲ್ ತಾಳತಪ್ಪಿ
ಅರ್ಥವಿಲ್ಲದ ಬರಿಯ ಖಂಡ ಕಾವ್ಯವಾಗುತ್ತದೆ

-ಚೇತನ್ ಸೊಲಗಿ, ಮುಂಡರಗಿ

Friday, December 27, 2013

ಕನ್ನಡ ಸಾಹಿತ್ಯ ಲೋಕಕ್ಕೆ ಮೂರು ಯುವ ಕವಿಗಳ ಕವನ ಸಂಕಲನ ಅರ್ಪಣೆ


ಕನ್ನಡ ಸಾಹಿತ್ಯ ಲೋಕಕ್ಕೆ ಮೂರು ಯುವ  ಕವಿಗಳ  ಕವನ ಸಂಕಲನ ಅರ್ಪಣೆ
ಶರತ್ ಚಕ್ರವರ್ತಿ , ರಾಜೇಂದ್ರ ಪ್ರಸಾದ್ , ಪ್ರವರ ಕೊಟ್ಟೂರು




ದೆಹಲಿಯಲ್ಲಿ 10 ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ- 2013



ಚುಮ್ಮು ಚುಮ್ಮುಚಳಿಯ ವಾತಾವರಣದ ನಡುವೆ ನವದೆಹಲಿಯ ಆರ್ ಕೆ ಪುರಂ ದೆಹಲಿ ಕನಾ೯ಟಕ

ಸಂಘದ ಸಭಾಭವನದಲ್ಲಿ 10 ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ ಇತ್ತಿಚೆಗೆ

ನಡೆಯಿತು. ಹೃದಯವಾಹಿನಿ ಕನ್ನಡ ಬಳಗ ಮತ್ತು ದಿಲ್ಲಿ ಗಣೇಶ ಮಿತ್ರ ಮಂಡಳಿ ಹಮ್ಮಿಕೊಂಡ

ಈ ಸಮ್ಮೇಳನವನ್ನು ಯಕ್ಷಗಾನ ಕಲಾವಿದರಿಂದ ಉದ್ಘಾಟಿಸಿದ್ದು ವಿಶೇಷವಾಗಿತ್ತು.

ಪ್ರಾರಂಭದಲ್ಲಿಯೇ ಬಾಲಮಿತ್ರ ಪ್ರತಿಷ್ಠಾನ ಸರಳೇಬೆಟ್ಟು, ಮಣಿಪಾಲ ಇವರಿಂದ ಚಕ್ರವೂಹ್ಯ

ಯಕ್ಷಗಾನ ಪ್ರದಶಿ೯ತವಾಯಿತು.

ಈ ಸಮ್ಮೇಳನದ ಅಧ್ಯಕ್ಷರಾಗಿ ಉತ್ತರಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್

ಅಧ್ಯಕ್ಷರಾದ ರೋಹಿದಾಸ ನಾಯಕ ಅವರು ಆಯ್ಕೆಯಾಗಿದ್ದರು.

ಸಮ್ಮೇಳನದಲ್ಲಿ ಪ್ರಾಸ್ಥಾವಿಕವಾಗಿ ಹೃದಯವಾಹಿನಿ ಕನ್ನಡ ಬಳಗದ ಕೆ.ಪಿ ಮಂಜುನಾಥ ಅವರು

ಮಾತನಾಡಿ ಹೊರ ರಾಜ್ಯ ಮತ್ತು ಹೊರ ದೇಶದಲ್ಲಿ ಕನ್ನಡವನ್ನು ಬೆಳೆಸುವ ಹಿನ್ನಲೆಯಲ್ಲಿ ಕಳೆದ

ಹತ್ತು ವರ್ಷಗಳಿಂದ ನಡೆಸುಕೊಂಡು ಬರುತ್ತಿದ್ದ ಚಟುವಟಿಕೆಯನ್ನು ವಿವರಿಸಿದರು.






ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಮತ್ತು

ದೆಹಲಿ ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷ ಶರೀಪ ಅವರು ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ರೋಹಿದಾಸ ನಾಯಕ ಮಾತನಾಡಿ, ಈ ಸಮ್ಮೇಳನದ ದೇಶದ ರಾಜಧಾನಿಯಲ್ಲಿ

ನಡೆಯುತ್ತಿರುವುದರಿಂದ ಈ ಸಮ್ಮೇಳನಕ್ಕೆ ಹೆಚ್ಚಿನ ಮಹತ್ವ ಇರುವುದು. ಕನ್ನಡ ಭಾಷೆಯೂ

ಸಹ ರಾಷ್ಟ್ರ ಭಾಷೆಯಂತೆಯೇ ಮಹತ್ವ ಪಡೆದಿರುವ ಭಾಷೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕನ್ನಡಿಗರು ತಮ್ಮ ಭಾಷೆಗಾಗಿ ಮತ್ತು ಗಡಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದ ಬಗ್ಗೆ ಕಳವಳ

ವ್ಯಕ್ತಪಡಿಸಿದರು. ಕನ್ನಡ ಭಾಷೆ ಬೆಳದು ಬಂದ ಹಿನ್ನಲೆಯನ್ನು ಸಂಪೂರ್ಣವಾಗಿ ವಿವರಿಸಿದರು.



ತಮ್ಮ ಭಾಷಣದ ಕೊನೆಯಲ್ಲಿ ಇತಿಹಾಸ ನಗರ, ಇಂದ್ರಪ್ರಸ್ಥವಾದ ದೆಹಲಿಯಲ್ಲಿ ಈ ಸಮ್ಮೇಳನ

ನಡೆಯುತ್ತಿರುವುದರಿಂದ ಇದು ಕನ್ನಡಿಗೆರಿಗೆ ಅಭಿಮಾನದ ಸಂಗತಿ ಸಹಾ ಆಗಿರುವುದು. ಈ ಸಮ್ಮೇಳನ

ಚಿರಕಾಲ ಎಲ್ಲರ ನೆನಪಿನಲ್ಲಿರುವಂತೆ ಆಗಲಿ ಎಂದು ಆಶಿಸಿದರು. ತಮ್ಮ 15 ನಿಮಿಷದ ಭಾಷಣದಲ್ಲಿ

ಅವರು ಕನ್ನಡ ನಾಡು ನುಡಿಯ ಬಗ್ಗೆ ಅದರ ಘನತೆಯ ಬಗ್ಗೆ ವಿಸ್ತಾರವಾಗಿ ತಿಳಿಸಿದರು.

ಸಮ್ಮೇಳನದಲ್ಲಿ ನೂಪುರ ಕಲಾ ಸಂಸ್ಥೆ ದಾವಣಗೆರೆ ಇವರಿಂದ ಪ್ರದಶಿ೯ತವಾದ ಜಾನಪದ ನೃತ್ಯ

ಮತ್ತು ವಚನ ವೈಭವ, ಕುಮಾರಿ ಶ್ವೇತ ಮತ್ತು ತಂಡ ತರಿಕೆರೆ ಇವರಿಂದ ನಡೆದ ವೀರಗಾಸೆ, ರೂಪ

ಗರೀಶ್ ನಿದೇ೯ಶನದಲ್ಲಿ ನಡೆದ ನೃತ್ಯ ರೂಪಕ, ಕುಮಾರಿ ಕೃತಿಕಾ ದಯಾನಂದ್ರವರಿಂದ ನಡೆದ ನೃತ್ಯ

ಪ್ರದರ್ಶನ, ಸ್ವಾಮಿ ಗ್ರೂಫ್ ಬೆಂಗಳೂರು-ಗೋನಾಸ್ವಾಮಿ ಇವರತಂಡದಿಂದ ಹಾಸ್ಯ ಸಂಜೆ

ಕಾರ್ಯಕ್ರಮಗಳು ನೆರೆದಿದ್ದ ಜನರನ್ನು ಮನಸೂರೆಗೊಳಿಸಿದವು.

ಜಯಪ್ರಕಾಶ ರಾವ್ ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಶ್ರೀ

ಯಾಕೂಬ್ ಖಾದರ್ ಗುಲ್ವಾಡಿ ಶ್ರೀ ಎನ್ ಆರ್ ಗಜು, ಶ್ರೀಮತಿ ವಿಜಯಲಕ್ಷ್ಮೀ ನಾಯಕ್, ಶ್ರೀಮತಿ

ಸಂಧ್ಯಾ ಭಟ್, ಶ್ರೀಮತಿ ಪ್ರಮೀಳಾ ಮಹಾದೇವ್, ಶ್ರೀ ಎನ್ ಮಹಾದೇವ್ ಇವರುಗಳು ತಮ್ಮ

ಕವನವನ್ನು ವಾಚಿಸಿದರು.

ಮಾಧ್ಯಮ ಮತ್ತು ಹೊರನಾಡು ಕನ್ನಡಿಗರ ಗೋಷ್ಠಿಯಲ್ಲಿ ಶ್ರೀ ಶ್ರೀನಿವಾಸ ಕರಿಯಪ್ಪ,

ಶ್ರೀಮತಿ ರೇಣುಕಾ ನಿಡಗುಂದಿ, ಶ್ರೀ ಶಿವಣ್ಣ ಶೀತರ್, ಶ್ರೀ ಗಂಗಾಧರ ಕೊಪ್ಪ, ಅವರು

ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಶ್ರೀ ಆಸ್ಕರ ಫೆನಾ೯೦ಡೀಸ್ ಅವರು ಭಾಗವಹಿಸಿದ್ದರು. ಈ

ಸಂದರ್ಭದಲ್ಲಿ 2013 ರ ಹೃದಯವಂತರು ಪ್ರಶಸ್ತಿಯನ್ನು ಶ್ರೀ ಬಿ.ಟಿ ಬಂಗೇರಾ, ಶ್ರೀ ರಮೇಶ ಡಿ.ಸಿ

ಬೆಂಗಳೂರು, ಶ್ರೀ ಭಾಸ್ಕರ ಶೆಟ್ಟಿ, ಶ್ರೀ ಎಂ ಮಹಾದೇವ್ ಗುಲಬಗಾ, ಶ್ರೀ ಎ. ಸಯ್ಯದ್ ಅಸ್ಗರ್,

ಬೆಂಗಳೂರು. ಶ್ರೀ ಸೆಲ್ವರಾಜ್ ಕೆ ಬೆಂಗಳೂರು, ಶ್ರೀ ಪಿ ರಾಜಪ್ಪ ವಿಶ್ವಕರ್ಮ. ಮೈಸೂರು ಇವರಿಗೆ ನೀಡಿ

ಗೌರವಿಸಲಾಯಿತು.



ಬಾಲಮಿತ್ರ ಪ್ರತಿಷ್ಠಾನ ಸರಳೇಬೆಟ್ಟು ಮಣಿಪಾಲ ಇವರಿಂದ ಚಕ್ರವೂಹ್ಯ ಯಕ್ಷಗಾನ 
ಪ್ರದರ್ಶನ

















ವಿವೇಕ ಬೆಟ್ಕುಳಿ-7376703047

Saturday, December 7, 2013

ಚಿಗುರು

ಮಿಂಚೆಂದರೆ ಮೋಡಕೆ ಮೀಸಲೆಂಬ
ನಂಬಿಕೆ ಸುಳ್ಳಾಯಿತು ಅಂದು
ನನ್ನೊಳಗೂ ಸಂಚಲಿಸ ಬಹುದು
ಗೊತ್ತಾಯಿತು ಆಕೆಯ ಕಂಡು

ಗೆಳೆತನದಲಿ ಮೊದಲಾಯಿತು ಪರಿಚಯ
ಪ್ರೇಮಾಂಕುರದ ಪಥದಲ್ಲಿ
ನಿದ್ದೆಗೂ ಮೀಸಲಿಡದ ಕನವರಿಕೆಗಳೇ
ಕಾಮನೆ ಜೊತೆಯಲ್ಲಿ

ಚಿಗುರಿದ ಮೀಸೆಗೂ ಕಾರಣವಿತ್ತು
ಕಾಣುವ ಹಂಬಲ ಆಕೆಯನು
ಒಂದೇ ಸಮನೆ ಗೊಂದಲ ಮನಸಲಿ
ಹೃದಯವೂ ಬೆಂಬಲಿಸಿತು ತಾನು

ಓದಿನ ಗೋಜಲಿ ಮೂಡಿದ ಅಂತರ
ದುಃಸ್ವಪ್ನವೇ ಅನಿಸಿರಬಹುದು
ಪಾಠಗಳೆಲ್ಲವೂ ಅವಳದೇ ಕುರಿತು
ಅರ್ಥದಲೊಳಾರ್ಥವಿರಬಹುದು

ನಕ್ಕರೆ ನವರಾತ್ರಿಯ ದೀಪೋತ್ಸವ
ಮಾತಿಗೆ ಸಿಕ್ಕರೆ ಸಕ್ಕರೆಯು
ಪ್ರೌಢತೆಯ ಮೂರುತಿಯಾಗಿದ್ದಳು
ನಾ ಮೆರೆಸಿದ ರಥ ಸಾರಥಿಯೂ

ಆಕೆ ಗಿರಿಜೆ, ಶಂಕರನಾಗೋ
ಯೋಗ್ಯತೆ ನಾ ಪಡೆದಿರಲಿಲ್ಲ
ನನ್ನೊಳ ಪ್ರೇಮ, ನುಡಿಸದ ಕೊಳಲು
ಆಕೆಗೆ ಕೇಳಿಸಲಾಗಿಲ್ಲ !!

                                 -- ರತ್ನಸುತ 

Monday, November 25, 2013

ಜವ್ ಪ್ರತಿಷ್ಠಾನ





ಪರಿವರ್ತನೆ ನಮ್ಮ ಮಾತು, ಬದಲಾವಣೆಯೆಡೆಗೆ ನಮ್ಮ ನಡಿಗ
ತಮ್ಮ ಸಾಮರ್ಥ್ಯಗಳನ್ನು ಸರಿಯಾಗಿ ಬಳಸಿಕೊಳ್ಳಲು ಮಾರ್ಗದರ್ಶನ ವಿರದ ಈ ದೇಶದ ನವ ಪೀಳಿಗೆಯ ಗತಿಯೇನು? ಎಂಬುದು ತಮ್ಮ ತಮ್ಮ ಹವಾನಿಯಂತ್ರಿತ ಛೆಂಬರ್ಗಳಲ್ಲಿ ಹಾಯಾಗಿ ದುಡಿಯುತ್ತಾ ಇರಬಹುದಾಗಿದ್ದ ಕೆಲವು ದಕ್ಷಿಣ ಭಾರತೀಯ ಉದ್ಯೋಗಿಗಳ ಆಲೋಚನೆಯಾಗಿತ್ತು. ಇಂಥಾ ಅಲೋಚನೆಯ ಫಲವಾಗಿ ಜವ್ ಪ್ರತಿಷ್ಠಾನ, ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡುಗಳ ಅಸಂಖ್ಯಾತ ಯುವ ಜನರ ಪಾಲಿನ ದಾರಿದೀಪವಾಗುವ ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ಪ್ರಗತಿಯ ಮಟ್ಟಕ್ಕೆ ಭಾರತವನ್ನು ಬೆಳೆಸುವ ಸದುದ್ದೇಶ ವನ್ನು ಹೊಂದಿರುವ ನಮ್ಮ ಸಂಸ್ಥೆಯು, YOUTH ನಲ್ಲಿರುವ YOU, ವನ್ನು ಪೋಷಿಸಿ, ಬೆಳೆಸುವ, ಎಂದರೆ, ಭಾರತೀಯ ಯುವಕ ಯುವತಿ ಯರಲ್ಲಿ ಸ್ವಂತಿಕೆ ಯನ್ನು ಪ್ರೋತ್ಸಾಹಿಸಿ ಅವರು ತಮ್ಮ ಶಕ್ತಿಗಳನ್ನು ಸಾಕ್ಷಾತ್ಕರಿಸಿ, ಅಬ್ದುಲ್ ಕಲಾಮ್]] ರ 2020ರ ಮುನ್ನೋಟ (Vision 2020) ವನ್ನು ನೆರವೇರಿಸುವಲ್ಲಿ ನೆರವಾಗುವ ಧ್ಯೇಯವನ್ನು ಹೊಂದಿದೆ.



ಮುಂಚಿನಿಂದಲೂ, ಜವ್ ಪ್ರತಿಷ್ಠಾನದ ತತ್ವವನ್ನು ವಿದ್ಯಾರ್ಥಿಗಳು, ಶಿಕ್ಷಕರು, ಕಾರ್ಪೊರೇಟ್ ಉದ್ಯಮಿಗಳು ಮೆಚ್ಚಿಕೊಳ್ಳುತ್ತಲೇ ಬಂದಿದ್ದಾರೆ. ಮೊಟ್ಟ ಮೊದಲನೆಯದಾಗಿ, ಹಿಮಾಚಲ ಪ್ರದೇಶದ ಹಮೀರ್ ಪುರದಲ್ಲಿರುವ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ಼್ ಟೆಕ್ನಾಲಜಿಯಲ್ಲಿ ತನ್ನ ಉದ್ದೇಶಗಳನ್ನು ಹಂಚಿಕೊಂಡಂದಿನಿಂದ ಜವ್ ಹಿಂತಿರುಗಿ ನೋಡಿಲ್ಲ. "ಮರಳಿ ಹಳ್ಳಿಗಳೆಡೆಗೆ- ಹಳ್ಳಿಗಳಲ್ಲಿ ಭಾರತ" ಎಂಬ ತತ್ವದಡಿಯಲ್ಲಿ, ಝವ್ ವ್ಯಕ್ತಿತ್ವ ವಿಕಸನ, ವೃತ್ತಿ ಮಾಗದರ್ಶನ, ಅಣಕು ಸಂದರ್ಶನ ಕಾರ್ಯಾಗಾರಗಳು ಮತ್ತು ಸಂವಾದಗಳನ್ನು ಕರೀರ್ಜ್, ನೀವ್, ಟಸಲ್ 2012, ಪುಸ್ತಕ ದಾನ ಮತ್ತು ಸ್ವೀಕಾರ, ಯುವಾ ನಾಯಕತ್ವ ಕಾರ್ಯಕ್ರಮಗಳ ಮೂಲಕ ನಡೆಸಿಕೊಡುತ್ತದೆ. ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸರ್ಜಾಪುರ, ದಹನು ಮುಂತಾದ ಊರುಗಳ ಶಾಲಾ ಕಾಲೇಜುಗಳಲ್ಲಿ ಈಗಾಗಲೇ ಇಂಥಾ ಕಾರ್ಯಕ್ರಮಗಳು ನಡೆದಿವೆ. ಈಮೂಲಕ ಜವ್ ನಾಳಿನ ಸಂಘರ್ಷಗಳಿಗೆ ಇಂದಿನ ಎಳೆಯರನ್ನು ಸಜ್ಜುಗೊಳಿಸುವ ಕೆಲಸವನ್ನು ಮಡುತ್ತದೆ. ಹಳ್ಳಿ ಜನರು ದಿನನಿತ್ಯ ಎದುರಿಸುವ ಸವಾಲುಗಳು ಮತ್ತು ಗ್ರಾಮ್ಯ ಬದುಕಿನ ತಲ್ಲಣಗಳನ್ನು ನಗರದ ಯುವಕರು ಸ್ವತಹ ಅನುಭವಿಸಿ ತಿಳಿದುಕೊಳ್ಳಲು ಅವರಿಗಾಗಿ ಇಂಟರ್ನ್ ಷಿಪ್ ಕಾರ್ಯಕ್ರಮಗಳನ್ನು ಸಹ ಪ್ರೋತ್ಸಾಹಿಸುತ್ತದೆ. ತನ್ಮೂಲಕ ಕ್ರಾಂತಿಯೊಂದಕ್ಕೆ ನಾಂದಿ ಹಾಡುವುದು ಜವ್ ನ ಗುರಿಯಾಗಿದೆ. ಮಾರ್ಪಾಡು, ಬದಲಾವಣೆ ಮತ್ತು ಪರಿವರ್ತನೆಯಲ್ಲಿ ನಮ್ಮ ನಂಬಿಕೆ.

by Karthik Rao




ಜವ್ ಪ್ರತಿಷ್ಠಾನ, 

Sunday, November 24, 2013

ನೀ ಪಟ್ಟು ಬಿಡದೆ ಕೂತು ?!!

ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ !!!
ಅಷ್ಟು ದೂರ ಕ್ರಮಿಸಿ
ಮರೆಯಾಗುವ ತಿರುವಿನಲ್ಲಿ
ಸಣ್ಣದೊಂದು ಖುಷಿಯ ಕೊಟ್ಟೆ
ಚೂರು ನಿದಾನಿಸಿ
ಹಿಂದಿರುಗಿ ನೋಡದರೆ
ಹೊಣೆಯಾಗುವೆ ಆಘಾತಕೆ
ಗದ್ದಲ ಎಬ್ಬಿಸಿ ಎದೆಯಲಿ
ಮೌನವ ನಿವಾರಿಸಿ

ಹತ್ತಿರದಲಿ ಅಷ್ಟು ದೂರ
ದೂರದಲ್ಲಿ ಹತ್ತಿರದ
ಭಾವ ಸ್ಪರ್ಶದೊಳಗೆ ಎನಿತು
ವಿಶೇಷವಿದು ಕಾಣೆ ?!!
ಮನದ ಪುಟ್ಟ ಅರಮನೆಯಲಿ
ದೀಪ ಹೊತ್ತು ಬಂದವಳೇ
ಈವರಿಗಿನ ಅಚ್ಚರಿಯ
ಪ್ರವೇಶ ನಿನ್ನದೇನೆ !!

ಸೋಲುವ ಪದಗಳ ಹಿಂಡು
ಸಾಗಿವೆ ಸೊರಗುತ ನೊಂದು
ಸಾಟಿಯಿಲ್ಲದಂಥ ನಗೆಯ
ಎದುರು ಸೆಣಸಿ ಸೋತು !
ಕಾವಲ ಕಣ್ಣನು ದಾಟಿ
ಹೃದಯದ ಬಾಗಿಲ ತಟ್ಟಿ
ಗದ್ದಿಗೆ ಹಿಡಿಯುವುದೇ


ನಂತರ ಆನಂತರ
ಈ ಹೊತ್ತಿನ ಈ ವಿವರ
ಸಲ್ಲಿಸುವ ಸರದಿಗೆ
ಸಾಲದಾಯ್ತು ಸೊಲ್ಲು
ಕೊಂಚ ಸುಧಾರಿಸಿ
ಮೊದಲಾಗುವೆ ಮಾತಿಗೆ
ವದಂತಿಗಳನು ಬದಿಗಿಟ್ಟು
ವಿನಂತಿಯನ್ನು ಕೇಳು

ಹುರುಳಿಲ್ಲದ ನನ್ನ
ಕವಲೊಡೆದ ದಾರಿ
ಪಯಣ ಎಲ್ಲಿಗೋ ಏನೋ
ಗೊತ್ತು ಗುರಿಯಿಲ್ಲ !
ಕ್ಷಿತಿಜದಲಿ ನಾನು
ಕೈ ಹಿಡಿವೆ ನಿನ್ನ
ನಾ ಭೂಮಿ, ನೀ ಬಾನು
ಕ್ಷುಲ್ಲಕ ಮಿಕ್ಕೆಲ್ಲ !!

               -- ರತ್ನಸುತ 

Friday, November 22, 2013

ಪಾರಿಜಾತದ ಹುಡುಕಾಟಕ್ಕೆ - ಚೇತನ್ ಸೊಲಗಿ

ಪಾರಿಜಾತದ ಹುಡುಕಾಟಕ್ಕೆ

ಹುಚ್ಚಿನ ಕುರುಹು ಹೆಚ್ಚಾಗಿದೆ
ಹೆಚ್ಚೇನು ಹೇಳಲಾರೆ
ಪಾರಿಜಾತದ ಹುಡುಕಾಟಕ್ಕೆ
ಪರದಾಟ ನಡೆಸುತಿದ್ದವನಿಗೆ
ಪೂರ್ಣಿಮೆಯಂತವಳ ಕರುಣಿಸಿದ
ಆತ......!
ಮತ್ತೆ ಪರದಾಟಕ್ಕೆ ಹಚ್ಚಿದ್ದಾನೆ
ಇರುಹು ಕುರುಹುಗಳ
ಆಟದಲ್ಲಿ, ಅವಳ ಸೂಕ್ಷ್ಮ ಸಂವೇದನೆಗಾಗಿ ....

ಹೆಗಲ ಮೇಲಿನ ಕೂಸೂ ನಾಚುವುದೇನೊ
ಆ ನಿನ್ನ ಮುಗ್ದ ನಗುವಿಗೆ
ಹೇಳಲಾಗದ ಕಠೋರ ಸತ್ಯವೊಂದನ್ನ
ಒಳಗೇ ಅದುಮಿಟ್ಟುಕೊಂಡಿದ್ದೇನೆ
ಆ ನಗು ನನ್ನೊಂದಿಗೆ ಸದಾ
ಇರಲೆಂದು...!

ಸುಂದರ ಸಾಮ್ರಾಜ್ಯದ ರಾಜನಾಗಬೇಕೆಂಬ
ಹಂಬಲತೆಯ ಹುಡುಗ ನಾನು
ರಾಣಿಗೋಸ್ಕರ
ರಾಣಿಯ ಸಾರಥಿಯಾಗಲೂ
ಸನ್ನದ್ಧನಾಗಿರುವೆ ನಾ
ನೀನೊಮ್ಮೆ ನನ್ಮನದ ಅರಸಿಯಾಗಬಲ್ಲೆಯಾದರೆ

ಹುಚ್ಚನಂತಾಗಿದ್ದೇನೆ
ಹೆಚ್ಚೇನು ಹೇಳಲಿ ಹೇಳು
ಹಂಬಲವಂತು ಮಿತಿ ಮೀರಿದೆ
ಕಂಗಳಂತು ನಿನ ಬಿಂಬಕೆ
ಶರಣಾಗಿ ನಿಂತಿವೆ
ಕಣ್ತೆರೆದರೂ ನಿದಿರೆಗೆ ಜಾರಿದರೂ
ನನ್ಮನವದಂತೂ ಸುಂದರದೊಂದು
ಸಾಮ್ರಾಜ್ಯ ನಿರ್ಮಿಸಿ
ನಿನ್ನನೇ ರಾಣಿಯಾಗಿ ಕೂರಿಸಿಬಿಡುತ್ತದೆ.


ಏ ಚೆಲುವಿ
ಬೆಳದಿಂಗಳ ಚಂದಿರನ
ನಾ ನೋಡುದ ಮರತೀನ
ನಿನ್ ಕಂಡಾಗಿಂದ

ತೋಟದಾಗಿನ ಗುಲಾಬಿ
ಹೂನತ್ತ ನಾನೀಗ
ಚೇತನ್ ಸೊಲಗಿ
ನೋಡಂಗೆ ಇಲ್ಲ
ಕೆಂಗುಲಾಬಿ ಹಂಗ ನೀನಿರಬೇಕಾದ್ರ

ಅದೆಂತಾ ನಗುನ ನಿಂದ
ಹಾ... ಹಾ... ನನ್ನನ್ನ ನೀನಾಗಿಸಬಿಟ್ಟತಲ್ಲ
ಮುಗುಳ್ನಗು ನಗುದುನ್ನ
ನಿನ್ನ ನೋಡೆ ಕಲಿಬೇಕು
ಚಂದ್ರನ ತಂಗಿ ನೀನ ಇರಬೋದೆನೋ....

ಮಬ್ಬಹಿಡಿದ ಹೊತ್ತಿನಂಗಾಗಿನಿ
ಮಾಸೇ ಹೋಗಿನೇನೋ
ತಾಳೆನೇ ಬೆಡಗಿ
ನನ್ ಮನದಾಗ ರುಜು ಮಾಡಿದ ನೀನು
ರಜಾ ಹಾಕಿ ದೂರ ನಿಂತ್ರ!

-ಚೇತನ್ ಸೊಲಗಿ, ಮುಂಡರಗಿ

ಕಾವ್ಯ-ಚಂದ್ರ…. - ಚೇತನ್ ಸೊಲಗಿ ,

ನಾ ನಿನ್ನ ಕಣ್ಣುಗಳ ಬಿಂಬವಾದೆ
ನೀ ಕಂಡ ಗಳಿಗೆಯಿಂದ
ಮನದ ರೂಪಸಿಯೇ ಚೆಲುವ ಧಾತ್ರಿಯೇ
ಬಾರೆ ನನ್ನ ಚೆಲುವೆ
ನಿನ್ ಕಣ್ಣ ನೋಟಲಿ ಪೂರ್ಣ ಚಂದಿರನೆ
ಕಸದ ಕಣಿವೆಯಾದ
ಚಿವುಟದಿರು ನೀನು ಮನದ ಪ್ರೀತಿ
ನೀ ಬಾರೆ ಮನದ ಒಡತಿ
 ಚೇತನ್ ಸೊಲಗಿ
ಶೃಂಗಾರ ಕಾವ್ಯವದು ನನ್ನಲಿಹುದು
ಸಿರಿವಂತ ನಾನು ಅಲ್ಲ
ಸಿರಿತನಕ್ಕಿಲ್ಲ – ಬಡತನಕ್ಕಿಲ್ಲ
ಪ್ರೇಮ – ಕಾವ್ಯ ಚಂದ್ರ
ನಗುಮೊಗದ ಚೆಲುವೆ ನೀ ಬಾರೆ ನೀರೆ
ಮನದೇಕ ಒಡತಿಯಾಗಿ
ತೋರುವೆನು ಅದನೆ ನೀಡುವೆನು ಅದನೆ
ಪ್ರೇಮ ಚರಿತೆ ಕಾವ್ಯ.
ಸ್ವಪ್ನಕ್ಕೆಲ್ಲಿಹುದು ಸೃಜನಸಾರ
ನಿನ್ನೊಲವೆ ಮಿಗಿಲು ಎನಗೆ
ನನ್ನೆದೆಯ ಧಿಮಿತಿಗಳ
ಕೂಡಿ ಹಾಡಿ ಕಟ್ಟೋಣ ಪ್ರೇಮದೂರು
ಪ್ರೇಮಕ್ಕೆಲ್ಲಿಹುದು ಮೇಲುಕೀಳು
ಜಗದೇಕ ರೂಪವದುವೇ
ಜಗದ ಬಾಗಿಲಾ ಜಗಲಿಯಲ್ಲಿಯೂ
ನಾ ನೆನೆವೆ ನಿನ್ನ ಮನವ.

-  ಚೇತನ್ ಸೊಲಗಿ ,

Thursday, November 21, 2013

ಸತ್ಯವಂತರ ಸಂಗವಿರಲು ತೀರ್ಥವೇತಕೆ

ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ||ಪ||

ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ಜ್ಞಾನವಿಲ್ಲದೇ ನೂರು ಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ||೧||

ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ
ನೀತಿಯರಿತು ನಡೆಯದಿರುವ ಬಂಟನೇತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನೇತಕೆ||೨||

ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿ ಕೇಶವನಲ್ಲದ ದೈವವೇತಕೆ ||೩||


Krupe : http://bhakthigeetha.blogspot.in/


ದಾಸದಾಸರ ಮನೆಯ ದಾಸಾನುದಾಸ ನಾನು

ದಾಸದಾಸರ ಮನೆಯ ದಾಸಾನುದಾಸ ನಾನು
ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ ||ಪ||

ಕಾಳುದಾಸರ ಮನೆಯ ಆಳು ದಾಸ ನಾನಯ್ಯ
ಕೀಳುದಾಸನು ನಾನು ಕಿರಿಯ ದಾಸ
ಭಾಳಾಕ್ಷ ಮುಂತಾಗಿ ಭಜಿಪ ದೇವರ ಮನೆಯ
ಆಳಿನ ಆಳಿನ ಆಳಿನಡಿದಾಸ ನಾನು||೧||

ಪಂಕಜನಾಭನ ಮನೆಯ ಮುಂಕುದಾಸನಯ್ಯ
ಕೊಂಕುದಾಸನು ನಾನು ಕುರುಡು ದಾಸ
ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ
ಬಂಕದ ಬಾಗಿಲ ಕಾಯ್ವ ಬಡದಾಸ ನಾನು ||೨||

ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ
ಕುಲವಿಲ್ಲದ ದಾಸ ಕುನ್ನಿದಾಸ
ಮಲಹರ ರಂಗ ನಿನ್ನ ಮನೆಯ ಮಾದಿಗ ದಾಸ
ಸಲೆಮುಕ್ತಿ ಪಾಲಿಸೊ ಆದಿಕೇಶವರಾಯ| |೩||


Krupe : http://bhakthigeetha.blogspot.in/

ಕೇಶವನೊಲುಮೆಯು ಆಗುವ ತನಕ

ಕೇಶವನೊಲುಮೆಯು ಆಗುವ ತನಕ
ಹರಿ ದಾಸರೊಳಿರುತಿರು ಹೇ ಮನುಜ||ಪ||

ಕ್ಲೇಶಪಾಶಂಗಳ ಹರಿದು ವಿಲಾಸದಿ
ಶ್ರೀಶನ ನುತಿಗಳ ಪೋಗಳುತ ಮನದೊಳು||ಅ.ಪ.||

ಮೋಸದಿ ಜೀವರ ಘಾಸಿ ಮಾಡಿದ ಪಾಪ ಕಾಶಿಗೆ ಹೋದರೆ ಹೋದೀತೇ
ಶ್ರೀಶನ ಭಕುತರ ದೂಷಿಸಿದ ಫಲ ಕಾಸು ಕೊಟ್ಟರೆ ಬಿಟ್ಟೀತೆ
ಭಾಷೆಯ ಕೊಟ್ಟು ನಿರಾಶೆಯ ಮಾಡಿದ ಫಲ ಕ್ಲೇಶವ ಗೊಳಿಸದೆ ಇಟ್ಟೀತೆ
ಭೂಸುರ ಸ್ವವ ಕ್ರಾಸ ಮಾಡಿದ ಫಲ ಏಸೇಸು ಜನುಮಕು ಬಿಟ್ಟೀತೆ||1||

ಜೀನನ ವಶದೊಳು ನಾನಾ ದ್ರವ್ಯವಿರೆ ದಾನ ಧರ್ಮಕೆ ಮನಸಾದೀತೇ
ಹೀನ ಮನುಜನಿಗೆ ಜ್ಞಾನವ ಭೋಧಿಸೆ ಹೀನ ವಿಷಯವಳಿ ಹೋದೀತೇ
ಮಾನಿನಿ ಮನಸು ನಿಧಾನವಿರದಿರೆ ಮಾನಾಭಿ ಮಾನಗಳು ಉಳಿದೀತೇ
ಭಾನುಪ್ರಕಾಶನ ಭಜನೆಯ ಮಾಡದ ಹೀನಗೆ ಮುಕುತಿಯು ದೊರಕೀತೆ||2||

ಕರುಣಾಮ್ರುತದಾಭರಣವ ಧರಿಸಿದ ಪರಮಗೆ ಸಿರಿಯು ತಪ್ಪೀತೆ
ಕರುಣಾ ಪಾಶದ ಉರವಣೆ ತೊರೆದಾತಗೆ ಶರಣರ ಕರುಣವು ತಪ್ಪೀತೆ
ಅರಿತು ಶಾಸ್ತ್ರವನು ಆಚರಿಪ ಯೋಗ್ಯಗೆ ಗುರು ಉಪದೇಶವು ತಪ್ಪೀತೆ
ವರವೇಲಾಪುರ ದಾದಿಕೇಶವನ ಸ್ಮರಿಸುವವನಿಗೆ ಮೋಕ್ಷ ತಪ್ಪೀತೆ||3||

Krupe : http://bhakthigeetha.blogspot.in/

ಲಾಲಿ ಪಾವನ ಚರಣ ಲಾಲಿ ಅಘ ಹರಣ

ಲಾಲಿ ಪಾವನ ಚರಣ ಲಾಲಿ ಅಘ ಹರಣ
ಲಾಲಿ ವೆಂಕಟರಮಣ ಲಲಿತ ಕಲ್ಯಾಣ [ಪ]

ವನಜಾಕ್ಷ ಮಾಧವ ವಸುದೇವ ತನಯ
ಸನಕಾದಿ ಮುನಿವಂದ್ಯ ಸಾಧು ಜನಪ್ರಿಯ
ಇನ ಕೋಟಿ ಶತ ತೇಜ ಮುನಿ ಕಲ್ಪ ಭೂಜ
ಕನಕಾದ್ರಿ ನಿಲಯ ವೆಂಕಟರಾಯ[೧]

ಜಗದೇಕ ನಾಯಕ ಜಲಜದಳ ನೇತ್ರ
ಖಗರಾಜ ವಾಹನ ಕಲ್ಯಾಣ ಚರಿತ
ಸಗರ ತನಯಾರ್ಚಿತ ಸನಕಾದಿ ವಿನುತ
ರಘುವಂಶ ಕುಲ ತಿಲಕ ರಮಣೀಯ ಗಾತ್ರ[೨]

ನಂದಗೋಪ ಕುಮಾರ ನವನೀತ ಚೋರ
ಮಂದಾಕಿನಿ ಜನಕ ಮೋಹನಾಕಾರ
ಇಂದುಧರ ಸತಿ ವಿನುತ ವಿಶ್ವ ಸಂಚಾರ
ನಂದ ಗೋವಿಂದ ಮುಚುಕುಂದ ನುತ ಸಾರ[೩]

ನರ ಮೃಗಾಕಾರಿ ಹಿರಣ್ಯಕ ವೈರಿ
ಕರಿರಾಜ ರಕ್ಷಕ ಕಾರುಣ್ಯ ಮೂರ್ತಿ
ಹರಿ ಆದಿಕೇಶವ ಗುರು ಅಪ್ರಮೇಯ
ಶ್ರೀಧರ ಶೇಷಗಿರಿ ವರ ತಿಮ್ಮರಾಯ [೪]


Krupe : http://bhakthigeetha.blogspot.in/

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ [ಪಲ್ಲವಿ]

ಕಮ್ಮಗೋಲನ ವೈರಿ ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೇ [ಅನುಪಲ್ಲವಿ]

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೇ [೧]

ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ[ ೨]

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮ
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿಕೇಶವ ದಾಸ ಕಣೇ [೩ ]

ಸಾಮಜವನು ಏರಿ ಬರುವ ಶಕ್ತಿಯನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ
ಸಾರ್ವಭೌಮ ಬಡದಾದಿಕೇಶವನ್ನ ನೋಡಿರೋ3


ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ

ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷೀರವಾರುಧಿಯೊಳಿರಲು
ಕರಿರಾಜ ಕಷ್ಟದಲಿ ಆದಿಮೂಲಾ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ ೧

ಕಡು ಕೋಪದಲಿ ಖಳನು ಖಡುಗವನು ಹಿಡಿದು
ನಿನ್ನೊಡೆಯನೆಲ್ಲಿಹನು ಎಂದು ನುಡಿಯೇ
ದೃಢ ಭಕಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ ಕಂಭದಿಂದೊಡೆದೆಯೋ ನರಹರಿಯೇ೨

ಯಮಸುತನ ರಾಣಿಗೆ ಅಕ್ಷಯವಸನವಿತ್ತೆ
ಸಮಯದಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ೩

Krupe : http://bhakthigeetha.blogspot.in/

Tuesday, November 19, 2013

ಆಮಂತ್ರಣ ಪತ್ರಿಕೆ


ಪ್ರಿಯ ಬಂಧು ಮಿತ್ರರೇ,

ರಾ. ಗಣೇಶ್ ಅವರ ೯೯೧ನೇ ಅಷ್ಟಾವಧಾನಕ್ಕೆ ತಮಗೆಲ್ಲಾ ಸ್ವಾಗತ. ಅಷ್ಟಾವಧಾನವು ದಿನಾಂಕ ೨೩/೧೧/೨೦೧೩ ಶನಿವಾರದಂದು ೧೦:೦೦ರಿಂದ ೧:೩೦ ರ ವರೆಗೆ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಡಿ.ವಿ.ಜಿ. ಸಭಾಂಗಣದಲ್ಲಿ ನಡೆಯುವುದು. 

ಆಮಂತ್ರಣ ಪತ್ರಿಕೆಯನ್ನು ಲಗತ್ತಿಸಿದೆ. ತಮ್ಮೆಲ್ಲಾ ಸಾಹಿತ್ಯಾಸಕ್ತ ಸ್ನೇಹಿತರಿಗೂ, ಬಂಧುಗಳಿಗೂ ಆಮಂತ್ರಣವನ್ನು ಕೊಟ್ಟು ಅವರನ್ನೂ ಕರೆತನ್ನಿ. ತಾವೆಲ್ಲರೂ ತಮ್ಮ ಕುಟುಂಬ ಹಾಗೂ ಸ್ನೇಹಿತರೊಡನೆ ಬಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕಾಗಿ ಕೂರುತ್ತೇವೆ.






Saturday, November 16, 2013





 


ಅದೊಂದು ಸಂಜೆಯ ಸಮಯ ಸುಡುವ ಸೂರ್ಯನೂ
ಕೆಲ ಸಮಯ ನೀರಲ್ಲಿ ಮುಳುಗಲು ಹೊರಟ...
ಆದರೆ ಮನದೊಳಗಿನ ಸುಡುವ ನೆನಪುಗಳು 
ಮಾತ್ರ ಎಂದೂ
ಕಣ್ಣೀರಿನ ಸಾಗರದಲ್ಲಿ ಮುಳುಗದು!

ಕೆಂಪಾದ ಬೆಳಕಿನ ಕಿರಣಗಳಲ್ಲಿ
ತಂಪಾದ  ಉದ್ಯಾನವನ ....
ಮರದ ಮೇಲೆ ಹಕ್ಕಿಗಳ ಸದ್ದು
ಮರದ ಕೆಳಗೆ ಯುವ ಜೋಡಿಗಳ ಗುಸುಗುಸು ...
ಆತ.....
ಹಾಗೆ ಅಲ್ಲಿನ ಕಲ್ಲು ಬೆಂಚಿನ ಮೇಲೆ ಕುಳಿತ
ಆತನನ್ನು  ನೆನಪಿನ ಗಾಡಿ ಹತ್ತುವರುಷಗಳ  
ಹಿಂದಕ್ಕೆ  ಕರೆದೊಯಿತು ....

ಅಂದು ಹೊಸದಾಗಿ ಬಾಡಿಗೆಗೆ ಬಂದ ದಿನ
ಹೆತ್ತವರು ಯಾವುದೋ ಒಂದು ಅಪಘಾತದಲ್ಲಿ ತೀರಿಕೊಂಡ ಮೇಲೆ
ತನ್ನ ಎರಡು ತಂಗಿಯರ ನೋಡಿಕೊಳ್ಳುವ ಜವಾಬ್ದಾರಿ ಆತನ ಮೇಲಿದೆ ..
ಅವರಿಗೆಂದು ಇದ್ದ ಒಂದೇ ಆಸರೆ ಅವರ ದೊಡ್ಡಪ್ಪ ಮಾತ್ರವೇ !
ಮನೆಯಿಂದ ಸ್ವಲ್ಪವೇ ದೂರದಲ್ಲಿ
ಇರುವ ಒಂದು ಮಹಡಿಯ ಮನೆಯಲ್ಲಿ ಆ ಹುಡುಗಿ ಇರುವುದು
ಹೆಸರು ಅನುಪಮ ..ಒಳ್ಳೆಯ ಮನಸಿನ ಸುಂದರ ಹುಡುಗಿ !
ಎದುರು ಮನೆಯಲ್ಲೇ ಆ ಹುಡುಗಿಯ ಗೆಳತಿಯಿರುವುದು
ಆದುದರಿಂದ ಆಗಾಗ ಮನೆಗೆ ಬಂದು ಹೋಗುವಾಗ
ನೋಡಿ ..ಅವರಿಬ್ಬರಿಗೂ
ಪರಿಚಯ ಎನ್ನುವ ಪುಸ್ತಕದೊಳಗಿದ್ದ ಸ್ನೇಹದ ನವಿಲುಗರಿ
ಪ್ರೀತಿಯ ಮರಿ ಹಾಕಿತು  !
ಅವಳು ಮನೆಗೆ ಎರಡನೆಯ ಮಗಳು ಮದುವೆ ವಯಸ್ಸಿನ ಅಕ್ಕ ಇದ್ದಾಳೆ!
ಅದು ಅಲ್ಲದೆ
ಆಕೆ ಮೇಲ್ಜಾತಿಗೆ ಸೇರಿದ ಹುಡುಗಿ
ಆತ ಕೀಲ್ಜಾತಿ ಹುಡುಗ !

ಪ್ರೀತಿಯ ಪ್ರಾರಂಭದ ದಿನಗಳಲ್ಲಿ
ಆಸೆಯ ಆಟವನ್ನೇ ನೋಡುತ್ತಾ ವಾಸ್ತವವನ್ನು ಮರೆಯುವವರೇ ಇಲ್ಲಿ ಹೆಚ್ಚು ಹಾಗೆ
ಆ ಜೋಡಿಗಳು ತಮ್ಮದೇ ಪ್ರೀತಿಯ ಜಗತ್ತಿನಲ್ಲಿ ನೋವೆನ್ನುವ ಸುಳಿವೇ ಇಲ್ಲದೆ ನೆಮ್ಮದಿಯಾಗಿರುತ್ತಾರೆ !
ಪ್ರೀತಿಸುವ ದಿನಗಳು ಬೆಟ್ಟದ ಮೇಲಿನಿಂದ ಉರುಳಿ ಬಿಟ್ಟ
ಗೋಲಿಯ ಹಾಗೆ ವೇಗವಾಗಿ ಉರುಳುತ್ತವೆ !

ಅದು ಬಂದು ನಿಂತಿದ್ದು ಎರಡು ವರುಷದ ನಂತರ ಮದುವೆಯ ವಿಷಯದಲ್ಲಿ
ಅಂದು!
ನಮ್ಮ ಮನೆಯಲ್ಲಿ ನಮ್ಮ ಅಕ್ಕನಿಗೆ ಹುಡುಗ ನೋಡಿದ್ದಾರೆ
ಹುಡುಗನ ತಮ್ಮನಿಗೆ ನನ್ನ ಮದುವೆ ಮಾಡಿಕೊಡಬೇಕು ಅಂತ ಇದ್ದಾರೆ
ಅಣ್ಣ ತಮ್ಮ ಇಬ್ಬರೂ ಒಳ್ಳೆ ವಿದ್ಯಾವಂತರು ಹಾಗೂ ಒಳ್ಳೆಯ ಕೆಲಸದಲ್ಲಿ ಇದ್ದಾರೆ
ನನಗೆ ಮದುವೆ ವಿಷಯ ಮಾತನಾಡುವಾಗೆಲ್ಲ ಮನದೊಳಗೆ ಏನೋ ಆತಂಕ !
ನನ್ನ ಅಕ್ಕನಿಗೆ ಜಾತಕದಲ್ಲಿ ದೋಷವಿದೆ ಹಾಗಾಗಿ ಅವಳಿಗೆ ಗಂಡು ಸಿಕ್ಕಿರಲಿಲ್ಲ
ಈಗ ಸಿಕ್ಕಿರುವ ಹುಡುಗನ ಮನೆಯವರು ನಮಗೆ ಎರಡು ಮಕ್ಕಳು ಇಬ್ಬರಿಗೂ ಒಂದೇ ಮನೆಯಲ್ಲಿ
ಹೆಣ್ಣು ತಂದು ಮದುವೆ ಮಾಡಬೇಕು ಎಂದು ಇದ್ದೀವಿ
ಎನ್ನುವ ಮಾತಿಗೆ ನಮ್ಮ ಹೆತ್ತವರು ಕೂಡ ಸರಿ ಎಂದರು !
ಆಗಸವೇ ಹಾರಾಡಿದರೂ ಗುಬ್ಬಚ್ಚಿ ಗೂಡು ಸೇರಲೇ ಬೇಕು
ಅವನಿಗೂ  ತನ್ನ ಬದುಕಿನ ವಾಸ್ತವದ ಅರಿವಾಗ ತೊಡಗಿತು !

ಈ ಭೂಮಿಯ ಮೇಲಿನ ತುಂಬಾ ಪ್ರೇಮಿಗಳಿಗೆ
ಪ್ರೀತಿಸುವ ಹಕ್ಕು ಇರುತ್ತದೆಯೇ ವಿನಃ  ಅವರನ್ನು ಪಡೆಯುವ ಅಧಿಕಾರ ಇರುವುದಿಲ್ಲ !

ಅವನ ಬದುಕನ್ನು ಒಮ್ಮೆ ತಿರುಗಿ ನೋಡಿದ ಹೆತ್ತವರು ಇಲ್ಲದ ತನ್ನ ಎರಡು ತಂಗಿಯರಿಗೆ
ತಾನೇ ತಂದೆ ತಾಯಿ ..
ಕೇವಲ ತನ್ನ  ಸಂತೋಷಕ್ಕಾಗಿ ಅವರನ್ನು ನಡು ಬೀದಿಯಲ್ಲಿ ಬಿಟ್ಟು ತಾನು ಮಾತ್ರ ಮದುವೆ ಮಾಡಿಕೊಂಡು  ಹೋಗಲಾಗದು ...ಎಲ್ಲವನ್ನೂ ನೆನದು 
ಆ ಜೋಡಿಗಳು ಇಬ್ಬರು 
 ಏನೂ ಮಾತನಾಡದೆ ಹಾಗೆ ತಲೆಯ ಅವರಿದ್ದ ದೇವಸ್ಥಾನದ 
ಸಣ್ಣ ಬಂಡೆ ಕಲ್ಲಿನ ಮೇಲೆ ಒರಗಿಸಿಕೊಂಡು ಆಕಾಶವನ್ನು ನೋಡುತ್ತಾ ಇದ್ದರು !

ಸರಿ ಅನು ..ನೀನು ನಿಮ್ಮ ಮನೆಯಲ್ಲಿ ತೋರಿಸಿರುವ ಹುಡುಗನನ್ನೇ ಮದುವೆಯಾಗು
ಈಗ ಕೇವಲ ನಮ್ಮಿಬ್ಬರ ಬದುಕನ್ನ ಮಾತ್ರ ನೋಡಕ್ಕೆ ಆಗಲ್ಲ
ನಿನ್ನ ಅಕ್ಕ ನನ್ನ ತಂಗಿಯರು ಇದ್ದಾರೆ ಅವರ ಕನಸುಗಳಿಗೆ ಸಮಾಧಿ 
ಕಟ್ಟಿ ನಾವು ನೆಮ್ಮದಿಯಾಗಿ
ಬಾಳಕ್ಕೆ ಆಗಲ್ಲ .....

ಆಗಿದ್ರೆ ನಾವು ದೂರ ಆಗೋದೊಂದೇ ಇದಕ್ಕೆ ಪರಿಹಾರನ ?
ಹೌದು ಅನು ಬೀಳೋ ಎಲ್ಲಾ ಮಳೆ ಹನಿಗಳೂ ಕಡಲ ಸೇರಲ್ಲ ಹಾಗೆ
ಈ ಭೂಮಿ ಮೇಲೆ ಪ್ರೀತಿಸೋರೆಲ್ಲಾ ಪ್ರೀತಿಸುವವರನ್ನೇ ಮದುವೆ ಆಗಲ್ಲ !
ಪ್ರೀತಿ ಅನ್ನೋದು ಕಲ್ಪನೆ ಆದರೆ ಬದುಕು ಅನ್ನೋದು ವಾಸ್ತವ
ಅದನ್ನ ಅರ್ಥ ಮಾಡಿಕೊಳ್ಳಲೇ ಬೇಕು ...

ಅವಳು ಹಾಗೆ ಕಣ್ಣೀರ ಒರಸಿಕೊಂಡು...
ಸರಿ ನಾನ್ ಬರ್ತೀನಿ ಸಾರಿ ಹೋಗ್ತೀನಿ ...
ಎಂದು ತಿರುಗಿ ನೋಡುತ್ತಲೇ ಹೊರಟು ಹೋದಳು ...

ಅವನು ಕೂಡ ಅವಳ ಬೀದಿಯ ಪಕ್ಕದಲ್ಲೇ ಇದ್ದ
ಮನೆಯ ಖಾಲಿ ಮಾಡಿ ದೂರದಲ್ಲಿ ಬೇರೆಯೊಂದು ಮನೆಯ ಮಾಡಿದ
ಅವಳನ್ನು ಮತ್ತೆ ನೋಡಲೇ ಇಲ್ಲ
ಅಲ್ಲೇ ತಂಗಿಗಳಿಗೆ ಮದುವೆ ಮಾಡಿಕೊಟ್ಟು
ಬೆಂಗಳೂರಿಗೆ ಬಂದು ನೆಲಸಿದ ......
ಆ ಉದ್ಯಾನವನದಲ್ಲಿ ....
ಮುಳುಗುವ ನೇಸರನ ನೋಡುವ ಹಲವರ ಬದುಕಿನಲ್ಲಿ
ಅವರೊಳಗೆ ಇರುವ ಎಂದೂ ಮರೆಯಾಗದ ನೆನಪುಗಳು ಉದಯಿಸುತ್ತವೆ
ಅವನಿಗೂ ತನ್ನೆಲ್ಲಾ ನೆನಪುಗಳ ಒಂದು ಕ್ಷಣ ನೆನದು ಕಣ್ಣು ತುಂಬಿ ಬಂದವು
ಹಾಗೆ ಆ ಕಣ್ಣೀರ ರೆಪ್ಪೆಯ ತಡೆಗೋಡೆಯಲ್ಲಿ ಬಂಧಿಸಿ ಕಣ್ಣ ಮುಚ್ಚಿದ !

ಹಿಂದಿನಿಂದ ಅನು ಬಂದು ಕೈಯ ಹಿಡಿದಳು ...
ಆತ ತಿರುಗಿದ
ಅಪ್ಪ ಬಾ ಮನೆಗೆ ಹೋಗೋಣ
ಕತ್ತಲಾಯಿತು ನಾನು ಪಾರ್ಕ್ ನಲ್ಲಿ ಎಲ್ಲಾ ಆಟಗಳನ್ನು ಆಡಿ ಆಯ್ತು ..
ಹಾಗೆ ಹೋಗುವಾಗ ಅಮ್ಮನಿಗೆ ಮಲ್ಲಿಗೆ  ಹೂ ತೆಗೆದುಕೊಂಡು ಹೋಗಬೇಕು ಅಂದಲ್ಲ ಪಕ್ಕದಲ್ಲೇ ಜಿಲೇಬಿ ಅಂಗಡಿಯಲ್ಲಿ ನನಗೆ ಜಿಲೇಬಿ ಬೇಕು .....
ಸರಿ ಅನು ಬಾ ಹೋಗೋಣ .....
ಎಂದು ತನ್ನ ಐದು ವರ್ಷದ ಮಗಳ ಕರೆದುಕೊಂಡು ನಡೆದ..
ಅವನ ಮೊದಲ ಪ್ರೀತಿ ಮಗಳಾಗಿತ್ತು...............!!  

ಸಮಯದ ಸಂತೆಯಲ್ಲಿ ಬಿಟ್ಟು ಬರಲು ಹೊರಟವನನ್ನು
ಪಟ್ಟು ಬಿಡದೆ ಕೈ ಬೆರಳ ಹಿಡಿದು ಬರುತ್ತಿತ್ತು ಎಂದೂ  ಕಳೆದು ಹೋಗದ ನೆನಪುಗಳು !

-ಪ್ರಕಾಶ್  ಶ್ರೀನಿವಾಸ್ 

ನಾನು ನನ್ನ ಕನಸು - ಪ್ರಕಾಶ್ ಶ್ರೀನಿವಾಸ್


ಸಾಂದರ್ಭಿಕ ಸೋಪಾನ !!! - ರತ್ನಸುತ

ಆಕೆ ಮುನಿಸಿಕೊಂಡಾಗ
ಮೂಗು, ಕೆಂಡ ಸಂಪಿಗೆ
ಕಣ್ಣು, ಕಿಡಿ ಕಾರುವ ಕುಂಡ
ಕೆನ್ನೆ, ಲಾವಾ ರಸ ಹರಿದ ಹಾದಿ
ತುಟಿ, ಕಚ್ಚಿದ ಹಲ್ಲಿಗೆ ಬೆಚ್ಚಿದ ಬಳ್ಳಿ
ನುಡಿ, ಅಪಶೃತಿಯ ಹಾಡು
ನಡೆ, ಭೂ ಕಂಪನಕೆ ಕಂಪನ
ಮೈ, ಕಾಡ್ಗಿಚ್ಚ ಕಾನನ
ಕೈ, ಅದರಿದ ಆಯುಧ

ಆಕೆ ನಾಚಿಕೊಂಡಾಗ
ಮೂಗು, ಅರಳು ಮಲ್ಲಿಗೆ
ಕಣ್ಣು, ರಾತ್ರಿಯ ಮಿನುಗು ಚುಕ್ಕಿ
ಕೆನ್ನೆ, ಮುಸ್ಸಂಜೆ ಬಾನು
ತುಟಿ, ಸುರಪಾನದ ಉಚಿತ ಮಳಿಗೆ
ನುಡಿ, ನೊರೆ ಹಾಲಿನ ಪೇಯ
ನಡೆ, ತಾಳಕೆ ಬೆರಗು ವೈಖರಿ
ಮೈ-ಸೂರಿನ ತುಪ್ಪದ ಪಾಕ
ಕೈ ಸೋಕಲು ಕಾಣ್ವುದು ನಾಕ

ಆಕೆ ಅಚ್ಚರಿಗೊಂಡಾಗ
ಮೂಗು, ಮೂರ್ಸುತ್ತು ಮಲ್ಲಿಗೆ
ಕಣ್ಣು, ಬತ್ತಿ ಏರಿಸಿದ ಉರಿ ದೀಪ
ಕೆನ್ನೆ, ಅಂಕು ಡೊಂಕು ಮಣ್ಣ ಜಾಡು
ತುಟಿ, ಕುತೂಹಲದ ಕೂಸು
ನುಡಿ, ಬರೀ ತೊದಲು
ನಡೆ, ಮೋಹಕ ಮಜಲು
ಮೈ, ಶಿಲೆಯ ನಿಲುವು
ಕೈ, ಕೆನ್ನೆ ಸಲುವು

ಆಕೆ ನಟಿಸುವಾಗ
ಮೂಗು, ನಟನೆಯ ಸುಳುವು
ಕಣ್ಣು, ಕಾಡಿಗೆ ಗೂಡು
ಕೆನ್ನೆ, ಕೃತಕ ಹೂಬನ
ತುಟಿ, ಒತ್ತಾಯದ ನಗೆ ಸಿಂಚನ
ನುಡಿ, ತಾತ್ಕಾಲಿಕ ಸದ್ದು
ನಡೆ, ಬೇಕನಿಸದ ಮುಗಿಲು
ಮೈ, ನನ್ನದಲ್ಲದ ಆಸ್ತಿ
ಕೈ-ಕೊಡುಗೈಯ್ಯ ಕುಸ್ತಿ

ಆಕೆ ಅಳುವಾಗ
ಮೂಗು, ಉಸಿರಿಗಿಕ್ಕಟ್ಟು ಮೂಸೆ
ಕಣ್ಣು, ಉಕ್ಕಿದ ಕಡಲು
ಕೆನ್ನೆ, ಮಳೆಗಾಲದ ನೆಲ
ತುಟಿ, ಕಂಬನಿಗೆ ಜಾರು ಸ್ಥಳ
ನುಡಿ, ಬಿಕ್ಕಳಿಕೆ ಬಂಧು
ನಡೆ, ನುಡಿಯಂತೆ ನೊಂದು
ಮೈ- ಮನಸಿಗೆ ಘಾಸಿ
ಕೈ ಬಯಸಿತು ಪ್ರೀತಿ
ರತ್ನಸುತ

ಆಕೆ ನಾನಾದಾಗ
ಮೂಗು, ದಾರಿಗೊಂದು ದಿಕ್ಸೂಚಿ
ಕಣ್ಣು, ಬದುಕಿಗೆ ಕಾವಲು
ಕೆನ್ನೆ, ಕಾವ್ಯ ಫಲಕ
ತುಟಿ, ಆಮ್ಲಜನಕ
ನುಡಿ, ಶಬ್ಧಕೋಶ
ನಡೆ, ವೀರಾವೇಶ
ಮೈ, ಗೋಪುರ ಕಳಶ
ಕೈ, ಕುಸುರಿ ವಿಳ್ಹಾಸ

-- ರತ್ನಸುತ

ತೋಚಿದ್ದು.... ಗೀಚಿದ್ದು...

ಅದು ಉಂಟು , ಇದು ಉಂಟು
ಆದರೆ
ನೆಮ್ಮದಿ ಇಲ್ಲದ ಮೇಲೆ
ಉಂಟುಗಳ ನಂಟಿಗೆ
ಬೆಲೆ ಉಂಟೆ ?

16.11.2013


ವಿಶಾಲ ಸೃಷ್ಟಿಯಲ್ಲಿ
ನಾನು ನನ್ನದು , ನೀನು ನಿನ್ನದು -
ಎಲ್ಲವೂ ಗೌಣ
ಮಮಕಾರವು ಮಾಯೆ
ತಿರಸ್ಕಾರವು ಕೂಡ !

11.09.2013

Thursday, November 14, 2013

ನವಿರು ಕಲ್ಲು

¸ÀÆgÀå£ÉÆA¢UÉ ªÀiÁwV½AiÀÄĪÀÅzÉAzÀgÉ CzÀÄ MAzÀÄ CzÀÄâvÀ.EzÀÄ £À£ÀUÀjªÁzÁV¤AzÀ®Æ £ÀqÉAiÀÄÄwÛzÉ.¸ÀÆgÀå ¸ÀàA¢¸ÀÄvÁÛ£ÉÆà E®èªÉÇà DzÀgÉ £Á£ÁqÀÄvÀÛ¯Éà EgÀÄvÉÛãÉ..
GzÀ¬Ä¸ÀÄ GzÀ¬Ä¸ÀÄ N CgÀÄuÁ…
dUÀPÉ®è ¥À¸Àj¸ÀÄ ¤£À QgÀuÁ…
EzÀÄ PÉ®ªÀjUÉ vÀÄA¨Á ¨Á°±ÀªÁV PÁt§ºÀÄzÀÄ DzÀgÉ 24 ªÀµÀðzÀ AiÀÄĪÀPÀ¤UÉ 4 ªÀµÀðzÀ ¨Á®PÀ£ÁUÀĪÁ¸É. £À£ÀUÉ ¸ÀÆAiÀÄð ªÀÄAf¤AzÉüÀĪÀ zÁn, ªÉÆÃqÀUÀ½UɯÁè NPÀĽ JgÀZÀĪÀ PÀæªÀÄ J®èªÀÇ EµÀÖ.
NPÀĽ ¸ÀÆAiÀÄð£Á
£ÉÆÃrzÉ £Á

GdÄÓªÀ PÀuÉÆÚ¼ÀÄ DPÀ½¹
ªÉÆÃqÀPÉ ªÀÄÄzÀÄÝ
ªÉÆÃd£ÀÄ ªÀiÁr
JgÀZÀÄvÀ°zÀÝ
§tÚzÀ NPÀĽ

§UÉ §UÉ §tÚzÀ NPÀĽ

PÉýzÉ £Á£ÀÄ
DlPÉ §gÀ¯ÉÃ
ºÉüÀ¯Éà E®è
ªÀiÁvÀ£ÁqÀ¯Éà E®è..

ªÀÄvÉÛ ºÉÆÃUÀĪÉ
ªÀÄvÉÛ ºÉÆÃUÀĪÉ
JzÀÄÝ £ÁtÄ £À¸ÀÄPÀ¯ÉÃ
MzÀÄÝ PÉüÀĪÀ ªÀÄÄzÀÄÝvÀ£À¢
¸ÀĪÀÄä¤zÀÝ CªÀ¤UÉ…

¨Á®PÀ£ÁV¹zÀ D UÀÄqÀØPÉ,PÀ« £ÀÄ°zÁrzÀ, PÀ« £À°zÁrzÀ £À«gÀÄ , £À«®PÀ®Äè UÀÄqÀØPÉ…¤ÃªÀÇ §wÃðgÀ¯Áè…??????







Tuesday, November 12, 2013

ಉಮಾಶ್ರೀ ಚಿತ್ರೋತ್ಸವ : ನಟಿಯ ಆಂತರ್ಯ ಬದುಕಿನ ಯಾನ - ಶಂಕರ್ ಮಿತ್ರಾ ಶ್ರೀವಾಸ್ತವ್


ಬೆಂಗಳೂರಿನ ಉತ್ಸಾಹಿ ತಂಡ "ಕಾಜಾಣ " ಆಯೋಜಿಸಿದ್ದ ಉಮಾಶ್ರೀ ಚಿತ್ರೋತ್ಸವ ಇತ್ತೀಚೆಗಷ್ಟೇ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ನಡೆಯಿತು .  ಬೇಲೂರು ರಘುನಂದನ್ ರವರ ನೇತೃತ್ವ ದಲ್ಲಿ ನಡೆದ ಮೂರು ದಿನದ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು . ಚಿತ್ರರಂಗದ ಗಣ್ಯರಾದ ಕೇಸರಿ ಹರವು , ರೇಖಾ ರಾಣಿ , ಆ ದಿನಗಳು ಚಿತ್ರ ನಿರ್ದೇಶಕ ಚೈತನ್ಯ , ಆದ್ಯಾತ್ಮಕ ಚಿಂತಕಿ ವೀಣಾ ಬನ್ನಂಜೆ , ಡಾ।। ನಿಕಿಲಾ  , ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರು,  ಉಮಾಶ್ರೀ ಯವರ ಪುತ್ರ ವಿಜಯ್ ಕುಮಾರ್ ಮತ್ತು ಕುಟುಂಬ ನಟಿ  ಉಮಾಶ್ರೀ ಯವರ ಚಿತ್ರ ಬದುಕಿನ ಬಗೆಗಿನ ಹೊರ ಒಳವುಗಳನ್ನ ಶಿಬಿರಾರ್ಥಿಗಳೊಡನೆ ಹಂಚಿಕೊಂಡರು  ಹಾಗೂ ಚರ್ಚೆ ನಡೆಸಿದರು . ಮೂರು ದಿನದ ಕಾರ್ಯಕ್ರಮದಲ್ಲಿ ಉಮಾಶ್ರೀ ಯವರ ಕೊಟ್ರೇಶಿ ಕನಸು , ಕನಸೆಂಬ ಕುದುರೆಯನೇರಿ , ಗುಲಾಬಿ ಟಾಕೀಸ್ ಚಿತ್ರಗಳ ಪ್ರದರ್ಶನವನ್ನೂ ಕೂಡ ಕಾಜಾಣ ಆಯೋಜಿಸಿತ್ತು . ಒಬ್ಬ ನಟಿಯನ್ನು ಕೇಂದ್ರವಾಗಿಟ್ಟು ಕೊಂಡು ನಡೆಸಿರುವ ಈ ಚಿತ್ರೋತ್ಸವ ದೇಶದ ಮೊಟ್ಟ ಮೊದಲ ಪ್ರಯತ್ನ .  ಕಾಜಾಣದ ಮೊದಲ ಪ್ರಯತ್ನಕ್ಕೆ ಗೆಲುವು ಸಿಕ್ಕಿದೆ .








ಮೊದಲ ದಿನ ಕೇಸರಿ ಹರವು ರವರು ಉಮಾಶ್ರಿ ಯವರ ಆರಂಭದ ದಿನಗಳು ಬಗ್ಗೆ ಮಾತನಾಡುತ್ತಾ ಉಮಾಶ್ರೀ ಯವರ ರಂಗ ಭೂಮಿಯ ಬದುಕಿನ ವಿವಿದ ಆಯಾಮಗಳನ್ನು ಶಿಬಿರಾರ್ಥಿ ಗಳ ಮುಂದೆ ತೆರೆದಿಟ್ಟರು . ಆಕಸ್ಮಿಕತೆ ಗಿಂತ ಅನಿವಾರ್ಯತೆ ಉಮಾಶ್ರೀ ಯವರನ್ನು ರಂಗಭೂಮಿ ಯಿಂದ ಚಿತ್ರರಂಗಕ್ಕೆ ಕರೆದೊಯ್ಯಿತು ಎಂದು ತಿಳಿಸಿದರು . ಲೇಖಕಿ ನಿರ್ದೇಶಕಿ ನಿರ್ಮಾಪಕಿ ರೇಖಾ ರಾಣಿಯವರು ಉಮಾಶ್ರೀ ಯವರ ದ್ವಂದ್ವಾರ್ಥ ಚಿತ್ರಗಳ ಬಗ್ಗೆ ಮಾತನಾಡುತ್ತಾ ಉಮಾಶ್ರೀ ಹಾಗೂ ಎನ್ .ಎಸ್ . ರಾವ್ ರವರ ಕಾಂಬಿನೇಶನ್ ಚಿತ್ರಗಳು ಆ ಕಾಲದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದವು . ಸೂಕ್ಷ್ಮ ವಾಗಿ ಗಮನಿಸಿದಾಗ ಉಮಾಶ್ರೀ ಯವರ ಮಾತಿನಲ್ಲಿ - ಆಂಗಿಕ ಭಾವದಲ್ಲಿ ಪಾತ್ರ ತಾವಾಗುತ್ತಿದ್ದರು . ಆದರೆ ಮುಗ್ದತೆ ಮಾತ್ರ ಮುಖದಲ್ಲಿ ಸದಾ ಇರುತ್ತಿತ್ತು. ಎಲ್ಲ ಚಿತ್ರಗಳೂ ಎಲ್ಲ ಕಾಲದಲ್ಲೂ ಪ್ರೇಕ್ಷಕರನ್ನು ಮರಳು ಮಾಡಲು ಸಾದ್ಯವಿಲ್ಲ.  ದ್ವಂದ್ವಾರ್ಥ ಕೂಡ ಒಂದು ಕಲೆಯಾ ಪ್ರಾಕಾರವೇ ಎಂದು ಮಂಡಿಸಿದರು . ಕೆ ಎಂ ಚೈತನ್ಯ ರವರು ಉಮಾಶ್ರೀ ಯವರೊಡನೆ ತಮ್ಮ ಚಿತ್ರ ರಂಗದ ಅನುಭವವನ್ನೂ - ಕೊಟ್ರೇಶಿ ಕನಸು ಚಿತ್ರದ ಬಗ್ಗೆ ಚರ್ಚೆಯಲ್ಲಿ ಶಿಭಿರಾರ್ಥಿ ಗಳೊಡನೆ ಭಾಗವಹಿಸಿದರು.

ಎರಡನೇ ದಿನ ಕನಸೆಂಬ ಕುದುರೆಯನೇರಿ ಚಿತ್ರ ಪ್ರದರ್ಶನ ದ ನಂತರ ಕನಸೆಂಬ ಕುದುರೆಯನೇರಿ ಚಿತ್ರದ ಕಾದಂಬರಿಗಾರ ಅಮರೇಶ್ ನುಗಡೋಣಿ ಯವರೊಡನೆ ಚಿತ್ರದ ಬಗ್ಗೆ ಸಂವಾದ ವಿತ್ತು . ಶಿಬಿರಾರ್ಥಿಗಳೊಡನೆ ಮಾತನಾಡುತ್ತಾ ಅಮರೇಶ್ ರವರು ದೃಶ್ಯ ಮಾದ್ಯಮಕ್ಕೂ ಬರಹಕ್ಕೂ ಇರುವ ವ್ಯತ್ಯಾಸ ಮತ್ತು ಗಿರೀಶ್ ಕಾಸರವಳ್ಳಿ ಯವರು ಕೇವಲ ತಮ್ಮ ಸವಾರಿ ಕಾದಂಬರಿಯ ತಿರುಳನ್ನು ಮಾತ್ರ ಇಟ್ಟುಕೊಂಡು ಚಿತ್ರವನ್ನು ಪ್ರಸ್ತುತ ದಿನಗಳಿಗೆ ತೆರಿದಿಟ್ಟ ತಂತ್ರಗಳ ಬಗ್ಗೆ ಮಾತನಾಡಿದರು . ನಂಬಿಕೆಯ ಬದುಕಿನಲಿ ವಿಹರಿಸುವುದು ತಮ್ಮ ಕತೆಯಲ್ಲಿದೆ .. ಆದರೆ ಅದನ್ನು ಮೀರಿ ಬದುಕಲು ಸಾದ್ಯ ಎಂಬುದನ್ನು ಗಿರೀಶ್ ಕಾಸರವಳ್ಳಿ ಯವರು ಚಿತ್ರದಲ್ಲಿ ತೋರಿಸಿದ್ದಾರೆ ಎಂದು ಅವರನ್ನು ಶಾಘ್ನಿಸಿದರು . ಉಮಾಶ್ರಿ ಯವರ ಬದುಕು ಆಂತರ್ಯ ರೂಪಾಂತರ ಗಳ ಬಗ್ಗೆ ಮಾತನಾಡಿದ ಅಧ್ಯಾತ್ಮಕ ಚಿಂತಕಿ ವೀಣಾ ಬನ್ನಂಜೆ ಯವರು ಉಮಾಶ್ರೀ ಯವರು ಆಂತರ್ಯದ ಮೂಲಕ ಪ್ರಕಟ ಗೊಳ್ಳುವ ಅವರ ಮನಸ್ಥಿತಿ ಬಗ್ಗೆ , ಅವರ ಪಾತ್ರಗಳ ಪರಕಾಯ ಪ್ರವೇಶ , ಉಮಾಶ್ರೀ ಯವರು ತಮಗರಿವಿಲ್ಲದಂತೆ ಪಾತ್ರಗಳ ಪರಕಾಯ ಪ್ರವೇಶ - ನಂತರ ಪಾತ್ರಗಳಿಂದ ಕಳಚಿಕೊಂಡು ಬರಿದಾಗುತ್ತಿದ್ದರು . ಮತ್ತೆ ಹೊಸ ಪಾತ್ರಗಳನ್ನ ತುಂಬಿಕೊಳ್ಳುತ್ತಿದ್ದರು . ಮತ್ತೆ ಬರಿದಾಗುತ್ತಿದ್ದರು . ಈ ತುಂಬಿ ಕೊಳ್ಳುವಿಕೆ . ಬರಿದಾಗುವಿಕೆಯೇ ಅವರನ್ನು ಉತ್ತುಂಗಕ್ಕೆ ಕರೆದೊಯ್ದಿದೆ . ಜೊತೆಗೆ ದುಃಖ ಪರಂಪರೆಯ ನಡೆ ಉಮಾಶ್ರೀ ಯವರಲ್ಲಿತ್ತು ದುಃಖ ದಲ್ಲಿ ಕಲಿತಷ್ಟು ಮನುಷ್ಯ ಸುಖದಲ್ಲಿ ಕಲಿಯುವುದಿಲ್ಲ ಎಂದು ಆಧ್ಯಾತ್ಮಕ ವಾಗಿ ಉಮಾಶ್ರೀಯವರ ಬೆಳವಣಿಗೆ ಬಗ್ಗೆ ತೆರೆದಿಟ್ಟರು . ಡಾ ।। ನಿಕಿಲಾ  ಪೋಷಕ ಪಾತ್ರಗಳಲ್ಲಿ ಉಮಾಶ್ರೀಯ ಬೆಳವಣಿಗೆ ಬಗ್ಗೆ ತಿಳಿಸಿದರು .

ಮೂರನೇ ದಿನ ಗಿರೀಶ್ ಕಾಸರವಳ್ಳಿ ಯವರ ಗುಲಾಬಿ ಟಾಕೀಸ್ ಚಿತ್ರ ಪ್ರದರ್ಶನ ದ ನಂತರ ಚಿತ್ರದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರೊಡನೆ ಶಿಭಿರಾರ್ಥಿ ಗಳ ನೇರ ಸಂವಾದವಿತ್ತು . ಉಮಾಶ್ರೀ ಪ್ರಭುದ್ದ ನಟಿಯಷ್ಟೇ ಅಲ್ಲ ಒಳ್ಳೆ ಸೃಜನ ಶೀಲತೆ ಯುಳ್ಳ ನಟಿ ಹಾಗೂ ಅವರ ಪಾತ್ರಗಳ ಸೂಕ್ಮತೆ ಗಳನ್ನೂ ತಿಳಿಸಿದರು . ನಂತರ ಉಮಾಶ್ರೀ ಯವರೊಡನೆ ಶಿಭಿರಾರ್ಥಿಗಳ ನೇರ ಸಂವಾದ ವನ್ನು ಕಾಜಾಣ ತಂಡ  ಏರ್ಪಡಿಸಿತ್ತು . ಸಂವಾದದಲ್ಲಿ ಉಮಾಶ್ರೀ ಯವರು ತಾವು ಉಮಾದೇವಿ ಯಿಂದ ಉಮಾಶ್ರೀ ಯಾದ  ಬಗ್ಗೆ , ತಮ್ಮ ರಂಗ ಭೂಮಿ ಪಯಣ - ಸಿನಿ ಪಯಣವನ್ನು ಶಿಭಿರಾರ್ಥಿಗೊಡನೆ ಹಂಚಿಕೊಂಡರು . ಸಂವಾದದ ನಂತರ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು .

 ಸಮಾರೋಪ ಕಾರ್ಯಕ್ರಮದಲ್ಲಿ ಉಮಾಶ್ರೀ ಯವರೊಡನೆ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ , ನಿರ್ದೇಶಕ ಗಿರೀಶ್ ಕಾಸರವಳ್ಳಿ , ಚಿತ್ರ ಸಾಹಿತಿ ರೇಖಾ ರಾಣಿ , ಕುವೆಂಪು ಪ್ರತಿಷ್ಟಾನದ ಅದ್ಯಕ್ಷ ನಾಡೋಜ ಹಂಪ ನಾಗರಾಜಯ್ಯ ರವರು ,  ಉಮಾಶ್ರೀ ಯವರ ಪುತ್ರ ವಿಜಯ್ ಕುಮಾರ್ ಮತ್ತು ಕುಟುಂಬ ,ಹಾಗೂರವರು ಭಾಗವಹಿಸಿದ್ದರು .

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ  ಉಮಾಶ್ರೀ ಯವರು ಚಿತ್ರರಂಗದಲ್ಲಿ ಪ್ರಿಯವಾಗುವ ನಾವುಗಳು ರಾಜಕೀಯದಲ್ಲಿ ಎಲ್ಲರಿಗೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವುದು ಅಸಾದ್ಯ . ತನ್ನ ಬದುಕನ್ನ ಕಟ್ಟಿ ಕೊಡಲು ರಂಗಭೂಮಿ ಮತ್ತು ಚಿತ್ರ ರಂಗ ಸಹಾಯ ಮಾಡಿದೆ ಮತ್ತೊಂದೆಡೆ ರಾಜಕೀಯ ಬೇರೆಯವರಿಗೆ ಸಹಾಯ ಮಾಡುವ ಅವಕಾಶ ನೀಡಿದೆ . ಹಿಂದಿನ ರಾಜ್ಯೋತ್ಸವ ಪ್ರಶಸ್ತಿಗಳು ಸಾಕಷ್ಟು ಜನರ ಟೀಕೆಗೆ ಒಳಗಾಗಿದ್ದವು . ಆದರೆ ಈ ವರ್ಷದ ಪ್ರಶಸ್ತಿಗಳು ಕಡಿಮೆ ಟೀಕೆಗೆ ಒಳಗಾಗಿದ್ದಾವೆಂದು ಹೆಮ್ಮೆ ಯಿಂದ ನುಡಿದರು .

ಸಚಿವರಾದ ಕಿಮ್ಮನೆ ರತ್ನಾಕರ್ ರವರು ಮಾತನಾಡಿ ಉಮಾಶ್ರೀ ಚಿತ್ರಗಳು ಸಾಹಿತ್ಯದ ಹೊರತಾಗಿ ಮನರಂಜನಾತ್ಮಕ ಮಾಧ್ಯಮ ಗಳಿಂದಲೂ ಪರಿವರ್ತನೆ ಸಾದ್ಯ ಎಂಬುದನ್ನು ನಿರೂಪಿಸಿದ್ದಾವೆಂದು
ತಿಳಿಸಿದರು .

ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರು ಸಿನಿಮಾ ಮಾಧ್ಯಮ ಕೇವಲ ಮನರಂಜನೆಗೆ ಸೀಮಿತ ವಾಗಿರದೇ ಸಮಾಜವನ್ನು , ಸಮಾಜದ ಒಳ ಹೊರವುಗಳನ್ನು ತೆರೆದಿಡುವ ಕನ್ನಡಿಯಾಗಬೇಕು ಎಂದರು .

ಚಿತ್ರಲೇಖಕಿ ರೇಖಾ ರಾಣಿಯವರು ಮಾತನಾಡಿ ಚಿತ್ರರಂಗಕ್ಕಿರುವ ಭೌದ್ದಿಕತೆ - ನೈತಿಕತೆ ಜೊತೆಗೆ ಸಮಸ್ಯೆ ಯನ್ನು ಅವಲೋಕಣ ಮಾಡಿ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳುವ ಬಗ್ಗೆ ಇಂತಹ ಶಿಬಿರಗಳು ನಿರಂತರವಾಗಿ ನಡೆಯ ಬೇಕು ಎಂದರು. 

ಕುವೆಂಪು ಪ್ರತಿಷ್ಟಾನದ ಅದ್ಯಕ್ಷ ನಾಡೋಜ ಹಂಪ ನಾಗರಾಜಯ್ಯ ರವರು ಮಾತನಾಡುತ್ತ ಕನ್ನಡ ಸಾಹಿತ್ಯ - ಸಾಂಸ್ಕೃತಿಕ ಬೆಳವಣಿಗೆಗೆ ಯುವಕರ ಪಾತ್ರ ಅಮೂಲ್ಯವಾದುದ್ದು . ಇವರು ಪ್ರತ್ಯೇಕ ದ್ವೀಪಗಳಾಗಿರದೆ ನಾಡು - ನುಡಿ - ಕನ್ನಡ  ಬೆಳಸುವ ಬೆಳಗಿಸುವ ದೀಪವಾಗಿರಬೇಕು ಎಂದು ನೆರೆದ ಶಿಬಿರಾರ್ಥಿಗಳಿಗೆ ಉತ್ಸಾಹ ತುಂಬಿದರು ಹಾಗೂ ಶುಭ ಹಾರೈಸಿದರು .

 ಕಾಜಾಣ ಬಳಗದ ಬೇಲೂರು ರಘುನಂದನ್ ಶಿಬಿರದ ಯಶಸ್ಸಿಗೆ ಕಾರಣರಾದವರನ್ನು ಸ್ಮರಿಸುತ್ತ ಇದು ಕೊನೆಯಲ್ಲ ... ನಿರಂತರ ಎಂದರು .


ಶಂಕರ್ ಮಿತ್ರಾ ಶ್ರೀವಾಸ್ತವ್


http://newskannada.com/karavaliinner.php?news=rs&nid=8243

Sunday, November 3, 2013

ಕನ್ನಡಕ್ಕೊಂದೇ ’ರಾಗ’-ಅದು ರಾ.ಗಣೇಶ - V R BHAT

ಕನ್ನಡನಾಡಿಗಾಗಿ ಯಾರ‍್ಯಾರು ಏನೆಲ್ಲಾ ಸೇವೆಮಾಡಿದರು ಎಂಬುದು ಬೇರೆ ವಿಷಯ.
ಕನ್ನಡ ನೆಲದಲ್ಲಿಯೇ ಅರಳಿದ ’ಅವಧಾನ’ ಕಲೆ ಮಾಸಿಹೋದಾಗ ಹೊಸದಾಗಿ ಅದನ್ನು ಪ್ರತಿಷ್ಠಾಪಿಸಿದವರು ಶತಾವಧಾನಿ ಡಾ| [’ರಾಗ’]ರಾ.ಗಣೇಶರು. ಕನ್ನಡದಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ, ವಾಚಿಸಿದ್ದಾರೆ, ಪ್ರವಚಿಸಿದ್ದಾರೆ, ಉಪನ್ಯಾಸಗಳಂತೂ ಯಾರೂ ಮಾಡದಷ್ಟು ಹೇರಳ ಸಂಖ್ಯೆಯಲ್ಲಿ ಅವರಿಂದ ನಡೆದಿವೆ. ಅವರ 
ಪಾಂಡಿತ್ಯ ಕನ್ನಡ ಜನರಿಗೆ ಪರಿಚಯವಿರದ್ದಲ್ಲ; ಆದರೆ ಕರ್ನಾಟಕ ಸರಕಾರಕ್ಕೆ ಇನ್ನೂ ಅವರ ಪರಿಚಯವಿಲ್ಲ!! ಕೆಲವರು ಕೆಲವು ಪ್ರಕಾರದ ಸಾಹಿತ್ಯ ಸೇವೆಯಲ್ಲಿ ಮಾತ್ರ ತೊಡಗಿಕೊಳ್ಳುತ್ತಾರೆ; ಗಣೇಶರದ್ದು ಹಾಗಲ್ಲ, ಕನ್ನಡದಲ್ಲಿ ಈಗಿರುವ ಪರಮೋಚ್ಚ ವ್ಯಾಖ್ಯಾನಕಾರರು ಮತ್ತು ಅತಿಶ್ರೇಷ್ಠ ವಿದ್ವಾಂಸರು ಎಂದರೆ ಗಣೇಶರೊಬ್ಬರೇ. ಅವರ ನೆನಪಿನ ಶಕ್ತಿಯಂತೂ ಸಾಗರದಷ್ಟು ಅಗಾಧ. ಪ್ರೀತಿಯಿಂದ, ಅಭಿಮಾನದಿಂದ ಹೇಳುವುದಾದರೆ ಕನ್ನಡಕ್ಕೊಂದೇ ’ರಾಗ’-ಅದು ರಾ.ಗಣೇಶ.




 V.r. Bhat

Saturday, November 2, 2013

ತಳಮಳಿಸುತ್ತಿರುವ ಹಳ್ಳಿಗಳು


20 ವರ್ಷದ ಹಿಂದೆ ಊರಿನಲ್ಲಿ ಒಂದು ಮನೆಯಲ್ಲಿ ಮದುವೆ, ಪೂಜೆ, ಗ್ರಹಪ್ರವೇಶ ಏನೇ ಮುಖ್ಯವಾದ ಕಾರ್ಯವಿರಲಿ, ಅಥವಾ ಊರಿನ ದೇವಸ್ಥಾನದ ಮುಖ್ಯವಾದ ಕಾರ್ಯವಿರಲಿ ಒಟ್ಟಾರೆ ಅಂದು ಊರಿನ ಎಲ್ಲರಿಗೂ ಎಲ್ಲರ ಸಹಕಾರದ ಅಗತ್ಯವಿತ್ತು. ಸಹಕಾರಕ್ಕಾಗಿಯೇ ಮನೆ ಮನೆಗೆ ಹೋಗಿ ಚಪ್ಪರದ ವಿಳ್ಯ, ಮದುವೆ ವೀಳ್ಯ,ಅಡುಗೆ ವಿಳ್ಯ ಎಂದು ಪ್ರತ್ಯೇಕ ಪ್ರತ್ಯೇಕ ಆಮಂತ್ರಣ ಇತ್ತು. ಆ ಆಮಂತ್ರಣ ಸ್ವೀಕರಿಸಿದ ಮೇಲೆ ಆ ಕಾರ್ಯಕ್ಕೆ ಮನೆಯಿಂದ ಒಬ್ಬರ ಉಪಸ್ಥಿತಿ ಕಡ್ಡಾಯವಾಗಿತ್ತು.   ಊರಿನಲ್ಲಿ ಸಂಕ್ರಾತಿ ಹಬ್ಬ, ಗಡಿಹಬ್ಬ, ಹಗರಣ, ಭಜನೆ ಈ ಎಲ್ಲಾ ದೈವಿಕ ಕಾರ್ಯಗಳಲ್ಲಿಯೂ ಎಲ್ಲಾ ಜನಾಂಗದವರು ಭಾಗವಹಿಸಿ ಆಯಾಯ ಕಾರ್ಯವನ್ನು ಭಕ್ತಿಯಿಂದ ಮಾಡುತ್ತಿದ್ದರು. ಯಾರದೇ ಮನೆಯಲ್ಲಿ ಒಂದು ಸಾವು ಸಂಭವಿಸಿದ್ದರೂ ಊರಿಗೇ ಊರೇ ಬಂದು ಸಾಂತ್ವಾನ ಹೇಳುತ್ತಿತ್ತು ಮತ್ತು ಮುಂದಿನ ಕಾರ್ಯವನ್ನು ನೇರವೆರಿಸುತ್ತಿತ್ತು. ಅಂದರೇ ಊರಿನ ಸಂಭ್ರಮವಾಗಿರಲ್ಲಿ ಅಥವಾ ದುಖ:ವಾಗಿರಲ್ಲಿ ಎರಡರಲ್ಲಿಯೂ ಊರಿಗೆ ಊರೇ ಸಂಭ್ರಮಿಸುತ್ತಿತ್ತು ಮತ್ತು ದುಖಿ:ಸುತ್ತಿತ್ತು. ಪರಸ್ಪರರ ಬಗ್ಗೆ ಮತ್ತು ಪ್ರತಿಯೊಂದು ಕಾರ್ಯದ ಬಗ್ಗೆ ಎಲ್ಲರಿಗೂ ಭಕ್ತಿ ಶ್ರದ್ಧೆಯಿತು ಜೊತೆಗೆ ಸಹಕಾರ ಭಾವನೆ ಇತ್ತು.
ಬೇಸಿಗೆಯಲ್ಲಿ ಯಕ್ಷಗಾನ, ದೊಡ್ಡಾಟ್ ನಡೆಯುತ್ತಿತ್ತು. ಬೇಸಿಗೆ ರಜೆಗೆ ಬರಲು ಊರಿನ ಮಕ್ಕಳು ಮೊಮ್ಮಕ್ಕಳು ಕಾತರದಿಂದ ಕಾಯುತ್ತಿದ್ದರು. ಊರಿನಲ್ಲಿರುವ ಅಜ್ಜನ ಕಥೆಯನ್ನು ಕೇಳಲು, ಚಿನ್ನಿದಾಂಡು ಆಟ ಆಡಲು, ಮೊಮ್ಮಕ್ಕಳು ಹಪಹಪಿಸುತ್ತಿದ್ದರೇ, ಊರಿಗೆ ಬಂದು ತಮ್ಮ ಹಳೆಯ ಸ್ನೇಹಿತರೊಂದಿಗೆ ಊರಿನ ವಿವಿಧ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸುವ ಗುಂಗಿನಲ್ಲಿ ಮಕ್ಕಳಿರುತ್ತಿದ್ದರು.
 ಇಂದಿನ ಹಳ್ಳಿಯಲ್ಲಿ 20 ವರ್ಷದ ಹಿಂದಿನ ಯಾವುದೇ ಚಟುವಟಿಕೆಗಳು ಕಂಡುಬರುತ್ತಿಲ್ಲ. ಮದುವೆ ಎಂಬುದು ಒಂದು ನಾಟಕದಲ್ಲಿ ಬಂದು ಹೋಗುವ ದ್ರಶ್ಯದಂತೆ ಆಗಿರುವುದು. ಹಳ್ಳಿ ಹಳ್ಳಿಗಳಲ್ಲಿ ಮದುವೆ ಸಭಾಭವನಗಳು ತಲೆ ಎತ್ತಿರುವವು. ಊರಿನ ಸಭಾಭವನದಲ್ಲಿ ಮದುವೆ ದಿನ ಬೇರೆ ಮದುವೆ ಇದ್ದರೇ ಬೇರೆ ಊರಿನ ಸಭಾಭವನ ತಯಾರಾಗಿರುವುದು. ಈಗ ಮದುವೆ ಆಗಲು ಹುಡುಗ ಹುಡುಗಿ ಇದ್ದರೇ ಸಾಕು ಯಾರ ಸಹಕಾರವು ಬೇಕಾಗಿಲ್ಲ. ಸಾಕಷ್ಟು ದುಡ್ಡು ಬೇಕು ಅಷ್ಟೇ. ಲೋಕಲ್ ಟಿವಿ ಚಾನಲ್ ಮತ್ತು ಸ್ಥಳೀಯ ದಿನಪತ್ರಿಕೆಯಲ್ಲಿ ಆಮಂತ್ರಣವನ್ನು ನೀಡುವುದು, ಕಲ್ಯಾಣ ಮಂಟಪಕ್ಕೆ ಹೋಗಿ ದುಡ್ಡು ಕೊಟ್ಟು ಬಂದರೆ ಆಯಿತು. ಆ ನಂತರ ಮದುವೆ ದಿನ ಹೋಗಿ ಮದುವೆ ಆಗುವುದು. ಅಷ್ಟೊಂದು ಸರಳ ಸುಲಭವಾಗಿರುವುದು. ಚಪ್ಪರ ಬೇಕಾಗಿಲ್ಲ, ಮನೆಮನೆಗೆ ಹೋಗಿ ಅಡುಗೆ ಸಾಮಗ್ರಿ ಸಂಗ್ರಹಿಸುವ ಶ್ರಮವಿಲ್ಲ. ಬೇರೆ ಬೇರೆ ರೀತಿಯ ವೀಳ್ಯ ನೀಡುವ ಚಿಂತೆಯಿಲ್ಲ. ಮಂಟಪ ಕಟ್ಟುವ ಅಗತ್ಯವಿಲ್ಲ, ಬಾಳೆ ಎಲೆಯನ್ನು ಹುಡುಕಬೇಕಾಗಿಲ್ಲ. ಬೇರೆಯವರ ಹಂಗಿಲ್ಲ.
ಊರಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಟಿವಿ ಆಕ್ರಮಿಸಿರುವುದು. ಮೊಮ್ಮಕಳೊಂದಿಗೆ ಕಥೆ ಹೇಳಬೇಕಾದ ಅಜ್ಜಿ-ಅಜ್ಜ,  ಧಾರವಾಹಿ-ವಾತೆ೯ ನೋಡುವಲ್ಲಿ ಮಗ್ನರಾಗಿರುವರು. ಹಳ್ಳಿಯಲ್ಲಿ ಮಕ್ಕಳಿಗೆ ಸಿಗಬೇಕಾದ ಸ್ವಾತಂತ್ಯದ ಬಾಲ್ಯ ಮರೆಯಾಗಿ ನೀತಿ ನಿಯಮದ ಅಪ್ಪ ಅಮ್ಮ ಬಯಸಿದಂತಹ ಬಾಲ್ಯ ಪ್ರಾರಂಭವಾಗಿರುವುದು. ಟಿವಿ,ಟ್ಯೂಶನ್, ಬೇಸಿಗೆ ಶಿಬಿರ, ಕ್ರಿಕೆಟ್ ಇವು ಇಂದಿನ ಮಕ್ಕಳ ಬಾಲ್ಯವಾಗಿದೆ.  ಹಾಣೆಗೆಂಡೆ ಆಟ(ಚಿನ್ನಿ ದಾಂಡು),ಮುಟ್ಟಾಟ, ಅಜ್ಜನ ಕಥೆಗಳು, ಮೀನು ಹಿಡಿಯುವುದು,  ಬಯಲಾಟ ಇವೆಲ್ಲ ಇಂದಿನ ಮಕ್ಕಳಿಗೆ ಇತಿಹಾಸವಾಗಿದೆ. ಊರಿನ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ ಮಕ್ಕಳಿಗೆ ಪ್ರತ್ಯೇಕ ಮನೆ ಕಟ್ಟುವ, ಚಿನ್ನ ಮಾಡಿಸುವ ಒಟ್ಟಾರೆ ದುಡ್ಡು ಮಾಡುವ ಔಷಧ ಇಲ್ಲದ ಕಾಯಿಲೆ ಪ್ರಾರಂಭವಾಗಿದೆ. ಎಲ್ಲರೂ ಪಟ್ಟಣದಲ್ಲಿಯೇ ಖಾಯಂ ಆಗಿ ಇರಲು ಯೋಚಿಸಿ ಅದಕ್ಕೆ ಪೂರವಾಗಿ ಯೋಜನೆ ಮಾಡುತ್ತಾ ರಜೆಯನ್ನು ಕಳೆಯುತ್ತಿರುವರು.
ಹೌದು, ಈ ರೀತಿಯ ಅನುಕೂಲವಾಗಿದೆ ಎಂದು ಭಾವಿಸಿಯೇ ಇಂದು ನಾವೇಲ್ಲರೂ ಈ ಪದ್ದತಿಯನ್ನು ಪೋಷಿಸುತ್ತಿರುವೆವು. ಆದರೇ ಸೂಕ್ಮವಾಗಿ ಗಮನಿಸಿದಾಗ ನಾವು ಏನೋ ಕಳೆದುಕೊಳ್ಳುತ್ತಿರುವೆವು ಎಂದು ಅನಿಸುವುದು. ಹಳ್ಳಿಯಲ್ಲಿನ ಸಹಕಾರ ತತ್ವ ಎಂಬುದು ಈ ರೀತಿಯ ಹಲವಾರು ಕಾರಣಗಳಿಂದ ಮರೆಯಾಗುತ್ತಿರುವುದನ್ನು ನಾವು ಗುರುತಿಸುತ್ತಿಲ್ಲ. ಪಟ್ಟಣದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ ಏನಾದರೂ ಯಾರಿಗೂ ಗೊತ್ತಾಗದು ಮತ್ತು ಅವರ ದಿನ ನಿತ್ಯದ ಚಟುವಟಿಕೆಗೆ ಯಾವುದೇ ತೊಂದರೆಯಾಗದು. ಇದೇ ರೀತಿಯ ವಾತಾವರಣ ಹಳ್ಳಿಗಳಲ್ಲಿ ಪ್ರಾರಂಭವಾಗಿರುವುದನ್ನು ಗಮನಿಸಬಹುದಾಗಿದೆ.
ಇಂತಹ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಪ್ರಾರಂಭಿಸಿರುವ ಪ್ರಗತಿಬಂಧು ಗುಂಪು ಸಹಕಾರ ತತ್ವವನ್ನು ಹಳ್ಳಿಗಳಲ್ಲಿ ಸಾರಲು ಪ್ರಯತ್ನಿಸುತ್ತಿರುವುದು. ಕನಿಷ್ಠ ಪಕ್ಷ ವಾರೆದಲ್ಲಿ ಒಂದು ದಿನ ಗಂಡಸರು ಒಂದೊಂದು ಮನೆಯಲ್ಲಿ ಗುಂಪಿನ ಎಲ್ಲರೂ ಸೇರಿ ಕೆಲಸ ಮಾಡುವ ರೂಢಿಯನ್ನು ಪ್ರಾರಂಭಿಸುತ್ತಿರುವರು. ಮಹಿಳೆಯರು ವಾರದ ಒಂದು ದಿನದ 2 ಗಂಟೆಯಾದರೂ ಉಳಿತಾಯ ಸಂಘದ ಹೆಸರಿನಲ್ಲಿ ಪರಸ್ಪರ ಮಾತನಾಡುತ್ತಿರುವರು. ಇದು ನಮ್ಮ ಹಿಂದಿನವರು ನಡೆಸಿಕೊಂಡು ಬಂದ ಕೆಲವೊಂದು ಉತ್ತಮ ಸಂಪ್ರದಾಯವನ್ನು ಬೆಳಸುವ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯವಾಗಿದೆ.
ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿವೆ ಮಾಸಿ
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ
ತಳಮಳಿಸುತಿದೆ ಲೋಕ-ಮಂಕುತಿಮ್ಮ
(ಹಿಂದಿನ ಕಾಲದಲ್ಲಿ ಇದ್ದಂತಹ ಶ್ರದ್ಧೆ, ಭಕ್ತಿಗಳನ್ನು ನಾವು ಈಗ ಕಾಣುತ್ತಿಲ್ಲ, ಕಾಲದ ಜೊತೆಗೆ ಹಳೆಯ ನಂಬಿಕೆಗಳು ಕಳೆದು ಹೋಗುತ್ತಿದೆ. ಬರುತ್ತಿರುವ ಕಾಲದಲ್ಲಿ ನಂಬಿಕೆಗಳಿಗೆ ಬೆಲೆಯೇ ಇಲ್ಲದಂತಾಗಿರುವಾಗ ಹೊಸ ನಂಬಿಕೆ ಹುಟ್ಟುತ್ತಿಲ್ಲ. ಕುಂಟ ಅಥವಾ ಕುರುಡನು, ಬಹುಕಾಲ ಅಭ್ಯಾಸವಾಗಿದ್ದ ಮನೆಯೂ ಬಿದ್ದು ಹೋದಾಗ, ತೊಂದರೆ ಪಡುವಂತೆ, ನಮ್ಮ ಲೋಕವು ಸಹಾ ತಳಮಳಿಸುತ್ತಿದೆ.)
                                                                                                                         ವಿವೇಕ ಬೆಟ್ಕುಳಿ
                                                                                                            vivekpy@gmail.com