ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, February 27, 2016

ಡಿವಿಜಿ ರವರ "ಸಂಸ್ಕೃತಿ" ಕೃತಿ ಕುರಿತು ಉಪನ್ಯಾಸ


ಡಿವಿಜಿ ರವರ "ಸಂಸ್ಕೃತಿ" ಕೃತಿ ಕುರಿತು ಉಪನ್ಯಾಸ - ಉಪನ್ಯಾಸಕರು ಸೂರ್ಯಪ್ರಕಾಶ್ ಪಂಡಿತ್
ದಿನಾಂಕ : 28-02-15 ಸಂಜೆ , ಸಮಯ :  5.30

Thursday, February 25, 2016

ನೆಹರುಗೊಂದು ಪತ್ರ - ಪಲ್ಲವಿ ರಾವ್

ಪ್ರೀತಿಯ ನೆಹರೂಜಿ,ನೆಮ್ಮದಿಯಾಗಿರಬೇಕಲ್ಲ? ಕಂಗ್ರಾಜುಲೇಷನ್ಸ್.
ಅಂತೂ ಭಾರತದ ಯುವ ಜನತೆಗೆ ದೇಶವೆಂದರೆ ಭೌಗೋಳಿಕ ಇರುವಿಕೆಯೇ ಅರ್ಥಹೀನ, ಇಲ್ಲಿನ ನಂಬಿಕೆಗಳೆಲ್ಲವೂ ಅವೈಜ್ನಾನಿಕ, ಆಚರಣೆಗಳೆಲ್ಲ ತುಚ್ಚ , ಹೆಮ್ಮೆ ಪಡುವಂತದ್ದೂ ಇಲ್ಲೇನೂ ಇಲ್ಲ , ದೇಶವೆಂದರೆ ತಾಯಿ ಅನ್ನುವ ಕಲ್ಪನೆಯೇ ಬುಲ್ಶಿಟ್ ಅನ್ನುವ ಮನೋಭಾವವನ್ನು ನಿಮ್ಮ ಕನಸಿನ ವೈಜ್ನಾನಿಕ ಆಧುನಿಕ ಪಾಶ್ಚಾತ್ಯ ಶಿಕ್ಷಣ ಬಹಳ ಯಶಸ್ವಿಯಾಗಿ ಬಿತ್ತಿದೆ. ನೀವು ಬಹಳವಾಗಿ ಆರಾಧಿಸಿದ ಇತಿಹಾಸ ತಜ್ನರಿಂದ ಬರೆಸಿದ ಇತಿಹಾಸ ಈ ದೇಶದ ತರುಣರಲ್ಲಿ ಸಿನಿಕತೆಯನ್ನು,ದೇಶ ಕಾಯುವ ಸೈನಿಕರ ಬಗ್ಗೆ ತಿರಸ್ಕಾರವನ್ನೂ ಪ್ರಜಾಪ್ರಭುತ್ವದ ಬುನಾದಿಯ ಮೇಲೆ ದಾಳಿ ನಡೆಸಿದವರನ್ನೂ ಆರಾಧಿಸುವ ಮಟ್ಟಕ್ಕೆ ಬೆಳೆಸಿದೆ. ನೀವು ಇದನ್ನೇ ಬಯಸಿದ್ದೀರಿ ಅಲ್ವ? ಪ್ರತಿಯೊಂದನ್ನೂ ಪ್ರಶ್ನಿಸುವ, ತಿರಸ್ಕರಿಸುವ ಎಡಬಿಡಂಗಿ ಮನೋಭಾವವನ್ನೇ ವೈಜ್ನಾನಿಕ ಎಂದು ಅರ್ಥೈಸಿದ್ದವರಿಗೆ ಇಂದಿನ ವಿಶ್ವವಿದ್ಯಾನಿಲಯಗಳ ದಿಕ್ಕುದೆಶೆ ಇಲ್ಲದ ಭವಿಷ್ಯದ ಬಗ್ಗೆ ಕನಸು, ದೇಶದ ಬಗ್ಗೆ ಕಾಳಜಿ ಎರಡೂ ಇಲ್ಲದ ಸಿನಿಕ ಯುವಭಾರತ ಹೆಮ್ಮೆ ತಂದಿರಬೇಕು , ಕಂಗ್ರಾಜ್ಯುಲೇಷನ್ಸ್!
ನೀವು ಮತ್ತು ನಿಮ್ಮ ಕುಟುಂಬದ ಸ್ವತ್ತಾಗಿ ಹೋದ ಪಕ್ಷಕ್ಕೆ ಭಾರತದ ಬಗ್ಗೆ ಪ್ರೀತಿ, ಹೆಮ್ಮೆ ಹುಟ್ಟುವುದಾದರೂ ಹೇಗೆ? ಸದಾ ಪಾಶ್ಚಾತ್ಯ ಚಿಂತನೆ, ಅಲ್ಲಿನ ವಿದ್ಯಾಲಯಗಳ ಓದು, ಅಲ್ಲಿನದೇ ಬದುಕನ್ನು ಕಂಡ ನಿಮ್ಮವರಿಗೆ ಈ ದೇಶ ಬರಿಯ ಮೂಢನಂಬಿಕೆಗಳ , ಜಾತಿಗಳ, ತಾರತಮ್ಯದ ಆಡೊಂಬೊಲವಾಗಿಯೇ ಕಂಡಿತ್ತು. ನೀವೇನೋ ಡಿಸ್ಕವರಿ ಆಫ್ ಇಂಡಿಯ ಬರೆದುಬಿಟ್ಟಿರಿ. ಆದರೆ ನಿಮ್ಮ ಮರಿ ಮಕ್ಕಳಿಗೆ ಅದರ ಕಲ್ಪನೆಯಾದರೂ ಇದೆ ಅಂದು ಕೊಂಡಿದ್ದೀರ? ನೀವು ಅಷ್ಟೆಲ್ಲ ಕಾಳಜಿಯಿಂದ ಜತನವಾಗಿ ಅತ್ಯಂತ ಚಾಣಾಕ್ಶತನದಿಂದ ಅಡೆತಡೆಗಳನ್ನು ನಿವಾರಿಸಿ , ಕಾದಿಟ್ಟ ದೇಶಾಡಳಿತದ ಕಿರೀಟ ಕೈ ತಪ್ಪಿದ ಸಂಕಟದಲ್ಲಿ ನಿಮ್ಮದೇ ವಂಶದ ಕುಡಿ ದೇಶದ್ರೋಹಿಗಳಿಗೂ ಜೈಕಾರ ಹಾಕುತ್ತಾನೆ. ನಮಗವನ ಬಗ್ಗೆ ನಿರೀಕ್ಶೆಗಳೇನೂ ಇಲ್ಲ ಬಿಡಿ. ಎಷ್ಟಾದರೂ ಏನೂ ಬೆಳೆಯದ ಹಿಮದ ಮರುಭೂಮಿಯನ್ನೂ ಬೇರೆ ದೇಶಕ್ಕೆ ಕೊಟ್ಟರೇನೂ ತೊಂದರೆ ಇಲ್ಲ ಅಂದವರಲ್ಲವೆ ನೀವೂ? ನಿಮ್ಮ ವಾರಸುದಾರರು ನಿಮ್ಮ ಜೀನ್ಗಳಿಗೆ ನ್ಯಾಯ ಸಲ್ಲಿಸುತ್ತಿದ್ದಾರೆ ಬಿಡಿ. ಭಾರತದ ಸಾರ್ವಭೌಮತೆ ವಿಚ್ಛಿದ್ರವಾದರೂ ಚಿಂತೆ ಇಲ್ಲ, ಅವರ ಆಡಳಿತ ನಡೆಸಲು ತುಂಡು ಉಳಿದರೆ ಸಾಕು ಅನ್ನುತ್ತ ಭಾರತವನ್ನು ತುಂಡಾಗಿಸಲು ಹೋರಾಡುವವರ ಜತೆ ಧರಣಿ ಕೂರುತ್ತಿದ್ದಾರೆ. ನೀವು ಮಗಳನ್ನು ಪಟ್ಟಕ್ಕೇರಿಸಿದಾಗ ಇದನ್ನೇ ನಿರೀಕ್ಶಿಸಿದ್ದಿರೇನೋ ಅಲ್ವ?
ಸ್ವಂತತ್ರ ಹೋರಾಟಕ್ಕೆ ಪ್ರಾಣ ತೆತ್ತ ಕೋಟ್ಯಾಂತರ ಭಾರತೀಯರ ತ್ಯಾಗವೆಲ್ಲವನ್ನೂ ನಿರ್ಲಕ್ಶಿಸಿ , ಕೇವಲ ನಿಮ್ಮ ಹೆಸರನ್ನೂ, ನಿಮ್ಮ ಮುಂಬರುವ ಪೀಳಿಗೆಯ ಹೆಸರನ್ನೂ ಜನಮಾನಸದಲ್ಲಿ ಬಿತ್ತಲು , ದೇಶದ ತೆರಿಗೆ ಹಣದಲ್ಲಿ ಕಟ್ಟಲ್ಪಟ್ಟ ಪ್ರತಿ ರಾಷ್ಟೀಯ ಆಸ್ತಿಗೂ ಅದು ನಿಮ್ಮ ಸ್ವಂತ ಆಸ್ತಿಯೇನೋ ಅನ್ನುವಂತೆ ನಾಮಕರಣ ಮಾಡಿದಿರಿ. ದೇಶದ ಬಗ್ಗೆ ,ದೇಶದ ಅಖಂಡತೆಯ ಬಗ್ಗೆ ಅರಿವೇ ಇಲ್ಲದ ನಿಮ್ಮ ಮೊಮ್ಮಗನ ಹೆಂಡತಿಗಂತೂ ಇಲ್ಲಿನ ಪಾಸ್ಪೋರ್ಟ್ ಬೇಡವಾದರೂ ವಿಮಾನ ನಿಲ್ದಾಣಕ್ಕೆ ನಿಮ್ಮ ಕುಟುಂಬದ ಹೆಸರು ಬೇಕೇ ಬೇಕು. ಅಂತ ಕುಟುಂಬ ಶ್ರದ್ದೆ! ನಿಮ್ಮದೇ ಹೆಸರಿನ ವಿಶ್ವವಿದ್ಯಾನಿಲಯದಲ್ಲಿ , ನಿಮ್ಮ ಮರಿಮಗ ನೀವು( ಹೇಗಿದ್ದರೂ ಕೋಟ್ಯಾಂತರ ಇತರರನ್ನು ಯಶಸ್ವಿಯಾಗಿ ಜನರ ಮಧ್ಯದಿಂದ ಮರೆಸಿಬಿಟ್ಟಿದ್ದೀರಲ್ಲ!) ಮಧ್ಯರಾತ್ರಿ ಭಾರತಕ್ಕೆ ತಂದಿದ್ದು ಸ್ವಾತಂತ್ರ್ಯವೇ ಅಲ್ಲ, ಬಿಡುಗಡೆ ಬೇಕು ಅಂತ ವಾದಿಸುತ್ತಿದ್ದಾನೆ, ಇಡಿಯ ದೇಶದ ಪವರ್ ಆಫ್ ಅಟಾರ್ನಿಯನ್ನು ಶಾಶ್ವತವಾಗಿ ಕುಟುಂಬಕ್ಕೆ ಸೇರಿಸುವ ಪ್ಲಾನ್ ಮಾಡಿದ ನಿಮಗೆ , ಮರಿಮಗ ಸ್ವತಂತ್ರ ಭಾರತದ ಕಲ್ಪನೆಯನ್ನೇ ನಿರಾಕರಿಸುವ ಬಗ್ಗೆ ಹೊಳೆದಿರಲಿಕ್ಕಿಲ್ಲ ಅಲ್ವ? ಅಥವ ನಿಮ್ಮ ಪ್ರಕಾರ ರಾಷ್ಟ್ರವನ್ನು , ಸಾರ್ವಬೌಮತೆಯ ಕಲ್ಪನೆಯನ್ನೂ ನಿರಾಕರಿಸುವುದು ಇದೆಲ್ಲ ಮುಂದುವರೆದ , ವೈಜ್ನಾನಿಕ ಮನೋಭಾವದ ಸಂಕೇತವೇ?
ನೆಹರೂಜಿ, ಸಮಾಜವಾದದ ಮುಸುಕಿನಲ್ಲಿ , ಜಾತ್ಯತೀತತೆಯ ಹೆಸರಿನಲ್ಲಿ ಭಾರತವನ್ನೂ ಸದಾ ಜಾತಿಗಳ ಹೆಸರಿನಲ್ಲಿ, ವರ್ಗಗಳ ಹೆಸರಿನಲ್ಲಿ ಒಡೆಯುವ, ತನ್ಮೂಲಕ ಸದಾ ನಿಮ್ಮ ಕುಟುಂಬ ಅರ್ಥಾತ್ ಪಕ್ಶ ಸದಾ ಅಧಿಕಾರದಲ್ಲಿರುವ ನಿಮ್ಮ ಮಾಸ್ಟರ್ ಪ್ಲಾನ್ ಅನ್ನು ಕುಟುಂಬ ಯಶಸ್ವಿಯಾಗಿಯೇ ಆಚರಿಸುತ್ತಿದೆ. ಜಾತಿಗಳ ಲೆಕ್ಕಾಚಾರವೆಲ್ಲ ಮುಗಿದ ಮೇಲೆ ಅವರು ನಿಮ್ಮ ಮೇಲ್ಪಂಕ್ತಿಯನ್ನೇ ಅನುಸರಿಸಿ ಕೋಮುಗಳಲ್ಲಿ ತಾರತಮ್ಯದ, ಪ್ರತ್ಯೇಕತೆಯ ವಿಷಬೀಜಗಳನ್ನು ಯಶಸ್ವಿಯಾಗಿ ಬಿತ್ತಿ ಹುಲುಸಾಗಿ ಪಸಲನ್ನೂ ಪಡೆಯುತ್ತಿದ್ದರು. ಆದರೀಗ ಅದು ಅವರ ನಿಯಂತ್ರಣವನ್ನೂ ಮೀರಿ ದಾವನಲದಂತೆ ಆವರಿಸಿ ದೇಶದ ಕತ್ತು ಹಿಸುಕುತ್ತಿದೆ. ನಿಮ್ಮ ಪ್ರತ್ಯೇಕತೆಯ, ನೆಹರುವಿಯನ್ ಡಿವೈಡ್ ಅಂಡ್ ರೂಲ್ ಆಡಳಿತ ಅದೆಷ್ಟು ಯಶಸ್ವಿಯಾಗಿ ದೇಶದ ಯುವಜನತೆಯನ್ನು ನೇಣಿಗಟ್ಟುತ್ತಿದೆ ನೋಡಿದಿರ? ನಿಮ್ಮ ಯೋಚನೆಯ ಯಶಸ್ಸಿಗೆ ಎಂಥ ಅದ್ಭುತ ಫಲಿತಾಂಶ ಅಲ್ಲವೆ!
ಇದೆಲ್ಲ ಬರೆಯುತ್ತಿರಲಿಲ್ಲ ನೆಹರೂಜಿ, ಆದರೆ ನಿನ್ನೆ ನಿಮ್ಮದೇ ಪಕ್ಷದ ಅಪ್ಪಣೆಯ ಮೇರೆಗೆ ’ತೀಸ್ತಾ ಸೆಟ್ಲವಾದ್ ಅನ್ನುವ ಮಹಿಳೆ ೪ ನೆಯ ತರಗತಿಗೆ ಪಠ್ಯಪುಸ್ತಕ ಬರೆದಿದ್ದಾಳೆ. ಅದರಲ್ಲಿರುವುದು ಸಿಯಾಚಿನ್ನಲ್ಲಿ ಮಡಿದ ಯೋಧರ ಬಗ್ಗೆ ಹೆಮ್ಮೆಯಲ್ಲ ಬದಲಿಗೆ ಎಳೆಯ ಮನಸ್ಸುಗಳಲ್ಲಿ ಭಾರತ ಅನ್ನುವ ದೇಶದ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಆಕ್ರೋಶವನ್ನೂ , ಅಸಮಧಾನವನ್ನೂ ಅಸಹ್ಯವನ್ನೂ ಮೂಡಿಸುವ ಬರಹಗಳು. ನೀವಿದನ್ನು ಬಯಸಿದ್ದೀರ? ತನ್ನದೇ ಮಾತೃಭೂಮಿಯ ಬಗ್ಗೆ ಹೀಯಾಳಿಕೆಯನ್ನೂ, ಇತಿಹಾಸದ ಬಗ್ಗೆ ಕೀಳರಿಮೆಯನ್ನೂ, ತನ್ನೆಲ್ಲ ಪರಂಪರೆಯ ಬಗ್ಗೆ ಅಸಹ್ಯವನ್ನೂ ಎಳೆಯ ಮನಸ್ಸುಗಳಲ್ಲಿ ಮೂಡಿಸುವ , ತನ್ಮೂಲಕ ಚಿಗುರಿನಲ್ಲೇ ದೇಶದ ಬಗ್ಗೆ ಪ್ರೀತಿ ಹೆಮ್ಮೆ ಕಾಳಜಿಯನ್ನೂ ಚಿವುಟಿ ಹಾಕುವ ಇಂತಹ ನತದೃಷ್ಟ ಉದಾಹರಣೆ ವಿಶ್ವದಲ್ಲೇಲ್ಲೂದೊರಕುವುದಿಲ್ಲ. ನಿಮಗೆ ನಿಮ್ಮ ಕುಟುಂಬಕ್ಕೆ ಈ ದೇಶ ಜನ್ಮ ನೀಡಿದ ಒಂದೇ ತಪ್ಪಿಗೆ ಇಂತಹ ಮಾತೃಘಾತುಕತನವನ್ನು ಅದೆಷ್ಟು ಯಶಸ್ವಿಯಾಗಿ ಇಷ್ಟೊಂದು ವರ್ಷ ನಡೆಸಿ ಬಿಟ್ಟಿರಲ್ಲ? ಇದಕ್ಕೇ ನೀವು ವಿದೇಶಗಳಲ್ಲಿ ವ್ಯಾಸಂಗ ನಡೆಸಿದ್ದೆ? ಜೈಲು ವಾಸ ಅನುಭವಿಸಿದ್ದೆ? ನೆಹರೂಜಿ, ನೆನಪಿಟ್ಟುಕೊಳ್ಳಿ ನಿಮ್ಮ ಸ್ವಜನ ಪ್ರೀತಿಯನ್ನೂ, ಸಂಪತ್ತನ್ನು ಕೊಳ್ಳೆ ಹೊಡೆದು ವೈಯುಕ್ತಿಕ ತಿಜೋರಿ ತುಂಬಿಸಿಕೊಳ್ಳುವ ಹವ್ಯಾಸಗಳನ್ನೂ, ಸದಾ ಉತ್ತಮ ಚಿಂತನೆಗಳಿಗೆ ಪಶ್ಚಿಮದತ್ತ ಮುಖ ಮಾಡುವ ಆತ್ಮನ್ಯೂನ್ಯತೆಯ ಹಳವಂಡಗಳನ್ನೂ ನನ್ನ ದೇಶ ಕ್ಷಮಿಸಿ ಬಿಡುತ್ತಿತ್ತು. ಆದರೆ, ಕೋಟ್ಯಾಂತರ ಎಳೆಯ ಮನಸ್ಸುಗಳಿಗೆ ದೇಶದ ವಿರುದ್ದ ಪ್ರಚೋದನೆ ನೀಡುವ, ರಾಷ್ಟ್ರದ ಕಲ್ಪನೆಯೇ ಅಸಹ್ಯ, ಕೀಳರಿಮೆ ಹಾಸ್ಯಾಸ್ಪದ ಅನ್ನಿಸುವಂತೆ ಮಾಡುವ ಈ ನಿಮ್ಮ ದೇಶವಿರೋಧಿ ಶಿಕ್ಷಣವನ್ನು , ಕೇವಲ ಒಂದು ಕುಟುಂಬದ ಅಧಿಕಾರ ದಾಹಕ್ಕೆ ಇಡಿಯ ದೇಶದ ಮಕ್ಕಳಿಗೆ ರಾಷ್ಟ್ರದ್ರೋಹೀ ಚಿಂತನೆಯ ವಿಷವುಣಿಸುವ ನಿಮ್ಮ ಪಕ್ಶದ ಮನಸ್ಥಿತಿಯನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ನೀವೇ ತಿರುಚಿದ ಇತಿಹಾಸ ವರ್ತಮಾನದಲ್ಲಿ ನಿಮಗೆ ಪಾಠ ಕಲಿಸುವ ದಿನಗಳು ದೂರವಿಲ್ಲ. ನೀವದಲ್ಲೇ ಇರಿ, ದಯವಿಟ್ಟು ಮತ್ತೆಂದೂ ಈ ದೇಶದಲ್ಲಿ ಹುಟ್ಟಬೇಡಿ. ಇತಿ, ರೋಮಿಲಾ ಥಾಪರ್ ಓದಿದ ನಂತರವೂ ದೇಶವನ್ನು ಪ್ರೀತಿಸುವ ದೇಶವಾಸಿ .


ಪಲ್ಲವಿ ರಾವ್

ಪಂಪ.


ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ

Wednesday, February 24, 2016

ಕಟ್ಟುವೆವು ನಾವು - ಗೋಪಾಲಕೃಷ್ಣ ಅಡಿಗ ಗಾಯನ : ಚಂದ್ರಶೇಖರ ಕೆದಿಲಾಯ, ಮೋಹನ ರಾಗ , ಜಂಪೆ ತಾಳ

ಕಟ್ಟುವೆವು ನಾವು ಹೊಸ ನಾಡೊಂದನು,
                - ರಸದ ಬೀಡೊಂದನು.
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

      ನಮ್ಮೆದೆಯ ಕನಸುಗಳ ಕಾಮಧೇನು
      ಆದಾವು, ಕರೆದಾವು ವಾಂಛಿತವನು;
      ಕರೆವ ಕೈಗಿಹುದಿದೋ ಕಣಸುಗಳ ಹರಕೆ;
      ಗುರಿ ತಪ್ಪದೊಮ್ಮುಖದ ಬಯಕೆ ಬೆಮ್ಬಳಕೆ!

ಜಾತಿಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆ ಕೊತ್ತಲಗಳು;
ರೂಢಿ ರಾಕ್ಷಸನರಸುಗೈಯುವನು, ತೊಳ್ತಟ್ಟಿ 
ತೊಡೆತಟ್ಟಿ ಕರೆಯುವನು ಸಂಗ್ರಾಮಕೆ!

     ನಾವು ಹಿಂದೆಗೆವೆವೇ? ವೀರ ತರುಣರು ನಾವು!
     ಒಂದೆ ನೆಗೆತಕೆ ನೆಗೆವೆವೋ ಕಂದಕವನು,
     ಕುಟ್ಟಿ ಪುಡಿಮಾಡುವೆವು ಕೋಟೆಗಳನು,
     ಎದೆಯ ಮೆಟ್ಟಿ ಮುರಿಯುವೆವಸುರರಟ್ಟೆಗಳನು!

ಕೋಟೆಗೋಡೆಗೆ ನಮ್ಮ ಹೆನಗಲೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅನ್ಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ! 

      ಎಡರುಗಳ ಕಡಲುಗಳನೀಸಿ ಬರುವೆವು, ಘೋರ
      ನೈರಾಶ್ಯದಗ್ನಿ ಮುಖದಲ್ಲುಕೂಡ 
      ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
      ಬಿಡಿಸಿ, ಇದಿಗೊಳಿಸಿ ಕಟ್ಟುವೆವು ನಾಡ!

ಇಂದು ಬಾಳಿದು ಕೂಲ ಕಾಲೆಗವು; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!

      ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
      ಸಮಬಗೆಯ ಸಮಸುಖದ ಸಮದುಃಖದ
      ಸಾಮರಸ್ಯದ ಸಮಗಾನಲಹರಿಯ ಮೇಲೆ 
      ತೀರಿಬರಲಿದೆ ನೋಡು ನಮ್ಮ ನಾಡು!

ಇಲ್ಲೆ ಈ ಎಡೆಯಲ್ಲೆ , ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ 
ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರಗಂಪು ಹೊರ
ಹೊಮ್ಮುವುದು ಕಾದು ನೋಡು! 

      ಉತ್ಸಾಹ ಉದ್ವೇಗ ಉದ್ರೇಕಗಳ ವೀರ
      ಯುವಜನದ ನಾಡ ಗುಡಿಯು;
      ಅದರ ಹಾರಾಟಕ್ಕೆ ಬಾನೆ ಗಡಿಯೂ,
      ಬರಲು ಬಿಡೆವೆಂದಿಗೂ ಅದಕೆ ತಡೆಯು!
      ತಡೆವವರು ಬನ್ನಿರೋ, ಹೊದೆವವರು ಬನ್ನಿರೋ,
      ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
      ಕೊಟ್ಟೆವಿದೋ ವೀಳೆಯವನು; 
      ನಿಮ್ಮಲ್ಲರನು ತೊಡೆದು ನಿಮ್ಮ ಮಸಣದ ಮೇಲೆ
      ಕಟ್ಟುವೆವು ನಾವು ಹೊಸ ನಾಡೊಂದನು,
             - ಸುಖದ ಬೀಡೊಂದನು!
                           
            ('ಕಟ್ಟುವೆವು ನಾವು' ಕವನ ಸಂಕಲನದಿಂದ)



Sunday, February 14, 2016

ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪ್ರೇಮ ಪತ್ರ - ವಿವೇಕ ಬೆಟ್ಕುಳಿ

ಪ್ರೀತಿಯ ಗೆಳತಿ,,,,,,,,,

    ನನಗೆ ಗೊತ್ತು ಕಣೆ ನಿನಗೆ ಈ ದಿನ ನಾನು ಕೆಂಪು ಗುಲಾಬಿ ಕೊಟ್ಟರೆ ತುಂಬಾ ಸಂತೋಷವಾಗುವುದು ಎಂದು. ಆದರೇ ಏನು ಮಾಡಲಿ, ನನ್ನ ಕುಟುಂಬದ ಬಗ್ಗೆ ಗೊತ್ತಲ್ಲ ನಿಜವಾಗಿ ನನ್ನ ಅಪ್ಪ ತುಂಬಾ ಲಿಬರಲ್ ಜಾತ್ಯಾತೀತ, ಆದರೇ ಅನಿವಾರ್ಯವಾಗಿ ಕಟ್ಟಾ  ಹಿಂದುತ್ವವನ್ನು ಪ್ರದಶಿ౯ಸುತ್ತಿರುವರು. ಅದರಿಂದಾಗಿಯೇ   ಇಂದು ನಮ್ಮ ಅಪ್ಪ ರಾಜಕೀಯದಲ್ಲಿ ಜಿಲ್ಲೆಯಲ್ಲಿ ಹೆಸರು ಪಡೆದಿರುವರು. ನನಗೂ ಹಿಂದುತ್ವದ ಹೆಸರಿನಲ್ಲಿ ಭಾವನೆಗಳನ್ನು ಅದುಮಿಕೊಳ್ಳಲು ಇಷ್ಟವಿಲ್ಲ ಗೆಳತಿ, ಆದರೂ ಅಪ್ಪನ ಪ್ರೆಸ್ಟಿಜ್, ರಾಜಕೀಯ ಭವಿಷ್ಯ ಎಲ್ಲವೂ ಇದರ ಜೊತೆ ಸೇರಿಕೊಂಡಿದೆ. ಅಕಸ್ಮಾತ ಆಗಿ ನಾನು ಪ್ರೇಮಿಗಳ ದಿನಾಚರಣೆಯಲ್ಲಿ ಭಾಗವಹಿಸಿ ನಿನೊಂದಿಗೆ ಕಾಲಕಳೆದರೆ ಖಂಡಿತಾ ನಮ್ಮ ಅಪ್ಪನಿಗೆ ಮುಂದಿನ ಬಾರಿ ಚುನಾವಣೆಗೆ ಟಿಕೇಟ್ ಸಿಗದು, ಉಳಿದ ಪಕ್ಷದವರಿಗೆ ನಾನೇ ಒಂದು ವಿಷಯವಾಗಿ ಬಿಡುವೆನು. ದಯವಿಟ್ಟು ಕ್ಷಮಿಸು ಗೆಳತಿ. ಜನವರಿ 1 ಹೊಸ ವರ್ಷಕ್ಕೂ ನಾನು ಬರಲಿಲ್ಲ. ಹೊಸವರ್ಷ ಆಚರಣೆಯಂದು ನಾನು ಮನೆಯಲ್ಲಿಯೇ ಇದ್ದೇ ಬರುವ ಮನಸ್ಸಿದರೂ  ಆ ದಿನವೂ ಇದೇ ಸ್ಥಿತಿ. ಏನು ಮಾಡಲಿ ಒಂದಡೇ ಸಮಾಜ, ಮನೆ, ಅಪ್ಪ, ಅಮ್ಮ ಇನ್ನೊಂದಡೆ ನೀನು ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ? ನಾನು ತುಂಬಾ ದ್ವಂದದಲ್ಲಿ ಇರುವೆನು. ಆದರೇ ಒಂದಂತು ಸತ್ಯ ಗೆಳತಿ ಬರುವ ಯುಗಾದಿಯಂದು ನಾನು ನಿನ ಜೊತೆ ಖಂಡಿತಾ ಕಾಲ ಕಳೆಯುವೆನು. ಆ ದಿನ ನಮ್ಮ ಹಿಂದುಗಳಿಗೆ ನವ ವಷಾ౯ಚರಣೆಯ ಸಂದರ್ಭ ಮನೆಯಲ್ಲಿ ಸಹಾ ಯಾವುದೇ ಅನುಮಾನ ಬರದು. ಆ ದಿನಕ್ಕಾಗಿ ಕಾಯುತ್ತಿರುವೆ.. . ಇಂದು ಪ್ರೇಮಿಗಳ ದಿನಾರಣೆ ನಾನು ಖುದ್ದಾಗಿ ನಿನ್ನ ಜೊತೆ ಇದ್ದು ಕಾಲಕಳೆಯಲು ಆಗುತ್ತಿಲ್ಲ. ಈ ದಿನ ನಮ್ಮ ಅಪ್ಪನ ಜೊತೆ ದಿನಾಚರಣೆಯನ್ನು ವಿರೋಧಿಸಿ ಧರಣಿ ಮಾಡಬೇಕಾಗಿದೆ. ಅರ್ಥ ಮಾಡಿಕೊಳ್ಳುವೆ ಎಂಬ ನಂಬಿಕೆ ನನಗಿದೆ. ಏನೇ ಇರಲಿ ಚಿನ್ನಾ ಪ್ರೇಮಿಗಳ ದಿನಾಚರಣೆಯ ಈ ಸಂದರ್ಭದಲ್ಲಿ ನಿನ್ನ ಪ್ರೇಮಿಯ ಕಡೆಯಿಂದ ಮನಸ್ಸಿನಾಳದ ಶುಭಾಶಯಗಳು.........
ಇಂತಿ ನಿನ್ನ ಕನಸಿನ ಗೆಳೆಯ
ಕಟ್ಟಾ ಹಿಂದುತ್ವವಾದಿ ಯುವಕ

ನಲ್ಮೇಯ ಗೆಳೆಯಾ,,,,,,,,,,,,,,,
       ಕಳೆದ ಮೂರು ವರ್ಷದಿಂದ ನಾನು ನೋಡುತ್ತಿರುವೆನು. ನಿನಗೆ ನಿನ್ನ ಅಪ್ಪನನ್ನು ಎದುರಿಸುವ ಧೈರ್ಯ ಬರುವುದು. ಒಂದಾದರೂ ದಿನ ನಾವು ಜಾಲಿಯಾಗಿ ಪ್ರೇಮಿಗಳಾಗಿ ಓಡಾಡಬಹುದು ಎಂದು, ಆದರೇ ನಿನ್ನ ಪುಕ್ಕಲುತನ ನೋಡಿದರೆ ಅದು ಸಾಧ್ಯವಿಲ್ಲ ಅನಿಸುತಿದೆ. ನಿನಗೆ ನನಗಿಂತ, ನಿನ್ನ ಅಪ್ಪನ ಡೋಂಗಿ ರಾಜಕೀಯದ ಬಗ್ಗೆಯೇ ಹೆಚ್ಚು ಕಾಳಜಿ. ಯಾಕಾಗಿ ಅಪ್ಪ ಮಗ ಮನಸ್ಸಿನಲ್ಲಿ ಒಂದು ಇರಿಸಿಕೊಂಡು ಹೊರ ಜಗತ್ತಿಗೆ ಬೇರೆ ರೀತಿಯಾಗಿ ಕಾಣಿಸಿಕೊಳ್ಳುವಿರಿ. ಸದಾ ಕಾಲ ನೀನು ನನ್ನೊಂದಿಗೆ ಕಾಲ ಕಳೆಯಲು ಒಂದಲ್ಲ ಒಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿರುವೆ.
ನಾನು ರಾಜಕೀಯ ಕುಟುಂಬದಿಂದ ಬಂದವಳು ಗೆಳೆಯಾ ನನಗೆ ನಿನ್ನ ಸ್ಥಿತಿ ಅರ್ಥವಾಗುವುದು. ನಮ್ಮ ಅಪ್ಪ ಸಹಾ ಶುದ್ದ ಸಂಪ್ರದಾಯವಾದಿ, ಆದರೇ ರಾಜಕೀಯವಾಗಿ ಜಾತ್ಯಾತೀತ ಆದ ಕಾರಣಕ್ಕೆ ನಾನು ಹೊಸವರ್ಷ, ಪ್ರೇಮಿಗಳ ದಿನಾಚರಣೆಯಂದು ಎಲ್ಲಿ ಬೇಕಾದರೂ ಹೋಗಬಹುದು, ಅದಕ್ಕಾಗಿ ಯಾವುದೇ ಅಡೆತಡೆ ಇಲ್ಲ. ಆದರೇ ನೀನು ಹೇಳಿದಂತೆ ಯುಗಾದಿ ಹಬ್ಬದ ದಿನ ನನಗೆ ಮನೆ ಬಿಟ್ಟು ಬರಲು ಕಷ್ಟ ಆ ದಿನ ಪೂಜೆ ಪನಸ್ಕಾರ ಎಂದು ತುಂಬಾ ಕೆಲಸ ಇರುವುದು. ನಮ್ಮ ಅಪ್ಪ ತೋರಿಸಿಕೊಳ್ಳಲು ಮಾತ್ರ ಜಾತ್ಯಾತೀತ, ಆದರೇ ಮನೆಯಲ್ಲಿ ತುಂಬಾ ಸಂಪ್ರದಾಯ ಕಣೋ. ನಮ್ಮ ಅಪ್ಪ ಸಹಾ ಒಂದು ರೀತಿಯ ಡೋಂಗಿ ರಾಜಕಾರಣೀಯೆ ಆಗಿರುವರು.
ಗೆಳೆಯಾ ನನ್ನ ನಿನ್ನ ಕುಟುಂಬದವರು ಈ ರೀತಿಯ ಡೋಂಗಿ ರಾಜಕೀಯದ ನಡುವೆ ನಮ್ಮ ಪ್ರೀತಿ ಕಣ್ಮರೆಯಾಗುವುದು ಬೇಕಾಗಿಲ್ಲ. ಇಂದೇ ನಿರ್ಧರಿಸು, ಒಂದು ಮನೆಯವರನ್ನು ಎದುರು ಹಾಕಿಕೊಂಡು ಮದುವೆ ಆಗಿ ಬದುಕಿ ತೋರಿಸುವುದು. ಇಲ್ಲಾ ಒಂದು ಮನೆಯರನ್ನು ಒಪ್ಪಿಸಿ ಮದುವೆಯಾಗಿ ಆ ನಂತರ ಕಮ್ಯೂನಿಷ್ಟರಾಗಿ ನಾವು ನಮ್ಮ ಕುಟುಂಬವನ್ನು ಬೆಳೆಸುವುದು. ನಿನ್ನ ಉತ್ತರವನ್ನು ಇದೇ 14 ರ೦ದು ತಿಳಿಸು. ನೀನ್ನ ಉತ್ತರದ ನಂತರ ನಾನು ನನ್ನ ಭವಿಷ್ಯದ ಬಗ್ಗೆ 23 ರ೦ದು ತೀಮಾ౯ನ ತೆಗೆದುಕೊಳ್ಳುವೆನು.

ಇಂತಿ ನಿನ್ನ ಮನದಾಳದ ಗೆಳತಿ
ಅಪ್ಪಟ ಜಾತ್ಯಾತೀತ ಯುವತಿ

ಆತ್ಮೀಯ  ಪ್ರೇಮಿಗಳೇ ಚುನಾವಣಾ ಸಮಯವಾದ್ದರಿಂದ ಈ ರೀತಿಯ ಪತ್ರ ಬರೆಯಬೇಕು ಎನಿಸಿತು. ದಯವಿಟ್ಟು ನಿಮ್ಮ ಜಾತಿ, ಧರ್ಮ, ಪ್ರಸ್ಟೆಜ್, ಸಮಾಜ ಈ ಎಲ್ಲದಕ್ಕೂ ಹೆದರಿ ನಿಮ್ಮತನವನ್ನು  ಬಿಟ್ಟು ಹೆಡಿಯಾಗಿ ಬದುಕದಿರಿ. ಡೋಂಗಿ ಜ್ಯಾತ್ಯಾತೀತತೆ, ಹಿಂದುತ್ವ ಧಾಮಿ౯ಕ ಅಂದತ್ವ ಈ ಎಲ್ಲವನ್ನು ಮೀರಿ ನಿಮ್ಮ ಪ್ರೇಮ ಅಮರವಾಗಲಿ. ಎಲ್ಲರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.

ವಿವೇಕ ಬೆಟ್ಕುಳಿ.

Saturday, February 13, 2016

ಕನ್ನಡ ಕನ್ನಡಿಗ ಕರ್ನಾಟಕ: ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾ...

ಕನ್ನಡ ಕನ್ನಡಿಗ ಕರ್ನಾಟಕ: ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾ...: ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್..! ಸ್ನೇಹಿತರ ಸೋಗಿನಲ್ಲಿ ಬರುತ್ತವೆ ಲಿಂಕ್'ಗಳು ವಿಶ್ವದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ವಾಟ್ಸಾಪ್ ಈಗ ವಂಚಕರ ಟಾರ್ಗ...

ಕನ್ನಡ ಚಿತ್ರ ಬರಹ,


ವಿರೋಧಿಗಳಿಂದಲ್ಲೇ ಜನಪ್ರೀಯವಾಗುತ್ತಿರುವ ಪ್ರೇಮಿಗಳ ದಿನಾಚರಣೆ - ವಿವೇಕ ಬೆಟ್ಕುಳಿ

ಪ್ರೇಮಿಗಳ ದಿನಾಚರಣೆ 10 ವರ್ಷದ ಹಿಂದೆ ಈ ಬಗ್ಗೆ ಯಾರಿಗೂ ಗೊತ್ತೇ ಇರಲಿಲ್ಲ. ಈ ದಿನಾಚರಣೆಗೆ ಈ ರೀತಿ ಪ್ರಚಾರ ಸಿಗಲು ಮುಖ್ಯಕಾರಣ ನಮ್ಮ ಸಂಸ್ಕೃತಿ ಉಳಿಸಲು ಬೀದಿಗಿಳಿಯುತ್ತಾ ಹೋರಾಟ ಮಾಡುತ್ತಿರುವ ಹಿಂದುತ್ವವಾದಿಗಳು. ನಮ್ಮ ಸಮಾಜದಲ್ಲಿ ಯಾವುದಕ್ಕೆವಿರೋಧ ಇದೆಯೋ ಅದೇ ಹೆಚ್ಚಾಗಿ ಜನಪ್ರೀಯವಾಗುವುದು.

ಮಾಜಿ ಸಚಿವ ಹೆಚ್ ವಿಶ್ವನಾಥ ಅವರ ಆತ್ಮಕಥೆ ಹಳ್ಳಿಹಕ್ಕಿಯ ಹಾಡು ಕೆಲ ಕಾಂಗ್ರೆಸಿಗರ ವಿರೋಧದಿಂದ ಜನಪ್ರಿಯವಾಯಿತು. ಎಸ್ಎಲ್ ಭೈರಪ್ಪ ನವರ ಕೃತಿಗಳು ಪ್ರಗತಿಶೀಲರ ವಿರೋಧದಿಂದ. ಯು ಆರ್ ಆನಂತಮೂತರ್ಿಯವರ ಕೃತಿಗಳು ಹಿಂದುತ್ವವಾದಿಗಳ ವಿರೋಧದಿಂದಾಗಿ ಎಲ್ಲರೂ ಕೊಂಡು ಓದುವಂತಾಗಿ ಅವರವರ ಅಭಿಮಾನ ಬಳಗ ಸೃಷ್ಠಿಯಾಯಿತು. ಪುಸ್ತಕಗಳು, ಸಿನಿಮಾ, ಈ ರೀತಿಯಾದ ನೂರಾರು ಉದಾಹರಣೆಗಳು ವಿರೋಧದಿಂದಾಗಿಯೆ ಪ್ರಚಾರಕ್ಕೆ ಬಂದಿರುವದನ್ನು ಕಾಣಬಹುದಾಗಿದೆ. ತೀರಾ ಇತ್ತಿಚೀನ ಬೆಳವಣಿಗೆ ಎಂದರೆ ಟಿಪ್ಪು 
ಜಯಂತಿಯ ಪರ ವಿರೋಧದಿಂದ ಬೇರೆ ರಾಜ್ಯದಲ್ಲಿಯೂ ಆಚರಣೆ ಪ್ರಾರಂಭವಾಗಿರುವುದು.ಇದೇ ರೀತಿಯಾಗಿ ಪ್ರೇಮಿಗಳ ದಿನಾಚರಣೆಯನ್ನು ಪ್ರತಿ ವರ್ಷ ಹಿಂದೂ ಸಂಸ್ಕೃತಿಗೆ ಮಾರಕ ಎಂಬ ಕಾರಣಕ್ಕಾಗಿ ಒಂದು ಗುಂಪು ವಿರೋಧಿಸುತ್ತಾ ಬಂದಿರುವುದು. ಈ ವಿರೋಧ ಹೆಚ್ಚಾಗುತ್ತಾ ನಿಜವಾಗಿ ಪ್ರೇಮಿಗಳ ದಿನಾಚರಣೆಗೆ ಹೆಚ್ಚು ಹೆಚ್ಚು ಮಹತ್ವ ಸಿಗುತ್ತಿರುವುದು. ಇದು
ಒಂದು ರೀತಿ ಪುಕ್ಕಟೆ ಪ್ರಚಾರ.
ಈ ದಿನಾಚರಣೆಯನ್ನು ಹೇಗೆ ಆಚರಿಸಬೇಕು? ಪ್ರೇಮಿಗಳು ಪರಸ್ಪರ ಯಾವ ಯಾವ ರೀತಿಯ ಉಡುಗೊರೆಗಳನ್ನು ಹಂಚಿಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲಾ ಬಗೆಯ ಮಾದ್ಯಮಗಳಲ್ಲಿ ಹೆಚ್ಚಾಗಿ ಚಚೆ౯ ಆಗುತ್ತಿರುವುದು. ಇದರಿಂದ ಇಂದು ಹಳ್ಳಿ ಹಳ್ಳಿಗಳಲ್ಲಿ ಪ್ರೇಮಿಗಳ ದಿನಾಚರಣೆ ಜನಪ್ರಿಯವಾಗುತ್ತಿರುವುದು. ಅದರಲ್ಲಿಯೂ ಸೋಶಿಯಲ್ ಮಾಧ್ಯಮದಲ್ಲಿಯಂತು ಈ ದಿನಾಚರಣೆಯ ಪ್ರಚಾರ ತುಂಬಾ ಹೆಚ್ಚಾಗಿಯೇ ಆಗುತ್ತಿರುವುದು.

  ಪ್ರೇಮಿಗಳ ದಿನಾಚರಣೆಯನ್ನು ಮಾಡಲು ಬಿಡುವುದಿಲ್ಲ ಎಂದು ಕೆಲ ಗುಂಪು ಈಗಾಗಲೇ ಮಾಧ್ಯಮದ ಮೂಲಕ ವಿರೋಧ
ವ್ಯಕ್ತಪಡಿಸಿದರೆ, ಇನ್ನೂ ಕೆಲವು ಗುಂಪುಗಳು ಆಚರಣೆಯನ್ನು ಅರ್ಥಪೂರ್ಣಗೊಳಿಸಲು ತಮ್ಮದೇ ಆದ ತಯಾರಿ ಮಾಡಿಕೊಳ್ಳುತ್ತಿದೆ. ಒಟ್ಟಾರೆ ಈ ದಿನಾಚರಣೆ ದಿನದಿಂದ ದಿನಕ್ಕೆ ಹೆಚ್ಚು ಜನರನ್ನು ಆಕಷರ್ಿಸುತ್ತಿದೆ.

ವಿವಿಧತೆಯಲ್ಲಿ ಏಕತೆ ಇರುವ ಜಾಗತೀಕರಣ ಗೊಂಡಿರುವ ಈ ದೇಶದಲ್ಲಿ ಯಾವುದೇ ವಿಚಾರವಾಗಿ ಒಂದೇ ಅಭಿಪ್ರಾಯ ಬರಲು ಸಾಧ್ಯವಿಲ್ಲ. ಹೀಗಿರುವಾಗ ದಿನಾಚರಣೆಗಳ ಆಚರಣೆ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಮುಂದೆಯೂ ಇರುವುದರಲ್ಲಿ ಯಾವುದೇಸಂದೇಹವಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ವೈಭವಿಕರಿಸುವಂತಹ ಸ್ಥಿತಿಯಲ್ಲಿ ನಮ್ಮ ದೇಶ ಇರುವುದು. ಇಂತಹ ಸಂದರ್ಭದಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಧರಿಸುವುದನ್ನು  ನಾವಿಂದು ಬಿಡಬೇಕಾಗಿದೆ.  ಆರೋಗ್ಯಯುತವಾದ ಚಚರ್ೆಯನ್ನು ಮಾತ್ರ ನಾವು ಹುಟ್ಟುಹಾಕವ ಅಗತ್ಯವಿದೆ. ಒಂದಂತು ಸತ್ಯ ಎಲ್ಲಿ ವಿರೋಧ ಇದೆಯೋ ಅಲ್ಲಿ ಪ್ರತಿರೋಧ ಎಂದಿಗೂ ಇದ್ದೇ ಇರುವುದು.

ಪ್ರೇಮಿಗಳದಿನಾಚರಣೆಯ ಪರ ವಿರೋಧ ಏನಿದ್ದರೂ ಅದು ಚಚೆ౯ಗೆ ಮಾತ್ರ ಇರಲಿ, ಬದಲಾಗಿ ಅದು ಹಿಂಸೆಗೆ ತಿರುಗಿದರೆ ಅದರಿಂದ ಯಾರಿಗೂ ಸುಖವಿಲ್ಲ. ಈ ಸಂದರ್ಭದಲ್ಲಿ ಈ ದಿನದ ಆಚರಣೆ ಹೇಗೆ ಇರಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟಿದಾಗಿರುವುದು. ಆದರೇ ಈ ರೀತಿ ಪ್ರಚಾರಕ್ಕೆ ಕಾರಣರಾದ ವಿರೋಧಿ-ಪರ ಇಬ್ಬರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.

                                                                                                                                 ವಿವೇಕ ಬೆಟ್ಕುಳಿ                                                                                                                                        vivekpy@gmail.com

Monday, February 8, 2016

ಇನ್‌ಬಾಕ್ಸ್ ಗೆಳೆಯನಿಗೆ ಬಹಿರಂಗ ಪತ್ರ - ಫಾತಿಮಾ

ಇನ್‌ಬಾಕ್ಸ್ ಗೆಳೆಯನಿಗೆ ಬಹಿರಂಗ ಪತ್ರ ::
ಇನ್‌ಬಾಕ್ಸ್ ಗೆಳೆಯ
ನೀನು ಕೇಳಿದೆ...
ನೀನು ಸುನ್ನಿನಾ? ಶಿಯಾನಾ?
ನೀನು ಸಲಾಫಿಯಾ? ಹನಾಫಿಯಾ..?
ನಾವು ಯಾರಾದರೇನು ?
ನಾವೆಲ್ಲಾ ಒಂದೇ ಕಾರವಾನ್‌ನ
ಸಹಚರರು
ಸತ್ಯ ಮಾರ್ಗದ ಅನ್ವೇಷಿಗರು
ಅಂದು ಕೊಂಡಿದ್ದೆ
ನಾವೆಲ್ಲಾ ಇಷ್ಟು ಬೇರೆ ಬೇರೆ ಅಂತ
ಅರಿವಿರಲಿಲ್ಲ.
ಕಣ್ಣು ತೆರೆಸಿದೆ ಧನ್ಯವಾದ
...........
ಬುರ್ಖಾ ಹಾಕೋಲ್ವಾ?
ಅಬಯಾ ತೊಡೊಲ್ವಾ ?
ವೇಲು ಸುತ್ತಿಕೊಳ್ಳೋಲ್ವಾ?
ಅಂತ ಹೆದರಿಸಿದೆ ನೀನು ನನ್ನ
ನಿನ್ನ ಕಣ್ಣ ಬೆಂಕಿಗೆ
ಸುಟ್ಟು ಹೋಗುವ ಕಾಗೆ ನಾನಲ್ಲ
ಮೊದಲು ನಿನ್ನ ಮನಕೆ ಬೇಕು
ಸಭ್ಯತೆಯ ತಂಪು ಕನ್ನಡಕ
ಅರಿವಾಗಲಿ ನಿನಗೆ ಬೇಗ.
...........
ನೀ ಕೇಳಿದೆ
’ನಿನ್ನ ವಾಲ್ ಮೇಲೆ
ಪವಿತ್ರ ಸ್ಥಳದ ಚಿತ್ರ ಏಕಿಲ್ಲ ? ’
ಚಿತ್ರ ಹಾಕಿದರೆ ಮಾತ್ರ
ಪ್ರೊಫ಼ೈಲ್ ಪವಿತ್ರವಾಗುವುದೆಂದು
ನನಗೆ ಗೊತ್ತಿರಲಿಲ್ಲ.
ಗೊತ್ತಿದ್ದರೆ ಪವಿತ್ರ ಸ್ಥಳದ ಚಿತ್ರ
ನಿನ್ನ ಎದೆಗೂ ಅಂಟಿಸುತ್ತಿದ್ದೆ
ಖಂಡಿತಾ ಬಿಡುತ್ತಿರುಲಿಲ್ಲ.
.............
ಅದಿರಲಿ
ನೀನೇಕೆ ತ್ವಾಬ್ ತೊಟ್ಟಿಲ್ಲ?
ನಿನ್ನ ವಾಲ್ ಮೇಲೇಕೆ
ಪಾರಿವಾಳ ಬಿಳಿಗುಲಾಬಿ ಚಿತ್ರಗಳಿಲ್ಲ?
ಗುಂಡಿ ತೆರೆದ ಅಂಗಿ - ಬರ್ಬುಡಾ ಚಡ್ದಿ
ಚಿತ್ರಗಳು ಸರಿಯಲ್ಲ.
ರೇಸ್ ಬೈಕಿನ ಚಿತ್ರವೇಕೆ?
ನಿನಗೆ ಮಾಡಲು ಬೇರೆ ಕೆಲಸವಿಲ್ಲ ?
ನಿನ್ನ ಮದುವೆ ಆಗುವ ಹುಡುಗಿಗೆ ಯಾಕೆ ಮುಖವಿಲ್ಲ ?
ಅವಳ ಪ್ರೊಫ಼ೈಲ್ನಲ್ಲಿ ಯಾಕೆ ನಗುತ್ತಿದ್ದಾರೆ
ಬುರ್ಖಾ ಧರಿಸದ
ಜೆನೆಲಿಯಾ ಡಿಸೋಜಾ
ಭೂಮಿಕಾ ಚಾವ್ಲಾ..
 ಫಾತಿಮಾ ಬೆಳವಾಡಿ 

ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾರ

ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್..! ಸ್ನೇಹಿತರ ಸೋಗಿನಲ್ಲಿ ಬರುತ್ತವೆ ಲಿಂಕ್'ಗಳು
ವಿಶ್ವದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ವಾಟ್ಸಾಪ್ ಈಗ ವಂಚಕರ ಟಾರ್ಗೆಟ್ ಆಗಿದೆ. ವಾಟ್ಸಾಪ್ ಅಪ್ಡೇಟ್ ಎಂಬ ನಕಲಿ ಸಂದೇಶ ಕಳುಹಿಸಿ ಜನರ ಮೊಬೈಲ್'ಗಳಲ್ಲಿರುವ ಮಾಹಿತಿಯನ್ನು ವಂಚಕರು ಕದಿಯುತ್ತಿದ್ದಾರೆಂದು ಕಳೆದ ತಿಂಗಳು ಭದ್ರತಾ ತಜ್ಞರು ಎಚ್ಚರಿಸಿದ್ದರು. ಈಗ ಮತ್ತೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ವಾಟ್ಸಾಪ್ ಬಳಕೆದಾರರನ್ನು ಮೋಸ ಮಾಡುವ ಹೊಸ ಸ್ಕ್ಯಾಮ್ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.
ಏನಿದು ಹೊಸ ಸ್ಕ್ಯಾಮ್..?
ನಿಮ್ಮ ವಾಟ್ಸಾಪ್'ನಲ್ಲಿ ನಿಮ್ಮ ಸ್ನೇಹಿತರ ಹೆಸರಿನಲ್ಲಿ ಲಿಂಕ್'ಗಳು ಕಾಣಿಸುತ್ತವೆ. ಗೆಳೆಯರು ಕಳುಹಿಸಿದ್ದಿರಬಹುದೆಂದು ನೀವೇನಾದರೂ ಆ ಲಿಂಕ್ ಕ್ಲಿಕ್ ಮಾಡಿದರೆ ವಂಚಕ ವೆಬ್'ಸೈಟ್'ವೊಂದಕ್ಕೆ ಹೋಗುತ್ತದೆ. ಅದರಲ್ಲಿ ಅನೇಕ ರೀತಿಯ ಆಫರ್, ಡಿಸ್ಕೌಂಟ್'ಗಳನ್ನು ನಿಮಗೆ ತೋರಿಸಿ ನಂಬಿಸಲಾಗುತ್ತದೆ.
ನಂತರ, ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ. ಅದಾದ ನಂತರ ನಿಮ್ಮ ಫೋನ್'ಗೆ ಮಾಲ್ವೇರ್ ಅಂಟಿಕೊಳ್ಳುತ್ತದೆ. ಈ ಮಾಲ್ವೇರ್ ಮೂಲಕ ಫೋನ್'ನಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನೆಲ್ಲಾ ವಂಚಕರು ಸುಲಭವಾಗಿ ಸಂಗ್ರಹಿಸುತ್ತಾರೆ.
ಈ ವಾಟ್ಸಾಪ್ ವಂಚಕರು ಕೆಲ ಕಾಲದಿಂದ ಬಹಳ ಸಕ್ರಿಯರಾಗಿದ್ದಾರಂತೆ. ಆತಂಕದ ವಿಷಯವೆಂದರೆ, ಈ ವಂಚಕರು ಇಂಗ್ಲೀಷ್ ಒಂದಷ್ಟೇ ಅಲ್ಲ ಅನೇಕ ಭಾರತೀಯ ಭಾಷೆಗಳಲ್ಲಿ ಮೋಸದ ಸಂದೇಶಗಳನ್ನು ಕಳುಹಿಸಬಲ್ಲರು. ಅಲ್ಲದೇ, ನೀವು ಮೋಸಗೊಂಡಿದ್ದಲ್ಲದೇ ನಿಮ್ಮೊಂದಿಗೆ ಇನ್ನೂ 10 ಜನರಿಗೆ ನಿಮ್ಮಿಂದಲೇ ಹಳ್ಳ ತೋಡಿಸುತ್ತಾರೆ. ನಿಮಗೆ ಕಳುಹಿಸಿದ ಸಂದೇಶವನ್ನು ನಿಮ್ಮ ಹತ್ತು ಸ್ನೇಹಿತರಿಗೆ ಫಾರ್ವರ್ಡ್ ಮಾಡಿದರೆ ಆ ಹೋಟೆಲ್'ನಲ್ಲಿ ಇಷ್ಟು ಡಿಸ್ಕೌಂಟ್ ಸಿಗುತ್ತದೆ, ಗಿಫ್ಟ್ ಕಾರ್ಡ್ ಸಿಗುತ್ತದೆ ಎಂದೆಲ್ಲಾ ಪ್ರಲೋಭನೆಗೊಳಪಡಿಸುತ್ತಾರೆ ಎಂದು ಆಯಂಟಿ-ವೈರಸ್ ಸಾಫ್ಟ್'ವೇರ್ ಕಂಪನಿ ಕಾಸ್ಪೆರ್'ಸ್ಕಿ ಲ್ಯಾಬ್'ನ ಪ್ರಧಾನ ಭದ್ರತಾ ಸಂಶೋಧಕ ಡೇವಿಡ್ ಎಮ್ ತಿಳಿಸುತ್ತಾರೆ.

http://www.suvarnanews.tv/Technology/gadgets/beware-of-new-whatsapp-scam-19294?cf=article-bottom

Saturday, February 6, 2016

ಹಾಸ್ಯ - ಕೃಪೆ - ವಾಟ್ಸ್ ಆಪ್

ಹೊಸದಾಗಿ ಮದುವೆ ಆಗಿ ಬಂದ ಸೊಸೆ ಏನೂ ಕೆಲಸ ಮಾಡಲ್ಲ ಅಂತ ಮಗನಿಗೆ

ಹೇಳಿ ಪೇಚಾಡಿಕೊಂಡರು ಅಮ್ಮ.

ಆಮೇಲೇ ಅಮ್ಮಾ ಮಗ ಸೇರಿ ಒಂದು plan ಮಾಡಿದರು

ಅಮ್ಮ ಹೇಳಿದ್ರು" ನಾಳೆ ಬೆಳಿಗ್ಗೆ ಕಸ ಗುಡಿಸತಾ ಇರ್ತೀನಿ ಆಗ ನೀನು ಬಿಡಮ್ಮ ನಾ
ಗುಡಸ್ತೀನಿ ಅನ್ನು ಆಗಲಾದ್ರೂ ನಾ ಮಾಡ್ತೀನಿ ಅಂತಾಳಾ ನೋಡೋಣ"

ಅದೇ ಪ್ರಕಾರ ಅಮ್ಮ ಕಸ ಗುಡಸ್ತಾ ಇದ್ದಾಗ ಮಗ "ಬಿಡಮ್ಮ ನಾ ಗುಡಸ್ತೀನಿ"
ಅಂದ

"ಇಲ್ಲ ನಾ ಗುಡಸ್ತೀನಿ"


ಅಮ್ಮ ಮಗ ಕಿತ್ತಾಡೊಕೆ ಶುರು ಮಾಡಿದ್ರು.

ಸೊಸೆ ಬಂದು ಶಾಂತ ರೀತಿಯಿಂದ ಹೇಳಿದಳು"ಅದಕ್ಕೆ ಯಾಕ ಕಿತ್ತಾಡತೀರಿEven

 date ಗೆ ಅಮ್ಮ ಗುಡಸಲಿ,Odd date ಗೆ ಮಗ ಗುಡಸಲಿ" ಅಂತ.

ಸೊಸೆ Rockingಅಮ್ಮ ಮಗ Shocking

ಕೃಪೆ - ವಾಟ್ಸ್ ಆಪ್

ಚುಟುಕುಗಳು - ರಘು ವಿ.

  - 1-
ದಿನಚರಿಯ ಹೊಸಪುಟವ
ರಘು ವಿ.
ಸಂಪಾದಕ, ವಿವೇಕ ಹಂಸ.
ದಿನದ ಮೊದಲ ಕಿರಣದಿಂ
ತೆರೆವ ವಿಧಿಯ ಹಸ್ತವು ನೀನು
ಅಂಜದಳುಕದೆ ಬೆಳಕಿದೆಗೊಟ್ಟು
ನೆಳಲ ಹಿಂದಿಟ್ಟು ಒಲವಿನಿಂ
ಮುನ್ನಡೆವ ಧೀಮಂತಿಕೆಯ
ನೀಡಿ ಹರಸೊ ರವಿಯೇ!

 -2-
 ಜಗದ ದೊಡ್ಡಣ್ಣನುದಯಿಸಿಹ
ಕೃಪೆಯಿಂದ ಇಳೆಯ ಸಲಹಲೆಂದು
ಬೆಳಕ ಬಿತ್ತನೆಗೆ ತೆರೆಯಿರೆದೆಯನು
ನಿತ್ಯ ಜನುಮವು ಅಂತರಂಗದೊಳು
ದೊಡ್ಡಣ್ಣನೀವ ಮೌಲ್ಯಗಳ ಬಿತ್ತಿಹೆವು
ಸಾಧಿಸುವ ಮನ ನೀಡು ಬಾನ ರವಿಯೇ!
-3-
ಒಂಟಿ ಪಯಣಿಗ ನೀನು
ಅದೇನ ಧ್ಯಾನಿಸುವೆಯೊ
ಅದೇನ ಅರಿತಿಹೆಯೊ
ಅನಾದಿಯಿಂದಲೂ ಸತ್ಯ
ಪಾತ್ರೆಯ ಸುವರ್ಣ ಮುಚ್ಚಳ
ನೀನು, ಗುಟ್ಟನೆನಗೆ ಜಗಕೆ
ಉಣಬಡಿಸೊ ರವಿಯೇ! "
-ಕವಿ
( ನಾಳೆ ರವಿಯ ಉತ್ತರ )


-4-
 "ಪಯಣವದೆಲ್ಲ ಒಂಟಿಯೇ
ಲಕ್ಷ ತಾರಾಪಥದಿ ಜತೆಯಿಲ್ಲ
ಎದುರಿಲ್ಲ ಒದರಾಟ ಮೊದಲಿಲ್ಲ
ಸತ್ಯವನಂತ ಯಾತ್ರೆಯದು
ಪಾತ್ರೆ ಮುಚ್ಚಳಗಳಿಲ್ಲ ಬೆಸುಗೆ
ಬಂಧಗಳ ಬಿಡಿಸುವುದೇ ತಪವು
ಗುಟ್ಟು ಗಹ್ವರಗಳಿಲ್ಲ ಇಡು ಹೆಜ್ಜೆ
ಬೆಳಕಾಗುವುದೇ ರಟ್ಟು ನಡೆಯೊ
ಕವಿ ಕತ್ತಲಿಂದ ಬೆಳಕಿನೆಡೆಗೆ!"
-ರವಿ


-5-
"ಹೊತ್ತೊತ್ತಿಗೆ ಚಿತ್ತದಲಿ
ಮೊಳೆವ ಚಿಂತನೆಯಂತೆ
ಅಂದಂದಿನ ದಿನದಾಗಮವ
ಸಾರುವ ರವಿಯೇ,
ನಿನ್ನೊಳಚಿತ್ತದ ಚಿಂತನೆ
ಏನೋ?!"
-ಕವಿ