ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
Sunday, August 14, 2011
೬೪ ಯಾಕಾಯ್ತು? ೬೩ ಆಗಿತ್ತು ಅದಕ್ಕೆ?!
ನಮ್ಮ 'ಭಾರ'ತಕ್ಕೆ ೬೪ರ ಮರು ಹುಟ್ಟಿನ ಹುಸಿ ಸಂಭ್ರಮ! ನಾನೂ ಇದೇ ತಿಂಗಳಲ್ಲಿ ಕಣ್ಣು ಬಿಟ್ಟವನಾದ್ದರಿಂದ ನನಗೂ ಇದರ ಸಂಭ್ರಮದಲ್ಲಿ ಶರೀಕನಾಗುವ ಹಂಬಲ.ಆದರೆ ಸುಮ್ಮನೆ ಕೂತರೂ ಕೂದಲು-ಉಗುರು ಕಳೆಯಂತೆ ಬೆಳೆಯೋ ಹಾಗೆ ವಯಸ್ಸಂತೂ ಆಗೇ ಆಗುತ್ತದೆ ಎನ್ನುವಂತೆ ;ಕೇವಲ ಕಾಲಚಕ್ರದ ಅರೆ ಮತ್ತೊಮ್ಮೆ ತಿರುಗಿದ್ದಕ್ಕೆ ವರ್ಷ ಇನ್ನೊಂದಾಯ್ತು ಅಂತ ಸಂತೋಷಪಡಲೇ? ಇಲ್ಲ ನಮ್ಮೆಲ್ಲರ ತಾಯಿ ಭಾರತಿಯ ಎದೆಯನ್ನ ಮನಸೋ ಇಚ್ಛೆ ಬಗೆದು ಮಗುಮ್ಮಾಗಿ ತಮ್ಮ ತಿಜೋರಿ ತುಂಬಿ ಕೊಂಡ ಸ'ಗಣಿ' ತಿಂದವರನ್ನ ನೋಡಿ ಬೀಗಲೇ? ಇಲ್ಲ ,೨ಜಿ-೩ಜಿ ಎಂದು ಎಲ್ಲರನ್ನೂ ಜೀ ಎಂದೇ ಕರೆಯುತ್ತಾ ಅವಳೊಡಲಿಗೆ ಕಾನೂನು ಬದ್ಧವಾಗಿಯೇ ಕನ್ನ ಹಾಕುತ್ತಿರುವ ಖದೀಮರನ್ನ ಕಂಡು ಎದೆಯುಬ್ಬಿಸಲೆ? ಏನೊಂದೂ ಸ್ಪಷ್ಟವಾಗದೆ ಕೆಕರುಮೆಕರಾಗಿದ್ದೇನೆ! ಗೊಂದಲ ಜಾರಿಯಲ್ಲಿದೆ...
Subscribe to:
Post Comments (Atom)
ನುಡಿಮುತ್ತು
ಕಲ್ಪನೆಗೆ ಹೂ ವಾದರೇನು.., ಮುಳ್ಳಾದರೇನು ? ಕಲ್ಪಿಸುವವರ ಹೃದಯ ಮೃದುವಾಗಿದ್ದರೆ ಮುಳ್ಳು ಕೂಡ ಮೃದುವಾಗಿ ಹೂವಾಗ ಬಲ್ಲದು
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರ, ಕೋರಿಕೆಗೆ ಕೋರಿಕೆ! ಅಂದರೆ, ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" ಪ್ರಕ...
-
ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು ಸ್ವಾಮೀ ನನ್ನಯ್ಯ ರಥವೇರಿ ಬರುವಾಗ ನಾವೆದ್ದು ಕೈಯ್ಯ ಮುಗುದೇವು ಮಕ್ಕಳಾಟವು ಚಂದ ಮತ್ತೆ ಯೌವನ ಚಂದ ಮುಪ್ಪಿನಲಿ ಚಂದ ನರೆಗಡ...
No comments:
Post a Comment