ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
Sunday, August 14, 2011
೬೪ ಯಾಕಾಯ್ತು? ೬೩ ಆಗಿತ್ತು ಅದಕ್ಕೆ?!
ನಮ್ಮ 'ಭಾರ'ತಕ್ಕೆ ೬೪ರ ಮರು ಹುಟ್ಟಿನ ಹುಸಿ ಸಂಭ್ರಮ! ನಾನೂ ಇದೇ ತಿಂಗಳಲ್ಲಿ ಕಣ್ಣು ಬಿಟ್ಟವನಾದ್ದರಿಂದ ನನಗೂ ಇದರ ಸಂಭ್ರಮದಲ್ಲಿ ಶರೀಕನಾಗುವ ಹಂಬಲ.ಆದರೆ ಸುಮ್ಮನೆ ಕೂತರೂ ಕೂದಲು-ಉಗುರು ಕಳೆಯಂತೆ ಬೆಳೆಯೋ ಹಾಗೆ ವಯಸ್ಸಂತೂ ಆಗೇ ಆಗುತ್ತದೆ ಎನ್ನುವಂತೆ ;ಕೇವಲ ಕಾಲಚಕ್ರದ ಅರೆ ಮತ್ತೊಮ್ಮೆ ತಿರುಗಿದ್ದಕ್ಕೆ ವರ್ಷ ಇನ್ನೊಂದಾಯ್ತು ಅಂತ ಸಂತೋಷಪಡಲೇ? ಇಲ್ಲ ನಮ್ಮೆಲ್ಲರ ತಾಯಿ ಭಾರತಿಯ ಎದೆಯನ್ನ ಮನಸೋ ಇಚ್ಛೆ ಬಗೆದು ಮಗುಮ್ಮಾಗಿ ತಮ್ಮ ತಿಜೋರಿ ತುಂಬಿ ಕೊಂಡ ಸ'ಗಣಿ' ತಿಂದವರನ್ನ ನೋಡಿ ಬೀಗಲೇ? ಇಲ್ಲ ,೨ಜಿ-೩ಜಿ ಎಂದು ಎಲ್ಲರನ್ನೂ ಜೀ ಎಂದೇ ಕರೆಯುತ್ತಾ ಅವಳೊಡಲಿಗೆ ಕಾನೂನು ಬದ್ಧವಾಗಿಯೇ ಕನ್ನ ಹಾಕುತ್ತಿರುವ ಖದೀಮರನ್ನ ಕಂಡು ಎದೆಯುಬ್ಬಿಸಲೆ? ಏನೊಂದೂ ಸ್ಪಷ್ಟವಾಗದೆ ಕೆಕರುಮೆಕರಾಗಿದ್ದೇನೆ! ಗೊಂದಲ ಜಾರಿಯಲ್ಲಿದೆ...
Subscribe to:
Post Comments (Atom)
ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.
"ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......

-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರ, ಕೋರಿಕೆಗೆ ಕೋರಿಕೆ! ಅಂದರೆ, ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" ಪ್ರಕ...
-
ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು ಪಂಜೆ ಮಂಗೇಶ ರಾಯರು ಮೂಡಣ ರಂಗಸ್ಥಳದಲಿ ನೆತ್ತರ ಮಾಡುವನು ಕುಣಿದಾಡುವನು ಬೆಳಕಿನ ಕಣ್ಣುಗಳಿ೦ದಾ ಸೂರ್ಯನು ನೋಡ...
No comments:
Post a Comment