ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, April 11, 2014

ತಪ್ಪದೇ ಮತ ಚಲಾಯಿಸಿ.. ಭಾರತದ ಪ್ರಜಾಸಾರ್ವಭೌಮತ್ವವನ್ನು ಕಾಪಾಡಿ.

ಈ ಹಿಂದೆ ಕರ್ನಾಟಕದಲ್ಲಿ ಜೆಡಿಸ್, ಬಿಜೆಪಿಗೂ ಯಡಿಯೂರಪ್ಪನವರಿಗೆ ಮೋಸ ಮಾಡಿತೆಂದು ಗೋಳಿಟ್ಟು ಮಾಡಿಕೊಂಡ 'ವ್ಯಕ್ತಿ ಗತ' ಪ್ರಚಾರಕ್ಕೆ ಮರುಳಾಗಿ ಮತ ಚಲಾಯಿಸಿದ ಜನತೆ ಮುಂದಿನ ೫ ವರುಷಗಳ ಕಾಲ ಎಲ್ಲ ವಿಧದ ಆಟೋಪಗಳನ್ನೂ, ಗಣಿ- ಭೂಮಿ- ಧರ್ಮ ಹೆಸರಿನಲ್ಲಿ ಹಾಡುಹಗಲೇ ಕೊಳ್ಳೆ ಹೊಡೆಯುವುದನ್ನು ಕಣ್ಣಾರೆ ಕಂಡು ಮತವಿಟ್ಟ ಬೆರಳು ಕಚ್ಚಿಕೊಂಡರು... ಇದೀಗ ಕೇಂದ್ರದಲ್ಲೂ ಅದೇ ''ವ್ಯಕ್ತಿಗತ'' ಧೋರಣೆಯ ಜಾಹೀರಾತುಗಳು!


* ನಮ್ಮ ಮತ ಯಾವಾಗಲೂ ನಮ್ಮ 'ಕ್ಷೇತ್ರಗತ' ವಾಗಿರಬೇಕು.
* ನಮ್ಮ ಕ್ಷೇತ್ರವನ್ನು ಪ್ರತಿನಿಧಿಸಲು ಯಾರು ಸಮರ್ಥರೋ ಅವರನ್ನು ನಾವು ಗೆಲ್ಲಿಸಬೇಕು.
* ನಮ್ಮ ಕ್ಷೇತ್ರದ ಬೇಕಾದ ಸಂಪನ್ಮೂಲಗಳನ್ನು ತರುವ, ಕುಂದು ಕೊರತೆಗಳನ್ನು ಆಲಿಸುವ, ಪರಿಹರಿಸುವ, ಬೇಕಿದ್ದನ್ನು ಮುಂದಾಲೋಚಿಸುವ ಪ್ರತಿನಿಧಿ ಬೇಕಿರುವುದು.
* ಜನತಂತ್ರ ವ್ಯವಸ್ತೆ ಇರುವುದು ಹಲವರಲ್ಲಿ, ಒಬ್ಬನಲ್ಲಿರುವುದು ಸರ್ವಾಧಿಕಾರ. ವರ್ತಮಾನದಲ್ಲಿ ಲಿಬಿಯಾ, ಇರಾಕ್, ಸಿರಿಯಾ, ಉಕ್ರೇನ್ ಇತ್ಯಾದಿ ದೇಶಗಳ ಅರಾಜಕತೆಯನ್ನು ಒಮ್ಮೆ ನೆನೆಯಲೇಬೇಕು ನಾವು ( ಖಂಡಿತ ತುರ್ತ ಪರಿಸ್ತಿತಿಯ ಭಾರತವನ್ನು ಕೂಡ )
* ಕಾಂಗ್ರೆಸ್ಸು, ಬಿಜೆಪಿ, ಜೆಡಿಸ್, ಆಪ್ ಕಡೆಗೆ ಪಕ್ಷೇತರ ಯಾರಾದರು ಸರಿ ನಮ್ಮ ಕ್ಷೇತ್ರಕ್ಕೆ ದುಡಿಯುವವನ್ನು ಆಯ್ಕೆ ಮಾಡಿ... ಖಂಡಿತ ಆಯ್ಕೆಗೊಂಡ ಆ ಅರ್ಹ ಪ್ರತಿನಿಧಿ ಅವರುಗಳ ಯೋಗ್ಯ ನಾಯಕನನ್ನು ಆರಿಸುತ್ತಾನೆ..ಇದುವೇ ನೈಜ ಜನತಂತ್ರ ವ್ಯವಸ್ತೆ.
ತಪ್ಪದೇ ಮತ ಚಲಾಯಿಸಿ.. ಭಾರತದ ಪ್ರಜಾಸಾರ್ವಭೌಮತ್ವವನ್ನು ಕಾಪಾಡಿ.

- ರಾಜೇಂದ್ರ ಪ್ರಸಾದ್


No comments:

Post a Comment