Sunday, August 14, 2011

ಲಾಭವೆ ನನ್ನುಸಿರು...?!




ಕಾಸಿದ್ದರೆ ಕೈಲಾಸ
ಕಾಲಿದ್ದವರಂತೆ ಇಲ್ಲದರದ್ದೂ ಇದೇ ವಿಲಾಸ...
ಜಗತ್ತು ಸದಾ ಎತ್ತರದಲ್ಲಿರುವವರ ಪದತಲದ ಗುಲಾಮ,
ಓಲೈಕೆ ಹಲ್ಕಿರಿಕೆ....ಮೇಲೇರಿದವ ಎದುರಾದಾಗಲೆಲ್ಲ
ಹಚ್ಚುತ್ತ ಕೃತಕ ಪ್ರೀತಿಯ ಮುಲಾಮ/
ಹಿಂದೆಯೂ ಉಳ್ಳವರ ಬಾಲವಾಗಿ
ಇಲ್ಲದವರ ತಲೆಭಾರವಾಗಿ....
ಮುಖನೋಡಿ ಮಣೆ ಹಾಕುತ್ತಲೇ ಇತ್ತು
ಈ ಜಗತ್ತು,
ಲಾಭದ ದೂರಾಲೋಚನೆಯ ಡೊಗ್ಗು ಸಲಾಮ...
ಇದು ಹಾಕುತ್ತಲೇ ಇದೆ
ಹಾಕುತ್ತಲೇ ಇರುತ್ತದೆ ನೋಡಿ
ಇದೆ ಜಗದ ಹಣೆಬರಹ...!
ಇದೊಂಥರ ಸಭ್ಯ ಹರಾಮ?!//

No comments:

Post a Comment

ಸೋದರಿ ನಿವೇದಿತಾ

 ಪಾಶ್ಚಾತ್ಯರಿಗೆ ಶಂಕರಾಚಾರ್ಯರಂಥಹ ವ್ಯಕ್ತಿಯೊಬ್ಬರನ್ನು ಊಹಿಸಿಕೊಳ್ಳಲು ಕೂಡ ಕಷ್ಟ. ನಾವು, ಅಂದರೆ ಪಾಶ್ಚಾತ್ಯರು ಅಸ್ಸಿಸಿಯ ಫ್ರಾನ್ಸಿಸ್ಸನ ದೈವಭಕ್ತಿಯನ್ನು ಆಶ್ಚರ್ಯ ಸ...