ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
Wednesday, August 17, 2011
ನಗಲಾರದೆ ಅಳಲಾರದೆ...
"ನಾಳೆ ಮಹಾತ್ಮಗಾಂಧಿ ಪ್ರತಿಮೆ ಬಳಿ ಹತ್ತಾರು ಸಾವಿರ ಜನರ ಸೇರಿಸಿ,ಅಣ್ಣಾ ಹಜಾರೆಯವರ ಜನಲೋಕಪಾಲಕ್ಕೆ ತುಂಬು ಹೃದಯದ ಬೆಂಬಲ ಸೂಚಿಸಿ ಪಕ್ಷಾತೀತವಾದ ಹೋರಾಟ ಮಾಡಲಾಗುವುದು!" ಅಂದಿದ್ದಾರೆ ಮಾಜಿ ಮುಖ್ಯ'ಕಂತ್ರಿ' ಬೂ ಸಿ ಯ! (ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ.ಇದೂ ಒಂದು ಅವರ ಹೊಸ ಬೂಸಿಯೇ.ಅಲ್ಲಾ ಅಬಲೆ ಒಂಟಿ ಮಹಿಳೆಯರ ಸುರಕ್ಷತೆಗಾಗಿ ಉಮೇಶ್ ರೆಡ್ಡಿ ಧರಣಿ ಕೂತರೆ...ಸರಣಿ ಮಹಿಳ ಅತ್ಯಾಚಾರ ವಿರೋಧಿಸಿ ಚಾರ್ಲ್ಸ್ ಶೋಭರಾಜ್ ಉಪವಾಸ ಕೂತರೆ...ಭೂಮಿ ಡೀನೋಟಿಫಿಕೇಶನ್ ವಿರೋಧಿಸಿ ಸ್ವಂತ(?) ಮಗನೊಂದಿಗೆ ಕಟ್ಟಾ ನಾಯ್ಡು ಸರಕಾರದ ವಿರುದ್ಧ ಸಮರ ಸಾರಿದರೆ ಆಗಬಹುದಾದ ಕೆಕರುಮೆಕರು ಕನ್ನಡಿಗರಿಗಾಗುತ್ತಿದೆ.ಇದೇನು ಅಕಾಲದಲ್ಲಿ 'ಹಾಸ್ಯೋತ್ಸವ"?! ಆಣೆ ಹಾಕೊ ದಿವಸ ಧರ್ಮಸ್ಥಳದಿಂದ ಮಂಜುನಾಥ ತಲೆ ತಪ್ಪಿಸಿಕೊಂಡು ಓಡಿ ಹೋದ ಹಾಗೆ ನಾಳೆಗೆ ಬೆಚ್ಚಿಬಿದ್ದು ಗಾಂಧಿಯೂ ಕೋಲೂರಿಕೊಂಡು ಇವತ್ತು ರಾತ್ರಿಯೇ ಓಡಿ ಹೋಗಿ ಬೂಸಿಯ ಕೈಯಿಂದ ಬಚಾವಾಗುವ ಎಲ್ಲಾ ಸಾಧ್ಯತೆಗಳೂ ಗೋಚರಿಸುತ್ತಿವೆ...
Subscribe to:
Post Comments (Atom)
"RSS ಮತ್ತು DSS - ಒಂದು ತೌಲನಿಕ ಅಧ್ಯಯನ"- ಪ್ರವೀಣಕುಮಾರ M
RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ತನ್ನ 100 ನೇ ವರ್ಷದ ಸಂಭ್ರಮವನ್ನು ದೇಶದಾದ್ಯಂತ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷವನ್ನು ಬೆಂಬಲಿಸುವ ...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರ, ಕೋರಿಕೆಗೆ ಕೋರಿಕೆ! ಅಂದರೆ, ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" ಪ್ರಕ...
-
ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು ಪಂಜೆ ಮಂಗೇಶ ರಾಯರು ಮೂಡಣ ರಂಗಸ್ಥಳದಲಿ ನೆತ್ತರ ಮಾಡುವನು ಕುಣಿದಾಡುವನು ಬೆಳಕಿನ ಕಣ್ಣುಗಳಿ೦ದಾ ಸೂರ್ಯನು ನೋಡ...
No comments:
Post a Comment