ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, August 8, 2011

ಪ್ರವಾಸಿ ಮಂದಿರ

ಇಬ್ರಾಹಿಂ ಎಂಬುವನು ಬಾಲ್ಕ ದೇಶದ ರಾಜನಾಗಿದ್ದ. ಅವನು ಮಹಾಶೂರ. ಅವನ ವಿರುದ್ಧ ಹೋರಾಡಲು ಎಲ್ಲರೂ ಹೆದರುತ್ತಿದ್ದರು.ಹೋರಾಟ ಮಾಡುವುದು ದೂರವಿರಲಿ, ಅವನೇ ತಮ್ಮ ರಾಜ್ಯದ ಮೇಲೆ ದಾಳಿ ಮಾಡದಿದ್ದರೆ ಸಾಕು ಎಂದು ಹೆದರಿ ಸುಮ್ಮನಿದ್ದರು.

ಅವನ ಐಶ್ವರ್ಯಕ್ಕೆ ಮಿತಿಯೇ ಇರಲಿಲ್ಲ. ಅವನಿಗೆ ಜೀವನದ ಸಕಲ ಸೊಗಸುಗಳೂ ಬೇಕು. ಅಷ್ಟೊಂದು ಹಣವಿದ್ದ ಮೇಲೆ ಸೊಗಸುಗಳು ಬಂದು ಬೀಳುವುದಕ್ಕೆ ಯಾವ ತಡೆ? ಅಧಿಕಾರ. ಅಂತಸ್ತು, ಶೌರ್ಯ, ಸಂಪತ್ತು ಎಲ್ಲ ಸೇರಿಕೊಂಡು ಅವನ ತಲೆ ತಿರುಗಿಸಿಬಿಟ್ಟಿದ್ದವು. ಅಹಂಕಾರ ಕ್ಷಣಕ್ಷಣಕ್ಕೂ ಏರುತ್ತಿತ್ತು. ಆದರೂ ಅವನ ಹೃದಯದಲ್ಲಿ ಏಲ್ಲೋ ತಾನು ಏಕಾಕಿ ಎಂಬ ಭಾವನೆ ಸಣ್ಣದಾಗಿ ಮೊಳೆಯುತ್ತಿತ್ತು.

ಒಂದು ದಿನ ರಾಜನು ದರ್ಬಾರು ಮುಗಿಸಿ ಅರಮನೆಗೆ ಬಂದು ವಿಶ್ರಾಂತಿಗೆಂದು ತನ್ನ ಕೊಠಡಿ ಕಡೆ ಹೊರಟಾಗ ಅಲ್ಲಿ ಒಬ್ಬ ಫಕೀರನನ್ನು ಅರಮನೆಯ ಸೇವಕರು ಕರೆದುಕೊಂಡು ಬಂದರು. ಆತನ ಹರಕು ಬಟ್ಟೆ, ಉದ್ದಗಡ್ಡ, ಕಂಕುಳಲ್ಲಿದ್ದ ಹರಕು ಚಾಪೆ ಇವುಗಳನ್ನು ನೋಡಿ `ಇವನನ್ನೇಕೆ ಇಲ್ಲಿ ಕರೆದುಕೊಂಡು ಬಂದಿರಿ?` ಎಂದ ಕೇಳಿದ ಇಬ್ರಾಹಿಂ.

`ಅವನ್ನೇನು ಕೇಳುತ್ತೀರಿ? ನಾನೇ ಹೇಳುತ್ತೇನೆ. ನನಗೂ ತಿರುಗಿ, ತಿರುಗಿ ಸಾಕಾಗಿ ಹೋಗಿದೆ. ಈ ಪ್ರವಾಸಿಗೃಹದಲ್ಲಿ ಸ್ವಲ್ಪ ಹೊತ್ತು ನಿದ್ರೆ ಮಾಡಬೇಕೆಂದು ಬಂದೆ` ಎಂದವನೇ ಫಕೀರ ಗೋಡೆಯ ಪಕ್ಕ ತನ್ನ ಹರಕು ಚಾಪೆಯನ್ನು ಹಾಸಿಬಿಟ್ಟು ಮಲಗಿಯೇ ಬಿಟ್ಟ. ಇವನ ನಡತೆಯನ್ನು ನೋಡಿ ಹೌಹಾರಿದ ರಾಜ. `ಏ, ಇದು ಪ್ರವಾಸಿ ಗೃಹವೇನೋ? ಇದು ನನ್ನ ಅರಮನೆ. ಏಳು ಮೇಲೆ, ಯಾರಲ್ಲಿ, ಇವನನ್ನು ಆಚೆ ತಳ್ಳಿ` ಎಂದು ಕೋಪದಿಂದ ಕೂಗಿದ.

ಆಗ ಆ ಫಕೀರ ಹೇಳಿದ,  `ಮಹಾರಾಜ ಕೋಪ ಬೇಡ. ನನ್ನ ಪ್ರಶ್ನೆಗಳಿಗೆ ದಯವಿಟ್ಟು ಉತ್ತರಿಸು. ನೀನು ಬರುವುದಕ್ಕಿಂತ ಮೊದಲು ಈ ಅರಮನೆಯಲ್ಲಿ ಯಾರಿದ್ದರು?`
`ನನ್ನ ತಂದೆ, ಹಿಂದಿನ ಮಹಾರಾಜ` ಎಂದ ರಾಜ
 `ಈಗ ನಿಮ್ಮ ತಂದೆ ಎಲ್ಲಿದ್ದಾರೆ?`
 `ಅವರು ಕಾಲವಾಗಿ ಇಪ್ಪತ್ತು ವರ್ಷವಾಯಿತು.`
 `ನಿಮ್ಮ ತಂದೆಗೂ ಹಿಂದೆ ಈ ಅರಮನೆಯಲ್ಲಿ ಯಾರಿದ್ದರು?`
 `ನನ್ನ ಅಜ್ಜ, ಮತ್ತಾರು ಇದ್ದಾರು ಇಲ್ಲಿ?` ರಾಜನಿಗೆ ಕೋಪ ಏರುತ್ತಿತ್ತು.
 `ಈಗ ಅವರು ಎಲ್ಲಿದ್ದಾರೆ?`

 `ಅವರು ತೀರಿ ಹೋಗಿ ಅದೆಷ್ಟೋ ಕಾಲವಾಯಿತು, ಆ ವಿಚಾರ ಈಗೇಕೆ?`
 `ಇರಿ, ಇರಿ, ಕೋಪ ಬೇಡ. ನಿಮ್ಮಜ್ಜನಿಗಿಂತ ಮೊದಲು ಯಾರಿದ್ದರು ಅರಮನೆಯಲ್ಲಿ?`  `ಅಯ್ಯೋ ಫಕೀರ, ಈ ಅರಮನೆ ತಲೆತಲಾಂತರದಿಂದ ನಮಗೆ ಬಂದದ್ದು. ನಮ್ಮಜ್ಜನಿಗಿಂತ ಮೊದಲು ನಮ್ಮ ಮುತ್ತಜ್ಜ ವಾಸವಾಗಿದ್ದರು.`
`ಈಗ ಅವರು ಎಲ್ಲಿದ್ದಾರೆ?`  ಕೇಳಿದ ಫಕೀರ.
Krupe: Prajavani - 14th July 2011

No comments:

Post a Comment