Thursday, March 10, 2016

ಚುಟುಕ - ರಘು ವಿ,

ವರುಷವಿಡೀ ನಡೆವಂಗೆ
ಎಡವುದೇಂ ಹೊಸದೆ?
ರಘು ವಿ
ಉರಿವ ದೀಪಕ್ಕೆ ಕಿಟ್ಟ
ಕಟ್ಟುವುದೇಂ ಹೊಸದೆ?
ಜನುಮವಿಡೀ ಉರಿವ
ನಿರಂತರದ ದಿನಕರಗೆ 
ಗ್ರಹಣವಿದು ಹೊಸದೆ?
ನೆರಳಾಟಕ್ಕೆ ಅಂಜುವೊಡೆ
ಬಾಳನಂಜುಗಳ ಹೇಗೆ
ಅರಗಿಪೆಯೊ ಮನುಜ?
ಮನದ ಗ್ರಹಣವ ಕಳೆದು
ನಡೆ ಬೆಳಕಿನೆಡೆಗೆ!
[ ಕಿಟ್ಟ ಕಟ್ಟುವುದು = ಬತ್ತಿ ಉರಿದು ಕಪ್ಪಾಗುವುದು. Carbonization]




No comments:

Post a Comment

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು - ಸಂಗ್ರಹ

ಗಳಗನಾಥರು ಗಳಗನಾಥರು ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.  ನಿಮ್ಮ ಮನೆಯಲ್ಲಿ ಲಕ್ಷ್ಮಿ ಇದ್ದರೆ ಸಾಲದು, ನಾನು ಸರ...