Thursday, June 2, 2011

ಇಷ್ಟು ಕಾಲ....

ಇಷ್ಟು ಕಾಲ ಒಟ್ಟಿಗಿದ್ದು..ಎಷ್ಟು ಬೆರೆತರೂ.....
ಅರಿತೆವೇನು ನಾವು ನಮ್ಮ ಅಂತರಾಳವ....?

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ.....
ಮಣ್ಣ ಮುದ್ದು ದೊರಕಿತೇನು.. ನೀಲಿ ಬಾನಿಗೆ...?

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ.....
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ....?

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ....
ಒಂದಾದರು ಉಳಿಯಿತೇ..ಕನ್ನಡಿಯ ಪಾಲಿಗೆ....???

1 comment:

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...