Showing posts with label ಪವನ್ ಪಾರುಪತ್ತೇದಾರ. Show all posts
Showing posts with label ಪವನ್ ಪಾರುಪತ್ತೇದಾರ. Show all posts

Thursday, October 17, 2013

ನಾನು ಕೂಡ ಭಾರತೀಯ - ಪವನ್ ಪಾರುಪತ್ತೇದಾರ


ತಾತ್ಸಾರ ಎಂದಿಗೂ ನನಗೆ ಕಟ್ಟಿಟ್ಟ ಬುತ್ತಿ
ಜನಿವಾರ ಹಿಡಿದೊಡನೆ ಜಗಕೆ ನಾ ದೂರ
ಸಂಸ್ಕೃತವ ಉಲಿದೊಡನೆ ಸಂಘಕ್ಕೆ ಭಾರ
ತೆಗಳೋಕೆ ನಿಮಗೊಂದು ವಸ್ತುವು ನಾನು
ಪವನ್ ಪಾರುಪತ್ತೇದಾರ
ನನ್ನ ತೆಗೆಳಿದೊಡನೆ ಹತ್ತುವಿರಿ ಖ್ಯಾತಿಯ ಪ್ಲೇನು
ತೆಗೆಳುವ ಭರದಲ್ಲಿ ಮರೆಯದಿರಿ ಗೆಳೆಯರೆ
ನಾನು ಕೂಡ ನಿಮ್ಮಂತೆ ಭಾರತೀಯ

ಮೀಸಲಿನ ಗೋಜಿಗೆ ಎಂದು ಹೋಗಿಲ್ಲ
ಸರ್ಕಾರಿ ಕೆಲಸಕ್ಕೆ ಅವಕಾಶ ಕೇಳಿಲ್ಲ
ಸವಲತ್ತು ಮರೆತಿರುವೆ ಹುಟ್ಟಿದಾಗಿಂದ
ಮಸಲತ್ತೆ ನೋಡಿರುವೆ ಮೂಲೆ ಮೂಲೆಯಿಂದ
ಹಿಂದೆಂದೋ ಯಾವನೋ ಮಾಡಿದ ಶೋಷಣೆಗೆ
ಇಂದಿನ ಯುವ ಪೀಳಿಗೆಗೆ ಶಿಕ್ಷೆ ಯಾಕೆ
ಜನಿವಾರದವರು ಜೋಪಡಿಯಲು ಇರುವರು
ಜಾತಿಯ ಹೆಸರಿನಲಿ ತಾರತಮ್ಯ ಯಾಕೆ
ಹಸಿವಿಗೆ ಬಡತನಕೆ ಜಾತಿಯ ಹಂಗಿಲ್ಲ
ಜಾತಿ ಜಾತಿ ನಡುವೆ ಕಂದಕವು ಏಕೆ
ಮರೆಯದಿರಿ ಗೆಳೆಯರೆ ಜಾತಿಗೂ ಮುಂಚೆ
ನಾನು ಕೂಡ ನಿಮ್ಮಂತೆ ಭಾರತೀಯ

ಕೆಲವರ ಕುತಂತ್ರ ಹೆಸರು ಮಾಡುವ ಹುನ್ನಾರ
ಒಂದು ಪಂಥವನು ಬೈದೊಡೆ ಬೆಳೆದುಬಿಡೋ ಆಸೆ
ಬಿತ್ತುತಿದೆ ದ್ವೇಶವನು ನಮ್ಮ ನಮ್ಮಗಳ ನಡುವೆ
ಎಲ್ಲರೊಳು ಒಂದಾಗಿ ಎಲ್ಲರೊಳು ಬೆರೆತು
ಒಬ್ಬರನೊಬ್ಬರು ಅರಿತು ಪರಸ್ಪರ ಗೌರವಿಸಿ
ಒಟ್ಟಾಗಿ ಬಾಳುವುದ ನೋಡುವಾಸೆ ಎನಗೆ
ಮರೆಯದಿರಿ ಗೆಳೆಯರೆ ನಿಮ್ಮ ಅಣ್ಣತಮ್ಮನು ನಾನು
ನಾನು ಕೂಡ ನಿಮ್ಮಂತೆ ಭಾರತೀಯ

ಪವನ್ ಪಾರುಪತ್ತೇದಾರ :-

Tuesday, October 15, 2013

ತುಳಿಸಿಕೊಂಡವರು ಇವರು - ಪವನ್ ಪಾರುಪತ್ತೇದಾರ


ಪವನ್ ಪಾರುಪತ್ತೇದಾರ


ಅದು ಸಿಂಧೂ ನದಿಯ ಸೇತುವೆ
ಅಲ್ಲಲ್ಲಿ ಕಾಂಕ್ರೀಟಿನ ಕೊರತೆ
ಕಬ್ಬಿಣದ ಸಲಾಕೆಗಳ ಅಲುಗಾಟ ಬೇರೆ
ತಟದಾಕಡೆ ಹೆಸರಾಂತ ದೇಗುಲ
ತಟದೀಕಡೆ ಜಾತ್ರೆ ಪೇಟೆ ಪೆಂಡಾಲು

ಸೇತುವೆಯ ಮೇಲೆ ಇಪ್ಪತ್ತೈದು ಸಾವಿರ ಜನೆ
ಎಲ್ಲರ ಮನದಲ್ಲೂ ಒಂದೇ ಬಯಕೆ
ಆಯುಧಗಳಿಗೊಂದಷ್ಟು ಶಕ್ತಿ ಬರಲೆಂದು
ಗುದ್ದಲಿ ಪಿಕಾಸಿ ಶನಕೆ ಕುಡುಗೋಲು
ನೇಗಿಲು ವೊರವಾಲೆ ಇನ್ನು ಇನ್ನೆಷ್ಟೋ

ಈಗ ಅದೇ ಸೇತುವೆ ಇನ್ನೂ ಭದ್ರವಾಗಿದೆ
ಆದರಲ್ಲಿ ಎಲ್ಲರಲ್ಲು ಭಯದ ವಾತಾವರಣ
ಕಾಂಕ್ರೀಟು ಗುಂಡಿಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆ
ಕಬ್ಬಿಣದ ಸಲಾಕೆಗಳಿಗೆ ಕರುಳು ನರಗಳ ಹಾರ
ಇಲ್ಲಿ ಯಾರು ಪಾಪಿಗಳೋ ಗೊತ್ತಿಲ್ಲ
ತುಳಿದವರ ತುಳಿಸಿಕೊಂಡವರ

ಸಿಂಧು ಹರಿಯುತ್ತಳೇ ಇದ್ದಾಳೆ
ರಕ್ತದ ತೊಟ್ಟು ಸೇತುವೆಯ ಸೊಂದಿಗಳಿಂದ
ಜಾತ್ರೆ ಪೇಟೆ ಪೆಂಡಾಲುಗಳಲ್ಲಿನ
ಸರಕುಗಳೆಲ್ಲಾ ಸೂತಕದ ಮೌನ
ಗಿರಗಿಟ್ಟಲೆ ಹಿಡಿದ ಹುಡುಗನ ಕೈ ಹಾಗೆ ಇದೆ
ಜೋಳಿಗೆಯಲ್ಲಿ ತುಂಬಿಕೊಂಡಿದ್ದ ಕಡಲೆ ಹಾಗೆ ಇದೆ
ಆದರೆ ಯಾರಿಗೂ ಜೀವವಿಲ್ಲ
ಶಕ್ತಿ ದೇವತೆ ಆಯುಧಗಳ ಹಿಡಿದು ಮೌನವಾಗಿದ್ದಾಳೆ
ವಿಧಿಯ ಅಟ್ಟಹಾಸವ ಮೆಟ್ಟಿ ನಿಲ್ಲದೆ
ವಿಧಿಯ ಅಟ್ಟಹಾಸವ ಮೆಟ್ಟಿ ನಿಲ್ಲದೆ

(ಮಧ್ಯಪ್ರದೇಶದಲ್ಲಿ ಕಾಲ್ತುಳಿತಕ್ಕೆ ಬಲಿಯಾದವರ ಕುರಿತು )

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...