Showing posts with label ಸುದ್ದಿ ಸಮಾಚಾರ. Show all posts
Showing posts with label ಸುದ್ದಿ ಸಮಾಚಾರ. Show all posts

Monday, February 8, 2016

ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾರ

ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್..! ಸ್ನೇಹಿತರ ಸೋಗಿನಲ್ಲಿ ಬರುತ್ತವೆ ಲಿಂಕ್'ಗಳು
ವಿಶ್ವದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ವಾಟ್ಸಾಪ್ ಈಗ ವಂಚಕರ ಟಾರ್ಗೆಟ್ ಆಗಿದೆ. ವಾಟ್ಸಾಪ್ ಅಪ್ಡೇಟ್ ಎಂಬ ನಕಲಿ ಸಂದೇಶ ಕಳುಹಿಸಿ ಜನರ ಮೊಬೈಲ್'ಗಳಲ್ಲಿರುವ ಮಾಹಿತಿಯನ್ನು ವಂಚಕರು ಕದಿಯುತ್ತಿದ್ದಾರೆಂದು ಕಳೆದ ತಿಂಗಳು ಭದ್ರತಾ ತಜ್ಞರು ಎಚ್ಚರಿಸಿದ್ದರು. ಈಗ ಮತ್ತೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ವಾಟ್ಸಾಪ್ ಬಳಕೆದಾರರನ್ನು ಮೋಸ ಮಾಡುವ ಹೊಸ ಸ್ಕ್ಯಾಮ್ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.
ಏನಿದು ಹೊಸ ಸ್ಕ್ಯಾಮ್..?
ನಿಮ್ಮ ವಾಟ್ಸಾಪ್'ನಲ್ಲಿ ನಿಮ್ಮ ಸ್ನೇಹಿತರ ಹೆಸರಿನಲ್ಲಿ ಲಿಂಕ್'ಗಳು ಕಾಣಿಸುತ್ತವೆ. ಗೆಳೆಯರು ಕಳುಹಿಸಿದ್ದಿರಬಹುದೆಂದು ನೀವೇನಾದರೂ ಆ ಲಿಂಕ್ ಕ್ಲಿಕ್ ಮಾಡಿದರೆ ವಂಚಕ ವೆಬ್'ಸೈಟ್'ವೊಂದಕ್ಕೆ ಹೋಗುತ್ತದೆ. ಅದರಲ್ಲಿ ಅನೇಕ ರೀತಿಯ ಆಫರ್, ಡಿಸ್ಕೌಂಟ್'ಗಳನ್ನು ನಿಮಗೆ ತೋರಿಸಿ ನಂಬಿಸಲಾಗುತ್ತದೆ.
ನಂತರ, ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ. ಅದಾದ ನಂತರ ನಿಮ್ಮ ಫೋನ್'ಗೆ ಮಾಲ್ವೇರ್ ಅಂಟಿಕೊಳ್ಳುತ್ತದೆ. ಈ ಮಾಲ್ವೇರ್ ಮೂಲಕ ಫೋನ್'ನಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನೆಲ್ಲಾ ವಂಚಕರು ಸುಲಭವಾಗಿ ಸಂಗ್ರಹಿಸುತ್ತಾರೆ.
ಈ ವಾಟ್ಸಾಪ್ ವಂಚಕರು ಕೆಲ ಕಾಲದಿಂದ ಬಹಳ ಸಕ್ರಿಯರಾಗಿದ್ದಾರಂತೆ. ಆತಂಕದ ವಿಷಯವೆಂದರೆ, ಈ ವಂಚಕರು ಇಂಗ್ಲೀಷ್ ಒಂದಷ್ಟೇ ಅಲ್ಲ ಅನೇಕ ಭಾರತೀಯ ಭಾಷೆಗಳಲ್ಲಿ ಮೋಸದ ಸಂದೇಶಗಳನ್ನು ಕಳುಹಿಸಬಲ್ಲರು. ಅಲ್ಲದೇ, ನೀವು ಮೋಸಗೊಂಡಿದ್ದಲ್ಲದೇ ನಿಮ್ಮೊಂದಿಗೆ ಇನ್ನೂ 10 ಜನರಿಗೆ ನಿಮ್ಮಿಂದಲೇ ಹಳ್ಳ ತೋಡಿಸುತ್ತಾರೆ. ನಿಮಗೆ ಕಳುಹಿಸಿದ ಸಂದೇಶವನ್ನು ನಿಮ್ಮ ಹತ್ತು ಸ್ನೇಹಿತರಿಗೆ ಫಾರ್ವರ್ಡ್ ಮಾಡಿದರೆ ಆ ಹೋಟೆಲ್'ನಲ್ಲಿ ಇಷ್ಟು ಡಿಸ್ಕೌಂಟ್ ಸಿಗುತ್ತದೆ, ಗಿಫ್ಟ್ ಕಾರ್ಡ್ ಸಿಗುತ್ತದೆ ಎಂದೆಲ್ಲಾ ಪ್ರಲೋಭನೆಗೊಳಪಡಿಸುತ್ತಾರೆ ಎಂದು ಆಯಂಟಿ-ವೈರಸ್ ಸಾಫ್ಟ್'ವೇರ್ ಕಂಪನಿ ಕಾಸ್ಪೆರ್'ಸ್ಕಿ ಲ್ಯಾಬ್'ನ ಪ್ರಧಾನ ಭದ್ರತಾ ಸಂಶೋಧಕ ಡೇವಿಡ್ ಎಮ್ ತಿಳಿಸುತ್ತಾರೆ.

http://www.suvarnanews.tv/Technology/gadgets/beware-of-new-whatsapp-scam-19294?cf=article-bottom

Tuesday, February 4, 2014

ಆಧ್ಯಾತ್ಮದಲ್ಲಿ ಅಡೆಗಿದೆ ವಿಜ್ಞಾನದ ರಹಸ್ಯ

ಆಧ್ಯಾತ್ಮದಲ್ಲಿ ಅಡೆಗಿದೆ ವಿಜ್ಞಾನದ ರಹಸ್ಯ
ಆಧ್ಯಾತ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು
ಫೆಬ್ರವರಿ 1 ಮತ್ತುರಂದು ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ  8ನೇ ರಾಷ್ಟ್ರೀಯ ವಿದ್ಯಾಥಿ೯ ಸಮ್ಮೇಳನ  ಸೈನ್ಸ್ ಎಂಡ್ ಸ್ಪೀರಿಜ್ಯೂಲ್ ಕ್ವಿಷ್ಟ್   ಜರುಗಿತು. ಸಮ್ಮೇಳನವನ್ನು ಭಕ್ತಿವೇದಾಂತ ಸಂಸ್ಥೆ  ಕಲಕತ್ತಾ ಮತ್ತು ಆಯ್ ಆಯ್ ಟಿ ಬನಾರಸ್ ಹಿಂದೂ ವಿಶ್ವವಿಧ್ಯಾಲಯ ಇವುಗಳು ಜಂಟೀಯಾಗಿ ಆಯೋಜಿಸಿದ್ದವು.
 ಸಮ್ಮೇಳನದಲ್ಲಿ ನಾ೯ಟಕದ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮಿಜಿಯವರು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದರು. ಸಮ್ಮೇಳನವನ್ನು ದೀಪ ಬೆಳಗಿಸುವ ಮುಖಾಂತರ ಸ್ವಾಮಿಜಿಯವರು ಉದ್ಘಾಟಿಸಿದರು.




ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ  ಎರಡು ಮುಖಗಳಿದಂತೆ ಇರುವುದು. ಆಧ್ಯಾತ್ಮದಲ್ಲಿಯೇ ವಿಜ್ಞಾನದ ರಹಸ್ಯ ಅಡಗಿರುವುದು ಎಂದು ಹೇಳಿದ ಸ್ವಾಮಿಜಿಯವರು ರೀತಿಯ ಸಮ್ಮೇಳನವನ್ನು ಆಯೋಜಿಸಿ ವಿದ್ಯಾಥಿ೯ ಳಿಗೆ ಅನ್ವೇಷಣೆ ಮಾಡಲು ಪ್ರೋತ್ಸಾಹಿಸುತ್ತಿರುವ ಭಕ್ತಿವೇದಾಂತ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.  2 ದಿನದ ಕಾರ್ಯಗಾರದ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಭಾಗವಹಿಸದ್ದ ಎಲ್ಲರಿಗೂ ಕರೆನೀಡಿದರು
ಆಯ್ ಆಯ್ ಟಿ ಗೋವಾಹಟಿಯ ಬೋರ್ಡ ಆಫ್ ಗವರ್ನರದ ಚೇರಮ್ಯಾನ ಪ್ರೋ. ಆರ್.ಪಿ ಸಿಂಗಭಕ್ತಿ ವೇದಾಂತ ಸಂಸ್ಥೆ ಕಲಕತ್ತಾದ ಅಧ್ಯಕ್ಷರಾರ ಶ್ರೀ ವಾಸುದೇವ್ ರಾವ್ಡಾ. ಸುದೀಪ್, ಡಾ. ಪಿ ಕೆ ಗೋಸ್ವಾಮಿಡಾ. ಪ್ರಥ್ವೀಶ ನಾಗ್, ಪ್ರೋ ಪಿ,ಕೆ ಮುಖ್ಯೋಪಾಧ್ಯಾಯ ಹಾಗೂ ಪ್ರೋ ಕೆ ತ್ರಿಪಾಠಿಯವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
2 ದಿನದ ಸಮ್ಮೇಳನದಲ್ಲಿ ಆಧ್ಯಾತ್ಮ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಉಪನ್ಯಾಸ ಚೆ೯ಗಳು ನಡೆದವು. ಇದರಲ್ಲಿ ದೇಶದ ಹಲವಡೆಯಿಂದ ಬಂದ ವಿದ್ಯಾಥಿ೯ ಗಳು ಭಾಗವಹಿಸಿದ್ದರು.


ವಿವೇಕ ಬೆಟ್ಕುಳಿ


Thursday, January 23, 2014

ಸಂವಿಧಾನದ ಮರು ವಿಮಶೆ೯ ಅಗತ್ಯವೇ? - ವಿವೇಕ್ ಬೆಟ್ಕುಳಿ ಕುಮಟಾ


ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಗುರುತಿಸಲ್ಪಡುವ ನಮ್ಮ ದೇಶ ಈಗ 64ನೇ ಪ್ರಜಾರಾಜೋತ್ಸವದ ಹೊಸ್ತಿಲಲ್ಲಿ ನಿಂತಿರುವುದು. 1947 ಅಗಷ್ಟ 15 ಭಾರತಕ್ಕೆ ಸ್ವತಂತ್ರ ಸಿಕ್ಕಿತು. ನಮ್ಮನ್ನು ನಾವು ಆಳುವ ಅವಕಾಶ ಬಂತು. ನಮ್ಮ ಆಡಳಿತದಲ್ಲಿ ಯಾವ ರೀತಿ ನೀತಿ ನಿಯಮ ಇರಬೇಕು, ನಮ್ಮ ಆಡಳಿತ ಪದ್ದತಿ ಹೇಗಿರಬೇಕು, ಎಲ್ಲವುಗಳ ಸ್ಪಷ್ಟತೆ ರೂಪುರೇಷೆ ಸಂದರ್ಭದಲ್ಲಿ ಇರಲಿಲ್ಲ.  ಆಡಳಿತ ವ್ಯವಸ್ಥೆ ನೀತಿ ನಿಯಮ ಹೇಗಿರಬೇಕು ಎಂಬುದರ ಬಗ್ಗೆ ಒಂದು ಮಾರ್ಗಸೂಚಿಯ ಅಗತ್ಯವಿತ್ತು. ಅದಕ್ಕಾಗಿ ಸ್ವತಂತ್ರ ಭಾರತದ ಸಂವಿಧಾನ ರಚಿಸಲು ನಿರ್ಧರಿಸಿ ಕಾರ್ಯವನ್ನು ಕರಡು ಸಮಿತಿಗೆ ಒಪ್ಪಿಸಲಾಯಿತು. ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಅಂಬೇಡ್ಕರರವರನ್ನು ಆಯ್ಕೆ ಮಾಡಲಾಯಿತು.  ಬೇರೆ ಬೇರೆ ದೇಶದ ಎಲ್ಲಾ ಸಂವಿಧಾನಗಳನ್ನು ಅಭ್ಯಸಿಸಿ ಸ್ವತಂತ್ರ್ಯ ಭಾರತಕ್ಕೆ ಸಂವಿಧಾನವನ್ನು ಸಿದ್ದಪಡಿಸಲಾಯಿತು. ಸ್ವತಂತ್ರ ಭಾರತಕ್ಕೆಂದು ರಚಿಸಲ್ಪಟ್ಟ ಸಂವಿಧಾನವನ್ನು 1950 ಜನವರಿ 26 ರಂದು ಅಧಿಕೃತವಾಗಿ ಸ್ವೀಕರಿಸಲಾಯಿತು.  ಅಂದಿನಿಂದ ಜನವರಿ 26ನ್ನು ಪ್ರಜಾರಾಜೋತ್ಸವ/ಗಣರಾಜೋತ್ಸವನ್ನಾಗಿ ದೇಶದಲ್ಲೆಡ ಸಂಭ್ರಮಿಸಲಾಗುವುದು. ಸಂಭ್ರಮಕ್ಕೆ  ಈಗ 64 ಹರಯ.   ಕಳೆದ 63 ವರ್ಷಗಳಿಗೆ ನಮ್ಮ ಸಂವಿಧಾನವನ್ನು 100 ಅಧಿಕ ಬಾರಿ ನಾವು ತಿದ್ದುಪಡಿ ಮಾಡಿಕೊಂಡಿರುವೆವು. ಆಗಾಗ ತಿದ್ದುಪಡಿ ಮಾಡುತ್ತಲೇ ಇರುವೆವು. ಸಂವಿಧಾನದ ಕೆಲವು ಅಂಶಗಳನ್ನು ತಿದ್ದುಪಡಿ ಮಾಡುವ ಬಗ್ಗೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸಹಾ ಸೇರಿಸುವುದನ್ನು ಕಾಣಬಹುದಾಗಿದೆ.
 ನಮ್ಮ ಸಂವಿಧಾನದ ಬಗ್ಗೆ, ನಮ್ಮ ದೇಶ ಪ್ರೇಮದ ಬಗ್ಗೆ, ನಮ್ಮ ವರೆಗಿನ ಸಾಧನೆಯ ಬಗ್ಗೆ ಪ್ರತಿ ಜನವರಿ 26 ರಂದು ಹೇಳಿಕೊಳುತ್ತಾ ನಾವು ಗಣರಾಜೋತ್ಸವವನ್ನು ಆಚರಿಸುತ್ತಿರವೆವು. ಪ್ರತಿ ವರ್ಷ ಬೇರೆ ಯಾವುದಾದರು ದೇಶದ ಅಥಿತಿಯನ್ನು ಆಹ್ವಾನಿಸಿ ತಮ್ಮ ಸಾಧನೆಯನ್ನು ದೆಹಲಿಯಲ್ಲಿ ಪ್ರದಶಿ೯ಸುತ್ತಿರುವೆವು. ಗಣರಾಜೋತ್ಸವ ಪರೇಡ್ ಎಂಬುದು ನಮ್ಮ ದೇಶದ ಹೆಮ್ಮೆ ಎಂದು ನಾವು ಹೇಳಿಕೊಳ್ಳುತ್ತಿರುವೆವು.
ಕಳೆದ ಒಂದೆರಡು ವರ್ಷಗಳಲ್ಲಿ ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದು. ರಾಜಕೀಯದಲ್ಲಿ ಆಮ ಆದ್ಮೀ ಹೊಸ ಸಂಜಲನವನ್ನು ಮೂಡಿಸಿದರೆ, ಜನಹೋರಾಟದಲ್ಲಿ ಅಣ್ಣಾ ಹಜಾರೆಯ ಆಂದೋಲನ ತನ್ನ ಶಕ್ತಿಯನ್ನು ತೋರಿಸಿದೆ. ರಾಷ್ಟ್ರೀಯ ಆಹಾರ ಭಧ್ರತೆಯ ಹಕ್ಕನ್ನು ಜಾರಿಗೊಳಿಸುವ ಮೂಲಕ ಕಾ೯ ತನ್ನ ಬದ್ದತೆಯನ್ನು ತೋರಿಸಿರುವುದು. ಎಲ್ಲಾ ಅಂಶಗಳು ಭಾರತದಂತಹ ದೇಶದಲ್ಲಿ ಒಂದೊಂದು ಮೈಲಿಗಲಾಗಿ ಇರುವುದು.
ಸಲಿಂಗ ಕಾಮಿಗಳ ಬಗ್ಗೆ ಇರುವ ನಿಯಮ, 377 ವಿಧಿ, ರಾಜಕೀಯ ಮತ್ತು ಉದ್ಯೋಗ ಮೀಸಲಾತಿ, ಮಹಿಳೆಯ ರಕ್ಷಣೆ, ಇಂತಹ ಹಲವಾರು ವಿಚಾರಗಳ ಬಗ್ಗೆ ನಮ್ಮ ಎಲ್ಲಾ ನಿಯಮಗಳನ್ನು ಪ್ರಸ್ಥುತ ಪರಿಸ್ಥಿತಿಗೆ ಅನುಗುಣವಾಗಿ ಮಾರ್ಪಡಿಸುವ ಅಗತ್ಯವಿದೆ. ವಿಚಾರಗಳ ಬಗ್ಗೆ ಚೆ೯ಯೂ ಸಹಾ ಆಗುತ್ತಿರುವುದು.
ಆದರೇ 63 ವರ್ಷದ ಹಿಂದಿನ ಪರಿಸ್ಥಿತಿಗೆ ಅನುಗುಣವಾಗಿ ರಚಿಸಿದ ಸಂಪೂರ್ಣ ಸಂವಿಧಾನವನ್ನು ಮರು ವಿಮರ್ಶಗೆ ಒಳಪಡಿಸುವ ಬಗ್ಗೆ ನಾವು ಇಂದು ಚಿಂತಿಸುವ ಅಗತ್ಯವಿದೆ.  ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಸಂಪ್ರದಾಯವನ್ನು ಬಿಟ್ಟು ನಾವಿಂದು ಹೊಸತನದಲ್ಲಿ ಇಂದಿನ ಸ್ಥಿತಿಗೆ ಹೊಂದುವಂತಹ ಹೊಸ ಸಂವಿಧಾನವನ್ನು ರೂಢಿಸಿಕೊಳ್ಳುವ ಅಗತ್ಯವಿರುವುದು. ಬಗ್ಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಾವು ಚೆ೯ಯೊಂದನ್ನು ಹುಟ್ಟು ಹಾಕುವ ಅಗತ್ಯತೆ ಇರುವುದು.
ಸ್ವತಂತ್ಯ ಸಿಕ್ಕು 67 ವರ್ಷಗಳನ್ನು ಕಳೆದರು ದಲಿತರ ಮೇಲಿನ ದೌರ್ಜನ್ಯ ಒಂದು ಕಡೆ ನಡೆಯುತ್ತಲೇ ಇರುವುದು. ಅದೇ ರೀತಿ ದಲಿತರ ಹೆಸರಿನಲ್ಲಿ ಸೌಲಭ್ಯ ಪಡೆದ ವ್ಯಕ್ತಿ ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಉದಾಹರಣೆಗಳು ಇರುವವು.
ಯಾವುದೇ ರೀತಿಯ ಕಾನೂನನ್ನು ತಂದರು ಅಪರಾಧಗಳು ಹೆಚ್ಚುತ್ತಲೇ ಇರುವುದು. ಮಹಿಳೆಯರ ಮೇಲೆ ವರ್ಷದಿಂದ ವರ್ಷಕ್ಕೆ ದೌರ್ಜನ್ಯ ನಡೆಯುತ್ತಲೇ ಇರುವುದು. ಒಟ್ಟಾರೆ ನಮ್ಮ ದೇಶ ಜನರ ಹಿತಕ್ಕಿಂತ ಬಂಡವಾಳಶಾಹಿಗಳ ಹಿತಾಸಕ್ತಿಗನುಗುಣವಾಗಿಯೇ ಹೆಚ್ಚಾಗಿ ಗಮನ ಕೇಂದ್ರಿಕರಿಸಿದಂತೆ ಕಂಡು ಬರುತ್ತಿರುವುದು.
ರಾಜಕೀಯ ಪಕ್ಷಗಳು ಸಹಾ ಅಧಿಕಾರಕ್ಕೆ ಬಂದು ಅಪ್ರತ್ಯಕ್ಷವಾಗಿ ಜನರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಿರುವುದು. ಟಿವಿ, ಕಂಪ್ಯೂಟರ್, ಸೈಕಲ್, ಮೊಬೈಲ್, ಮಂಗಲಸೂತ್ರ, ದುಡ್ಡು ರೀತಿಯಾಗಿ ನೇರವಾಗಿ ಜನರೊಂದಿಗೆ ಕೊಡುಕೊಳ್ಳುವಿಕೆಯ ವ್ಯವಹಾರಕ್ಕೆ ಇಳಿದಿರುವವು. ಜನರಿಂದ ಜನರ ಕಲ್ಯಾಣಕ್ಕಾಗಿ ಆಯ್ಕೆ ಆದ ಚುನಾಯಿತ ಪ್ರತಿನಿಧಿಗಳು ನೆಂಟರ ಮನೆಗೆ ಹೋಗಿ ಬರುವವರಂತೆ ವಿವಿಧ ಭೃಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿ ಬರುತ್ತಿರುವರು ಪುನ: ಆಯ್ಕೆ ಆಗುತ್ತಿರುವರು. ಆದ್ಯಾತ್ಮ ಕೇತ್ರದ ಮಠ, ಮಂದಿರ, ಮಸೀದಿಗಳಲ್ಲಿಯೂ ವಿವಿಧ ಬಗೆಯ ಆರೋಪ ಪ್ರತ್ಯರೋಪಗಳು ಬರುತ್ತಿರುವುದು. ಸ್ವಾಮಿಗಳು ಸಹಾ ಜೈಲಿನಲ್ಲಿರುವರು. ಅತ್ಯಾಚಾರ, ಕೊಲೆ ದರೋಡೆ, ಆರೋಪಿತರು ಜೈಲಿಗೆ ಹೋಗಿ ಬರುವರು ಪುನ: ತಮ್ಮ ಕಾರ್ಯದಲ್ಲಿ ಮಗ್ನರಾಗಿರುವರು. ಆತಂರಿಕೆ ಭದ್ರತೆಗೆ ಸವಾಲಾಗಿರುವ ನಕ್ಸ್ಲಿಸಂ ದಿನೇ, ದಿನೇ ಬೇರೆ ಬೇರೆ ಹೆಸರುಗಳಲ್ಲಿ ಕಾಣಿಸಿಕೊಳ್ಳುತ್ತಿರುವರು.
ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿರುವ ನಾವು ಇಂದು ಎಲ್ಲಾ ವ್ಯವಸ್ಥೆಯಲ್ಲಿ ಭಾಗವಾಗಲು ಒಪ್ಪಿಕೊಳ್ಳುತ್ತಿರುವೆವು. ಇಲ್ಲಾ ಎಲ್ಲಾ ಗೊತ್ತಿದ್ದು ಏನು ಮಾಡಲಾಗದೆ ಅಸಹಾಯಕರಾಗಿರುವೆವು. ನಮ್ಮ ಕಾನೂನು ಸಹಾ ಅದೇ ರೀತಿಯ ವ್ಯವಸ್ಥೆಯನ್ನು ಸೃಷ್ಠಿಸಿರುವುದು. ಎಲ್ಲಾ ಹಿನ್ನಲೆಯಲ್ಲಿ ನಮ್ಮ ಸಂವಿಧಾನದ ಸಂಪೂರ್ಣ ಮರು ವಿಮಶೆ೯ ಅಗತ್ಯವೆನಿಸುವುದು.
ನಮ್ಮ ಚುನಾವಣಾ ಪದ್ದತಿ, ಕಾ೯ರದ ಕಾರ್ಯವೈಖರಿ, ಭೃಷ್ಟಾಚಾರ, ಅತ್ಯಾಚಾರ, ಹೆಚ್ಚುತ್ತಿರುವ ವಿವಿಧ ಬಗೆಯ ಅಪರಾಧಗಳು, ದೇಶದ ಭದ್ರತೆ, ಎಲ್ಲಾ ವಿಚಾರಗಳನ್ನು ಗಮನದಲ್ಲಿರಿಸಕೊಂಡು  ವಿವಿಧತೆಯಲ್ಲಿ ಏಕತೆಯಿರುವ ನಮ್ಮಂತ ದೇಶದಲ್ಲಿ ಹೊಸ ಸಂವಿಧಾನದ ಅಗತ್ಯತೆ ಕಂಡುಬರುತ್ತಿರುವುದು. ಬಗ್ಗೆ ಈಗಿನಿಂದಲ್ಲೆ ಚೆ೯ಯನ್ನು ಪ್ರಾರಂಭಿಸಿದರೆ ಮುಂದಿನ ಕೆಲವರ್ಷಗಳಲ್ಲಿ ನಾವು ಕಲ್ಪಿಸಿಕೊಳ್ಳುವ ರೀತಿಯಲ್ಲಿ ಸಂವಿಧಾನ ಬರಬಹುದಾಗಿದೆ.
ವ್ಯಕ್ತಿಯೊಬ್ಬ ಸರಾಸರಿ 60 ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲನು. ಅದನ್ನು ತಿಳಿದೆ ಕಾ೯ರ್  ನಿವೃತ್ತಿ ವಯಸ್ಸನ್ನು 58-60 ವರ್ಷಕ್ಕೆ ನಿಗದಿಪಡಿಸಿದೆ. ಅದೇ ರೀತಿ 63 ವರ್ಷದ ಹಳೆಯ ಸಂವಿಧಾನಕ್ಕೆ ಒಂದು ನಿವೃತ್ತಿ ಎಂಬುದು ಇರುವುದು ಅಗತ್ಯ. ಬಗ್ಗೆ ಚೆ೯ ಪ್ರಾರಂಭವಾಗುವ ಅಗತ್ಯವಿದೆ.
                                                                                                                                                   
ವಿವೇಕ್ ಬೆಟ್ಕುಳಿ ಕುಮಟಾ

Friday, December 27, 2013

ಕನ್ನಡ ಸಾಹಿತ್ಯ ಲೋಕಕ್ಕೆ ಮೂರು ಯುವ ಕವಿಗಳ ಕವನ ಸಂಕಲನ ಅರ್ಪಣೆ


ಕನ್ನಡ ಸಾಹಿತ್ಯ ಲೋಕಕ್ಕೆ ಮೂರು ಯುವ  ಕವಿಗಳ  ಕವನ ಸಂಕಲನ ಅರ್ಪಣೆ
ಶರತ್ ಚಕ್ರವರ್ತಿ , ರಾಜೇಂದ್ರ ಪ್ರಸಾದ್ , ಪ್ರವರ ಕೊಟ್ಟೂರು




ದೆಹಲಿಯಲ್ಲಿ 10 ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ- 2013



ಚುಮ್ಮು ಚುಮ್ಮುಚಳಿಯ ವಾತಾವರಣದ ನಡುವೆ ನವದೆಹಲಿಯ ಆರ್ ಕೆ ಪುರಂ ದೆಹಲಿ ಕನಾ೯ಟಕ

ಸಂಘದ ಸಭಾಭವನದಲ್ಲಿ 10 ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ ಇತ್ತಿಚೆಗೆ

ನಡೆಯಿತು. ಹೃದಯವಾಹಿನಿ ಕನ್ನಡ ಬಳಗ ಮತ್ತು ದಿಲ್ಲಿ ಗಣೇಶ ಮಿತ್ರ ಮಂಡಳಿ ಹಮ್ಮಿಕೊಂಡ

ಈ ಸಮ್ಮೇಳನವನ್ನು ಯಕ್ಷಗಾನ ಕಲಾವಿದರಿಂದ ಉದ್ಘಾಟಿಸಿದ್ದು ವಿಶೇಷವಾಗಿತ್ತು.

ಪ್ರಾರಂಭದಲ್ಲಿಯೇ ಬಾಲಮಿತ್ರ ಪ್ರತಿಷ್ಠಾನ ಸರಳೇಬೆಟ್ಟು, ಮಣಿಪಾಲ ಇವರಿಂದ ಚಕ್ರವೂಹ್ಯ

ಯಕ್ಷಗಾನ ಪ್ರದಶಿ೯ತವಾಯಿತು.

ಈ ಸಮ್ಮೇಳನದ ಅಧ್ಯಕ್ಷರಾಗಿ ಉತ್ತರಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್

ಅಧ್ಯಕ್ಷರಾದ ರೋಹಿದಾಸ ನಾಯಕ ಅವರು ಆಯ್ಕೆಯಾಗಿದ್ದರು.

ಸಮ್ಮೇಳನದಲ್ಲಿ ಪ್ರಾಸ್ಥಾವಿಕವಾಗಿ ಹೃದಯವಾಹಿನಿ ಕನ್ನಡ ಬಳಗದ ಕೆ.ಪಿ ಮಂಜುನಾಥ ಅವರು

ಮಾತನಾಡಿ ಹೊರ ರಾಜ್ಯ ಮತ್ತು ಹೊರ ದೇಶದಲ್ಲಿ ಕನ್ನಡವನ್ನು ಬೆಳೆಸುವ ಹಿನ್ನಲೆಯಲ್ಲಿ ಕಳೆದ

ಹತ್ತು ವರ್ಷಗಳಿಂದ ನಡೆಸುಕೊಂಡು ಬರುತ್ತಿದ್ದ ಚಟುವಟಿಕೆಯನ್ನು ವಿವರಿಸಿದರು.






ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಮತ್ತು

ದೆಹಲಿ ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷ ಶರೀಪ ಅವರು ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ರೋಹಿದಾಸ ನಾಯಕ ಮಾತನಾಡಿ, ಈ ಸಮ್ಮೇಳನದ ದೇಶದ ರಾಜಧಾನಿಯಲ್ಲಿ

ನಡೆಯುತ್ತಿರುವುದರಿಂದ ಈ ಸಮ್ಮೇಳನಕ್ಕೆ ಹೆಚ್ಚಿನ ಮಹತ್ವ ಇರುವುದು. ಕನ್ನಡ ಭಾಷೆಯೂ

ಸಹ ರಾಷ್ಟ್ರ ಭಾಷೆಯಂತೆಯೇ ಮಹತ್ವ ಪಡೆದಿರುವ ಭಾಷೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕನ್ನಡಿಗರು ತಮ್ಮ ಭಾಷೆಗಾಗಿ ಮತ್ತು ಗಡಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದ ಬಗ್ಗೆ ಕಳವಳ

ವ್ಯಕ್ತಪಡಿಸಿದರು. ಕನ್ನಡ ಭಾಷೆ ಬೆಳದು ಬಂದ ಹಿನ್ನಲೆಯನ್ನು ಸಂಪೂರ್ಣವಾಗಿ ವಿವರಿಸಿದರು.



ತಮ್ಮ ಭಾಷಣದ ಕೊನೆಯಲ್ಲಿ ಇತಿಹಾಸ ನಗರ, ಇಂದ್ರಪ್ರಸ್ಥವಾದ ದೆಹಲಿಯಲ್ಲಿ ಈ ಸಮ್ಮೇಳನ

ನಡೆಯುತ್ತಿರುವುದರಿಂದ ಇದು ಕನ್ನಡಿಗೆರಿಗೆ ಅಭಿಮಾನದ ಸಂಗತಿ ಸಹಾ ಆಗಿರುವುದು. ಈ ಸಮ್ಮೇಳನ

ಚಿರಕಾಲ ಎಲ್ಲರ ನೆನಪಿನಲ್ಲಿರುವಂತೆ ಆಗಲಿ ಎಂದು ಆಶಿಸಿದರು. ತಮ್ಮ 15 ನಿಮಿಷದ ಭಾಷಣದಲ್ಲಿ

ಅವರು ಕನ್ನಡ ನಾಡು ನುಡಿಯ ಬಗ್ಗೆ ಅದರ ಘನತೆಯ ಬಗ್ಗೆ ವಿಸ್ತಾರವಾಗಿ ತಿಳಿಸಿದರು.

ಸಮ್ಮೇಳನದಲ್ಲಿ ನೂಪುರ ಕಲಾ ಸಂಸ್ಥೆ ದಾವಣಗೆರೆ ಇವರಿಂದ ಪ್ರದಶಿ೯ತವಾದ ಜಾನಪದ ನೃತ್ಯ

ಮತ್ತು ವಚನ ವೈಭವ, ಕುಮಾರಿ ಶ್ವೇತ ಮತ್ತು ತಂಡ ತರಿಕೆರೆ ಇವರಿಂದ ನಡೆದ ವೀರಗಾಸೆ, ರೂಪ

ಗರೀಶ್ ನಿದೇ೯ಶನದಲ್ಲಿ ನಡೆದ ನೃತ್ಯ ರೂಪಕ, ಕುಮಾರಿ ಕೃತಿಕಾ ದಯಾನಂದ್ರವರಿಂದ ನಡೆದ ನೃತ್ಯ

ಪ್ರದರ್ಶನ, ಸ್ವಾಮಿ ಗ್ರೂಫ್ ಬೆಂಗಳೂರು-ಗೋನಾಸ್ವಾಮಿ ಇವರತಂಡದಿಂದ ಹಾಸ್ಯ ಸಂಜೆ

ಕಾರ್ಯಕ್ರಮಗಳು ನೆರೆದಿದ್ದ ಜನರನ್ನು ಮನಸೂರೆಗೊಳಿಸಿದವು.

ಜಯಪ್ರಕಾಶ ರಾವ್ ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಶ್ರೀ

ಯಾಕೂಬ್ ಖಾದರ್ ಗುಲ್ವಾಡಿ ಶ್ರೀ ಎನ್ ಆರ್ ಗಜು, ಶ್ರೀಮತಿ ವಿಜಯಲಕ್ಷ್ಮೀ ನಾಯಕ್, ಶ್ರೀಮತಿ

ಸಂಧ್ಯಾ ಭಟ್, ಶ್ರೀಮತಿ ಪ್ರಮೀಳಾ ಮಹಾದೇವ್, ಶ್ರೀ ಎನ್ ಮಹಾದೇವ್ ಇವರುಗಳು ತಮ್ಮ

ಕವನವನ್ನು ವಾಚಿಸಿದರು.

ಮಾಧ್ಯಮ ಮತ್ತು ಹೊರನಾಡು ಕನ್ನಡಿಗರ ಗೋಷ್ಠಿಯಲ್ಲಿ ಶ್ರೀ ಶ್ರೀನಿವಾಸ ಕರಿಯಪ್ಪ,

ಶ್ರೀಮತಿ ರೇಣುಕಾ ನಿಡಗುಂದಿ, ಶ್ರೀ ಶಿವಣ್ಣ ಶೀತರ್, ಶ್ರೀ ಗಂಗಾಧರ ಕೊಪ್ಪ, ಅವರು

ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಶ್ರೀ ಆಸ್ಕರ ಫೆನಾ೯೦ಡೀಸ್ ಅವರು ಭಾಗವಹಿಸಿದ್ದರು. ಈ

ಸಂದರ್ಭದಲ್ಲಿ 2013 ರ ಹೃದಯವಂತರು ಪ್ರಶಸ್ತಿಯನ್ನು ಶ್ರೀ ಬಿ.ಟಿ ಬಂಗೇರಾ, ಶ್ರೀ ರಮೇಶ ಡಿ.ಸಿ

ಬೆಂಗಳೂರು, ಶ್ರೀ ಭಾಸ್ಕರ ಶೆಟ್ಟಿ, ಶ್ರೀ ಎಂ ಮಹಾದೇವ್ ಗುಲಬಗಾ, ಶ್ರೀ ಎ. ಸಯ್ಯದ್ ಅಸ್ಗರ್,

ಬೆಂಗಳೂರು. ಶ್ರೀ ಸೆಲ್ವರಾಜ್ ಕೆ ಬೆಂಗಳೂರು, ಶ್ರೀ ಪಿ ರಾಜಪ್ಪ ವಿಶ್ವಕರ್ಮ. ಮೈಸೂರು ಇವರಿಗೆ ನೀಡಿ

ಗೌರವಿಸಲಾಯಿತು.



ಬಾಲಮಿತ್ರ ಪ್ರತಿಷ್ಠಾನ ಸರಳೇಬೆಟ್ಟು ಮಣಿಪಾಲ ಇವರಿಂದ ಚಕ್ರವೂಹ್ಯ ಯಕ್ಷಗಾನ 
ಪ್ರದರ್ಶನ

















ವಿವೇಕ ಬೆಟ್ಕುಳಿ-7376703047

Friday, November 2, 2012

ಸುದ್ದಿ - - By Arun Javgal


ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕನ್ಮಡ ಪುಸ್ತಕ ಪ್ರಾದಿಕಾರದವರು ಮುಂದಿನ 10 ದಿನಗಳವರೆಗೆ ಕನ್ನಡ ಹೊತ್ತಗೆಯ 

ಅಂಗಡಿಯನ್ನು ಹಾಕಿದ್ದಾರೆ. ನೀವೆನಾದ್ರು ವಿಮಾನ ನಿಲ್ದಾಣಕ್ಕೆ ಹೋದರೆ ಈ ಅಂಗಡಿಯಿಂದ ಕನ್ನಡದ ಹೊತ್ತಿಗೆಯನ್ನು 

ಕೊಳ್ಳುವುದನ್ನು ಮರೆಯದಿರಿ. ಈ ವಿಶಯವನ್ನು ವಿಮಾನ ನಿಲ್ದಾಣಕ್ಕೆ ಹೋಗೊ ನಿಮ್ಮ ಸ್ನೇಹಿತರು/ಸಂಬಂದಿಕರಿಗೂ ತಿಳಿಸಿ.

ಸುದ್ದಿ - 

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...