Showing posts with label ವಂಶ ವೃಕ್ಷ. Show all posts
Showing posts with label ವಂಶ ವೃಕ್ಷ. Show all posts

Wednesday, July 22, 2015

ವಂಶ ವೃಕ್ಷ ಕಾದಂಬರಿ ಕುರಿತಾದ ಅನಿಸಿಕೆಗೆ - ಶಿವಕುಮಾರ್

ನಮಸ್ಕಾರ !!
ವಂಶವೃಕ್ಷಕ್ಕೆ ಐವತ್ತು ವರ್ಷಗಳು ತುಂಬಿರಬಹುದು ಆದರೆ ನಾನು ಅದನ್ನು ಓದಿದ್ದು ನಾಲ್ಕು ವರ್ಷಗಳ ಹಿಂದೆ !! ನಂತರ ಐದು ಬಾರಿ ಇದನ್ನು ಓದಿದ್ದೆನೆ. ನನ್ನ ಹುಟ್ಟು ಹಬ್ಬಕ್ಕೆ ನನ್ನ ಆಪ್ತ ಗೆಳೆಯ ಶಂಕರ್ ಕವಲು ಕಾದಂಬರಿಯನ್ನು ಉಡುಗೊರೆಯಾಗಿ ಕೊಟ್ಟಿದ್ದ. ಆಗ ನಾನು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. (ಭೈರಪ್ಪನವರು ಇಲ್ಲೇ ಕಾರ್ಯ ನಿರ್ವಹಿಸಿ ನಿವೃತ್ತರಾದರು) ಆಗಿನಿಂದ ನಾನು ಭೈರಪ್ಪನವರ ಪುಸ್ತಕಗಳನ್ನು ಓದಲು ಶುರು ಮಾಡಿದ್ದು. ಅಲ್ಲಿದ್ದ ಶೀಘ್ರಲಿಪಿಗಾರರಾದ ಜಗದೀಶ್ ಭೈರಪ್ಪನವರ ಬಗ್ಗೆ ಬಹಳ ಹೇಳುತ್ತಿದ್ದರು (ಇವರ ಹೆಸರನ್ನು ಭೈರಪ್ಪನವರು ತಮ್ಮ ಭಿತ್ತಿ ಪುಸ್ತಕದಲ್ಲಿ
ನೆನಪಿಸಿಕೊಂಡಿದ್ದಾರೆ) ಮತ್ತು ಭೈರಪ್ಪನವರ ಅಭಿಮಾನಿ ಹಾಗು ಅವರ ಬೋಧನೆಯನ್ನು ಕೇಳಿದ್ದ ಮತ್ತು ಈಗ ಅದೇ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವ ನನ್ನ ಗುರುಸಮಾನರಾದ ಡಾ. ಗೌರಮ್ಮ ಭೈರಪ್ಪನವರ ಬಗ್ಗೆ ಹೇಳುತ್ತಿದ್ದಲ್ಲದೆ ಅವರ ಕಾದಂಬರಿಗಳ ಬಗ್ಗೆ ನನ್ನೊಡನೆ ಚರ್ಚಿಸುತ್ತಿದರು. ನಂತರ ನಾನು ನ್ಯಾಯಾಂಗ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ನಂತರ ಎರಡು ವರ್ಷಗಳ ಹಿಂದೆ ಚಾಮರಾಜನಗರಕ್ಕೆ ವರ್ಗವಾದೆ. ದಿನಾ ಬೆಳಿಗ್ಗೆ ೭. ೩೦ ಗಂಟೆಯ ರೈಲಿನಲ್ಲಿ ಪ್ರಯಾಣ ಮತ್ತೆ ಸಂಜೆ ೬ ಗಂಟೆಗೆ ವಾಪಾಸ್ಸು ಮೈಸೂರಿಗೆ ರೈಲಿನಲ್ಲಿ ಬರುತ್ತಿದ್ದೆ. ಹೋಗುವಾಗ ಬರುವಾಗ ಒಂದೂವರೆ ತಾಸಿನ ಸಮಯದಲ್ಲಿ ಭೈರಪ್ಪನವರ ಕಾದಂಬರಿಗಳನ್ನು ಓದುತ್ತಿದ್ದೆ. ರೈಲು ನಂಜನಗೂಡು ಮಾರ್ಗವಾಗಿ ಹೋಗುವಾಗ ಪ್ರತಿದಿನ ಕಾತ್ಯಾಯನಿ ಶೋತ್ರಿಗಳು ಮತ್ತಿತರೇ ಪಾತ್ರಗಳು ಜ್ಞಾಪಕಕ್ಕೆ ಬರುತ್ತವೆ. ಇಲ್ಲಿ ಇನ್ನೊಂದು ಹೇಳಲೇ ಬೇಕಾದ ವಿಚಾರವಿದೆ. ನೀವು ಯಾರಾದರು ನಂಜನಗೂಡಿಗೆ ಅಥವಾ ಚಾಮರಾಜನಗರಕ್ಕೆ ಮೇಲೆ ತಿಳಿಸಿದ ರೈಲಿನಲ್ಲಿ ಪ್ರಯಾಣ ಮಾಡುವ ಸಂಧರ್ಭ ಬಂದರೆ ಐದನೇ ಬೋಗಿಗೆ ಬಂದರೆ ಸೀಟ್ ನಂಬರ್ ೪೦ ರಿಂದ ೬೮ ರ ವರೆಗೆ ಭೈರಪ್ಪನವರ ಕಾದಂಬರಿಗಳ ಬಗ್ಗೆ ಮತ್ತು ಪಾತ್ರಗಳ ಬಗ್ಗೆ ಪ್ರತಿ ನಿತ್ಯ ಚರ್ಚೆ ನಡೆಯುತ್ತಲೇ ಇರುವುದನ್ನು ನೋಡಬಹುದು ! ನೀವು ಪಾಲ್ಗೊಳ್ಳಬಹುದು, ಇದರಲ್ಲಿ ಇರುವವರೆಲ್ಲ ವೃತ್ತಿಯಲ್ಲಿ ವಿವಿಧ ಇಲ್ಲಖೆಗಳವರು. ಭೈರಪ್ಪನವರ ಪುಸ್ತಕಗಳು ಇಲ್ಲಿ ಸರ್ಕ್ಯುಲೇಟ್ ಆಗುತ್ತಿರುತ್ತದೆ. ಹೀಗೆ ನಾವೆಲ್ಲಾ ಭೈರಪ್ಪನವರ ಪುಸ್ತಕಗಳನ್ನು ಓದಿ ಚರ್ಚಿಸುತ್ತಿರುತ್ತೇವೆ. ರೈಲು ನಂಜನಗೂಡಿನ ಸೇತುವೆ ದಾಟಿ ಗುಂಡ್ಲು ಹೊಳೆಯನ್ನು ದಾಟಿ ಹೋಗುವುದರೊಳಗೆ ಕಾತ್ಯಾಯಿನಿ ದಿನನಿತ್ಯ ಇದೇ ರೈಲಿನಲ್ಲಿ ಚಲಿಸಿರಬಹುದು ಎಂಬ ಭಾವ ಬಹುತೇಕರನ್ನು ಕಾಡಿದೆ. ಕೆಲವೊಮ್ಮೆ ಕಪಿಲಾ ನದಿಯಲ್ಲಿ ನೀರು ತುಂಬಿ ಹರಿಯುವಾಗ ಶೋತ್ರಿಗಳ ಮಗ ಹೀಗೆ ನದಿ ನೀರು ತುಂಬಿ ಹರಿಯುವಾಗ ಮೃತ ಪಟ್ಟಿರ ಬಹುದೇ ಎಂಬ ಆಲೋಚನೆ ಬರುತ್ತದೆ. ಇದು ನನ್ನೊಬ್ಬನ ಕಲ್ಪನೆಯಲ್ಲ. ನನ್ನೊಡನೆ ಈ ವಿಚಾರಗಳ ಬಗ್ಗೆ ಬಹುತೇಕರು ಚರ್ಚಿಸಿದ್ದಾರೆ. ಇವರು ಯಾರೂ ಫೇಸ್ ಬುಕ್ ನಲ್ಲಿ ಇಲ್ಲ.. ಸ್ಮಾರ್ಟ್ ಫೋನ್ ಇವರೆಲ್ಲರ ಬಳಿ ಇಲ್ಲ ! ಆದರೆ ಭೈರಪ್ಪನವರ ಬಗ್ಗೆ ಈ ಫೇಸ್ಬುಕ್ ಗ್ರೂಪ್ ನಲ್ಲಿ ಆಗುವ ಚರ್ಚೆಗಳಿಗಿಂತಲೂ ವಿಭಿನ್ನವಾದ ಚರ್ಚೆಗಳು ಆಗುತ್ತವೆ. ಇನ್ನು ಅನೇಕ ವಿಚಾರಗಳು ಇವೆ. ವಂಶವೃಕ್ಷಕ್ಕೆ ಐವತ್ತು ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ವಂಶವೃಕ್ಷದ ಬಗ್ಗೆ ಒಂದುದಿನ ಮುಂದಿನವಾರದಲ್ಲಿ ನಾವೆಲ್ಲಾ ರೈಲಿನಲ್ಲಿ ಚರ್ಚೆ ಮಾಡಿ, ನಡೆದ ಸಂಗತಿಯನ್ನು ಇಲ್ಲಿ ಹಾಕುತ್ತೇನೆ. ಆ ಸಮದಯದ ಫೋಟೋ ತೆಗೆದು ಈ ಗ್ರೂಪಿನಲ್ಲಿ ಹಾಕುತ್ತೇನೆ.

 ಡಾ|| ಶಿವಕುಮಾರ್

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...