Showing posts with label ಜಾರುಬೆಣ್ಣೆಯಿದೆ ಕೈಯೊಳಗೆ. Show all posts
Showing posts with label ಜಾರುಬೆಣ್ಣೆಯಿದೆ ಕೈಯೊಳಗೆ. Show all posts

Monday, March 19, 2012

ಜಾರುಬೆಣ್ಣೆಯಿದೆ ಕೈಯೊಳಗೆ

ಜಾರುಬೆಣ್ಣೆಯಿದೆ ಕೈಯೊಳಗೆ
ಅಂಬೆಗಾಲನಡೆ! ಧೂಳಡರಿದ ಮೈ!
ಮೊಸರಿನ ಕೊಸರಿದೆ ಮುಖದೊಳಗೆ!


ಕನ್ನಡಿ ಕೆನ್ನೆ! ನೇರಿಲೆ ಕಣ್ಣು !
ಹಣೆಯಲಿ ಗೋರೋಚನ ತಿಲಕ !
ನೊಸಲಿನ ತುಂಬ ಗುಂಗುರಿನುಂಗುರ
ಮುಖಕಮಲಕೆ ಕವಿದಿವೆ ಭೃಂಗ ||


ಕೊರಳಲಿ ತಾಯತಿ! ಹುಲಿಯುಗುರಿನ ಸರ !
ಬರುತಿದೆ ಶ್ಯಾಮಾಂಗನ ಡೋಲಿ |
ಗಾಳಿಗಾಡುತಿದೆ ಸಿರಿ ಮುಂಗುರುಳು
ಮಧು ಹೀರಿದ ದುಂಬಿಯ ಹೋಲಿ || 


-ಹೆಚ್. ಎಸ್ ವೆಂಕಟೇಶ ಮೂರ್ತಿ (ಉತ್ತರಾಯಣ ಮತ್ತು.... ಕವನ ಸಂಕಲನದಿಂದ)

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...