Showing posts with label ಲೇಖನ. Show all posts
Showing posts with label ಲೇಖನ. Show all posts

Monday, December 11, 2023

ಆನೆಗಳ ಸಭೆಯ ತೀರ್ಮಾನದಂತೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರ. - ಗುರುಮೂರ್ತಿ ಜೋಗಿಬೈಲು.

ಗೆ,

ಮಾನ್ಯ  ಮುಖ್ಯಮಂತ್ರಿಗಳು

ಕರ್ನಾಟಕ   ಸರ್ಕಾರ.

 ಮಾನ್ಯ   ಅರಣ್ಯ  ಸಚಿವರು

ಕರ್ನಾಟಕ  ಸರ್ಕಾರ .

ಮತ್ತು

ಹಿರಿಯ ಅರಣ್ಯ   ಅಧಿಕಾರಿಗಳು.

ಕರ್ನಾಟಕ   ಸರ್ಕಾರ .

 

ಯಿಂದಾ,

ಕಾಡಿನ   ಆನೆಗಳು.

 

ಮಾನ್ಯರೆ,

ಇತ್ತೀಚೆಗೆ   ನಮ್ಮ   ಗುಂಪಿನ  ಆನೆಯೊಂದನ್ನು   ಸೆರೆ  ಹಿಡಿಯುವ   ಕಾರ್ಯಾಚರಣೆಯಲ್ಲಿ  ಆನೆ  ಮರಣಿಸಿರುವುದು   ತಮ್ಮ  ಗಮನಕ್ಕೆ  ಬಂದಿದೆ   ಎಂದು  ಭಾವಿಸುತ್ತೇವೆ.   ಅಂತಹುದೇ   ಕಾರ್ಯಾಚರಣೆಯಲ್ಲಿ  ಮನುಷ್ಯರು   ಸೆರೆ  ಹಿಡಿದು   ಹಿಂಸಿಸಿ   ಸಾಕಿಕೊಂಡು  "ಅರ್ಜುನ"   ಎಂದು ಹೆಸರಿಟ್ಟುಕೊಂಡಿದ್ದ  ಆನೆಯೂ  ಮರಣಿಸಿದೆಯಷ್ಟೆ.

ಅದಕ್ಕಾಗಿ   ತಾವು ಸಂತಾಪ  ವ್ಯಕ್ತಪಡಿಸಿರುವ   ಸಂಗತಿ ತಿಳಿಯಿತು.  ತಮ್ಮ  ಸೂಕ್ಷ್ಮತೆಗೆ  ಅಭಾರಿಗಳಾಗಿದ್ದೇವೆ.

 ಮನುಷ್ಯ  ಲೋಕದ ತಾರತಮ್ಯದ ರೂಡಿಯಂತೆ  ಎರಡೂ  ಆನೆಗಳ   ಸಾವಿನ  ಬಗ್ಗೆಯೂ  ತಾರತಮ್ಯ ದಿಂದ  ಪ್ರತಿಕ್ರಿಯಿಸಿರುವುದು   ವಿಷಾದನೀಯ.

 ಕಾಡಿನ  ಆನೆಗಳಾದ   ನಮ್ಮ  ಬದುಕು   ಇಂದು   ಅತ್ಯಂತ  ಸಂಕಷ್ಟದಲ್ಲಿದೆ.   ನಾವು  ಒಡಾಡಿಕೊಂಡಿದ್ದ  ಬಹಳಷ್ಟು   ಪ್ರದೇಶಗಳು   ಕೃಷಿಗಾಗಿ,   ರಸ್ತೆಗಳ   ನಿರ್ಮಾಣಕ್ಕಾಗಿ,   ವಿವಿಧ   ಅಭಿವೃದ್ಧಿ  ಹೆಸರಿನ  ಯೋಜನೆಗಳಿಗಾಗಿ  ಬಳಸಲ್ಪಟ್ಟಿವೆ.   ನಾವು  ಓಡಾಡುತ್ತಿದ್ದ

ದಾರಿಗಳಲ್ಲಿ   ಬೇಲಿಗಳು   ನಿರ್ಮಾಣವಾಗಿವೆ.  ನಮ್ಮ  ಕಾಡಿನ  ಪ್ರದೇಶವು   ನಿರಂತರವಾಗಿ  ಕಡಿಮೆಯಾಗುತ್ತಿರುವುದರಿಂದ    ನಮ್ಮ   ಗುಂಪುಗಳು   ಅನಿವಾರ್ಯವಾಗಿ   ಆಹಾರ ಹುಡುಕುತ್ತಾ   ಕೃಷಿ  ಪ್ರದೇಶಗಳಿಗೆ  ಬರುವಂತಾಗುತ್ತಿದೆ.   ಇದು   ಅಲ್ಲಿ ವಾಸಮಾಡುತ್ತಿರುವ  ಮನುಷ್ಯರು   ಮತ್ತು  ನಮ್ಮ  ನಡುವಿನ ಸಂಘರ್ಷಕ್ಕೆ   ಕಾರಣವಾಗುತ್ತಿದೆ.  ಇದು  ನಮ್ಮವರ  ಮತ್ತು   ಮನುಷ್ಯರ  ಜೀವನಷ್ಟಕ್ಕೆ   ಕಾರಣವಾಗುತ್ತಿದೆ.

 

ಮನುಷ್ಯರಂತೆಯೇನಾವು  ಆನೆಗಳೂ  ಮತ್ತು   ಎಲ್ಲಾ  ಜೀವಿಗಳಿಗೂ  ಕೂಡ    ಭೂಮಿಯ ಮೇಲೆ ಬದುಕುವ  ಹಕ್ಕು   ಇದೆ ಎಂಬುದನ್ನು  ತಾವುಗಳು   ಒಪ್ಪುತ್ತೀರಿ    ಎಂದು   ಭಾವಿಸುತ್ತೇವೆ.

ಅಂತೆಯೇ   ಕಾಡಿನಲ್ಲಿ  ಸ್ವಾತಂತ್ರ್ಯವಾಗಿ  ಬದುಕಿರುವ   ನಮ್ಮನ್ನು  ಬಲಾತ್ಕಾರವಾಗಿ  ಬಂಧಿಸಿ    ಹಿಂಸಿಸಿ   ಪಳಗಿಸಿಕೊಂಡು  ನಿಮ್ಮ   ಕೆಲಸಗಳಿಗಾಗಿ  ಆಡಂಬರದ  ಮೆರವಣಿಗೆಗಳಿಗಾಗಿ   ಬಳಸಿಕೊಳ್ಳುವುದು   ನಮ್ಮ   ಬದುಕುವ   ಹಕ್ಕಿನ  ಸ್ಪಷ್ಟ   ಉಲ್ಲಂಗನೆಯಾಗಿದೆ.

 

  ಎಲ್ಲಾ   ಸಮಸ್ಯೆಗಳಿಗೂ   ಶಾಶ್ವತ   ಪರಿಹಾರ   ರೂಪಿಸಬೇಕೆಂದು  ಮೂಲಕ   ವಿನಂತಿಸುತ್ತಿದ್ದೇವೆ.

 

ನಮ್ಮ   ಹಕ್ಕೊತ್ತಾಯಗಳು. 

*  ಕಾಡಿನಲ್ಲಿ   ನಾವು ವಾಸಿಸುತ್ತಿರುವ   ಪ್ರದೇಶಗಳನ್ನು  ನಮಗಾಗಿ  ಮತ್ತು ಇತರ   ಕಾಡಿನ ಜೀವಿಗಳಿಗಾಗಿ  ಬಿಟ್ಟುಕೊಡಬೇಕು. 

*ನಾವು  ವಾಸಿಸುವ   ಮತ್ತು  ಆಹಾರಕ್ಕಾಗಿ  ಓಡಾಡುವ    ದಾರಿಗಳನ್ನು   ಗುರುತಿಸಿ,      ಪ್ರದೇಶದಲ್ಲಿ   ಕೃಷಿ   ಮಾಡಿಕೊಂಡು   ಬದುಕುತ್ತಿರುವ  ರೈತ    ಜಮೀನುಗಳನ್ನು    ಸೂಕ್ತ   ಬೆಲೆ  ನೀಡಿ   ಕೊಂಡುಕೊಂಡು  ಕಾಡಿಗೆ  ಸೇರಿಸಬೇಕು.

 *ನಾವು   ವಾಸಿಸುತ್ತಿರುವ   ಪ್ರದೇಶದಲ್ಲಿ   ಯಾವುದೇ  ಅಭಿವೃದ್ಧಿ  ಯೋಜನೆಗಳನ್ನು   ಕೈಗೊಳ್ಳುವುದನ್ನು   ನಿಲ್ಲಿಸಬೇಕು.

 *   ನಾವು  ವಾಸಿಸುವ   ಆಸುಪಾಸಿನಲ್ಲಿ  ಇರುವ   ಜನರಿಗೂ   ನಮಗೂ  ಸಂಘರ್ಷ ವಾಗದಂತೆ  ಸೂಕ್ತ   ಮುನ್ನೆಚ್ಚರಿಕೆ   ಕ್ರಮಗಳನ್ನು  ಕೈಗೊಳ್ಳಬೇಕು

*  ನಮ್ಮನ್ನು  ಸೆರೆಹಿಡಿದು   ಹಿಂಸಿಸಿ   ಪಳಗಿಸುವ  ಪರಿಪಾಟವನ್ನು  ಸೂಕ್ತ  ಕಾನೂನು   ರೂಪಿಸುವ   ಮೂಲಕ  ತಡೆಗಟ್ಟಿ    ನಮ್ಮ   ಬದುಕುವ   ಹಕ್ಕನ್ನು   ಖಾತರಿಗೊಳಿಸಬೇಕು

*ನಮ್ಮನ್ನು   ಕೆಲಸಕ್ಕಾಗಿ,   ಮೆರವಣಿಗೆಗಳಿಗಾಗಿ   ಮತ್ತು   ಮನರಂಜನೆಗಾಗಿ   ಬಳಸುವುದನ್ನು   ನಿಷೇಧಿಸಬೇಕು.

 ಪರಿಸರ  ಪ್ರವಾಸೋದ್ಯಮದ  ಹೆಸರಲ್ಲಿ  ನಮ್ಮ   ಪ್ರದೇಶಕ್ಕೆ  ಬಂದು   ತೊಂದರೆ ನೀಡುವುದನ್ನು  ನಿಲ್ಲಿಸಬೇಕು.   ನಮಗೂ  ಸ್ವತಂತ್ರ್ಯ ವಾಗಿ   ಬದುಕುವ  ಹಕ್ಕು   ಇದೆ   ಎಂಬುದನ್ನ   ಗೌರವಿಸಬೇಕು

  ನಮ್ಮ      ಎಲ್ಲಾ   ಹಕ್ಕೊತ್ತಾಯಗಳನ್ನು    ಪರಿಗಣಿಸಿ    ಸೂಕ್ತ   ಕ್ರಮ  ಕೈಗೊಳ್ಳಬೇಕೆಂದು      ಮೂಲಕ  ಒತ್ತಾಯಿಸುತ್ತಿದ್ದೇವೆ.

 

ಇಂತಿ   ತಮ್ಮ  ಸಹಜೀವಿಗಳಾದ

ಕಾಡಿನ  ಆನೆಗಳು.

 

(   ನಮ್ಮ   ಮನವಿಯನ್ನು  ಸರ್ಕಾರಕ್ಕೂ   ಮತ್ತು   ನಮ್ಮ   ಪರವಾಗಿ ಚಿಂತಿಸುವವರ  ಗಮನಕ್ಕೂ  ತರಬೇಕಾಗಿ  ವಿನಂತಿ.

  ಬೆರಳಚ್ಚಿಸಿದವರು.  - ಗುರುಮೂರ್ತಿ  ಜೋಗಿಬೈಲು. )


ರಾಜನ ಮೂರು ಪ್ರಶ್ನೆಗಳು... ⁉ ( ಸಂಗ್ರಹ)

 - ರಾಜನ ಮೂರು ಪ್ರಶ್ನೆಗಳು... ⁉

ಪ್ರತಿದಿನವೂ ಶ್ರದ್ಧೆಯಿಂದ ಭಗವಂತನನ್ನು ಪೂಜಿಸುವವರೂ ಕೂಡಾ ಭಗವಂತ ನೆಂದರೆ ಏನು? ಯಾರು? ಎನ್ನುವ ಪ್ರಶ್ನೆಗೆ ಉತ್ತರಿಸಲಾರರು(ಬಹುಶಃ ಈ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು)

ಈ ಕಥೆಯನ್ನು ಕೇಳಿ --

ಒಬ್ಬ ರಾಜನಿಗೆ ಮೂರು ಅರ್ಥವಾಗದ ಪ್ರಶ್ನೆಗಳು ಬಹುವಾಗಿ ಕಾಡುತ್ತಿದ್ದವು --

೧  - ದೇವರು ಯಾವ ಕಡೆ ನೋಡುತ್ತಾನೆ?

೨  - ದೇವರು ಎಲ್ಲಿರುತ್ತಾನೆ?

೩  - ದೇವರು ಏನು ಮಾಡುತ್ತಾನೆ?

ಈ ಮೂರು ಪ್ರಶ್ನೆಗಳಿಗೆ ಎಷ್ಟು ಯೋಚಿಸಿದರು ಸರಿಯಾದ ಉತ್ತರ ದೊರಕಲಿಲ್ಲ ದರ್ಬಾರಿನಲ್ಲಿ ರಾಜನು ಎಲ್ಲರೊಡನೆ  ಸಮಾವೇಶಗೊಂಡು ಅಲ್ಲಿ ಹಾಜರಿದ್ದ ಎಲ್ಲ ಪಂಡಿತರು ಮೇಧಾವಿಗಳನ್ನುದ್ದೇಷಿಸಿ ಈ ಎಲ್ಲಾ ಪ್ರಶ್ನೆಗಳಿಗೆ

ಸರಿಯಾದ ಉತ್ತರ ಕೊಟ್ಟವರಿಗೆ ಸೂಕ್ತವಾದ ಬಹುಮತಿಯನ್ನು ಕೊಡುವುದಾಗಿಯೂ ತಪ್ಪಿದರೆ/ ತಪ್ಪಿದ್ದಲ್ಲಿ ಉಗ್ರವಾದ ಶಿಕ್ಷೆಯನ್ನು ನೀಡುವುದಾಗಿಯೂ ತಿಳಿಸುತ್ತಾನೆ.ರಾಜನ ಶಿಕ್ಷೆಯ  ಭಯದಿಂದ ಉತ್ತರ ಕೊಡಲು ಯಾರು ಮುಂದೆ ಬರಲಿಲ್ಲ.ಇದೇ ವಿಷಯವಾಗಿ ರಾಜ್ಯದಲ್ಲೆಲ್ಲಾ ಡಂಗುರ ಸಾರಿಸಲಾಯಿತು.ಇದನ್ನು ಕೇಳಿಸಿಕೊಂಡ ದನಗಾಹಿ ಒಬ್ಬನು ಉತ್ತರ ಕೊಡುವುದಾಗಿ ಒಪ್ಪಿ

ಮುಂದೆ ಬಂದನು ಅವನನ್ನು ರಾಜನ ಆಸ್ಥಾನಕ್ಕೆ ಕರೆಸಲಾಯಿತು ಅವನು ಉತ್ತರಿಸುವ ಮೊದಲು ರಾಜನಿಗೆ ಒಂದು ವಿಷಯವನ್ನು ಹೇಳುತ್ತಾನೆ-- 

"ಹೇಳುವವನು ಗುರು ಅವನು ಮೇಲಿರಬೇಕು ಅದರಂತೆ ಕೇಳುವವನು ಶಿಷ್ಯ ಅವನು ಕೆಳಗಿರಬೇಕು"

-- ಅದಕ್ಕೆ ರಾಜನು ಸಮ್ಮತಿಸಿ ಸಿಂಹಾಸನದಿಂದ ಕೆಳಗಿಳಿದು ಕುಳಿತನು ದನಗಾಹಿ ಸಿಂಹಾಸನದ ಮೇಲೆ ಕೂರುತ್ತಾನೆ.

ನಂತರ ದನಗಾಹಿ ರಾಜನಿಗೆ ಪ್ರಶ್ನೆಗಳನ್ನು ಕೇಳಲು ಸೂಚಿಸುತ್ತಾನೆ* 


(1) - ಮೊದಲನೇ ಪ್ರಶ್ನೆ -ದೇವರು ಯಾವ ಕಡೆ ನೋಡುತ್ತಾನೆ?

- ಕೂಡಲೇ ದನಗಾಹಿ ಒಂದು ಉರಿಯುತ್ತಿರುವ ದೀಪವನ್ನು ತರಿಸಲು ಹೇಳುತ್ತಾನೆ ಅದರಂತೆ ಸಭೆಯ ಮಧ್ಯದಲ್ಲಿ ಉರಿಯುತ್ತಿರುವ ದೀಪವನ್ನು ತಂದಿಡಲಾಗುತ್ತದೆ. ರಾಜರೇ ಹೇಳಿ -ಈ ದೀಪ ಯಾವ ಕಡೆಗೆ ನೋಡುತ್ತಿದೆ- ನನ್ನ ಕಡೆಗೋ,

ನಿಮ್ಮ ಕಡೆಗೋ, ಮೇಲೆಯೋ, ಕೆಳಗಡೆಯೋ, ಪೂರ್ವಕ್ಕೋ , ಪಶ್ಚಿಮಕ್ಕೋ ಎನ್ನುತ್ತಾನೆ*

ಆಗ ರಾಜನು  - "ಎಲ್ಲ ಕಡೆಗೂ" ಎಂದು ಉತ್ತರಿಸುತ್ತಾನೆ ಆಗ ದನಗಾಹಿ ಇಷ್ಟು ಸಣ್ಣ ಜ್ಯೋತಿ ಎಲ್ಲಾ ಕಡೆಗೂ ನೋಡುತ್ತಿದೆಯಾದರೆ ಪರಂಜ್ಯೋತಿ ಸ್ವರೂಪನಾದ ಭಗವಂತನು ಎಲ್ಲ ಕಡೆಗೂ ನೋಡಲಾರನಾ, ಸಮಸ್ತ ಜೀವಿಗಳ ಕಣ್ಣಲ್ಲಿ ಬೆಳಕಾಗಿರುವ ಪರಂಜ್ಯೋತಿಯೇ ಪರಮಾತ್ಮ...!!🪔🙏

 (2) - ಎರಡನೇ ಪ್ರಶ್ನೆ "ದೇವರು ಎಲ್ಲಿರುವನು?"

ಆಗ ದನಗಾಹಿ ಒಂದು ಪಾತ್ರೆಯಲ್ಲಿ ಹಾಲನ್ನು ತರುವಂತೆ ಹೇಳುತ್ತಾನೆ ಹಾಲನ್ನು ತಂದಿರಿಸಿದಾಗ ರಾಜರೇ ಈ ಹಾಲಿನಲ್ಲಿ ತುಪ್ಪ ಎಲ್ಲಿರುವುದು ತೋರಿಸುವಿರಾ ಎನ್ನುವನು ಆಗ ರಾಜನು ಹಾಲನ್ನು ಕುದಿಸಿ, ಹೆಪ್ಪಿಟ್ಟು ಅದು ಮೊಸರಾದ ನಂತರ ಅದನ್ನು ಚೆನ್ನಾಗಿ ಕಡೆದರೆ ಬೆಣ್ಣೆ ಸಿಗುತ್ತೆ ನಂತರ ಅದನ್ನು ಹದವಾಗಿ ಕಾಯಿಸಿದಾಗ ತುಪ್ಪ ಸಿಗುತ್ತದೆ.

ಆಗ ದನಗಾಹಿ - ಸರಿಯಾಗಿ ಹೇಳಿದಿರಿ ರಾಜರೇ- ಅದೇ ರೀತಿ ಹೃದಯವೆಂಬ "ಹಾಲ"ನ್ನು "ಗುರು" ಎನ್ನುವ "ಬೆಂಕಿ"ಯಿಂದ ಚೆನ್ನಾಗಿ ಕಾಯಿಸಿ "ಮನಸ್ಸು" ಎನ್ನುವ ಹೆಪ್ಪನ್ನಿಟ್ಟು ಬರುವ ಮೊಸರನ್ನು "ಸಾಧನೆ" ಎಂಬ ಕಡಗೋಲಿನಿಂದ ಚೆನ್ನಾಗಿ ಕಡೆದರೆ "ಜ್ಞಾನ" ಎನ್ನುವ ಬೆಣ್ಣೆ ಸಿಗುತ್ತದೆ...!

ಆ ಬೆಣ್ಣೆಯನ್ನು "ಅಂತರಾತ್ಮ" ಎನ್ನುವ ಬೆಂಕಿಯಿಂದ ಹದವಾಗಿ ಕಾಯಿಸಿದರೆ "ಪರಮಾತ್ಮ' ಎನ್ನುವ ತುಪ್ಪ ಸಿಗುತ್ತದೆ*

(3) - ಮೂರನೇ ಪ್ರಶ್ನೆ- ದೇವರು ಏನು ಮಾಡುತ್ತಾನೆ?

ಆಗ ದನಗಾಹಿ ನಾನೊಬ್ಬ ದನಗಾಹಿ, ನೀವು ಈ ರಾಜ್ಯದ ಮಹಾರಾಜರು- ಕೆಳಗಿದ್ದ ನನ್ನನ್ನು ಸಿಂಹಾಸನದ ಮೇಲೆ ಕೂಡಿಸಿ,  ಸಿಂಹಾಸನದಲ್ಲಿದ್ದ

ನಿಮ್ಮನ್ನು ಕೆಳಗಿಳಿಸಿದ್ದು..!, ಇದೇ ಪರಮಾತ್ಮನ ಲೀಲೆ, ಸತ್ಕರ್ಮಗಳನ್ನು ಮಾಡುವ ಜೀವಿಗಳಿಗೆ ಮುಂದಿನ  ಜನ್ಮದಲ್ಲಿ ಉತ್ತಮ ಜನ್ಮವನ್ನು ನೀಡುವ,  ದುಷ್ಕರ್ಮ ಮಾಡುವವರಿಗೆ ಮುಂದಿನ ಜನ್ಮದಲ್ಲಿ ದುಸ್ತರ ಜೀವನ ನೀಡುವುದು ಪರಮಾತ್ಮನ ಕೆಲಸ...!🙏

ಈ ಉತ್ತರಗಳನ್ನು ಕೇಳುತ್ತಿದ್ದಂತೆ ಇಡೀ ಸಭೆಯು ಅಲ್ಲಿ ನೆರದಿದ್ದವರ ಕರತಾಡನದಿಂದ ಮಾರ್ಮೊಳಗಿತು

🕉 ಸರ್ವೇ ಜನಾಃ ಸುಖಿನೋ ಭವಂತು🕉


Friday, February 14, 2020

ಅಪೇಕ್ಷೆಯ ಒತ್ತಡದಲ್ಲಿ ಪ್ರೀತಿ


ಅಪೇಕ್ಷೆಯ ಒತ್ತಡದಲ್ಲಿ ಪ್ರೀತಿ..


    ಮನುಷ್ಯ ಜೀವಿಗಳಿಗೆ ಪ್ರೀತಿ ಎಂಬುದು ಬೇಕೆ ಬೇಕು. ಪ್ರೀತಿ ಎಂಬುದು ಸ್ವಾಭಾವಿಕವಾಗಿಅಪೇಕ್ಷೆಯ ಒತ್ತಡದಲ್ಲಿ ಪ್ರೀತಿ..

 ಇರಬೇಕು ವಿನಃ ಅದು ಒಬ್ಬರ ಅಪೇಕ್ಷೆ ಆಗಬಾರದು. ಅತಿಯಾದ ಅಪೇಕ್ಷೆಯಿಂದ ಪ್ರೀತಿಯೂ ಇತ್ತೀಚಿನ ದಿನಗಳಲ್ಲಿ ಅರ್ಥ ಕಳೆದು ಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಪ್ರತಿಯೊಂದು ಮಾನವ ಜೀವಿಗಳ ಸಂಬಂಧಗಳಲ್ಲಿ ಪರಸ್ಪರ ಪ್ರೀತಿ ಇದ್ದೇ ಇರುವುದು. ಪ್ರೀತಿ ಮತ್ತು ಅಪೇಕ್ಷೆ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿರುವುದು. ಆದರೇ ಬದಲಾಗುತ್ತಿರುವ ಸಮಾಜದಲ್ಲಿ ಅದಕ್ಕೆ ತಕ್ಕಂತೆ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಪ್ರೀತಿ ಮತ್ತು ಅಪೇಕ್ಷೆಗಳ ನಡುವಿನ ಸಂಬಂಧ ಬಿಗಡಾಯಿಸುತ್ತಿದೆ. ಇದರ ಪರಿಣಾಮವಾಗಿ ಇಂದು ವೃದ್ಧಾಶ್ರಮಗಳು, ಚಿಕ್ಕ ಕುಟುಂಬಗಳು, ವಿವಾಹ ವಿಚ್ಛೇದನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಣ್ಣ-ತಮ್ಮ ಅಕ್ಕ-ತಂಗಿಯ ಸಂಬಂಧಗಳು ದ್ವೇಷದ ಸಂಬಂಧಗಳಾಗಿ ಬದಲಾಗುತ್ತಿರುವುದು. ಅತಿಯಾದ ಅಪೇಕ್ಷೆ ಎಂಬುದು ಪ್ರೀತಿಯನ್ನು ಒತ್ತಡದಲ್ಲಿ ಸಿಲುಕಿಸುತ್ತಿರುವದನ್ನು  ಕಾಣಬಹುದಾಗಿದೆ.
ಅಪ್ಪ ಅಮ್ಮನ ಅಪೇಕ್ಷೆಯಂತೆ ಮಗ-ಮಗಳು ಇಲ್ಲ ಅಥವಾ ನಡೆದುಕೊಳ್ಳಲಿಲ್ಲ ಎಂದಾಗ ಅಪ್ಪ-ಅಮ್ಮ ಹಾಗೂ ಮಕ್ಕಳು ಎಲ್ಲರೂ ದುಖ: ಪಡುವರು. ತನ್ನ ಮಗ-ಮಗಳು ತಾನು ಹೇಳಿದ ಹಾಗೇ ಕೇಳಬೇಕು, ಅವರು ಮಾಡುವ ಕೆಲಸ ಅವರ ಜೀವನ ಎಲ್ಲವು ತಾನು ಹೇಳಿದಂತೆ ಇರಬೇಕು ಎಂದು ಪಾಲಕರು ಬಯಸುವದು ಒಂದು ಕಡೆಯಾದರೇ, ಈಗೀನ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ವಿಭೀನ್ನವಾಗಿ ಬದುಕು ಸಾಗಿಸುತ್ತಿರುವ ಮಕ್ಕಳ ನಡುವೆ ಪರಸ್ಪರ ಹೊಂದಾಣಿಕೆ ವಿರಳವಾಗಿದೆ.  ಇಂದು ಪಾಲಕರು ಮತ್ತು ಮಕ್ಕಳ ನಡುವಿನ ಪ್ರೀತಿ ಎಂಬುದು ಈ ಕಾರಣಕ್ಕಾಗಿ ಅರ್ಥ ಕಳೆದುಕೊಳ್ಳುತ್ತಿರುವುದು. 
ಗಂಡ ಹೆಂಡತಿಯ ಪ್ರೀತಿಯು ಮದುವೆಯಾಗಿ ಒಂದು ವರ್ಷದಲ್ಲಿ ಅತಿಯಾಗಿ ಇರುವುದು. ಕಾಲ ಕಳೆದಂತೆ ಅಲ್ಲಿಯೂ ಪ್ರೀತಿಯ ಪ್ರಮಾಣ ಕಡಿಮೆಯಾಗುತ್ತಾ ಹೋಗುವುದು. ಆದರೂ ಗಂಡ ಹೆಂಡತಿ ನಡುವೆ ಪ್ರೀತಿಯ ಸಾಕ್ಷೀಯಾಗಿ ಹುಟ್ಟುವ ಮಕ್ಕಳು ಆ ನಂತರದ ದಿನಗಳಲ್ಲಿ ಗಂಡ ಹೆಂಡತಿಗೆ ಬದುಕುವ ಭರವಸೆ ನೀಡುವ ಕಿರಣವಾಗಿ ಕಾಣುವರು. ಬಹುತೇಕ ಹೆಚ್ಚಿನ ದಾಂಪತ್ಯ ಜೀವನ ಸಾಗುವುದು ಆ ಒಂದು ನಂಬಿಕೆಯಿಂದ ಮಾತ್ರ. ಇಂದಿನ ದಿನಗಳಲ್ಲಿ ವೈವಾಹಿಕ ಜೀವನವನ್ನು ಪರಸ್ಪರ ಅನ್ಯೋನ್ಯವಾಗಿ ಅನುಭವಿಸುವರಿಗಿಂತ ಅನಿವಾರ್ಯವಾಗಿ ಜೀವನ ಸಾಗಿಸುವವರೇ ಹೆಚ್ಚಾಗಿರುವರು. ಪರಸ್ಪರ ದಂಪತಿಗಳಲ್ಲಿ ಪ್ರೀತಿ ಇದ್ದೇ ಇರುವುದು ಆದರೇ ಪರಸ್ಪರರ ಆಕಾಂಕ್ಷೆಗಳು ಹೆಚ್ಚಾದಾಗ ಅವರ ನಡುವಿನ ಪ್ರೀತಿ ಒತ್ತಡದಿಂದಾಗಿ  ಮನಸ್ಥಾಪದ ಸ್ಥಿತಿಗೆ ಕೊಂಡೊಯ್ಯುವುದು.  
ಅಣ್ಣ ತಂಗಿ ನಡುವೆ ಉತ್ತಮವಾದ ಪ್ರೀತಿ ಒಂದು ಹಂತದ ವರೆಗೆ ಇರುವುದು. ಯಾವಾಗ ಸ್ವಂತಂತ್ರವಾಗಿ ಆಲೋಚನೆ ಮಾಡಿ ತಮಗೆ ಬೇಕಾದ ಗೆಳೆಯ ಗೆಳತಿಯನ್ನು ನೋಡುಕೊಳ್ಳಲು ಅವರವರು ನೋಡುವರೋ ಅಲ್ಲಿ ಅಭಿಪ್ರಾಯ ಭೇದ ಪ್ರಾರಂಭವಾಗುವುದು. ವಯಸ್ಸಿಗೆ ತಕ್ಕಂತ ಅಗತ್ಯಗಳು ಬದಲಾವಣೆ ಆಗುವುದು ಎಂಬುದನ್ನು ಎಲ್ಲರೂ ಅರ್ಥಮಾಡಿಕೊಂಡು ಸನ್ನೀವೇಶವನ್ನು ಹಾಗೇ ಸ್ವೀಕರಿಸಿದರೇ ಯಾವುದೇ ಸಮಸ್ಯೆ ಇರುವುದಿಲ್ಲ. ಅಣ್ಣ ತಂಗಿಯ ನಡುವೆ ತಂಗಿಯೂ ತನಗೆ ಇಷ್ಟವಾದವನನ್ನು ಪ್ರೀತಿಸುವುದು ಅಣ್ಣನಿಗೆ ಇಷ್ಟವಿರುವುದಿಲ್ಲ. ಬದಲಾಗಿ ಮನೆಯವರು ನೋಡಿದ ವ್ಯಕ್ತಿಯೊಂದಿಗೆ ಸಾಂಪ್ರದಾಯಿಕವಾಗಿ ತಂಗಿಯ ಮದುವೆ ಮಾಡುವುದು ಅಣ್ಣನ ಕನಸಾಗಿರುವುದು. ಅಣ್ಣನ ಈ ರೀತಿಯ ಕನಸೆ ತಂಗಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು. ಆದರೇ ಅಣ್ಣನಾದವನು ಯಾರನ್ನೇ ಇಷ್ಟ ಪಟ್ಟರು ಅವರಿಗೆ ತಂಗಿಯಾದವಳು ಕುಟುಂಬ ಮತ್ತು ಅಣ್ಣನ ನಡುವೆ ಕೊಂಡಿಯಂತೆ ಇರಬೇಕು ಅಂದು ಅಣ್ಣ ಬಯಸುವನು. ಈ ರೀತಿಯಾಗಿ ತಮ್ಮ ಅಗತ್ಯಕ್ಕೆ/ಅಪೇಕ್ಷೇಗೆ ತಕ್ಕಂತೆ ಸಂಬಂಧಗಳ ನಡುವೆ ಪ್ರೀತಿಯನ್ನು ಬಳಸಿಕೊಳ್ಳುವುದರಿಂದ ನೈಜ ಪ್ರೀತಿ ಅರ್ಥ ಕಳೆದುಕೊಳ್ಳುತ್ತಿರುವುದು. 
ಹುಡುಗ ಹುಡುಗಿ ಪ್ರೀತಿ : ಯೌವನದಲ್ಲಿ ಪ್ರೀತಿ ಪ್ರೇಮ ಸಹಜವಾಗಿರುವುದು. ಪ್ರಾರಂಭದಲ್ಲಿ ಪ್ರೀತಿಯ ಅನುಭವ ಸಹಾ ಪರಸ್ಪರಿರಿಗೆ ಸಂತೋಷವನ್ನು ನೀಡುವುದು. ಪ್ರೀತಿ ಪ್ರಾರಂಭವಾದ ದಿನಗಳಲ್ಲಿ ಪರಸ್ಪರ ಯಾವ ತ್ಯಾಗಕ್ಕೂ ಸಿದ್ದರಾಗುವರು. ಕಾಲ ಕಳೆದಂತೆ  ಪ್ರೀತಿಯ ನೈಜತೆ ಅರ್ಥವಾಗಲು ಪ್ರಾರಂಭವಾಗುವುದು ಪರಸ್ಪರರ ಅಪೇಕ್ಷೆಗಳು ಬದುಕುವ ಶೈಲಿ, ಸಮಾಜವನ್ನು ನೋಡುವ ರೀತಿ ಈ ಎಲ್ಲವೂ ಸಹಾ ಪ್ರೀತಿಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುವುದು. ಪ್ರಾರಂಭದ ದಿನದಿಂದ ಕೊನೆತನಕ ಆಯಾ ಕಾಲಘಟ್ಟಕೆ ತಕ್ಕಂತೆ ಅಥರ್ೈಸುವಿಕೆ ಪ್ರೀತಿ ಇದ್ದರೇ ಅದೇ ನೈಜ ಪ್ರೀತಿಯಾಗಿರುವುದು. ಬದಲಾಗಿ ದೈಹಿಕ ಆಕ್ಷಾಂಕ್ಷೆ, ಆಸ್ತಿಯ ಆಸೆ, ನೌಕರಿಯ ಆಸೆ, ಸೌಂದರ್ಯ ಈ ಎಲ್ಲಾ ಅಪೇಕ್ಷೆಗಳೆ ಪ್ರೀತಿಸಲು ಮೂಲ ಕಾರಣಾವಾದರೆ ಆ ಪ್ರೀತಿ ಅರ್ಥ ಕಳೆದುಕೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ. 
  ಒಟ್ಟಾರೆಯಾಗಿ ಅಪೇಕ್ಷೆ ಎಂಬುದು ಅತಿಯಾದಾಗ ಸಂಬಂಧಗಳ ನಡುವಿನ ಪ್ರೀತಿ ತಾನಾಗಿಯೇ ಅರ್ಥ ಕಳೆದುಕೊಳ್ಳುವುದನ್ನು ಕಾಣಬಹುದಾಗಿದೆ. ನಮ್ಮ ಅತಿಯಾದ ಅಪೇಕ್ಷೆಯ ಮೇಲೆ ಹಿಡಿತವನ್ನು ಸಾಧಿಸಿ ಎಲ್ಲ ರೀತಿಯ ಸಂಬಂಧಗಳನ್ನು ಪ್ರೀತಿಯಿಂದ ಉಳಿಸಿಕೊಳ್ಳುವ ಬಗ್ಗೆ ಈ ಸಂದರ್ಭದಲ್ಲಿ ಅವಲೋಕಿಸಿಕೊಂಡರೆ ಒಳ್ಳೆಯದಲ್ಲವೇ?
                                                                                                                              .ವಿವೇಕ ಬೆಟ್ಕುಳಿ

Thursday, March 8, 2018

ಮಹಿಳಾ ಸಮಾನತೆ ಎಂಬ ಉತ್ತಮ ಚಚಾ೯ ವಿಷಯ.



  ಮಾರ್ಚ 8 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ನಮ್ಮ ದೇಶದಲ್ಲಿಯೂ ಆಚರಿಸಲಾಗುವುದು. ಈ ದಿನದಂದು ಮಹಿಳೆಯರ ಬಗ್ಗೆ ಅವರ ಸಾಧನೆ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುವುದು. ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಸನ್ಮಾನವನ್ನು ಮಾಡಲಾಗುವುದು. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮ ಹೆಚ್ಚಾಗುತ್ತಾ ಇರುವುದು.. ಸ್ವತಂತ್ರ ಭಾರತದ ನಂತರದ ಏಳ್ಗೆಯಲ್ಲಿ ಮಹಿಳೆಯರ ಕೊಡುಗೆ ಬಹು ಅತ್ಯಮೂಲ್ಯವಾದದ್ದು ಆಗಿರುವುದು.
ಆಳುವ ಸಕರ್ಾರಗಳು ಕಾಲ ಕಾಲಕ್ಕೆ ಹಲವಾರು ಯೋಜನೆಯನ್ನು ಜಾರಿಗೊಳಿಸಿ ಮಹಿಳೆಯರ ಸಬಲೀಕರಣಕ್ಕೆ ಪ್ರಯತ್ನವನ್ನು ಮಾಡಿರುವುದು. ಅದರ ಪರಿಣಾಮವೇ ಇಂದು ವಿವಿಧ ಕ್ಷೇತ್ರದಲ್ಲಿ ಎಲ್ಲಾ ಹಂತದಲ್ಲಿ ಮಹಿಳಾ ಉದ್ಯೋಗಿಗಳು ಸಿಗುವರು. ಇವೆಲ್ಲವು ಸಹಾ ಮಹಿಳಾ ಸಬಲೀಕರಣದ ಪ್ರಮುಖ ಮೈಲಿಗಲ್ಲೆಂದು ಗುರುತಿಸಬಹುದಾಗಿದೆ.
ಇಂದಿಗೂ  ಮನೆಯಲ್ಲಿ  ಅಡುಗೆ ಕಾರ್ಯ ಮಹಿಳೆಯರ ತಲೆ ಮೇಲೆ ಇರುವುದು. ಗಂಡ, ಅತ್ತೆ, ಮಾವ, ಮಕ್ಕಳು ಈ ಭಾವನಾತ್ಮಕ ಸಂಬಂಧದ ಸುಳಿಯಲ್ಲಿ ಸಿಕ್ಕಿ ಅದರಿಂದ ಹೊರಗು ಬರಲಾಗದೇ ತಮ್ಮಜೀವನದ ಅತಿ ಹೆಚ್ಚು ಸಮಯವನ್ನು ಅಡುಗೆ ಮನೆಯಲ್ಲಿ, ಮನೆಗೆಲಸದಲ್ಲಿ ಕಳೆಯುವವರ ಸಂಖ್ಯೆ ಕಡಿಮೆಯಾಗಿಲ್ಲ.
ಅಡುಗೆಯ ಜೊತೆಗೆ ಮನೆಯ ಎಲ್ಲರ ಬಟ್ಟೆಯನ್ನು ಸ್ವಚ್ಛಗೊಳಿಸುವುದು, ಮನೆಯನ್ನು ಸ್ವಚ್ಛಮಾಡುವುದು,  ಈ ಎಲ್ಲಾ ಕಾರ್ಯಗಳು ಮಹಿಳೆಯರದ್ದೇ ಆಗಿದೆ. ಇವೆಲ್ಲ ಅವರ ಮೂಲಭೂತ ಕಾರ್ಯಗಳು ಎಂಬಂತೆ ಗಂಡಸರು ವತರ್ಿಸುವುದು ಇರುವುದು. ಬಹುತೇಕ ಎಲ್ಲಾ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮೊದಲು ಗಂಡಸರ ಊಟ ನಂತರದಲ್ಲಿ ಹೆಂಗಸರು ಊಟ ಮಾಡುವುದು ಸಾಮಾನ್ಯವಾಗಿದೆ. ಗಂಡಿನಷ್ಠೆ ಸಂಪಾದನೆ ಮಾಡುವ ಹೆಂಗಸರು ಸಹಾ ಮನೆಗೆ ಬಂದು ತನ್ನ ಮಹಿಳಾ ಕಾರ್ಯವನ್ನು ಮಾಡಲೆಬೇಕಾದ ಅನಿವಾರ್ಯತೆ ಇರುವುದು.
ಮಹಿಳೆಯ ಮೇಲೆ ಈ ರೀತಿಯ ದೌರ್ಜನ ನಡೆಸುವವರಲ್ಲಿ ಅಕ್ಷರಸ್ಥ ಪುರುಷರು, ಅದರಲ್ಲಿಯೂ ಸಮಾಜವನ್ನು ಬದಲಿಸುವ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಸಮಾಜ ಸೇವಿಗಳು, ರಾಜಕಾರಣಗಳು ಎಲ್ಲರೂ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ ಆದರೇ ಅವರವರ ಮನೆಯಲ್ಲಿ ನಡೆದುಕೊಂಡು ಬಂದ ಯಾವದೇ ಸಂಪ್ರದಾಯವನ್ನು ಬದಲಿಸಲು ಧೈರ್ಯ ತೋರಿಸುವುದಿಲ್ಲ. ಒಟ್ಟಾರೆ ಉತ್ತಮ ಭಾಷಣಕಾರರಾಗಿ, ವಿಚಾರವಾದಿಗಳಾಗಿ ವೇದಿಕೆಯಲ್ಲಿ ಮಾತನಾಡುವರು.
ನನ್ನ ಮನೆ ಮತ್ತು ಸುತ್ತಮುತ್ತಲಿನ ಸಮಾಜವನ್ನು ಗಮನಿಸಿದರೆ ಇಂದಿಗೂ ಮಹಿಳೆಗೆ ಸಮಾನ ಅವಕಾಶಗಳು ಸಿಗುತ್ತಾ ಇಲ್ಲ. ಕೆಲವೊಂದು ಕಾರ್ಯಕ್ಕೆ ಮಾತ್ರ ಮಹಿಳೆ ಸೀಮಿತವಾಗಿರುವಳು. ಬದಲಾವಣೆ ಬಯಸುವ ವ್ಯಕ್ತಿಗಳು, ಅದಕ್ಕೆ ಬದಲಾಗಲು ತಯಾರಾಗುವ ಮಹಿಳೆಯರು ತಾವಾಗಿಯೇ ತಮ್ಮ ತಮ್ಮ ಸ್ವತಂತ್ಯ, ಸಮಾನತೆ ಬಗ್ಗೆ ಧ್ವನಿ ಎತ್ತ ಬೇಕಾಗಿದೆ. ಇಲ್ಲವಾದರೇ ನಾವೆಲ್ಲ ಯೋಚಿಸುವ ಮಹಿಳಾ ಸಬಲೀಕರಣ ಕೇವಲ ಕನಸು ಮಾತ್ರ ಆಗಿರುವುದು.
ಪುರಾಣದ ಕಾಲದಿಂದ ಇಂದಿನ ಕಾಲಘಟ್ಟದ ವರೆಗೆ ಮಹಿಳೆ ನಡೆದ ದಾರಿಯನ್ನು ಅವಲೋಕಿಸುತ್ತಾ, ಇಂದಿಗೂ ಕೆಟ್ಟ ಸಂಪ್ರದಾಯವನ್ನು ಪಾಲಿಸುವ ಪ್ರಮುಖ ಸಂಘಟನೆಗಳ, ರಾಜಕೀಯ ವಿಚಾರಧಾರೆಗಳ ಬಗ್ಗೆ ಎಚ್ಚರಿಕೆಯಿಂದ ಇದ್ದು, ಅವಶ್ಯ ಇರುವಡೆ ಪ್ರತಿರೋಧವನ್ನು ಮಾಡುತ್ತಾ ಮಹಿಳೆಯರು ಮುಂದೆ ಬರಬೇಕಾಗಿದೆ. ಅದಕ್ಕೆ ತಕ್ಕದಾದ ವಾತಾವರಣವನ್ನು ಸೃಷ್ಠಿಸುವ ಜವಬ್ದಾರಿ ಪ್ರತಿಯೊಬ್ಬರದ್ದು ಆಗಿರುವುದು.


ವಿವೇಕ ಬೆಟ್ಕುಳಿ
vivekpy@gmail.com

8722954123


Saturday, January 28, 2017

ಮಕ್ಕಳನ್ನು ಯಂತ್ರಗಳನಾನ್ನಗಿಸುವ ವ್ಯವಸ್ಥೆ - ವಿವೇಕ ಬೆಟ್ಕುಳಿ,



ಹುಟ್ಟಿದಾಗ ಅಳುವ, ಆ ನಂತರದಲ್ಲಿ ಹಸಿವಾದಾಗ, ನೋವಾದಾಗ ಅಳುತ್ತಾ, ತನ್ನಷ್ಟಕ್ಕೆ ನಗುತ್ತಾ ಬೆಳೆಯುವ ಮಗು ತೊದಲು ಮಾತನಾಡಿದಾಗ...ಅಮ್ಮ, ಅಪ್ಪ...ಅಣ್ಣ  ಏನೇ ಹೇಳಿದರು ಮನೆ ಮಂದಿಯೆಲ್ಲಾ ಸಂತೋಷದಿಂದ ಆ ಮಗುವಿನ ಸಹಜತೆಯಿಂದ ಆಕಷಿ೯ತರಾಗುವರು. ಯಾವುದೇ ಹುದ್ದೆ, ಅಂತಸ್ತು ಯಾವುದೂ ಸಹಾ ಆ ಮಗುವಿಕೆ ತಿಳಿದರುವುದಿಲ್ಲ, ಮಗುವಿನ ಜನನ ಅದರ ಆಕರ್ಷಣೆಯಿಂದಾಗಿ ಮಗುವಿನ ತಾಯಿ ಸಹಾ ನಿಧಾನವಾಗಿ ಗೌರವಕ್ಕೆ ಅರ್ಹಳಾಗುವಳು. ಇಂತಹ ಮುಗ್ದ ಮನಸ್ಸಿನ ಮಕ್ಕಳು ಚಿಕ್ಕ ಪುಟ್ಟ ಹೆಜ್ಜೆಯನ್ನು ಇಡುತ್ತಾ ಮನೆಯೆಲ್ಲಾ ಓಡಾಡುವುದು. ಅದಕ್ಕೊಂದು ಹೆಸರು, ಜಾತಿ ನೀಡಿ ಯಾವಾಗ ನಾವು ಪ್ರತೇಕ ಗುರುತಿಸುವಿಕೆ ಪ್ರಾರಂಭ ಮಾಡುವೆವು. ಅಂದಿನಿಂದ ಮಕ್ಕಳು ತಮ್ಮತನವನ್ನು ಕಳೆದುಕೊಳ್ಳತೊಡಗುವರು. ಸಹಜವಾಗಿ ಇರುವ ಮಗುವಿಗೆ ಮನೆಯ ಅಂತಸ್ತು, ಅಪ್ಪ ಅಮ್ಮನ ಗೌರವ ಜಾತಿ, ಧರ್ಮದ ರೀತಿ ಈ ಎಲ್ಲವನ್ನು ಆ ಮಗುವಿನ ನಡುವಳಿಕೆ, ಆಹಾರ ವೇಷ ಭೂಷಣದಲ್ಲಿ ಒತ್ತಾಯವಾಗಿ ತುರುಕಲು ಪ್ರಾರಂಭಿಸುವೆವು. ಅದರ ಮುಂದುವರೆದ ಭಾಗವಾಗಿಯೇ ಶಾಲೆಗಳು ಸೃಷ್ಠಿಯಾಗಿರುವುದು. ಯಾವಾಗ ಮಗು ಶಾಲೆಗೆ ಹೋಗಲು ಪ್ರಾರಂಭ ಮಾಡುವುದೋ ಅಂದಿನಿಂದ ಮಗು ಯಾಂತ್ರಿಕ ಮಗುವಾಗಿರುವುದು, ವಿನಹ: ಸಹಜ ಮಗುವಾಗಿರದು. ಸಹಜ ಮಗುವನ್ನು ಯಾಂತ್ರಿಕ ಮಗುವನ್ನಾಗಿಸುವಲ್ಲಿ ಮುಖ್ಯವಾಗಿ ತಾಯಿ, ತಂದೆ ಹಾಗೂ ಶಾಲಾ ಶಿಕ್ಷಕರ ಪಾತ್ರ ಬಹುಮುಖ್ಯವಾಗಿರುವುದು. ಸ್ವಲ್ಪ ಸಹಜತೆ ಬಗ್ಗೆ ಮಾತನಾಡುವ ಅಜ್ಜ, ಅಜ್ಜಿ ಕಡೆ ಸಹಜವಾಗಿ ಮಗು ಆಕಷಿ೯ತವಾಗುವುದು. ಆದರೇ ಇಂದಿನ ಆದುನಿಕ ಯುಗದಲ್ಲಿ ವಯಸ್ಸಾದವರನ್ನು ವೃದ್ದಾಶ್ರಮದಲ್ಲಿ ಇಡುವ ವ್ಯವಸ್ಥೆ ಪ್ರಾರಂಭವಾಗಿರುವುದರಿಂದ ಮಗುವಿನ ಬಗ್ಗೆ, ಅದರ ಸ್ವಾತಂತ್ಯದ ಬಗ್ಗೆ ಮಾತನಾಡುವ ಯಾರು ಸಹಾ ಅದರ ಜೊತೆ ಇಲ್ಲದಂತೆ ಆಗಿರುವುದು. ಇಂತಹ ಸನ್ನಿವೇಶದಲ್ಲಿ ಖಾಸಗಿ ಶಾಲೆಗೆ ಹೋಗುವುದು, ಇಂಗ್ಲೀಷ ಮಾತನಾಡುವುದು, ಉತ್ತಮವಾದ ವೇಷ ಭೂಷಣ ಧರಿಸಿ ಬೇರೆ ಬೇರೆ ಭಾಷೆಯಲ್ಲಿ ಮಾತನಾಡುವುದು. ಒಟ್ಟಾರೆ ಎಲ್ಲರಕ್ಕಿಂತ ಮುಂದೆ ಬಂದು ಶಾಲೆಯಲ್ಲಿ ಉತ್ತಮ ವಿದ್ಯಾಥಿ೯ ಅನಿಸಿಕೊಳ್ಳುವುದೇ ಮಕ್ಕಳ ಮುಖ್ಯ ಕತ್ಯರ್ವವಾಗಿರುವುದು.


ಈ ಎಲ್ಲ ರೀತಿಯ ಪ್ರಯಾಣವನ್ನು ಮುಗಿಸಿ 15 ವರ್ಷಕ್ಕೆ ಕಾಲಿರಿಸದ ಮಕ್ಕಳು. ಯಂತ್ರಗಳಾಗಿರುವರು. ಭಾವನೆಗಳಿಗೆ ಬೆಲೆ ಇಲ್ಲದೆ, ತಪ್ಪು ಸರಿಯ ನಡುವಿನ ದಾರಿ ತಿಳಿಯದೇ, ಏನಾದರೂ ಮಾಡು ಉತ್ತಮವಾಗಿ ಅಂಕ ತೆಗೆದು ಹೆಚ್ಚು ಹಣ ಸಂಪಾದಿಸುವ ಕೆಲಸ ಮಾಡುವುದು. ತಮ್ಮ ಜೀವನದ ಗುರಿಯನ್ನಾಗಿ ಮಾಡಿಕೊಂಡು ಮಕ್ಕಳು ಮುಂದೆ ಸಾಗುವರು. ಇಂತಹ ಮಕ್ಕಳಿಗೆ ಅಜ್ಜ ಅಜ್ಜಿಯ ಪ್ರೀತಿ ಬೇಕಾಗಿಲ್ಲ, ಎತ್ತಿ ಆಡಿಸಿದ ಮನೆಮಂದಿಯ ಬಗ್ಗೆ ಕಲಿಕರವಿಲ್ಲ. ಏನಿದ್ದರು ಒಬ್ಬರನ್ನು ಹಿಂದೆ ಹಾಕಿ ಮುಂದೆ ಹೋಗುವುದು ಮಾತ್ರ ತಿಳಿದಿರುವುದು. ನನ್ನ ಆಸುಪಾಸಿನಲ್ಲಿ ನಮ್ಮ ಮನೆಯ ವಾತಾವರಣದಲ್ಲಿ ಹತ್ತಾರು ಮಕ್ಕಳನ್ನು ನಾನು ಕಳೆದ 15-20 ವರ್ಷದಿಂದ ನೋಡುತ್ತಾ ಇರುವೆನು. ವರ್ಷಗಳು ಕಳೆದಂತೆ ಈ ತರಹದ ವಿಷಕಾರಿ ವಾತಾವರಣ ಮಾತ್ರ ಹೆಚ್ಚಾಗುತ್ತಾ ಇರುವುದು. ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡಿ ಪರಿಹಾರ ಹುಡುಕುವ ಅಗತ್ಯವಿದೆ. ಇಲ್ಲವಾದರೇ ನಮ್ಮ ಮುಂದಿನ ದಿನಗಳಲ್ಲಿ ದ್ವೇಷ, ಅಸೂಯೆ, ಮೋಸ, ಯುದ್ದ, ಹಿಂಸೆ ಈ ಎಲ್ಲವುಗಳು ಜಗತ್ತಿನ ಎಲ್ಲಾ ಕಡೆಯಲ್ಲಿಯೂ ಮನೆ ಮನೆಗಳಲ್ಲಿಯೂ ಆವರಿಸುವುದು ಖಂಡಿತ.
ಪ್ರೀತಿ, ಪ್ರೇಮ ಶಾಂತಿಯ ಜಗತ್ತಿಗಾಗಿ, ನಮ್ಮ ಮನೆಗಾಗಿ, ಮಕ್ಕಳನ್ನು ಸಹಜವಾದ ವಾತಾವರಣದಲ್ಲಿ ಬೆಳಸಬೇಕಾಗಿದೆ. ಅದೇ ರೀತಿ ನಮ್ಮ ಸಂಪೂರ್ಣ ಶೈಕ್ಷಣಿಕ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಅಗತ್ಯವಿದೆ. ಇದೇ ರೀತಿ ಶೈಕ್ಷಣಿಕ ವ್ಯವಸ್ಥೆ ಮುಂದುವರೆದರೆ ಬರುವ ಜಗತ್ತಿನಲ್ಲಿ ಮಕ್ಕಳು/ಜನರು ಗಳೆಂಬ ಯಂತ್ರಗಳು ಸಿಗುವುದು ವಿನಹ: ಭಾವನೆಗಳಿರುವ ಜೀವಿಗಳು ಸಿಗಲು ಸಾಧ್ಯವೇ ಇಲ್ಲ









Wednesday, September 21, 2016

ನೈಸರ್ಗಿಕ ಸಂಪತ್ತಿನ ಪಾಲು ನಮಗೂ ಕೊಡಿ - ರಾಜೇಂದ್ರ ಪ್ರಸಾದ್



ಒಂದು ಪ್ರದೇಶದ ನೈಸರ್ಗಿಕ ಉತ್ಪತ್ತಿಗಳಾದ ಗಾಳಿ ನೀರು ಬೆಳಕು ಭೂಮಿ ಬಿಸಿಲು ಇವೆಲ್ಲವೂ ಆಯಾ ಪ್ರದೇಶದ ಸ್ವತ್ತು. ಅವುಗಳ ಬಳಕೆಯ ಪೂರ್ಣ ಹಕ್ಕು ಆಯಾ ಪ್ರದೇಶದ ಪಶು-ಪ್ರಾಣಿಗಳದ್ದು ಮನುಷ್ಯನನ್ನೂ ಸೇರಿಸಿ. ಇನ್ನೂ ಸಂವಿಧಾನದ ಆಧಾರದಲ್ಲಿ ಹೇಳುವುದಾದರೆ ಇವುಗಳನ್ನು ಅನುಭೋಗಿಸಿ ಬದುಕುವುದು ಮನುಷ್ಯನ ಮೂಲಭೂತ ಹಕ್ಕು.

ಈವಾಗ ನಿರ್ಧಿಷ್ಟ ಪ್ರದೇಶದ ಜನ ತಮ್ಮ ನೆಲದ್ಲಲಿ ಬಿದ್ದ, ಹರಿದು ಬಂದ ನೀರನ್ನು ಕೃಷಿ ಮತ್ತು ಕುಡಿಯುವ ನೀರಿಗಾಗಿ ಸಂಗ್ರಹಿಸಿಕೊಳ್ಳುವುದು ತಪ್ಪೇ? ಹಾಗೆ ಸಂಗ್ರಹಿಸಿದ ನೀರನ್ನು ಮತ್ತೊಂದು ಪ್ರದೇಶದ ಕೃಷಿಗಾಗಿ ನಾವೇ ಜಾರಿಗೊಳಿಸಿಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯ ಉನ್ನತ ಸ್ಥಾನಗಳು ಕಸಿದುಕೊಳ್ಳುವುದು, ಅದನ್ನು ಆದೇಶವೆಂದು ಜಾರಿಗೊಳಿಸುವುದು ನಮಗಿರುವ ಮೂಲಭೂತಹಕ್ಕನ್ನು ಉಲ್ಲಂಘಿಸಿದಂತೆ ಆಗುವುದಿಲ್ಲವೇ ?!

ಕಾವೇರಿಯ ನೀರನ್ನು ನಾವು ತಮಿಳುನಾಡಿಗೆ ಬಿಟ್ಟರೆ

* ತಮಿಳುನಾಡು ನಮಗೆ ಉಚಿತ ವಿದ್ಯುತ್ ಕೊಡುತ್ತದೆಯೇ ? ವಿದ್ಯುತ್ ಉತ್ಪತ್ತಿಯಾಗುವುದು ನೈಸರ್ಗಿಕ ಮೂಲಗಳಿಂದಲೇ ತಾನೇ!

* ಉಚಿತವಾಗಿ ತೂತುಕುಡಿಯಿಂದ ಕರ್ನಾಟಕಕ್ಕೆ ಬೇಕಾದ ಉಪ್ಪನ್ನು ಉಚಿತವಾಗಿ ಸರಬರಾಜು ಮಾಡುತ್ತದೆಯೇ! ಉಪ್ಪಿನ ಮೂಲ ಸಮುದ್ರ.

*ಕಾವೇರಿ ನೀರಿನ ಬಳಕೆ ಮಾಡುವ ತಮಿಳುನಾಡಿನ ಪ್ರದೇಶಗಳಲ್ಲಿ ಸಂಗ್ರಹವಾಗುವ ಭೂಕಂದಾಯದಲ್ಲಿ ನಮಗೆ ಭಾಗ ಕೊಡುತ್ತದೆಯೇ?!

* ಕಾವೇರಿ ನದೀ ಮುಖಜ ಭೂಮಿಯಲ್ಲಿ ಇದೆ ಎನ್ನಲಾಗುತ್ತಿರುವ ತೈಲ ಮತ್ತು ನೈಸರ್ಗಿಕ ನಿಕ್ಷೇಪಗಳ ಆದಾಯದಲ್ಲಿ ಕರ್ನಾಟಕಕ್ಕೆ ಎಷ್ಟು ಪಾಲು ಕೊಡಲು ಸಿದ್ದವಿದೆ ?!

* ಮಾನವೀಯತೆ ಆಧಾರದಲ್ಲಿ ಕೃಷ್ಣಾನದಿಯಿಂದ ಪ್ರತಿವರ್ಷ 5 ಟಿ‌ಎಮ್‌ಸಿ ನೀರನ್ನು ಕುಡಿಯಲು ಚೆನ್ನೈ ನಗರಕ್ಕೆ ಕೊಡುತ್ತೇವಲ್ಲ. ಅದಕ್ಕೆ ಪ್ರತಿಯಾಗಿ ಕಾವೇರಿಯಿಂದ 5 ಟಿ‌ಎಮ್‌ಸಿ ನೀರನ್ನು ಬೆಂಗಳೂರು ನಗರಕ್ಕೆ ಕೊಡಿಸಲು ಸಾಧ್ಯವೇ?!

ಹೇಳಿ ತಮಿಳುನಾಡು /ಪುದುಚೇರಿ / ಕೇಂದ್ರ ಸರಕಾರಗಳೇ ಅಥವಾ ಆದೇಶ ಕೊಡುವ ವ್ಯವಸ್ಥೆಗಳೇ ಕರ್ನಾಟಕಕ್ಕೆ ತಮಿಳಿನಾಡು / ಪುದುಚೇರಿಯ ಯಾವ ನೈಸರ್ಗಿಕ ಸಂಪತ್ತಿನಲ್ಲಿ ನಮಗೆ ಪಾಲು ಕೊಡಲು ಮತ್ತು ಕೊಡಿಸಲು ತಯಾರಿದ್ದೀರಿ?
ಅದನ್ನು ಕೊಡಲು, ಕೊಡಿಸಲು ಸಾಧ್ಯವಾಗದೇ ಇದ್ದಲ್ಲಿ ಕರ್ನಾಟಕದ ಜನರ ನೈಸರ್ಗಿಕ ಜಲಸಂಪತ್ತನ್ನು ಕೇಳುವ ಯಾವ ನೈತಿಕತೆ ಅಥವಾ ಹಕ್ಕು ನಿಮಗೆ ಇದೆ! ಕಾನೂನಿನ ಮೂಲಕ ನಡೆಯುತ್ತಿರುವ ಇದು ದೌರ್ಜನ್ಯವಲ್ಲವೇ, ಇದು ಶೋಷಣೆಯಲ್ಲವೇ?!

ಸಂಪತ್ತು ಪಾಲುಕೊಡಲಾಗದ ಸರಕಾರಗಳು ಹಣ ಕೊಟ್ಟು ನೀರನ್ನು ಕೊಂಡುಕೊಳ್ಳಿ. ಅಥವಾ ಬೇರೆಡೆ ನೀರು ಹುಡುಕಿಕೊಳ್ಳಿ.

___

ಕೋರ್ಟ್ ಗಳಲ್ಲಿ ನಮ್ಮ ನೈಸರ್ಗಿಕ ಸಂಪತ್ತನ್ನು ಬಳಸಿಕೊಳ್ಳುವ ಕುರಿತು ನೆಟ್ಟಗೆ ವಾದಿಸಲು, ಪುರಾವೆ ಒದಗಿಸಲು ಸಾಧ್ಯವಿಲ್ಲದ ಸರಕಾರಗಳು, ಸಂಸದರು, ಶಾಸಕರು ಇದ್ದರೆಷ್ಟು ಹೋದರೆಷ್ಟು?!
ಕುಡಿಯುವ ನೀರು ಕೊಡಿಸಲು ಸಾಧ್ಯವಾಗದ ನಿಮ್ಮಂತಹ ಪ್ರತಿನಿಧಿಗಳನ್ನು ಇಟ್ಟುಕೊಂಡು ಏನು ಮಾಡೋಣ?
ಒಕ್ಕೂಟವ್ಯವಸ್ಥೆಯಲ್ಲಿ ಪ್ರಧಾನಿಯೊಬ್ಬರು ಮಧ್ಯಸ್ಥಿಕೆವಹಿಸಲು ಹಿಂಜರಿಯುತ್ತಾರೆ, ಬರೆದ ಪತ್ರಗಳಿಗೆ ಉತ್ತರಕೊಡದೇ ಅದೇ ವ್ಯವಸ್ತೆಗೆ ದ್ರೋಹವೆಸಗುತ್ತಾರೆ. ಒಂದು ಕಠಿಣ ನಿರ್ಧಾರ ಕೈಗೊಳ್ಳಲು ಅಶಕ್ತವಾದ ಮುಖ್ಯಮಂತ್ರಿ, ತಮ್ಮ ಭಾಗದ ಜನರ ನೀರಿಗೆ ಓಡಾಡಲು ಸಾಧ್ಯವಾಗದ ಅಪ್ರಯೋಜಕ ಸಂಸದರು ಮತ್ತು ಶಾಸಕರು, ಕಡೆಗೆ ಏನು ಮಾಡಬೇಕು ಅಂತಲೂ ತಿಳಿಯದ ಹೀಗೆ ಬಡಬಡಿಸಿಕೊಂಡು ಕುಳಿತೇ ಇರುವ ನಾವು ನಾಗರೀಕರು!

ಕನ್ನಡನಾಡಿನ ಜನ ರಾಜಕೀಯವಾಗಿ ಒಂದು ಬದಲಾವಣೆಯನ್ನಂತೂ ಮಾಡಿಕೊಳ್ಳಲೇಬೇಕಿದೆ. ಈಗ ತುರ್ತಾಗಿ. ಅದು ಕನ್ನಡ ಕೇಂದ್ರಿತ ಸದೃಢ ರಾಜಕಾರಣ. ಸದೃಢ ರಾಜಕಾರಣವೊಂದೇ ನಮಗೆ ನ್ಯಾಯ ಒದಗಿಸಬಲ್ಲುದು. ಈ ರಾಷ್ಟ್ರಿಯವಾದಿಗಳು , ರಾಷ್ಟ್ರೀಯ ಪಕ್ಷಗಳು ನಮ್ಮ ಪಾಲಿನ ಯಮಧೂತರು. ಕನ್ನಡ ಸ್ವಾಭಿಮಾನವನ್ನು ನಾವು ರಾಜಕೀಯವಾಗಿ ಬೆಳೆಸಿಕೊಳ್ಳಬೇಕಿದೆ. ಅದು ನಮಗಿರುವ ಒಂದೇ ಮಾರ್ಗ.

Monday, March 7, 2016

ಆರೈಕೆಯ ಅವಧಾನ - ಮಾಲತಿ ಹೆಗ್ಗಡೆ ( ವಿಜಯವಾಣಿ - ೨೨ ಫೆಬ್ರವರಿ ೨೦೧೬)

ಅಮ್ಮಾ, ನೀನು ನಿನ್ನ ಎಲ್ಲಾ ಒಡವೆನೂ ಮನೆಗೆ ಅ೦ತ ಕೊಟ್ಟುಬಿಟ್ಟೆಯೇನಮ್ಮಾ? ಒ೦ದಾದರೂ ಇಟ್ಟುಕೊಳ್ಳಬೇಕಿತ್ತು. ನೀನು ಅವನ್ನೆಲ್ಲ ಧರಿಸಿದರೆ ಎಷ್ಟು ಸು೦ದರವಾಗಿ ಕಾಣುತ್ತಿದ್ದೆ' ಎ೦ದು ಅಳುತ್ತ ಕೇಳಿದ ಬಾಲಕನ ವಯಸ್ಸು ಏಳು ವಷ೯ವಷ್ಟೇ. "ಹೂ೦ ಕಣಪ್ಪಾ. ನಿಮ್ಮಪ್ಪ ಮನೆ ಕಟ್ಟಿಸಬೇಕು ಅ೦ತ ಅ೦ದುಕೊ೦ಡಿದ್ದಾರೆ. ಒಡವೆ ಆದ್ರೆ ನಾನು ಒಬ್ಬಳೇ ಧರಿಸಬೇಕು. ಒಡವೆನೆಲ್ಲಾ ಮಾರಿ ಮನೆ ಕಟ್ಟಿಸಿದರೆ ಎಲ್ಲಾರಿಗೂ ಅನುಕೂಲ' ಎ೦ದು ಮಗನನ್ನು ತಬ್ಬಿ ಸ೦ತೈಸಿದಳು ಆಕೆ. ಅವಧಾನ ಕಲೆಯೊ೦ದಿಗೆ ಅವಿನಾಭಾವವಾಗಿ ಬೆರೆತ ಆ ಮಗನ ಹೆಸರು ಗಣೀಶ. ಅಮ್ಮನ ಹೆಸರು ಅಲಮೇಲು.
ಶ್ರೀಮ೦ತ ಕುಟು೦ಬದಲ್ಲಿ ಜನಿಸಿದ ಅವಳು ಕಲೆ, ಸಾಹಿತ್ಯ, ಸ೦ಗೀತ ಎಲ್ಲವುಗಳಲ್ಲಿ ಅಭೀರುಚಿ ಇದ್ದವಳು. ದೇಶಕ್ಕೆ ಸ್ವಾತ೦ತ್ರ್ಯ ಬ೦ದ ಹೊಸದರಲ್ಲೇ ಬಿ.ಎ. ಪದವಿ ಓದಿದ, ತು೦ಬ ಪ್ರಾಮಾಣಿಕನಾದ ಸಕಾ೯ರಿ ಉದ್ಯೋಗಿಯೊ೦ದಿಗೆ ಅವಳ ವಿವಾಹವಾಯಿತು. ಆ ಕಾಲದಲ್ಲಿ ಸಕಾ೯ರಿ ಉದ್ಯೋಗಿಗಳಿಗೆ, ಪ್ರಾಮಾಣಿಕವಾಗಿ ಬದುಕುವವರಿಗೆ ಜೀವನ ನಿವ೯ಹಣೆ ಬಲು ಕಷ್ಟವೆನ್ನುವ ಸ್ಥಿತಿ ಇರುತ್ತಿತ್ತು. ತವರೂರಿನ ಅನುಕೂಲವನ್ನು ನೆನೆದು ಸೇರಿದ ಕುಟು೦ಬವನ್ನು ಹಳಿದವಳಲ್ಲ ಆಕೆ. ಅಭ್ಯಾಸವಿಲ್ಲದ ಕೆಲಸಗಳನ್ನೆಲ್ಲ ಒ೦ದೊ೦ದಾಗಿ ಕಲಿತಳು. ಸುತ್ತಮುತ್ತಲಿನವರೆಲ್ಲರೊ೦ದಿಗೆ ಬೆರೆತಳು. ಶಿಸ್ತಿನ ಸರದಾರ ಎನಿಸುವ ಪತಿಗೆ ಶೀಘ್ರವಾಗಿ ಸಿಟ್ಟು ಬರುತ್ತಿತ್ತು. ತಾಳ್ಮೆಯ ಪ್ರತಿರೂಪದ೦ತಿರುವ ಅಲಮೇಲು ನಗುನಗುತ್ತಲೇ ಬದುಕಿನ ಹೊಣೆ ಹೊರುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು. "ಶಾಲೆಯಲ್ಲಿ ಏನು ಕಲಿಯುತ್ತೀರೋ ಅದನ್ನು ಚೆನ್ನಾಗಿ ಕಲಿಯಿರಿ, ಅದಕ್ಕೆ ಬೇಕಾದ ಎಲ್ಲಾ ಸವಲತ್ತನ್ನು ನಾನು ಒದಗಿಸುತ್ತೇನೆ' ಎ೦ಬ ಪತಿಗೆ ಲಲಿತಕಲೆಗಳೆ೦ದರೆ ಸೋಮಾರಿಗಳು ಕಾಲಕ್ಷೇಪ ಮಾಡುವ ಸ೦ಗತಿ ಎನಿಸುತ್ತಿತ್ತು.
ಅಲಮೇಲು ಅವರಿಗೆ ಲಲಿತಕಲೆಗಳಲ್ಲಿ ಅಪಾರ ಆಸಕ್ತಿ ಇತ್ತು. ಮಗ ಇ೦ಜಿನಿಯರಿ೦ಗ್ ಓದುತ್ತಿದ್ದಾಗಲೂ, "ಸ೦ಸ್ಕೃತವನ್ನು ಓದು. ಸ೦ಗೀತವನ್ನು ಕಲಿ' ಎ೦ದು ಭಾರತೀಯ ಕಲೆಗಳ ಬಗ್ಗೆ ರುಚಿ ಹಚ್ಚಿದರು. ಮಕ್ಕಳು ಅಮ್ಮನ ಪ್ರೀತಿಯ ಮಕ್ಕಳಾಗಿ ಬೆಳೆದರು. "ಕಾಲೇಜು ಓದುವ ದಿನಗಳಲ್ಲೂ ನಾನು ಅಮ್ಮನೊ೦ದಿಗೆ ಸಿನಿಮಾಗಳನ್ನು ನೋಡುತ್ತಿದ್ದೆ. ಇಬ್ಬರೂ ಒಟ್ಟಿಗೇ ಕುಳಿತು ಸ೦ಗೀತವನ್ನು ಕೇಳುತ್ತಿದ್ದೆವು. ಹಾಡುತ್ತಿದ್ದೆವು. ಬುದ್ಧಿಯನ್ನು ಭಾವವನ್ನು ಬೆಸೆದು ಬದುಕು ಕಟ್ಟುವ ಕಲೆಯನ್ನು ನನಗೆ ಕಲಿಸಿದವಳು ನಮ್ಮಮ್ಮ' ಎ೦ದು ನೆನಪಿಸಿಕೊಳ್ಳುತ್ತಾರೆ ಶತಾವಧಾನಿ ಡಾ. ಆರ್. ಗಣೀಶ್.
ಅಲಮೇಲು ಹಬ್ಬ ಹರಿದಿನಗಳಲ್ಲಿ ಮನೆಗೆಲಸಕ್ಕೆ ಬರುವವರಿಗೆ ಮೊದಲು ಅರಿಶಿಣ ಕು೦ಕುಮ ನೀಡಿ, "ನೀನೇ ಮೊದಲಿನ ಮುತ್ತೈದೆ ನಮ್ಮ ಮನೆಗೆ ಬ೦ದವಳು' ಎನ್ನುತ್ತಿದ್ದರು. ವಿಧವೆಯರು ಯಾರಾದರೂ ಮನೆಗೆ ಬ೦ದರೆ ಅರಿಶಿಣ ಕು೦ಕುಮ ಕೊಡುತ್ತಿದ್ದರು. "ಹುಟ್ಟಿದಾಗಿನಿ೦ದ ಬ೦ದ ಅಲ೦ಕಾರಗಳನ್ನೆಲ್ಲ ಗ೦ಡ ಸತ್ತಾಗ ತೆಗೆಯುವುದೇಕೆ? ನಿಮಗಷ್ಟು ಬೇಸರವಿದ್ದರೆ ಕರಿಮಣಿಯನ್ನಷ್ಟೇ ತೆಗೆದಿಡಿ ಸಾಕು' ಎನ್ನುತ್ತಿದ್ದರು. ಆ ಕಾಲದಲ್ಲಿ ಜಾತಿ ಸ೦ಪ್ರದಾಯ ಮೂಢನ೦ಬಿಕೆಗಳ ವಿರುದ್ಧವಾದ ಇ೦ತಹ ನಡವಳಿಕೆಯುಳ್ಳ ಅಪರೂಪದ ವ್ಯಕ್ತಿತ್ವದವರಾಗಿದ್ದರು ಅವರು.
ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳಲಾರದ ಕಷ್ಟ ಅಲಮೇಲು ಅವರದ್ದಾದರೂ ಆ ಆತ೦ಕ ಮಕ್ಕಳಿಗೆ ಕಾಡದ೦ತೆ ಎಚ್ಚರ ವಹಿಸಿದರು. ಪತಿ ಕ್ಯಾನ್ಸರ್‍ಗೆ ತುತ್ತಾದಾಗ ಮನ ಮುಟ್ಟಿ ಸೇವೆ ಸಲ್ಲಿಸಿದರು. ನಾಲ್ಕು ವಷ೯ಗಳ ಸೇವೆಗೆ ಪ್ರತಿಫಲ ದೊರೆಯದೆ ಪತಿ ವಿಧಿವಶರಾದರು.
ಎಪ್ಪತ್ತರ ಇಳಿವಯಸ್ಸಿನಲ್ಲಿ ಅಲಮೇಲು ಅವರಿಗೆ ಆಲೆl„ಮರ್ ಕಾಯಿಲೆ ಕಾಣಿಸಿಕೊಳ್ಳಲಾರ೦ಭಿಸಿತ್ತು. ಮರೆವು ಶುರುವಾಗಿತ್ತು. ಒ೦ದು ದಿನ ತಳಕ್ಕೆ ನೀರು ಹಾಕದೆ ಕುಕ್ಕರನ್ನು ಒಲೆಗೇರಿಸಿ ಅನ್ನ ಹೊತ್ತಿಸಿದರೆ ಇನ್ನೊ೦ದು ದಿನ ಬಾಗಿಲಿಗೆ ಚಿಲಕ ಹಾಕುವುದನ್ನೇ ಮರೆಯುತ್ತಿದ್ದರು. ಅಮ್ಮನ ಮರೆವು ಮಗನಿಗೆ ಆತ೦ಕ ಹುಟ್ಟಿಸಿತ್ತು. ವೈದ್ಯರಲ್ಲಿಗೆ ಕರೆದುಕೊ೦ಡು ಹೋದಾಗ ಅವರಿಗಿರುವುದು ಆಲ್ಫೈಮರ್ ಕಾಯಿಲೆ ಎ೦ದರು (ಈ ಕಾಯಿಲೆಗೆ ತುತ್ತಾದವರಿಗೆ ನಿಧಾನವಾಗಿ ಎಲ್ಲವೂ ಮರೆತುಹೋಗುತ್ತದೆ. ಒ೦ದಥ೯ದಲ್ಲಿ ಅವರು ಮಗುವೇ ಆಗುತ್ತಾರೆ.)
ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎ೦ದು ಸಾಕಷ್ಟು ವೈದ್ಯರನ್ನು ಸ೦ಪಕಿ೯ಸಿದ್ದಾಯಿತು. ಅದೇ ಸಮಯದಲ್ಲಿ ಆಸ್ಪತ್ರೆಯವರ ನಿಲ೯ಕ್ಷದಿ೦ದ ಅಲಮೇಲು ಅವರಿಗೆ ಬೆನ್ನಮೇಲೆ ಹುಣ್ಣಾಗಿ ಯಮಯಾತನೆ ಶುರುವಾಗಿತ್ತು. "ಆಸ್ಪತ್ರೆಯಿ೦ದ ಡಿಸ್ಚಾಜ್‍೯ ಮಾಡಿಕೊಡಿ. ಮನೆಯಲ್ಲಿ ನಾನೇ ಪ್ರತಿದಿನ ಡ್ರೆಸ್ಸಿ೦ಗ್ ಮಾಡಿಸುತ್ತೇನೆ' ಎ೦ದು ಮಗ ಹೇಳಿದ. ಅವಿವಾಹಿತನಾಗಿಯೇ ಉಳಿದ ಮಗ ಅಮ್ಮನನ್ನು ನೋಡಿಕೊಳ್ಳುತ್ತಾನಾದರೂ ಹೇಗೆ? "ಯಾವುದಾದರೂ ಆಸ್ಪತ್ರೆಯಲ್ಲಿಯೇ ಇಡಿ' ಎ೦ದು ಎಲ್ಲರೂ ಇತ್ತ ಸಲಹೆಯನ್ನು ತಿರಸ್ಕರಿಸಿ ಮನೆಗೇ ಕರೆದುತ೦ದ.
ಅಮ್ಮ ಎನ್ನುವುದನ್ನು ಬಿಟ್ಟ ಮಗ, ನ೦ದಾಪಾಪೂ ಎನ್ನಲಾರ೦ಭಿಸಿದ. ಮಗುವನ್ನು ಆರೈಕೆ ಮಾಡಿದ೦ತೆ ದಿನವೂ ಅವರ ಸೇವೆ ಮಾಡಿದ. ಸತತವಾಗಿ ಒ೦ದೂವರೆ ವಷ೯ ಡ್ರೆಸ್ಸಿ೦ಗ್ ಮಾಡಿದ ಮೇಲೆ ಅ೦ಗೈ ಅಗಲವಾದ ಬೆಡ್‍ಸೋರ್ ವಾಸಿಯಾಗಿ ವೈದ್ಯರಿಗೇ ಅಚ್ಚರಿ ಮೂಡಿಸಿತ್ತು. "ಯಾರಪ್ಪಾ ನೀನು? ನನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದೀಯಾ?' ಎ೦ದು ಪ್ರಶ್ನಿಸುವ ಅಮ್ಮನಿಗೆ ಮಗನ ಗುರುತೇ ತಿಳಿಯುತ್ತಿರಲಿಲ್ಲ. ಈ ಅಮ್ಮ ಮಗನ ಪ್ರೀತಿಗೆ ಸ್ನೇಹಿತರ, ಹಿತೈಷಿಗಳ, ವೈದ್ಯರುಗಳ ಅಪಾರ ಬೆ೦ಬಲವಿತ್ತು. ಅಮೆರಿಕ ವಿಶ್ವವಿದ್ಯಾಲಯದಿ೦ದ ಒ೦ದು ಟೀಮ್ ಅವರ ಮನೆಗೇ ಬ೦ದು ಆಲ್ಫೈಮರ್ ಕಾಯಿಲೆ ಇರುವವರನ್ನು ದೀಘ೯ಕಾಲ ನೋಡಿಕೊ೦ಡ ಮನೆಯವರಿಗೇ ಖಿನ್ನತೆ ಬರುತ್ತದೆ. ಅಪಾರವಾದ ಏಕಾಗ್ರತೆ ಬೇಡುವ ಶತಾವಧಾನವನ್ನೆಲ್ಲ ಇವರು ಸಲೀಸಾಗಿ ಮಾಡುವುದು ಹೇಗೆ ಎ೦ದು ಅಭ್ಯಸಿಸಿಕೊ೦ಡು ಹೋದರು!
"ಅಮ್ಮನಿಗೆ ಅಥ೯ವಾಗಲಿ ಬಿಡಲಿ, ಕಾಯ೯ಕ್ರಮದ ನಿಮಿತ್ತ ಬೇರೆ ಊರಿಗೆ ಹೋಗಲಿ, ಫೋನಿನಲ್ಲಾದರೂ ಪ್ರತಿದಿನವೂ ಮಾತನಾಡುತ್ತಿದ್ದೆ. ಆಗ ಬೊ೦ಬೆಯ೦ತಿದ್ದ ಅಮ್ಮನ ಮುಖದ ಮೇಲೊ೦ದು ಆನ೦ದದ ಕಳೆ ಇರುತ್ತಿತ್ತು. ದಿನವೂ ಅಮ್ಮನ ಮಡಿಲಿನಲ್ಲಿ ಒ೦ದು ನಿಮಿಷವಾದರೂ ತಲೆ ಇಡುತ್ತಿದ್ದೆ' ಎನ್ನುವ ಮಗನ ಪ್ರೀತಿ, ಕಾಳಜಿಯಲ್ಲಿ ಎ೦ಟು ವಷ೯ಗಳ ಸುದೀಘ೯ ಅವಧಿ ನ೦ದಾಪಾಪೂ ಬದುಕಿದ್ದರು. "ಅಮ್ಮ ಹೋಗಿ ನಾಲ್ಕು ವಷ೯ಗಳಾದವು. ಇನ್ನೂ ಅವರಿರಬೇಕಿತ್ತು ಎ೦ದೇ ಎನಿಸುತ್ತದೆ' ಎ೦ದು ಕಣ್ಣಾಲಿ ತು೦ಬಿಕೊಳ್ಳುವ ಪ್ರತಿಭಾವ೦ತ ಮಗನಲ್ಲಿಯೇ ಅಮ್ಮ ಜೀವ೦ತವಾಗಿದ್ದಾರೆ. ಮಾನವೀಯ ಮೌಲ್ಯಗಳನ್ನು ಪ್ರತಿನಿಧಿಸುವ ಡಾ. ಆರ್. ಗಣೀಶರ೦ಥವರು ನಿಸ್ಸ೦ಶಯವಾಗಿಯೂ ನಮಗೆ ದಾರಿದೀಪವಾಗಬಲ್ಲರು.



 ಮಾಲತಿ ಹೆಗ್ಗಡೆ
ಕೃಪೆ - ವಿಜಯವಾಣಿ

Thursday, February 25, 2016

ನೆಹರುಗೊಂದು ಪತ್ರ - ಪಲ್ಲವಿ ರಾವ್

ಪ್ರೀತಿಯ ನೆಹರೂಜಿ,ನೆಮ್ಮದಿಯಾಗಿರಬೇಕಲ್ಲ? ಕಂಗ್ರಾಜುಲೇಷನ್ಸ್.
ಅಂತೂ ಭಾರತದ ಯುವ ಜನತೆಗೆ ದೇಶವೆಂದರೆ ಭೌಗೋಳಿಕ ಇರುವಿಕೆಯೇ ಅರ್ಥಹೀನ, ಇಲ್ಲಿನ ನಂಬಿಕೆಗಳೆಲ್ಲವೂ ಅವೈಜ್ನಾನಿಕ, ಆಚರಣೆಗಳೆಲ್ಲ ತುಚ್ಚ , ಹೆಮ್ಮೆ ಪಡುವಂತದ್ದೂ ಇಲ್ಲೇನೂ ಇಲ್ಲ , ದೇಶವೆಂದರೆ ತಾಯಿ ಅನ್ನುವ ಕಲ್ಪನೆಯೇ ಬುಲ್ಶಿಟ್ ಅನ್ನುವ ಮನೋಭಾವವನ್ನು ನಿಮ್ಮ ಕನಸಿನ ವೈಜ್ನಾನಿಕ ಆಧುನಿಕ ಪಾಶ್ಚಾತ್ಯ ಶಿಕ್ಷಣ ಬಹಳ ಯಶಸ್ವಿಯಾಗಿ ಬಿತ್ತಿದೆ. ನೀವು ಬಹಳವಾಗಿ ಆರಾಧಿಸಿದ ಇತಿಹಾಸ ತಜ್ನರಿಂದ ಬರೆಸಿದ ಇತಿಹಾಸ ಈ ದೇಶದ ತರುಣರಲ್ಲಿ ಸಿನಿಕತೆಯನ್ನು,ದೇಶ ಕಾಯುವ ಸೈನಿಕರ ಬಗ್ಗೆ ತಿರಸ್ಕಾರವನ್ನೂ ಪ್ರಜಾಪ್ರಭುತ್ವದ ಬುನಾದಿಯ ಮೇಲೆ ದಾಳಿ ನಡೆಸಿದವರನ್ನೂ ಆರಾಧಿಸುವ ಮಟ್ಟಕ್ಕೆ ಬೆಳೆಸಿದೆ. ನೀವು ಇದನ್ನೇ ಬಯಸಿದ್ದೀರಿ ಅಲ್ವ? ಪ್ರತಿಯೊಂದನ್ನೂ ಪ್ರಶ್ನಿಸುವ, ತಿರಸ್ಕರಿಸುವ ಎಡಬಿಡಂಗಿ ಮನೋಭಾವವನ್ನೇ ವೈಜ್ನಾನಿಕ ಎಂದು ಅರ್ಥೈಸಿದ್ದವರಿಗೆ ಇಂದಿನ ವಿಶ್ವವಿದ್ಯಾನಿಲಯಗಳ ದಿಕ್ಕುದೆಶೆ ಇಲ್ಲದ ಭವಿಷ್ಯದ ಬಗ್ಗೆ ಕನಸು, ದೇಶದ ಬಗ್ಗೆ ಕಾಳಜಿ ಎರಡೂ ಇಲ್ಲದ ಸಿನಿಕ ಯುವಭಾರತ ಹೆಮ್ಮೆ ತಂದಿರಬೇಕು , ಕಂಗ್ರಾಜ್ಯುಲೇಷನ್ಸ್!
ನೀವು ಮತ್ತು ನಿಮ್ಮ ಕುಟುಂಬದ ಸ್ವತ್ತಾಗಿ ಹೋದ ಪಕ್ಷಕ್ಕೆ ಭಾರತದ ಬಗ್ಗೆ ಪ್ರೀತಿ, ಹೆಮ್ಮೆ ಹುಟ್ಟುವುದಾದರೂ ಹೇಗೆ? ಸದಾ ಪಾಶ್ಚಾತ್ಯ ಚಿಂತನೆ, ಅಲ್ಲಿನ ವಿದ್ಯಾಲಯಗಳ ಓದು, ಅಲ್ಲಿನದೇ ಬದುಕನ್ನು ಕಂಡ ನಿಮ್ಮವರಿಗೆ ಈ ದೇಶ ಬರಿಯ ಮೂಢನಂಬಿಕೆಗಳ , ಜಾತಿಗಳ, ತಾರತಮ್ಯದ ಆಡೊಂಬೊಲವಾಗಿಯೇ ಕಂಡಿತ್ತು. ನೀವೇನೋ ಡಿಸ್ಕವರಿ ಆಫ್ ಇಂಡಿಯ ಬರೆದುಬಿಟ್ಟಿರಿ. ಆದರೆ ನಿಮ್ಮ ಮರಿ ಮಕ್ಕಳಿಗೆ ಅದರ ಕಲ್ಪನೆಯಾದರೂ ಇದೆ ಅಂದು ಕೊಂಡಿದ್ದೀರ? ನೀವು ಅಷ್ಟೆಲ್ಲ ಕಾಳಜಿಯಿಂದ ಜತನವಾಗಿ ಅತ್ಯಂತ ಚಾಣಾಕ್ಶತನದಿಂದ ಅಡೆತಡೆಗಳನ್ನು ನಿವಾರಿಸಿ , ಕಾದಿಟ್ಟ ದೇಶಾಡಳಿತದ ಕಿರೀಟ ಕೈ ತಪ್ಪಿದ ಸಂಕಟದಲ್ಲಿ ನಿಮ್ಮದೇ ವಂಶದ ಕುಡಿ ದೇಶದ್ರೋಹಿಗಳಿಗೂ ಜೈಕಾರ ಹಾಕುತ್ತಾನೆ. ನಮಗವನ ಬಗ್ಗೆ ನಿರೀಕ್ಶೆಗಳೇನೂ ಇಲ್ಲ ಬಿಡಿ. ಎಷ್ಟಾದರೂ ಏನೂ ಬೆಳೆಯದ ಹಿಮದ ಮರುಭೂಮಿಯನ್ನೂ ಬೇರೆ ದೇಶಕ್ಕೆ ಕೊಟ್ಟರೇನೂ ತೊಂದರೆ ಇಲ್ಲ ಅಂದವರಲ್ಲವೆ ನೀವೂ? ನಿಮ್ಮ ವಾರಸುದಾರರು ನಿಮ್ಮ ಜೀನ್ಗಳಿಗೆ ನ್ಯಾಯ ಸಲ್ಲಿಸುತ್ತಿದ್ದಾರೆ ಬಿಡಿ. ಭಾರತದ ಸಾರ್ವಭೌಮತೆ ವಿಚ್ಛಿದ್ರವಾದರೂ ಚಿಂತೆ ಇಲ್ಲ, ಅವರ ಆಡಳಿತ ನಡೆಸಲು ತುಂಡು ಉಳಿದರೆ ಸಾಕು ಅನ್ನುತ್ತ ಭಾರತವನ್ನು ತುಂಡಾಗಿಸಲು ಹೋರಾಡುವವರ ಜತೆ ಧರಣಿ ಕೂರುತ್ತಿದ್ದಾರೆ. ನೀವು ಮಗಳನ್ನು ಪಟ್ಟಕ್ಕೇರಿಸಿದಾಗ ಇದನ್ನೇ ನಿರೀಕ್ಶಿಸಿದ್ದಿರೇನೋ ಅಲ್ವ?
ಸ್ವಂತತ್ರ ಹೋರಾಟಕ್ಕೆ ಪ್ರಾಣ ತೆತ್ತ ಕೋಟ್ಯಾಂತರ ಭಾರತೀಯರ ತ್ಯಾಗವೆಲ್ಲವನ್ನೂ ನಿರ್ಲಕ್ಶಿಸಿ , ಕೇವಲ ನಿಮ್ಮ ಹೆಸರನ್ನೂ, ನಿಮ್ಮ ಮುಂಬರುವ ಪೀಳಿಗೆಯ ಹೆಸರನ್ನೂ ಜನಮಾನಸದಲ್ಲಿ ಬಿತ್ತಲು , ದೇಶದ ತೆರಿಗೆ ಹಣದಲ್ಲಿ ಕಟ್ಟಲ್ಪಟ್ಟ ಪ್ರತಿ ರಾಷ್ಟೀಯ ಆಸ್ತಿಗೂ ಅದು ನಿಮ್ಮ ಸ್ವಂತ ಆಸ್ತಿಯೇನೋ ಅನ್ನುವಂತೆ ನಾಮಕರಣ ಮಾಡಿದಿರಿ. ದೇಶದ ಬಗ್ಗೆ ,ದೇಶದ ಅಖಂಡತೆಯ ಬಗ್ಗೆ ಅರಿವೇ ಇಲ್ಲದ ನಿಮ್ಮ ಮೊಮ್ಮಗನ ಹೆಂಡತಿಗಂತೂ ಇಲ್ಲಿನ ಪಾಸ್ಪೋರ್ಟ್ ಬೇಡವಾದರೂ ವಿಮಾನ ನಿಲ್ದಾಣಕ್ಕೆ ನಿಮ್ಮ ಕುಟುಂಬದ ಹೆಸರು ಬೇಕೇ ಬೇಕು. ಅಂತ ಕುಟುಂಬ ಶ್ರದ್ದೆ! ನಿಮ್ಮದೇ ಹೆಸರಿನ ವಿಶ್ವವಿದ್ಯಾನಿಲಯದಲ್ಲಿ , ನಿಮ್ಮ ಮರಿಮಗ ನೀವು( ಹೇಗಿದ್ದರೂ ಕೋಟ್ಯಾಂತರ ಇತರರನ್ನು ಯಶಸ್ವಿಯಾಗಿ ಜನರ ಮಧ್ಯದಿಂದ ಮರೆಸಿಬಿಟ್ಟಿದ್ದೀರಲ್ಲ!) ಮಧ್ಯರಾತ್ರಿ ಭಾರತಕ್ಕೆ ತಂದಿದ್ದು ಸ್ವಾತಂತ್ರ್ಯವೇ ಅಲ್ಲ, ಬಿಡುಗಡೆ ಬೇಕು ಅಂತ ವಾದಿಸುತ್ತಿದ್ದಾನೆ, ಇಡಿಯ ದೇಶದ ಪವರ್ ಆಫ್ ಅಟಾರ್ನಿಯನ್ನು ಶಾಶ್ವತವಾಗಿ ಕುಟುಂಬಕ್ಕೆ ಸೇರಿಸುವ ಪ್ಲಾನ್ ಮಾಡಿದ ನಿಮಗೆ , ಮರಿಮಗ ಸ್ವತಂತ್ರ ಭಾರತದ ಕಲ್ಪನೆಯನ್ನೇ ನಿರಾಕರಿಸುವ ಬಗ್ಗೆ ಹೊಳೆದಿರಲಿಕ್ಕಿಲ್ಲ ಅಲ್ವ? ಅಥವ ನಿಮ್ಮ ಪ್ರಕಾರ ರಾಷ್ಟ್ರವನ್ನು , ಸಾರ್ವಬೌಮತೆಯ ಕಲ್ಪನೆಯನ್ನೂ ನಿರಾಕರಿಸುವುದು ಇದೆಲ್ಲ ಮುಂದುವರೆದ , ವೈಜ್ನಾನಿಕ ಮನೋಭಾವದ ಸಂಕೇತವೇ?
ನೆಹರೂಜಿ, ಸಮಾಜವಾದದ ಮುಸುಕಿನಲ್ಲಿ , ಜಾತ್ಯತೀತತೆಯ ಹೆಸರಿನಲ್ಲಿ ಭಾರತವನ್ನೂ ಸದಾ ಜಾತಿಗಳ ಹೆಸರಿನಲ್ಲಿ, ವರ್ಗಗಳ ಹೆಸರಿನಲ್ಲಿ ಒಡೆಯುವ, ತನ್ಮೂಲಕ ಸದಾ ನಿಮ್ಮ ಕುಟುಂಬ ಅರ್ಥಾತ್ ಪಕ್ಶ ಸದಾ ಅಧಿಕಾರದಲ್ಲಿರುವ ನಿಮ್ಮ ಮಾಸ್ಟರ್ ಪ್ಲಾನ್ ಅನ್ನು ಕುಟುಂಬ ಯಶಸ್ವಿಯಾಗಿಯೇ ಆಚರಿಸುತ್ತಿದೆ. ಜಾತಿಗಳ ಲೆಕ್ಕಾಚಾರವೆಲ್ಲ ಮುಗಿದ ಮೇಲೆ ಅವರು ನಿಮ್ಮ ಮೇಲ್ಪಂಕ್ತಿಯನ್ನೇ ಅನುಸರಿಸಿ ಕೋಮುಗಳಲ್ಲಿ ತಾರತಮ್ಯದ, ಪ್ರತ್ಯೇಕತೆಯ ವಿಷಬೀಜಗಳನ್ನು ಯಶಸ್ವಿಯಾಗಿ ಬಿತ್ತಿ ಹುಲುಸಾಗಿ ಪಸಲನ್ನೂ ಪಡೆಯುತ್ತಿದ್ದರು. ಆದರೀಗ ಅದು ಅವರ ನಿಯಂತ್ರಣವನ್ನೂ ಮೀರಿ ದಾವನಲದಂತೆ ಆವರಿಸಿ ದೇಶದ ಕತ್ತು ಹಿಸುಕುತ್ತಿದೆ. ನಿಮ್ಮ ಪ್ರತ್ಯೇಕತೆಯ, ನೆಹರುವಿಯನ್ ಡಿವೈಡ್ ಅಂಡ್ ರೂಲ್ ಆಡಳಿತ ಅದೆಷ್ಟು ಯಶಸ್ವಿಯಾಗಿ ದೇಶದ ಯುವಜನತೆಯನ್ನು ನೇಣಿಗಟ್ಟುತ್ತಿದೆ ನೋಡಿದಿರ? ನಿಮ್ಮ ಯೋಚನೆಯ ಯಶಸ್ಸಿಗೆ ಎಂಥ ಅದ್ಭುತ ಫಲಿತಾಂಶ ಅಲ್ಲವೆ!
ಇದೆಲ್ಲ ಬರೆಯುತ್ತಿರಲಿಲ್ಲ ನೆಹರೂಜಿ, ಆದರೆ ನಿನ್ನೆ ನಿಮ್ಮದೇ ಪಕ್ಷದ ಅಪ್ಪಣೆಯ ಮೇರೆಗೆ ’ತೀಸ್ತಾ ಸೆಟ್ಲವಾದ್ ಅನ್ನುವ ಮಹಿಳೆ ೪ ನೆಯ ತರಗತಿಗೆ ಪಠ್ಯಪುಸ್ತಕ ಬರೆದಿದ್ದಾಳೆ. ಅದರಲ್ಲಿರುವುದು ಸಿಯಾಚಿನ್ನಲ್ಲಿ ಮಡಿದ ಯೋಧರ ಬಗ್ಗೆ ಹೆಮ್ಮೆಯಲ್ಲ ಬದಲಿಗೆ ಎಳೆಯ ಮನಸ್ಸುಗಳಲ್ಲಿ ಭಾರತ ಅನ್ನುವ ದೇಶದ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಆಕ್ರೋಶವನ್ನೂ , ಅಸಮಧಾನವನ್ನೂ ಅಸಹ್ಯವನ್ನೂ ಮೂಡಿಸುವ ಬರಹಗಳು. ನೀವಿದನ್ನು ಬಯಸಿದ್ದೀರ? ತನ್ನದೇ ಮಾತೃಭೂಮಿಯ ಬಗ್ಗೆ ಹೀಯಾಳಿಕೆಯನ್ನೂ, ಇತಿಹಾಸದ ಬಗ್ಗೆ ಕೀಳರಿಮೆಯನ್ನೂ, ತನ್ನೆಲ್ಲ ಪರಂಪರೆಯ ಬಗ್ಗೆ ಅಸಹ್ಯವನ್ನೂ ಎಳೆಯ ಮನಸ್ಸುಗಳಲ್ಲಿ ಮೂಡಿಸುವ , ತನ್ಮೂಲಕ ಚಿಗುರಿನಲ್ಲೇ ದೇಶದ ಬಗ್ಗೆ ಪ್ರೀತಿ ಹೆಮ್ಮೆ ಕಾಳಜಿಯನ್ನೂ ಚಿವುಟಿ ಹಾಕುವ ಇಂತಹ ನತದೃಷ್ಟ ಉದಾಹರಣೆ ವಿಶ್ವದಲ್ಲೇಲ್ಲೂದೊರಕುವುದಿಲ್ಲ. ನಿಮಗೆ ನಿಮ್ಮ ಕುಟುಂಬಕ್ಕೆ ಈ ದೇಶ ಜನ್ಮ ನೀಡಿದ ಒಂದೇ ತಪ್ಪಿಗೆ ಇಂತಹ ಮಾತೃಘಾತುಕತನವನ್ನು ಅದೆಷ್ಟು ಯಶಸ್ವಿಯಾಗಿ ಇಷ್ಟೊಂದು ವರ್ಷ ನಡೆಸಿ ಬಿಟ್ಟಿರಲ್ಲ? ಇದಕ್ಕೇ ನೀವು ವಿದೇಶಗಳಲ್ಲಿ ವ್ಯಾಸಂಗ ನಡೆಸಿದ್ದೆ? ಜೈಲು ವಾಸ ಅನುಭವಿಸಿದ್ದೆ? ನೆಹರೂಜಿ, ನೆನಪಿಟ್ಟುಕೊಳ್ಳಿ ನಿಮ್ಮ ಸ್ವಜನ ಪ್ರೀತಿಯನ್ನೂ, ಸಂಪತ್ತನ್ನು ಕೊಳ್ಳೆ ಹೊಡೆದು ವೈಯುಕ್ತಿಕ ತಿಜೋರಿ ತುಂಬಿಸಿಕೊಳ್ಳುವ ಹವ್ಯಾಸಗಳನ್ನೂ, ಸದಾ ಉತ್ತಮ ಚಿಂತನೆಗಳಿಗೆ ಪಶ್ಚಿಮದತ್ತ ಮುಖ ಮಾಡುವ ಆತ್ಮನ್ಯೂನ್ಯತೆಯ ಹಳವಂಡಗಳನ್ನೂ ನನ್ನ ದೇಶ ಕ್ಷಮಿಸಿ ಬಿಡುತ್ತಿತ್ತು. ಆದರೆ, ಕೋಟ್ಯಾಂತರ ಎಳೆಯ ಮನಸ್ಸುಗಳಿಗೆ ದೇಶದ ವಿರುದ್ದ ಪ್ರಚೋದನೆ ನೀಡುವ, ರಾಷ್ಟ್ರದ ಕಲ್ಪನೆಯೇ ಅಸಹ್ಯ, ಕೀಳರಿಮೆ ಹಾಸ್ಯಾಸ್ಪದ ಅನ್ನಿಸುವಂತೆ ಮಾಡುವ ಈ ನಿಮ್ಮ ದೇಶವಿರೋಧಿ ಶಿಕ್ಷಣವನ್ನು , ಕೇವಲ ಒಂದು ಕುಟುಂಬದ ಅಧಿಕಾರ ದಾಹಕ್ಕೆ ಇಡಿಯ ದೇಶದ ಮಕ್ಕಳಿಗೆ ರಾಷ್ಟ್ರದ್ರೋಹೀ ಚಿಂತನೆಯ ವಿಷವುಣಿಸುವ ನಿಮ್ಮ ಪಕ್ಶದ ಮನಸ್ಥಿತಿಯನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ನೀವೇ ತಿರುಚಿದ ಇತಿಹಾಸ ವರ್ತಮಾನದಲ್ಲಿ ನಿಮಗೆ ಪಾಠ ಕಲಿಸುವ ದಿನಗಳು ದೂರವಿಲ್ಲ. ನೀವದಲ್ಲೇ ಇರಿ, ದಯವಿಟ್ಟು ಮತ್ತೆಂದೂ ಈ ದೇಶದಲ್ಲಿ ಹುಟ್ಟಬೇಡಿ. ಇತಿ, ರೋಮಿಲಾ ಥಾಪರ್ ಓದಿದ ನಂತರವೂ ದೇಶವನ್ನು ಪ್ರೀತಿಸುವ ದೇಶವಾಸಿ .


ಪಲ್ಲವಿ ರಾವ್

Sunday, February 14, 2016

ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪ್ರೇಮ ಪತ್ರ - ವಿವೇಕ ಬೆಟ್ಕುಳಿ

ಪ್ರೀತಿಯ ಗೆಳತಿ,,,,,,,,,

    ನನಗೆ ಗೊತ್ತು ಕಣೆ ನಿನಗೆ ಈ ದಿನ ನಾನು ಕೆಂಪು ಗುಲಾಬಿ ಕೊಟ್ಟರೆ ತುಂಬಾ ಸಂತೋಷವಾಗುವುದು ಎಂದು. ಆದರೇ ಏನು ಮಾಡಲಿ, ನನ್ನ ಕುಟುಂಬದ ಬಗ್ಗೆ ಗೊತ್ತಲ್ಲ ನಿಜವಾಗಿ ನನ್ನ ಅಪ್ಪ ತುಂಬಾ ಲಿಬರಲ್ ಜಾತ್ಯಾತೀತ, ಆದರೇ ಅನಿವಾರ್ಯವಾಗಿ ಕಟ್ಟಾ  ಹಿಂದುತ್ವವನ್ನು ಪ್ರದಶಿ౯ಸುತ್ತಿರುವರು. ಅದರಿಂದಾಗಿಯೇ   ಇಂದು ನಮ್ಮ ಅಪ್ಪ ರಾಜಕೀಯದಲ್ಲಿ ಜಿಲ್ಲೆಯಲ್ಲಿ ಹೆಸರು ಪಡೆದಿರುವರು. ನನಗೂ ಹಿಂದುತ್ವದ ಹೆಸರಿನಲ್ಲಿ ಭಾವನೆಗಳನ್ನು ಅದುಮಿಕೊಳ್ಳಲು ಇಷ್ಟವಿಲ್ಲ ಗೆಳತಿ, ಆದರೂ ಅಪ್ಪನ ಪ್ರೆಸ್ಟಿಜ್, ರಾಜಕೀಯ ಭವಿಷ್ಯ ಎಲ್ಲವೂ ಇದರ ಜೊತೆ ಸೇರಿಕೊಂಡಿದೆ. ಅಕಸ್ಮಾತ ಆಗಿ ನಾನು ಪ್ರೇಮಿಗಳ ದಿನಾಚರಣೆಯಲ್ಲಿ ಭಾಗವಹಿಸಿ ನಿನೊಂದಿಗೆ ಕಾಲಕಳೆದರೆ ಖಂಡಿತಾ ನಮ್ಮ ಅಪ್ಪನಿಗೆ ಮುಂದಿನ ಬಾರಿ ಚುನಾವಣೆಗೆ ಟಿಕೇಟ್ ಸಿಗದು, ಉಳಿದ ಪಕ್ಷದವರಿಗೆ ನಾನೇ ಒಂದು ವಿಷಯವಾಗಿ ಬಿಡುವೆನು. ದಯವಿಟ್ಟು ಕ್ಷಮಿಸು ಗೆಳತಿ. ಜನವರಿ 1 ಹೊಸ ವರ್ಷಕ್ಕೂ ನಾನು ಬರಲಿಲ್ಲ. ಹೊಸವರ್ಷ ಆಚರಣೆಯಂದು ನಾನು ಮನೆಯಲ್ಲಿಯೇ ಇದ್ದೇ ಬರುವ ಮನಸ್ಸಿದರೂ  ಆ ದಿನವೂ ಇದೇ ಸ್ಥಿತಿ. ಏನು ಮಾಡಲಿ ಒಂದಡೇ ಸಮಾಜ, ಮನೆ, ಅಪ್ಪ, ಅಮ್ಮ ಇನ್ನೊಂದಡೆ ನೀನು ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ? ನಾನು ತುಂಬಾ ದ್ವಂದದಲ್ಲಿ ಇರುವೆನು. ಆದರೇ ಒಂದಂತು ಸತ್ಯ ಗೆಳತಿ ಬರುವ ಯುಗಾದಿಯಂದು ನಾನು ನಿನ ಜೊತೆ ಖಂಡಿತಾ ಕಾಲ ಕಳೆಯುವೆನು. ಆ ದಿನ ನಮ್ಮ ಹಿಂದುಗಳಿಗೆ ನವ ವಷಾ౯ಚರಣೆಯ ಸಂದರ್ಭ ಮನೆಯಲ್ಲಿ ಸಹಾ ಯಾವುದೇ ಅನುಮಾನ ಬರದು. ಆ ದಿನಕ್ಕಾಗಿ ಕಾಯುತ್ತಿರುವೆ.. . ಇಂದು ಪ್ರೇಮಿಗಳ ದಿನಾರಣೆ ನಾನು ಖುದ್ದಾಗಿ ನಿನ್ನ ಜೊತೆ ಇದ್ದು ಕಾಲಕಳೆಯಲು ಆಗುತ್ತಿಲ್ಲ. ಈ ದಿನ ನಮ್ಮ ಅಪ್ಪನ ಜೊತೆ ದಿನಾಚರಣೆಯನ್ನು ವಿರೋಧಿಸಿ ಧರಣಿ ಮಾಡಬೇಕಾಗಿದೆ. ಅರ್ಥ ಮಾಡಿಕೊಳ್ಳುವೆ ಎಂಬ ನಂಬಿಕೆ ನನಗಿದೆ. ಏನೇ ಇರಲಿ ಚಿನ್ನಾ ಪ್ರೇಮಿಗಳ ದಿನಾಚರಣೆಯ ಈ ಸಂದರ್ಭದಲ್ಲಿ ನಿನ್ನ ಪ್ರೇಮಿಯ ಕಡೆಯಿಂದ ಮನಸ್ಸಿನಾಳದ ಶುಭಾಶಯಗಳು.........
ಇಂತಿ ನಿನ್ನ ಕನಸಿನ ಗೆಳೆಯ
ಕಟ್ಟಾ ಹಿಂದುತ್ವವಾದಿ ಯುವಕ

ನಲ್ಮೇಯ ಗೆಳೆಯಾ,,,,,,,,,,,,,,,
       ಕಳೆದ ಮೂರು ವರ್ಷದಿಂದ ನಾನು ನೋಡುತ್ತಿರುವೆನು. ನಿನಗೆ ನಿನ್ನ ಅಪ್ಪನನ್ನು ಎದುರಿಸುವ ಧೈರ್ಯ ಬರುವುದು. ಒಂದಾದರೂ ದಿನ ನಾವು ಜಾಲಿಯಾಗಿ ಪ್ರೇಮಿಗಳಾಗಿ ಓಡಾಡಬಹುದು ಎಂದು, ಆದರೇ ನಿನ್ನ ಪುಕ್ಕಲುತನ ನೋಡಿದರೆ ಅದು ಸಾಧ್ಯವಿಲ್ಲ ಅನಿಸುತಿದೆ. ನಿನಗೆ ನನಗಿಂತ, ನಿನ್ನ ಅಪ್ಪನ ಡೋಂಗಿ ರಾಜಕೀಯದ ಬಗ್ಗೆಯೇ ಹೆಚ್ಚು ಕಾಳಜಿ. ಯಾಕಾಗಿ ಅಪ್ಪ ಮಗ ಮನಸ್ಸಿನಲ್ಲಿ ಒಂದು ಇರಿಸಿಕೊಂಡು ಹೊರ ಜಗತ್ತಿಗೆ ಬೇರೆ ರೀತಿಯಾಗಿ ಕಾಣಿಸಿಕೊಳ್ಳುವಿರಿ. ಸದಾ ಕಾಲ ನೀನು ನನ್ನೊಂದಿಗೆ ಕಾಲ ಕಳೆಯಲು ಒಂದಲ್ಲ ಒಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿರುವೆ.
ನಾನು ರಾಜಕೀಯ ಕುಟುಂಬದಿಂದ ಬಂದವಳು ಗೆಳೆಯಾ ನನಗೆ ನಿನ್ನ ಸ್ಥಿತಿ ಅರ್ಥವಾಗುವುದು. ನಮ್ಮ ಅಪ್ಪ ಸಹಾ ಶುದ್ದ ಸಂಪ್ರದಾಯವಾದಿ, ಆದರೇ ರಾಜಕೀಯವಾಗಿ ಜಾತ್ಯಾತೀತ ಆದ ಕಾರಣಕ್ಕೆ ನಾನು ಹೊಸವರ್ಷ, ಪ್ರೇಮಿಗಳ ದಿನಾಚರಣೆಯಂದು ಎಲ್ಲಿ ಬೇಕಾದರೂ ಹೋಗಬಹುದು, ಅದಕ್ಕಾಗಿ ಯಾವುದೇ ಅಡೆತಡೆ ಇಲ್ಲ. ಆದರೇ ನೀನು ಹೇಳಿದಂತೆ ಯುಗಾದಿ ಹಬ್ಬದ ದಿನ ನನಗೆ ಮನೆ ಬಿಟ್ಟು ಬರಲು ಕಷ್ಟ ಆ ದಿನ ಪೂಜೆ ಪನಸ್ಕಾರ ಎಂದು ತುಂಬಾ ಕೆಲಸ ಇರುವುದು. ನಮ್ಮ ಅಪ್ಪ ತೋರಿಸಿಕೊಳ್ಳಲು ಮಾತ್ರ ಜಾತ್ಯಾತೀತ, ಆದರೇ ಮನೆಯಲ್ಲಿ ತುಂಬಾ ಸಂಪ್ರದಾಯ ಕಣೋ. ನಮ್ಮ ಅಪ್ಪ ಸಹಾ ಒಂದು ರೀತಿಯ ಡೋಂಗಿ ರಾಜಕಾರಣೀಯೆ ಆಗಿರುವರು.
ಗೆಳೆಯಾ ನನ್ನ ನಿನ್ನ ಕುಟುಂಬದವರು ಈ ರೀತಿಯ ಡೋಂಗಿ ರಾಜಕೀಯದ ನಡುವೆ ನಮ್ಮ ಪ್ರೀತಿ ಕಣ್ಮರೆಯಾಗುವುದು ಬೇಕಾಗಿಲ್ಲ. ಇಂದೇ ನಿರ್ಧರಿಸು, ಒಂದು ಮನೆಯವರನ್ನು ಎದುರು ಹಾಕಿಕೊಂಡು ಮದುವೆ ಆಗಿ ಬದುಕಿ ತೋರಿಸುವುದು. ಇಲ್ಲಾ ಒಂದು ಮನೆಯರನ್ನು ಒಪ್ಪಿಸಿ ಮದುವೆಯಾಗಿ ಆ ನಂತರ ಕಮ್ಯೂನಿಷ್ಟರಾಗಿ ನಾವು ನಮ್ಮ ಕುಟುಂಬವನ್ನು ಬೆಳೆಸುವುದು. ನಿನ್ನ ಉತ್ತರವನ್ನು ಇದೇ 14 ರ೦ದು ತಿಳಿಸು. ನೀನ್ನ ಉತ್ತರದ ನಂತರ ನಾನು ನನ್ನ ಭವಿಷ್ಯದ ಬಗ್ಗೆ 23 ರ೦ದು ತೀಮಾ౯ನ ತೆಗೆದುಕೊಳ್ಳುವೆನು.

ಇಂತಿ ನಿನ್ನ ಮನದಾಳದ ಗೆಳತಿ
ಅಪ್ಪಟ ಜಾತ್ಯಾತೀತ ಯುವತಿ

ಆತ್ಮೀಯ  ಪ್ರೇಮಿಗಳೇ ಚುನಾವಣಾ ಸಮಯವಾದ್ದರಿಂದ ಈ ರೀತಿಯ ಪತ್ರ ಬರೆಯಬೇಕು ಎನಿಸಿತು. ದಯವಿಟ್ಟು ನಿಮ್ಮ ಜಾತಿ, ಧರ್ಮ, ಪ್ರಸ್ಟೆಜ್, ಸಮಾಜ ಈ ಎಲ್ಲದಕ್ಕೂ ಹೆದರಿ ನಿಮ್ಮತನವನ್ನು  ಬಿಟ್ಟು ಹೆಡಿಯಾಗಿ ಬದುಕದಿರಿ. ಡೋಂಗಿ ಜ್ಯಾತ್ಯಾತೀತತೆ, ಹಿಂದುತ್ವ ಧಾಮಿ౯ಕ ಅಂದತ್ವ ಈ ಎಲ್ಲವನ್ನು ಮೀರಿ ನಿಮ್ಮ ಪ್ರೇಮ ಅಮರವಾಗಲಿ. ಎಲ್ಲರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.

ವಿವೇಕ ಬೆಟ್ಕುಳಿ.

Monday, October 26, 2015

ಅತೀ ಎತ್ತರದ ಕಟ್ಟಡಗಳ ಮೇಲೆ ಹಗ್ಗ ಕಟ್ಟಿ ನಡೆದ - Philippe Petit




ಚಿಕ್ಕವನಿದ್ದಾಗ ಫ್ರಾನ್ಸಿನ ಬೀದಿಗಳಲ್ಲಿ ತಿರುಗುತ್ತ, ಜನಗಳು ಅಚ್ಚರಿಪಡುವ ಪುಟ್ಟ ಪುಟ್ಟ ಸಾಹಸ ಪ್ರದರ್ಶನಗಳನ್ನು ನೀಡುತ್ತ ಸಂಪಾದಿಸುವ ಹುಡುಗ Philippe Petit. ಇದರ ಬಗ್ಗೆ ಅವರ ಅಪ್ಪ ಅಮ್ಮನಿಗೆ ಕೊಂಚವೂ ಇಷ್ಟವಿರುವುದಿಲ್ಲ. ಸರ್ಕಸ್ಸೊಂದರಲ್ಲಿ ಹಗ್ಗದ ಮೇಲೆ ನಡೆಯುವ ಸರ್ಕಸ್ಸಿನವನೊಬ್ಬನ ಕೌಶಲ್ಯದಿಂದ ಪ್ರೇರಿತನಾಗುವ Philippe Petitಗೆ ಮುಂದೆ ತಾನೂ ಈ ಸಾಹಸವನ್ನು ಮಾಡಬೇಕೆಂಬ ಆಸೆಯಾಗುತ್ತದೆ. ಅದನ್ನು ಕಲಿಯುತ್ತ ಸಾಗುವ ಹಾದಿಯಲ್ಲಿ ಆತ ಹಗ್ಗ ಕಟ್ಟಿ ಮಧ್ಯೆ ನಡೆಯಲು ಅನುಕೂಲವಾಗಬಲ್ಲ ಎರಡು ಎತ್ತರದ ವಸ್ತುಗಳನ್ನು ಸದಾ ಹುಡುಕುತ್ತಿರುತ್ತಾನೆ.
ಯಾವುದೋ ಒಂದು ದೃಶ್ಯದಲ್ಲಿ ಹಲ್ಲು ನೋವಾಗಿ Dental Clinic ಗೆ ಹೋದಾಗ, ಅಲ್ಲಿಟ್ಟ ಮ್ಯಾಗಜೈನುಗಳ ಪೈಕಿ ಒಂದರಲ್ಲಿ ಪ್ರಪಂಚದ ಅತೀ ಎತ್ತರದ ಕಟ್ಟಡ ನ್ಯೂಯಾರ್ಕಿನ WTCಯ ಬಗೆಗಿನ ಮಾಹಿತಿ ಇವನ ಕಣ್ಣಿಗೆ ಬೀಳುತ್ತದೆ. ಕೇವಲ ಅದರ ಚಿತ್ರ ನೋಡಿಯೇ ರೋಮಾಂಚನಗೊಂಡು, ಜೀವನದಲ್ಲೊಮ್ಮೆ ತಾನು ಆ ಜೋಡಿ ಕಟ್ಟಡಗಳ ಮಧ್ಯೆ ಹಗ್ಗ ಕಟ್ಟಿ ನಡೆಯಬೇಕೆಂಬ ಮಹದಾಶೆ ಆ ಕ್ಷಣದಲ್ಲೇ ಅವನೆದೆಯೊಳಗೆ ಚಿಗುರೊಡೆಯುತ್ತದೆ. ಇಂಟರ್ನೆಟ್ಟುಗಳಿಲ್ಲದ ಎಪ್ಪತ್ತರ ದಶಕಗಳಲ್ಲಿ ಕೇವಲ ಪುಸ್ತಕಗಳಲ್ಲಿ, ವೃತ್ತಪತ್ರಿಕೆಗಳಲ್ಲಿ ಬರುವ ಆ ಕಟ್ಟಡದ ಬಗೆಗಿನ ಮಾಹಿತಿಯನ್ನು ಸಂಗ್ರಹಿಸುತ್ತ ತಯಾರಿ ಶುರುವಿಟ್ಟುಕೊಳ್ಳುತ್ತಾನೆ.
ಈ ಮಧ್ಯೆ ಮನೆಯಿಂದ ಹೊರಹಾಕಿಸಿಕೊಳ್ಳುವ Philippe Petitಗೆ Annie ಪರಿಚಯವಾಗುತ್ತಾಳೆ. ಈತ ತನ್ನ ಮಹತ್ವಾಕಾಂಕ್ಷೆಯನ್ನು ಅವಳಲ್ಲಿ ಹೇಳಿಕೊಂಡಾಗ ತನ್ನಿಂದಾದ ಸಹಾಯ ಮಾಡಲು ಜೊತೆಯಾಗುತ್ತಾಳೆ. ಇನ್ನೇನಿದ್ದರೂ ಆ ಗುರಿಯೆಡೆಗೆ ತನ್ನ ಪ್ರಯಾಣವಷ್ಟೆ. ಮೊದಲೇ ಬೇರೆ ದೇಶ. ಇಂತಹ ಆತ್ಮಹತ್ಯೆಗೆ ಸರಿಸಮಾನಾದ ಅಪಾಯಕಾರಿ ಸಾಹಸವನ್ನು ಯಾವುದೇ ದೇಶದ ಕಾನೂನು ಬೆಂಬಲಿಸುವುದಿಲ್ಲ. ಹಾಗಿದ್ದಾಗ ಈ ಕಾರ್ಯವನ್ನು ಸಾಧಿಸುವ ಹಾದಿಯಲ್ಲಿ ಆತನ ಸಿಹಿ-ಕಹಿ ಅನುಭವಗಳೇನು? Philippe Petit (ಪಾತ್ರದಲ್ಲಿ Joseph Gordon-Levitt) ತನ್ನ ಅನುಭವ ಹೇಗಿತ್ತು ಅನ್ನುವುದನ್ನು ನಮ್ಮೆದುರಿಗೆ ನಿಂತು ನಿರೂಪಿಸುತ್ತ ಇಡೀ ಚಿತ್ರದ ಪೂರ್ತಿ ಆವರಿಸಿಕೊಳ್ಳುತ್ತಾನೆ. ಪ್ರತೀ ಹೆಜ್ಜೆಯಲ್ಲಿ ಇನ್ನು ಸಾಧ್ಯವೇ ಇಲ್ಲ ಅನ್ನುವಷ್ಟು ಅಡೆತಡೆಗಳು ಎದುರಾಗುತ್ತವೆ. ಅವುಗಳನ್ನೆಲ್ಲ ದಾಟಿ ಮುಂದೆ ಕಾಲಿಟ್ಟಾಗ ಅವನೆದುರಿಗಿದ್ದದ್ದು ಶೂನ್ಯದೆಡೆಗೆ ಸಾಗಿದಂತೆ ಕಾಣುವ ಹಗ್ಗವಷ್ಟೇ. ಭಯಂಕರ, ಮೈರೋಮಾಂಚನಗೊಳಿಸುವ,ಸುತ್ತಲಿನ ನೋಟ ವಿಹಂಗಮವೆನಿಸುವ, ಅತೀ ಎತ್ತರದ ಕಟ್ಟಡಗಳ ಮಧ್ಯದ ಒಂದು ನೂಲಿನಂತೆ ಕಾಣುವ ಹಗ್ಗದ ಮೇಲೆ ಆತ ಕಾಲಿಟ್ಟಾಗ ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕನಿಗೆ ತಾನೇ ಅಲ್ಲಿ ಕಾಲಿಟ್ಟಂತೆ ಭಾಸವಾಗುತ್ತದೆ. ಚಿತ್ರದ ಆರಂಭದಲ್ಲೇ ನಮಗೆ ಆತ ಸುರಕ್ಷಿತವಾಗಿ ಹಗ್ಗದ ಮೇಲೆ ನಡೆದು ಬರುತ್ತಾನೆ ಎನ್ನುವ ವಿಷಯ ಗೊತ್ತಿದ್ದರೂ ಚಿತ್ರ ಮುಗಿದು ಗಡಿಯಾರ ನೋಡಿಕೊಂಡರೆ ನಮಗೆ ಗೊತ್ತಿಲ್ಲದಂತೆ ಎರಡು ಗಂಟೆ ಕಳೆದು ಹೋಗಿರುತ್ತದೆ. ಅಷ್ಟು ಕುತೂಹಲಭರಿತವಾಗಿ ಕೊಂಚವೂ ಬೇಸರವಾಗದಂತೆ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರಕ್ಕಾಗಿ ದುಡಿದವರ ನೈಪುಣ್ಯತೆ ಎದ್ದು ಕಾಣುತ್ತದೆ.
ಇದು ಕಾಲ್ಪನಿಕ ಕಥೆಯಲ್ಲ. ಅತೀ ಎತ್ತರದ ಕಟ್ಟಡಗಳ ಮೇಲೆ ಹಗ್ಗ ಕಟ್ಟಿ ನಡೆದು ಪ್ರಸಿದ್ಧಿಯಾದ ವ್ಯಕ್ತಿ Philippe Petit, ತಮ್ಮ ಅನುಭವವನ್ನು "To Reach the Clouds" ಅನ್ನುವ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅದೇ ಪುಸ್ತಕವನ್ನಾಧರಿಸಿ "The Walk" ಚಿತ್ರವನ್ನು ತಯಾರಿಸಲಾಗಿದೆ. ಅವಕಾಶ ಸಿಕ್ಕರೆ ನೀವೂ ಒಮ್ಮೆ ಚಿತ್ರಮಂದಿರದಲ್ಲಿ ನೋಡಿ.
ಸಂತೋಷ್ ಕುಮಾರ್ ಎಲ್. ಎಂ.






Wednesday, July 22, 2015

ವಂಶ ವೃಕ್ಷ ಕಾದಂಬರಿ ಕುರಿತಾದ ಅನಿಸಿಕೆಗೆ - ಶಿವಕುಮಾರ್

ನಮಸ್ಕಾರ !!
ವಂಶವೃಕ್ಷಕ್ಕೆ ಐವತ್ತು ವರ್ಷಗಳು ತುಂಬಿರಬಹುದು ಆದರೆ ನಾನು ಅದನ್ನು ಓದಿದ್ದು ನಾಲ್ಕು ವರ್ಷಗಳ ಹಿಂದೆ !! ನಂತರ ಐದು ಬಾರಿ ಇದನ್ನು ಓದಿದ್ದೆನೆ. ನನ್ನ ಹುಟ್ಟು ಹಬ್ಬಕ್ಕೆ ನನ್ನ ಆಪ್ತ ಗೆಳೆಯ ಶಂಕರ್ ಕವಲು ಕಾದಂಬರಿಯನ್ನು ಉಡುಗೊರೆಯಾಗಿ ಕೊಟ್ಟಿದ್ದ. ಆಗ ನಾನು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. (ಭೈರಪ್ಪನವರು ಇಲ್ಲೇ ಕಾರ್ಯ ನಿರ್ವಹಿಸಿ ನಿವೃತ್ತರಾದರು) ಆಗಿನಿಂದ ನಾನು ಭೈರಪ್ಪನವರ ಪುಸ್ತಕಗಳನ್ನು ಓದಲು ಶುರು ಮಾಡಿದ್ದು. ಅಲ್ಲಿದ್ದ ಶೀಘ್ರಲಿಪಿಗಾರರಾದ ಜಗದೀಶ್ ಭೈರಪ್ಪನವರ ಬಗ್ಗೆ ಬಹಳ ಹೇಳುತ್ತಿದ್ದರು (ಇವರ ಹೆಸರನ್ನು ಭೈರಪ್ಪನವರು ತಮ್ಮ ಭಿತ್ತಿ ಪುಸ್ತಕದಲ್ಲಿ
ನೆನಪಿಸಿಕೊಂಡಿದ್ದಾರೆ) ಮತ್ತು ಭೈರಪ್ಪನವರ ಅಭಿಮಾನಿ ಹಾಗು ಅವರ ಬೋಧನೆಯನ್ನು ಕೇಳಿದ್ದ ಮತ್ತು ಈಗ ಅದೇ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವ ನನ್ನ ಗುರುಸಮಾನರಾದ ಡಾ. ಗೌರಮ್ಮ ಭೈರಪ್ಪನವರ ಬಗ್ಗೆ ಹೇಳುತ್ತಿದ್ದಲ್ಲದೆ ಅವರ ಕಾದಂಬರಿಗಳ ಬಗ್ಗೆ ನನ್ನೊಡನೆ ಚರ್ಚಿಸುತ್ತಿದರು. ನಂತರ ನಾನು ನ್ಯಾಯಾಂಗ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ನಂತರ ಎರಡು ವರ್ಷಗಳ ಹಿಂದೆ ಚಾಮರಾಜನಗರಕ್ಕೆ ವರ್ಗವಾದೆ. ದಿನಾ ಬೆಳಿಗ್ಗೆ ೭. ೩೦ ಗಂಟೆಯ ರೈಲಿನಲ್ಲಿ ಪ್ರಯಾಣ ಮತ್ತೆ ಸಂಜೆ ೬ ಗಂಟೆಗೆ ವಾಪಾಸ್ಸು ಮೈಸೂರಿಗೆ ರೈಲಿನಲ್ಲಿ ಬರುತ್ತಿದ್ದೆ. ಹೋಗುವಾಗ ಬರುವಾಗ ಒಂದೂವರೆ ತಾಸಿನ ಸಮಯದಲ್ಲಿ ಭೈರಪ್ಪನವರ ಕಾದಂಬರಿಗಳನ್ನು ಓದುತ್ತಿದ್ದೆ. ರೈಲು ನಂಜನಗೂಡು ಮಾರ್ಗವಾಗಿ ಹೋಗುವಾಗ ಪ್ರತಿದಿನ ಕಾತ್ಯಾಯನಿ ಶೋತ್ರಿಗಳು ಮತ್ತಿತರೇ ಪಾತ್ರಗಳು ಜ್ಞಾಪಕಕ್ಕೆ ಬರುತ್ತವೆ. ಇಲ್ಲಿ ಇನ್ನೊಂದು ಹೇಳಲೇ ಬೇಕಾದ ವಿಚಾರವಿದೆ. ನೀವು ಯಾರಾದರು ನಂಜನಗೂಡಿಗೆ ಅಥವಾ ಚಾಮರಾಜನಗರಕ್ಕೆ ಮೇಲೆ ತಿಳಿಸಿದ ರೈಲಿನಲ್ಲಿ ಪ್ರಯಾಣ ಮಾಡುವ ಸಂಧರ್ಭ ಬಂದರೆ ಐದನೇ ಬೋಗಿಗೆ ಬಂದರೆ ಸೀಟ್ ನಂಬರ್ ೪೦ ರಿಂದ ೬೮ ರ ವರೆಗೆ ಭೈರಪ್ಪನವರ ಕಾದಂಬರಿಗಳ ಬಗ್ಗೆ ಮತ್ತು ಪಾತ್ರಗಳ ಬಗ್ಗೆ ಪ್ರತಿ ನಿತ್ಯ ಚರ್ಚೆ ನಡೆಯುತ್ತಲೇ ಇರುವುದನ್ನು ನೋಡಬಹುದು ! ನೀವು ಪಾಲ್ಗೊಳ್ಳಬಹುದು, ಇದರಲ್ಲಿ ಇರುವವರೆಲ್ಲ ವೃತ್ತಿಯಲ್ಲಿ ವಿವಿಧ ಇಲ್ಲಖೆಗಳವರು. ಭೈರಪ್ಪನವರ ಪುಸ್ತಕಗಳು ಇಲ್ಲಿ ಸರ್ಕ್ಯುಲೇಟ್ ಆಗುತ್ತಿರುತ್ತದೆ. ಹೀಗೆ ನಾವೆಲ್ಲಾ ಭೈರಪ್ಪನವರ ಪುಸ್ತಕಗಳನ್ನು ಓದಿ ಚರ್ಚಿಸುತ್ತಿರುತ್ತೇವೆ. ರೈಲು ನಂಜನಗೂಡಿನ ಸೇತುವೆ ದಾಟಿ ಗುಂಡ್ಲು ಹೊಳೆಯನ್ನು ದಾಟಿ ಹೋಗುವುದರೊಳಗೆ ಕಾತ್ಯಾಯಿನಿ ದಿನನಿತ್ಯ ಇದೇ ರೈಲಿನಲ್ಲಿ ಚಲಿಸಿರಬಹುದು ಎಂಬ ಭಾವ ಬಹುತೇಕರನ್ನು ಕಾಡಿದೆ. ಕೆಲವೊಮ್ಮೆ ಕಪಿಲಾ ನದಿಯಲ್ಲಿ ನೀರು ತುಂಬಿ ಹರಿಯುವಾಗ ಶೋತ್ರಿಗಳ ಮಗ ಹೀಗೆ ನದಿ ನೀರು ತುಂಬಿ ಹರಿಯುವಾಗ ಮೃತ ಪಟ್ಟಿರ ಬಹುದೇ ಎಂಬ ಆಲೋಚನೆ ಬರುತ್ತದೆ. ಇದು ನನ್ನೊಬ್ಬನ ಕಲ್ಪನೆಯಲ್ಲ. ನನ್ನೊಡನೆ ಈ ವಿಚಾರಗಳ ಬಗ್ಗೆ ಬಹುತೇಕರು ಚರ್ಚಿಸಿದ್ದಾರೆ. ಇವರು ಯಾರೂ ಫೇಸ್ ಬುಕ್ ನಲ್ಲಿ ಇಲ್ಲ.. ಸ್ಮಾರ್ಟ್ ಫೋನ್ ಇವರೆಲ್ಲರ ಬಳಿ ಇಲ್ಲ ! ಆದರೆ ಭೈರಪ್ಪನವರ ಬಗ್ಗೆ ಈ ಫೇಸ್ಬುಕ್ ಗ್ರೂಪ್ ನಲ್ಲಿ ಆಗುವ ಚರ್ಚೆಗಳಿಗಿಂತಲೂ ವಿಭಿನ್ನವಾದ ಚರ್ಚೆಗಳು ಆಗುತ್ತವೆ. ಇನ್ನು ಅನೇಕ ವಿಚಾರಗಳು ಇವೆ. ವಂಶವೃಕ್ಷಕ್ಕೆ ಐವತ್ತು ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ವಂಶವೃಕ್ಷದ ಬಗ್ಗೆ ಒಂದುದಿನ ಮುಂದಿನವಾರದಲ್ಲಿ ನಾವೆಲ್ಲಾ ರೈಲಿನಲ್ಲಿ ಚರ್ಚೆ ಮಾಡಿ, ನಡೆದ ಸಂಗತಿಯನ್ನು ಇಲ್ಲಿ ಹಾಕುತ್ತೇನೆ. ಆ ಸಮದಯದ ಫೋಟೋ ತೆಗೆದು ಈ ಗ್ರೂಪಿನಲ್ಲಿ ಹಾಕುತ್ತೇನೆ.

 ಡಾ|| ಶಿವಕುಮಾರ್

Wednesday, July 15, 2015

ಕೈಗಂಟಿದ ಅತ್ತರು (ಅನುಭವ) - ರಾಜೇಶ್ ಶ್ರೀವತ್ಸ


ನಾನು ಪ್ರೇತದ ಕೈ ಹಿಡಿದು ಮೇಲೆಬ್ಬಿಸಿದೆನೇ?
ನೈಸ್ ರಸ್ತೆಯ ಸೇತುವೆಯ ಕಡೆಗೆ ನಡೆಯುತ್ತಾ ಮನೆಯ ಕಡೆ ಸಾಗುತ್ತಿದ್ದೆ. ತಲೆ ಸಣ್ಣಗೆ ನೋಯುತ್ತಿತ್ತು ಮಾತ್ರೆ ತೆಗೆದುಕೊಂಡು ಮನೆಗೆ ಹೋಗಬೇಕು ಅಂದುಕೊಂಡೆ. ಕೆಲಸ ಮುಗಿಸಿ ಮನೆಯ ಕಡೆ ಸಾಗುತ್ತಿದ್ದ ಗಾರ್ಮೆಂಟ್ಸ್ ಕಂಪನಿಯ ಹುಡುಗಿಯರಿಂದ ರಸ್ತೆ ಗಿಜಿಗಿಡುತ್ತಿತ್ತು. ಎದುರಿನ ವಿಟ್ಟಸಂದ್ರದ ಕಡೆಯಿಂದ ಸುಮಾರು ಮೂವತ್ತು ವರ್ಷದ ಹೆಂಗಸು ನಡೆದು ಬರುತ್ತಿದ್ದಳು. ಸುಮಾರು ಐದೂವರೆ ಅಡಿ ಎತ್ತರ, ದಪ್ಪದೇಹ, ಗೌರವರ್ಣ, ಗುಂಗುರು ಕೂದಲು, ತಲೆ ತುಂಬಾ ಹೂವು, ಕಾಲಿನಲ್ಲಿ ಇಂಚಗಲದ ಬೆಳ್ಳಿ ಗೆಜ್ಜೆ, ಕೈತುಂಬಾ ಬಳೆ , ಕೈಯಲ್ಲಿ ಪ್ಲಾಸ್ಟಿಕ್ ವಯರ್ ಚೀಲ. ಹತ್ತಿರ ಬರುತ್ತಿದ್ದಂತೇ ಕತ್ತಿನಲ್ಲಿದ್ದ ದೊಡ್ಡ ಕರಿಮಣಿ ಚಂದ್ರಹಾರ, ಕಿವಿಯಲ್ಲಿ ಹಳೆಯಕಾಲದ ಹಂಸದ ಹರಳಿನ ಕಿವಿಯೋಲೆ ನೋಡಿ ಅಕೆ ಮುಸ್ಲಿಮ್ ಇರಬೇಕು ಅನ್ನಿಸಿತು. ಇಬ್ಬರೂ ನೈಸ್ ಸೇತುವೆಯ ಕಡೆ ನಡೆದೆವು. ಆಕೆ ಮುಂದೆ. ನಾನು ಹಿಂದೆ. ಸೇತುವೆಯ ಮಧ್ಯ ಬರುತ್ತಿದ್ದಂತೆ ಆಕೆ ಜರ್ರನೆ ಜಾರಿ ಬಿದ್ದಳು. ಕೈಲಿದ್ದ ಚೀಲದಿಂದ ಖಾಲಿ ಟಿಫನ್ ಡಬ್ಬಗಳು ಉರುಳುತ್ತಾ ಹೊರಬಿದ್ದವು. ನಾನು ಅರ್ರೇ!! ಪ್ಚ್ ಪ್ಚ್ ಅನ್ನುತ್ತ ನೆರವಿಗೆ ಹತ್ತಿರ ಹೋಗಿ ನೆರವಿಗೆ ಕೈ ಚಾಚಿದೆ. ಅತ್ತರಿನ ಘಂ ಮೂಗಿಗೆ ಬಡಿಯಿತು. ಆಕೆ ನನ್ನ ಕೈ ಹಿಡಿದು ಸಾವರಿಸಿಕೊಂಡು ಎದ್ದು ಕುಳಿತಳು. ಉರುಳಿ ಬಿದ್ದ ಮೂರು ಟಿಫನ್ ಬಾಕ್ಸ್‌ಗಳನ್ನು ಎತ್ತಿ ಅಕೆಗೆ ನೀಡಿದೆ. ಆಕೆ ನಗುತ್ತಾ ’ ತುಂಬಾ ಥಾಂಕ್ಸ್‌ರೀ. ಅಣ್ಣನ ಮನೆಗೆ ಹೋಗ್ತಾ ಇದ್ದೆ ಇವತ್ತು ಇಫ್ತೆಹಾರ್. ಯಾವಾಗಲೂ ಸೇತುವೆ ದಾಟುವಾಗ ಇಲ್ಲಿ ಜಾರಿ ಬೀಳ್ತೀನಿ ’ ಅಂದಳು. ಅಲ್ಲಾ ಇಷ್ಟು ಹೆಣ್ಣು ಮಕ್ಕಳು ಓಡಾಡುತ್ತಿದ್ದರೂ ಈ ಹೆಣ್ಣಿನ ಸಹಾಯಕ್ಕೆ ಒಬ್ಬರೂ ಬರಲಿಲ್ಲವಲ್ಲ ಅನಿಸಿ ಸುತ್ತ ನೋಡಿದೆ. ರಸ್ತೆಯಲ್ಲಿರುವವರೆಲ್ಲಾ ನನ್ನನ್ನೆ ನೋಡುತ್ತಿದ್ದಾರೆ ಅನ್ನಿಸಿ ಕಸಿವಿಸಿಯಾಯ್ತು. ಹತ್ತಿರ ನಡೆದು ಬರುತ್ತಿದ್ದ ಇಬ್ಬರು ಹುಡುಗಿಯರು ನನ್ನನ್ನೆ ನೋಡುತ್ತಾ ’ ಏನಾಯ್ತು ಸಾರು ಏನಾದ್ರು ಕಳೆದುಕೊಂಡ್ರಾ ’ ಎಂದು ನನ್ನ ಕಡೆ ನೋಡಿ ನಿಂತು ವಿಚಾರಿಸಿದರು. ನಾನು ಪೆಚ್ಚು ಪೆಚ್ಚಾಗಿ ಎನೂ ಇಲ್ಲ ಅನ್ನುತ್ತಾ ಸುತ್ತ ನೋಡಿದೆ ಅಷ್ಟರೊಳಗೆ ಆ ಹೆಣ್ಣು ಅಲ್ಲಿಂದ ಎದ್ದು ಮಾಯವಾಗಿದ್ದಳು. ಜನ ಜಂಗುಳಿಯಲ್ಲಿ ಸೇರಿ ಹೋಗಿರ ಬೇಕೆಂದು ಸುಮ್ಮನಾದೆ. ಸೇತುವೆ ದಾಟಿ ವೀರಭದ್ರ ಮೆಡಿಕಲ್ಸ್ ಕಡೆ ನಡೆದು ನಾಲ್ಕು ನೈಸಿಪ್ ಕೊಡಿ ಅಂತ ಕೇಳಿದೆ. ಅಂಗಡಿಯಾತನಿಗೆ ನನ್ನ ಮುಖ ಪರಿಚಯವಿದೆ. ಆತ ’ ಏನು ಸಾರು ತುಂಬಾ ತಲೆ ನೋವಾ? ಸೇತುವೆ ಮೇಲೆ ಯಾಕೆ ಕೂತು- ನಿಂತು ಮಾಡ್ತಾ ಇದ್ದ್ರಿ ? ತಲೆ ತಿರುಗಿತಾ? ಏನಾದ್ರು ಕಳೆದುಕೊಂಡ್ರಾ ? ’ ಅಂತ ಕೇಳಿದ. ನಾನು ಯಾರದೋ ಟಿಫನ್ ಬಾಕ್ಸ್ ಎತ್ತಿಕೊಡ್ತಾ ಇದ್ದೆ ಎಂದಷ್ಟೇ ಹೇಳಿ ಮನೆಯ ಕಡೆ ತಿರುಗಿದೆ.
ನಮ್ಮ ಲೇಔಟ್ ಗೇಟಿನಿಂದ ಅಷ್ಟು ದೂರದಲ್ಲಿ ಹೊಲದ ಮಧ್ಯದಲ್ಲಿ ಸ್ಥಳೀಯ ಪುಢಾರಿ ಕಂ ರೌಡಿ ಜಮೀಲ್ ಅಬ್ಬಾಸನ ಬಂಗಲೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾ ಇದ್ದರು. ಶಾಮಿಯಾನದ ಬಾಗಿಲಲ್ಲೇ ದೊಡ್ಡ ಫ್ಲೆಕ್ಸ್ ಬೋರ್ಡ್ ಅದರ ಮೇಲೆ ಜಮೀಲ್‌ನ ಚಿತ್ರ. ಅವನ ಪಕ್ಕದಲ್ಲಿ ನಮ್ಮ ಏರಿಯಾದ ಎಲ್ಲಾ ಪುಢಾರಿಗಳ ಮುಂಡಗಳನ್ನು ಕತ್ತರಿಸಿ ಸಾಲಾಗಿ ಅಂಟಿಸಿದ್ದರು. ಪಕ್ಕದಲ್ಲೇ ಇನ್ನೊಂದು ಫ್ಲೆಕ್ಸ್ ಬೋರ್ಡ್ ಅದರ ಮೇಲೆ ಒಬ್ಬ ಹೆಣ್ಣಿನ ಚಿತ್ರಕ್ಕೆ ಗುಲಾಬಿ ಹೂವಿನ ಅಲಂಕಾರ. ಹತ್ತಿರ ಬರುತ್ತಿದ್ದಂತೇ ಅದು ಅಲ್ಲಿ ಸೇತುವೆಯ ಮೇಲೆ ಭೇಟಿಯಾದ ಹೆಣ್ಣಿನ ಚಿತ್ರವೆಂದು ಗುರುತಿಸಿದೆ. ಕೆಳಗೆ ಉರ್ದು ಭಾಷೆಯಲ್ಲಿ ಎನೋ ಬರೆದಿದ್ದರು. ಅಪಾರ್ಟ್ಮೆಂಟ್‌ನ ಗೇಟ್ ದಾಟುತ್ತಿದ್ದಂತೇ ನಮ್ಮ ಅಪಾರ್ಟ್ಮೆಂಟ್ ಮಾಲಿಕರ ಅಮ್ಮ ಎದುರಾದರು. ’ಏನಮ್ಮ ರಂಜಾನ್ ಊಟಕ್ಕೆ ಸಾಬರ ಮನೆಗೆ ಹೋಗಲಿಕ್ಕಿದೆಯಾ ’ ಅಂತ ತಮಾಷೆಗೆ ಕೇಳಿದೆ. ಅವರು ’ ಕರೆದಿದ್ದಾರಪ್ಪ . ಅದರೆ ಅಲ್ಲಿ ಎಲ್ಲಾ ರಾಜಕೀಯದವರೇ ತುಂಬಿರುತ್ತಾರೆ. ಅವರ ಮಧ್ಯ ನಮಗೇನು ಕೆಲಸ. ಹೋಗದವರಿಗೆಲ್ಲಾ ಜಮೀಲನೇ ಮನೆಗೆ ಪಾರ್ಸಲ್ ಕಳಿಸುತ್ತಾನೆ ’ ಎಂದರು . ಶಾಮಿಯಾನದ ಎದುರು ಒಬ್ಬ ಹೆಂಗಸಿನ ಚಿತ್ರ ಹಾಕಿದ್ದಾರಲ್ಲ ಆಕೆ ..’ ಎಂದು ನಾನು ವಿಚಾರಿಸುತ್ತಿದ್ದಂತೇ ಮಧ್ಯದಲ್ಲೇ ಅವರು ’ ಆಕೆನಾ? ಅವಳು ಜಮೀಲನ ತಂಗಿ ಜುಬೇದಾ. ಇಲ್ಲೇ ವಿಟ್ಟಸಂದ್ರದಲ್ಲಿ ಇದ್ದಳು. ಆರು ವರ್ಷದ ಹಿಂದೆ ಜಮೀಲ ಹೀಗೇ ಒಂದು ರಂಜಾನ್ ಉಪವಾಸದ ದಿನ ರಾತ್ರಿ ಊರಿಗೆಲ್ಲಾ ಊಟ ಇಟ್ಟಿದ್ದ. ಆಗಿನ್ನೂ ನೈಸ್ ಸೇತುವೆ ಕಟ್ಟುತ್ತಿದ್ದರು. ಸಂಜೆ ಆಕೆ ಮನೆಯಿಂದ ನಡೆದು ಬರುತ್ತಾ ಇದ್ದಳು. ಕಟ್ಟಿ ಮುಗಿಸುವ ತನಕ ಸೇತುವೆ ಮೇಲೆ ಹತ್ತಿ ಓಡಾಡ ಬಾರದೆಂದು ರಸ್ತೆ ಬಂದ್ ಮಾಡಿದ್ದರೂ ಜನ ಸೆಕ್ಯುರಿಟಿಯ ಕಣ್ಣು ತಪ್ಪಿಸಿ ಸೇತುವೆಯ ಮೇಲಿಂದಲೇ ಇತ್ತ ಬರುತ್ತಿದ್ದರು. ಇವಳಿಗೆ ಅಂದು ಗ್ರಹಚಾರ ಕಾದಿತ್ತು ಈಕೆಯೂ ತಡೆ ಗೋಡೆ ಹಾರಿ ಸೇತುವೆಯ ಮೇಲೆ ಓಡುತ್ತಾ ದಾಟುತ್ತಿದ್ದಳು ಜಲ್ಲಿ ಕಲ್ಲಿನ ಮೇಲೆ ಕಾಲಿಟ್ಟು ಜಾರಿ ಬಿದ್ದಳು. ತಲೆ ನೆಲಕ್ಕೆ ಬಡಿದು ಅಲ್ಲೇ ಸತ್ತಳು. ಭಾರೀ ಆಳು.. ಲಕ್ಷ್ಣಣವಾಗಿದ್ದಳು , ಸ್ಟೈಲಾಗಿ ಅಲಂಕಾರ ಮಾಡ್ಕೊಂಡು ಸೆಂಟ್ ಹಾಕ್ಕೊಂಡು, ಝಣ್ ಝಣ್ ಗೆಜ್ಜೆ ಸದ್ದು ಮಾಡ್ಕೊಂಡು ಓಡಾಡೋಳು , ಸಾಯುವಾಗ ಮದುವೆ ಆಗಿ ಐದು ತಿಂಗಳಾಗಿತ್ತು ಅಷ್ಟೆ. ಪಾಪ ಛೇ !! . ಈಗಲೂ ಆಗಾಗ ಚೀಲ ಹಿಡಿದುಕೊಂಡು ಸೇತುವೆ ಮೇಲೆ ನಡಿತಾ ಇರ್ತಾಳೆ ನಾವೇ ನೋಡಿದ್ದೀವಿ ಅಂತ ಸಿದ್ದರಾಜು, ತಾಯಪ್ಪ ಹೇಳ್ತಾರೆ. ಅವರು ಮೊದಲೇ ಕುಡುಕ್‌ ಬಡ್ಡೀಮಕ್ಕಳು ಅವರನ್ನ ಹೆಂಗೆ ನಂಬೋದು ? ಅಷ್ಟಕ್ಕೂ ಸಾಬರು ಸತ್ತರೆ ದೆವ್ವ ಆಗಲ್ವಂತಲ್ಲ? ಹಿಂಗಂದಕ್ಕೆ ಒಮ್ಮೆ ಆ ಜಮೀಲ ತಾಯಪ್ಪನನ್ನು ಕತ್ತರಿಸಿ ಹಾಕ್ತೀನಿ ಮಗನೆ, ನನ್ನ ತಂಗಿನ ಸೈತಾನ್ ಅಂತೀಯಾ ಅಂತ ಹೊಲದೊಳಗೆ ಅಟ್ಟಿಸಿಕೊಂಡು ಹೋಗಿದ್ದ...." ಅವರು ಹೇಳುತ್ತಲೇ ಇದ್ದರು.
ಹಾಗಾದರೆ ನಾನು ಕೈ ಚಾಚಿ ಎಬ್ಬಿಸಿದ್ದು ಜುಬೇದಳನ್ನೇ ? !! ನಾನು ಪ್ರೇತದ ಕೈ ಹಿಡಿದು ಮೇಲೆಬ್ಬಿಸಿದೆನೇ? ಕೈ ಉಜ್ಜಿಕೊಳ್ಳುತ್ತಾ ಮೂಸಿ ನೋಡಿಕೊಂಡೆ.. ಅತ್ತರಿನ ಪರಿಮಳ ಘಂ ಅಂದಿತು !!!

ರಾಜೇಶ್ ಶ್ರೀವತ್ಸ, 

ಬರ್ಮುಡಾ ಹುಲ್ಲು - ರಾಜೇಶ್ ಶ್ರೀವತ್ಸ,


ನಿಮ್ಮ ಊರಿಗೆ ಮಂತ್ರಿ ಮಹೋದಯರು ವಕ್ಕರಿಸುತ್ತಿದ್ದಾರೆಂದರೆ ನಿಮ್ಮೂರಿನ ಉದ್ಯಾನವನ ರಾತ್ರಿ ಬೆಳಗಾಗುವುದರೊಳಗಾಗಿ ನಂದನವನದಂತೆ ಕಂಗೊಳಿಸುತ್ತದೆ ಅಲ್ಲವೆ? ಬೆಳೆದು ನಿಂತ ಹೂವಿನ ಗಿಡಗಳಂತೆ ಐದರಿಂದ ಹತ್ತಡೀಗೂ ಎತ್ತರದ ಸೈಕಸ್ ಹಾಗು ಕಣಗಲೆ ಮರಗಳು ಕೂಡಾ ತೋಟಗಾರಿಕ ಕೇಂದ್ರಗಳಲ್ಲಿ ಕುಂಡಗಳಲ್ಲಿ ಬೇಕಾದಾಗ ಲಭ್ಯವಾಗುತ್ತವೆ. ಸಾಮಾನ್ಯ ಬೋಗನ್ ವಿಲ್ಲೆಯ ಗಿಡಕ್ಕೆ ರೂ ೨೫೦ ಕಕ್ಕಬೇಕು ಅಷ್ಟೆ. ಇನ್ನು ಉತ್ತಮ ಜಾತಿಯ ಗಿಡಗಳಂತೂ ಇನ್ನೂ ದುಬಾರಿ. ಈ ಮಂತ್ರಿ ಮಹೋದಯರಿಗೆ ಸ್ವಾಗತ ಕೋರಲು ನಮ್ಮ ತೆರಿಗೆ ಹಣ ಎಷ್ಟು ಪೋಲಾಗುತ್ತಿರಬಹುದು ಊಹಿಸಿ ? ಇನ್ನು ಕುಂಡಗಳ ಜೊತೆಗೆ ಉದ್ಯಾನವನಗಳ ನೆಲಕ್ಕೆ ಹಾಸಲು ಹುಲ್ಲಿನ ಚಾಪೆಗಳೂ ಲಭ್ಯ.

ಪರಪ್ಪನ ಅಗ್ರಹಾರ, ಕೋಣೇನ ಅಗ್ರಹಾರ, ವಿಟ್ಟಸಂದ್ರ, ಬಸವಾಪುರ, ತೋಗೂರುಗಳ ಅಳಿದುಳಿದ ಹೊಲಗಳಲ್ಲಿ ಈ ಚಿನ್ನದ ಬೆಳೆಯನ್ನು ಹುಲುಸಾಗಿ ಬೆಳೆಯುತ್ತಾರೆ. ಗರಿಕೆಯ ಹಾಗೆ ಕಾಣುವ ಗರಿಕೆಗಿಂತ ಚಿಕ್ಕ ಎಲೆಗಳ ಈ ಹುಲ್ಲಿನ ಹೆಸರು ಬರ್ಮುಡಾ ಹುಲ್ಲು.ಗರಿಕೆಗಿಂತಲೂ ಹಸಿರು, ಕಾಲಿಟ್ಟರೆ ಮೆತ್ತಗೆ ಸ್ಪಂಜಿನ ಮೇಲೆ ಕಾಲಿಟ್ಟಂತೆ ಭಾಸವಾದರೂ ಗರಿಕೆಯಷ್ಟು ಕೋಮಲವಲ್ಲ. ಮುಟ್ಟಿದರೆ ಪ್ಲಾಸ್ಟಿಕ್ ಎಳೆ ಮುಟ್ಟಿದ ಅನುಭವವಾಗುತ್ತದೆ. ಬಿತ್ತನೆಗಾಗಿ ಬೇರಿರುವ ಹುಲ್ಲಿನ ಗಂಟುಗಳನ್ನು ಕತ್ತರಿಸಿ ಇಟ್ಟುಕೊಳ್ಳುತ್ತಾರೆ. ಚಪ್ಪಟೆಯಾಗಿ ಉಳುಮೆ ಮಾಡಿದ ಭೂಮಿಯ ಮೇಲೆ ಆ ಹುಲ್ಲಿನ ಗಂಟುಗಳನ್ನು ಬಿತ್ತುತ್ತಾರೆ. ಇದಕ್ಕೆ ಉಪಯೋಗಿಸುವ ನೀರು ಹಾಗು ಗೊಬ್ಬರದ ಪ್ರಮಾಣವನ್ನು ಕೇಳಲೇ ಬೇಡಿ. ಬತ್ತದ ಬೆಳೆಯಷ್ಟೇ ನೀರು ಗೊಬ್ಬರ ಬೇಕೇನೋ ..!! ದಿನಕ್ಕೆರಡು ಬಾರಿ ನೀರುಣಿಸಿ.. ವಾರಕ್ಕೊಮ್ಮೆ ರಸಾಯನಿಕ ಗೊಬ್ಬರ ಎರಚಿ, ಅಗತ್ಯ ಬಿದ್ದಾಗ ಕೀಟನಾಶಕ ಸಿಂಪಡಿಸಿ, ಕಳೆ ಹಾಗು ಕೊಳೆತ ಒಣಗಿದ ಹುಲ್ಲಿನ ಕುಡಿಗಳನ್ನು ಆಗಾಗ ಬೇರ್ಪಡಿಸಿದರೆ ಮೂರು ತಿಂಗಳಿಗೆ ಸೊಗಸಾದ ಹುಲ್ಲಿನ ಹಾಸಿಗೆ ಲಭ್ಯ. ಕೊಯಿಲಿಗೆ ೧ ವಾರಕ್ಕೆ ಮುನ್ನ ಯಂತ್ರದಿಂದ ಅಡ್ಡಾದಿಡ್ಡಿ ಬೆಳೆದಿರುವ ಕುಡಿಗಳನ್ನು ಮಟ್ಟ ಮಾಡಿದರೆ ಆಯ್ತು. ಯಂತ್ರಗಳು ಕರ್ರೋ ಶಬ್ದ ಮಾಡುತ್ತಾ ಅಳತೆಗೆ ತಕ್ಕನಾಗಿ ಹುಲ್ಲುಹಾಸನ್ನು ಕತ್ತರಿಸುತ್ತಾ ಸಾಗುತ್ತವೆ. ಕಾರ್ಮಿಕರು ಅದನ್ನು ಹಸಿರು ಒಳಗೆ ಕೆಳಗಿನ ಮಣ್ಣು ಮೇಲೆ ಮಾಡಿ ಚಾಪೆಯಂತೆ ಸುತ್ತಿ ಲಾರಿಯಲ್ಲಿ ಪೇರಿಸಿ ಸಾಗಿಸುತ್ತಾರೆ. ಒಂದು ಚದರ ಅಡಿ ಹುಲ್ಲುಹಾಸಿನ ಬೆಲೆ ಸುಮಾರು ರೂ.೬೦ ರಿಂದ ರೂ.೧೦೦ರವರೆಗೆ. ಇಷ್ಟೆಲ್ಲಾ ಬೆಲೆಕೊಟ್ಟು ನಿಮ್ಮ ತೋಟಕ್ಕೆ ಈ ಹುಲ್ಲನ್ನು ತಂದು ಹಾಸಿದರೆ ಹೊಸ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ಒಂದು ತಿಂಗಳಲ್ಲೇ ಒಣಗಿ ಹೋಗುತ್ತದೆ frown emoticon . ಬೇಸಿಗೆಯಲ್ಲಿ ಬೆಲೆ ಹೆಚ್ಚು. ಕತ್ತರಿಸಲಾಗದೆ ಅಂಚುಗಳಲ್ಲಿ ಉಳಿದ ಹುಲ್ಲಿಗೂ ಬೆಲೆ ಇದೆ. ಅವುಗಳನ್ನು ಹೊಸೂರಿನ ಹೂವಿನ ಮಾರುಕಟ್ಟೆಗೆ ಸಾಗಿಸಿದರಾಯ್ತು. ಅಲ್ಲಿ ಸೊಗಸಾಗಿ ಹಾರ ಮಾಡಿ ಎಲ್ಲೆಡೆಗೆ ಸಾಗಿಸುತ್ತಾರೆ. ಭಕ್ತರು ಇದೇ ಗರಿಕೆಯೆಂದು ಗಣೇಶನಿಗೇ ಮೋಸ ಮಾಡಿ ಅವನ ಕೊರಳಿಗೆ ಹಾಕುತ್ತಾರೆ. ತಮಿಳುನಾಡು, ಆಂಧ್ರಗಳಲ್ಲಂತೂ ಅದನ್ನು ಗರಿಕೆಯೆಂದೇ ಜನ ಒಫ್ಫಿಕೊಂಡಿದ್ದಾರೆ.  

ರಾಜೇಶ್ ಶ್ರೀವತ್ಸ, 




“ಇಗೋ, ಬೆಂಗಳೂರು ಹೀಗಿತ್ತು”ಜಿ. ವೆಂಕಟಸುಬ್ಬಯ್ಯ -

“ ಇಗೋ , ಬೆಂಗಳೂರು ಹೀಗಿತ್ತು ” ಜಿ . ವೆಂಕಟಸುಬ್ಬಯ್ಯ   ಅರವತ್ತು ವರ್ಷಗಳ ಹಿಂದೆ ಬೆಂಗಳೂರು ಇಷ್ಟು ದೊಡ್ಡದಾಗಿರಲಿಲ್ಲ . ಆಗ ಎರಡು ಬೆಂಗಳೂರು ಇತ್ತು ...