ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, June 30, 2011

ಹಲ್ಮಿಡಿ ಶಾಸನ

ಹಲ್ಮಿಡಿ ಒಂದು ಪುಟ್ಟ ಗ್ರಾಮ. ಸುಮಾರು ಮುನ್ನೂರು ಮನೆಗಳು ೧,೨೦೦ ಜನವಸತಿಯುಳ್ಳ ಇನ್ನೂ ನಾಗರಿಕ ಸವಲತ್ತುಗಳು ತಲುಪದೇ ಇರುವ ಗ್ರಾಮ. ಹಾಸನ ಜಿಲ್ಲೆಯ ಉತ್ತರ ತುದಿಯ ಚಿಕ್ಕಮಗಳೂರು ಜಿಲ್ಲೆಯ ಜತೆ ಸೇರುವ ಗಡಿ ಭಾಗದಲ್ಲಿ ಅಂದರೆ ಬೇಲೂರು ತಾಲೂಕಿನ ಉತ್ತರ ಭಾಗದ ಕೊನೆಯಲ್ಲಿ ಈ ಊರು ನೆಲೆಸಿದೆ. ಒಂದೂವರೆ ಸಾವಿರ ವರ್ಷಗಳ ಹಿಂದೆಯೇ ಜನಜೀವನಕ್ಕೆ ಯೋಗ್ಯವಾಗಿ, ಕೆರೆಕಟ್ಟೆಗಳಿಂದ ಕೂಡಿ ವ್ಯವಸಾಯ ಯೋಗ್ಯ ಗದ್ದೆಗಳು ರೂಪುಗೊಂಡು ರಾಜನಿಗೆ ಕಂದಾಯ ಕೊಡುವಷ್ಟು ಮಟ್ಟಿಗೆ ಆಗಲೇ ಈ ಹಳ್ಳಿ ಬೆಳೆದಿತ್ತು.
ಸ್ಥಳನಾಮ
ಶಾಸನದಲ್ಲಿ ಹಲ್ಮಿಡಿಯನ್ನು ‘ಪಲ್ಮಿಡಿ’ಎಂದು ಕರೆಯಲಾಗಿದೆ. ಒಂದೂವರೆ ಸಾವಿರ ವರ್ಷಗಳ ಹಿಂದೆ ಈ ಊರನ್ನು ಹಾಗೆ ಕರೆಯುತ್ತಿದ್ದರು ಎಂಬುದು ಸ್ಪಷ್ಟ. ಆದರೆ ಇಂದಿನ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಜನಸಾಮಾನ್ಯರ ಬಾಯಲ್ಲೂ ‘ಹನುಮಿಡಿ’ ಎಂಬ ರೂಪವೂ ಬಳಕೆಯಲ್ಲಿದೆ. ಇಂದು ಕೆಲವರು ‘ಹನುಮಿಡಿ’ ಎಂದು ಉಚ್ಚರಿಸಿದ ಮಾತ್ರಕ್ಕೆ ಆ ಊರಿನ ನಿಜವಾದ ಹೆಸರು ಅದೇ ಇರಬೇಕಿಲ್ಲ. ಸ್ಥಳನಾಮವೂ ಪೀಳಿಗೆಯಿಂದ ಪೀಳಿಗೆಗೆ ರೂಪಾಂತರ ಹೊಂದುತ್ತಾ ಬರುತ್ತದೆಂಬುದು ಸ್ಥಳನಾಮಗಳ ಸಮೀಕ್ಷೆಯಿಂದ ಸಿದ್ಧವಾಗಿದೆ. ಒಂದು ಸ್ಥಳದ ಪುರಾತನ ನಾಮರೂಪ ಮತ್ತು ರೂಪಾಂತರಗಳನ್ನು ತಿಳಿಯಲು ಶಾಸನ ಸಾಹಿತ್ಯವೂ ಅಧಿಕೃತ ಸಾಕ್ಷ್ಯವಾಗಿರುತ್ತದೆ. ಹಲ್ಮಿಡಿ ಶಾಸನದಲ್ಲಿ ಊರಿನ ಹೆಸರು ‘ಪಲ್ಮಿಡಿ’ ಎಂದಿದೆ. ಇದರ ನಂತರದಲ್ಲಿ ಹಾಕಲ್ಪಟ್ಟ ಕ್ರಿ.ಶ. ೫೨೦ರ ಕದಂಬರ ೫ನೇ ರಾಜನಾದ ಮುಮ್ಮಡಿ ಕೃಷ್ಣವರ್ಮನ ತಾಮ್ರಶಾಸನದಲ್ಲೂ ‘ಪಲ್ಮಿಡಿ ಗ್ರಾಮ’ ಎಂದೇ ಇದೆ. ಮುಂದೆ ಗಂಗರಾಜರ ಆಡಳಿತಾವಧಿಯಲ್ಲಿ ರಾಚಮಲ್ಲನ ಚಿಕ್ಕಮಗಳೂರು ಶಾಸನ (ಕ್ರಿ.ಶ.೮೯೯) ಮತ್ತು ೨ನೇ ಬೂತುಗನ ಬಪ್ಪವಳ್ಳಿಯ (ಕ್ರಿ.ಶ. ೯೫೯)ಗಳಲ್ಲಿ ‘ಪಲ್ಮಾಡಿ’ ಎಂದು ಕರೆಯಲಾಗಿದೆ.
ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ಕ್ರಿ.ಶ. ೧೫೨೩ರಲ್ಲಿ ಶೃಂಗೇರಿಯ ಬಸದಿಗೆ ಕೊಡುಗೆ ನೀಡಿದ ದೇವಣಸೆಟಿಯ ಊರು ‘ಹಲುಮಿಡಿ’ ಕೃಷ್ಣದೇವರಾಯನ ಆಡಳಿತ ಕಾಲದ ಕ್ರಿ.ಶ. ೧೫೨೪ರ ಬೇಲೂರು ಶಾಸನದ ಎರಡು ಪ್ರತಿಗಳಲ್ಲಿ ‘ಹಲುಮಿಡಿ’ ಎಂಬ ರೂಪ ಕಾಣಸಿಗುತ್ತದೆ.
ಈ ರೀತಿ ಒಂದೂವರೆ ಸಾವಿರ ವರ್ಷಗಳ ಹಿಂದೆ ‘ಪಲ್ಮಿಡಿ’ ಎಂದಿದ್ದ ಹೆಸರು ನಂತರ ಪಲ್ಮಾಡಿ, ಹಲುಮಿಡಿ ಮುಂತಾದ ರೂಪಾಂತರಗಳನ್ನು ಹೊಂದಿ ಜನಸಾಮಾನ್ಯರ ಬಾಯಲ್ಲಿ ‘ಹಲ್ಮಿಡಿ’ಯಾಗಿ ಉಳಿದಿರಬೇಕು. ಆದರೆ ಹನುಮಿಡಿ ಎಂಬ ರೂಪವು ಯಾವ ಶಾಸನದಲ್ಲೂ ದಾಖಲಾಗಿಲ್ಲ. ಬಹುಶಃ ಇಸ್ಲಾಂ ಮತ್ತು ಬ್ರಿಟಿಷ್ ಆಡಳಿತ ಕಾಲದಲ್ಲಿನ ಕಂದಾಯ ಇಲಾಖೆಯ ದಾಖಲೆಗಳಲ್ಲಿ ‘ಹಲುಮಿಡಿ’ಯು ಹನುಮಿಡಿ ಎಂದು ದಾಖಲಾಗತೊಡಗಿ ಕ್ರಮೇಣ ಜನಸಾಮಾನ್ಯರಲ್ಲಿ ಹಲ್ಮಿಡಿ, ಹನುಮಿಡಿ ಈ ಎರಡೂ ರೂಪಗಳು ಬಳಕೆಯಲ್ಲಿ ಉಳಿದವು. ಊರಿನ ಗಡಿಕಲ್ಲಿನಲ್ಲಿಯೂ ಈ ಎರಡು ನಾಮರೂಪಗಳನ್ನು ಕಾಣಬಹುದು. ಮತ್ತೆ ಕೆಲವರು ‘ಹಲ್ಮಿಡಿ’ ಎಂದೂ ಕರೆಯುತ್ತಾರೆ. ಇದೂ ಅಪಭ್ರಂಶಗಳನ್ನೇ ಮುಂದುವರಿಸದೆ ಶಾಸನತಜ್ಞರು ಒಪ್ಪಿ ಬಳಸಿಕೊಂಡು ಬಂದಿರುವ ‘ಹಲ್ಮಿಡಿ’ ನಾಮರೂಪವನ್ನೇ ಈ ಪುಸ್ತಕದಲ್ಲಿಯೂ ಸ್ವೀಕರಿಸಿ ಬಳಸಲಾಗಿದೆ.
ಗ್ರಾಮೀಣ ಜನರಲ್ಲೂ ಈ ಎರಡು ಹೆಸರುಗಳಲ್ಲಿ ಸರಿ ಯಾವುದು ಎಂಬ ಜಿಜ್ಞಾಸೆ ಇತ್ತು. ಹಲ್ಮಿಡಿ ಶಾಸನದ ಪ್ರತಿಕೃತಿ ಮಂಟಪ ನಿರ್ಮಾಣ ಕಾರ್ಯದ ನಿಮಿತ್ತ ಅಲ್ಲಿನ ಶ್ರೀ ಆದರ್ಶ ಯುವಕ ಸಂಘದವರು ನನ್ನಲ್ಲಿ ಚರ್ಚಿಸಿ-ಇನ್ನು ಮುಂದೆ ‘ಹಲ್ಮಿಡಿ’ ನಾಮರೂಪವನ್ನೇ ಸರ್ಕಾರೀ ವ್ಯವಹಾರಗಳಲ್ಲೂ ಬಳಸುವಂತೆ ಸರ್ಕಾರಿ ಕಚೇರಿಗಳಿಗೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕೂಡ ‘ಹಲ್ಮಿಡಿ’ ನಾಮರೂಪವನ್ನೇ ಮಾನ್ಯಮಾಡಿದೆ.
ಭೌಗೋಳಿಕ ಸ್ಥಾನ: ಭೂಗೋಳದಲ್ಲಿ ಹಲ್ಮಿಡಿಯ ಸ್ಥಾನ ೧೩.೨ ಡಿಗ್ರಿ ಉತ್ತರ ಅಕ್ಷಾಂಶ ಮತ್ತು ೭೬.೬೬ ಡಿಗ್ರಿ ಪೂರ್ವ ರೇಖಾಂಶಗಳು ಸಂಧಿಸುವಲ್ಲಿ ಇದೆ. ಈ ಭಾಗವನ್ನು ಇಂದು ನಾವು ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ ಉತ್ತರ ತುದಿ ಎಂದು ಗುರ್ತಿಸುತ್ತೇವೆ. ಆದರೆ ಪುರಾತನ ಕಾಲದಲ್ಲಿ- ಹಲ್ಮಿಡಿ ಶಾಸನದಲ್ಲಿರುವ ಉಲ್ಲೇಖದಂತೆ ಈ ಭೂಭಾಗವನ್ನು ‘ನರಿದಾವಿಳೆ ನಾಡು’ ಎಂದು ಕರೆಯಲಾಗಿದೆ. ನಂತರದಲ್ಲಿ ಇದು ದಾವಿಳೆ-ದಾವಳಿಗೆ-ದೇವಳಿಗೆ ದೇವಾಳ್ಗೆ ಮುಂತಾಗಿ ರೂಪಭೇದಗಳನ್ನು ಹೊಂದಿರಬೇಕು. ಏಕೆಂದರೆ ಕದಂಬರ ಸಮಕಾಲೀನವಾದ ನೆರೆಯ ಗಂಗ ರಾಜ್ಯದಲ್ಲಿ ಕ್ರಿ.ಶ. ೪೬೦ರ ಮೂರನೇ ಮಾಧವನ ಕಾಲದ ಸಂಸ್ಕೃತ ತಾಮ್ರಶಾಸನದಲ್ಲಿಯೇ ‘ದೇವಳ್ಗೆ’ ವಿಷಯ’ ಎಂಬ ಉಲ್ಲೇಖವಿದೆ.
ಗಂಗರಾಜ ಎರಡನೇ ಬೂತುಗನ ಕ್ರಿ.ಶ. ೯೫೬ರ ಶಾಸನದಲ್ಲಿ ‘ದೇವಳಿಗೆ ಎಪ್ಪತ್ತು’ ಎಂದೂ, ಹೊಯ್ಸಳರ ವಿನಯಾದಿತ್ಯನ ಕಾಲದ ಕ್ರಿ.ಶ. ೧೦೭೪ರ ಶಾಸನದಲ್ಲೂ ‘ದೇವಳಿಗೆ ನಾಡ ಎಳ್ಪತ್ತು’ ಎಂದು ಇರುವ ಉಲ್ಲೇಖನಗಳಿಂದ ಈ ದೇವಳಿಗೆ ಎಂಬ ವಿಭಾಗವು ಎಪ್ಪತ್ತು ಹಳ್ಳಿಗಳ ಸಮುದಾಯವೆಂದು ಊಹಿಸಬಹುದು. ದೇವಳಿಗೆ ನಾಡು ಎಂಬ ಆಡಳಿತ ವಿಭಾಗದ ಉಲ್ಲೇಖನವನ್ನು ವಿಷ್ಣುವರ್ಧನನ ಕ್ರಿ.ಶ. ೧೧೧೭ರ ಬೇಲೂರು ಶಾಸನ ಮತ್ತು ಅವನ ಮೊಮ್ಮಗ ವೀರಬಲ್ಲಾಳನ ಕ್ರಿ.ಶ. ೧೨೦೦ರ ತಾಮ್ರ ಶಾಸನಗಳಲ್ಲಿ ಕಾಣಬಹುದು. ವಿಜಯನಗರದ ಆಡಳಿತ ಕಾಲಕ್ಕೆ ಸೇರಿದ ಕ್ರಿ.ಶ.೧೪೦೪ರ ಅಂಬಳೆಯ ಶಾಸನವು ದೇವಳಿಗೆ ಸೀಮೆಯ ನಿರ್ದಿಷ್ಟ ಸ್ಥಾನ ಸೂಚನೆಯನ್ನು ನೀಡಿದೆ.
“ವೇಲಾಪುರ್ಯಾಃ ಉದಗ್ದಿಶಿ ಕ್ರೋಶದ್ವಯ ಮಿತೇ ದೇಶೇ |
ಸುಖಸಂವಾಸನೋಚಿತೇ ದೇವಳಾಭಿದ ಸೀಮಾಯಾಃ||”
ಎಂಬ ಭಾಗವು ‘ವೇಲಾಪುರ ಅಂದರೆ ಬೇಲೂರು ಪಟ್ಟಣದ ಉತ್ತರ ದಿಕ್ಕಿಗೆ ಎರಡು ಕ್ರೋಶಗಳಷ್ಟು ದೂರದಲ್ಲಿ ಜನವಸತಿಗೆ ಅತ್ಯಂತ ಯೋಗ್ಯವಾದ ದೇವಳ ಎಂಬ ಹೆಸರಿನ ಸೀಮೆಯಲ್ಲಿ...’ ಎಂದರ್ಥ ಕೊಡುತ್ತದೆ. ಹಲ್ಮಿಡಿ ಶಾಸನದ ನರಿದಾವಿಳೆ ನಾಡು ಎಂಬ ವಿಭಾಗದ ಜಾಗವು ಇದೇ ಆಗಿದೆ.
ಈ ದೇವಳಿಗೆ ನಾಡಿನಲ್ಲೇ ಹಲ್ಮಿಡಿ ಗ್ರಾಮವು ಇತ್ತು ಎಂಬುದಕ್ಕೆ ಇನ್ನೊಂದು ಖಚಿತ ಪುರಾವೆಯಾಗಿ ಕೃಷ್ಣದೇವರಾಯನ ಆಳ್ವಿಕೆಯ ಕಾಲದ ಕ್ರಿ.ಶ. ೧೫೨೪ರ ಶಿಲಾಶಾಸನವನ್ನು ಉದಾರಿಸಬಹುದು. ಬೇಲೂರಿನ ದೊಡ್ಡಕೆರೆಯಾದ ವಿಷ್ಣು ಸಮುದ್ರದ ಉತ್ತರ ಭಾಗವನ್ನು ಪುಷ್ಕರಣಿಯಾಗಿ ರೂಪಿಸಿದ ಬಗ್ಗೆ ಹಾಕಿಸಿದ ಈ ಶಾಸನದಲ್ಲಿ ಕೃಷ್ಣದೇವಮಹಾರಾಯರು ನಾಯಕತನಕ್ಕೆ ಪಾಲಿಸಿದ ವಸ್ತಾರೆಯ ಸೀಮೆಗೆ ಸಲ್ಲುವ ದೇವಣಿಗೆಯ ನಾಡೋಗಳಗಣ ನಾರಾಯಣಪುರ ಗ್ರಾಮವೊಂದು ಹಲುಮಿಡಿಯ ಗ್ರಾಮ ೧-ಉಭಯ ಗ್ರಾಮಕ್ಕೆ ಸಲುವ ಗದ್ದೆ, ಬೆದ್ದಲು, ತೋಟತುಡಿಕೆ ಎಂಬ ಸಾಲುಗಳಿಂದ ಹಲ್ಮಿಡಿ ಮತ್ತು ಅದರ ಪಕ್ಕದ ನಾರಾಯಣಪುರ ಗ್ರಾಮಗಳು ದೇವಳಿಗೆ ನಾಡಿಗೆ ಸೇರಿದ್ದವೆಂಬುದು ಖಚಿತವಾಗಿದೆ. ಆದುದರಿಂದ ನರಿದಾವಿಳೆ ನಾಡು ಮತ್ತು ದೇವಳಿಗೆ ನಾಡು ಈ ಎರಡೂ ಸಹ ಒಂದೇ ಎಂದು ಖಚಿತವಾಗಿ ತೀರ್ಮಾನಿಸಬಹುದು.
ಮತ್ತೊಂದು ಕುತೂಹಲಕರ ವಿಷಯವೆಂದರೆ ದೇವಳಿಗೆ ನಾಡನ್ನು ವಸ್ತಾರೆ ಸೀಮೆಗೆ ಸೇರಿದುದೆಂದು ಈ ಬೇಲೂರು ಶಾಸನದಲ್ಲಿ ಹೇಳಲಾಗಿದೆ. ಅಂದರೆ, ವಿಜಯನಗರದ ಆಡಳಿತ ಕಾಲದಲ್ಲಿ ಈ ಭೂಭಾಗವು ವಸ್ತಾರೆ ಸೀಮೆಗೆ ಸೇರಿತ್ತೆಂದು ತಿಳಿಯುತ್ತದೆ. ಆದರೆ ಕದಂಬರ ಕಾಲದ ಕ್ರಿ.ಶ. ೫೨೦ ಸುಮಾರಿನ ಇಮ್ಮಡಿ ಕೃಷ್ಣವರ್ಮನ ತಾಮ್ರಶಾಸನದ ಮೂರನೇ ಪುಟದಲ್ಲಿ ಸೇನ್ದ್ರಕ ವಿಷಯಾಂತರ್ಗತ ಪಲ್ಮಿಡಿ ಗ್ರಾಮೇ... ಎಂದಿದೆ. ಇದಲ್ಲದೆ. ಕ್ರಿ.ಶ. ೪೬೦ರ ಗಂಗವಂಶದ ಮೂರನೇ ಮಾಧವನ ಆಳ್ವಿಕೆಯ ತಾಮ್ರ ಶಾಸನದಲ್ಲಿ ದೇವಾಳ್ಗೆವಿಷಯ ಎಂದಿದೆ. ವಿಷಯ ಎಂಬುದು ಅನೇಕ ಸೀಮೆಗಳನ್ನೊಳಗೊಂಡ ಭೂಭಾಗ ಆದುದರಿಂದ ದೇವಳಿಗೆ ಎಂಬ ಆಡಳಿತ ವಿಭಾಗವು ಒಮ್ಮೆ ಒಂದು ಪ್ರಾಂತ್ಯವಾಗಿತ್ತು. ನಂತರ ಒಮ್ಮೆ ಸೇಂದ್ರಕ ಪ್ರಾಂತ್ಯಕ್ಕೂ ಮತ್ತೊಮ್ಮೆ ವಸ್ತಾರೆ ಪ್ರಾಂತ್ಯಕ್ಕೂ ಸೇರಿದ ಭಾಗವಾಯಿತು ಎಂದು ಊಹಿಸಬಹುದು. ದೇವಳಿಗೆ ನಾಡು ಒಂದೂವರೆ ಸಾವಿರ ವರ್ಷಗಳ ಅವಧಿಯಲ್ಲಿ ಅನೇಕ ಆಡಳಿತಾತ್ಮಕ ಬದಲಾವಣೆಯನ್ನು ಕಂಡಿದೆಯಾದರೂ ಹಲ್ಮಿಡಿ ಗ್ರಾಮವು ಮಾತ್ರ ದೇವಳಿಗೆ ನಾಡಿನಲ್ಲಿಯೇ ಇದೆ.
ಕದಂಬ ರಾಜ್ಯದ ದಕ್ಷಿಣ ತುದಿಯ ಒಂದು ಪ್ರಾಂತ್ಯವಾಗಿದ್ದ ಈ ದೇವಳಿಗೆ ವಿಭಾಗವು ಎಪ್ಪತ್ತು ಹಳ್ಳಿಗಳನ್ನು ಒಳಗೊಂಡಿತ್ತು. ಶಾಸನಗಳು ಇದನ್ನು "ದೇವಾಳ್ಗೆಎಛ್ವಿ(ಳ್ವ)ತ್ತು" ಎಂದೇ ಕೆರೆದಿವೆ. ಹಲ್ಮಿಡಿ, ನಾರಾಯಣಪುರ, ಮುಗುಳುವಳ್ಳಿ, ಸೋಮಶೆಟ್ಟಿಹಳ್ಳಿ, ಮರ್ಲೆ, ಚಿಕ್ಕಮಗಳೂರು, ಬಸವನಹಳ್ಳಿ, ಅಂಬಳೆ, ಹಿರೇಮಗಳೂರು ಮತ್ತು ಇವುಗಳ ಅಕ್ಕಪಕ್ಕದ ಊರುಗಳೇ ಈ ಎಪ್ಪತ್ತು ಹಳ್ಳಿಗಳಾಗಿದ್ದವು ಎಂಬ ಅಂಶವು ಶಾಸನಗಳ ಸೂಕ್ಷ್ಮ ಅಧ್ಯಯನದಿಂದ ತಿಳಿಯುತ್ತದೆ. ಒಟ್ಟಿನಲ್ಲಿ ಇಂದಿನ ಬೇಲೂರು ತಾಲೂಕಿನ ಉತ್ತರಭಾಗ ಮತ್ತು ಚಿಕ್ಕಮಗಳೂರು ತಾಲೂಕಿನ ದಕ್ಷಿಣಭಾಗಗಳು ಸೇರಿ ದೇವಳಿಗೆ ನಾಡು ರೂಪಿತವಾಗಿತ್ತು. ಈ ದೇವಳಿಗೆ ನಾಡೇ ಹಲ್ಮಿಡಿ ಶಾಸನದ ‘ನರಿದಾವಿಳೆ ನಾಡು’ ಎಂದು ಊಹಿಸಬಹುದು.
ಈ ನರಿದಾವಿಳೆ ನಾಡಿನ ದಕ್ಷಿಣ ತುದಿಯಲ್ಲಿ ನಾರಾಯಣಪುರ ಮತ್ತು ಮುಗುಳುವಳ್ಳಿಗಳ ನಡುವೆ ಹಲ್ಮಿಡಿ ಗ್ರಾಮವಿದೆ. ಶಿಲಾಯುಗದ ಕಾಲದಿಂದಲೂ ನೀರಿನಾಸೆಯ ಅಂದರೆ ನದಿ-ಹಳ್ಳಗಳ ತೀರದಲ್ಲಿ ನಾಗರೀಕ ವಸತಿಗಳು ಅರಳುತ್ತಾ ಬಂದಿವೆಯಷ್ಟೇ. ಬೇಲೂರು ತಾಲೂಕಿಗೆ ಯಗಚಿ ನದಿಯು ಜೀವನದಿಯಾಗಿದೆ. ಇದರ ದಡದಲ್ಲಿ ಶಿಲಾಯುಗದ ಕಾಲದಿಂದಲೇ ಜನವಸತಿ ಇದ್ದು ನಾಗರೀಕತೆ ರೂಪುಗೊಳ್ಳುತ್ತಾ ಬಂದಿದೆ. ಈ ಯಗಚೀ ನದಿಗೆ ಸೇರುವ ಹಳ್ಳವಾದ ‘ಬೆನಕನಗಳ್ಳದ ದಡದಲ್ಲಿ ಈ ಹಲ್ಮಿಡಿಗ್ರಾಮ ಹುಟ್ಟಿ ಬೆಳದಿದೆ. ಬಹುಶ: ಬೃಹತ್ ಶಿಲಾಯುಗದ ಅವಧಿಯಿಂದಲೇ ಇಲ್ಲಿ ಜನರು ವಾಸಿಸಲು ಆರಂಭಿಸಿದ್ದು, ಇಲ್ಲಿಗೆ ಒಂದೂವರೆ ಸಾವಿರ ವರ್ಷಗಳಿಗೂ ಮೊದಲೇ ಹಲ್ಮಿಡಿಯು ಒಂದು ಬಲಿಷ್ಠ ಗ್ರಾಮವಾಗಿ ನಿಂತಿತ್ತು. ಕದಂಬರ ಆಳ್ವಿಕೆಯ ಕಾಲದಲ್ಲೇ ಒಂದು ಮಣ್ಣಿನ ಕೋಟೆಯೂ ಇತ್ತೆಂದು ಕಾಣುತ್ತದೆ. ಊರಿನ ಸುತ್ತಲೂ ಆಳವಾದ ಕಂದಕ ತೋಡಿ ಆ ಮಣ್ಣನ್ನು ಒಳ ಅಂಚಿಗೆ ಗೋಡೆಯಂತೆ ಸುರಿದು ಕೋಟೆಯನ್ನು ಕಟ್ಟುವ ಪುರಾತನ ತಂತ್ರವನ್ನು ಇಲ್ಲಿ ಬಳಸಲಾಗಿದೆ.
ಈ ಕೋಟೆಗೆ ಕನಿಷ್ಠ ಎರಡು ದ್ವಾರಗಳಾದರೂ ಇದ್ದವು.
ಒಂದು ಪೂರ್ವಕ್ಕೆ ಇನ್ನೊಂದು ಪಶ್ಚಿಮಕ್ಕೆ. ಇನ್ನೂ ಎರಡು ದ್ವಾರಗಳ ಸಾಧ್ಯತೆಯೂ ಕಂಡುಬರುತ್ತದೆ. ಪೂರ್ವದ ಮಹಾದ್ವಾರವು ಬಹುಶ: ನಂತರದಲ್ಲಿ ಪುನರ್ನವೀಕರಿಸಲ್ಪಟ್ಟಿದ್ದು, ಅದರ ಭಾಗಗಳು ಇಂದೂ ಇವೆ. ಇನ್ನುಳಿದ ದ್ವಾರಗಳು ಪೂರ್ಣವಾಗಿ ನಾಶವಾಗಿವೆ. ಕೋಟೆಯ ಮಣ್ಣು ಕೂಡಾ ಕುಸಿದು, ಕಂದಕವು ಮುಚ್ಚಿಕೊಂಡು. ಗುರುತು ಸಿಕ್ಕದಂತಾಗಿದೆ. ಪ್ರಯತ್ನಿಸಿದರೆ ಕೋಟೆ-ಕಂದಕಗಳನ್ನು ಗುರ್ತಿಸಬಹುದು. ಕೋಟೆಯ ಪಶ್ಚಿಮ ಭಾಗದ ಅವಶೇಷವು ದಿಣ್ಣೆಯಂತಾಗಿದೆ. (ಅಲ್ಲೊಂದೆಡೆ ಒಂದು ಪ್ರತಿಮೆಯೂ ಇದ್ದು ಇಂದು ಅದನ್ನು ‘ಬೊಮ್ಮೇಶ್ವರ’ ಎಂಬ ಹೆಸರಿನಿಂದ ಪೂಜಿಸುತ್ತಾರಾದರೂ ಇದು ಯಾರೋ ರಾಜದಂಪತಿ ಅಥವ ನಾಯಕ ದಂಪತಿಗಳದ್ದಾಗಿರುವಂತಿದೆ)
ಕದಂಬರ ಕಾಲಕ್ಕಾಗಲೇ ವ್ಯವಸ್ಥಿತ ರೂಪವನ್ನು ಹೊಂದಿದ್ದ ಈ ಊರಿಗೆ ಒಳ್ಳೆಯ ಕೆರೆಯೂ, ಆ ಕೆರೆಯ ನೀರಾವರಿಯಿಂದ ಬೆಳೆ ಬೆಳೆಯುವ ಗದ್ದೆಗಳ ಸಮೂಹವೂ ಇತ್ತು ಎಂಬುದು ಹಲ್ಮಿಡಿ ಶಾಸನದಿಂದಲೇ ಸ್ಪಷ್ಟವಾಗಿದೆ. ಈ ಊರು ಆಗಲೇ ಜನರ ಸುಖ ಜೀವನಕ್ಕೆ ಅಗತ್ಯವಾದ ಗ್ರಾಮೀಣ ಸವಲತ್ತುಗಳನ್ನು ಹೊಂದಿದ್ದು ಈ ಸಮೃದ್ಧ ಗ್ರಾಮದಲ್ಲಿ ತೋಟ=ತುಡಿಕೆಗಳಿದ್ದವು. ಅಂತೆಯೇ ಕಂದಾಯ ವಸೂಲಿಯೂ ಆಗುತ್ತಿತ್ತು ಎಂಬುದನ್ನೂ ಅನೇಕ ಶಾಸನಗಳಿಂದ ತಿಳಿಯಬಹುದು. ಅಂತೂ ಹಾಸನ ಜಿಲ್ಲೆಯ ಪುರಾತನ ಜನವಸತಿಗಳಲ್ಲಿ ಹಲ್ಮಿಡಿಗ್ರಾಮವೂ ಒಂದು. ಇದು ಪುಟ್ಟಗ್ರಾಮವಾದರೂ ಈ ನೆಲದಿಂದ ಕನ್ನಡ ನಾಡಿನ ವಾಙ್ಮಯ ಇತಿಹಾಸ, ಭಾಷೆ, ಲಿಪಿ, ಸಂಸ್ಕೃತಿ, ಜನಜೀವನ ಮುಂತಾಗಿ ನಾನಾ ರಂಗಗಳಿಗೆ ಪ್ರಥಮ ಲಿಖಿತ ದಾಖಲೆ ಎನಿಸುವಂತಹ ಶಾಸನವೊಂದು ನಮಗೆ ಉಡುಗೊರೆಯಾಗಿ ದೊರೆತಿದೆ.
- ಡಾ.ಶ್ರೀವತ್ಸ ಎಸ್.ವಟಿ  
ಕೃಪೆ - http://karavenalnudi.blogspot.com/2010/08/blog-post_5115.html

Monday, June 27, 2011

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ ....

ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುರಿಯುತಿದೆ
ಎಲ್ಲಿರುವುದೊ ಅದು , ಎಂತಿರುವುದೊ ಅದು
ನೋಡಬಲ್ಲೆನೆ ಒಂದುದಿನ ಕಡಲನು ಕೂಡಬಲ್ಲೆನೆ ಒಂದುದಿನ . . . .

ಸಾವಿರ ಹೊಳೆಗಳು ತುಂಬಿ ಹರಿದರು ಒಂದೇಸಮನಾಗಿಹುದಂತೆ
ಸುನೀಲ ವಿಸ್ತರ ತರಂಗಶೋಭಿತ ಗಂಭಿರಾಂಬುಧಿ ತಾನಂತೆ
ಮುನ್ನೀರಂತೆ , ಅಪಾರವಂತೆ
ಕಾಣಬಲ್ಲೆನೆ ಒಂದುದಿನ,ಅದರೊಳು ಕರಗಲಾರೆನೆ ಒಂದುದಿನ . . . .

ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು
ಸೇರಬಹುದೆ ನಾನು,ಕಡಲ ನೀಲಿಯೊಳು, ಕರಗಬಹುದೆ ನಾನು . . . .

-ಜಿ. ಎಸ್. ಶಿವರುದ್ರಪ್ಪ

Sunday, June 26, 2011

ದೀಪವಿರದ ದಾರಿಯಲ್ಲಿ

ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೆ
ಕಂಬನಿಗಳ ತಲಾತಲದಿ
ನಂದುತಿರುವ ಕಿಡಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ನೀಲಿಯಲ್ಲಿ ಮೈಯಿಲ್ಲದೆ
ತೇಲಾಡುವ ಹನಿಗಳೆ
ಬಾಯಿಲ್ಲದ ಮೌನದಲ್ಲಿ
ಅಲೆಯುತಿರುವ ದನಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಜಲವಿಲ್ಲದ ನೆಲಗಳಲ್ಲಿ
ಕಮರುತಿರುವ ಕುಡಿಗಳೆ
ಬಿರು ಬಿಸಿಲಿನ ತುಳಿತದಲ್ಲಿ
ಸೊರಗಿ ಹೋದ ಮಿಡಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಶೃತಿಯಿಲ್ಲದ ವಾದ್ಯದಲ್ಲಿ
ಗತಿಯಿಲ್ಲದ ಸ್ವರಗಳೆ
ಬಿರುಗಾಳಿಗೆ ಗರಿವುದುರಿದ
ಹೊಂಗನಸಿನ ಮರಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

-ಡಾ.ಜಿ. ಎಸ್. ಶಿವರುದ್ರಪ್ಪ...

Saturday, June 25, 2011

JµÀÄÖ ºÉZÀÄÑ D±É¥ÀqÀÄ«AiÉÆà CµÀÄÖ ¤gÁ±É PÁ¬ÄÝzÉ.      ... £ÁtÄßr
  G½AiÀÄĪÀÅzÉà M¼ÉîAiÀÄ QÃwð.      ... £ÁtÄßr
  zÉÆqÀØ PÀ¼Àî£É ¸ÀtÚ PÀ¼Àî£À£ÀÄß UÀ®ÄèUÀA§PÉÌ ¤°è¸ÀÄvÁÛ£É.      ... £ÁtÄßr
  avÁ aAvÉUÀ¼ÉgÀzÀÆ MAzÉÃ.      ... £ÁtÄßr
  ¸ÀªÀÄAiÀÄ, ªÉÃ¼É PÁ®UÀ¼Éà §ºÀÄzÉÆqÀØ aQvÀìPÀ.      ... £ÁtÄßr
  d£ÉÛAiÀÄ PÀgÉAiÉÄà F±ÀégÀ£À PÀgÉ.      ... £ÁtÄßr
  vÀ¥Éà£ÀÄߪÀÅzÉà MAzÀÄ CAzsÀvÀé. DzÀÄ £ÉÆÃqÀĪÀ PÀtÄÚUÀ¼ÀÄ ¸ÀAvÁ£ÀªÀ£ÀÄß ºÀÄnÖ¸ÀÄvÀÛzÉ.      ... £ÁtÄßr
  CªÀºÉüÀ£À ªÀÄvÀÄÛ ¥ÉæëÄUÀ¼ÉgÀqÀÆ PÀÄgÀÄqÀÄUÀ½ªÉ.      ... £ÁtÄßr
  zsÀ£ÀªÀÅ §Ä¢ÞªÀAvÀ£À ZÁPÀj ªÀiÁrzÀgÉ ªÀÄÆRð£À ªÉÄÃ¯É D½PÉ £ÀqɸÀÄvÀÛzÉ.      ... £ÁtÄßr
  AiÀiÁªÀ£ÀÄ CvÀåAvÀ zsÀ£ÀªÀAvÀ£ÉÆà CªÀ£Éà CvÀå¢üPÀ ¤UÀðwPÀ£ÀÄ.      ... £ÁtÄßr
  F±ÀªÀgÀ£À ©Ã¸ÀĪÀPÀ®Äè ¸ÁªÀPÁ±ÀªÁV wgÀÄUÀÄwÛzÉAiÀiÁzÀgÀÆ CzÀÄ ¸ÀuÁÚV ©Ã¸ÀÄvÀÛzÉ.      ... £ÁtÄßr
  ºÉÆ® ºÁ¼ÁzÀ ªÉÄÃ¯É ºÀ¼À-ºÀ½¸ÀĪÀÅzÀjAzÉãÀÄ ? ªÉÆzÀ®Ä JZÀÑj¸À¨ÉÃPÀÄ.      ... £ÁtÄßr
  ¥ÀwAiÀÄÄ AiÀiÁªÁUÁzÀgÀÆ MAzÉÆAzÀÄ ¸À° PÀÄgÀÄqÀ ªÀÄvÀÄÛ QªÀÅqÀ£ÁUÀ¨ÉÃPÁUÀĪÀÅzÀÄ.      ... £ÁtÄßr
  ªÉÆzÀ®Ä ¤Ã£ÀÄ §zÀ¯ÁUÀÄ DUÀ ¨sÁUÀå vÁ£Éà §zÀ¯ÁUÀĪÀÅzÀÄ.      ... £ÁtÄßr
  D®¸ÀåªÀÅ ¨ÁV°¤AzÀ ¥ÀæªÉò¹zÀgÉ ¥ÉæêÀĪÀÅ QlQ¬ÄAzÀ N¢ ºÉÆÃUÀÄvÀÛzÉ.      ... £ÁtÄßr
  §qÀvÀ£ÀªÉ£ÀÄߪÀÅzÉãÀÆ £ÁaPÉ ¥ÀqÀĪÀAxÀzÀÝ®è. DCzÀgÉ §qÀvÀ£ÀPÉÌ ®fÓvÀ£ÁUÀĪÀÅzÉà ®eÉÓ.      ... £ÁtÄßr
  zÁ¤AiÀÄ®èzÀ zsÀ£ÀªÀAvÀ£ÀAvÀºÀ §qÀªÀ E£ÉÆߧâ¤ß®è.      ... £ÁtÄßr
  UÉÆÃqÉUÀÆ Q«UÀ½gÀÄvÀÛªÉ.      ... £ÁtÄßr
  AiÀiÁgÁzÀgÀÆ £À£ÀUÉ MAzÀÄ ¸Áj ªÉÆøÀUÉƽ¹zÀgÉ CªÀjUÉ ¢üPÁÌgÀ. CªÀ£Éà JgÀqÀ£Éà ¨Áj ªÉÆøÀUÉƽ¹zÀgÉ £Á£Éà £ÁaPÉ E®èzÀªÀ£ÀÄ.      ... £ÁtÄßr
  zsÀÆvÀð¤UÉ ªÉÆøÀUÉƽ¸ÀĪÀÅzÉãÉÆà zsÀÆvÀðªÉà C®è.      ... £ÁtÄßr
  «±Áé¸ÀWÁvÀ¢AzÀ ¥ÁgÁUÀ®Æ AiÀiÁªÀ AiÀÄÄQÛAiÀÄÆ E®è.      ... £ÁtÄßr
  ¸ÀAvÉÆõÀªÀÅ MAzÀÄ ¸ÁAgÁdåQÌAvÀ ºÉZÁÑzÀÄzÀÄ.      ... £ÁtÄßr

Thursday, June 23, 2011

ಮಬ್ಬು ಕವಿದರೇನು

ಮಬ್ಬು ಕವಿದರೇನು
ನಿನ್ನ ಹಬ್ಬಿದಿರುಳ ದಾರಿಗೆ
ನಡೆ ಮುಂದಕೆ ಧೈರ್ಯದಿಂದ
ಅರುಣೋದಯ ತೀರಕೆ

ಹಳೆ ನೆನಪುಗಳುದುರಲಿ ಬಿಡು
ಬೀಸುವ ಚಳಿ ಗಾಳಿಗೆ
ತರಗೆಲೆಗಳ ಚಿತೆಯುರಿಯಲಿ
ಚೈತ್ರೋದಯ ಜ್ವಾಲೆಗೆ

ಹೊಸ ಭರವಸೆ ಚಿಗುರುತಲಿವೆ
ಎಲೆ ಉದುರಿದ ಕೊಂಬೆಗೆ
ಅರಳಿ ನಗುವ ಹೂಗಳಲ್ಲಿ
ಪುಟಿಯುತಲಿವೆ ನಂಬಿಕೆ

ಹಗಲಿರುಳಿನ ಕುದುರೆಗಳನು
ಹೂಡಿದ ರಥ ಸಾಗಿದೆ
ಯುಗ ಯುಗಗಳ ಹಾದಿಯಲ್ಲಿ
ಋತು ಚಕ್ರಗಳುರುಳಿವೆ

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೆ?
ನಿನ್ನ ಸೌಜನ್ಯವೇ ದಾರಿನೆರಳಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೆ?

ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿಸೂಸುವ ಅಮೃತ ನೀನೇನೆ!
ನನ್ನ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ
ಸಿದ್ಧಿಸುವ ಧನ್ಯತೆಯು ನೀನೇನೆ!

ನಿನ್ನ ಕಿರುನಗೆಯಿಂದ, ನಗೆಯಿಂದ, ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೆ!
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದ ಕಡೆಗೇನೆ!

- ಕೆ.ಎಸ್. ನರಸಿಂಹಸ್ವಾಮಿ

"ಅನಿರೀಕ್ಷಿತ"(1970) ಎನ್ನುವ ಚಲನಚಿತ್ರದಲ್ಲಿ ವಿಜಯಭಾಸ್ಕರ್ ಸಂಗೀತದಲಿ, ಪಿ.ಬಿ. ಶ್ರೀನಿವಾಸ್ ಅವರು ತುಂಬ ಸೊಗಸಾಗಿ ಹಾಡಿದ್ದಾರೆ.
ಹಾಗೆ ಸಿ. ಅಶ್ವಥ್ ಅವರು ಕೂಡ ತಮ್ಮದೇ ಧಾಟಿಯಲ್ಲಿ ಈ ಕವನವನ್ನು ತುಂಬ ಸೊಗಸಾಗಿ ಹಾಡಿದ್ದಾರೆ.

Friday, June 17, 2011

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು ||
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು ||ಪ||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಇಳೆವೆಣ್ಣು ಮೈದೊಳೆದು ಮಕರಂದದರಿಶಣದಿ
ಹೂ ಮುಡಿದು ಮದುಮಗಳ ಹೋಲುತಿತ್ತು ||೨||
ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು ||೨||
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ ||೨||
ಶುಭಮಸ್ತು ಶುಭಮಸ್ತು ಎನ್ನುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು ||೨||
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣ ಗುಣಿತ ಹಾಕುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಉಷೆಯ ನುಙ್ಗದಪಿನಲಿ ಹರ್ಷಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು ||೨||
ಸೃಷ್ಠಿಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಆ.. ಆ….. ಆ… ಆ…..ಆ.. ಆ….. ಆ….

Get this widget | Track details | eSnips Social DNA


ಗಾಯನ: ಬಿ.ಆರ್.ಛಾಯ
ಸಂಗೀತ: ಸಿ. ಅಶ್ವಥ್
ರಚನೆ: ಚನ್ನವೀರ ಕಣವಿ

Thursday, June 16, 2011

ಹೇಳಿ ಹೋಗು ಕಾರಣ

ಹೇಳಿ ಹೋಗು ಕಾರಣ ಹೋಗುವ ಮೊದಲು
ನನ್ನ ಬಾಳಿನಿಂದ ದೂರಾಗುವ ಮೊದಲು

ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ
ಬೆಳಕಾದೆ ಬಾಳಿಗೆ
ಇಂದೇಕೆ ಹೀಗೆ ಬೆಳಕನ್ನು ತೊರೆದು
ನೀ ಸರಿದೆ ನೆರಳಿಗೆ ?
ಇಂದ್ಯಾವ ಬಂಧ ತೊಡರಿದೆ
ನಿನ್ನ ಕಾಲಿಗೆ ?
ಸುಡುಬೆಂಕಿ ಬೆಳಕು ಉಳಿಯಿತೆ
ನನ್ನ ಪಾಲಿಗೆ ?

ಸವಿಭಾವಗಳಿಗೆ ನೀ ನಾದ ನೀಡಿ
ಜೊತೆಗೂಡಿ ಹಾಡಿದೆ
ಇಂದ್ಯಾವ ಅಳಲು ? ಸೆರೆಯುಬ್ಬಿ ಕೊರಳು
ನೀ ಮೌನ ತಾಳಿದೆ
ನೀ ನೆಟ್ಟು ಬೆಳೆಸಿದ ಈ ಮರ
ಫಲ ತೊಟ್ಟ ವೇಳೆಗೆ
ಹೀಗೇಕೆ ಮುರಿದು ಉರುಳಿದೆ
ಯಾವ ದಾಳಿಗೆ ?

-- ಬಿ.ಆರ್. ಲಕ್ಷ್ಮಣರಾವ್

ಅಮ್ಮ, ನಿನ್ನ ಎದೆಯಾಳದಲ್ಲಿ

ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು ....
ಕಡಿಯಲೋಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ ....

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಆಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ ...
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಆಗಾಧ ಗಗನ ...

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ...

Wednesday, June 15, 2011

ತರಚುಗಾಯವ

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ ।
ಕೊರತೆಯೊಂದನು ನೀನು ನೆನೆನೆನೆದು ಕೆರಳಿ ।।
ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ ।
ನರಳುವುದು ಬದುಕೇನೊ ಮಂಕುತಿಮ್ಮ ।।

Tuesday, June 14, 2011

ಕತ್ತಲೆಯೊಳೇನನೊ ಕಂಡು


ಕತ್ತಲೆಯೊಳೇನನೊ ಕಂಡು ಬೆದರಿದ ನಾಯಿ ।
ಎತ್ತಲೋ ಸಖನೋರ್ವನಿಹನೆಂದು ನಂಬಿ ।।
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು ।
ಭಕ್ತಿಯಂತೆಯೆ ನಮದು ಮಂಕುತಿಮ್ಮ ।।

Monday, June 13, 2011

ಜಟ್ಟಿ ಕಾಳಗದಿ

ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು ।
ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ ।।
ಮುಟ್ಟಿನೋಡವನ ಮೈಕಟ್ಟು ಕಬ್ಬಿಣ ಗಟ್ಟಿ ।
ಗಟ್ಟಿತನ ಗರಡಿ ಫಲ ಮಂಕುತಿಮ್ಮ ।।

Sunday, June 12, 2011

ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ


ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣಿಸಿ ।
ಹುಲ್ಲುಬಯಲೊಂದೆಡೆಯಿನೊಂದಕ್ಕೆ ನೆಗೆದು ।।
ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೊ ।
ಡೆಲ್ಲಿಯೊ ಸುಖ ನಿನಗೆ ಮಂಕುತಿಮ್ಮ ।।

Saturday, June 11, 2011

ಸರಿಯಾಗಲಿಲ್ಲವದು

ಸರಿಯಾಗಲಿಲ್ಲವದು ಸರಿಯಿದಲ್ಲವೆನುತ ।
ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ।।
ಕೊರೆಯಾದೊಡೇನೊಂದು ನೆರೆದೊಡೇನಿನ್ನೊಂದು ।
ಒರಟು ಕೆಲಸವೊ ಬದುಕು ಮಂಕುತಿಮ್ಮ ।।

Friday, June 10, 2011

ಪುಣ್ಯದಿಂ ಬಂದ

ಪುಣ್ಯದಿಂ ಬಂದ ಸಿರಿ ಮದಮೋಹಗಳ ಮೂಲ ।

ಖಿನ್ನನಾಗಿಪ ಪಾಪಫಲವಾತ್ಮಶುದ್ಧಿ ।।

ಅನ್ಯೋನ್ಯಜನಕಗಳು ಪುಣ್ಯಪಾಪಗಳಿಂತು ।

ಧನ್ಯನುಭಯವ ಮೀರೆ ಮಂಕುತಿಮ್ಮ ।।

Thursday, June 9, 2011

ಅನ್ನದಾತುರಕಿಂತ ಚಿನ್ನದಾತುರ

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ ಮಂಕುತಿಮ್ಮ ।।

Wednesday, June 8, 2011

ಎದೆ ತುಂಬಿ ಹಾಡಿದೆನು

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರೂ ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈ ದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ಎನಗಿಲ್ಲ ಚಿಂತೆ
-- ಜಿ.ಎಸ್.ಶಿವರುದ್ರಪ್ಪ

ಹುಳು ಹುಟ್ಟಿ ಸಾಯುತಿರೆ

ಹುಳು ಹುಟ್ಟಿ ಸಾಯುತಿರೆ ನೆಲ ಸವೆದು ಕರಗುತಿರೆ ।
ಕಡಲೊಳೆತ್ತಲೋ ಹೊಸ ದ್ವೀಪವೇಳುವುದು ।।
ಕಳೆಯುತೊಂದಿರಲಿಲ್ಲಿ ಬೆಳೆವುದಿನ್ನೊಂದೆಲ್ಲೊ ।
ಅಳಿವಿಲ್ಲ ವಿಶ್ವಕ್ಕೆ ಮಂಕುತಿಮ್ಮ ।।

Tuesday, June 7, 2011

ಒಂದು ಮರಿಮೀನಿಗೆ!

ಕಾರ್ಮುಗಿಲು ಆಗಸದ ತುಂಬ ಗೇರಾಯಿಸಿ
ಬೇಸಿಗೆಯ ತುದಿಗೆ ಮತ್ತೊಂದು ಉರುಬು!
ಒಣ ಧಗೆ-ಗಮ್ಮು-ಜೂಬರಿಕೆ-ಎಂಥದೊ ಜಡ್ಡು.
ತೂಗು ನಾಲಗೆ ಬಿದ್ದ ಗಂಟೆ ಕೊರಳು!

ಫಳ್ಳೆನುವ ಮಿಂಚು! ನಡು ನಡುವೆ ಸಿಡಿಮಿಡಿ ಗುಡುಗು
ಒಮ್ಮೆಗೇ ಆಹಾ! ತಂಗಾಳಿ ನುಗ್ಗು!
ಮೊದಲು ಹನಿ ಹನಿ ಚುಮುಕು. ಕೊನೆಗೆ ತಡಬಡವಿರದ
ಸುರಿತ. ಹೂವಾಗುವುದು ಎದೆಯ ಮೊಗ್ಗು!

ಅಂತರಾಳದ ತುಂಬ ನೆಲದ ಮಾದಕ ಗಂಧ
ನೆನೆಮಳೆಗೆ ಕಾದ ಮೈತುಂಬ ಝಳಕ
ಮಳೆಗಾಲ ಕಳೆಯಿತೋ ಮತ್ತದೇ ಒಣ ಬಾನು
ಇನ್ನೊಂದು ಮಳೆಗಾಲ ಬರುವ ತನಕ.

ಒಂದು ಮರಿಮೀನಿಗೆಷ್ಟಗಲ ಆಕಾಶ ಬಲೆ!
ಚುಕ್ಕಿ ಹುಳ ಚುಚ್ಚಿರುವ ಚಂದ್ರಗಾಳ!


ದಿವಸದಿಂ ದಿವಸಕ್ಕೆ

ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ ।
ಭವಿಷಿಯವ ಚಿಂತಿಸದೆ ಬದುಕ ನೂಕುತಿರು ।।
ವಿವರಗಳ ಜೋಡಿಸುವ ಯಜಮಾನ ಬೇರಿಹನು ।
ಸವೆಸು ನೀಂ ಜನುಮವನು ಮಂಕುತಿಮ್ಮ ।।

Sunday, June 5, 2011

ಸುರಪಸಭೆಯಲಿ ಗಾಧಿಸುತ

ಸುರಪಸಭೆಯಲಿ ಗಾಧಿಸುತ ವಸಿಷ್ಠ ಸ್ಪರ್ಧೆ ।

ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ ।।

ಬರುವುದಿಂತೆತ್ತಣಿನೊ ಬೇಡದ ಪ್ರಾರಬ್ಧ ।

ಕರುಮಗತಿ ಕೃತ್ರಿಮವೊ ಮಂಕುತಿಮ್ಮ ।।

Saturday, June 4, 2011

ಮಂಕುತಿಮ್ಮನ ಕಗ್ಗ

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು ।
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ ।।
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ ।
ಹೊರಡು ಕರೆ ಬರಲಳದೆ ಮಂಕುತಿಮ್ಮ ।।

Friday, June 3, 2011

ಅಜ್ಞಾತವಾದುದನಭಾವವೆನೆ

ಅಜ್ಞಾತವಾದುದನಭಾವವೆನೆ ನಾಸ್ತಿಕನು ।
ಅಜ್ಞೇಯವೆಂದದಕೆ ಕೈಮುಗಿಯೆ ಭಕ್ತ ।।
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ ।
ಸ್ವಜ್ಞಪ್ತಿಶೋಧಿ ಮುನಿ ಮಂಕುತಿಮ್ಮ ।।

Thursday, June 2, 2011

ಇಷ್ಟು ಕಾಲ....

ಇಷ್ಟು ಕಾಲ ಒಟ್ಟಿಗಿದ್ದು..ಎಷ್ಟು ಬೆರೆತರೂ.....
ಅರಿತೆವೇನು ನಾವು ನಮ್ಮ ಅಂತರಾಳವ....?

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ.....
ಮಣ್ಣ ಮುದ್ದು ದೊರಕಿತೇನು.. ನೀಲಿ ಬಾನಿಗೆ...?

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ.....
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ....?

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ....
ಒಂದಾದರು ಉಳಿಯಿತೇ..ಕನ್ನಡಿಯ ಪಾಲಿಗೆ....???

ಹರಡುವುದು ಸಾಜ ವಾಯುಗೆ


ಹರಡುವುದು ಸಾಜ ವಾಯುಗೆ ಸೈಸದದು ತಡೆಯನ್ ।
ಉರುಳಿಪುದದೆಲ್ಲವನು ತಡೆಗಳಿಲ್ಲದಿರೆ ।।
ನರನ ಸ್ವತಂತ್ರಗತಿಯಂತು ಹಿತಮಿತವಿರಲು ।
ಅರಸೊ ಮಿತಿಯಾಯತಿಯ ಮಂಕುತಿಮ್ಮ ।।

Wednesday, June 1, 2011

ಶ್ರೀ ವಿಷ್ಣು ವಿಶ್ವಾದಿಮೂಲ

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ
ದೇವಸರ್ವೇಶ ಪರಬೊಮ್ಮ ನೆಮ್ದುಜನಂ
ಆವುದನು ಕಾನದೋದ ಮಲ್ತಿಯಿಂ ನಂಬಿಹುದೋ
ಆ ವಿಚಿತ್ರಕೆ ನಮಿಸೋ - ಮಂಕುತಿಮ್ಮ

(ಕಾಣದೊಡಂ+ಅಳ್ತಿಯಂ) (ಪರಬ್ಬೊಮ್ಮಂ+ಎಂದು)

ಶ್ರೀ ವಿಷ್ಣು, ಪ್ರಪಂಚಕ್ಕೆ ಮೊದಲು ಮತ್ತು ಮೂಲನಾಗಿರುವವನು,ಮಾಯಲೋಲನಾಗಿರುವವನು,
ದೇವರು, ಸರ್ವರಿಗು ಈಶನಾಗಿರುವವನು ಮತ್ತು ಪರಬ್ರಹ್ಮ(ಪರಬೊಮ್ಮ) ನೆಂದು ವಿವಿಧವಾದ
ನಾಮಾವಳಿಗಳಿಂದ ಜನಗಳು ಯಾವುದನ್ನು ಕಾಣದಿದ್ದರು ಪ್ರೀತಿಯಿಂದ(ಅಳ್ತಿಯಿಂ) ನಂಬಿರುವರೋ,
ಆ ವಿಚಿತ್ರಕ್ಕೆ ನಮಿಸು.