Showing posts with label ವಿ.ಸೀ (ವೆಂಕಟರಾಮಯ್ಯ ಸೀತಾರಾಮಯ್ಯ). Show all posts
Showing posts with label ವಿ.ಸೀ (ವೆಂಕಟರಾಮಯ್ಯ ಸೀತಾರಾಮಯ್ಯ). Show all posts

Sunday, October 27, 2013

ಕಾದಿರುವಳು ಶಬರಿ ರಾಮ ಬರುವನೆಂದು


ಕಾದಿರುವಳು ಶಬರಿ ರಾಮ ಬರುವನೆಂದು ತನ್ನ ಪೂಜೆಗೊಳುವನೆಂದು
ವನವನವ ಸುತ್ತಿ ಸುಳಿದು ತರುತರುವನಲೆದು ತಿರಿದು | ಬಿರಿವೂಗಳಾಯ್ದು ತಂದು ತನಿವಣ್ಗಳಾಯ್ದು ತಂದು
ಕೊಳದಲ್ಲಿ ಮುಳುಗಿ ಮಿಂದು ಬಿಳಿ ನಾರು ಮುಡಿಯನುಟ್ಟು | ತಲೆವಾಗಿಲಿಂಗೆ ಬಂದು ಹೊಸತಿಲಲಿ ಕಾದು ನಿಂದು
ಎಳಗಾಳಿ ತೀಡುತಿರಲು ಕಿವಿಯೆತ್ತಿ ಆಲಿಸುವಳು | ಎಲೆಯಲುಗೆ ಗಾಳಿಯಲ್ಲಿ ನಡೆ ಸಪ್ಪುಳೆಂದು ಬಗೆದು
ದೂರಕ್ಕೆ ನೋಳ್ಪೆನೆಂದು ಮರವೇರಿ ದಿಟ್ಟಿಸುವಳು | ಗಿರಿ ಮೇಲಕೈದಿ ಕೈಯ ಮರೆ ಮಾಡಿ ನೋಡುತಿಹಳು
ಬಾ ರಾಮ, ರಾಮ ಎಂದು ಬರುತಿಹನು ಇಹನು ಎಂದು | ಹಗಲಿರುಳು ತವಕಿಸಿಹಳು ಕಳೆದಿಹವು ವರುಷ ಹಲವು
ಶಬರಿವೊಲು ಜನವು ದಿನವೂ ಯುಗಯುಗವು ಕರೆಯುತಿಹುದು| ಕರೆ ಇಳೆಗಳೇಳಲರಸಿ ತವಕದಲಿ ತಪಿಸುತಿಹುದು
ಭರವಸೆಗಳಳಿಯವಾಗಿ ಮನವೆಲ್ಲ ಬಯಕೆಯಾಗಿ | ಹಗಲೆಲ್ಲ ಕಾದು ಕೂಗಿ ಇರುಳೆಲ್ಲ ಜಾಗರಾಗಿ
ಬಂದಾನೊ ಬಾರನೋ ಓ ಕಂಡಾನೊ ಕಾಣನೋ ಓ | ಎಂದೆಂದು ಜಪಿಸಿ ತಪಿಸಿ ಶಂಕಾತುರಂಗಳೂರಿ
ಬಾ ರಾಮ, ಬಾರ, ಬಾರಾ ಬಡವರನು ಕಾಯು ಬಾರಾ| ಕಂಗಾಣದಿವರ ಪ್ರೇಮ ನುಡಿಸೋತ ಮೂಕ ಪ್ರೇಮ
ಕಾದಿರುವುದು ಜನವು ರಾಮ ಬರುವನೆಂದು ತಮ್ಮ ಪೂಜೆಗೊಳುವನೆಂದು


ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...