Thursday, June 23, 2011

ಮಬ್ಬು ಕವಿದರೇನು

ಮಬ್ಬು ಕವಿದರೇನು
ನಿನ್ನ ಹಬ್ಬಿದಿರುಳ ದಾರಿಗೆ
ನಡೆ ಮುಂದಕೆ ಧೈರ್ಯದಿಂದ
ಅರುಣೋದಯ ತೀರಕೆ

ಹಳೆ ನೆನಪುಗಳುದುರಲಿ ಬಿಡು
ಬೀಸುವ ಚಳಿ ಗಾಳಿಗೆ
ತರಗೆಲೆಗಳ ಚಿತೆಯುರಿಯಲಿ
ಚೈತ್ರೋದಯ ಜ್ವಾಲೆಗೆ

ಹೊಸ ಭರವಸೆ ಚಿಗುರುತಲಿವೆ
ಎಲೆ ಉದುರಿದ ಕೊಂಬೆಗೆ
ಅರಳಿ ನಗುವ ಹೂಗಳಲ್ಲಿ
ಪುಟಿಯುತಲಿವೆ ನಂಬಿಕೆ

ಹಗಲಿರುಳಿನ ಕುದುರೆಗಳನು
ಹೂಡಿದ ರಥ ಸಾಗಿದೆ
ಯುಗ ಯುಗಗಳ ಹಾದಿಯಲ್ಲಿ
ಋತು ಚಕ್ರಗಳುರುಳಿವೆ

No comments:

Post a Comment

ಕರಗಿತು ಕಂಪಿನ ಕರ್ಪೂರ... - ಮಹೇಶ ಭಟ್ಟ ಆರ್. ಹಾರ್ಯಾಡಿ

ಮೊನ್ನೆಯ ದಿನ (೧೦.೦೪.೨೬) ಬೆಳಗ್ಗೆ ನಾನು ಕಾಲೇಜಿಗೆ ಸೇರಿಕೊಂಡ ಸ್ವಲ್ಪ ಹೊತ್ತಿನಲ್ಲೇ ನನ್ನ ಶ್ರೀಮತಿ ಕರೆಮಾಡಿ 'ನಾಡೋಜ ಎಸ್. ಆರ್. ರಾಮಸ್ವಾಮಿ ಅವರು ಭೌತಿಕವಾಗಿ ...