ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, February 12, 2015

ದೇಶದ ರಾಜಕೀಯಕ್ಕೇ ಹೊಸ ಆಶಾ ಕಿರಣವಾದ ಆಮ ಆದ್ಮೀ ಪಕ್ಷದ ಗೆಲುವು............

ದೇಶದ ರಾಜಕೀಯಕ್ಕೇ ಹೊಸ ಆಶಾ ಕಿರಣವಾದ ಆಮ ಆದ್ಮೀ ಪಕ್ಷದ ಗೆಲುವು............
 ಇಂದು ಪ್ರಕಟವಾದ ದೆಹಲಿ ರಾಜ್ಯದ ಚುನಾವಣಾ ಫಲಿತಾಂಶದಲ್ಲಿ ಆಮ ಆದ್ಮೀ ಪಕ್ಷಕೆ ದೊರೆತ ಭರ್ಜರಿ ಜಯ ದೇಶದ ರಾಜಕೀಯಕ್ಕೆ ಆಶಾ ಕಿರಣವಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ.
ಕಾಂಗ್ರೇಸ್ಸನ ಭೃಷ್ಟತೆ, ಬಿಜಿಪಿಯ ಕೋಮವಾದ ರಾಜಕಾರಣ, ಉಳಿದ ಪ್ರಾದೇಶಿಕ ಪಕ್ಷಗಳ ಸ್ವಾರ್ಥ ರಾಜಕಾರಣದಿಂದಲ್ಲೇ ಕಳೆದ 25 ವರ್ಷಗಳಿಂದ ಭಾರತದ ರಾಜಕೀಯ ಕಲ್ಮಶವಾಗಿತ್ತು.   ನಿಷ್ಠಾವಂತ ಮಯಾ೯ದಸ್ಥ ವ್ಯಕ್ತಿಗಳು ರಾಜಕೀಯ ಕ್ಷೇತ್ರಕ್ಕೆ ಬರಬಾರದು ಎಂಬತಹ ಸ್ಥಿತಿಗೆ ಭಾರತದ ರಾಜಕೀಯ ಕಲ್ಮಶವಾಗಿತ್ತು.
 ಇಂತಹ ಸಂದರ್ಭದಲ್ಲಿ ಅಣ್ಣಾಹಜಾರೆ ಹೋರಾಟದ ಕೂಸಾಗಿ ಹುಟ್ಟಿದ ಆಮ ಆದ್ಮೀ ಪಕ್ಷವು ಉದಯವಾದ 8 ತಿಂಗಳ ಒಳಗೆ ಉತ್ತಮ ಪ್ರದರ್ಶನವನ್ನು ನೀಡಿತು. ಕಾಂಗ್ರೆಸ್ಸನ ಬಾಹ್ಯ ಬೆಂಬಲದೊಂದಿಗೆ 49 ದಿನ ಸಕಾರ ರಚಿಸಿದ ಪಕ್ಷ ನಂತರ ಸಕಾ೯ರವನ್ನು ವಿಸಜಿ೯ಸಿತು. ವ್ಯವಸ್ಥೆಯೊಂದನ್ನು ಬದಲಿಸುವ ತುಡಿತದಲ್ಲಿದ್ದ ಪಕ್ಷ ಅಧಿಕಾರದಿಂದ ಕೆಳಗಿಳಿದಿದ್ದು ದುಡುಕಿನ ನಿಧಾ೯ರವೆಂದು ಬಿಂಬಿತವಾಯಿತು.
ಅದೇ ಸಮಯದಲ್ಲಿ ಎದುರಾದ ಲೋಕಸಭೆಗೆ  ಅತಿ ಆಸೆಯಿಂದ ಸೂಕ್ತ ತಯಾರಿ ಇಲ್ಲದೇ ಹೋಯಿತು  ಕಾರಣದಿಂದಲ್ಲೇ ಸೋಲನ್ನು ಅನುಭವಿಸಿತು. ಆದರೇ ಸೋಲನ್ನು ಸ್ವೀಕಾರ ಮಾಡಿ ತಕ್ಷಣ ಕಾರ್ಯಪ್ರವೃತವಾಗಿ ಆಮ ಆದ್ಮೀ ಪಕ್ಷ ದೆಹಲಿಯ ಚುನಾವಣೆಗೆ ತಯಾರಿ ಮಾಡಿ ಕಳೆದು ಹೋದ ತನ್ನ ಕಳೆಯನ್ನು 8 ತಿಂಗಳ ಅವಧಿಯೊಳಗೆ ಇನ್ನೂ ಹೆಚ್ಚು ಕಳೆಯೊಂದಿಗೆ ಪುನರ್ ಸ್ಥಾಪಿಸಿಕೊಂಡಿರುವುದು. ಇದರ ಪರಿಣಾಮವೇ ಇಂದು 70 ಕ್ಷೇತ್ರದಲ್ಲಿ  ಆಮ ಆದ್ಮೀ ಪಕ್ಷ ಸಿಂಹಪಾಲನ್ನು ಗೆದ್ದು ಇತಿಹಾಸ ಬರೆದಿರುವುದು.
ಆಮ ಆದ್ಮೀ ಪಕ್ಷಕೆ ಕೊನೆಯ ಗಳಿಗೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ನೇರವಾಗಿ ಎದುರಿಸಲಾಗದೇ ಇಲ್ಲ ಸಲ್ಲದ ಆಪಾದನೇ ಮಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಲು ಪ್ರಯತಿಸಿತು. ಬಿಜೆಪಿಯ 120 ಎಂಪಿಗಳು ಬಿಜೆಪಿಯ ಗೆಲುವಿಗೆ ಕೊನೆ ಗಳಿಗೆಯಲ್ಲಿ ಎಲ್ಲಾ ರೀತಿಯಿಂದಲ್ಲೂ ಪ್ರಯತ್ನ ಪಟ್ಟರು. ಆದರೇ ದೆಹಲಿಯ ಜನತೆ ಎಲ್ಲವನ್ನು ಅರ್ಥಮಾಡಿಕೊಂಡು ಯಾವ ಆಪಾದನೆಗೂ ಬೆಲೆ ನೀಡದೆ ಆಮ ಆದ್ಮೀ ಪಕ್ಷಕೆ ಪ್ರಚಂಡ ಬಹುಮತ ನೀಡಿರುವುದು. ಆಮ ಆದ್ಮೀ ಪಕ್ಷದ ಬಗ್ಗೆ ಬೇರೆ ಪಕ್ಷಗಳು ಮಾಡಿದ ಅಪಪ್ರಚಾರ ಎಲ್ಲವು ಆಮ ಆದ್ಮೀಗೆ ಪಕ್ಷಕೆ ವರವಾಗಿ ಪರಿಣಮಿಸಿತು. ಕಾರಣ ಪಕ್ಷದ ಪಾರದರ್ಶಕತೆ ಬಗ್ಗೆ ಯಾವುದೇ ಅನುಮಾನ ಇರಲಿಲ್ಲ. ಎಲ್ಲ ಪರಿಣಾಮವಾಗಿ ದೇಶದ ರಾಜಧಾನಿಯಲ್ಲಾದ ರೀತಿಯ ರಾಜಕೀಯ ಫಲಿತಾಂಶ ಉಳಿದ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಗಂಟೆಯಾಗಿರುವುದು
ದೇಶದ ರಾಜಧಾನಿಯಲ್ಲಿ ಆಮ ಆದ್ಮೀಯ ಪ್ರಚಂಡ ವಿಜಯ ದೇಶದ ಮುಂಬರುವ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ತರುವುದರಲ್ಲಿ ಯಾವುದೇ ಸಂಶಯ ಇಲ್ಲ.
ಎಲ್ಲಾ ರಾಜಕೀಯ ಪಕ್ಷಗಳು ಸಹಾ ತಮ್ಮ ಪಕ್ಷದ ನೀತಿಗಳ ಬಗ್ಗೆ ಅವಲೋಕನ ಮಾಡಿಕೊಳ್ಳುತ್ತಾ  ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ.
                ರಾಜಕೀಯ ಪಾಟರ್ಿಗಳ ದೇಣಿಗೆಯ ಬಗ್ಗೆ ಆಮ ಆದ್ಮೀ ಪಾಟಿ೯ಯ ತರಹ ಪಾರದರ್ಶಕತೆ ಇರುವುದು ಅಗತ್ಯವಿದೆ.
                ಬಿಜೆಪಿ ತನ್ನ ಸಹಚರ ಸಂಸ್ಥೆಗಳು ನಡೆಸುತ್ತಿರುವ ಘರ ವಾಪಸ್ಸಿಯಂತಹ ಚಟುವಟಿಕೆಯನ್ನು ತಕ್ಷಣ ನಿಲ್ಲಿಸಬೇಕಾಗಿದೆ.
                ಕಾಂಗ್ರೆಸ್ಸ ಪಕ್ಷ ತನ್ನ ಸೋಲನ್ನು ಒಪ್ಪಿಕೊಂಡು, ಆಗಿರುವ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು. ಭೃಷ್ಟಾಚಾರವನ್ನು ತೆಗೆದು ಹಾಕುವ ಹಿನ್ನಲೆಯಲ್ಲಿ  ಪಾಟಿ೯ಯಲ್ಲಿಯೇ ಅಮೂಲಾಗ್ರ ಬದಲಾವಣೆ ತರಲು ಪ್ರಾರಂಭಿಸಬೇಕು.
                ಸಮಾಜವಾದಿ ಪಕ್ಷ, ಬಹುಜನ, ಜನತಾದಳದ ಪರಿವಾರಗಳು ಎಲ್ಲಾ ಪಾಟಿ೯ಗಳು ತಮ್ಮ ತಮ್ಮ ಪಕ್ಷವನ್ನು ಶುಚಿಗೊಳಿಸುವ ಕಾರ್ಯವನ್ನು ಪ್ರಾರಂಭಿಸಬೇಕು. ಮೊದಲು ಪಕ್ಷದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಆಮ ಆದ್ಮೀ ಪಕ್ಷ ಅನುಸರಿಸುತ್ತಿರುವಂತಹ ನಿಯಮವನ್ನು ರೂಢಿಸಿಕೊಳ್ಳಬೇಕು.
                ಎಲ್ಲಾ ಪಕ್ಷಗಳು ವಿಷಯಾಧಾರಿತವಾಗಿ ರಾಜಕೀಯ ಮಾಡಬೇಕು ವಿನಹ ಜಾತಿ/ ಧರ್ಮ ರಾಜಕೀಯವನ್ನಲ್ಲ.
                ಜನಸಾಮಾನ್ಯರನ್ನು, ರೈತರನ್ನು ಕಡೆಗಣಿಸಿ ಮುಖ್ಯವಾಗಿ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವಂತಹ ರೀತಿ ಕಾರ್ಯನಿರ್ವಹಿಸುವ ದೃಷ್ಠಿಯನ್ನು ಬಿಜೆಪಿ ಮುಖ್ಯವಾಗಿ ಬದಲಾಯಿಸಿಕೊಳ್ಳುವ ಅಗತ್ಯವಿದೆ.
                ಜನಸಾಮಾನ್ಯರ ಮೂಲಭೂತ ಅಗತ್ಯಗಳಾದ ಶುದ್ದ ಕುಡಿಯುವ ನೀರು, ವಸತಿ, ಉತ್ತಮ ಶಿಕ್ಷಣ, ಉತ್ತಮ ಆರೋಗ್ಯದ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ದೃಷ್ಠಿ ಏನು ಎಂಬುದನ್ನು ಪುನ: ವಿಮಶಿ೯ಸಿ ಪಸ್ಥುತಪಡಿಸಬೇಕಾದ ಅಗತ್ಯತೆ ಇರುವುದು.
                ಕೊಲೆಗಡುಕರು, ಭೃಷ್ಠಾಚಾರಿಗಳು, ಕಪಟಿಗಳು, ಮೋಸಗಾರರು ಬಹುತೇಕ ಎಲ್ಲಾ ಪಕ್ಷಗಳಲ್ಲಿಯೂ ಇರುವರು ಇಂತವರನ್ನು ಹೊರಗೆ ಕಳುಹಿಸುವ ಕಾರ್ಯವನ್ನು ಎಲ್ಲಾ ಪಾಟಿ೯ಗಳು ತಕ್ಷಣ ಪ್ರಾರಂಭಿಸಬೇಕಾಗಿದೆ.
ಒಟ್ಟಾರೆ ಶುದ್ದ, ಪಾರದರ್ಶಕ ಆಡಳಿತದ ಭರವಸೆಗೆ ದೆಹಲಿಯಲ್ಲಿ ಸಿಕ್ಕ ಜಯ ನಿಜವಾಗಿಯೂ ಆಮ ಆದ್ಮೀಯದೇ ಜಯವಾಗಿರುವುದು. ಆಯ್ಕೆಯಾದ ಎಲ್ಲಾ ಜನಪ್ರತಿನಿಧಿಗಳು ವಾಸ್ತವದಲ್ಲಿ  ಜನರ ಪ್ರತಿನಿಧಿಯಾಗಿ ತಾವು ನೀಡಿದ ಆಶ್ವಾಸನೆಯಂತೆ ಕಾರ್ಯನಿಹಿಸಿ ದೇಶದಲ್ಲಿ ರಾಜಕೀಯದ ಚಿತ್ರಣ ಬದಲಾಗುವಂತೆ ಮಾಡುವ ಮಹತ್ವದ ಜವಬ್ದಾರಿ ಇಂದು ಅರವಿಂದ ಕ್ರೇಜಿವಾಲ್ ಮತ್ತು ಆಮ ಆದ್ಮೀ ಪಕ್ಷದ ಮುಂದಿದೆ.
ಚುನಾವಣೆ ಕೇವಲ ದೇಹಲಿಗೆ ಮಾತ್ರ ಸೀಮಿತ ಎಂದು ಅಸಡ್ಡೆ ತೋರದೆ ಎಲ್ಲಾ ರಾಜಕೀಯ ಪಕ್ಷಗಳು  ಗಂಭೀರವಾಗಿ ಚಿಂತಿಸಲು ಇದು ಸಕಾಲವಾಗಿದೆ.
ಕೊನೆಯದಾಗಿ ಪ್ರಾಮಾಣಿಕರು ರಾಜಕೀಯ ಕ್ಷೇತ್ರಕ್ಕೆ ಬರುವ ಭರವಸೆ ಮೂಡಿಸಿದ ದೆಹಲಿ ಜನತಗೆ ಮತ್ತು ಆಮ ಆದ್ಮೀ ಪಕ್ಷಕ್ಕೆ ತುಂಬು ಹೃದಯದ ಧನ್ಯವಾದಗಳು...

ವಿವೇಕ ಬೆಟ್ಕುಳಿ