ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
Showing posts with label ಚೇತನ್ ಸೊಲಗಿ. Show all posts
Showing posts with label ಚೇತನ್ ಸೊಲಗಿ. Show all posts
Monday, February 10, 2014
Sunday, December 29, 2013
ತಾಳ ತಪ್ಪಿದ ನನ್ನೆದೆಯ ಘಜಲ್...!
ತಾಳ ತಪ್ಪಿದ
ನನ್ನೆದೆಯ ಘಜಲ್...!
ನನ್ನೆದೆಯ ಘಜಲ್
ಒಂದು ಅರ್ಥವಿರುತಿತ್ತು
ಅವಳ ಅಂದದ ಗೆಜ್ಜೆಗಳು
ಮೈದುಂಬಿ ಚೆಂದದಿ ಕುಣಿದಿದ್ದರೆ ಮಾತ್ರ
ಆದರೆ,
ಬರೆದಿಟ್ಟ ಸಾವಿರ ಸಾಲುಗಳಿಗೆ
ಸಾಹುಕಾರಳಾಗಲೊಲ್ಲದೆ
ಎಸಳಾಗಿ ನೆಲೆ ನಿಂತ
ಹುಸಿ-ಹಸಿರ ಮೇಲಿನ ಮಂಜಿನಂತೆ
ಪದೇ-ಪದೇ ಕರಗಿ ನೀರಾಗುತ್ತಾಳವಳು!
ನೀರಾಗಿ ಹರಿವ ಮಂಜಿನ ಸೋನೆ
ನಯನದೂರ ಕನಸುಗಳಿಗೆ ಸೋಂಕು ತಗುಲಿಸಿ
ಕೋಥ ಹೊಡೆಯುತ್ತದೆ!
ಕ್ಷಿತಿಜದೆಡೆಗೆ ತಲುಪಿ
ಮುಗಿಲಿಗೆ ಮುತ್ತಿಕ್ಕ ಬಯಸುವ
ದಿಗಂತ ಕನಸುಗಳು
ಅವಳಿರದ ನೋವು ಕಂಡು
ಕ್ಷಾಮಕ್ಕೊಳಗಾದ ಎದೆಗೆ
ನೋವಿನ ನಿದ್ದೆಯ ಹಾದಿ ತೋರಿಸುತ್ತವೆ.
ಭಾವಗಳ ಬೆಸುಗೆಯಲಿ ಹಾಡಾಗಬೇಕಿದ್ದ
ನನ್ನೆದೆಯ ಘಜಲ್ ತಾಳತಪ್ಪಿ
ಅರ್ಥವಿಲ್ಲದ ಬರಿಯ ಖಂಡ ಕಾವ್ಯವಾಗುತ್ತದೆ
-ಚೇತನ್ ಸೊಲಗಿ, ಮುಂಡರಗಿ
ನನ್ನೆದೆಯ ಘಜಲ್...!
ನನ್ನೆದೆಯ ಘಜಲ್
ಒಂದು ಅರ್ಥವಿರುತಿತ್ತು
ಅವಳ ಅಂದದ ಗೆಜ್ಜೆಗಳು
ಮೈದುಂಬಿ ಚೆಂದದಿ ಕುಣಿದಿದ್ದರೆ ಮಾತ್ರ
ಆದರೆ,
ಬರೆದಿಟ್ಟ ಸಾವಿರ ಸಾಲುಗಳಿಗೆ
ಸಾಹುಕಾರಳಾಗಲೊಲ್ಲದೆ
ಎಸಳಾಗಿ ನೆಲೆ ನಿಂತ
ಹುಸಿ-ಹಸಿರ ಮೇಲಿನ ಮಂಜಿನಂತೆ
ಪದೇ-ಪದೇ ಕರಗಿ ನೀರಾಗುತ್ತಾಳವಳು!
ನೀರಾಗಿ ಹರಿವ ಮಂಜಿನ ಸೋನೆ
ನಯನದೂರ ಕನಸುಗಳಿಗೆ ಸೋಂಕು ತಗುಲಿಸಿ
ಕೋಥ ಹೊಡೆಯುತ್ತದೆ!
ಕ್ಷಿತಿಜದೆಡೆಗೆ ತಲುಪಿ
ಮುಗಿಲಿಗೆ ಮುತ್ತಿಕ್ಕ ಬಯಸುವ
ದಿಗಂತ ಕನಸುಗಳು
ಅವಳಿರದ ನೋವು ಕಂಡು
ಕ್ಷಾಮಕ್ಕೊಳಗಾದ ಎದೆಗೆ
ನೋವಿನ ನಿದ್ದೆಯ ಹಾದಿ ತೋರಿಸುತ್ತವೆ.
ಭಾವಗಳ ಬೆಸುಗೆಯಲಿ ಹಾಡಾಗಬೇಕಿದ್ದ ನನ್ನೆದೆಯ ಘಜಲ್ ತಾಳತಪ್ಪಿ
ಅರ್ಥವಿಲ್ಲದ ಬರಿಯ ಖಂಡ ಕಾವ್ಯವಾಗುತ್ತದೆ
-ಚೇತನ್ ಸೊಲಗಿ, ಮುಂಡರಗಿ
Friday, November 22, 2013
ಪಾರಿಜಾತದ ಹುಡುಕಾಟಕ್ಕೆ - ಚೇತನ್ ಸೊಲಗಿ
ಪಾರಿಜಾತದ ಹುಡುಕಾಟಕ್ಕೆ
ಹುಚ್ಚಿನ ಕುರುಹು ಹೆಚ್ಚಾಗಿದೆ
ಹೆಚ್ಚೇನು ಹೇಳಲಾರೆ
ಪಾರಿಜಾತದ ಹುಡುಕಾಟಕ್ಕೆ
ಪರದಾಟ ನಡೆಸುತಿದ್ದವನಿಗೆ
ಪೂರ್ಣಿಮೆಯಂತವಳ ಕರುಣಿಸಿದ
ಆತ......!
ಮತ್ತೆ ಪರದಾಟಕ್ಕೆ ಹಚ್ಚಿದ್ದಾನೆ
ಇರುಹು ಕುರುಹುಗಳ
ಆಟದಲ್ಲಿ, ಅವಳ ಸೂಕ್ಷ್ಮ ಸಂವೇದನೆಗಾಗಿ ....
ಹೆಗಲ ಮೇಲಿನ ಕೂಸೂ ನಾಚುವುದೇನೊ
ಆ ನಿನ್ನ ಮುಗ್ದ ನಗುವಿಗೆ
ಹೇಳಲಾಗದ ಕಠೋರ ಸತ್ಯವೊಂದನ್ನ
ಒಳಗೇ ಅದುಮಿಟ್ಟುಕೊಂಡಿದ್ದೇನೆ
ಆ ನಗು ನನ್ನೊಂದಿಗೆ ಸದಾ
ಇರಲೆಂದು...!
ಸುಂದರ ಸಾಮ್ರಾಜ್ಯದ ರಾಜನಾಗಬೇಕೆಂಬ
ಹಂಬಲತೆಯ ಹುಡುಗ ನಾನು
ರಾಣಿಗೋಸ್ಕರ
ರಾಣಿಯ ಸಾರಥಿಯಾಗಲೂ
ಸನ್ನದ್ಧನಾಗಿರುವೆ ನಾ
ನೀನೊಮ್ಮೆ ನನ್ಮನದ ಅರಸಿಯಾಗಬಲ್ಲೆಯಾದರೆ
ಹುಚ್ಚನಂತಾಗಿದ್ದೇನೆ
ಹೆಚ್ಚೇನು ಹೇಳಲಿ ಹೇಳು
ಹಂಬಲವಂತು ಮಿತಿ ಮೀರಿದೆ
ಕಂಗಳಂತು ನಿನ ಬಿಂಬಕೆ
ಶರಣಾಗಿ ನಿಂತಿವೆ
ಕಣ್ತೆರೆದರೂ ನಿದಿರೆಗೆ ಜಾರಿದರೂ
ನನ್ಮನವದಂತೂ ಸುಂದರದೊಂದು
ಸಾಮ್ರಾಜ್ಯ ನಿರ್ಮಿಸಿ
ನಿನ್ನನೇ ರಾಣಿಯಾಗಿ ಕೂರಿಸಿಬಿಡುತ್ತದೆ.
ಏ ಚೆಲುವಿ
ಬೆಳದಿಂಗಳ ಚಂದಿರನ
ನಾ ನೋಡುದ ಮರತೀನ
ನಿನ್ ಕಂಡಾಗಿಂದ
ತೋಟದಾಗಿನ ಗುಲಾಬಿ
ಹೂನತ್ತ ನಾನೀಗ
ನೋಡಂಗೆ ಇಲ್ಲ
ಕೆಂಗುಲಾಬಿ ಹಂಗ ನೀನಿರಬೇಕಾದ್ರ
ಅದೆಂತಾ ನಗುನ ನಿಂದ
ಹಾ... ಹಾ... ನನ್ನನ್ನ ನೀನಾಗಿಸಬಿಟ್ಟತಲ್ಲ
ಮುಗುಳ್ನಗು ನಗುದುನ್ನ
ನಿನ್ನ ನೋಡೆ ಕಲಿಬೇಕು
ಚಂದ್ರನ ತಂಗಿ ನೀನ ಇರಬೋದೆನೋ....
ಮಬ್ಬಹಿಡಿದ ಹೊತ್ತಿನಂಗಾಗಿನಿ
ಮಾಸೇ ಹೋಗಿನೇನೋ
ತಾಳೆನೇ ಬೆಡಗಿ
ನನ್ ಮನದಾಗ ರುಜು ಮಾಡಿದ ನೀನು
ರಜಾ ಹಾಕಿ ದೂರ ನಿಂತ್ರ!
-ಚೇತನ್ ಸೊಲಗಿ, ಮುಂಡರಗಿ
ಹುಚ್ಚಿನ ಕುರುಹು ಹೆಚ್ಚಾಗಿದೆ
ಹೆಚ್ಚೇನು ಹೇಳಲಾರೆ
ಪಾರಿಜಾತದ ಹುಡುಕಾಟಕ್ಕೆ
ಪರದಾಟ ನಡೆಸುತಿದ್ದವನಿಗೆ
ಪೂರ್ಣಿಮೆಯಂತವಳ ಕರುಣಿಸಿದ
ಆತ......!
ಮತ್ತೆ ಪರದಾಟಕ್ಕೆ ಹಚ್ಚಿದ್ದಾನೆ
ಇರುಹು ಕುರುಹುಗಳ
ಆಟದಲ್ಲಿ, ಅವಳ ಸೂಕ್ಷ್ಮ ಸಂವೇದನೆಗಾಗಿ ....
ಹೆಗಲ ಮೇಲಿನ ಕೂಸೂ ನಾಚುವುದೇನೊ
ಆ ನಿನ್ನ ಮುಗ್ದ ನಗುವಿಗೆ
ಹೇಳಲಾಗದ ಕಠೋರ ಸತ್ಯವೊಂದನ್ನ
ಒಳಗೇ ಅದುಮಿಟ್ಟುಕೊಂಡಿದ್ದೇನೆ
ಆ ನಗು ನನ್ನೊಂದಿಗೆ ಸದಾ
ಇರಲೆಂದು...!
ಸುಂದರ ಸಾಮ್ರಾಜ್ಯದ ರಾಜನಾಗಬೇಕೆಂಬ
ಹಂಬಲತೆಯ ಹುಡುಗ ನಾನು
ರಾಣಿಗೋಸ್ಕರ
ರಾಣಿಯ ಸಾರಥಿಯಾಗಲೂ
ಸನ್ನದ್ಧನಾಗಿರುವೆ ನಾ
ನೀನೊಮ್ಮೆ ನನ್ಮನದ ಅರಸಿಯಾಗಬಲ್ಲೆಯಾದರೆ
ಹುಚ್ಚನಂತಾಗಿದ್ದೇನೆ
ಹೆಚ್ಚೇನು ಹೇಳಲಿ ಹೇಳು
ಹಂಬಲವಂತು ಮಿತಿ ಮೀರಿದೆ
ಕಂಗಳಂತು ನಿನ ಬಿಂಬಕೆ
ಶರಣಾಗಿ ನಿಂತಿವೆ
ಕಣ್ತೆರೆದರೂ ನಿದಿರೆಗೆ ಜಾರಿದರೂ
ನನ್ಮನವದಂತೂ ಸುಂದರದೊಂದು
ಸಾಮ್ರಾಜ್ಯ ನಿರ್ಮಿಸಿ
ನಿನ್ನನೇ ರಾಣಿಯಾಗಿ ಕೂರಿಸಿಬಿಡುತ್ತದೆ.
ಏ ಚೆಲುವಿ
ಬೆಳದಿಂಗಳ ಚಂದಿರನ
ನಾ ನೋಡುದ ಮರತೀನ
ನಿನ್ ಕಂಡಾಗಿಂದ
ತೋಟದಾಗಿನ ಗುಲಾಬಿ
ಹೂನತ್ತ ನಾನೀಗ
| ಚೇತನ್ ಸೊಲಗಿ |
ಕೆಂಗುಲಾಬಿ ಹಂಗ ನೀನಿರಬೇಕಾದ್ರ
ಅದೆಂತಾ ನಗುನ ನಿಂದ
ಹಾ... ಹಾ... ನನ್ನನ್ನ ನೀನಾಗಿಸಬಿಟ್ಟತಲ್ಲ
ಮುಗುಳ್ನಗು ನಗುದುನ್ನ
ನಿನ್ನ ನೋಡೆ ಕಲಿಬೇಕು
ಚಂದ್ರನ ತಂಗಿ ನೀನ ಇರಬೋದೆನೋ....
ಮಬ್ಬಹಿಡಿದ ಹೊತ್ತಿನಂಗಾಗಿನಿ
ಮಾಸೇ ಹೋಗಿನೇನೋ
ತಾಳೆನೇ ಬೆಡಗಿ
ನನ್ ಮನದಾಗ ರುಜು ಮಾಡಿದ ನೀನು
ರಜಾ ಹಾಕಿ ದೂರ ನಿಂತ್ರ!
-ಚೇತನ್ ಸೊಲಗಿ, ಮುಂಡರಗಿ
ಕಾವ್ಯ-ಚಂದ್ರ…. - ಚೇತನ್ ಸೊಲಗಿ ,
ನಾ ನಿನ್ನ ಕಣ್ಣುಗಳ ಬಿಂಬವಾದೆ
ನೀ ಕಂಡ ಗಳಿಗೆಯಿಂದ
ಮನದ ರೂಪಸಿಯೇ ಚೆಲುವ ಧಾತ್ರಿಯೇ
ಬಾರೆ ನನ್ನ ಚೆಲುವೆ
ನಿನ್ ಕಣ್ಣ ನೋಟಲಿ ಪೂರ್ಣ ಚಂದಿರನೆ
ಕಸದ ಕಣಿವೆಯಾದ
ಚಿವುಟದಿರು ನೀನು ಮನದ ಪ್ರೀತಿ
ನೀ ಬಾರೆ ಮನದ ಒಡತಿ
ಶೃಂಗಾರ ಕಾವ್ಯವದು ನನ್ನಲಿಹುದು
ಸಿರಿವಂತ ನಾನು ಅಲ್ಲ
ಸಿರಿತನಕ್ಕಿಲ್ಲ – ಬಡತನಕ್ಕಿಲ್ಲ
ಪ್ರೇಮ – ಕಾವ್ಯ ಚಂದ್ರ
ನಗುಮೊಗದ ಚೆಲುವೆ ನೀ ಬಾರೆ ನೀರೆ
ಮನದೇಕ ಒಡತಿಯಾಗಿ
ತೋರುವೆನು ಅದನೆ ನೀಡುವೆನು ಅದನೆ
ಪ್ರೇಮ ಚರಿತೆ ಕಾವ್ಯ.
ಸ್ವಪ್ನಕ್ಕೆಲ್ಲಿಹುದು ಸೃಜನಸಾರ
ನಿನ್ನೊಲವೆ ಮಿಗಿಲು ಎನಗೆ
ನನ್ನೆದೆಯ ಧಿಮಿತಿಗಳ
ಕೂಡಿ ಹಾಡಿ ಕಟ್ಟೋಣ ಪ್ರೇಮದೂರು
ಪ್ರೇಮಕ್ಕೆಲ್ಲಿಹುದು ಮೇಲುಕೀಳು
ಜಗದೇಕ ರೂಪವದುವೇ
ಜಗದ ಬಾಗಿಲಾ ಜಗಲಿಯಲ್ಲಿಯೂ
ನಾ ನೆನೆವೆ ನಿನ್ನ ಮನವ.
- ಚೇತನ್ ಸೊಲಗಿ ,
ನೀ ಕಂಡ ಗಳಿಗೆಯಿಂದ
ಮನದ ರೂಪಸಿಯೇ ಚೆಲುವ ಧಾತ್ರಿಯೇ
ಬಾರೆ ನನ್ನ ಚೆಲುವೆ
ನಿನ್ ಕಣ್ಣ ನೋಟಲಿ ಪೂರ್ಣ ಚಂದಿರನೆ
ಕಸದ ಕಣಿವೆಯಾದ
ಚಿವುಟದಿರು ನೀನು ಮನದ ಪ್ರೀತಿ
ನೀ ಬಾರೆ ಮನದ ಒಡತಿ
![]() |
| ಚೇತನ್ ಸೊಲಗಿ |
ಸಿರಿವಂತ ನಾನು ಅಲ್ಲ
ಸಿರಿತನಕ್ಕಿಲ್ಲ – ಬಡತನಕ್ಕಿಲ್ಲ
ಪ್ರೇಮ – ಕಾವ್ಯ ಚಂದ್ರ
ನಗುಮೊಗದ ಚೆಲುವೆ ನೀ ಬಾರೆ ನೀರೆ
ಮನದೇಕ ಒಡತಿಯಾಗಿ
ತೋರುವೆನು ಅದನೆ ನೀಡುವೆನು ಅದನೆ
ಪ್ರೇಮ ಚರಿತೆ ಕಾವ್ಯ.
ಸ್ವಪ್ನಕ್ಕೆಲ್ಲಿಹುದು ಸೃಜನಸಾರ
ನಿನ್ನೊಲವೆ ಮಿಗಿಲು ಎನಗೆ
ನನ್ನೆದೆಯ ಧಿಮಿತಿಗಳ
ಕೂಡಿ ಹಾಡಿ ಕಟ್ಟೋಣ ಪ್ರೇಮದೂರು
ಪ್ರೇಮಕ್ಕೆಲ್ಲಿಹುದು ಮೇಲುಕೀಳು
ಜಗದೇಕ ರೂಪವದುವೇ
ಜಗದ ಬಾಗಿಲಾ ಜಗಲಿಯಲ್ಲಿಯೂ
ನಾ ನೆನೆವೆ ನಿನ್ನ ಮನವ.
- ಚೇತನ್ ಸೊಲಗಿ ,
Subscribe to:
Posts (Atom)
ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ
ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್...
-
ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು ಸ್ವಾಮೀ ನನ್ನಯ್ಯ ರಥವೇರಿ ಬರುವಾಗ ನಾವೆದ್ದು ಕೈಯ್ಯ ಮುಗುದೇವು ಮಕ್ಕಳಾಟವು ಚಂದ ಮತ್ತೆ ಯೌವನ ಚಂದ ಮುಪ್ಪಿನಲಿ ಚಂದ ನರೆಗಡ...
-
Krupe : http://azsmarane.blogspot.in/2012/01/blog-post_21.html ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾ...

