Showing posts with label ಚೇತನ್ ಸೊಲಗಿ. Show all posts
Showing posts with label ಚೇತನ್ ಸೊಲಗಿ. Show all posts

Monday, February 10, 2014

‘ಸಾಫ್ಟ್ ಜಗತ್ತಿನಲ್ಲಿ’ - ಕವನ ಸಂಕಲನ




ನನ್ನ ಗೆಳೆಯ ಚೇತನ ಸೊಲಗಿ ಅವರ ಮೊದಲ ಕವನ ಸಂಕಲನ ‘ಸಾಫ್ಟ್ ಜಗತ್ತಿನಲ್ಲಿ’ 

Sunday, December 29, 2013

ತಾಳ ತಪ್ಪಿದ ನನ್ನೆದೆಯ ಘಜಲ್...!

ತಾಳ ತಪ್ಪಿದ
ನನ್ನೆದೆಯ ಘಜಲ್...!

ನನ್ನೆದೆಯ ಘಜಲ್
ಒಂದು ಅರ್ಥವಿರುತಿತ್ತು
ಅವಳ ಅಂದದ ಗೆಜ್ಜೆಗಳು
ಮೈದುಂಬಿ ಚೆಂದದಿ ಕುಣಿದಿದ್ದರೆ ಮಾತ್ರ

ಆದರೆ,
ಬರೆದಿಟ್ಟ ಸಾವಿರ ಸಾಲುಗಳಿಗೆ
ಸಾಹುಕಾರಳಾಗಲೊಲ್ಲದೆ
ಎಸಳಾಗಿ ನೆಲೆ ನಿಂತ
ಹುಸಿ-ಹಸಿರ ಮೇಲಿನ ಮಂಜಿನಂತೆ
ಪದೇ-ಪದೇ ಕರಗಿ ನೀರಾಗುತ್ತಾಳವಳು!

ನೀರಾಗಿ ಹರಿವ ಮಂಜಿನ ಸೋನೆ
ನಯನದೂರ ಕನಸುಗಳಿಗೆ ಸೋಂಕು ತಗುಲಿಸಿ
ಕೋಥ ಹೊಡೆಯುತ್ತದೆ!

ಕ್ಷಿತಿಜದೆಡೆಗೆ ತಲುಪಿ
ಮುಗಿಲಿಗೆ ಮುತ್ತಿಕ್ಕ ಬಯಸುವ
ದಿಗಂತ ಕನಸುಗಳು
ಅವಳಿರದ ನೋವು ಕಂಡು
ಕ್ಷಾಮಕ್ಕೊಳಗಾದ ಎದೆಗೆ
ನೋವಿನ ನಿದ್ದೆಯ ಹಾದಿ ತೋರಿಸುತ್ತವೆ.

ಭಾವಗಳ ಬೆಸುಗೆಯಲಿ ಹಾಡಾಗಬೇಕಿದ್ದ  
ನನ್ನೆದೆಯ ಘಜಲ್ ತಾಳತಪ್ಪಿ
ಅರ್ಥವಿಲ್ಲದ ಬರಿಯ ಖಂಡ ಕಾವ್ಯವಾಗುತ್ತದೆ

-ಚೇತನ್ ಸೊಲಗಿ, ಮುಂಡರಗಿ

Friday, November 22, 2013

ಪಾರಿಜಾತದ ಹುಡುಕಾಟಕ್ಕೆ - ಚೇತನ್ ಸೊಲಗಿ

ಪಾರಿಜಾತದ ಹುಡುಕಾಟಕ್ಕೆ

ಹುಚ್ಚಿನ ಕುರುಹು ಹೆಚ್ಚಾಗಿದೆ
ಹೆಚ್ಚೇನು ಹೇಳಲಾರೆ
ಪಾರಿಜಾತದ ಹುಡುಕಾಟಕ್ಕೆ
ಪರದಾಟ ನಡೆಸುತಿದ್ದವನಿಗೆ
ಪೂರ್ಣಿಮೆಯಂತವಳ ಕರುಣಿಸಿದ
ಆತ......!
ಮತ್ತೆ ಪರದಾಟಕ್ಕೆ ಹಚ್ಚಿದ್ದಾನೆ
ಇರುಹು ಕುರುಹುಗಳ
ಆಟದಲ್ಲಿ, ಅವಳ ಸೂಕ್ಷ್ಮ ಸಂವೇದನೆಗಾಗಿ ....

ಹೆಗಲ ಮೇಲಿನ ಕೂಸೂ ನಾಚುವುದೇನೊ
ಆ ನಿನ್ನ ಮುಗ್ದ ನಗುವಿಗೆ
ಹೇಳಲಾಗದ ಕಠೋರ ಸತ್ಯವೊಂದನ್ನ
ಒಳಗೇ ಅದುಮಿಟ್ಟುಕೊಂಡಿದ್ದೇನೆ
ಆ ನಗು ನನ್ನೊಂದಿಗೆ ಸದಾ
ಇರಲೆಂದು...!

ಸುಂದರ ಸಾಮ್ರಾಜ್ಯದ ರಾಜನಾಗಬೇಕೆಂಬ
ಹಂಬಲತೆಯ ಹುಡುಗ ನಾನು
ರಾಣಿಗೋಸ್ಕರ
ರಾಣಿಯ ಸಾರಥಿಯಾಗಲೂ
ಸನ್ನದ್ಧನಾಗಿರುವೆ ನಾ
ನೀನೊಮ್ಮೆ ನನ್ಮನದ ಅರಸಿಯಾಗಬಲ್ಲೆಯಾದರೆ

ಹುಚ್ಚನಂತಾಗಿದ್ದೇನೆ
ಹೆಚ್ಚೇನು ಹೇಳಲಿ ಹೇಳು
ಹಂಬಲವಂತು ಮಿತಿ ಮೀರಿದೆ
ಕಂಗಳಂತು ನಿನ ಬಿಂಬಕೆ
ಶರಣಾಗಿ ನಿಂತಿವೆ
ಕಣ್ತೆರೆದರೂ ನಿದಿರೆಗೆ ಜಾರಿದರೂ
ನನ್ಮನವದಂತೂ ಸುಂದರದೊಂದು
ಸಾಮ್ರಾಜ್ಯ ನಿರ್ಮಿಸಿ
ನಿನ್ನನೇ ರಾಣಿಯಾಗಿ ಕೂರಿಸಿಬಿಡುತ್ತದೆ.


ಏ ಚೆಲುವಿ
ಬೆಳದಿಂಗಳ ಚಂದಿರನ
ನಾ ನೋಡುದ ಮರತೀನ
ನಿನ್ ಕಂಡಾಗಿಂದ

ತೋಟದಾಗಿನ ಗುಲಾಬಿ
ಹೂನತ್ತ ನಾನೀಗ
ಚೇತನ್ ಸೊಲಗಿ
ನೋಡಂಗೆ ಇಲ್ಲ
ಕೆಂಗುಲಾಬಿ ಹಂಗ ನೀನಿರಬೇಕಾದ್ರ

ಅದೆಂತಾ ನಗುನ ನಿಂದ
ಹಾ... ಹಾ... ನನ್ನನ್ನ ನೀನಾಗಿಸಬಿಟ್ಟತಲ್ಲ
ಮುಗುಳ್ನಗು ನಗುದುನ್ನ
ನಿನ್ನ ನೋಡೆ ಕಲಿಬೇಕು
ಚಂದ್ರನ ತಂಗಿ ನೀನ ಇರಬೋದೆನೋ....

ಮಬ್ಬಹಿಡಿದ ಹೊತ್ತಿನಂಗಾಗಿನಿ
ಮಾಸೇ ಹೋಗಿನೇನೋ
ತಾಳೆನೇ ಬೆಡಗಿ
ನನ್ ಮನದಾಗ ರುಜು ಮಾಡಿದ ನೀನು
ರಜಾ ಹಾಕಿ ದೂರ ನಿಂತ್ರ!

-ಚೇತನ್ ಸೊಲಗಿ, ಮುಂಡರಗಿ

ಕಾವ್ಯ-ಚಂದ್ರ…. - ಚೇತನ್ ಸೊಲಗಿ ,

ನಾ ನಿನ್ನ ಕಣ್ಣುಗಳ ಬಿಂಬವಾದೆ
ನೀ ಕಂಡ ಗಳಿಗೆಯಿಂದ
ಮನದ ರೂಪಸಿಯೇ ಚೆಲುವ ಧಾತ್ರಿಯೇ
ಬಾರೆ ನನ್ನ ಚೆಲುವೆ
ನಿನ್ ಕಣ್ಣ ನೋಟಲಿ ಪೂರ್ಣ ಚಂದಿರನೆ
ಕಸದ ಕಣಿವೆಯಾದ
ಚಿವುಟದಿರು ನೀನು ಮನದ ಪ್ರೀತಿ
ನೀ ಬಾರೆ ಮನದ ಒಡತಿ
 ಚೇತನ್ ಸೊಲಗಿ
ಶೃಂಗಾರ ಕಾವ್ಯವದು ನನ್ನಲಿಹುದು
ಸಿರಿವಂತ ನಾನು ಅಲ್ಲ
ಸಿರಿತನಕ್ಕಿಲ್ಲ – ಬಡತನಕ್ಕಿಲ್ಲ
ಪ್ರೇಮ – ಕಾವ್ಯ ಚಂದ್ರ
ನಗುಮೊಗದ ಚೆಲುವೆ ನೀ ಬಾರೆ ನೀರೆ
ಮನದೇಕ ಒಡತಿಯಾಗಿ
ತೋರುವೆನು ಅದನೆ ನೀಡುವೆನು ಅದನೆ
ಪ್ರೇಮ ಚರಿತೆ ಕಾವ್ಯ.
ಸ್ವಪ್ನಕ್ಕೆಲ್ಲಿಹುದು ಸೃಜನಸಾರ
ನಿನ್ನೊಲವೆ ಮಿಗಿಲು ಎನಗೆ
ನನ್ನೆದೆಯ ಧಿಮಿತಿಗಳ
ಕೂಡಿ ಹಾಡಿ ಕಟ್ಟೋಣ ಪ್ರೇಮದೂರು
ಪ್ರೇಮಕ್ಕೆಲ್ಲಿಹುದು ಮೇಲುಕೀಳು
ಜಗದೇಕ ರೂಪವದುವೇ
ಜಗದ ಬಾಗಿಲಾ ಜಗಲಿಯಲ್ಲಿಯೂ
ನಾ ನೆನೆವೆ ನಿನ್ನ ಮನವ.

-  ಚೇತನ್ ಸೊಲಗಿ ,

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...