ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, May 17, 2013

ಬಾಹ್ಯ ರೂಪ - ಗುರುರಾಜ ಕರ್ಜಗಿ,

1930-31ರಲ್ಲಿ ತಮಿಳುನಾಡಿನ ತಿರುಚ್ಚಿಯಲ್ಲಿ ಕನ್ನಡ ಸಂಘದವರು ಒಂದು ಕಾರ್ಯಕ್ರಮ ಆಯೋಜಿಸಿದ್ದರು. ಅದಕ್ಕೆ ಮುಖ್ಯ ಅತಿಥಿಯನ್ನಾಗಿ ಟಿ.ಪಿ. ಕೈಲಾಸಂರ ಅವರನ್ನು ಆಹ್ವಾನಿಸಿದ್ದರು. ಹಿಂದಿನ ರಾತ್ರಿ ಬೆಂಗಳೂರಿನಿಂದ ಹೊರಟು ಮರುದಿನ ಇನ್ನೂ ಬೆಳಗಾಗುವುದರೊಳಗೆ ರೈಲಿನಿಂದ ತಿರುಚ್ಚಿಯನ್ನು ತಲುಪಿದರು ಕೈಲಾಸಂ.
ಸಾಮಾನ್ಯವಾದ ದಿನದಲ್ಲೇ ತಮ್ಮ ವೇಷಭೂಷಣಗಳ ಬಗ್ಗೆ ಅಷ್ಟೊಂದು ಗಮನ ನೀಡದ ಕೈಲಾಸಂ, ರಾತ್ರಿ ಪ್ರವಾಸದಲ್ಲಿ ತಮಗೆ ಅನುಕೂಲವೆನಿಸಿದ ಬಟ್ಟೆ ಧರಿಸಿದ್ದರು. ಅವರು ರೈಲಿನಿಂದ ಇಳಿದಾಗ ಅವರ ವೇಷ ವಿಚಿತ್ರವಾಗಿತ್ತು. ಸ್ಯಾಂಡೋ ಬನಿಯನ್, ಕೊಳೆಯಾಗಿದ್ದ ಲುಂಗಿ, ಹೆಗಲಿಗೊಂದು ಕೈ ಚೀಲ.
ಕೆಳಗಿಳಿದು ಕತ್ತು ತಿರುಗಿಸಿ ಅತ್ತಿತ್ತ ನೋಡಿದರು. ಸಂಘಟಕರಾರಾದರೂ ಬಂದಿರಬಹುದೇ ಎಂದು ಹುಡುಕಾಡಿದರು. ಯಾರೂ ಕಾಣಲಿಲ್ಲ. ಮನದಲ್ಲೇ ಅವರನ್ನು ಶಪಿಸಿ ತಾವೇ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹೊರನಡೆದರು. ಆಗ ಯಾರೋ ಇವರ ಹೆಗಲ ಮೇಲೆ ಒಂದು ಕೋಲನ್ನು ಇಟ್ಟಂತಾಯಿತು. ತಿರುಗಿ ನೋಡಿದರೆ ಒಬ್ಬ ದೀರ್ಘದೇಹಿ ನಿಂತಿದ್ದಾರೆ.
ಘಿಗರಿಗರಿ ಮಲ್ ಪಂಚೆ, ಉದ್ದ ಕ್ಲೋಸ್ ಕಾಲರ್ ಉಲ್ಲನ್ ಕೋಟು, ತಲೆಗೆ ಜರೀಪೇಟ, ಕಣ್ಣಿಗೆ ಕಪ್ಪು ಕನ್ನಡಕ. ಒಟ್ಟಿನಲ್ಲಿ ಅತ್ಯಂತ ಶ್ರಿಮಂತರ ಠೀವಿ. ಕೈಯಲ್ಲಿಯ ಬೆತ್ತವನ್ನು ತೋರಿಸುತ್ತಾ ತಮಿಳಿನಲ್ಲಿ ಹೇಳಿದರು, `ಏ ಕೂಲಿ, ಬಾ ಇ್ಲ್ಲಲಿ', ನಂತರ ತಮ್ಮ ಹಾಸಿಗೆ ಸುರುಳಿ ಮತ್ತು ಸೂಟಕೇಸನ್ನು ತೋರುತ್ತ,  `ಇವೆರಡನ್ನೂ ಹೊರಗಡೆ ತೆಗೆದುಕೊಂಡು ಬಂದು ನಮ್ಮ ಕಾರಿನಲ್ಲಿ ಇಡಬೇಕು.ಎಷ್ಟು ಕೊಡಬೇಕು ಈಗಲೇ ಹೇಳು. ಹೊರಗೆ ಹೋಗಿ ತಗಾದೆ ಮಾಡಬೇಡ'  ಎಂದು ಗಡುಸಾಗಿ ಹೇಳಿದರು.
 ಗುರುರಾಜ ಕರ್ಜಗಿ
ಕೈಲಾಸಂ ನಗುತ್ತ,  `ಹಾಗೆ ಆಗಲಿ ಸ್ವಾಮಿ. ನಾನು ತಕರಾರು ಮಾಡುವವನೇ ಅಲ್ಲ. ಜನ ನನ್ನ ಸೇವೆಯಿಂದ ತೃಪ್ತಿ ಪಟ್ಟು ಎಷ್ಟು ಕೊಟ್ಟರೂ ನನಗೆ ಸರಿಯೇ. ನೀವೇ ಏನಾದರೂ ತಿಳಿದು ಕೊಡಿ'  ಎಂದು ಅವರು ಕೋಲಿನಿಂದ ತೋರಿಸಿದ ಟ್ರಂಕನ್ನು ಸಲೀಸಾಗಿ ಒಂದೇ ಝಟಕಿಗೆ ಎತ್ತಿ ತಲೆಯ ಮೇಲೆ ಇಟ್ಟುಕೊಂಡರು. ತಮ್ಮ ಚೀಲವನ್ನು ಸರಿಯಾಗಿ ಏರಿಸಿಕೊಂಡು, ಇನ್ನೊಂದು ಕೈಯಿಂದ ಹಾಸಿಗೆ ಸುರುಳಿಯನ್ನು ಎತ್ತಿ, ಮೊಳಕಾಲಿನ ಮೇಲೆ ಇರಿಸಿಕೊಂಡು ನಂತರ ಮತ್ತೊಮ್ಮೆ ಹ್ಞೂಂಕರಿಸಿ ಎತ್ತಿ ಬಗಲಿಗೆ ಸೇರಿಸಿ ಹಿಡಿದುಕೊಂಡರು. ಆಮೇಲೆ ಹಿಂತಿರುಗಿ ತಮ್ಮನ್ನು ಬೆರಗುಗಣ್ಣಿಂದ ನೋಡುತ್ತಿದ್ದ ಚೆಟ್ಟಿಯಾರರಿಗೆ,  `ಬನ್ನಿ ಸ್ವಾಮಿ, ಹೋಗೋಣ'  ಎಂದವರೇ ಸರಸರನೇ ನಡೆದುಬಿಟ್ಟರು.
ಇವರನ್ನು ಹಿಂಬಾಲಿಸಿ ಓಡುವುದು ಚೆಟ್ಟಿಯಾರರಿಗೆ ತುಂಬ ಕಷ್ಟವಾಯಿತು.  ಸಾವಕಾಶ, ಸಾವಕಾಶ  ಎನ್ನುತ್ತ ಉಸಿರುಬಿಗಿಹಿಡಿದು ಓಡಿದರು. ಸ್ಟೇಷನ್ನಿನ ಹೊರಗೆ ಒಂದು ದೊಡ್ಡ ಕಾರು ಬಂದು ನಿಂತಿತು. ಅದರಿಂದ ಇಳಿದ ಕೆಲವರು ಚೆಟ್ಟಿಯಾರರನ್ನು ನೋಡಿ ಸಂಭ್ರಮದಿಂದ ಓಡಿಬಂದರು, ಅವರನ್ನು ಕಾರಿನಲ್ಲಿ ಕೂಡ್ರಿಸಿದರು. ಅಷ್ಟರಲ್ಲಿ ಕೈಲಾಸಂ ಅವರ ಸಾಮಾನುಗಳನ್ನು ಕಾರಿನ ಡಿಕ್ಕಿಯಲ್ಲಿರಿಸಿದ್ದರು. ಬಂದವರು ಚೆಟ್ಟಿಯಾರರಿಗೆ ಹೇಳುತ್ತಿದ್ದರು,  `ಸಾರ್ ತಮಗೆ ಸ್ವಾಗತ ಸರ್. ನಾವು ಕನ್ನಡ ಸಂಘದ ಕಾರ್ಯಕರ್ತರು. ತಾವೇ ಇಂದಿನ ಕಾರ್ಯಕ್ರಮಕ್ಕೆ ಅಧ್ಯಕ್ಷರಲ್ಲವೇ. ಅದಕ್ಕೇ ತಮ್ಮನ್ನು ಎದುರುಗೊಳ್ಳಲು ಬಂದಿದ್ದೇವೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ  ಟಿ.ಪಿ. ಕೈಲಾಸಂ ಅವರೂ ಇದೇ ರೈಲಿನಿಂದ ಬರುವವರಿದ್ದರು. ಅವರನ್ನೂ ನೋಡಿಕೊಂಡು ಬರುತ್ತೇವೆ'  ಎನ್ನುವ ಹೊತ್ತಿಗೆ ಕೈಲಾಸಂ ಚೆಟ್ಟಿಯಾರರ ಬಳಿಗೆ ಬಂದರು.
`ಎಷ್ಟಯ್ಯೊ ನಿನ್ನ ಕೂಲಿ'  ಎಂದು ಚೆಟ್ಟಿಯಾರ್ ಕೇಳುವಾಗ ಕಾರ್ಯಕರ್ತರು ಇವರನ್ನು ನೋಡಿ ಬಿಳಿಚಿಕೊಂಡರು,  `ಅಯ್ಯಯ್ಯೋ ಇದೇನು ಸಾರ್. ತಾವು ಕೂಲಿಯ ಹಾಗೆ, ಇವನ್ನೇಕೆ ಹೊತ್ತುಕೊಂಡು ಬಂದಿರಿ'  ಎಂದು ಗಾಬರಿಯಿಂದ ಚೆಟ್ಟಿಯಾರರ ಕಡೆಗೆ ತಿರುಗಿ,  `ಸಾರ್, ಇವರೇ ಕೈಲಾಸಂ. ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿ'  ಎಂದರು.
ಆಗ ಕೈಲಾಸಂ ತಮ್ಮ ಟ್ರೇಡ್‌ಮಾರ್ಕ್ ಸಿಗಾರ್ ಹಚ್ಚಿ ಹೊಗೆ ಎಬ್ಬಿಸಿ ಚೆಟ್ಟಿಯಾರರ ಕಡೆಗೆ ಕೈ ಚಾಚಿ ` ಹೌದು ಸರ್, ನಾನೇ ಕೈಲಾಸಂ, ಬಿ.ಎ., ಎ.ಆರ್.ಸಿ (ಲಂಡನ್), ಎಫ್.ಆರ್.ಜಿ..ಎಸ್ (ಲಂಡನ್) ಅತ್ಯಂತ ಉನ್ನತ ಶಿಕ್ಷಣ ಪಡೆದ ಕೂಲಿ. ಇಂದು ತಾವೇ ಅಧ್ಯಕ್ಷರು. ನಾವಿಬ್ಬರೂ ಈ ರೀತಿ ಭೆಟ್ಟಿಯಾಗುವುದು ಆಶ್ಚರ್ಯಕರವಾದ ರೀತಿಯಲ್ಲವೇ'  ಎಂದರು. ಮುಂದೆ ಇಡೀ ದಿನ ಚೆಟ್ಟಿಯಾರರು ಪೆಚ್ಚಾಗಿಯೇ ಇದ್ದರು. ಬಾಹ್ಯರೂಪದಿಂದ, ಚರ್ಯೆಯಿಂದ ಮನುಷ್ಯನ ಗುಣವನ್ನು, ಮಟ್ಟವನ್ನು ಅಳೆಯುವುದು ತುಂಬ ಅಪಾಯಕಾರಿ.

Krupe_ Prajavani Daily News Paper

Wednesday, May 8, 2013

ಹಳ್ಳಿಯ ಲೆಕ್ಕಗಳು - ಮಾ.ಕೃ.ಮಂಜು


ಹಳೆಯ ಹಳ್ಳಿಯ ಲೆಕ್ಕಗಳು

ತೂಕ ಹಾಗೂ ಅಳತೆಗೆ ಸಂಬಂಧಿಸಿದಂತೆ
ಹಿಂದೆ ತೂಕವನ್ನು "ರೂಪಾಯಿ"ಗಳಿಂದಲೇ ಕಂಡುಕೊಂಡಿದ್ದು ನಮಗೆ ಕಂಡುಬರುತ್ತದೆ. ೨೪ ಬೆಳ್ಳಿ "ರೂಪಾಯಿ"ಗಳ ತೂಕವನ್ನು ಒಂದು "ಸೇರು" ಎಂದು ಮಾಡಿಕೊಂಡಿದ್ದರಿಂದ, ಅದರ ಅಳತೆಗೆ ತಕ್ಕಂತೆ " ಸೇರಿ"ನ ಸೃಷ್ಟಿಯಾಗಿರುವುದನ್ನು ನಾವು ಗಮನಿಸುತ್ತೇವೆ. ಹೀಗೆ "ಪಾವು", "ಚಟಾಕು", "ಗಜ", "ಅಂಗುಲ", "ಮೈಲಿ", "ಹರಿದಾರಿ" "ಎಕರೆ" ಮುಂತಾದ ಅಳತೆಮಾನಗಳು ಹಾಗೂ "ತೊಲ", "ಪಲ್ಲ", "ಖಂಡುಗ" ಮುಂತಾದ ತೂಕಮಾನಗಳು ಬಂದು ಸೇರಿಕೊಂಡಿವೆ. ಉದಾಹರಣೆಗೆ, ಒಂದು ಸೇರು ಎಂದರೆ, ೨೪ ಬೆಳ್ಳಿ "ರೂಪಾಯಿ"ಗಳ ತೂಕ ಅಥವಾ ನಾಲ್ಕು "ಪಾವು" ಎಂದೂ ಹಾಗೂ ಒಂದು "ಗಜ" ಎಂಬುದನ್ನು ಮೂರು "ಅಡಿ" ಎಂದು ಹೇಳಲಾಗುತ್ತದೆ. ಇವುಗಳ ಪ್ರಕಾರ ತೂಕ ಹಾಗು ಅಳತೆಗಳನ್ನು ನಾವು ಈ ರೀತಿ ವಿಂಗಡಿಸಬಹುದಾಗಿದೆ.
೧ ಬೆಳ್ಳಿ ರೂಪಯಿ ತೂಕ = ೧ ತೊಲ
೧ ಪಾವು = ೪ ಚಟಾಕು
೧ ಸೇರು = ೪ ಪಾವು ಅಥವ ೨೪ ಬೆಳ್ಳಿ ರೂಪಯಿಗಳ ತೂಕ
೧ ಇಬ್ಬಳಿಗೆ = ಐದೂವರೆ ಸೇರು (ದೊಡ್ದ ಇಬ್ಬಳಿಗೆಯಾದರೆ ೬ ಸೇರು)
೧ ಪಲ್ಲ = ೧೦೦ ಸೇರು
೧ ಕೊಳಗ = ೨ ಇಬ್ಬಳಿಗೆ ಅಥವ ೧೧ ಸೇರು
೧ ಖಂಡುಗ = ೪೦ ಇಬ್ಬಳಿಗೆ ಅಥವ ೨೦ ಕೊಳಗ
೧ ಅಡಿ = ೧೨ ಅಂಗುಲ ಅಥವ ಇಂಚು
೧ ಗಜ = ೩ ಅಡಿ ಅಥವ ೩೬ ಅಂಗುಲ
೧ ಗುಂಟೆ = ೨೨೦ ಚದರ ಗಜ
೧ ಎಕರೆ = ೪೦ ಗುಂಟೆ
೧ ಮೈಲಿ = ೮ ಫರ್ಲಾಂಗು
೧ ಹರಿದಾರಿ = ೪ ಮೈಲಿ
೧ ಗಾವುದ = ೧೨ ಹರಿದಾರಿ
ನಾನು ನೋಡಿದಂತೆ ಸಣ್ಣವನಾಗಿದ್ದಾಗ, ಅಪ್ಪ ಶಾಲಾ ಯೂನಿಫಾರಂ ಬಟ್ಟೆ ಹಾಕಲು ಅಂಗಡಿಗೆ ಕರೆದುಕೊಂಡು ಹೋಗುತ್ತಿದ್ದದ್ದು ಹಾಗೂ ಅಲ್ಲಿ ಬಟ್ಟೆಯನ್ನು ಗಜದಲ್ಲೇ ಅಳತೆ ಮಾಡುತ್ತಿದ್ದದ್ದು ನನಗೆ ನೆನಪಿದೆ. ಇನ್ನು ಭತ್ತದ ನಾಟಿಗೂ ಮೊದಲು ಪೈರಿನ ಹೊಟ್ಟಿಲಿಗೆ ಬಿತ್ತನೆ ಭತ್ತದ ಅಳತೆಯನ್ನು ಸೇರಿನಲ್ಲಿ ಈಗಲೂ ಅಳೆದು ಉಪಯೋಗಿಸುವುದು ಸಾಮಾನ್ಯವಾಗಿದೆ. ಹಳ್ಳಿಗಳಲ್ಲಿ ಒಂದು ಎಕರೆಗೆ ಸುಮಾರು ಮೂವತ್ತು ಸೇರು ಬಿತ್ತನೆ ಭತ್ತವನ್ನು ಉಪಯೋಗಿಸುತ್ತಾರೆ. ಇನ್ನು ತೂಕದಲ್ಲಿ ನೋಡಿದರೆ, ಬೆಣ್ಣೆ, ತುಪ್ಪ ಮುಂತಾದ ಖಾದ್ಯಗಳನ್ನು "ಸೇರು", "ಪಾವು" ಎಂದೇ ತೂಗುವುದು ವಾಡಿಕೆಯಾಗಿತ್ತು. ಅದಕ್ಕಾಗಿಯೇ ತೂಕದ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಉದಾಹರಣೆಗೆ,
ಅಚ್ಚೇರು ಬೆಣ್ಣೆ = ಅರ್ಧ ಸೇರು ಬೆಣ್ಣೆ = ೧೨ ಬೆಳ್ಳಿ ರೂಪಾಯಿಗಳ ತೂಕ ಅಥವ ೨ ಪಾವು
ಅರ್ಪಾವು ತುಪ್ಪ = ಅರ್ಧ ಪಾವು ತುಪ್ಪ
ಹಳ್ಳಿ ಅಳತೆಯಲ್ಲಿ ಕಾಣಬಹುದಾದ ಇನ್ನೊಂದು ವಿಷೇಶ ಎಂದರೆ, ಸೇರು, ಪಾವು, ಇಬ್ಬಳಿಗೆ, ಕೊಳಗ ಹೀಗೆ ಯಾವುದನ್ನೇ ಉಪಯೋಗಿಸಿ ಭತ್ತ, ರಾಗಿ ಅಥವಾ ಬೇರೆ ಯಾವುದೇ ಧಾನ್ಯಗಳನ್ನು ಅಳೆಯುವಾಗ "ಹೆಚ್ಚಲಿ" ಎಂಬ ಪದವನ್ನು ಸಾಮಾನ್ಯವಾಗಿ ಉಪಯೋಗಿಸುತ್ತಿರುತ್ತಿದ್ದರು. ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ ಧಾನ್ಯ ಹಾಗೇ ಹೆಚ್ಚಲಿ ಎಂಬುದು. ಎರಡನೆಯದಾಗಿ ೭, ೧೧ ಮತ್ತು ೧೭ ಸಂಖ್ಯೆಗಳು ಅಶುಭ ಹಾಗು ಅವುಗಳನ್ನು ಉಪಯೋಗಿಸಬಾರದೆಂಬ ನಂಬಿಕೆ. ಈ ಕಾರಣಗಳಿಂದ, "ಆರು" ಆದ ನಂತರ "ಹೆಚ್ಚಲಿ" ನಂತರ "ಎಂಟು" ಎಂದೂ, ಹತ್ತಾದ ನಂತರ "ಹೆಚ್ಚಲಿ" ನಂತರ "ಹನ್ನೆರಡು ಎಂದೂ, "ಹದಿನಾರು" ಆದ ನಂತರ "ಹೆಚ್ಚಲಿ" ನಂತರ "ಹದಿನೆಂಟು" ಎಂದೂ ಬಳಸುತ್ತಿದ್ದರು. ಹೀಗೆ ಏಳು, ಹನ್ನೊಂದು ಮತ್ತು ಹದಿನೇಳು ಸಂಖ್ಯೆಗಳನ್ನು ಉಪಯೋಗಿಸುತ್ತಿರಲಿಲ್ಲ. ಹಾಗೇ ಕೆಲವು ಸಂಖ್ಯೆಗಳನ್ನು ಶುಭ ಸಂಖ್ಯೆಗಳೆಂದು ನಂಬಿ ಉಪಯೋಗಿಸುತ್ತಿದ್ದದ್ದೂ ಉಂಟು. ಅವು ಯಾವುವೆಂದರೆ, ಐದು, ಒಂಬತ್ತು ಮತ್ತು ಹನ್ನೆರಡು.
ಹಣಕ್ಕೆ ಸಂಬಂಧಿಸಿದಂತೆ
ಈ ಮೊದಲೇ ಹೇಳಿದಂತೆ ಹಿಂದೆ "ಕಾಸು"ಗಳು ಬಹುಪಾಲು ಎಲ್ಲಾ ಅಳತೆಗಳಲ್ಲೂ ಪ್ರಧಾನ ಪಾತ್ರ ವಹಿಸುತ್ತಿದ್ದದ್ದು ನಮಗೆ ಕಾಣುತ್ತದೆ. ಮೂರು ಕಾಸಿನ ಒಂದು ಬಿಲ್ಲೆ, ಇಂಥ ನಾಲ್ಕು ಬಿಲ್ಲೆಗಳು ಸೇರಿದರೆ ಹನ್ನೆರಡು "ಕಾಸು" ಅಥವಾ ಒಂದು "ಆಣೆ"ಯಾಗುತ್ತದೆ. ಇಂದಿನ "ನಾಲ್ಕಾಣೆ", "ಎಂಟಾಣೆ", "ಹನ್ನೆರಡಾಣೆ", "ಹದಿನಾರಾಣೆ"ಗಳು ಈ ಹಿನ್ನಲೆಯಿಂದಲೇ ಬಂದಿರುವುದು ನಮಗೆ ತಿಳಿದ ಸಂಗತಿಯಾಗಿದೆ. ಈಗಲೂ ನಾವು ಈ "ಆಣೆ"ಗಳನ್ನು ಉಪಯೋಗಿಸುತ್ತೇವೆ. ಇದರ ಪ್ರಕಾರ ನಾವು ನಾಣ್ಯಗಳನ್ನು ಈ ಕೆಳಗೆ ಹೇಳಿರುವ ರೀತಿ ವಿಂಗಡಿಸಬಹುದಾಗಿದೆ.
ಚಲಾವಣೆಯಲ್ಲಿದ್ದ ನಾಣ್ಯಗಳು ಮತ್ತು ಉಪಯೋಗಿಸುತ್ತಿದ್ದ ಲೋಹಗಳು:
೧ ಕಾಸು (ತಾಮ್ರ)
೩ ಕಾಸು (ತಾಮ್ರ)
೬ ಕಾಸು (ನಿಕ್ಕಲ್)
೧ ಆಣೆ = ೧೨ ಕಾಸು (ನಿಕ್ಕಲ್)
೨ ಆಣೆ = ೨೪ ಕಾಸು (ನಿಕ್ಕಲ್)
೪ ಆಣೆ (ಬೆಳ್ಳಿ)
೮ ಆಣೆ (ಬೆಳ್ಳಿ)
೧ ರೂಪಾಯಿ = ೧೯೨ ಕಾಸು (ಬೆಳ್ಳಿ)
ಜೊತೆಗೆ ನಾಣ್ಯವಲ್ಲದಿದ್ದರೂ "ದುಡ್ಡು", "ಪಾವಲಿ" "ಹಣ ಅಥವ ವರಹ" ಹಾಗು "ದುಗ್ಗಾಣಿ" ಎಂಬ ಪದಗಳು ವ್ಯವಹಾರಿಕವಾಗಿ ಉಪಯೋಗಿಸಲ್ಪಡುತ್ತಿದ್ದವು. ಇವುಗಳನ್ನು "ಕಾಸು" ಮತ್ತು "ಆಣೆ"ಗಳಲ್ಲಿ ಹೇಳಬಹುದಾದರೆ:
೧ ದುಡ್ಡು = ೪ ಕಾಸು
೧ ಪಾವಲಿ = ೪ ಆಣೆ
೧ ಹಣ ಅಥವ ವರಹ= ೪ ಆಣೆ ಪಾವಲಿ
೧ ದುಗ್ಗಾಣಿ = ೮ ಕಾಸು ಅಥವಾ ೨ ದುಡ್ಡು ಎಂದು ಹೇಳಲಾಗುತ್ತಿತ್ತು.
ಈಗಿನ ಖೋಟಾ ನೋಟುಗಳು ಇರುವಂತೆ, ಹಿಂದೆಯೂ ನಾಣ್ಯಗಳ ನಕಲು ಮಾಡಲಾಗುತ್ತಿತ್ತು. ಬೆಳ್ಳಿಕಾಸಿನ ನಕಲನ್ನು "ಸೀಸ"ದಲ್ಲಿ ಮಾಡುತ್ತಿದ್ದರು. ಆದುದರಿಂದ, ನಾಣ್ಯವನ್ನು ಚಿಮ್ಮಿಸಿ ಅದರ ಶಬ್ಧದ ಆಧಾರದ ಮೇಲೆ ಅದು "ಬೆಳ್ಳಿ" ಅಥವ "ಸೀಸ"ದಿಂದ ಮಾಡಲ್ಪಟ್ಟಿದೆ ಎಂಬುದನ್ನು ಗುರುತಿಸುತ್ತಿದ್ದರು. "ಹಣ", "ವರಹ" ಎಂಬ ಪದಗಳನ್ನು ಸಾಮಾನ್ಯವಾಗಿ ಮದುವೆ ಮುಂತಾದ ಸಮಾರಂಭಗಲ್ಲಿ ಹೆಚ್ಚು ಉಪಯೋಗಿಸುತ್ತಿದ್ದರು. ಮದುವೆಗಳಲ್ಲಿ ನೀಡುವ ಉಡುಗೊರೆಯ ಹಣದ (ಮುಯ್ಯಿ) ಪಟ್ಟಿ ಬರೆಯುವಾಗ "ವಧುವಿಗೆ ಸೋದರಮಾವನಿಂದ ನಾಲ್ಕು ವರಹ" ಅಥವಾ "ವರನಿಗೆ ಚಿಕ್ಕಪ್ಪನಿಂದ ಹತ್ತು ಹಣ" ಎಂದು ಹೇಳುತ್ತಿದ್ದರು. ಕೆಲವು ಭಾಗಗಳಲ್ಲಿ "ಆಗ", "ಅಡ್ಡ" ಮುಂತಾದ ಪದಗಳನ್ನು ಈ ಕೆಳಗಿನ ಅರ್ಥದಲ್ಲಿ ಉಪಯೋಗಿಸುತ್ತಿದ್ದರು.
ಆಗ = ಒಂದು
ಅಡ್ಡ = ಎರಡು
ದುಡ್ಡು = ನಾಲ್ಕು
ದುಗ್ಗಾಣಿ = ಎಂಟು

http://makrumanju.blogspot.in/search/label/%E0%B2%95%E0%B2%A8%E0%B3%8D%E0%B2%A8%E0%B2%A1%20%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF%2F%20%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF
ಯಾರ ಯೋಗ್ಯತೆಯನ್ನು ಅವರ ಲೋಪಗಳ ಆಧಾರದ ಮೇಲೆ ನಿರ್ಣಯಿಸಬಾರದು.

Tuesday, May 7, 2013

ಕೃತಜ್ಞತೆ - ಗುರುರಾಜ ಕರ್ಜಗಿ,


ಗಾಂಧೀಜಿ ಪುಣೆಯ ಯೆರವಡಾ ಜೈಲಿನಲ್ಲಿದ್ದಾಗ ಒಂದು ದಿನ ಅವರಿಗೊಂದು ಪತ್ರ ಬಂದಿತು. ದಿನಾಲೂ ಗಾಂಧೀಜಿಗೆ ಪತ್ರಗಳು ಬರುವುದು ಸಾಮಾನ್ಯವಾದ ವಿಷಯವಾಗಿದ್ದರೂ ಈ ಪತ್ರ ವಿಶೇಷವಾಗಿತ್ತು. ರಣಛೋಡದಾಸರೆಂಬವರು ಬರೆದ ಈ ಪತ್ರದಲ್ಲಿ ಎಂಭತ್ತೆಂಟು ಪ್ರಶ್ನೆಗಳಿದ್ದವು.  ಪ್ರತಿಯೊಂದು ಪ್ರಶ್ನೆಗೂ ಗಾಂಧೀಜಿ ಉತ್ತರಿಸಲೇಬೇಕೆಂಬ ಒತ್ತಾಯವೂ ಇತ್ತು. ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಮಹಾದೇವ ದೇಸಾಯಿಯವರಿಗೆ ಕೋಪ ಬಂತು.  ಅದನ್ನು ಬಾಪೂಜಿಗೆ ತೋರಿಸಿ ಹರಿದುಹಾಕಬೇಕೆಂದುಕೊಂಡರು.
 ಗುರುರಾಜ ಕರ್ಜಗಿ
ಆದರೆ ಗಾಂಧೀಜಿ ಅದನ್ನು ಮುಖ್ಯವಾದ ಪತ್ರವೆಂಬಂತೆ ತಾಳ್ಮೆಯಿಂದ ಓದಿದರು. ಅದರಲ್ಲಿ ಅನೇಕ ಪ್ರಶ್ನೆಗಳು. ಅವುಗಳಲ್ಲಿ ಕೆಲವು ಗಾಂಧೀಜಿಗೆ ನೋವು ಉಂಟುಮಾಡುವಂಥವು, ಕೆಲವು ಅವರ ತತ್ವಗಳನ್ನು ಬಲವಾಗಿ ವಿರೋಧಿಸುವಂಥವು ಇದ್ದವು.  ಗಾಂಧೀಜಿ ಸ್ವತ: ತಾವೇ ಪ್ರತಿಯೊಂದು ಪ್ರಶ್ನೆಗೂ ಉತ್ತರ ಬರೆದರು.

ಇದು ಮಹಾದೇವ ದೇಸಾಯಿಯವರಿಗೆ ಸರಿ ಕಾಣಲಿಲ್ಲ,  ಬಾಪೂ, ರಣಛೋಡದಾಸರು ನಮ್ಮೆಲ್ಲರ ಮನಸ್ಸಿಗೆ ನೋವಾಗುವಂತೆ ಉದ್ದೇಶಪೂರ್ವಕವಾಗಿ ಬರೆದಿದ್ದಾರೆ. ನೀವು ಆ ಪತ್ರಕ್ಕೆ ಅಷ್ಟೊಂದು ಮಹತ್ವ ನೀಡಿ ಉತ್ತರ ಬರೆದಿದ್ದು ನನಗೆ ಸರಿ ಕಾಣುವುದಿಲ್ಲ  ಎಂದರು.  ಆಗ ಗಾಂಧೀಜಿ ಹೇಳಿದರು,  ಮಹಾದೇವ, ರಣಛೋಡದಾಸರು ನನಗೆ ತುಂಬ ಅವಶ್ಯವಾಗಿದ್ದಾಗ ಸಹಾಯ ಮಾಡಿದ್ದಾರೆ.  ನಾನು ಕೊನೆಯ ಉಸಿರು ಇರುವ ತನಕ ಅವರು ಮಾಡಿದ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ

ಮಹಾದೇವ ಬಾಪೂಜಿ ಬರೆದ ಪತ್ರವನ್ನು ನೋಡಿದರು. ಪತ್ರವನ್ನು  ಗೌರವಾನ್ವಿತರಾದ ರಣಛೋಡದಾಸಭಾಯಿ  ಎಂದು ಪ್ರಾರಂಭಿಸಿ ಕೊನೆಗೆ  ಮೋಹನದಾಸನ ಪ್ರಣಾಮಗಳು  ಎಂದು ಮುಗಿಸಿದ್ದರು. ಮಹಾದೇವ ಕುತೂಹಲದಿಂದ ಕೇಳಿದರು,  ತಾವು ಇಷ್ಟು ಗೌರವದಿಂದ ಬರೆದಿರುವುದರಿಂದ ಅವರು ತಮಗಿಂತ ವಯಸ್ಸಿನಲ್ಲಿ ಬಹಳ ದೊಡ್ಡವರಾಗಿರಬೇಕಲ್ಲ?  ಗಾಂಧೀಜಿ, ಇಲ್ಲ, ಅವರು ನನಗಿಂತ ಏಳೆಂಟು ವರ್ಷ ದೊಡ್ಡವರು.  ಆದರೆ ಅವರು ನನಗೆ ಮಾಡಿದ ಸಹಾಯಕ್ಕೆ ನಾನು ಅವರನ್ನು ಹಿರಿಯಣ್ಣ ಎಂದೇ ಭಾವಿಸಿದ್ದೇನೆ. ನಾನು ಮೆಟ್ರಿಕ್ಯುಲೇಶನ್ ಪರೀಕ್ಷೆಗೆ ಹೋದಾಗ ಇವರ ಅಣ್ಣನ ಮನೆಯಲ್ಲಿಯೇ ಇದ್ದೆ. ಆಗ ರಣಛೋಡದಾಸಭಾಯಿ ನನ್ನನ್ನು ಪ್ರೀತಿಯಿಂದ ವಿಚಾರಿಸಿಕೊಳ್ಳುತ್ತಿದ್ದರು.

 ಮುಂದೆ ನಾನು ಮುಂಬೈಗೆ ಹೋಗುವಾಗ ಐದು ಸಾವಿರ ರೂಪಾಯಿಗಳನ್ನು ನೀಡಿದ್ದರು. ಈ ಸಹಾಯವಿಲ್ಲದಿದ್ದರೆ ನಾನು ಮುಂಬೈಯಲ್ಲಿ ನೆಲೆಸುವ ಮತ್ತು ನಂತರ ಪರದೇಶಕ್ಕೆ ಹೋಗುವ ವಿಚಾರ ಕನಸಾಗಿಯೇ ಉಳಿಯುತ್ತಿತ್ತು  ಎಂದರು.

ಅದು ಸರಿ, ಆದರೆ ಈಗ ಅವರು ನಿಮಗೆ ಯಾವ ಸಹಾಯವನ್ನೂ ಮಾಡುತ್ತಿಲ್ಲವಲ್ಲ? ಬದಲಾಗಿ ನಿಮಗೆ ಇರಿಸುಮುರಿಸಾಗುವಂಥ ಮಾತುಗಳನ್ನೇ ಆಡುತ್ತಿದ್ದಾರೆ  ಕೇಳಿದರು ಮಹಾದೇವ. ಆಗ ಗಾಂಧೀಜಿ ಭಾವಾವೇಶದಿಂದ ಮಾತನಾಡಿದರು. ಅವರ ಧ್ವನಿ ನಡುಗುತ್ತಿತ್ತು.

ಅವರು ಈಗ ಏನು ಮಾಡುತ್ತಾರೆ ಎಂಬುದು ಮುಖ್ಯವಲ್ಲ.  ಆದರೆ ಒಂದು ಕಾಲಕ್ಕೆ ನನಗೆ ಅವಶ್ಯವಾಗಿದ್ದಾಗ ಕೈ ಹಿಡಿದಿದ್ದಾರೆ.  ಇಂದು ನಾನೇನು ಆಗಿದ್ದೀನೋ ಅದಕ್ಕೆ ತಳಪಾಯ ಹಾಕಿದವರು ಅವರು.  ಅವರನ್ನು ನಾನು ಎಂದಿಗೂ ಮರೆಯಲಾರೆ  ಎಂದರು. ಈ ಮಾತುಗಳನ್ನು ಕೇಳುತ್ತಿದ್ದ ಮಹಾದೇವ ದೇಸಾಯಿ ಮತ್ತು ವಲ್ಲಭಭಾಯಿ ಪಟೇಲರಿಗೆ ಆಶ್ಚರ್ಯವಾಯಿತು.

ಉಪಕಾರ ಸ್ಮರಣೆ ಮನುಷ್ಯರನ್ನು ಬೇರೆ ಪ್ರಾಣಿಗಳಿಂದ ಬೇರ್ಪಡಿಸುತ್ತದಂತೆ.  ಪ್ರಾಣಿಗಳೂ ಉಪಕಾರ ಮಾಡಿದವರನ್ನು ಮರೆಯುವುದಿಲ್ಲ. ಆದರೆ ಕೆಲವು ಮನುಷ್ಯರ ಆಕಾರದಲ್ಲಿರುವವರಿಗೆ ಆ ಪ್ರಜ್ಞೆಯೇ ಇಲ್ಲ ಎನ್ನಿಸುತ್ತದೆ.  ಯಾರು ತಮ್ಮನ್ನು ಎತ್ತರಕ್ಕೆ ಒಯ್ದರೋ, ಯಾರು ನೆಲೆ ಕೊಟ್ಟರೋ, ಯಾರು ಸಮಾಜದಲ್ಲಿ ಸ್ಥಾನ ನೀಡಿದರೋ ಅಂಥವರ ಕತ್ತನ್ನೇ ಅತ್ಯಂತ ಸರಿಯಾದ ಸಮಯದಲ್ಲಿ ಕತ್ತರಿಸಿ ಮತ್ತೆ ಮೊಸಳೆ ಕಣ್ಣೀರು ಸುರಿಸಿ ಜನರ ಅನುಕಂಪೆಯನ್ನು ಬಯಸುತ್ತಾರೆ. ಕತಜ್ಞತೆ ಇಲ್ಲದ ಮನುಷ್ಯನಷ್ಟು ಅಪಾಯಕಾರಿ ವಸ್ತು ಮತ್ತೊಂದಿಲ್ಲ.


 ಕೃಪೆ - ಪ್ರಜಾವಣಿ

ದಾನದ ಮಹಿಮೆ : ಕೃಪೆ - ಪ್ರಜಾವಣಿ


ಡಾ. ಚಂದ್ರಶೇಖರ ಕಂಬಾರ ಅವರು ಬರೆದ ಅನೇಕ ಸುಂದರ ಜನಪದ ಕಥೆಗಳಲ್ಲಿ ಇದೊಂದು.
ಒಂದು ಊರಿನಲ್ಲಿ ತಾಯಿ ಮಗ ಇದ್ದರು. ತಾಯಿ ಬೇರೆಯವರ ಮನೆಗಳಲ್ಲಿ ದುಡಿದು ಹಣಗಳಿಸಿ, ಅದರಲ್ಲೇ ಸಾಕಷ್ಟನ್ನು ದಾನ ಮಾಡಿ ಉಳಿದದ್ದರಲ್ಲಿ ಇಬ್ಬರ ಜೀವನ ಸಾಗಿಸುತ್ತಿದ್ದಳು.  ಮಗನಿಗೆ ಈ ದಾನ ಇಷ್ಟವಿಲ್ಲ. ಆಕೆಯನ್ನು ಕೇಳಿದ, `ಯಾಕೆ ಹೀಗೆ ದಾನ ಮಾಡುತ್ತೀ. ಕೆಲವೊಮ್ಮೆ ಉಪವಾಸ ಇದ್ದು ದಾನ ಮಾಡುತ್ತಿ.  ಈ ದಾನದ ಮಹತ್ವ ಏನು'  ತಾಯಿ ಹೇಳಿದಳು,  `ಮಗೂ, ದಾನದಿಂದ ಪುಣ್ಯ ಬರುತ್ತದೆ.

ಪುಣ್ಯ ಎಂದರೇನು'  ಮಗ ಕೇಳಿದ. ತಾಯಿ,  `ನನಗೇನು ಗೊತ್ತಪ್ಪ.  ಅದು ಶಿವನಿಗೇ ಗೊತ್ತು. ಅವನನ್ನೇ ಹೋಗಿ ಕೇಳು'  ಎಂದಳು.
ಮಗ ಶಿವನನ್ನು ಕಾಣಲು ಹೊರಟ. ದಾರಿಯಲ್ಲಿ ದಟ್ಟವಾದ ಅರಣ್ಯ. ಕತ್ತಲೆಯೂ ಆಯಿತು.  ತರುಣನಿಗೆ ಗಾಬರಿ. ಆಗ ಅಲ್ಲಿಗೊಬ್ಬ ಬೇಡ ಬಂದ.

 ಈತನನ್ನು ಕರೆದುಕೊಂಡು ತನ್ನ ಗುಡಿಸಲಿಗೆ ಹೋದ. ಹೆಂಡತಿಗೆ ಹಣ್ಣು, ಹಂಪಲುಗಳನ್ನು ನೀಡಲು ಕೇಳಿದ. ಆಕೆ ಸಿಡುಕಿನಿಂದ, `ನನ್ನದ್ದನ್ನು ಕೊಡಲಾರೆ, ಬೇಕಾದರೆ ನಿನ್ನ ಪಾಲಿನಲ್ಲೇ ಕೊಡು' ಎಂದಳು.  ಬೇಡ ತನ್ನ ಪಾಲಿನ ಆಹಾರವನ್ನು ಈತನಿಗಿತ್ತು, ಕಾಲು ಒತ್ತಿ, ಹಾಸಿಗೆ ಹಾಸಿ ಗುಡಿಸಲಿನಲ್ಲಿ ಮಲಗಿಸಿದ.  ತಾನು ಗುಡಿಸಿಲಿನ ಅರ್ಧ ಒಳಗೆ, ಅರ್ಧ ಹೊರಗೆ ಮಲಗಿದ. ರಾತ್ರಿ ಹುಲಿ ಬಂದು ಬೇಡನನ್ನು ಹೊಡೆದು ತಿಂದಿತು.

ಗುಡಿಸಲಿನೊಳಗೆ ನುಗ್ಗಿ ಅವನ ಹೆಂಡತಿಯನ್ನು ಎಳೆದುಕೊಂಡು ಹೋಗಿ ಮುಗಿಸಿತು. ಹುಡುಗ ದುಃಖದಿಂದ ಮುಂದೆ ನಡೆದ.  ಮುಂದೆ ದಾರಿಯಲ್ಲಿ ರಾಜನೊಬ್ಬ ಸಿಕ್ಕ. ಈತ ಶಿವನ ಕಡೆಗೆ ಹೊರಟಿದ್ದನ್ನು ತಿಳಿದು,  `ಹುಡುಗಾ, ನನ್ನದೊಂದು ಸಮಸ್ಯೆಗೆ ಶಿವನಿಂದ ಪರಿಹಾರ ಕೇಳಿಕೊಂಡು ಬಾ, ನಾನು ಕೋಟಿ ಹೊನ್ನು ಖರ್ಚುಮಾಡಿ ಕೆರೆ ಕಟ್ಟಿಸಿದ್ದೇನೆ. ಆದರೆ ಒಂದು ಹನಿ ನೀರೂ ಬೀಳಲಿಲ್ಲ'. ಹುಡುಗ `ಹ್ಞೂ' ಎಂದು ನಡೆದ. ಸ್ವಲ್ಪ ಮುಂದೆ ಹೋಗುವಾಗ ದಾರಿಯಲ್ಲಿ ಒಬ್ಬ ಕುಂಟ ಮನುಷ್ಯ ಸಿಕ್ಕ.  ಆತನೂ ಕೇಳಿದ, `ನನ್ನ ಕುಂಟತನಕ್ಕೆ ಕಾರಣವನ್ನು ಕೇಳಿ ಬಾ'. ಹಾಗೆಯೇ ಮುಂದುವರೆದಾಗ ದಾರಿಯಲ್ಲಿ ಒಂದು ದೊಡ್ಡ ಸರ್ಪ ಕಂಡಿತು. ಅದು ಹುತ್ತದೊಳಗೆ ಹೋಗಲಾರದೆ, ಹೊರಗೆ ಬರಲಾರದೆ ಒದ್ದಾಡುತ್ತಿತ್ತು. `ನಾನು ಇದರಿಂದ ಪಾರಾಗುವುದು ಹೇಗೆ ಎಂದು ಕೇಳಿಕೊಂಡು ಬಾ' ಎಂದಿತು.

ತರುಣ ಬಂದು ಶಿವನನ್ನು ಕಂಡ `ಪ್ರಭೋ, ದಾನದ ಪುಣ್ಯ ಎಂದರೇನು, ದಯವಿಟ್ಟು ಹೇಳು' ಎಂದ. ಅದಕ್ಕೆ ಶಿವ, `ನೋಡು, ನೇಪಾಳ ದೇಶದ ರಾಜನ ಹೆಂಡತಿ ಗರ್ಭವತಿಯಾಗಿದ್ದಾಳೆ. ನಾನು ಕೊಡುವ ಪ್ರಸಾದವನ್ನು ಆಕೆಗೆ ಕೊಡು.  ಆಕೆ ಗಂಡು ಮಗುವನ್ನು ಹಡೆಯುತ್ತಾಳೆ. ಆ ಕೂಸು ನಿನಗೆ ದಾನದ ಪುಣ್ಯವೇನೆಂದು ಹೇಳುತ್ತದೆ' ಎಂದ. ರಾಜನ ಕೆರೆಯ ನೀರಿನ ಬಗ್ಗೆ ಕೇಳಿದಾಗ, `ರಾಜ ತನ್ನ ಮಗಳಿಗೆ ಒಳ್ಳೆಯ ವರನನ್ನು ನೋಡಿ ಮದುವೆ ಮಾಡಿದರೆ ನೀರು ಬೀಳುತ್ತದೆ' ಎಂದ. ಅಂತೆಯೇ ಕುಂಟನ ಕಾಲಿನ ಪರಿಹಾರವನ್ನು ಕೇಳಿದಾಗ, `ಆತ ವಿದ್ಯಾದಾನ ಮಾಡಿಲ್ಲ.

ತನ್ನ ವಿದ್ಯೆಯನ್ನು ಯಾರಿಗಾದರೂ ದಾನ ಮಾಡಿದರೆ ಕುಂಟತನ ಹೋಗುತ್ತದೆ' ಎಂದು ನುಡಿದ. ಹಾಗಾದರೆ ಹಾವಿನ ತೊಂದರೆಗೆ ಪರಿಹಾರವೇನು ಎಂಬ ಪ್ರಶ್ನೆಗೆ, `ಅದರ ನೆತ್ತಿಯಲ್ಲಿ ಒಂದು ರತ್ನವಿದೆ. ಅದನ್ನು ಯಾರಿಗಾದರೂ ಕೊಟ್ಟರೆ ಅದರ ಸಮಸ್ಯೆ ಬಗೆಹರಿಯುತ್ತದೆ' ಎಂದು ಉತ್ತರಿಸಿದ. ಬರುವಾಗ ದಾರಿಯಲ್ಲಿ ಹಾವು ಸಿಕ್ಕಿತು. ಶಿವನ ಮಾತನ್ನು ತಿಳಿಸಿದಾಗ ನೆತ್ತಿಯ ರತ್ನವನ್ನು ಇವನಿಗೇ ಕೊಟ್ಟಿತು. ಕುಂಟ ಈತನಿಗೆ ಎಲ್ಲ ವಿದ್ಯೆಗಳನ್ನು ದಾನ ಮಾಡಿದ. ವಿದ್ಯೆ ಮತ್ತು ರತ್ನವನ್ನು ಪಡೆದ ಇವನಿಗೇ ರಾಜ ಮಗಳನ್ನು ಕೊಟ್ಟು ಮದುವೆ ಮಾಡಿದ.

ರಾಜ್ಯವನ್ನು ಕೊಟ್ಟ. ಕೆರೆ ತುಂಬಿತು.  ನಂತರ ತರುಣ ನೇಪಾಳಕ್ಕೆ ಹೋದ.  ರಾಣಿ ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದಳು. ಈತ ಕೊಟ್ಟ ಪ್ರಸಾದ ತಿಂದೊಡನೆ ಸುಖಪ್ರಸವವಾಗಿ ಗಂಡುಮಗು ಹುಟ್ಟಿತು.  ಅದನ್ನು ಬಂಗಾರದ ತಟ್ಟೆಯಲ್ಲಿ ತಂದು ಇವನ ಮುಂದಿಟ್ಟರು. ಈತ ಕೇಳಿದ, `ದಾನದ ಪುಣ್ಯ ಯಾವುದು' ಮಗು ಪಕಪಕನೇ ನಕ್ಕು ಹೇಳಿತು, `ಹುಚ್ಚಾ, ಶಿವನನ್ನು ಕಂಡು ಬಂದರೂ ಜ್ಞಾನ ಬರಲಿಲ್ಲವೇ? ಯಾವ ಬೇಡ ನಿನಗೆ ಕಾಡಿನಲ್ಲಿ ಆಶ್ರಯ ಕೊಟ್ಟನೋ ಅವನೇ ನಾನು. ಅನ್ನದಾನ ಮಾಡಿದ್ದಕ್ಕೆ ಈಗ ರಾಜಕುಮಾರನಾಗಿ ಹುಟ್ಟಿದ್ದೇನೆ. ದಾನ ಮಾಡದ ನನ್ನ ಹೆಂಡತಿ ಇದೇ ಊರಿನಲ್ಲಿ ಹಂದಿಯಾಗಿ ಹುಟ್ಟಿದ್ದಾಳೆ'.

ಹುಡುಗ ತನ್ನ ಊರಿಗೆ ಬಂದು ತಾಯಿಯನ್ನು ಕರೆದುಕೊಂಡು ಹೋಗಿ ದೊರೆತ ರಾಜ್ಯದ ರಾಜನಾಗಿ ಸುಖದಿಂದ ಬದುಕಿದ.
ನಾವು ಜೀವನದಲ್ಲಿ ಪಡೆಯುತ್ತಲೇ ಇರುತ್ತೇವೆ. ಅದರಲ್ಲೇ ಸಂತೋಷವನ್ನೂ ಪಡೆಯುತ್ತೇವೆ. ಆದರೆ, ನಿಜವಾದ ಮಾತೆಂದರೆ ನೀಡುವುದರಲ್ಲಿ ಇರುವ ಸುಖ, ನೆಮ್ಮದಿ ಪಡೆಯುವುದರಲ್ಲಿ ಇಲ್ಲ. ಹಾಗೆಂದು ಎಲ್ಲವನ್ನು ತ್ಯಾಗ ಮಾಡಿ ಸನ್ಯಾಸಿಯಾಗಬೇಕೆಂದಿಲ್ಲ. ನಮ್ಮ ಆಸೆ, ದುರಾಸೆಯಾಗದಂತೆ. ಅಪೇಕ್ಷೆ ಪರಪೀಡಕವಾಗದಂತೆ, ಬದುಕು ಪರರಿಗೆ ಹೊರೆಯಾಗದಂತೆ, ಇರುವ ನೆಲೆಯಲ್ಲೇ ಮತ್ತಷ್ಟು ಜನರಿಗೆ ನೆರಳಾಗುವ, ಪ್ರಯೋಜನಕಾರಿಯಾಗುವಂತೆ ಬದುಕುವುದು ಸಾರ್ಥಕತೆಯ ಲಕ್ಷಣ.

Krupe Prajavani 05/03/2013

ಸುಭಾಷಿತ


ಪ್ರಜಾಪ್ರಭುತ್ವದಲ್ಲಿ ಬಲಿಷ್ಠನಿಗಿರುವಷ್ಟೇ ಅವಕಾಶಗಳು ದುರ್ಬಲನಿಗೂ ಇರಬೇಕು.
-ಮಹಾತ್ಮ ಗಾಂಧೀಜಿ

ಮಾಹಿತಿ ಹಕ್ಕು ಅಧಿನಿಯಮ, ೨೦೦೫ - ಒಂದು ಅವಲೋಕನ




E0zÀÄ vÀ0vÀæeÁÕ£À ±ÀgÀªÉÃUÀzÀ°è ¨É¼ÉAiÀÄÄwÛgÀĪÀÅzÀÄ ¸ÁéUÀvÁºÀð. « - ªÁtÂdå, « - ªÀiÁgÀÄPÀmÉÖ, « - ¨Áå0Q0Uï, « - DqÀ½vÀ, « - «zÁå¨sÁå¸À J®èªÀÇ «zÀÄå£ÀäAiÀĪÁVzÉ. ¨sÁgÀvÀzÀ°è ªÀiÁ»w ªÀÄvÀÄÛ vÀ0vÀæeÁÕ£À PÁ¬ÄzÉUÉ C¨sÀÆvÀ¥ÀǪÀð ¸ÁéUÀvÀ ¹QÌzÉ. F ªÀiÁ»w ªÀÄvÀÄÛ vÀ0vÀæeÁÕ£À PÁ¬ÄzÉ- 2000 zÀ°è ªÀiÁ»wAiÀÄ §UÉÎ ¸ÀzÀj PÁ£ÀÆ£ÀÄ ¸ÀĪÀÄä¤zÀÄÝzÀÄ M0zÀÄ «¥ÀAiÀiÁð¸À. 2005 gÀ°è ªÀiÁ»w ºÀPÀÄÌ C¢ü¤AiÀĪÀÄ eÁjUÉ §0zÀÄ ªÀiÁ»w J0§ ¥ÀzÀPÉÌ ªÀĺÀvÀéªÀ£ÀÄß PÉÆnÖzÉ. ªÀiÁ»w J0zÀgÉ ¸ÁªÀiÁ£Àå £ÁUÀjÃPÀ¤UÉ ¸ÀPÁðgÀzÀ E¯ÁSÉUÀ¼À°ègÀĪÀ PÀqÀvÀUÀ¼À §UÉÎ, ¸ÀPÁðgÀzÀ RZÀÄð ªÉZÀÑUÀ¼À §UÉÎ, CzÀgÀ DqÀ½vÀzÀ §UÉÎ ¹UÀĪÀ ªÀiÁ»w. E0zÀÄ ªÀiÁ»w ºÀPÀÄÌ C¢ü¤AiÀĪÀÄ eÁjUÉ §0zÀÄ ¥ÀæwAiÉƧ⠣ÁUÀjÃPÀ¤UÉ ¸ÀPÁðgÀzÀ°ègÀĪÀ ªÀiÁ»w ®¨sÀåªÁVzÉ. F C¢ü¤AiÀĪÀĪÀ£ÀÄß £ÀªÀÄä ¸À0¸ÀvÀÄÛ ¨sÁgÀwÃAiÀÄjUÉ ¤Ãr £ÀªÀÄä ¸À0«zsÁ£ÀªÀ£ÀÄß UËgÀ«¹zÉ.
zÀ±ÀPÀUÀ¼À PÁ®¢0zÀ®Æ ¸ÀPÁðgÀzÀ PÀqÀvÀUÀ¼À gÀºÀ¸Àå ¸ÁªÀiÁ£Àå £ÁUÀjÃPÀ¤UÉ w½AiÀÄĪÀÅzÀÄ zÀÄ®ð¨sÀªÁVvÀÄÛ. £ÀªÀÄUÉ ¸ÁévÀ0vÀæ÷å §0zÀ ªÉÄÃ®Æ ¸ÀºÀ ©ænõÀgÀ ¥ÀgÀ0¥ÀgÉAiÀiÁzÀ ¸ÀPÁðgÀzÀ gÀºÀ¸Àå PÁ¥ÁqÀÄ«PÉAiÀÄ£ÀÄß £ÀªÀÄä ¸ÀPÁðgÀ ªÀÄÄ0zÀĪÀj¹zÀÄÝ M0zÀÄ «¥ÀAiÀiÁð¸À. ¨sÁgÀwÃAiÀÄ £ÁUÀjÃPÀ ªÀiÁ»w ºÀPÀÄÌUÀ½UÁV £ÀÆgÁgÀÄ ¨Áj £ÀªÀÄä ¸ÀªÉÇðÃZÀÒ £ÁåAiÀiÁ®AiÀÄzÀ ¨ÁV®Ä §rzÀgÀÆ ¥ÀæAiÉÆÃd£ÀªÁUÀ°®è. ¸ÀPÁðgÀzÀ gÀºÀ¸ÀåªÉ0§ PÀqÀvÀUÀ¼À°è ¨sÀæµÁÖZÁgÀ J0§ gÁPÀë¸À ClÖºÁ¸À ªÀiÁqÀÄwÛzÀÝ. ¥ÀæeÁ¥Àæ¨sÀÄvÀé ªÀåªÀ¸ÉÜAiÀÄ°è ªÀiÁ»wAiÀÄ ºÀPÀÄÌ £ÀªÀÄä d£Àä¹zÀÞ ºÀPÀÄÌ J0§ PÀÆUÀÄ PÀ¼ÉzÀ zÀ±ÀPÀ¢0zÀ PÉüÀ¯ÁgÀ0©ü¹vÀÄ. £ÀªÀÄä ¸ÀªÉÇðÃZÀÒ £ÁåAiÀiÁ®AiÀĪÀÇ ¸ÀºÀ ¸ÁªÀiÁ£Àå £ÁUÀjÃPÀ£À F PÀÆVUÉ ªÀÄ£ÀßuÉ ¤Ãr, ªÀiÁ»w ºÀPÀÄÌ £ÀªÀÄä ¸À0«zsÁ£ÀzÀ ªÀÄÆ®¨sÀÆvÀ ºÀPÀÄÌUÀ¼À°èAiÉÄà CqÀPÀªÁVzÉ J0zÀÄ wÃ¥ÀÅð ¤ÃrvÀÄ. «±Àé¸À0¸ÉÜAiÀÄÄ 2000 gÀ°è ¥ÀæwAiÉÆ0zÀÄ ¸ÀzÀ¸Àå gÁµÀÖçUÀ¼ÀÄ ªÀiÁ»w ºÀPÀÄÌ C¢ü¤AiÀĪÀĪÀ£ÀÄß CªÀgÀ £ÁUÀjÃPÀjUÉ ¤ÃqÀ®Ä ¸ÀÄvÉÆÛïÉAiÀÄ£ÀÄß ºÉÆgÀr¹vÀÄ. (¸ÀÄvÉÆÛÃ¯É ¸À0SÉå AiÀÄÄ. J£ï. rN¹ / ¹J£ï 4/2000 d£ÀªÀj 15) EzÀj0zÀ dÆ£ï 15, 2005 gÀ0zÀÄ ªÀiÁ»w ºÀPÀÄÌ J0§ ªÀĸÀÆzÉ £ÀªÀÄä gÁµÀÖç¥ÀwAiÀĪÀj0zÀ C0VÃPÀÈvÀªÁV dÆ£ï 15, 2005 j0zÀ eÁjUÉ §0vÀÄ.
ªÀiÁ»w J0zÀgÉãÀÄ?
¸ÀPÁðgÀzÀ PÀqÀvÀzÀ°ègÀĪÀ AiÀiÁªÀÅzÉà ªÀiÁ»w C0zÀgÉ ¸ÀPÁðj PÉ®¸ÀzÀ vÀ¥Á¸ÀuÉ, ¸ÀPÁðj PÀqÀvÀUÀ¼À ªÀiÁ»w, PÀqÀvÀUÀ¼À ¥ÀæªÀiÁt ¥ÀvÀæ, ¥ÀæªÀiÁtÂÃPÀj¹zÀ ¥ÀzÁxÀðUÀ¼À £ÀªÀÄÆ£É, UÀtPÀAiÀÄ0vÀæUÀ¼À ¥sóÁè¦ ªÀÄvÀÄÛ EvÀgÀ AiÀiÁªÀÅzÉà ªÀiÁ»wAiÀÄ£ÀÄß £ÁUÀjPÀ ¸À0§0zsÀ¥ÀlÖ E¯ÁSÉUÀ½0zÀ ¥ÀqÉAiÀħºÀÄzÀÄ. ¸ÀPÁðgÀ ¤ÃrzÀ UÀÄwÛUÉUÀ¼À ¥ÀæwUÀ¼À£ÀÄß ªÀÄvÀÄÛ CzÀgÀ £ÀPÉëUÀ¼À£ÀÄß CzÀgÀ ªÉZÀÑzÀ ªÀiÁ»wAiÀÄ£ÀÆß ¸ÀºÀ ¥ÀqÉAiÀħºÀÄzÀÄ. ¸ÀPÁðgÀ¢0zÀ UÀÄwÛUÉAiÀÄ£ÀÄß ¥ÀqÉzÀ UÀÄwÛUÉzÁgÀgÀÄ G¥ÀAiÉÆÃV¹zÀ ¥ÀzÁxÀðUÀ¼À £ÀªÀÄÆ£ÉAiÀÄ£ÀÆß ¸ÀºÀ ¥ÀqÉAiÀħºÀÄzÀÄ.
ªÀiÁ»w ºÀPÀÄÌ C¢ü¤AiÀĪÀÄ ¨sÁgÀwÃAiÀÄ £ÁUÀjÃPÀ¤UÉ ¸ÀPÁðgÀzÀ AiÀiÁªÀÅzÉà ªÀiÁ»wAiÀÄ£ÀÄß w½zÀÄPÉƼÀÄîªÀ ºÀPÀÄÌ ¤ÃrzÉ. zÀ±ÀPÀUÀ½0zÀ £ÁUÀjÃPÀ¤UÉ ¸ÀPÁðgÀzÀ AiÀiÁªÀÅzÉà ªÀiÁ»wAiÀÄ£ÀÄß w½zÀÄPÉƼÀÄîªÀ ºÀPÀÄÌ ¤ÃrzÉ. FUÀ £ÁUÀjÃPÀgÀÄ PÉýzÀ AiÀiÁªÀÅzÉà ªÀiÁ»wAiÀÄ£ÀÄß ¤ÃqÀĪÀÅzÀÄ ¸ÀPÁðgÀzÀ PÀvÀðªÀåªÁVzÉ. DzÀgÉ ªÀiÁ»wAiÀÄ£ÀÄß ¨sÁgÀwÃAiÀÄ £ÁUÀjÃPÀgÀÄ PÉêÀ® ¸ÀPÁðgÀ ºÁUÀÆ ¸ÀPÁðgÀzÀ ¸ÁéªÀÄåzÀ PÀ0¥À¤UÀ½0zÀ ªÀiÁvÀæ ¥ÀqÉAiÀħºÀÄzÀÄ. SÁ¸ÀV PÀ0¥À¤UÀ¼ÀÄ CgÉ ¸ÀPÁðj PÀ0¥À¤UÀ½UÉ F PÁAiÉÄÝ C£Àé¬Ä¸ÀĪÀÅ¢®è.
ªÀiÁ»w ºÀPÀÄÌ C¢ü¤AiÀĪÀÄ - ªÀÄÄSÁå0±ÀUÀ¼ÀÄ:
¥ÀæeÁ¥Àæ¨sÀÄvÀézÀ ªÀåªÀ¸ÉܬÄ0zÀ gÁµÀÖçUÀ¼À°è £ÁUÀjÃPÀgÉà AiÀÄdªÀiÁ£ÀgÀÄ. ¸ÀPÁðgÀªÀ£ÀÄß £ÁUÀjÃPÀgÉà gÀa¸ÀÄvÁÛgÉ. zÉñÀzÀ ¥ÀæwAiÉƧ⠣ÁUÀjÃPÀ¤UÀÆ vÁ£ÀÄ gÀa¹zÀ ¸ÀPÁðgÀ ºÉÃUÉ PÉ®¸À ¤ªÀð»¸ÀÄwÛzÉ J0zÀÄ w½zÀÄPÉƼÀÄîªÀ ºÀPÀÄÌ EzÉ. vÁªÀÅ ZÀÄ£Á¬Ä¹zÀ ±Á¸ÀPÀgÀÄ, ¸À0¸ÀzÀgÀÄ vÉUÉzÀÄPÉƼÀÄîªÀ ¤zsÁðgÀ, CªÀgÀÄ PÉ®¸À ªÀiÁqÀĪÀ ªÉÊRjAiÀÄ£ÀÄß £ÉÆÃr, w½zÀÄ ¥Àæ²ß¸ÀĪÀ ºÀPÀÄÌ £ÁUÀjÃPÀ¤VzÉ. £ÀªÀÄä ¸À0«zsÁ£ÀzÀ ªÀÄÆ®¨sÀÆvÀ ºÀPÁÌzÀ ªÁPï ªÀÄvÀÄÛ C©üªÀåQÛ ¸ÁévÀ0vÀæ÷å F ªÀiÁ»w ºÀPÀÄÌ E®èzÉà ¥Àj¥ÀÇtð J¤¸ÀĪÀÅ¢®è. ¸ÀPÁðgÀ ¸ÁªÀiÁ£Àå £ÁUÀjÃPÀgÀÄ PÀµÀÖ¥ÀlÄÖ ¨ÉªÀgÀÄ ¸ÀÄj¹ ¸À0¥Á¢¹PÉÆqÀĪÀ vÉjUɬÄ0zÀ PÉ®¸À ªÀiÁqÀÄvÀÛzÉ. £ÁªÀÅ PÉÆlÖ vÉjUÉ ºÀt ¸ÀPÁðgÀ AiÀiÁªÀ jÃw ªÉZÀÑ ªÀiÁqÀÄwÛzÉ J0zÀÄ w½zÀÄPÉƼÀÄîªÀ ºÀPÀÄÌ £ÀªÀÄUÉ R0rvÀªÁVAiÀÄÆ EzÉ. ¸ÀPÁðgÀzÀ°è £ÀqÉAiÀÄĪÀ ¨sÀæµÁÖZÁgÀªÀ£ÀÆß ¸ÀºÀ F ªÀiÁ»wAiÀÄ£ÀÄß ¸Àé®à ªÀÄnÖUÉ PÀrªÉÄ ªÀiÁqÀĪÀÅzÀgÀ°è AiÀiÁªÀÅzÉà ¸À0±ÀAiÀÄ«®è. F C¢ü¤AiÀĪÀÄ¢0zÀ ¸ÀPÁðgÀzÀ ¥ÀæwAiÉÆ0zÀÄ ¤zsÁðgÀ, PÉ®¸À £ÁUÀjÃPÀjUÉ w½AiÀÄÄvÀÛzÉ.
¨sÀæµÁÖ ¤ªÀÄÆð®£É ªÀÄvÀÄÛ ªÀiÁ»w ºÀPÀÄÌ C¢ü¤AiÀĪÀÄ:E0zÀÄ ¨sÀæµÁÖZÁgÀ £ÀªÀÄä PÁ£ÀÆ£À£Éßà PÉÆ0zÀÄ ºÁPÀÄwÛgÀĪÀÅzÀÄ M0zÀÄ «¥ÀAiÀiÁð¸À. ¨sÀæµÁÖZÁgÀ E0zÀÄ gÁdQÃAiÀÄ gÀ0UÀzÀ°è C¥ÀgÁ¢üUÀ¼À£ÀÄß vÀÄ0§ÄwÛzÉ. ¨sÀæµÁÖZÁgÀ £ÀªÀÄä ªÁ¶ðPÀ §eÉmï£À CzsÀð ¨sÁUÀªÀ£Éßà w0zÀÄ ºÁPÀÄwÛzÉ. M0zÀÄ gÀÆ¥Á¬ÄAiÀÄ ¸ÀPÁðj UÀÄwÛUÉAiÀÄ°è UÀÄwÛUÉzÁgÀ UÀÄwÛUÉ PÉ®¸ÀPÁÌV RZÀÄð ªÀiÁqÀĪÀÅzÀÄ PÉêÀ® 20 ¥ÉʸÉ. G½zÀ 80 ¥ÉÊ¸É ¨sÀæµÁÖZÁgÀzÀ°è ªÀåAiÀĪÁUÀÄvÀÛzÉ. ¸ÀPÁðgÀzÀ E¯ÁSÉUÀ¼À°è £ÀqÉAiÀÄÄwÛgÀĪÀ ¨sÀæµÁÖZÁgÀ¢0zÀ £ÁUÀjÃPÀ E0zÀÄ gÉÆù ºÉÆÃVzÁÝ£É. ¸ÀPÁðgÀzÀ ªÉÄÃ¯É vÀ£Àß £À0©PÉAiÀÄ£ÀÄß PÀ¼ÉzÀÄPÉƼÀÄîwÛzÁÝ£É.
«±Àé¨Áå0Q£À M0zÀÄ ¸À«ÄÃPÉëAiÀÄ ¥ÀæPÁgÀ M0zÀÄ gÁµÀÖçzÀ ¨É¼ÀªÀtÂUÉAiÀÄ£ÀÄß ¨sÀæµÁÖZÁgÀ ±ÉÃRqÁ 0.5 j0zÀ 1.0 PÀÄ0pvÀUÉƽ¸ÀÄwÛzÉ. zÀ±ÀPÀUÀ½0zÀ ¸ÀPÁðj E¯ÁSÉUÀ¼À°è ®0ZÀUÀĽvÀ£À gÁeÁgÉÆõÀªÁV £ÀqÉAiÀÄÄwÛzÉ. ªÀiÁ»w ºÀPÀÄÌ C¢ü¤AiÀĪÀÄ F ¨sÀæµÁÖZÁgÀªÀ£ÀÄß ¸À0¥ÀÇtðªÁV vÉÆqÉzÀÄ ºÁPÀ¢zÀÝgÀÆ, ¸Àé®à ªÀÄnÖUÉ ¸ÀÄzsÁj¸À§ºÀÄzÀÄ.
eÁUÀwÃPÀ ªÀÄlÖzÀ°è ªÀiÁ»w ºÀPÀÄÌ:
E0zÀÄ ¥Àæ¥À0ZÀzÀ 50 gÁµÀÖçUÀ¼À°è ªÀiÁ»w ºÀPÀÄÌ eÁjAiÀÄ°èzÉ. 90 gÀ zÀ±ÀPÀzÀ°è d¥Á£ï, §¯ÉÎÃjAiÀiÁ, L¯Áð0qï, zÀQët D¦üûæPÁ, xÉʯÁå0qï, E0UÉè0qï ªÀÄÄ0vÁzÀ 26 gÁµÀÖçUÀ½UÉ ªÀiÁ»w ºÀPÀÄÌ ¤ÃqÀ¯Á¬ÄvÀÄ. ¹éÃqÀ£ï gÁµÀÖçzÀ°è 18 £Éà ±ÀvÀªÀiÁ£ÀzÀ°èAiÉÄà ªÀiÁ»w ºÀPÀÄÌ C¢ü¤AiÀĪÀÄ eÁjAiÀÄ°èzÉ. E0zÀÄ ¥ÀæeÁ¥Àæ¨sÀÄvÀé ªÀåªÀ¸ÉÜ EgÀĪÀ ¥ÀæwAiÉÆ0zÀÄ gÁµÀÖçzÀ°è ªÀiÁ»w ºÀPÀÄÌ C¢ü¤AiÀĪÀÄ eÁjAiÀÄ°èzÉ.
¸ÀPÁðgÀ CxÀªÁ ¸À0¸ÀvÀÄÛ C¢ü¤AiÀĪÀÄ ªÀiÁrzÀgÉ ¸Á®zÀÄ. F C¢ü¤AiÀĪÀĪÀ£ÀÄß ¸ÀªÀÄ¥ÀðPÀªÁV eÁj ªÀiÁqÀ¨ÉÃPÀÄ. ºÁUÀÆ £ÁUÀjÃPÀgÀÄ ¸ÀzÀj C¢ü¤AiÀĪÀĪÀ£ÀÄß ¸ÀªÀÄ¥ÀðPÀªÁV G¥ÀAiÉÆÃV¹PÉƼÀî¨ÉÃPÀÄ. GzÁºÀgÀuÉUÉ d¥Á£ï gÁµÀÖçzÀ°è 2001 gÀ°è ªÀiÁ»w ºÀPÀÄÌ ¤ÃqÀ¯Á¬ÄvÀÄ. ªÉÆzÀ® ªÀµÀðzÀ¯Éèà CzsÀð «Ä°AiÀÄ£ï£ÀµÀÄÖ £ÁUÀjÃPÀgÀÄ F ºÀPÀÌ£ÀÄß G¥ÀAiÉÆÃV¹zÀgÀÄ. CªÉÄÃjPÁzÀ ªÀiÁ»w ¸ÁévÀ0vÀæ÷å PÁAiÉÄÝ 2000 ªÀ0vÀÆ CªÉÄÃjPÀ£ÀßjUÉ M0zÀÄ ªÀgÀ¥Àæ¸ÁzÀªÁVvÀÄÛ. 100 PÉÌ 90 gÀµÀÄÖ CªÉÄÃjPÀ£ÀßgÀÄ ¸ÀzÀj ºÀPÀÌ£ÀÄß ZÀ¯Á¬Ä¹zÀgÀÄ.
£ÁªÀÅ ¨sÁgÀwÃAiÀÄgÀÄ eÁUÀÈvÀgÁUÀ¨ÉÃPÀÄ. ¸ÀPÁðgÀzÀ ¥ÀæwAiÉÆ0zÀÄ PÉ®¸ÀzÀ ªÉÄÃ®Æ £ÀªÀÄä PÀtÂÚgÀ¨ÉÃPÀÄ. £É£À¦gÀ°. ¨sÀæµÁÖZÁgÀªÉ0§ gÁPÀë¸À £ÀªÀÄä£ÀÄß D½zÁÝ£É. £ÀªÀÄä£ÀÄß zÁ¸ÀåzÀ ¸À0PÉÆïÉUÀ½0zÀ §0¢ü¹zÁÝ£É. F ¸À0PÉÆïÉUÀ¼À£ÀÄß QvÀÄÛ ºÁPÀ¨ÉÃPÀÄ. £ÀªÀÄä°è C£ÉÃPÀ ¨sÁµÉUÀ½ªÉ, eÁwUÀ½ªÉ, ¥À0UÀqÀUÀ½ªÉ, zsÀªÀÄðUÀ½ªÉ. DzÀgÉ F ªÉÊ«zsÀåvÉAiÀÄ®Æè £ÀªÀÄä°è KPÀvÉ EzÉ. ¨sÁgÀwÃAiÀÄvÀ£À«zÉ. ¸Áé©üªÀiÁ£À EzÉ. E0zÉà £ÁªÀÅ F ºÀPÀÌ£ÀÄß ZÀ¯Á¬Ä¸ÉÆÃt. £ÀªÀÄä ªÀÄÄ0¢£À d£Á0UÀPÉÌ ¨sÀæµÁÖZÁgÀ gÀ»vÀ ¸ÀÄ0zÀgÀ CR0qÀ ¨sÁgÀvÀªÀ£ÀÄß GqÀÄUÉÆgÉAiÀiÁV ¤ÃqÀĪÀ F PÁAiÉÄÝ £ÀªÀÄä M0zÀÄ ªÀĺÀvÀézÀ ºÉeÉÓAiÀiÁUÀ°.
Dgï. eÉ. ¸ÀwÃ±ï ¹0Uï,
ªÀQîgÀÄ, ªÉÄʸÀÆgÀÄ