Showing posts with label ರಾಜಸ್ಥಾನ. Show all posts
Showing posts with label ರಾಜಸ್ಥಾನ. Show all posts

Thursday, July 10, 2014

ಭಾರತದ ಪ್ರಥಮ “72 ಜೀನಾಲಯ”

72 ಜೀನಾಲಯದ ಹೊರ ಆವರಣದ ಒಂದು ನೋಟ


ರಾಜಸ್ಥಾನ ರಾಜ್ಯದ  ಜಾಲೋರ ಜಿಲ್ಲೆ ಬೀನಮಾಲ್ ಬ್ಲಾಕನಲ್ಲಿ  (ತಾಲ್ಲೂಕು) ಲಕ್ಷ್ಮೀ ವಲ್ಲಭ 72 ಜೀನಾಲಯ ಇರುವುದು. ಇದು ಭಾರತ ದೇಶದ ಪ್ರಥಮ 72 ಜೀನಾಲಯವಾಗಿರುವುದು. ಬ್ಲಾಕನ ಕೇಂದ್ರ ಸ್ಥಳದಲ್ಲಿಯೇ ಈ ಮಂದಿರ ಇರುವದು. ಲುಕಡ ಪರಿವಾರದವರು ಕಟ್ಟಿಸಿರುವ ಈ ಜೀನಾಲಯದಲ್ಲಿ ಜೈನ ಧರ್ಮದ 72 ತೀರ್ಥಂಕರರ ವಿಗ್ರಹಗಳು ಇರುವುದು
72  ಜೀನಾಲಯದ ಇದರ
 ಸಂಪೂರ್ಣ ನೋಟ
ವಿಶೇಷವಾಗಿದೆ. ಜೈನ ಧರ್ಮದ ಅನುಯಾಯಿಗಳಿಗೆ ತಮ್ಮ ಎಲ್ಲಾ ತೀರ್ಥಂಕರರನ್ನು ಒಂದೇ ಮಂದಿರದಲ್ಲಿ ನೋಡುವ ಸೌಭಾಗ್ಯವನ್ನು ಈ ಜೀನಾಲಯ ಒದಗಿಸಿರುವುದು. ತನ್ನದೇ ಆದ ವಿಶಿಷ್ಠ ಅತ್ಯಂತ ಸುಂದರವಾದ ಶಿಲ್ಪ ಕಲೆಗಳಿಂದ ನಿಮೀ೯ತವಾದ ಈ ಜೈನ ದೇವಾಲಯ ಆಧುನಿಕ ಶಿಲ್ಪಕಲೆಯ ಪ್ರತಿಬಿಂಬವಾಗಿರುವುದು. ಬಿಳಿಯಾದ ಮಾರ್ಬಲಗಳಿಂದ ರಚಿತವಾದ ಈ ಮಂದಿರ ರಾಜಸ್ಥಾನದ ಒಂದು ಹೆಮ್ಮೆಯಾಗಿರುವುದು.  ಜಾಲೋರ-ಬೀನಮಾಲ ಮುಖ್ಯ ರಸ್ತೆಯ ಬದಿಯಲ್ಲಿಯೇ ಇರುವ ಇದು ದಾರಿಯಲ್ಲಿ ಸಾಗುವ ಎಲ್ಲರನ್ನು ಕೈ ಬೀಸಿ ಕರೆಯುತ್ತಿರುವುದು.
ವಿಶಾಲವಾದ ದೇವಾಲಯದ ಹೊರಗಿನ ಆವರಣ, ಜೀನಾಲಯದಲ್ಲಿ ಇರುವ ಪಾರಿವಾಳಗಳು, ಹಸಿರು ಹುಲ್ಲುಗಳು, ಸುಂದರ ಹೂವುಗಳು ಬೇವಿನ ಮರದ ಕೆಳಗಿನ ತಂಪಾದ ಗಾಳಿ ರಾಜಸ್ಥಾನದ ಊರಿ ಬಿಸಿಲಿನಲ್ಲಿಯೂ ನಾವು ಬೇರೆ ಯಾವುದೋ ಲೋಕದಲ್ಲಿರುವ ಅನುಭವವನ್ನು ನೀಡುವುದು.
ಸುಮಾರು 140 ಕೊಠಡಿಗಳ ಧರ್ಮಶಾಲೆ, ಭೋಜನಶಾಲೆ ಈ ಎಲ್ಲವೂ ಮಂದಿರದ ಆವರಣದಲ್ಲಿಯೇ ಇದ್ದು ಬರುವ ಪ್ರವಾಸಿಗರಿಗೆ ಸೇವೆಯನ್ನು ಒದಗಿಸುತ್ತಿರುವುದು.
ರಾಜಸ್ಥಾನದ ಪ್ರವಾಸಕ್ಕೆಂದು ನೀವು ಬಂದರೆ  ತಪ್ಪದೇ ಈ ದೇವಾಲಯದ ಸೌಂದರ್ಯವನ್ನು ಸವಿದೇ ಹೋಗಿರಿ. 72 ತೀರ್ಥಂಕರರನ್ನು ತಾವು ಸಹಾ ದರ್ಶನ ಮಾಡಿರಿ.


72 ಜೀನಾಲಯದ ಮುಖ್ಯ ದ್ವಾರದ 
ಒಂದು ನೋಟ

72 ಜೀನಾಲಯದ ಎರಡು 
ಬದಿಯ ನೋಟ
72 ಜೀನಾಲಯದ ಹೊರ 
ಆವರಣದ ಒಂದು ನೋಟ


- ಮುಖ್ಯ ದ್ವಾರದ ಸೌಂದರ್ಯ ಹೆಚ್ಚಿಸಿರುವ ಪಾರಿವಾಳಗಳು


                 72  ಜೀನಾಲಯದ ಇದರ ಸಂಪೂರ್ಣ ನೋಟ



ವರದಿ , ವಿವೇಕ ಬೆಟ್ಕುಳಿ,

Monday, July 7, 2014

ವಿಶ್ವದ ಮೊದಲ ಹಡಗು ಮಂದಿರ - ವರದಿ * ವಿವೇಕ ಬೆಟ್ಕುಳಿ

ರಾಜಸ್ಥಾನ ರಾಜ್ಯದ ಜಾಲೋರ ಜಿಲ್ಲೆಯಲ್ಲಿ ಬರುವ ಜಿಲ್ಲೆಯ ಸಾಯಲಾ ಬ್ಲಾಕನ ಮಂಡವಾಲಾ ಗ್ರಾಮದಲ್ಲಿ ವಿಶ್ವದ ಪ್ರಥಮ ಹಡಗು ಮಂದಿರವಿರುವುದು. ಜಾಲೋರದಿಂದ 20-22 ಕಿ. ಮೀ ದೂರವಿರುವ ಜೈನ ಮಂದಿರವನ್ನು  ಜಹಾಜ್ ಮಂದಿರವೆಂದೆ ಕರೆಯುವರು. ಜಹಾಜ್ ಎಂದರೆ ಹಡಗು ಎಂದರ್ಥ.

             ಹಡಗು ಮಂದಿರದ ಒಂದು ನೋಟ

ಶ್ರೀ ಕಾಂತಿಸಾಗರಸೂರಿ ಸ್ಮಾರಕ ಟ್ರಸ್ಟನವರು ನಿಮಿ೯ಸಿರುವ ಮಂದಿರ ತನ್ನದೇ ಆದ ವಿಶೇಷತೆಯನ್ನು ಹಂದಿರುವುದುಕ್ರಿ. 1992 ರಲ್ಲಿ ಕಟ್ಟಲ್ಪಟ್ಟ   ಜೈನ ಮಂದಿರ ಮಾರ್ಬಲನಿಂದ ನಿಮಿ೯ತವಾಗಿರುವುದು. ಮಂದಿರದ ಒಳಗೆ ಬಳಕೆ ಮಾಡಿರುವ ಎಲ್ಲಾ ಸಾಮಗ್ರಿಗಳು ತಳ ತಳ ಹೊಳುಯುವಂತಹ ಸಾಮಗ್ರಿಯಾಗಿದೆ. ಸಂಪೂರ್ಣ ಮಂದಿರ ಶ್ರೀಮಂತಿಕೆಯಿಂದ ತುಂಬಿ ತಳ ತಳಸಿರುವುದು.  ಪುರಾಣ ಕಾಲದ ಮಂದಿರಗಳನ್ನು ನೋಡುತ್ತಾ ಅವುಗಳನ್ನು ವಣಿ೯ಸುತ್ತಾ ಇತಿಹಾಸ ಕೆದಕುತ್ತಾ ಇರುವ ನಾವು ಆಧುನಿಕ ಯುಗದಲ್ಲಿ ಹೆಚ್ಚು ವೈಭವೋಪ್ರೇರಿತ ಮಂದಿರಗಳನ್ನು ನಿಮಿ೯ಸಿರುವುದು ಕಡಿಮೆ ಇರುವುದುಇಂತಹ ಸಂದರ್ಭದಲ್ಲಿ ಜೈನ ಸಮುದಾಯವರು ನಿಮಿ೯ಸಿರುವ ಹಡಗು ಮಂದಿರ ಎಲ್ಲರ ಆಕರ್ಷಣೆಯ ಬಿಂದುವಾಗಿರುವುದುಮುಂದೆ ಇದು ಜೈನ ಧರ್ಮದ ಇತಿಹಾಸ ಆಗುವುದರಲ್ಲಿ ಯಾವ ಸಂದೇಹವು ಇಲ್ಲ.
ದೇವಾಲಯದ ಹೆಸರೆ ಹೇಳುವಂತೆ ಇದು ಹಡಗು ಮಂದಿರ. ದೂರದಿಂದ ನೋಡಿದಾಗ ದೊಡ್ಡದಾದ ಹಡಗು ಬಂದರಿನಲ್ಲಿ ಬಂದು ನಿಂತಂತೆ ಕಾಣುವುದು. ರಾತ್ರಿಯಲ್ಲಿ ನೋಡಿದಾಗ ಇದು ದೇವಾಲಯ ಎಂದು ಹೇಳಲು ಬಾಯಿ ಬರದು ಬದಲಾಗಿ ಸಮುದ್ರದಲ್ಲಿ ನಿಂತಿರುವ ಹಡಗಾಗಿರುವುದು.
ಹಡಗು ಮಂದಿರದ ಒಳಗೆ ತಳ ತಳಿಸುವ ಮಾಬ್ರಲ್, ವಿವಿಧ ಕಲ್ಲುಗಳು, ಅಗತ್ಯಕ್ಕೆ ತಕ್ಕ ಲೈಟ್ ವ್ಯವಸ್ಥೆ ಎಲ್ಲವು ಮಂದಿರದ ಸೌಂಧರ್ಯವನ್ನು ಇಮ್ಮಡಿಗೊಳಿಸಿರುವುದು.
ರಾಜಸ್ಥಾನದ ಪ್ರಮಾಸಕ್ಕಾಗಿ ತಾವುಗಳು ಬಂದರೆ ಮಂದಿರವು ಸಹಾ ನಿಮ್ಮ ಯೋಜನೆಯಲ್ಲಿರಲಿ. ಇಲ್ಲಿ ತಮಗೆ ಬೇಕಾದ ವಸತಿ ಮತ್ತು ಊಟದ ವ್ಯವಸ್ಥೆಯೂ ಇರುವುದು.

ಹಡಗು ಮಂದಿರದ ರಾತ್ರಿಯ ಒಂದು ನೋಟ

                   ಮಂದಿರದಲ್ಲಿ ಇರುವ  ಪ್ರತಿಮೆ


ಮಂದಿರದ ಒಳಗಿನ ತಳ ತಳಿಸುವ ಕಂಬಗಳ ಸಾಲು

ಇಲ್ಲಿ ಕಾಣಿಕೆ ಹಾಕುವುದು ಹಡಗಿನಲ್ಲಿಯೇ ಆಗಿರುವುದು

                       ಮಂದಿರದ ಮೇಲ್ಭಾಗದ ಒಂದು ನೋಟ





                                                                                                                              ವಿವೇಕ ಬೆಟ್ಕುಳಿ

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...