Sunday, November 3, 2013

ಕನ್ನಡಕ್ಕೊಂದೇ ’ರಾಗ’-ಅದು ರಾ.ಗಣೇಶ - V R BHAT

ಕನ್ನಡನಾಡಿಗಾಗಿ ಯಾರ‍್ಯಾರು ಏನೆಲ್ಲಾ ಸೇವೆಮಾಡಿದರು ಎಂಬುದು ಬೇರೆ ವಿಷಯ.
ಕನ್ನಡ ನೆಲದಲ್ಲಿಯೇ ಅರಳಿದ ’ಅವಧಾನ’ ಕಲೆ ಮಾಸಿಹೋದಾಗ ಹೊಸದಾಗಿ ಅದನ್ನು ಪ್ರತಿಷ್ಠಾಪಿಸಿದವರು ಶತಾವಧಾನಿ ಡಾ| [’ರಾಗ’]ರಾ.ಗಣೇಶರು. ಕನ್ನಡದಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ, ವಾಚಿಸಿದ್ದಾರೆ, ಪ್ರವಚಿಸಿದ್ದಾರೆ, ಉಪನ್ಯಾಸಗಳಂತೂ ಯಾರೂ ಮಾಡದಷ್ಟು ಹೇರಳ ಸಂಖ್ಯೆಯಲ್ಲಿ ಅವರಿಂದ ನಡೆದಿವೆ. ಅವರ 
ಪಾಂಡಿತ್ಯ ಕನ್ನಡ ಜನರಿಗೆ ಪರಿಚಯವಿರದ್ದಲ್ಲ; ಆದರೆ ಕರ್ನಾಟಕ ಸರಕಾರಕ್ಕೆ ಇನ್ನೂ ಅವರ ಪರಿಚಯವಿಲ್ಲ!! ಕೆಲವರು ಕೆಲವು ಪ್ರಕಾರದ ಸಾಹಿತ್ಯ ಸೇವೆಯಲ್ಲಿ ಮಾತ್ರ ತೊಡಗಿಕೊಳ್ಳುತ್ತಾರೆ; ಗಣೇಶರದ್ದು ಹಾಗಲ್ಲ, ಕನ್ನಡದಲ್ಲಿ ಈಗಿರುವ ಪರಮೋಚ್ಚ ವ್ಯಾಖ್ಯಾನಕಾರರು ಮತ್ತು ಅತಿಶ್ರೇಷ್ಠ ವಿದ್ವಾಂಸರು ಎಂದರೆ ಗಣೇಶರೊಬ್ಬರೇ. ಅವರ ನೆನಪಿನ ಶಕ್ತಿಯಂತೂ ಸಾಗರದಷ್ಟು ಅಗಾಧ. ಪ್ರೀತಿಯಿಂದ, ಅಭಿಮಾನದಿಂದ ಹೇಳುವುದಾದರೆ ಕನ್ನಡಕ್ಕೊಂದೇ ’ರಾಗ’-ಅದು ರಾ.ಗಣೇಶ.




 V.r. Bhat

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......