ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, September 18, 2014

ಜಿಜ್ಙಾಸೆ


ಭರತ ಎಂದರೆ ಯಾರು ?
ನಮ್ಮ ಇತಿಹಾಸ/ಪುರಾಣದಲ್ಲಿ ಎಷ್ಟು 'ಭರತ'ರಿದ್ದಾರೆ?
ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬಂದಿದ್ದು ಇವರಲ್ಲಿ ಯಾರಿಂದ?



೧ . ಅಗ್ನಿಯ ಮಗ ೨.,ಋಷಭ ದೇವನ ಮಗ ೩ ಶಕುಂತಲೆ-ದುಷ್ಯಂತರ ಮಗ ೪.ಧಶರಥನ ಮಗ ೫. ನಾಟ್ಯ ಶಾಸ್ತ್ರವನ್ನು ಬರೆದವನು. ಇವರಲ್ಲಿ ಚಕ್ರವರ್ತಿಗಳಾಗಿ ಮೆರೆದವರು ೧ . ಋಷಭದೇವನ ಮಗ ೨ ದುಷ್ಯಂತನ ಮಗ. ಇವರಲ್ಲಿ ಪುರಾತನನಾದವನು ಋಷಭದೇವ ಹಾಗು ಜಯಂತಿಯರ ಮಗನಾದ ಭರತ. ಭಾಗವತ , ವಿಷ್ಣು ಪುರಾಣಗಳ ಪ್ರಕಾರ ಇವನು ಆಳಿದ ಭೂ ಭಾಗವೇ ಭರತವರ್ಷ ಅಥವ ಭಾರತ. (ಜೈನ ಧರ್ಮದಲ್ಲಿ ಬರುವ ಬಾಹುಬಲಿಯ ಸೋದರ ಭರತನೂ ಇವನೆ). ’ಅಜನಾಭಂ ನಾಮೈತದ್ವರ್ಷಂ ಭಾರತಮಿತಿ ಯತ ಆರಭ್ಯ ವ್ಯಪದಿಶಂತಿ" ( ಭಾಗವತ ಪಂಚಮ ಸ್ಕಂದ ಏಳನೇ ಅಧ್ಯಾಯ ಮೂರನೇ ಶ್ಲೋಕ ; ಅಜನಾಭವರ್ಷವೆಂದು ಹೆಸರಾಗಿದ್ದ ಈ ವರ್ಷ(ಭೂ ಭಾಗಕ್ಕೆ)ಕ್ಕೆ ಭರತ ಚಕ್ರವರ್ತಿಯ ಕಾಲದಿಂದ ಭರತವರ್ಷವೆಂದು ಹೆಸರಾಯ್ತು.). ಇವನ ನಂತರ ಬಂದ ದುಷ್ಯಂತನ ಮಗ ಚಕ್ರವರ್ತಿಯಾಗಿ ಇಡೀ ಭೂಮಂಡಲವನ್ನಾಳಿದ . ಅವನಿಂದ ಆ ವಂಶಕ್ಕೆ ಭರತವಂಶವೆಂದು ಹೆಸರಾಯಿತೆಂದು ಹೇಳಿದ್ದರೂ ಅವನಿಂದ ಈ ಭೂ ಭಾಗಕ್ಕೆ ಭಾರತವೆಂದು ಹೆಸರಾಯ್ತೆಂದು ಭಾಗವತದಲ್ಲಿ ಹೇಳಿಲ್ಲ.

ಋಷಭನ ಮಗ ಭರತ ವಾನಪ್ರಸ್ಥಕ್ಕೆ ಹೋದ ಮೇಲೆ ಭರತ ಮುನಿಯೆನಿಸಿಕೊಂಡ. ಜಿಂಕೆಮರಿಯೊಂದರೆ ಮೋಹಕ್ಕೆ ಬಿದ್ದು ಮರಣ ಹೊಂದಿದ. ನಂತರ ಜಿಂಕೆಯಾಗಿ ಜನ್ಮ ತಾಳಿದ. ಮುಂದಿನ ಜನ್ಮದಲ್ಲಿ ಅಂಗಿರಸ ಮುನಿಗೆ ಭರತನೆಂಬ ಮಗನಾಗಿ ಮತ್ತೆ ಜನ್ಮತಾಳಿದ. ಅವನೇ ಜಡ ಭರತ


ರಾಜೇಶ್ ಶ್ರೀವತ್ಸ, 



No comments:

Post a Comment