Tuesday, July 12, 2011

ದೂರವಿಡೆ ಸಖಿ

ದೂರವಿಡೆ ಸಖಿ
ದೂರವಿಡೆ |
ಕೈಯವೀಣೆಯನು ದೂರವಿಡೆ ||

ವೀಣೆಯ ನಾದವ ಕೇಳಿ ಚಂದ್ರಮನ
ರಥದ ಜಿಂಕೆಗಳು ಓಡದಿವೆ |
ನೆರಳು ಹೊರಳುತಿದೆ ; ಇರುಳು ಕೆರಳುತಿದೆ
ಬೆಳದಿಂಗಳ ಮಳೆ ಬಾರದಿದೆ ||

ನೋವಿನ ಪರಿಯನು ನೊಂದವರರಿವರು
ನೋಯದೆ ನೋಯುವ ಬಗೆಯುಂಟೆ ?
ಚಂದಿರನಾದನು ಬೆಂಕಿಯ ಗೂಡು
ನೊಂದ ಬಳಿಕ ನೀನದ ನೋಡು ||

ಮರುಳುಗೊಳ್ಳುವುವು ಚುಕ್ಕಿಯ ಜಿಂಕೆ
ವೀಣೆಯ ಮುಚ್ಚಿಡೆ ಜೀವಸಖೀ |
ಚಂದ್ರ ಮಹೋತ್ಸವ ಮುಂದಕೆ ಸಾಗಲಿ
ವಿರಹಿಗಳಿಗೆ ಕಾರಿರುಳೆ ಸಖೀ ||

- ಹೆಚ್. ಎಸ್. ವೆಂಕಟೇಶಮೂರ್ತಿ

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......