Friday, November 22, 2013

ಕಾವ್ಯ-ಚಂದ್ರ…. - ಚೇತನ್ ಸೊಲಗಿ ,

ನಾ ನಿನ್ನ ಕಣ್ಣುಗಳ ಬಿಂಬವಾದೆ
ನೀ ಕಂಡ ಗಳಿಗೆಯಿಂದ
ಮನದ ರೂಪಸಿಯೇ ಚೆಲುವ ಧಾತ್ರಿಯೇ
ಬಾರೆ ನನ್ನ ಚೆಲುವೆ
ನಿನ್ ಕಣ್ಣ ನೋಟಲಿ ಪೂರ್ಣ ಚಂದಿರನೆ
ಕಸದ ಕಣಿವೆಯಾದ
ಚಿವುಟದಿರು ನೀನು ಮನದ ಪ್ರೀತಿ
ನೀ ಬಾರೆ ಮನದ ಒಡತಿ
 ಚೇತನ್ ಸೊಲಗಿ
ಶೃಂಗಾರ ಕಾವ್ಯವದು ನನ್ನಲಿಹುದು
ಸಿರಿವಂತ ನಾನು ಅಲ್ಲ
ಸಿರಿತನಕ್ಕಿಲ್ಲ – ಬಡತನಕ್ಕಿಲ್ಲ
ಪ್ರೇಮ – ಕಾವ್ಯ ಚಂದ್ರ
ನಗುಮೊಗದ ಚೆಲುವೆ ನೀ ಬಾರೆ ನೀರೆ
ಮನದೇಕ ಒಡತಿಯಾಗಿ
ತೋರುವೆನು ಅದನೆ ನೀಡುವೆನು ಅದನೆ
ಪ್ರೇಮ ಚರಿತೆ ಕಾವ್ಯ.
ಸ್ವಪ್ನಕ್ಕೆಲ್ಲಿಹುದು ಸೃಜನಸಾರ
ನಿನ್ನೊಲವೆ ಮಿಗಿಲು ಎನಗೆ
ನನ್ನೆದೆಯ ಧಿಮಿತಿಗಳ
ಕೂಡಿ ಹಾಡಿ ಕಟ್ಟೋಣ ಪ್ರೇಮದೂರು
ಪ್ರೇಮಕ್ಕೆಲ್ಲಿಹುದು ಮೇಲುಕೀಳು
ಜಗದೇಕ ರೂಪವದುವೇ
ಜಗದ ಬಾಗಿಲಾ ಜಗಲಿಯಲ್ಲಿಯೂ
ನಾ ನೆನೆವೆ ನಿನ್ನ ಮನವ.

-  ಚೇತನ್ ಸೊಲಗಿ ,

No comments:

Post a Comment

ಒಂದು ಸಂಕೀರ್ಣ ವಿಷಯದ ಬಗ್ಗೆ ಸರಳವಾಗಿ ತಿಳಿದುಕೊಳ್ಳೋಣ ಬನ್ನಿ! -ರೋಹಿತ್ ಚಕ್ರತೀರ್ಥ

ಇಂದು ಪ್ರಧಾನಿ ಮೋದಿಯವರು ಮಾನ್ಯ ಜನರಿಗೆ ಸಾಮಾನ್ಯವಾಗಿ ಅರ್ಥವಾಗದ ಅಥವಾ ತಲೆಯ ಮೇಲಿಂದ ಹಾರಿಹೋಗುವ ಒಂದು ವಿಷಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಮೂರು ಸಂಗತಿಗಳು...