Monday, October 7, 2013

ಮೊದಲ ಮುಂಗಾರ - ರಾಜೇಂದ್ರ ಪ್ರಸಾದ್,



ಮೊದಲ ಮುಂಗಾರ
ಮಳೆಗೆ ಮೈಯೊಡ್ಡಿ
ನಿಂತ ಭೂತಾಯ
ದೇಹ ಘಮ್ ಎಂದಾಗ
ನನ್ನ ಮಾತು ಮಥಿಸಿ,
ಕಾವ್ಯ ಕಾರಣವಾಗುತ್ತದೆ.

ರಗರಗನೆ ಉರಿವ
ಸೂರ್ಯನ ಬೆಳಕು
ಚಂದ್ರನಿಗೆ ನೆರಳಾಗಿ
ಬೆಳದಿಂಗಳಾದಾಗ
ನನ್ನ ಭಾವ ಬಸಿದು
ಜೀವ ಚಿಲುಮೆಯಾಗುತ್ತದೆ.
ರಾಜೇಂದ್ರ ಪ್ರಸಾದ್

ಕೆಂಡದ ಬಣ್ಣದ
ಮಲ್ಲಿಗ ಮೈ..ಮುಖದ
ಅವಳ ಒಲವಿನ ನಗು
ಶಬ್ದತೀರದಲೆ ಚುಂಬಿಸಿದಾಗ
ಹೃದಯ ಹೂಬನವಾಗುತ್ತದೆ.

ಭೂಮಿಗೀತ ಬ್ಲಾಗಿಂದ, 

No comments:

Post a Comment

“ಇಗೋ, ಬೆಂಗಳೂರು ಹೀಗಿತ್ತು”ಜಿ. ವೆಂಕಟಸುಬ್ಬಯ್ಯ -

“ ಇಗೋ , ಬೆಂಗಳೂರು ಹೀಗಿತ್ತು ” ಜಿ . ವೆಂಕಟಸುಬ್ಬಯ್ಯ   ಅರವತ್ತು ವರ್ಷಗಳ ಹಿಂದೆ ಬೆಂಗಳೂರು ಇಷ್ಟು ದೊಡ್ಡದಾಗಿರಲಿಲ್ಲ . ಆಗ ಎರಡು ಬೆಂಗಳೂರು ಇತ್ತು ...