Sunday, August 14, 2011

ಲಾಭವೆ ನನ್ನುಸಿರು...?!




ಕಾಸಿದ್ದರೆ ಕೈಲಾಸ
ಕಾಲಿದ್ದವರಂತೆ ಇಲ್ಲದರದ್ದೂ ಇದೇ ವಿಲಾಸ...
ಜಗತ್ತು ಸದಾ ಎತ್ತರದಲ್ಲಿರುವವರ ಪದತಲದ ಗುಲಾಮ,
ಓಲೈಕೆ ಹಲ್ಕಿರಿಕೆ....ಮೇಲೇರಿದವ ಎದುರಾದಾಗಲೆಲ್ಲ
ಹಚ್ಚುತ್ತ ಕೃತಕ ಪ್ರೀತಿಯ ಮುಲಾಮ/
ಹಿಂದೆಯೂ ಉಳ್ಳವರ ಬಾಲವಾಗಿ
ಇಲ್ಲದವರ ತಲೆಭಾರವಾಗಿ....
ಮುಖನೋಡಿ ಮಣೆ ಹಾಕುತ್ತಲೇ ಇತ್ತು
ಈ ಜಗತ್ತು,
ಲಾಭದ ದೂರಾಲೋಚನೆಯ ಡೊಗ್ಗು ಸಲಾಮ...
ಇದು ಹಾಕುತ್ತಲೇ ಇದೆ
ಹಾಕುತ್ತಲೇ ಇರುತ್ತದೆ ನೋಡಿ
ಇದೆ ಜಗದ ಹಣೆಬರಹ...!
ಇದೊಂಥರ ಸಭ್ಯ ಹರಾಮ?!//

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...