Thursday, August 18, 2011

ಕೆ(ಕ)ಟ್ಟಾ ಮೇಲೆ ಬುದ್ಧಿ ಬಂತು..!

ಕಡೆಗೂ ಬೂ ಸಿ ಯ ಕಾಟದಿಂದ ಬಾಪೂಜಿ ಪಾರಾಗಿದ್ದಾರೆ! ಗಾಂಧೀ ಮೂರ್ತಿಯೆದುರು ಭ್ರಷ್ಟಾಚಾರ ವಿರೋಧಿಸಿ ಧರಣಿ ಕೂರುವ ತಮ್ಮ ಅದ್ಭುತ ( ಅವರ "ಮಾನಸಿಕ ಪುತ್ರ" 'ರಸಿಕ' ರೇಣು ಕೊಟ್ಟ ಅದ್ಭುತ ಐಡಿಯಾನೆ ಇದಾಗಿರಬಹುದ ಅನ್ನೋ ಗುಮಾನಿ ನನಗೆ! ) ಆಲೋಚನೆಯಿಂದ ಹಿಂದೆಸರಿದು ಇದೂ ತಮ್ಮ ಇನ್ನೊಂದು ಬೂಸಿ ಅನ್ನೋದನ್ನ ಸ್ವಯಂ ಸಾಬೀತು ಪಡಿಸಿದ್ದಾರೆ.ಹಿಂದೆ ಸರಿಯಲು ಇರೋ ಕಾರಣ ಮಾತ್ರ ಇನ್ನೂ ನಿಗೂಢ! ಬಹುಷಃ ತಮ್ಮ 'ಜಿಗರ್ ಕಾ ತುಕುಡ' ಕಟ್ಟಾ ಪರಪ್ಪನ ಅಗ್ರಹಾರದ ಗೆಸ್ಟ್ ಹೌಸಿಗೆ ಮೊದಲೆ ಹೋದವ ತಮಗೂ ಪಕ್ಕದ ಸೆಲ್ ಬುಕ್ ಮಾಡಿಸಿ ಅದನ್ನ ಕಸ ಹೊಡೆದು ಕ್ಲೀನ್ ಮಾಡಿ ಇಟ್ಟು ತಮಗಾಗಿಯೇ ಕಾದು ಕೂತಂತೆ ನೆನ್ನಿನಿರುಳು ಕೆಟ್ಟ ಕನಸೇನಾದರೂ ಬಿದ್ದಿರಬಹುದ?! ಪಾಪ ಧರ್ಮಸ್ಥಳದ ಮಂಜ ಗಾಂಧೀಜಿಯಷ್ಟು ಪುಣ್ಯವಂತನಾಗಿರ್ಲಿಲ್ಲ,ಸರ್ಕಾರಿ ಆಣೆಗೆ ಅನಿವಾರ್ಯ ಸಾಕ್ಷಿಯಾಗಿ ಸಿಕ್ಕಿ ಬಿದ್ದು ಹಡಾಲೆದ್ದು ಹೋಗಿದ್ದ ನತದೃಷ್ಟನಾಗಿದ್ದನವ!

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...