Sunday, August 14, 2011

೬೪ ಯಾಕಾಯ್ತು? ೬೩ ಆಗಿತ್ತು ಅದಕ್ಕೆ?!


ನಮ್ಮ 'ಭಾರ'ತಕ್ಕೆ ೬೪ರ ಮರು ಹುಟ್ಟಿನ ಹುಸಿ ಸಂಭ್ರಮ! ನಾನೂ ಇದೇ ತಿಂಗಳಲ್ಲಿ ಕಣ್ಣು ಬಿಟ್ಟವನಾದ್ದರಿಂದ ನನಗೂ ಇದರ ಸಂಭ್ರಮದಲ್ಲಿ ಶರೀಕನಾಗುವ ಹಂಬಲ.ಆದರೆ ಸುಮ್ಮನೆ ಕೂತರೂ ಕೂದಲು-ಉಗುರು ಕಳೆಯಂತೆ ಬೆಳೆಯೋ ಹಾಗೆ ವಯಸ್ಸಂತೂ ಆಗೇ ಆಗುತ್ತದೆ ಎನ್ನುವಂತೆ ;ಕೇವಲ ಕಾಲಚಕ್ರದ ಅರೆ ಮತ್ತೊಮ್ಮೆ ತಿರುಗಿದ್ದಕ್ಕೆ ವರ್ಷ ಇನ್ನೊಂದಾಯ್ತು ಅಂತ ಸಂತೋಷಪಡಲೇ? ಇಲ್ಲ ನಮ್ಮೆಲ್ಲರ ತಾಯಿ ಭಾರತಿಯ ಎದೆಯನ್ನ ಮನಸೋ ಇಚ್ಛೆ ಬಗೆದು ಮಗುಮ್ಮಾಗಿ ತಮ್ಮ ತಿಜೋರಿ ತುಂಬಿ ಕೊಂಡ ಸ'ಗಣಿ' ತಿಂದವರನ್ನ ನೋಡಿ ಬೀಗಲೇ? ಇಲ್ಲ ,೨ಜಿ-೩ಜಿ ಎಂದು ಎಲ್ಲರನ್ನೂ ಜೀ ಎಂದೇ ಕರೆಯುತ್ತಾ ಅವಳೊಡಲಿಗೆ ಕಾನೂನು ಬದ್ಧವಾಗಿಯೇ ಕನ್ನ ಹಾಕುತ್ತಿರುವ ಖದೀಮರನ್ನ ಕಂಡು ಎದೆಯುಬ್ಬಿಸಲೆ? ಏನೊಂದೂ ಸ್ಪಷ್ಟವಾಗದೆ ಕೆಕರುಮೆಕರಾಗಿದ್ದೇನೆ! ಗೊಂದಲ ಜಾರಿಯಲ್ಲಿದೆ...

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...