Saturday, March 19, 2011

ಅನುಗಾಲವು ಚಿಂತೆ

ಅನುಗಾಲವು ಚಿಂತೆ ಜೀವಕೆ ಮನವು
ಶ್ರೀರಂಗನೋಳ್ ಮೆಚ್ಚುವ ತನಕ

ಸತಿಯಿದ್ದರು ಚಿಂತೆ, ಸತಿಯಿಲ್ಲದ ಚಿಂತೆ
ಮತಿಹೀನ ಸತಿಯು ಆದರು ಚಿಂತೆ
ಪೃಥ್ವಿಯೊಳಗೆ ಸತಿ ಕಡು ಚೆಲ್ವೆಯಾದರೆ
ಮಿತಿ ಮೊದಲಿಲ್ಲದ ಮೋಹದ ಚಿಂತೆ

ಬಡವನಾದರು ಚಿಂತೆ, ಬಲ್ಲಿದನಾಗೆ ಚಿಂತೆ
ಹಿಡಿ ಹೊನ್ನು ಕೈಯೊಳು ಇದ್ದರು ಚಿಂತೆ
ಪೊಡವಿಯೊಳಗೆ ನಮ್ಮ ಪುರಂದರ ವಿಠ್ಠಲನ
ಬಿಡದೆ ಧ್ಯಾನಿಸು, ಚಿಂತೆ ನಿಶ್ಚಿಂತೆ

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...