Saturday, March 19, 2011

ಅನುಗಾಲವು ಚಿಂತೆ

ಅನುಗಾಲವು ಚಿಂತೆ ಜೀವಕೆ ಮನವು
ಶ್ರೀರಂಗನೋಳ್ ಮೆಚ್ಚುವ ತನಕ

ಸತಿಯಿದ್ದರು ಚಿಂತೆ, ಸತಿಯಿಲ್ಲದ ಚಿಂತೆ
ಮತಿಹೀನ ಸತಿಯು ಆದರು ಚಿಂತೆ
ಪೃಥ್ವಿಯೊಳಗೆ ಸತಿ ಕಡು ಚೆಲ್ವೆಯಾದರೆ
ಮಿತಿ ಮೊದಲಿಲ್ಲದ ಮೋಹದ ಚಿಂತೆ

ಬಡವನಾದರು ಚಿಂತೆ, ಬಲ್ಲಿದನಾಗೆ ಚಿಂತೆ
ಹಿಡಿ ಹೊನ್ನು ಕೈಯೊಳು ಇದ್ದರು ಚಿಂತೆ
ಪೊಡವಿಯೊಳಗೆ ನಮ್ಮ ಪುರಂದರ ವಿಠ್ಠಲನ
ಬಿಡದೆ ಧ್ಯಾನಿಸು, ಚಿಂತೆ ನಿಶ್ಚಿಂತೆ

No comments:

Post a Comment

ಶ್ರೀ ರಾಮ ನವಮಿಯ ಶುಭಾಶಯಗಳು

 ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಪ್ರಭುವಾಗದೆ ಪ್ರತಿನಿಧಿಯಾಗಿ ಸಾಮಾನ್ಯರಿಗೂ ಬೆಲೆ ಕೊಟ್ಟು , ಸ್ವಂತದ್ದಾಗಲಿ, ಸಂಸಾರದ್ದಾಗಲಿ, ಸಮಾಜದ್ದಾಗಲಿ, ಹೆಣ್ಣಾಗಲಿ, ಗಂಡಾಗ...