Monday, March 28, 2011

ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ

ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ

ಮನವೆಂಬೊ ಮಂಟಪ
ತನುವೆಂಬೊ ಹಾಸು ಮಂಚ
ಜ್ಞಾನವೆಂಬೊ ದಿವ್ಯದೀಪದ ಬೆಳಕಲಿ
ಸನಕಾದಿ ವಂದ್ಯ ನೀ ಬೇಗ ಬಾರೊ

ಪಂಚದೈವರು ಯಾವಾಗಲೂ ಎನ್ನ
ಹೊಂಚು ಹಾಕಿ ನೋಡುತಾರೆ
ಹೊಂಚುಗಾರರು ಆರು ಮಂದಿ
ಆವ ಹಿಂದು ಮುಂದಿಲ್ಲದೆ ಎಳೆಯುತಾರೆ

ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆನೊ
ಇನ್ನಾದರೂ ಎನ್ನ ಕೈ ಪಿಡಿಯೊ
ಘನ್ನ ಮಹಿಮ ಸಿರಿ ಪುರಂದರ ವಿಠ್ಠಲ
ಮನ್ನಿಸಿ ಎನ್ನನು ಕಾಯಬೇಕೊ

No comments:

Post a Comment

“ಇಗೋ, ಬೆಂಗಳೂರು ಹೀಗಿತ್ತು”ಜಿ. ವೆಂಕಟಸುಬ್ಬಯ್ಯ -

“ ಇಗೋ , ಬೆಂಗಳೂರು ಹೀಗಿತ್ತು ” ಜಿ . ವೆಂಕಟಸುಬ್ಬಯ್ಯ   ಅರವತ್ತು ವರ್ಷಗಳ ಹಿಂದೆ ಬೆಂಗಳೂರು ಇಷ್ಟು ದೊಡ್ಡದಾಗಿರಲಿಲ್ಲ . ಆಗ ಎರಡು ಬೆಂಗಳೂರು ಇತ್ತು ...