Monday, September 9, 2013

ಮಹಾಕವಿ ಮಲಗಿದ್ದಾನೆ - ಬೇಲೂರು ರಘುನಂದನ


ಮಹಾಕವಿ ಮಲಗಿದ್ದಾನೆ
ಮುಂಜಾವಿನ ಹಸುರರವಿ
ಹೆಸರಿರದ ಉಸಿರನು
ಜಗಕೆ ಹಂಚಲು
ಇವನ ಬಳಿ ಕಳಿಸಿದ್ದಾನೆ

ಶ್ರೀ ಬೇಲೂರು ರಘುನಂದನ್
ಕಾಡಿನ ಉನ್ಮಾದಕೆ
ಭುವಿ ಗಗನದ ಮಿಲನಕ್ಕೆ
ಹೂಮಳೆಯ ಸ್ಕಲನ
ಜೀವ ಹುಟ್ಟುವ ನೆಲದಿ
ಗಟ್ಟಿಯಾಗಿ ಬದುಕ
ಗುಟ್ಟು ಹೇಳಲು
ಮಹಾ ಕವಿ ಮಲಗಿದ್ದಾನೆ

ಮಣ್ಣು ಕಣ್ಣಾಗಿ ಕಣ್ಣು ಹಣ್ಣಾಗಿ
ನೀರ ಹೀರಿ ನೆರನ್ನೇ ಕೊಡುವ
ಹಸುರ ಎಲೆಯಾಗಿ
ಕಲೆಯ ಹೊಳೆಯಾಗಿ
ಕಾರುಣ್ಯದ ಕತೆಯ ಹೇಳುವ
ಗುರುವಾಗಿ ಮಹಾಕವಿ ಮಲಗಿದ್ದಾನೆ

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...