Monday, September 9, 2013

ಮಹಾಕವಿ ಮಲಗಿದ್ದಾನೆ - ಬೇಲೂರು ರಘುನಂದನ


ಮಹಾಕವಿ ಮಲಗಿದ್ದಾನೆ
ಮುಂಜಾವಿನ ಹಸುರರವಿ
ಹೆಸರಿರದ ಉಸಿರನು
ಜಗಕೆ ಹಂಚಲು
ಇವನ ಬಳಿ ಕಳಿಸಿದ್ದಾನೆ

ಶ್ರೀ ಬೇಲೂರು ರಘುನಂದನ್
ಕಾಡಿನ ಉನ್ಮಾದಕೆ
ಭುವಿ ಗಗನದ ಮಿಲನಕ್ಕೆ
ಹೂಮಳೆಯ ಸ್ಕಲನ
ಜೀವ ಹುಟ್ಟುವ ನೆಲದಿ
ಗಟ್ಟಿಯಾಗಿ ಬದುಕ
ಗುಟ್ಟು ಹೇಳಲು
ಮಹಾ ಕವಿ ಮಲಗಿದ್ದಾನೆ

ಮಣ್ಣು ಕಣ್ಣಾಗಿ ಕಣ್ಣು ಹಣ್ಣಾಗಿ
ನೀರ ಹೀರಿ ನೆರನ್ನೇ ಕೊಡುವ
ಹಸುರ ಎಲೆಯಾಗಿ
ಕಲೆಯ ಹೊಳೆಯಾಗಿ
ಕಾರುಣ್ಯದ ಕತೆಯ ಹೇಳುವ
ಗುರುವಾಗಿ ಮಹಾಕವಿ ಮಲಗಿದ್ದಾನೆ

No comments:

Post a Comment

“ಇಗೋ, ಬೆಂಗಳೂರು ಹೀಗಿತ್ತು”ಜಿ. ವೆಂಕಟಸುಬ್ಬಯ್ಯ -

“ ಇಗೋ , ಬೆಂಗಳೂರು ಹೀಗಿತ್ತು ” ಜಿ . ವೆಂಕಟಸುಬ್ಬಯ್ಯ   ಅರವತ್ತು ವರ್ಷಗಳ ಹಿಂದೆ ಬೆಂಗಳೂರು ಇಷ್ಟು ದೊಡ್ಡದಾಗಿರಲಿಲ್ಲ . ಆಗ ಎರಡು ಬೆಂಗಳೂರು ಇತ್ತು ...