Friday, October 17, 2025

ತಪ್ಪುಗಳು

 ತಪ್ಪುಗಳು


----------

ಭಾಷೆಯೇ ಇಲ್ಲದ

ದೇವರನು

ಭಾಷೆಯಲಿ

ಬಂಧಿಸಿದೆ.

ಸೀಮಾತೀತನ

ತೀರ್ಥಕ್ಷೇತ್ರದಲಿ

ಸಂಧಿಸಿದೆ.

ಗುರುತಿಗಾಗಿ

ಇಟ್ಟುಕೊಂಡ

ಹೆಸರುಗಳಿಂದಲೇ

ಅವನನ್ನೂ

ಕರೆದುಕೊಂಡೆ.

ಇಷ್ಟವಾದ

ರೂಪದಲ್ಲೇ

ಪ್ರತಿಮೆಯನ್ನು

ಮಾಡಿಕೊಂಡೆ.

ಕಟ್ಟಕಡೆಗೆ

ಎಲ್ಲದರ

ಒಳಮರ್ಮದ

ಅರಿವಾದಾಗ

ನನ್ನನೇ ನಾ

ಜರಿದುಕೊಂಡೆ

ಕ್ಷಮಿಸು ಎಂದು

ಬೇಡಿಕೊಂಡೆ.

( ಶಂಕರಾಚಾರ್ಯರ ಶ್ಲೋಕದಿಂದ ಪ್ರೇರಿತ) 

        ...ಎಂ.ಎ.ಎಸ್  

ಎಂ ಎ  ಸಾದಿಕ್ ಉಲ್ಲಾ , ಶಿಕ್ಷಕರು , ಸ ಪ ಪೂ ಕಾ

ಯಳಗೋಡು,  ಚಿತ್ರದುರ್ಗ ತಾ & ಜಿ 

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...