Thursday, March 10, 2016

ಚುಟುಕ - ರಘು ವಿ,

ವರುಷವಿಡೀ ನಡೆವಂಗೆ
ಎಡವುದೇಂ ಹೊಸದೆ?
ರಘು ವಿ
ಉರಿವ ದೀಪಕ್ಕೆ ಕಿಟ್ಟ
ಕಟ್ಟುವುದೇಂ ಹೊಸದೆ?
ಜನುಮವಿಡೀ ಉರಿವ
ನಿರಂತರದ ದಿನಕರಗೆ 
ಗ್ರಹಣವಿದು ಹೊಸದೆ?
ನೆರಳಾಟಕ್ಕೆ ಅಂಜುವೊಡೆ
ಬಾಳನಂಜುಗಳ ಹೇಗೆ
ಅರಗಿಪೆಯೊ ಮನುಜ?
ಮನದ ಗ್ರಹಣವ ಕಳೆದು
ನಡೆ ಬೆಳಕಿನೆಡೆಗೆ!
[ ಕಿಟ್ಟ ಕಟ್ಟುವುದು = ಬತ್ತಿ ಉರಿದು ಕಪ್ಪಾಗುವುದು. Carbonization]




No comments:

Post a Comment

ನುಡಿಮುತ್ತು

ನಿಮ್ಮ ಮನಸ್ಸಿನ ಮೇಲೆ ನಿಮಗೆ ಅಧಿಕಾರವಿದೆ -  ಹೊರಗಿನ ಘಟನೆಗಳ ಮೇಲೆ ಅಲ್ಲ.  ಇದನ್ನು ಅರಿತುಕೊಳ್ಳಿ,  ಮತ್ತು ನೀವು ಶಕ್ತಿಯನ್ನು ಕಂಡುಕೊಳ್ಳುವಿರಿ.🪻 ರಣಾಂಗಣದಲ್ಲಿ ಸೋ...