Saturday, November 16, 2013

ತೋಚಿದ್ದು.... ಗೀಚಿದ್ದು...

ಅದು ಉಂಟು , ಇದು ಉಂಟು
ಆದರೆ
ನೆಮ್ಮದಿ ಇಲ್ಲದ ಮೇಲೆ
ಉಂಟುಗಳ ನಂಟಿಗೆ
ಬೆಲೆ ಉಂಟೆ ?

16.11.2013


ವಿಶಾಲ ಸೃಷ್ಟಿಯಲ್ಲಿ
ನಾನು ನನ್ನದು , ನೀನು ನಿನ್ನದು -
ಎಲ್ಲವೂ ಗೌಣ
ಮಮಕಾರವು ಮಾಯೆ
ತಿರಸ್ಕಾರವು ಕೂಡ !

11.09.2013

Thursday, November 14, 2013

ನವಿರು ಕಲ್ಲು

¸ÀÆgÀå£ÉÆA¢UÉ ªÀiÁwV½AiÀÄĪÀÅzÉAzÀgÉ CzÀÄ MAzÀÄ CzÀÄâvÀ.EzÀÄ £À£ÀUÀjªÁzÁV¤AzÀ®Æ £ÀqÉAiÀÄÄwÛzÉ.¸ÀÆgÀå ¸ÀàA¢¸ÀÄvÁÛ£ÉÆÃ E®èªÉÇà DzÀgÉ £Á£ÁqÀÄvÀÛ¯Éà EgÀÄvÉÛãÉ..
GzÀ¬Ä¸ÀÄ GzÀ¬Ä¸ÀÄ N CgÀÄuÁ…
dUÀPÉ®è ¥À¸Àj¸ÀÄ ¤£À QgÀuÁ…
EzÀÄ PÉ®ªÀjUÉ vÀÄA¨Á ¨Á°±ÀªÁV PÁt§ºÀÄzÀÄ DzÀgÉ 24 ªÀµÀðzÀ AiÀÄĪÀPÀ¤UÉ 4 ªÀµÀðzÀ ¨Á®PÀ£ÁUÀĪÁ¸É. £À£ÀUÉ ¸ÀÆAiÀÄð ªÀÄAf¤AzÉüÀĪÀ zÁn, ªÉÆÃqÀUÀ½UɯÁè NPÀĽ JgÀZÀĪÀ PÀæªÀÄ J®èªÀÇ EµÀÖ.
NPÀĽ ¸ÀÆAiÀÄð£Á
£ÉÆÃrzÉ £Á

GdÄÓªÀ PÀuÉÆÚ¼ÀÄ DPÀ½¹
ªÉÆÃqÀPÉ ªÀÄÄzÀÄÝ
ªÉÆÃd£ÀÄ ªÀiÁr
JgÀZÀÄvÀ°zÀÝ
§tÚzÀ NPÀĽ

§UÉ §UÉ §tÚzÀ NPÀĽ

PÉýzÉ £Á£ÀÄ
DlPÉ §gÀ¯ÉÃ
ºÉüÀ¯Éà E®è
ªÀiÁvÀ£ÁqÀ¯Éà E®è..

ªÀÄvÉÛ ºÉÆÃUÀĪÉ
ªÀÄvÉÛ ºÉÆÃUÀĪÉ
JzÀÄÝ £ÁtÄ £À¸ÀÄPÀ¯ÉÃ
MzÀÄÝ PÉüÀĪÀ ªÀÄÄzÀÄÝvÀ£À¢
¸ÀĪÀÄä¤zÀÝ CªÀ¤UÉ…

¨Á®PÀ£ÁV¹zÀ D UÀÄqÀØPÉ,PÀ« £ÀİzÁrzÀ, PÀ« £À°zÁrzÀ £À«gÀÄ , £À«®PÀ®Äè UÀÄqÀØPÉ…¤ÃªÀÇ §wÃðgÀ¯Áè…??????







Tuesday, November 12, 2013

ಉಮಾಶ್ರೀ ಚಿತ್ರೋತ್ಸವ : ನಟಿಯ ಆಂತರ್ಯ ಬದುಕಿನ ಯಾನ - ಶಂಕರ್ ಮಿತ್ರಾ ಶ್ರೀವಾಸ್ತವ್


ಬೆಂಗಳೂರಿನ ಉತ್ಸಾಹಿ ತಂಡ "ಕಾಜಾಣ " ಆಯೋಜಿಸಿದ್ದ ಉಮಾಶ್ರೀ ಚಿತ್ರೋತ್ಸವ ಇತ್ತೀಚೆಗಷ್ಟೇ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ನಡೆಯಿತು .  ಬೇಲೂರು ರಘುನಂದನ್ ರವರ ನೇತೃತ್ವ ದಲ್ಲಿ ನಡೆದ ಮೂರು ದಿನದ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು . ಚಿತ್ರರಂಗದ ಗಣ್ಯರಾದ ಕೇಸರಿ ಹರವು , ರೇಖಾ ರಾಣಿ , ಆ ದಿನಗಳು ಚಿತ್ರ ನಿರ್ದೇಶಕ ಚೈತನ್ಯ , ಆದ್ಯಾತ್ಮಕ ಚಿಂತಕಿ ವೀಣಾ ಬನ್ನಂಜೆ , ಡಾ।। ನಿಕಿಲಾ  , ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರು,  ಉಮಾಶ್ರೀ ಯವರ ಪುತ್ರ ವಿಜಯ್ ಕುಮಾರ್ ಮತ್ತು ಕುಟುಂಬ ನಟಿ  ಉಮಾಶ್ರೀ ಯವರ ಚಿತ್ರ ಬದುಕಿನ ಬಗೆಗಿನ ಹೊರ ಒಳವುಗಳನ್ನ ಶಿಬಿರಾರ್ಥಿಗಳೊಡನೆ ಹಂಚಿಕೊಂಡರು  ಹಾಗೂ ಚರ್ಚೆ ನಡೆಸಿದರು . ಮೂರು ದಿನದ ಕಾರ್ಯಕ್ರಮದಲ್ಲಿ ಉಮಾಶ್ರೀ ಯವರ ಕೊಟ್ರೇಶಿ ಕನಸು , ಕನಸೆಂಬ ಕುದುರೆಯನೇರಿ , ಗುಲಾಬಿ ಟಾಕೀಸ್ ಚಿತ್ರಗಳ ಪ್ರದರ್ಶನವನ್ನೂ ಕೂಡ ಕಾಜಾಣ ಆಯೋಜಿಸಿತ್ತು . ಒಬ್ಬ ನಟಿಯನ್ನು ಕೇಂದ್ರವಾಗಿಟ್ಟು ಕೊಂಡು ನಡೆಸಿರುವ ಈ ಚಿತ್ರೋತ್ಸವ ದೇಶದ ಮೊಟ್ಟ ಮೊದಲ ಪ್ರಯತ್ನ .  ಕಾಜಾಣದ ಮೊದಲ ಪ್ರಯತ್ನಕ್ಕೆ ಗೆಲುವು ಸಿಕ್ಕಿದೆ .








ಮೊದಲ ದಿನ ಕೇಸರಿ ಹರವು ರವರು ಉಮಾಶ್ರಿ ಯವರ ಆರಂಭದ ದಿನಗಳು ಬಗ್ಗೆ ಮಾತನಾಡುತ್ತಾ ಉಮಾಶ್ರೀ ಯವರ ರಂಗ ಭೂಮಿಯ ಬದುಕಿನ ವಿವಿದ ಆಯಾಮಗಳನ್ನು ಶಿಬಿರಾರ್ಥಿ ಗಳ ಮುಂದೆ ತೆರೆದಿಟ್ಟರು . ಆಕಸ್ಮಿಕತೆ ಗಿಂತ ಅನಿವಾರ್ಯತೆ ಉಮಾಶ್ರೀ ಯವರನ್ನು ರಂಗಭೂಮಿ ಯಿಂದ ಚಿತ್ರರಂಗಕ್ಕೆ ಕರೆದೊಯ್ಯಿತು ಎಂದು ತಿಳಿಸಿದರು . ಲೇಖಕಿ ನಿರ್ದೇಶಕಿ ನಿರ್ಮಾಪಕಿ ರೇಖಾ ರಾಣಿಯವರು ಉಮಾಶ್ರೀ ಯವರ ದ್ವಂದ್ವಾರ್ಥ ಚಿತ್ರಗಳ ಬಗ್ಗೆ ಮಾತನಾಡುತ್ತಾ ಉಮಾಶ್ರೀ ಹಾಗೂ ಎನ್ .ಎಸ್ . ರಾವ್ ರವರ ಕಾಂಬಿನೇಶನ್ ಚಿತ್ರಗಳು ಆ ಕಾಲದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದವು . ಸೂಕ್ಷ್ಮ ವಾಗಿ ಗಮನಿಸಿದಾಗ ಉಮಾಶ್ರೀ ಯವರ ಮಾತಿನಲ್ಲಿ - ಆಂಗಿಕ ಭಾವದಲ್ಲಿ ಪಾತ್ರ ತಾವಾಗುತ್ತಿದ್ದರು . ಆದರೆ ಮುಗ್ದತೆ ಮಾತ್ರ ಮುಖದಲ್ಲಿ ಸದಾ ಇರುತ್ತಿತ್ತು. ಎಲ್ಲ ಚಿತ್ರಗಳೂ ಎಲ್ಲ ಕಾಲದಲ್ಲೂ ಪ್ರೇಕ್ಷಕರನ್ನು ಮರಳು ಮಾಡಲು ಸಾದ್ಯವಿಲ್ಲ.  ದ್ವಂದ್ವಾರ್ಥ ಕೂಡ ಒಂದು ಕಲೆಯಾ ಪ್ರಾಕಾರವೇ ಎಂದು ಮಂಡಿಸಿದರು . ಕೆ ಎಂ ಚೈತನ್ಯ ರವರು ಉಮಾಶ್ರೀ ಯವರೊಡನೆ ತಮ್ಮ ಚಿತ್ರ ರಂಗದ ಅನುಭವವನ್ನೂ - ಕೊಟ್ರೇಶಿ ಕನಸು ಚಿತ್ರದ ಬಗ್ಗೆ ಚರ್ಚೆಯಲ್ಲಿ ಶಿಭಿರಾರ್ಥಿ ಗಳೊಡನೆ ಭಾಗವಹಿಸಿದರು.

ಎರಡನೇ ದಿನ ಕನಸೆಂಬ ಕುದುರೆಯನೇರಿ ಚಿತ್ರ ಪ್ರದರ್ಶನ ದ ನಂತರ ಕನಸೆಂಬ ಕುದುರೆಯನೇರಿ ಚಿತ್ರದ ಕಾದಂಬರಿಗಾರ ಅಮರೇಶ್ ನುಗಡೋಣಿ ಯವರೊಡನೆ ಚಿತ್ರದ ಬಗ್ಗೆ ಸಂವಾದ ವಿತ್ತು . ಶಿಬಿರಾರ್ಥಿಗಳೊಡನೆ ಮಾತನಾಡುತ್ತಾ ಅಮರೇಶ್ ರವರು ದೃಶ್ಯ ಮಾದ್ಯಮಕ್ಕೂ ಬರಹಕ್ಕೂ ಇರುವ ವ್ಯತ್ಯಾಸ ಮತ್ತು ಗಿರೀಶ್ ಕಾಸರವಳ್ಳಿ ಯವರು ಕೇವಲ ತಮ್ಮ ಸವಾರಿ ಕಾದಂಬರಿಯ ತಿರುಳನ್ನು ಮಾತ್ರ ಇಟ್ಟುಕೊಂಡು ಚಿತ್ರವನ್ನು ಪ್ರಸ್ತುತ ದಿನಗಳಿಗೆ ತೆರಿದಿಟ್ಟ ತಂತ್ರಗಳ ಬಗ್ಗೆ ಮಾತನಾಡಿದರು . ನಂಬಿಕೆಯ ಬದುಕಿನಲಿ ವಿಹರಿಸುವುದು ತಮ್ಮ ಕತೆಯಲ್ಲಿದೆ .. ಆದರೆ ಅದನ್ನು ಮೀರಿ ಬದುಕಲು ಸಾದ್ಯ ಎಂಬುದನ್ನು ಗಿರೀಶ್ ಕಾಸರವಳ್ಳಿ ಯವರು ಚಿತ್ರದಲ್ಲಿ ತೋರಿಸಿದ್ದಾರೆ ಎಂದು ಅವರನ್ನು ಶಾಘ್ನಿಸಿದರು . ಉಮಾಶ್ರಿ ಯವರ ಬದುಕು ಆಂತರ್ಯ ರೂಪಾಂತರ ಗಳ ಬಗ್ಗೆ ಮಾತನಾಡಿದ ಅಧ್ಯಾತ್ಮಕ ಚಿಂತಕಿ ವೀಣಾ ಬನ್ನಂಜೆ ಯವರು ಉಮಾಶ್ರೀ ಯವರು ಆಂತರ್ಯದ ಮೂಲಕ ಪ್ರಕಟ ಗೊಳ್ಳುವ ಅವರ ಮನಸ್ಥಿತಿ ಬಗ್ಗೆ , ಅವರ ಪಾತ್ರಗಳ ಪರಕಾಯ ಪ್ರವೇಶ , ಉಮಾಶ್ರೀ ಯವರು ತಮಗರಿವಿಲ್ಲದಂತೆ ಪಾತ್ರಗಳ ಪರಕಾಯ ಪ್ರವೇಶ - ನಂತರ ಪಾತ್ರಗಳಿಂದ ಕಳಚಿಕೊಂಡು ಬರಿದಾಗುತ್ತಿದ್ದರು . ಮತ್ತೆ ಹೊಸ ಪಾತ್ರಗಳನ್ನ ತುಂಬಿಕೊಳ್ಳುತ್ತಿದ್ದರು . ಮತ್ತೆ ಬರಿದಾಗುತ್ತಿದ್ದರು . ಈ ತುಂಬಿ ಕೊಳ್ಳುವಿಕೆ . ಬರಿದಾಗುವಿಕೆಯೇ ಅವರನ್ನು ಉತ್ತುಂಗಕ್ಕೆ ಕರೆದೊಯ್ದಿದೆ . ಜೊತೆಗೆ ದುಃಖ ಪರಂಪರೆಯ ನಡೆ ಉಮಾಶ್ರೀ ಯವರಲ್ಲಿತ್ತು ದುಃಖ ದಲ್ಲಿ ಕಲಿತಷ್ಟು ಮನುಷ್ಯ ಸುಖದಲ್ಲಿ ಕಲಿಯುವುದಿಲ್ಲ ಎಂದು ಆಧ್ಯಾತ್ಮಕ ವಾಗಿ ಉಮಾಶ್ರೀಯವರ ಬೆಳವಣಿಗೆ ಬಗ್ಗೆ ತೆರೆದಿಟ್ಟರು . ಡಾ ।। ನಿಕಿಲಾ  ಪೋಷಕ ಪಾತ್ರಗಳಲ್ಲಿ ಉಮಾಶ್ರೀಯ ಬೆಳವಣಿಗೆ ಬಗ್ಗೆ ತಿಳಿಸಿದರು .

ಮೂರನೇ ದಿನ ಗಿರೀಶ್ ಕಾಸರವಳ್ಳಿ ಯವರ ಗುಲಾಬಿ ಟಾಕೀಸ್ ಚಿತ್ರ ಪ್ರದರ್ಶನ ದ ನಂತರ ಚಿತ್ರದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರೊಡನೆ ಶಿಭಿರಾರ್ಥಿ ಗಳ ನೇರ ಸಂವಾದವಿತ್ತು . ಉಮಾಶ್ರೀ ಪ್ರಭುದ್ದ ನಟಿಯಷ್ಟೇ ಅಲ್ಲ ಒಳ್ಳೆ ಸೃಜನ ಶೀಲತೆ ಯುಳ್ಳ ನಟಿ ಹಾಗೂ ಅವರ ಪಾತ್ರಗಳ ಸೂಕ್ಮತೆ ಗಳನ್ನೂ ತಿಳಿಸಿದರು . ನಂತರ ಉಮಾಶ್ರೀ ಯವರೊಡನೆ ಶಿಭಿರಾರ್ಥಿಗಳ ನೇರ ಸಂವಾದ ವನ್ನು ಕಾಜಾಣ ತಂಡ  ಏರ್ಪಡಿಸಿತ್ತು . ಸಂವಾದದಲ್ಲಿ ಉಮಾಶ್ರೀ ಯವರು ತಾವು ಉಮಾದೇವಿ ಯಿಂದ ಉಮಾಶ್ರೀ ಯಾದ  ಬಗ್ಗೆ , ತಮ್ಮ ರಂಗ ಭೂಮಿ ಪಯಣ - ಸಿನಿ ಪಯಣವನ್ನು ಶಿಭಿರಾರ್ಥಿಗೊಡನೆ ಹಂಚಿಕೊಂಡರು . ಸಂವಾದದ ನಂತರ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು .

 ಸಮಾರೋಪ ಕಾರ್ಯಕ್ರಮದಲ್ಲಿ ಉಮಾಶ್ರೀ ಯವರೊಡನೆ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ , ನಿರ್ದೇಶಕ ಗಿರೀಶ್ ಕಾಸರವಳ್ಳಿ , ಚಿತ್ರ ಸಾಹಿತಿ ರೇಖಾ ರಾಣಿ , ಕುವೆಂಪು ಪ್ರತಿಷ್ಟಾನದ ಅದ್ಯಕ್ಷ ನಾಡೋಜ ಹಂಪ ನಾಗರಾಜಯ್ಯ ರವರು ,  ಉಮಾಶ್ರೀ ಯವರ ಪುತ್ರ ವಿಜಯ್ ಕುಮಾರ್ ಮತ್ತು ಕುಟುಂಬ ,ಹಾಗೂರವರು ಭಾಗವಹಿಸಿದ್ದರು .

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ  ಉಮಾಶ್ರೀ ಯವರು ಚಿತ್ರರಂಗದಲ್ಲಿ ಪ್ರಿಯವಾಗುವ ನಾವುಗಳು ರಾಜಕೀಯದಲ್ಲಿ ಎಲ್ಲರಿಗೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವುದು ಅಸಾದ್ಯ . ತನ್ನ ಬದುಕನ್ನ ಕಟ್ಟಿ ಕೊಡಲು ರಂಗಭೂಮಿ ಮತ್ತು ಚಿತ್ರ ರಂಗ ಸಹಾಯ ಮಾಡಿದೆ ಮತ್ತೊಂದೆಡೆ ರಾಜಕೀಯ ಬೇರೆಯವರಿಗೆ ಸಹಾಯ ಮಾಡುವ ಅವಕಾಶ ನೀಡಿದೆ . ಹಿಂದಿನ ರಾಜ್ಯೋತ್ಸವ ಪ್ರಶಸ್ತಿಗಳು ಸಾಕಷ್ಟು ಜನರ ಟೀಕೆಗೆ ಒಳಗಾಗಿದ್ದವು . ಆದರೆ ಈ ವರ್ಷದ ಪ್ರಶಸ್ತಿಗಳು ಕಡಿಮೆ ಟೀಕೆಗೆ ಒಳಗಾಗಿದ್ದಾವೆಂದು ಹೆಮ್ಮೆ ಯಿಂದ ನುಡಿದರು .

ಸಚಿವರಾದ ಕಿಮ್ಮನೆ ರತ್ನಾಕರ್ ರವರು ಮಾತನಾಡಿ ಉಮಾಶ್ರೀ ಚಿತ್ರಗಳು ಸಾಹಿತ್ಯದ ಹೊರತಾಗಿ ಮನರಂಜನಾತ್ಮಕ ಮಾಧ್ಯಮ ಗಳಿಂದಲೂ ಪರಿವರ್ತನೆ ಸಾದ್ಯ ಎಂಬುದನ್ನು ನಿರೂಪಿಸಿದ್ದಾವೆಂದು
ತಿಳಿಸಿದರು .

ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರು ಸಿನಿಮಾ ಮಾಧ್ಯಮ ಕೇವಲ ಮನರಂಜನೆಗೆ ಸೀಮಿತ ವಾಗಿರದೇ ಸಮಾಜವನ್ನು , ಸಮಾಜದ ಒಳ ಹೊರವುಗಳನ್ನು ತೆರೆದಿಡುವ ಕನ್ನಡಿಯಾಗಬೇಕು ಎಂದರು .

ಚಿತ್ರಲೇಖಕಿ ರೇಖಾ ರಾಣಿಯವರು ಮಾತನಾಡಿ ಚಿತ್ರರಂಗಕ್ಕಿರುವ ಭೌದ್ದಿಕತೆ - ನೈತಿಕತೆ ಜೊತೆಗೆ ಸಮಸ್ಯೆ ಯನ್ನು ಅವಲೋಕಣ ಮಾಡಿ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳುವ ಬಗ್ಗೆ ಇಂತಹ ಶಿಬಿರಗಳು ನಿರಂತರವಾಗಿ ನಡೆಯ ಬೇಕು ಎಂದರು. 

ಕುವೆಂಪು ಪ್ರತಿಷ್ಟಾನದ ಅದ್ಯಕ್ಷ ನಾಡೋಜ ಹಂಪ ನಾಗರಾಜಯ್ಯ ರವರು ಮಾತನಾಡುತ್ತ ಕನ್ನಡ ಸಾಹಿತ್ಯ - ಸಾಂಸ್ಕೃತಿಕ ಬೆಳವಣಿಗೆಗೆ ಯುವಕರ ಪಾತ್ರ ಅಮೂಲ್ಯವಾದುದ್ದು . ಇವರು ಪ್ರತ್ಯೇಕ ದ್ವೀಪಗಳಾಗಿರದೆ ನಾಡು - ನುಡಿ - ಕನ್ನಡ  ಬೆಳಸುವ ಬೆಳಗಿಸುವ ದೀಪವಾಗಿರಬೇಕು ಎಂದು ನೆರೆದ ಶಿಬಿರಾರ್ಥಿಗಳಿಗೆ ಉತ್ಸಾಹ ತುಂಬಿದರು ಹಾಗೂ ಶುಭ ಹಾರೈಸಿದರು .

 ಕಾಜಾಣ ಬಳಗದ ಬೇಲೂರು ರಘುನಂದನ್ ಶಿಬಿರದ ಯಶಸ್ಸಿಗೆ ಕಾರಣರಾದವರನ್ನು ಸ್ಮರಿಸುತ್ತ ಇದು ಕೊನೆಯಲ್ಲ ... ನಿರಂತರ ಎಂದರು .


ಶಂಕರ್ ಮಿತ್ರಾ ಶ್ರೀವಾಸ್ತವ್


http://newskannada.com/karavaliinner.php?news=rs&nid=8243

Sunday, November 3, 2013

ಕನ್ನಡಕ್ಕೊಂದೇ ’ರಾಗ’-ಅದು ರಾ.ಗಣೇಶ - V R BHAT

ಕನ್ನಡನಾಡಿಗಾಗಿ ಯಾರ‍್ಯಾರು ಏನೆಲ್ಲಾ ಸೇವೆಮಾಡಿದರು ಎಂಬುದು ಬೇರೆ ವಿಷಯ.
ಕನ್ನಡ ನೆಲದಲ್ಲಿಯೇ ಅರಳಿದ ’ಅವಧಾನ’ ಕಲೆ ಮಾಸಿಹೋದಾಗ ಹೊಸದಾಗಿ ಅದನ್ನು ಪ್ರತಿಷ್ಠಾಪಿಸಿದವರು ಶತಾವಧಾನಿ ಡಾ| [’ರಾಗ’]ರಾ.ಗಣೇಶರು. ಕನ್ನಡದಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ, ವಾಚಿಸಿದ್ದಾರೆ, ಪ್ರವಚಿಸಿದ್ದಾರೆ, ಉಪನ್ಯಾಸಗಳಂತೂ ಯಾರೂ ಮಾಡದಷ್ಟು ಹೇರಳ ಸಂಖ್ಯೆಯಲ್ಲಿ ಅವರಿಂದ ನಡೆದಿವೆ. ಅವರ 
ಪಾಂಡಿತ್ಯ ಕನ್ನಡ ಜನರಿಗೆ ಪರಿಚಯವಿರದ್ದಲ್ಲ; ಆದರೆ ಕರ್ನಾಟಕ ಸರಕಾರಕ್ಕೆ ಇನ್ನೂ ಅವರ ಪರಿಚಯವಿಲ್ಲ!! ಕೆಲವರು ಕೆಲವು ಪ್ರಕಾರದ ಸಾಹಿತ್ಯ ಸೇವೆಯಲ್ಲಿ ಮಾತ್ರ ತೊಡಗಿಕೊಳ್ಳುತ್ತಾರೆ; ಗಣೇಶರದ್ದು ಹಾಗಲ್ಲ, ಕನ್ನಡದಲ್ಲಿ ಈಗಿರುವ ಪರಮೋಚ್ಚ ವ್ಯಾಖ್ಯಾನಕಾರರು ಮತ್ತು ಅತಿಶ್ರೇಷ್ಠ ವಿದ್ವಾಂಸರು ಎಂದರೆ ಗಣೇಶರೊಬ್ಬರೇ. ಅವರ ನೆನಪಿನ ಶಕ್ತಿಯಂತೂ ಸಾಗರದಷ್ಟು ಅಗಾಧ. ಪ್ರೀತಿಯಿಂದ, ಅಭಿಮಾನದಿಂದ ಹೇಳುವುದಾದರೆ ಕನ್ನಡಕ್ಕೊಂದೇ ’ರಾಗ’-ಅದು ರಾ.ಗಣೇಶ.




 V.r. Bhat

Saturday, November 2, 2013

ತಳಮಳಿಸುತ್ತಿರುವ ಹಳ್ಳಿಗಳು


20 ವರ್ಷದ ಹಿಂದೆ ಊರಿನಲ್ಲಿ ಒಂದು ಮನೆಯಲ್ಲಿ ಮದುವೆ, ಪೂಜೆ, ಗ್ರಹಪ್ರವೇಶ ಏನೇ ಮುಖ್ಯವಾದ ಕಾರ್ಯವಿರಲಿ, ಅಥವಾ ಊರಿನ ದೇವಸ್ಥಾನದ ಮುಖ್ಯವಾದ ಕಾರ್ಯವಿರಲಿ ಒಟ್ಟಾರೆ ಅಂದು ಊರಿನ ಎಲ್ಲರಿಗೂ ಎಲ್ಲರ ಸಹಕಾರದ ಅಗತ್ಯವಿತ್ತು. ಸಹಕಾರಕ್ಕಾಗಿಯೇ ಮನೆ ಮನೆಗೆ ಹೋಗಿ ಚಪ್ಪರದ ವಿಳ್ಯ, ಮದುವೆ ವೀಳ್ಯ,ಅಡುಗೆ ವಿಳ್ಯ ಎಂದು ಪ್ರತ್ಯೇಕ ಪ್ರತ್ಯೇಕ ಆಮಂತ್ರಣ ಇತ್ತು. ಆ ಆಮಂತ್ರಣ ಸ್ವೀಕರಿಸಿದ ಮೇಲೆ ಆ ಕಾರ್ಯಕ್ಕೆ ಮನೆಯಿಂದ ಒಬ್ಬರ ಉಪಸ್ಥಿತಿ ಕಡ್ಡಾಯವಾಗಿತ್ತು.   ಊರಿನಲ್ಲಿ ಸಂಕ್ರಾತಿ ಹಬ್ಬ, ಗಡಿಹಬ್ಬ, ಹಗರಣ, ಭಜನೆ ಈ ಎಲ್ಲಾ ದೈವಿಕ ಕಾರ್ಯಗಳಲ್ಲಿಯೂ ಎಲ್ಲಾ ಜನಾಂಗದವರು ಭಾಗವಹಿಸಿ ಆಯಾಯ ಕಾರ್ಯವನ್ನು ಭಕ್ತಿಯಿಂದ ಮಾಡುತ್ತಿದ್ದರು. ಯಾರದೇ ಮನೆಯಲ್ಲಿ ಒಂದು ಸಾವು ಸಂಭವಿಸಿದ್ದರೂ ಊರಿಗೇ ಊರೇ ಬಂದು ಸಾಂತ್ವಾನ ಹೇಳುತ್ತಿತ್ತು ಮತ್ತು ಮುಂದಿನ ಕಾರ್ಯವನ್ನು ನೇರವೆರಿಸುತ್ತಿತ್ತು. ಅಂದರೇ ಊರಿನ ಸಂಭ್ರಮವಾಗಿರಲ್ಲಿ ಅಥವಾ ದುಖ:ವಾಗಿರಲ್ಲಿ ಎರಡರಲ್ಲಿಯೂ ಊರಿಗೆ ಊರೇ ಸಂಭ್ರಮಿಸುತ್ತಿತ್ತು ಮತ್ತು ದುಖಿ:ಸುತ್ತಿತ್ತು. ಪರಸ್ಪರರ ಬಗ್ಗೆ ಮತ್ತು ಪ್ರತಿಯೊಂದು ಕಾರ್ಯದ ಬಗ್ಗೆ ಎಲ್ಲರಿಗೂ ಭಕ್ತಿ ಶ್ರದ್ಧೆಯಿತು ಜೊತೆಗೆ ಸಹಕಾರ ಭಾವನೆ ಇತ್ತು.
ಬೇಸಿಗೆಯಲ್ಲಿ ಯಕ್ಷಗಾನ, ದೊಡ್ಡಾಟ್ ನಡೆಯುತ್ತಿತ್ತು. ಬೇಸಿಗೆ ರಜೆಗೆ ಬರಲು ಊರಿನ ಮಕ್ಕಳು ಮೊಮ್ಮಕ್ಕಳು ಕಾತರದಿಂದ ಕಾಯುತ್ತಿದ್ದರು. ಊರಿನಲ್ಲಿರುವ ಅಜ್ಜನ ಕಥೆಯನ್ನು ಕೇಳಲು, ಚಿನ್ನಿದಾಂಡು ಆಟ ಆಡಲು, ಮೊಮ್ಮಕ್ಕಳು ಹಪಹಪಿಸುತ್ತಿದ್ದರೇ, ಊರಿಗೆ ಬಂದು ತಮ್ಮ ಹಳೆಯ ಸ್ನೇಹಿತರೊಂದಿಗೆ ಊರಿನ ವಿವಿಧ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸುವ ಗುಂಗಿನಲ್ಲಿ ಮಕ್ಕಳಿರುತ್ತಿದ್ದರು.
 ಇಂದಿನ ಹಳ್ಳಿಯಲ್ಲಿ 20 ವರ್ಷದ ಹಿಂದಿನ ಯಾವುದೇ ಚಟುವಟಿಕೆಗಳು ಕಂಡುಬರುತ್ತಿಲ್ಲ. ಮದುವೆ ಎಂಬುದು ಒಂದು ನಾಟಕದಲ್ಲಿ ಬಂದು ಹೋಗುವ ದ್ರಶ್ಯದಂತೆ ಆಗಿರುವುದು. ಹಳ್ಳಿ ಹಳ್ಳಿಗಳಲ್ಲಿ ಮದುವೆ ಸಭಾಭವನಗಳು ತಲೆ ಎತ್ತಿರುವವು. ಊರಿನ ಸಭಾಭವನದಲ್ಲಿ ಮದುವೆ ದಿನ ಬೇರೆ ಮದುವೆ ಇದ್ದರೇ ಬೇರೆ ಊರಿನ ಸಭಾಭವನ ತಯಾರಾಗಿರುವುದು. ಈಗ ಮದುವೆ ಆಗಲು ಹುಡುಗ ಹುಡುಗಿ ಇದ್ದರೇ ಸಾಕು ಯಾರ ಸಹಕಾರವು ಬೇಕಾಗಿಲ್ಲ. ಸಾಕಷ್ಟು ದುಡ್ಡು ಬೇಕು ಅಷ್ಟೇ. ಲೋಕಲ್ ಟಿವಿ ಚಾನಲ್ ಮತ್ತು ಸ್ಥಳೀಯ ದಿನಪತ್ರಿಕೆಯಲ್ಲಿ ಆಮಂತ್ರಣವನ್ನು ನೀಡುವುದು, ಕಲ್ಯಾಣ ಮಂಟಪಕ್ಕೆ ಹೋಗಿ ದುಡ್ಡು ಕೊಟ್ಟು ಬಂದರೆ ಆಯಿತು. ಆ ನಂತರ ಮದುವೆ ದಿನ ಹೋಗಿ ಮದುವೆ ಆಗುವುದು. ಅಷ್ಟೊಂದು ಸರಳ ಸುಲಭವಾಗಿರುವುದು. ಚಪ್ಪರ ಬೇಕಾಗಿಲ್ಲ, ಮನೆಮನೆಗೆ ಹೋಗಿ ಅಡುಗೆ ಸಾಮಗ್ರಿ ಸಂಗ್ರಹಿಸುವ ಶ್ರಮವಿಲ್ಲ. ಬೇರೆ ಬೇರೆ ರೀತಿಯ ವೀಳ್ಯ ನೀಡುವ ಚಿಂತೆಯಿಲ್ಲ. ಮಂಟಪ ಕಟ್ಟುವ ಅಗತ್ಯವಿಲ್ಲ, ಬಾಳೆ ಎಲೆಯನ್ನು ಹುಡುಕಬೇಕಾಗಿಲ್ಲ. ಬೇರೆಯವರ ಹಂಗಿಲ್ಲ.
ಊರಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಟಿವಿ ಆಕ್ರಮಿಸಿರುವುದು. ಮೊಮ್ಮಕಳೊಂದಿಗೆ ಕಥೆ ಹೇಳಬೇಕಾದ ಅಜ್ಜಿ-ಅಜ್ಜ,  ಧಾರವಾಹಿ-ವಾತೆ೯ ನೋಡುವಲ್ಲಿ ಮಗ್ನರಾಗಿರುವರು. ಹಳ್ಳಿಯಲ್ಲಿ ಮಕ್ಕಳಿಗೆ ಸಿಗಬೇಕಾದ ಸ್ವಾತಂತ್ಯದ ಬಾಲ್ಯ ಮರೆಯಾಗಿ ನೀತಿ ನಿಯಮದ ಅಪ್ಪ ಅಮ್ಮ ಬಯಸಿದಂತಹ ಬಾಲ್ಯ ಪ್ರಾರಂಭವಾಗಿರುವುದು. ಟಿವಿ,ಟ್ಯೂಶನ್, ಬೇಸಿಗೆ ಶಿಬಿರ, ಕ್ರಿಕೆಟ್ ಇವು ಇಂದಿನ ಮಕ್ಕಳ ಬಾಲ್ಯವಾಗಿದೆ.  ಹಾಣೆಗೆಂಡೆ ಆಟ(ಚಿನ್ನಿ ದಾಂಡು),ಮುಟ್ಟಾಟ, ಅಜ್ಜನ ಕಥೆಗಳು, ಮೀನು ಹಿಡಿಯುವುದು,  ಬಯಲಾಟ ಇವೆಲ್ಲ ಇಂದಿನ ಮಕ್ಕಳಿಗೆ ಇತಿಹಾಸವಾಗಿದೆ. ಊರಿನ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ ಮಕ್ಕಳಿಗೆ ಪ್ರತ್ಯೇಕ ಮನೆ ಕಟ್ಟುವ, ಚಿನ್ನ ಮಾಡಿಸುವ ಒಟ್ಟಾರೆ ದುಡ್ಡು ಮಾಡುವ ಔಷಧ ಇಲ್ಲದ ಕಾಯಿಲೆ ಪ್ರಾರಂಭವಾಗಿದೆ. ಎಲ್ಲರೂ ಪಟ್ಟಣದಲ್ಲಿಯೇ ಖಾಯಂ ಆಗಿ ಇರಲು ಯೋಚಿಸಿ ಅದಕ್ಕೆ ಪೂರವಾಗಿ ಯೋಜನೆ ಮಾಡುತ್ತಾ ರಜೆಯನ್ನು ಕಳೆಯುತ್ತಿರುವರು.
ಹೌದು, ಈ ರೀತಿಯ ಅನುಕೂಲವಾಗಿದೆ ಎಂದು ಭಾವಿಸಿಯೇ ಇಂದು ನಾವೇಲ್ಲರೂ ಈ ಪದ್ದತಿಯನ್ನು ಪೋಷಿಸುತ್ತಿರುವೆವು. ಆದರೇ ಸೂಕ್ಮವಾಗಿ ಗಮನಿಸಿದಾಗ ನಾವು ಏನೋ ಕಳೆದುಕೊಳ್ಳುತ್ತಿರುವೆವು ಎಂದು ಅನಿಸುವುದು. ಹಳ್ಳಿಯಲ್ಲಿನ ಸಹಕಾರ ತತ್ವ ಎಂಬುದು ಈ ರೀತಿಯ ಹಲವಾರು ಕಾರಣಗಳಿಂದ ಮರೆಯಾಗುತ್ತಿರುವುದನ್ನು ನಾವು ಗುರುತಿಸುತ್ತಿಲ್ಲ. ಪಟ್ಟಣದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ ಏನಾದರೂ ಯಾರಿಗೂ ಗೊತ್ತಾಗದು ಮತ್ತು ಅವರ ದಿನ ನಿತ್ಯದ ಚಟುವಟಿಕೆಗೆ ಯಾವುದೇ ತೊಂದರೆಯಾಗದು. ಇದೇ ರೀತಿಯ ವಾತಾವರಣ ಹಳ್ಳಿಗಳಲ್ಲಿ ಪ್ರಾರಂಭವಾಗಿರುವುದನ್ನು ಗಮನಿಸಬಹುದಾಗಿದೆ.
ಇಂತಹ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಪ್ರಾರಂಭಿಸಿರುವ ಪ್ರಗತಿಬಂಧು ಗುಂಪು ಸಹಕಾರ ತತ್ವವನ್ನು ಹಳ್ಳಿಗಳಲ್ಲಿ ಸಾರಲು ಪ್ರಯತ್ನಿಸುತ್ತಿರುವುದು. ಕನಿಷ್ಠ ಪಕ್ಷ ವಾರೆದಲ್ಲಿ ಒಂದು ದಿನ ಗಂಡಸರು ಒಂದೊಂದು ಮನೆಯಲ್ಲಿ ಗುಂಪಿನ ಎಲ್ಲರೂ ಸೇರಿ ಕೆಲಸ ಮಾಡುವ ರೂಢಿಯನ್ನು ಪ್ರಾರಂಭಿಸುತ್ತಿರುವರು. ಮಹಿಳೆಯರು ವಾರದ ಒಂದು ದಿನದ 2 ಗಂಟೆಯಾದರೂ ಉಳಿತಾಯ ಸಂಘದ ಹೆಸರಿನಲ್ಲಿ ಪರಸ್ಪರ ಮಾತನಾಡುತ್ತಿರುವರು. ಇದು ನಮ್ಮ ಹಿಂದಿನವರು ನಡೆಸಿಕೊಂಡು ಬಂದ ಕೆಲವೊಂದು ಉತ್ತಮ ಸಂಪ್ರದಾಯವನ್ನು ಬೆಳಸುವ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯವಾಗಿದೆ.
ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿವೆ ಮಾಸಿ
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ
ತಳಮಳಿಸುತಿದೆ ಲೋಕ-ಮಂಕುತಿಮ್ಮ
(ಹಿಂದಿನ ಕಾಲದಲ್ಲಿ ಇದ್ದಂತಹ ಶ್ರದ್ಧೆ, ಭಕ್ತಿಗಳನ್ನು ನಾವು ಈಗ ಕಾಣುತ್ತಿಲ್ಲ, ಕಾಲದ ಜೊತೆಗೆ ಹಳೆಯ ನಂಬಿಕೆಗಳು ಕಳೆದು ಹೋಗುತ್ತಿದೆ. ಬರುತ್ತಿರುವ ಕಾಲದಲ್ಲಿ ನಂಬಿಕೆಗಳಿಗೆ ಬೆಲೆಯೇ ಇಲ್ಲದಂತಾಗಿರುವಾಗ ಹೊಸ ನಂಬಿಕೆ ಹುಟ್ಟುತ್ತಿಲ್ಲ. ಕುಂಟ ಅಥವಾ ಕುರುಡನು, ಬಹುಕಾಲ ಅಭ್ಯಾಸವಾಗಿದ್ದ ಮನೆಯೂ ಬಿದ್ದು ಹೋದಾಗ, ತೊಂದರೆ ಪಡುವಂತೆ, ನಮ್ಮ ಲೋಕವು ಸಹಾ ತಳಮಳಿಸುತ್ತಿದೆ.)
                                                                                                                         ವಿವೇಕ ಬೆಟ್ಕುಳಿ
                                                                                                            vivekpy@gmail.com

Friday, November 1, 2013

ಮದುವೆಯ ಮುಂಚೆ - ನಂತರದಲ್ಲಿ ಗಂಡಿನ ಸ್ಥಿತಿ

ಮದುವೆಯ ಮುಂಚೆ - ನಂತರದಲ್ಲಿ ಗಂಡಿನ ಸ್ಥಿತಿ,

ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಮದುವೆ ಆಗಲೇ ಬೇಕು ಅಂದಾಗ ಮಾತ್ರ ಜೀವನ ಸಂಪೂರ್ಣ ಆಗುತ್ತದೆ. ಇಲ್ಲವಾದರೆ ಸತ್ತ ಮೇಲೆ ಸ್ವರ್ಗಕ್ಕೆ ಹೋಗುವುದಿಲ್ಲ.  ಈ ರೀತಿಯಾಗಿ ಯಾವ ಪುಣ್ಮಾತ್ಮ ಸ್ವರ್ಗಕ್ಕೆ ಹೋಗಿ ಹಿಂದಿರುಗಿದವನು ಹೇಳಿದನೋ ಗೊತ್ತಿಲ್ಲ, ಆದರೆ ನಮ್ಮ ಸಮಾಜದಲ್ಲಿ. ಮದುವೆ ಮಾತ್ರ ಕಡ್ಡಾಯ ಎಂಬತಾಗಿರುವುದು. ಮಾನವ ಯೋಚಿಸಲು ಅರ್ಹತೆ ಇರುವ ಪ್ರಾಣಿ, ಅದಕ್ಕಾಗಿ ವಂಶವನ್ನು ವೃದ್ದಿಸಲು. ಪ್ರಾಯಕ್ಕೆ ಬಂದ ಯವಕ-ಯುವತಿಯರು ತಮ್ಮ ಮೈಥುನವನ್ನು ಈಡೇರಿಸಕೊಳ್ಳಲು ಮದುವೆ ಎಂಬ ಸಂಪ್ರದಾಯ ಸೃಷ್ಠಿಯಾಯಿತು ಎಂಬುದು ನನ್ನ ಮಟ್ಟಿನ ತಿಳುವಳಿಕೆಯ ಮಾತು. ಅದೇನೆ ಇರಲ್ಲಿ ಇಲ್ಲಿ ನಾವು ಯೋಚಿಸುತ್ತಿರುವುದು ಗಂಡು ಜಾತಿಯಲ್ಲಿ ಹುಟ್ಟಿದ ಮನುಷ್ಯನಲ್ಲಿ  ಮದುವೆಯ ಮುಂಚೆ,  ನಂತರ ಮತ್ತು ಮಕ್ಕಳಾದ ನಂತರ ಹೇಗೆ ವರ್ತನೆಯಲ್ಲಿ ಬದಲಾವಣೆ ಆಗುತ್ತದೆ, ಅದರ ಹಿಂದಿನ ಕಾರಣ ಏನು ಎಂಬುದರ ಬಗ್ಗೆಯಾಗಿರುವುದು.
ಮದುವೆಗೆ ಮುಂಚೆ ವೀರ
ಮದುವೆ ಆದ ಮೇಲೆ ಗಂಭೀರ
ಮಕ್ಕಳಾದ ಮೇಲೆ ಫಕೀರ!
ಈ ಮಾತು ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕುಮಟಾ ತಾಲ್ಲೂಕು ಕೋಡ್ಕಣಿಯ ಎನ್ಕೆ ನಾಯ್ಕರು ಏಳನೇ ತರಗತಿಯಲ್ಲಿ ಓದುತ್ತಿರುವಾಗ ಪದೇ ಪದೇ ಹೇಳುತ್ತಿದ್ದರು. ಬಹುಶ: ಮದುವೆಯ ಅವರ ಅನುಭವವೇ ಆ ರೀತಿ ಮಾತಿನಲ್ಲಿ ಹೊರಹೊಮ್ಮಿತಾ ಅಥವಾ ಓದಿದ ಹೇಳಿಕೆಯೋ ನನಗೆ ಗೊತ್ತಿಲ್ಲ. ಆದರೇ ಆ ವಿಚಾರದ ಬಗ್ಗೆ ನಾನು ನನ್ನ ಸುತ್ತ ಮುತ್ತಲಿನ ವೀರ, ಗಂಭೀರ, ಫಕೀರರೊಂದಿಗೆ ಮಾತನಾಡಿದಾಗ 90% ಕ್ಕೆ ಹೆಚ್ಚು ಜನರು ಇದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿರುವುದು ಈ ಹೇಳಿಕೆಯ ಘನತೆಯನ್ನು ಹೆಚ್ಚಿಸಿರುವುದು.
 ಹೌದು ಈ ಬಗ್ಗೆ ಅಂದಿನಿಂದ ಮದುವೆಯ ಮುಂಚಿನ ಮದುವೆ ನಂತರದ ಮತ್ತು ಮದುವೆ ಆಗಿ ಮಕ್ಕಳಾದ ಮೇಲಿನ ಗಂಡಿನ ಸ್ಥಿತಿಯ ಬಗ್ಗೆ ನನಗೆ ತುಂಬಾ ಆಸಕ್ತಿ ಅವರು ನಡೆದುಕೊಳ್ಳುವ ರೀತಿ, ಅವರ ನಡವಳಿಕೆಯಲ್ಲಿ ಆಗುವ ಬದಲಾವಣೆ, ಜನರು ಅವರನ್ನು ನೋಡುವ ರೀತಿ ಈ ಎಲ್ಲವೂ ನಾವು ಬದುಕುತ್ತಿರುವ ಸಮಾಜದಲ್ಲಿ ಸಾಮಾನ್ಯವಾಗಿದ್ದರೂ ಈ ಬದಲಾವಣೆ ಇದಕ್ಕೆ ಪೂರಕವಾದ ಕಾರಣಗಳ ಹಂಚಿಕೊಳ್ಳುವುದು ಅಗತ್ಯವೆನಿಸುವುದು.
ಮದುವೆಗೆ ಮುಂಚಿನ ಗಂಡಿನ ಸ್ಥಿತಿ :  ವೀರರಾದವರು ಎಲ್ಲಿಗೆ ಹೋಗಲಿ, ಬರಲಿ ಏನೇ ಮಾಡಲಿ ಯಾರು ಕೇಳುವುದಿಲ್ಲ, ಮನೆಯ ಒತ್ತಡ ಇದ್ದರೂ ಅದು ಸ್ವಾತಂತ್ರ್ಯಕ್ಕೆ ಎಂದು ದಕ್ಕೆ ತರುವಂತಾಗಿರುವುದಿಲ್ಲ. ಬೇರೆ ಊರಿಗೆ ಹೋದ ವೀರ ಒಂದೆರಡು ದಿನ ತಡವಾಗಿ ಬಂದರು ಅಂತಹ ಪರಿಣಾಮ ಏನು ಬೀರುವುದಿಲ್ಲ. ಸ್ನೇಹಿತರೊಂದಿಗೆ ಹರಟೆ, ಸಂತೋಷ, ಪುಂಡಾಟಿಕೆ, ಹಲವಾರು ಹುಡುಗಿಯರೊಂದಿಗೆ ಓಡಾಟ, ಪಾಟರ್ಿ ಇವೆಲ್ಲವು ವೀರಸಮುದಾಯದ ಅವಿಭಾಜ್ಯ ಅಂಗವಾಗಿರುವುದು. ಮನಸ್ಸಿಗೆ ಬಂದ ಪ್ಯಾಶನ್, ಆಹಾರ ಸೇವನೆ ಇಲ್ಲಿ ಮಾತ್ರ ಸಾಧ್ಯ. ಯಾವುದೇ ಕೆಲಸವನ್ನು ಸಾಧಿಸುವ ಛಲ, ನೇರ ಮಾತು ವೀರರಿಗೆ ಮಾತ್ರ ಸಾಧ್ಯ ಅರ್ಥದಲ್ಲಿ ಜಗತ್ತನೆ ಗೆಲ್ಲಬಲ್ಲೆ ಎಂಬ ಆತ್ಮ ವಿಶ್ವಾಸ ಮತ್ತು ಎಲ್ಲರೂ ತನ್ನವರೆ ಎಂಬ ಭಾವನೆ ಈ ಸಮುಹದ ಹೆಚ್ಚಿನವರಲ್ಲಿ ಇರುವುದು.
ಇಂತಹ ಆತ್ಮವಿಶ್ವಾಸದಿಂದ ಇರುವ ವೀರರು  21 ವರ್ಷ ದಾಟಿದ ನಂತರ  ಅವರ ಮದುವೆಯ ಬಗ್ಗೆ ಒಬ್ಬರಲ್ಲ ಒಬ್ಬರೂ ಚಿಂತಿಸಲು ಪ್ರಾರಂಭಿಸುವರು. ಕೆಳಕಾಣಿಸಿದ ಕಾರಣಗಳಿಂದ ಅನಿವಾರ್ಯವಾಗಿ ವೀರರಾದವರು ಮದುವೆಗೆ ಸಿದ್ದರಾಗುವರು.
 ಮದುವೆ ಮಾಡಿದರೆ ಜವಬ್ದಾರಿ ಮುಗಿಯಿತು ಎಂದು ತಿಳಿದುಕೊಳ್ಳುವ ಪಾಲಕರು.  ಮನೆಯಲ್ಲಿ ಮಾಡಲು ಕೆಲಸವಿಲ್ಲದ ಬೇರೆಯವರ ಮನೆ ಬಗ್ಗೆ ಯೋಚಿಸುವ ಹಿರಿಯ ನಿರುದ್ಯೋಗಿಗಳು, ವಯಸ್ಸಾಗಿರುವುದೇ ಮದುವೆ ಆಗಿ ಮಕ್ಕಳು ಮಾಡಲು ಎಂದು ತಿಳಿದಿರುವ ಕೆಲವು ಯುವ ಸಮೂಹ,  ಬೇರೆಯವರ ಮನೆಯಲ್ಲಿ ಮದುವೆ ಆಯಿತಿ ಎಂದು ಮನೆಯಲ್ಲಿ ಮದುವೆ ಎರ್ಪಡಿಸುವವರು,  ಪರಿಸ್ಥಿತಿಯ ಒತ್ತಡದಿಂದ ಮದುವೆ. ಈ ರೀತಿಯ ಕಾರಣಗಳಿಂದ ಅನಿವಾರ್ಯ/ಅಗತ್ಯವೋ ಗೊತ್ತಿಲ್ಲ ವೀರರು ಮದುವೆ ಆಗುವರು. ಅಲ್ಲಿಗೆ ಮುಗಿಯುತು ಜೀವನ ಎಂಬ ಮಹಾಭಾರತದ ವೀರ ಅಧ್ಯಾಯ.
ಮದುವೆಯ ನಂತರದ ಸ್ಥಿತಿ : ಮದುವೆಯಾದ ಮೇಲೆ ಗಂಡಿನ ಮಾತು ನಡುವಳಿಕೆಯಲ್ಲಿ ಏನೇ ಚಿಕ್ಕ ಬದಲಾವಣೆ ಇದ್ದರೂ ಅದು ನಿರಂತರವಾಗಿ ಅವನೊಂದಿಗೆ ಇದ್ದ ತಂದೆ, ತಾಯಿ, ತಂಗಿ ಇವರಿಗೆ ತಕ್ಷಣ ತಿಳಿಯುವುದು. ಯಾವುದೇ ಅನುಮಾನ ಯಾರಿಗೂ ಬರದಂತೆ ಅಭಿನಯಿಸಬೇಕಾದ ಅಗತ್ಯ ವಿರುವುದು.
ಒಂದು ಮಾತಿದೆ “ಮದುವೆಯಾದ ಗಂಡಿನ ಸ್ಥಿತಿ ಇಸ್ಪೀಟ್ ಎಲೆಯ ಜೋಕರ್” ನಂತೆ ಈ ಬಗ್ಗೆ ಇಸ್ಪೀಟ್ ಬಗ್ಗೆ ತಿಳಿದಿರುವವರಲ್ಲಿ ಕೇಳಬಹುದು.
ಬೇರೆ ಮನೆಯಿಂದ ಬಂದ ಹೆಣ್ಣಿಗೆ ಬೇಸರವಾಗದಂತೆ ಪ್ರಭುದ್ದ ಗಂಡನಾಗಿ ಹೆಂಡತಿಯ ಜೊತೆ, ತಾಯಿ-ತಂದೆಯ ಮೇಲಿನ ಗೌರವಕ್ಕೆ ಚ್ಯುತಿ ಬರದಂತೆ ಪ್ರೀತಿಯ ಮಗನಾಗಿ, ಅಕ್ಕ ತಂಗಿಯರ ಜವಬ್ದಾರಿ ಅರಿತ ಅಣ್ಣ/ ತಮ್ಮನಾಗಿ, ನಟಿಸಬೇಕಾದ ಅಗತ್ಯವಿರುವುದು. ಈ ರೀತಿಯಾಗಿ ಎಲ್ಲರನ್ನು ಸಂಭಾಳಿಸುತ್ತಾ ಸಾಗುವುದು ನಿಜವಾಗಿ ಮದುವೆಯಾದ ಗಂಡಿನ ಬಹುಮುಖ್ಯವಾದ ಮೈಲಿಗಲ್ಲಾಗಿರುವುದು. ಒಂದು ಮಾತನಾಡಿದರೆ ಕಡಿಮೆ ಎರಡು ಮಾತನಾಡಿದರೆ ಹೆಚ್ಚು ಎಂಬಂತೆ ಇರುವುದು ಅವನ ಸ್ಥಿತಿ. ಒಟ್ಟಾರೆ ವೀರನಾಗಿದ್ದ ಯುವಕ ಅನಿವಾರ್ಯವಾಗಿ ಗಂಭೀರನಾಗಬೇಕಾಗುವುದು.
ಈ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಗಂಡಿನ ನೆಮ್ಮದಿ ಹಾಳುಗೆಡಹುತ್ತಿರುವಲ್ಲಿ ಮುಖ್ಯವಾಗಿ ನಮ್ಮ ಟಿ ವಿ ಧಾರವಾಹಿಗಳ ಪಾತ್ರ ಬಹು ಮುಖ್ಯವಾಗಿದೆ. ಬರುವ ಕೌಟುಂಬಿಕ ಧಾರವಾಹಿಗಳಲ್ಲಿ 90% ಅಧಿಕ ಅತ್ತೇ ಸೊಸೆ, ಸೊಸೆ ಮತ್ತು ಮನೆಯ ಮಗಳು ಇವರುಗಳ ಜಗಳ, ಕುಂತಂತ್ರ ಈ ವಿಚಾರವೇ ಹೆಚ್ಚಾಗಿರುವುದು. ಅದನ್ನು ನೋಡುವ ಮನೆಯ ಸದಸ್ಯರ ಮೇಲೆ ಧಾರವಾಹಿಗಳು ಅಪ್ರತ್ಯಕ್ಷವಾಗಿ ಪರಿಣಾಮ ಬೀರುತ್ತಲೇ ಇರುವುದು ಸಾಮಾನ್ಯವಾಗಿದೆ.
 ಗೆಳೆಯರೊಂದಿಗೆ ಹರಟೆ, ಪಾಟಿ೯, ತಿರುಗಾಟ ಇದಕ್ಕೆ ತೆರೆ ಬೀಳುವುದು, ನೇರ ಮಾತು ಕಡಿಮೆಯಾಗುವುದು, ಎಲ್ಲಿಗೆ ಹೋದರೂ ಸಂಜೆ ಮನೆಗೆ ಬರುವ ಅನಿವಾರ್ಯತೆ, ಯುವತಿಯರೊಂದಿಗೆ ಹೋಟೆಲ್, ಫಿಲ್ಮ ಎಂದು ಓಡಾಡುವ ಆಶೆ ಇದ್ದರು ಹೆಂಡತಿ ಭಯದಿಂದ ನಿರಾಕರಣೆ, ತಿರುಗಾಡಲು ಹೋಗುವುದಾದರೇ ಜೊತೆಗೆ ಹೆಂಡತಿ, ಕೆಲಸ ಮಾಡುವಲ್ಲಿ ಹೆಚ್ಚಿನ ಧ್ಯಾನ, ಕೇವಲ ಹಣಕ್ಕಾಗಿ ಹೆಚ್ಚಿನ ಕೆಲಸದಲ್ಲಿ ಆಸಕ್ತಿ, ತಿನ್ನುವುದರಲ್ಲಿ ಜಿಪುಣತನ, ಸ್ನೇಹಿತರೊಂದಿಗೆ ಒಟನಾಟ ಕಡಿಮೆಯಾಗುವುದು. ಕೇವಲ ಮನೆ ಮತ್ತು ಹೆಂಡತಿಯ ಮನೆಯವರ ಬಗ್ಗೆ ಯೋಚನೆ, ಹೆಂಡತಿಯಿಂದ ಅತಿಯಾದ ಗೌರವ ಇರುವುದು, ಧರಿಸುವ ಬಟ್ಟೆಯಲ್ಲಿಯೂ ಹೆಂಡತಿಯ ಪ್ರಭಾವ ಇರುವುದು.
ಈ ಗಂಭೀರ ಸ್ಥಿತಿಯೂ ಹೆಚ್ಚಿಗೆ ದಿನ ಮುಂದುವರೆಯುವುದಿಲ್ಲ. ಸಮಾಜವು ಸಹಾ ಹೆಚ್ಚಿಗೆ ಗಂಭೀರರನ್ನು ನೋಡಲು ಇಚ್ಛಿಸುವುದಿಲ್ಲ ಎಂದು ಅನಿಸುವುದು. ಮದುವೆ ಆಗಿ ಸರಿಯಾಗಿ 9 ತಿಂಗಳಿಗೆ ಮಕ್ಕಳಾದರೆ ಸರಿ, ಇಲ್ಲವಾದರೆ ಪುನ: ಎಲ್ಲರ ಪ್ರಶ್ನೆಗೂ ಉತ್ತರಿಸಬೇಕಾದ ಅಗತ್ಯತೆ, ಏನಾದರೂ ತೊಂದರೆ ಇದ್ದರೆ ಇಂತಹ ಡಾಕ್ಟರ ಹತ್ತಿರ ಹೋಗಿ, ಈ ದೇವರಿಗೆ ಹರಕೆ ಮಾಡಿ ಹೀಗೆ ಬಗೆ ಬಗೆಯ ಪುಕ್ಕಟೆ ಸಲಹೆಗಳನ್ನು ನೀಡುವವರು ಹೆಚ್ಚಾಗುವರು. ಈ ಎಲ್ಲಾ ಹೊರ ವ್ಯಕ್ತಿಗಳ ಒತ್ತಡ ಅಥವಾ ಮದುವೆ ಆಗಿರುವುದೇ ಮಕ್ಕಳು ಮಾಡಲು ಎಂದು ತಿಳಿದುಕೊಂಡು ಗಂಭೀರ ಸ್ಥಿತಿಯಲ್ಲಿರುವವರು ಆ ಸ್ಥಿತಿಯಿಂದ ಹೊರ ಬರಲು ಪ್ರಯತ್ನಿಸುವರು. ಸ್ವತ: ಇಚ್ಛೆಯಿಂದ ಅಥವಾ ಪರಿಸ್ಥಿತಿಯ ಒತ್ತಡವೋ ಒಟ್ಟಾರೆ ಮದುವೆ ಆದ ವರ್ಷದ ಒಳಗೆ ಮಕ್ಕಳನ್ನು ಪಡೆಯುವರು.  ಇಲ್ಲಿಗೆ ಮುಗಿಯಿತು ಜೀವನ ಎಂಬ ಮಹಾಭಾರತದ ಅಲ್ಪ ಕಾಲದ ಗಂಭೀರ ಅಧ್ಯಾಯ.

ಮದುವೆ ಆಗಿ ಮಕ್ಕಳಾದ ಮೇಲೆ ಸ್ಥಿತಿ : ಮದುವೆ ಆಗಿ ಮಕ್ಕಳಾದ ಮೇಲೆ ಅಲ್ಲಿಗೆ ಮುಗಿಲ್ಲಿಲ. ಹುಟ್ಟಿದ್ದು ಹೆಣ್ಣು ಆದ್ದರಿಂದ ಸತ್ತಾಗ ಕೊಳ್ಳಿ ಇಡಲು ಒಂದು ಗಂಡು ಬೇಕೆಂಬ ಒತ್ತಡ/ಆಶೆ, ಹುಟ್ಟಿದು ಗಂಡಾದರೆ ಮನೆಗೊಂದು ಲಕ್ಮೀ ಬೇಕೆಂಬ ಒತ್ತಡ/ಆಶೆ, ಇದನ್ನು ಈಡೇರಿಸವಲ್ಲಿ ಆಗುವ ವಿಫಲತೆ ಒಟ್ಟಾರೆ ಮದುವೆ ಆಗಿ ಮೂರು ವರ್ಷದಲ್ಲಿ 2 ಅಥವಾ 3 ಮಕ್ಕಳು ಮನೆಯಲ್ಲಿ ಓಡಾಡುತ್ತಿರುವರು. ಆ ವೇಳೆಗೆ ಗಂಡು ಮನೆಯಿಂದ ಪ್ರತ್ಯೇಕವಾಗಿರುವನು, ತಾನು ತನ್ನ ಹೆಂಡತಿ ಮಕ್ಕಳು ಬಿಟ್ಟು ಬೇರೆಯವರ ಯಾರ ಬಗ್ಗೆಯೂ ಚಿಂತಿಸುವುದಿಲ್ಲ,
ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಹೆಂಡತಿಗೆ ಪ್ರತ್ಯೇಕ ಮನೆಯ ಚಿಂತೆ, ಮಗನಿಗೆ ಬೈಕಿನ ಕನಸು, ಮಗಳಿಗೆ ನೆಕ್ಲೆಸ್ ಹುಚ್ಚು,  ಆದರೇ ಗಂಡಾದವನಿಗೆ ಮಗನ ಶಿಕ್ಷಣ, ಮಗಳ ಮದುವೆಯ ಚಿಂತೆ, ಈ ಎಲ್ಲ ಚಿಂತೆಗಳ ಮಧ್ಯೆ ದುಡಿಯವ ಕೈ ಒಂದು ತಿನ್ನುವವರು ನಾಲ್ಕು ಈ ಸ್ಥಿತಿಯಲ್ಲಿ ನಿತ್ಯ ಜೀವನ ಸಾಗಿಸುವ ಜವಬ್ದಾರಿ, ಎಲ್ಲಾ ಒತ್ತಡದಿಂದ  ಬಿಳಿಯಾಗುತ್ತಿರುವ ತಲೆಗೂದಲು, ಹೆಂಡತಿಯಿಂದ ಏಕವಚನ ಪ್ರಯೋಗ, ಸಾಲದ ಹೊರೆ, ಶರಾಬಿನ ಹವ್ಯಾಸ,  ಹಳೆಯ ಬಟ್ಟೆಗಳ ಬಳಕೆ, ಅಪ್ಪನ ಆಸ್ಥಿಯ ಬಗ್ಗೆ ಕಣ್ಣು, ಮಕ್ಕಳಿಂದಲ್ಲೂ ಬುದ್ದಿವಾದ, ಒಟ್ಟಾರೆ ಎಲ್ಲಾ ಇದ್ದೂ,  ಏನೂ ಇಲ್ಲದ ಓಡಾಡುತ್ತಿರುವ ಫಕೀರನಂತೆ ಆಗುವುದು ಗಂಡಿನ ಸ್ಥಿತಿ.
ಇಲ್ಲಿಯೂ ಸಹಾ ಪುಕ್ಕಟೆ ಸಲಹೆ ನೀಡಲು ಹಲವಾರು ಜನರು ಬರುವರು, ಮಗಳ ಮದುವೆ ಮಾಡು, ಯೋಜನೆ ಮಾಡಿ ಜೀವನ ಸಾಗಿಸಿದ್ದರೇ ಹೀಗೆ ಆಗುತ್ತಿರಲಿಲ್ಲ ಅದೂ ಇದೂ ಎಂದು ತಿಳುವಳಿಕೆ ಮತ್ತು ಅವನ ಮುಂದೆಯ ಇಷ್ಟು ದಿನ ಎಲ್ಲವನ್ನು ಸಹಿಸಿಕೊಂಡು ಜೀವನ ಸಾಗಿಸಿದ್ದ ಹೆಂಡತಿಯ ಬಗ್ಗೆ ಹೊಗಳಿಕೆ, ಈ ಎಲ್ಲವನ್ನು ಕೇಳಿ ಸಾಯಬೇಕು ಎನಿಸಿದರೂ ಸಾಯಲು ಇಷ್ಟವಿಲ್ಲದೇ, ಬದುಕಲು ಆಶೆಯಿಲ್ಲದೆ ಜೀವನ ಸಾಗಿಸುವ ಪರಿಸ್ಥಿತಿ.
ಇದು ಜೀವನ ಎಂಬ ಮಹಾ ಭಾರತದ ನಿಣಾ೯ಯಕ ಅಧ್ಯಾಯ ಫಕೀರ ಅಧ್ಯಾಯ ಇದನ್ನು ತಕ್ಷಣ ಕೊನೆಗೊಳಿಸಲು ಆಗದ ಸ್ಥಿತಿ ಇರುವುದು.  ಇದರಲ್ಲಿ ಗೆದ್ದವನಿಗೆ ಆಯುಷ್ಯ ಹೆಚ್ಚು. ಆದರೇ ಇದರಲ್ಲಿ ಎಲ್ಲಾ ರೀತಿಯಿಂದಲ್ಲೂ ಗೆಲ್ಲವು ಎಂಬುದು 100% ಇಲ್ಲ. ಆದರೂ ಈಗೀನ ಅಂಕ ಪದ್ದತಿಯಂತೆ ಪಾಸು-ನಪಾಸು ಎನ್ನಬಹುದು. ಅದರ ಪರಿಣಾಮವನ್ನು ಫಕೀರರೇ ಹೇಳಬೇಕು ಹೊರತು ಬೇರೆಯವರು ಹೇಳಲು ಸಾಧ್ಯವಿರುವುದಿಲ್ಲ.
ಬಾಲ್ಯದ ನಂತರದ ದಿನದಲ್ಲಿ ಗಂಡುಗಳು ವೀರರಾಗಿರುವಾಗ ಹೆಣ್ಣಿನ ಬಗ್ಗೆ ಆಸಕ್ತಿ ಇರುವುದು ಸಹಜ, ಹಾಗೆಂದು ಆಸೆಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸೂಕ್ತ ಎಂಬುದರ  ಬಗ್ಗೆ ಯೋಚಿಸಿ.  ಏನೋ ಇಷ್ಟ ಅಥವಾ ಒತ್ತಡನೋ ಮದುವೆ ಆದ ಮೇಲೆ ಪರಸ್ಪರ ಅರ್ಥಮಾಡಿಕೊಂಡು ಮಕ್ಕಳನ್ನು ಪಡೆಯುವುದು ಯೋಜನೆ ಇರುವ ಮಾನವನಿಗೆ ಅಗತ್ಯವಾಗಿದೆ. ಆದರೇ ಮದುವೆ ಆದ 10 ತಿಂಗಳ ಒಳಗೆ ಮಕ್ಕಳಾಗುವುದು ಎಂದರೆ ಅದರಿಂದ ಸ್ಪಷ್ಟವಾಗುವುದು ಮದುವೆಯ ಉದ್ದೇಶ. ಏನೇ ಇರಲಿ ಮದುವೆ ಒತ್ತಡದಿಂದ ಆಯಿತು ಮಕ್ಕಳು  ಆಕಸ್ಮಿಕವಾಗಿ ಆಯಿತು ಕನಿಷ್ಠ ಮಕ್ಕಳ ಸಂಖ್ಯೆಯನ್ನು 1 ಅಥವಾ 2 ಕ್ಕೆ ಕಡಿಮೆ ಮಾಡಿದರೆ ಮುಂದೆ ಫಕೀರನಾದಾಗ ನಪಾಸಾಗುವ ಸ್ಥಿತಿಯಿಂದ ಬಚಾವಾಗಬಹುದು.

                                                                                                                                                ವಿವೇಕ ಬೆಟ್ಕುಳಿ

ಕೊರಲು

ಮುತ್ತಿಕ್ಕುವಾಸೆ ಚಂದಮನೆ ನಿನಗೆ..
ಮುಗಿಲಾಚೆಗೆ ನಿಂತಿಹೆ ನೀನು
ಸಾಗರದಾಳ ನಾನು.

ನನ್ನೊಳು ನಿನ್ನ ಬಿಂಬ..
ಮೂಡಿಹುದು.. ಇಳಿಯುತಿಹುದು..
ಜಯಸಿಂಹ ಮೈಲನಹಳ್ಳಿ

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......