Friday, February 14, 2014

ಶಿಲುಬೆಗೇರಿದ್ದು ತಿಳಿಯಲೇ ಇಲ್ಲ .... - ರಾಜೇಂದ್ರ ಪ್ರಸಾದ್

ಶಿಲುಬೆಗೇರಿದ್ದು ತಿಳಿಯಲೇ ಇಲ್ಲ
ಪ್ರಭುವೇ
ಕೈಗಳಿಗೆ ಅಹಮ್ಮಿನ ಮೊಳೆ
ತಲೆಗೆ ಪ್ರತಿಷ್ಠೆಯ ಮೊಳೆ
ಕಾಲಿಗೆ ಹಿಟ್ಲಿರಿನ ಮೊಳೆ
ಕಡೆಗೆ ಎದೆಗೆ ದ್ವೇಷದ ಮೊಳೆ ಹೊಡೆದರಯ್ಯ
ಹೆಸರಿಲ್ಲದ ಮುಳ್ಳಿನ ಕಿರೀಟ
ಕಣ್ಣಿನಾಳಕ್ಕೆ ಹೊಕ್ಕಿದೆ

ಈ ಕಡುಪಾಪಿಯ ಸಾವು
ಒಂದು ಯಕಶ್ಚಿತ್ ಮೌನವಷ್ಟೇ..
ಕ್ಷಮಿಸಿ ಬಿಡಯ್ಯ
ಮೊಳೆಗಳಿಗೆ ಕೆಂಡಸಂಪಿಗೆಯ ಮರುಹುಟ್ಟು
ಕಾಣಿಸಯ್ಯ
ಅವುಗಳ ಘಮಲಿನಲ್ಲಿ ಮಲಗುತ್ತೇನೆ
ಶವಪೆಟ್ಟಿಗೆ ಎಂದೋ ಸಿದ್ದಗೊಳಿಸಿದ್ದಾರೆ
ಮುಳ್ಳಿನ ಹೊದಿಕೆ ಹೊದಿಸಿ..
ನಾನು ಮಲಗುತ್ತೇನೆ
ಯಾರು ಏಳಿಸಲಾಗದ ಒಂದು ನಿದ್ದೆಗೆ
ಒಂದು ಯಕಶ್ಚಿತ್ ನಿದ್ದೆಗೆ.

-  ರಾಜೇಂದ್ರ ಪ್ರಸಾದ್

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......