ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, February 14, 2014

ಶಿಲುಬೆಗೇರಿದ್ದು ತಿಳಿಯಲೇ ಇಲ್ಲ .... - ರಾಜೇಂದ್ರ ಪ್ರಸಾದ್

ಶಿಲುಬೆಗೇರಿದ್ದು ತಿಳಿಯಲೇ ಇಲ್ಲ
ಪ್ರಭುವೇ
ಕೈಗಳಿಗೆ ಅಹಮ್ಮಿನ ಮೊಳೆ
ತಲೆಗೆ ಪ್ರತಿಷ್ಠೆಯ ಮೊಳೆ
ಕಾಲಿಗೆ ಹಿಟ್ಲಿರಿನ ಮೊಳೆ
ಕಡೆಗೆ ಎದೆಗೆ ದ್ವೇಷದ ಮೊಳೆ ಹೊಡೆದರಯ್ಯ
ಹೆಸರಿಲ್ಲದ ಮುಳ್ಳಿನ ಕಿರೀಟ
ಕಣ್ಣಿನಾಳಕ್ಕೆ ಹೊಕ್ಕಿದೆ

ಈ ಕಡುಪಾಪಿಯ ಸಾವು
ಒಂದು ಯಕಶ್ಚಿತ್ ಮೌನವಷ್ಟೇ..
ಕ್ಷಮಿಸಿ ಬಿಡಯ್ಯ
ಮೊಳೆಗಳಿಗೆ ಕೆಂಡಸಂಪಿಗೆಯ ಮರುಹುಟ್ಟು
ಕಾಣಿಸಯ್ಯ
ಅವುಗಳ ಘಮಲಿನಲ್ಲಿ ಮಲಗುತ್ತೇನೆ
ಶವಪೆಟ್ಟಿಗೆ ಎಂದೋ ಸಿದ್ದಗೊಳಿಸಿದ್ದಾರೆ
ಮುಳ್ಳಿನ ಹೊದಿಕೆ ಹೊದಿಸಿ..
ನಾನು ಮಲಗುತ್ತೇನೆ
ಯಾರು ಏಳಿಸಲಾಗದ ಒಂದು ನಿದ್ದೆಗೆ
ಒಂದು ಯಕಶ್ಚಿತ್ ನಿದ್ದೆಗೆ.

-  ರಾಜೇಂದ್ರ ಪ್ರಸಾದ್

No comments:

Post a Comment