ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, February 4, 2014

ಆಧ್ಯಾತ್ಮದಲ್ಲಿ ಅಡೆಗಿದೆ ವಿಜ್ಞಾನದ ರಹಸ್ಯ

ಆಧ್ಯಾತ್ಮದಲ್ಲಿ ಅಡೆಗಿದೆ ವಿಜ್ಞಾನದ ರಹಸ್ಯ
ಆಧ್ಯಾತ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು
ಫೆಬ್ರವರಿ 1 ಮತ್ತುರಂದು ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ  8ನೇ ರಾಷ್ಟ್ರೀಯ ವಿದ್ಯಾಥಿ೯ ಸಮ್ಮೇಳನ  ಸೈನ್ಸ್ ಎಂಡ್ ಸ್ಪೀರಿಜ್ಯೂಲ್ ಕ್ವಿಷ್ಟ್   ಜರುಗಿತು. ಸಮ್ಮೇಳನವನ್ನು ಭಕ್ತಿವೇದಾಂತ ಸಂಸ್ಥೆ  ಕಲಕತ್ತಾ ಮತ್ತು ಆಯ್ ಆಯ್ ಟಿ ಬನಾರಸ್ ಹಿಂದೂ ವಿಶ್ವವಿಧ್ಯಾಲಯ ಇವುಗಳು ಜಂಟೀಯಾಗಿ ಆಯೋಜಿಸಿದ್ದವು.
 ಸಮ್ಮೇಳನದಲ್ಲಿ ನಾ೯ಟಕದ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮಿಜಿಯವರು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದರು. ಸಮ್ಮೇಳನವನ್ನು ದೀಪ ಬೆಳಗಿಸುವ ಮುಖಾಂತರ ಸ್ವಾಮಿಜಿಯವರು ಉದ್ಘಾಟಿಸಿದರು.




ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ  ಎರಡು ಮುಖಗಳಿದಂತೆ ಇರುವುದು. ಆಧ್ಯಾತ್ಮದಲ್ಲಿಯೇ ವಿಜ್ಞಾನದ ರಹಸ್ಯ ಅಡಗಿರುವುದು ಎಂದು ಹೇಳಿದ ಸ್ವಾಮಿಜಿಯವರು ರೀತಿಯ ಸಮ್ಮೇಳನವನ್ನು ಆಯೋಜಿಸಿ ವಿದ್ಯಾಥಿ೯ ಳಿಗೆ ಅನ್ವೇಷಣೆ ಮಾಡಲು ಪ್ರೋತ್ಸಾಹಿಸುತ್ತಿರುವ ಭಕ್ತಿವೇದಾಂತ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.  2 ದಿನದ ಕಾರ್ಯಗಾರದ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಭಾಗವಹಿಸದ್ದ ಎಲ್ಲರಿಗೂ ಕರೆನೀಡಿದರು
ಆಯ್ ಆಯ್ ಟಿ ಗೋವಾಹಟಿಯ ಬೋರ್ಡ ಆಫ್ ಗವರ್ನರದ ಚೇರಮ್ಯಾನ ಪ್ರೋ. ಆರ್.ಪಿ ಸಿಂಗಭಕ್ತಿ ವೇದಾಂತ ಸಂಸ್ಥೆ ಕಲಕತ್ತಾದ ಅಧ್ಯಕ್ಷರಾರ ಶ್ರೀ ವಾಸುದೇವ್ ರಾವ್ಡಾ. ಸುದೀಪ್, ಡಾ. ಪಿ ಕೆ ಗೋಸ್ವಾಮಿಡಾ. ಪ್ರಥ್ವೀಶ ನಾಗ್, ಪ್ರೋ ಪಿ,ಕೆ ಮುಖ್ಯೋಪಾಧ್ಯಾಯ ಹಾಗೂ ಪ್ರೋ ಕೆ ತ್ರಿಪಾಠಿಯವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
2 ದಿನದ ಸಮ್ಮೇಳನದಲ್ಲಿ ಆಧ್ಯಾತ್ಮ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಉಪನ್ಯಾಸ ಚೆ೯ಗಳು ನಡೆದವು. ಇದರಲ್ಲಿ ದೇಶದ ಹಲವಡೆಯಿಂದ ಬಂದ ವಿದ್ಯಾಥಿ೯ ಗಳು ಭಾಗವಹಿಸಿದ್ದರು.


ವಿವೇಕ ಬೆಟ್ಕುಳಿ


No comments:

Post a Comment