Sunday, September 8, 2013

ಸ್ವಗತ ಲಹರಿ - ರಾಜೇಂದ್ರ ಪ್ರಸಾದ್,

ಆಗಷ್ಟೇ ನಿಂತ ಮಳೆಯ ಮಣ್ಣಿನ ದೂರದಲ್ಲಿ ಎಲ್ಲೋ ಷಡ್ಜ ಶಬ್ದ..
ಎದೆಯೊಳಗೆ ಅದೆಷ್ಟೋ ಸಾವಿರ ನದಿಗಳು ಧುಮ್ಮುಕ್ಕಿ
ಕಣ್ಣುಗಳಲಿ ತುಂಬುತ್ತಿವೆ....
ಅತೃಪ್ತ ಕತ್ತಲೆಯ ಆತ್ಮದ ಮೌನವೊಂದು ಸುನಾಮಿಯಾಗಿ
ನನ್ನಾವರಿಸಲಿ..
ತಥಾಗತನ ಕೈಯಿಂದ ಕಪಾಲಮೋಕ್ಷಕ್ಕೆ ಕಾದಿದ್ದೇನೆ!!!


ನನ್ನ ಕಲ್ಪನೆಯ ಮಿತಿಗೆ ಸಿಕ್ಕಿಕೊಂಡಿರುವ ನಿನ್ನ ಬಿಡಿಸಲು
ಯತ್ನಿಸುವೆ .... ಒಮ್ಮೆ ನಕ್ಕಿಬಿಡು ಆ ಶಬ್ದದಲೆಗಳಲು ಎದೆತೀರದೊಳು ಬಡಿದೇಳಿಸುವ
ಭಾವಗಳಲಿ ತೊಯ್ದು ಬಿಡುವೆ.... ಕಲ್ಪನೆಯ ಕಾಲದಾಚೆಗೆ!
ರಾಜೇಂದ್ರ ಪ್ರಸಾದ್  ( RP)


ಎಲ್ಲರೂ ಅವರವರ ಸತ್ಯವ ಹೇಳುತ್ತಾರೆ..
ಕೇಳಿಸಿಕೊಳ್ಳಬೇಕು.
ಒಳಗಣ್ಣಿನಲಿ ನಾವು
ನಮ್ಮ ಸತ್ಯವ ಕಂಡುಕೊಳ್ಳಬೇಕು...


ಹೂವನ್ನು ಶ್ರೀಚಕ್ರ
ಎಂದುಕೊಂಡ ಶಾಕ್ತೇಯ
ಶಿಲಾಕೆ ಸ್ಪರ್ಶಕೆ ಗರ ಬಡಿದು ನಿಂತ
ಪರಾಗ ದೂರದ ಮಾತು.

ಭೂಮಿಗೀತ ಬ್ಲಾಗಿಂದ, 


No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......