ಮಹಾಕವಿ ಮಲಗಿದ್ದಾನೆ
ಮುಂಜಾವಿನ ಹಸುರರವಿ
ಹೆಸರಿರದ ಉಸಿರನು
ಜಗಕೆ ಹಂಚಲು
ಇವನ ಬಳಿ ಕಳಿಸಿದ್ದಾನೆ
![]() |
ಶ್ರೀ ಬೇಲೂರು ರಘುನಂದನ್ |
ಭುವಿ ಗಗನದ ಮಿಲನಕ್ಕೆ
ಹೂಮಳೆಯ ಸ್ಕಲನ
ಜೀವ ಹುಟ್ಟುವ ನೆಲದಿ
ಗಟ್ಟಿಯಾಗಿ ಬದುಕ
ಗುಟ್ಟು ಹೇಳಲು
ಮಹಾ ಕವಿ ಮಲಗಿದ್ದಾನೆ
ಮಣ್ಣು ಕಣ್ಣಾಗಿ ಕಣ್ಣು ಹಣ್ಣಾಗಿ
ನೀರ ಹೀರಿ ನೆರನ್ನೇ ಕೊಡುವ
ಹಸುರ ಎಲೆಯಾಗಿ
ಕಲೆಯ ಹೊಳೆಯಾಗಿ
ಕಾರುಣ್ಯದ ಕತೆಯ ಹೇಳುವ
ಗುರುವಾಗಿ ಮಹಾಕವಿ ಮಲಗಿದ್ದಾನೆ
No comments:
Post a Comment