Monday, September 9, 2013

ಮಹಾಕವಿ ಮಲಗಿದ್ದಾನೆ - ಬೇಲೂರು ರಘುನಂದನ


ಮಹಾಕವಿ ಮಲಗಿದ್ದಾನೆ
ಮುಂಜಾವಿನ ಹಸುರರವಿ
ಹೆಸರಿರದ ಉಸಿರನು
ಜಗಕೆ ಹಂಚಲು
ಇವನ ಬಳಿ ಕಳಿಸಿದ್ದಾನೆ

ಶ್ರೀ ಬೇಲೂರು ರಘುನಂದನ್
ಕಾಡಿನ ಉನ್ಮಾದಕೆ
ಭುವಿ ಗಗನದ ಮಿಲನಕ್ಕೆ
ಹೂಮಳೆಯ ಸ್ಕಲನ
ಜೀವ ಹುಟ್ಟುವ ನೆಲದಿ
ಗಟ್ಟಿಯಾಗಿ ಬದುಕ
ಗುಟ್ಟು ಹೇಳಲು
ಮಹಾ ಕವಿ ಮಲಗಿದ್ದಾನೆ

ಮಣ್ಣು ಕಣ್ಣಾಗಿ ಕಣ್ಣು ಹಣ್ಣಾಗಿ
ನೀರ ಹೀರಿ ನೆರನ್ನೇ ಕೊಡುವ
ಹಸುರ ಎಲೆಯಾಗಿ
ಕಲೆಯ ಹೊಳೆಯಾಗಿ
ಕಾರುಣ್ಯದ ಕತೆಯ ಹೇಳುವ
ಗುರುವಾಗಿ ಮಹಾಕವಿ ಮಲಗಿದ್ದಾನೆ

No comments:

Post a Comment

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು - ಸಂಗ್ರಹ

ಗಳಗನಾಥರು ಗಳಗನಾಥರು ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.  ನಿಮ್ಮ ಮನೆಯಲ್ಲಿ ಲಕ್ಷ್ಮಿ ಇದ್ದರೆ ಸಾಲದು, ನಾನು ಸರ...