Sunday, September 8, 2013

ನನಗೂ ಕೆಲವು ಆಸೆಗಳಿದ್ದೋ - ರಾಜೇಂದ್ರ ಪ್ರಸಾದ್

Rajendra Prasad ( RP)

ನನಗೂ ಕೆಲವು ಆಸೆಗಳಿದ್ದೋ

ಸಿಕ್ಕರೆ ಮಂಟೇಸ್ವಾಮಿಯಂತ ಗುರು ಸಿಕ್ಕಬೇಕು
ಆದರೆ ಸಿದ್ದಪ್ಪಾಜಿಯಂತ ಶಿಷ್ಯ ಆಗಬೇಕು

ಸಿಕ್ಕರೆ ಬುದ್ಧನಂತ ಗುರು ಸಿಕ್ಕಬೇಕು
ಆದರೆ ಮಹಾಕಶ್ಯಪನಂತ ಶಿಷ್ಯ ಆಗಬೇಕು

ಸಿಕ್ಕರೆ ಬೋಧಿಧರ್ಮನಂತ ಗುರು ಸಿಕ್ಕಬೇಕು
ಆದರೆ ದಾಜ಼ು ಹುಇಕೆಯಂತ ಶಿಷ್ಯ ಆಗಬೇಕು

ಸಿಕ್ಕರೆ ಯಮನಂತ ಗುರು ಸಿಕ್ಕಬೇಕು
ಆದರೆ ನಚಿಕೇತನಂತ ಶಿಷ್ಯ ಆಗಬೇಕು

ಸಿಕ್ಕರೆ ಕೃಷ್ಣನಂತ ಗುರು ಸಿಕ್ಕಬೇಕು
ಆದರೆ ಅಭಿಮನ್ಯುನಂತ ಶಿಷ್ಯ ಆಗಬೇಕು

ಆದರೂ ನಾನು ದ್ರೋಣನಿರದ ಏಕಲವ್ಯನೇ ಆದೆ. ಗುರು ನನಗೆ ಅಮೂರ್ತನಾಗೇ ಉಳಿದುಬಿಟ್ಟ...

ಭೂಮಿಗೀತ ಬ್ಲಾಗಿಂದ,

No comments:

Post a Comment

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು - ಸಂಗ್ರಹ

ಗಳಗನಾಥರು ಗಳಗನಾಥರು ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.  ನಿಮ್ಮ ಮನೆಯಲ್ಲಿ ಲಕ್ಷ್ಮಿ ಇದ್ದರೆ ಸಾಲದು, ನಾನು ಸರ...