Rajendra Prasad ( RP) |
ಸಿಕ್ಕರೆ ಮಂಟೇಸ್ವಾಮಿಯಂತ ಗುರು ಸಿಕ್ಕಬೇಕು
ಆದರೆ ಸಿದ್ದಪ್ಪಾಜಿಯಂತ ಶಿಷ್ಯ ಆಗಬೇಕು
ಸಿಕ್ಕರೆ ಬುದ್ಧನಂತ ಗುರು ಸಿಕ್ಕಬೇಕು
ಆದರೆ ಮಹಾಕಶ್ಯಪನಂತ ಶಿಷ್ಯ ಆಗಬೇಕು
ಸಿಕ್ಕರೆ ಬೋಧಿಧರ್ಮನಂತ ಗುರು ಸಿಕ್ಕಬೇಕು
ಆದರೆ ದಾಜ಼ು ಹುಇಕೆಯಂತ ಶಿಷ್ಯ ಆಗಬೇಕು
ಸಿಕ್ಕರೆ ಯಮನಂತ ಗುರು ಸಿಕ್ಕಬೇಕು
ಆದರೆ ನಚಿಕೇತನಂತ ಶಿಷ್ಯ ಆಗಬೇಕು
ಸಿಕ್ಕರೆ ಕೃಷ್ಣನಂತ ಗುರು ಸಿಕ್ಕಬೇಕು
ಆದರೆ ಅಭಿಮನ್ಯುನಂತ ಶಿಷ್ಯ ಆಗಬೇಕು
ಆದರೂ ನಾನು ದ್ರೋಣನಿರದ ಏಕಲವ್ಯನೇ ಆದೆ. ಗುರು ನನಗೆ ಅಮೂರ್ತನಾಗೇ ಉಳಿದುಬಿಟ್ಟ...
ಭೂಮಿಗೀತ ಬ್ಲಾಗಿಂದ,
No comments:
Post a Comment