Sunday, September 8, 2013

ಶಿಶಿರದ ಮೊದಲಲ್ಲಿ ಬೀಳುವ - ರಾಜೇಂದ್ರ ಪ್ರಸಾದ್

ಶಿಶಿರದ ಮೊದಲಲ್ಲಿ ಬೀಳುವ
ರಾತ್ರಿಮಳೆ ಹೊತ್ತಲ್ಲಿ
ಇವಳು ಪ್ರಳಯ ಸ್ವರೂಪಿ..
ನಾನೋ ಬಯಲು ಸೀಮೆಯ
ಬಿಸಿಲು ಕುದುರೆ!

ಖುರಪುಟದ ನಾದ
ನದಿ ಹರಿಯೋ
ಶಬ್ದ ಸಂಕರಕ್ಕೆ
ಭೂವ್ಯೋಮಗಳು ಒಂದಾದ
ಸಿಡಿಲ ಸಂಭ್ರಮ

ಧೋ..ಧೋ.. ಸುರಿವ ಮಳೆ
Sri Rajendra Prasad (RP)
ಭೋರ್ಗೆರೆವ ಗಂಡುಹೊಳೆ
ಹಾಗೆ ಸಣ್ಣಗೆ ಮೀಟಿದಂತೆ
ವೀಣೆ ತಂತಿ ತಾನ.

ದಾರಿಯುದ್ದ ಮುತ್ತಿನಧರ
ಕಚ್ಚಿದ ಮಧ್ಯಪಾನ
ಗಮ್ಯವೋ ಮುಳುಗೆದ್ದ
ಸಮಸ್ತ ತೀರ್ಥಸ್ನಾನ

ಮುಗಿಯುತ್ತಲೇ ಇಲ್ಲ
ದಂಡಯಾತ್ರೆ..
ಹರಿವ ನದಿಗೆ ಮೈಯೆಲ್ಲಾ ಕಾಲು
ಸುರಿವ ಮಳೆಗೆ ಮೈಯೆಲ್ಲಾ ಜೀವ

ಹಗಲು ಹಕ್ಕಿ ಹಾಡುವ ಹೊತ್ತಿಗೆ
ಅವಳು ಕೊಚ್ಚಿಹೋದ ಭತ್ತದ ಗದ್ದೆ
ನಾನು ನೆರೆ ನಿಂತ ಹೆಬ್ಬಳ್ಳ.. - ಆರ್.ಪಿ.

ಭೂಮಿಗೀತ ಬ್ಲಾಗಿಂದ,




No comments:

Post a Comment

"RSS ಮತ್ತು DSS - ಒಂದು ತೌಲನಿಕ ಅಧ್ಯಯನ"- ಪ್ರವೀಣಕುಮಾರ M

RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ತನ್ನ 100 ನೇ ವರ್ಷದ ಸಂಭ್ರಮವನ್ನು ದೇಶದಾದ್ಯಂತ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷವನ್ನು  ಬೆಂಬಲಿಸುವ ...