Sunday, March 20, 2011

ಕೃಷ್ಣಾ ಬಾರೋ , ಕೃಷ್ಣಾ ಬಾರೋ

ಕೃಷ್ಣಾ ಬಾರೋ , ಕೃಷ್ಣಾ ಬಾರೋ
 ಕೃಷ್ಣಯ್ಯ ನೀ ಬಾರಯ್ಯ || ಪಲ್ಲವಿ ||


ಸಣ್ಣ ಹೆಜ್ಜೆಗಳಿಟ್ಟು , ಗೆಜ್ಜೆ ನಾದಗಳಿಂದ || ಪ ||
 ಮನ್ಮಥ ಜನಕನೆ ಬೇಗನೆ ಬಾರೋ
ಕಮಲಾಪತಿ ನೀ ಬಾರೋ
ಅಮಿತ ಪರಾಕ್ರಮ ಶಂಕರ ಬಾರೋ
ಕಮನೀಯ ಗಾತ್ರನೆ ಬಾರಯ್ಯ ದೊರೆಯೇ || ಪ ||

  ಹಾಲು ಬೆಣ್ಣೆಗಳ ಕೈಯಲ್ಲಿ ಕೊಡುವೆ
ಮೇಲಾದಿ ಭಕ್ಷಗಳ ಮುಚ್ಚಿಟ್ಟು ತರುವೆ
ಜಾಲ ಮಾಡದೆ ನೀ ಬಾರಯ್ಯ ಮರಿಯೇ
ಬಾರಾ ಎನ ತಂದೆ ಪುರಂದರ ವಿಠ್ಠಲ || ಪ ||

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......