Saturday, March 19, 2011

ಆಚಾರವಿಲ್ಲದ ನಾಲಿಗೆ

ಆಚಾರವಿಲ್ಲದ ನಾಲಿಗೆ ನಿನ್ನ
ನೀಚಗುಣವ ಬಿಡು ನಾಲಿಗೆ

ವಿಚಾರವಿಲ್ಲದೆ ಪರರ ದೂಷಿಪುದಕ್ಕೆ
ಚಾಚಿ ಕೊಂಡಿರುವಂಥ ನಾಲಿಗೆ

ಇದ್ದಮಾತನಾಡು ನಾಲಿಗೆ ಹಿಡಿ-
ದೊದ್ದರೂ ಹುಸಿಬೇಡ ನಾಲಿಗೆ
ಇದ್ದುಕೊಂಡು ಉಣ್ಣು ಅಮೃತಾನ್ನಗಳನು
ಬುದ್ಧಿಯಲಿರು ಕಂಡೆಯ ನಾಲಿಗೆ

ಬಡವರ ಮಾತಿಗೆ ನಾಲಿಗೆ - ನೀ
ಕಡುಚತುರ ನುಡಿಯದಿರು ನಾಲಿಗೆ
ಹಿಡಿದು ಕೊಂಡೊಯ್ವರು ಯಮನ ಭಟರು ನಿನ್ನ
ನುಡಿ ಕಂಡೆಯ ಹರಿಯಂದು ನಾಲಿಗೆ

ಹರಿಪಾದವೆ ಗತಿಯೆಂದು ನಾಲಿಗೆ - ನಿನಗೆ
ಪರರ ಚಿಂತೆಯೇಕೆ ನಾಲಿಗೆ
ಸಿರಿವರ ಪುರಂದರ ವಿಠ್ಠಲರಾಯನನು
ಮರೆಯದೆ ನೆನೆ ಕಂಡೆಯ ನಾಲಿಗೆ

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......